Homeಕರ್ನಾಟಕಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

ಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

- Advertisement -
- Advertisement -

| ನಹುಷ |
ಉಡುಪಿ-ಚಿಕ್ಕಮಗಳೂರು ಲೋಕಾ ರಣರಂಗದಲ್ಲಿ ಬಿಜೆಪಿಯ ಕೂಗುಮಾರಿ ಬ್ರಾಂಡಿನ ಶೋಭಾ ಕರಂದ್ಲಾಜೆ ಮತ್ತ ಜೆಡಿಎಸ್ ವೇಷದ ಕಾಂಗ್ರೆಸಿಗ ಪ್ರಮೋದ್ ಮಧ್ವರಾಜ್ ನಡುವೆ ಮುಖಾಮುಖಿ ಹಣಾಹಣಿ ನಡೆದಿದೆ. ಜನದ್ರೋಹದಿಂದ ಹೆಸರು ಕೆಡಿಸಿಕೊಂಡಿರುವ ಶೋಭಕ್ಕ ಹೋದಹೋದಲ್ಲಿ ಕಾರಿಂದ ಇಳಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಕೆಗೆ ದಿನಗಳೆದಂತೆ ಸಂಕಟ ಹೆಚ್ಚಾಗುತ್ತಲೇ ಇದೆ. ಪ್ರಮೋದ್ ತನ್ನ ರಾಯಲ್ ದೌಲತ್ತಿನ ಹಮ್ಮು ಅಹಂಕಾರ ಬಿಟ್ಟು ಸಂಪ್ರದಾಯಿಕ ಶತ್ರುಗಳಿಗೆಲ್ಲಾ ಶರಣಾಗುತ್ತ ಅಖಾಡದಲ್ಲಿ ಗಟ್ಟಿಗೊಳ್ಳುತ್ತಿದ್ದಾರೆ. ಶೋಭಕ್ಕನ ಮೇಲಿರುವ ತಾತ್ಸಾರವನ್ನು ಹಿಂದೂತ್ವದ ಅಮಲಿಂದ ತಪ್ಪಿಸಿ ತಂದು ಓಟು ಮಾಡಿಕೊಳ್ಳಬೇಕಾದ ಸವಾಲು ಮೈತ್ರಿಕೂಟಕ್ಕೆ ಎದುರಾಗಿದೆ.

ಶೋಭಕ್ಕನ ದುಃಸ್ಥಿತಿ ಕಂಡು ಆರೆಸೆಸ್ ಬೆಚ್ಚಿಬಿದ್ದಿದೆ. ಈಯಮ್ಮನ ಫೀಲ್ಡಿಗೆ ಕಳಿಸಬೇಡಿ ಎಂದು ಬಿಜೆಪಿ ಲೀಡರ್‍ಗಳಿಗೆ ಆರೆಸೆಸ್ ಸೂತ್ರದಾರಿಗಳು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ನಾವೇ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ, ಆದರೆ ಆಕೆ ತೆರೆಮರೆಯಲ್ಲೇ ಇರಬೇಕು, ಆಕೆ ಕಂಡರೆ ಮತದಾರರಿಗೆ ಆಕ್ರೋಶ ಉಕ್ಕುತ್ತದೆಂದು ಚೆಡ್ಡಿ ಚತುರರು ಅಲವತ್ತು ಕೇಳುತ್ತಿದ್ದಾರೆ. ಹುಸಿ ಹಿಂದೂತ್ವದ ದೆಸೆಯಿಂದ ಕರಾವಳಿಯಲ್ಲಿ ಒಂಚೂರು ಶೋಭಕ್ಕನಿಗೆ ಬೆಂಬಲ ಇದೆಯಾದರೂ ಮಲೆನಾಡಿನ ಭಾಗದಲ್ಲಿ ಆಕೆಗೆ ಮಾನ-ಮರ್ಯಾದೆಯೇ ಇಲ್ಲ ಬಿಜೆಪಿಉ ಸೆಕೆಂಡ್ ಕಿಂಗ್ ಅಮಿತ್ ಶಾ ತೆಂಗಿಗೆ ರೇಟು ಏರಿಸಿದಂತೆ ಅಡಿಕೆಗೂ ಬಂಪರ್ ಬೆಲೆಬರುವಂತೆ ಮಾಡುತ್ತೇನೆಂದು ಮೋಸ ಮಾಡಿದ್ದು ಚಿಕ್ಕಮಗಳೂರು ಕಡೆಯ ತೋಟಗಾರರನ್ನು ಕೆರಳಿಸಿದೆ. ಅಡಿಕೆ-ಕರಿಮೆಣಸು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬಿಜೆಪಿ ಅಂದರೆ ಬುಸುಗುಡುತ್ತಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿಟಿ.ರವಿ “ಈಕೆ ಮತ್ತೆ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಹೇಳುತ್ತಿರುವುದು, ಅತ್ತ ಉಡುಪಿ ಭಾಗದ ರಘುಪತಿ ಭಟ್ಟ, ಸುನೀಲ್ ಕುಮಾರ್ ಶೋಭಕ್ಕ ಸೋತುಹೋಗಲೆಂದು ಒಳಗೊಳಗೇ ಹರಕೆ ಹೊರುತ್ತಿದ್ದಾರೆ. ಓಟು ಕೇಳುವ ನೈತಿಕ ಧೈರ್ಯ ಶೋಭಕ್ಕನಿಗೆ ಇಲ್ಲ, ಆಕೆ ಮೋದಿಗಾಗಿ ಮತ ಹಾಕಿ ಎನ್ನುತ್ತಿದ್ದಾರೆ. ಆರೆಸೆಸ್ ತಂಡ ಹಿಂದೂತ್ವ ಉದ್ದೀತನಕ್ಕೆ ಬಿಜೆಪಿಗೆ ಓಟು ಅನಿವಾರ್ಯವೆಂದು ಪ್ರಚಾರ ನಡೆಸಿದೆ. ಯಡ್ಡಿಯನ್ನು ಕುಣಿಸಲು ಶೋಭಕ್ಕನ ಗೆಲ್ಲಿಸಿಕೊಳ್ಳಬೇಕಾದ ದರ್ದು ಚೆಡ್ಡಿ ಚೆತುರರ ಕಾಡುತ್ತಿದೆ. ಕೇಸರಿ ಪಡೆ ಏನೇ ಹೇಳಿದರೂ ಕಟ್ಟರ್ ಭಜರಂಗಿಳು “ನೋಟಾ” ಒತ್ತುವ ಸಾಧ್ಯತೆಯೇ ಜಾಸ್ತಿ ನೋಟಾ ಹೆಚ್ಚಾದಂತೆ ಮೈತ್ರಿ ಅಭ್ಯರ್ಥಿಯ ಸೋಲಿನ ಸಾಧ್ಯತೆ ಕಮ್ಮಿಯಾಗುತ್ತದೆ.

ಮಜಾ ಎಂದರೆ, ಕಾಂಗ್ರೆಸ್‍ನಲ್ಲಿ ಒಳ ಹೊಡೆತಗಳ ಆಟವಿಲ್ಲ ಕಾಪುನಲ್ಲಿ ಮಾಜಿ ಸಚಿವ ಸೊರಕೆ, ಉಡುಪುಯಲ್ಲಿ ಮಾಜಿ ಎಮ್ಮೆಲ್ಲೆ ಸಭಾಪತಿ, ಕಾರ್ಕಳದಲ್ಲಿ ಮೊಯ್ಲಿ ಮುನಿಯಾಲ್ ಬಣ, ಮಲೆನಾಡಲ್ಲಿ ಜೆಡಿಎಸ್-ಕಾಂಗ್ರೆಸ್ ತಂಡ ಮೊದಲಿನ ಹೊಟ್ಟೆಕಿಚ್ಚು ಬಿಟ್ಟು ದುಡಿಯುತ್ತಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದ ವೇಗವೀರರು ಸ್ವಜಾತಿ ಪ್ರಮೋದ್ ಪರ ಏಕಗಂಟಲ್ಲಿ ಓಟು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಘಟ್ಟದ ಮೇಲಿನ ಒಕ್ಕಲಿಗರ ಮತಕ್ಕಾಗಿ ದೇವೇಗೌಡ-ಕುಮಾರಣ್ಣ ಸ್ಟ್ರೇಟಜಿ ಹೆಣೆಯುತ್ತಿದ್ದಾರೆ. ಶೋಭಕ್ಕನ ಪರವಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಒಬ್ಬರ ಬಿಟ್ಟರೆ ಉಳಿದ ಎಮ್ಮೆಲ್ಲೆಗಳು ಮೊದಲಿನ ನಿಷ್ಠೆ-ನಿಯತ್ತು ತೋರಿಸುತ್ತಿಲ್ಲ. ಹೀಗಾಗಿ ಶೋಭಕ್ಕನಿಗೆ ಬಿಜೆಪಿ ಓಟ್ ಬ್ಯಾಂಕಿನ ಶೇ.25-30 ಮತ ಖೋತಾ ಆಗುವ ಲೆಕ್ಕಾಚಾರ ನಡೆದಿದೆ. ಮೈತ್ರಿ ಕೂಟ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಪಡೆದ ಅಷ್ಟೂ ಮತ ಪಡೆದರೂ ಸಾಕು, ಗೆಲುವಿನ ಛಾನ್ಸ್‍ನ ಗ್ರಾಫ್ಟ್ ಏರಿಕೆಯಾಗುತ್ತದೆ.

ಶೋಭಕ್ಕನಿಗೆ ಮೋದಿ ಮಂಕು ಬೂದಿ ಬಿಟ್ಟರೆ ಮತ್ತ್ಯಾವ ಪ್ಲಸ್ ಪಾಯಿಂಟ್ ಇಲ್ಲ. ಸುಳ್ಯ ಕಡೆಯ ಆಕೆಗಿಲ್ಲ, ಸ್ವಜಾತಿ ಮತ ಬಾಂಧವರೂ ಇಲ್ಲ! ಕರಾವಳಿಯ ಬಿಲ್ಲವರು ಮತ್ತು ಬಂಟರಿಗೆ ಸಂಘಪರಿವಾರದ ಹಿಂದೂತ್ವದ ಅಸಲೀ ಆಟದ ಹಿಕಮತ್ತು ಶೂದ್ರರಿಗೆಷ್ಟು ಗಂಡಾಂತರಕಾರಿ ಎಂಬುದು ಅರ್ಥವಾಗಿದೆ. ಬಿಲ್ಲವರು ಪಾಪದ ಹುಡುಗರು ಹಿಂದೂತ್ವದ ಹೆಸರಲ್ಲಿ ಜೈಲು ಪಾಲಾಗಿರುವ ಕರುಣಾ ಕತೆ ಆ ಜಾತಿಯ ಹಿರಿಯರ ಕಣ್ಣು ತೆರೆಸಿದರೆ ಮೈತ್ರಿಕೂಟದ ಗೆಲುವು ಇನ್ನಷ್ಟು ನಿಚ್ಚಳವಾಗುತ್ತದೆ. ಫೋಟೋ ಫಿನಿಶ್ ಫಲಿತಾಂಶ ಉಡುಪಿ-ಚಿಕ್ಕಮಗಳೂರು ಈ ಬಾರಿ ಕೊಡುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಕಾರ

ಕೇರಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಸ್ತುತ ಗಡುವಾದ ಡಿಸೆಂಬರ್ 18ರವರೆಗೆ ವಿಷಯವನ್ನು ಮುಂದೂಡಿ, ಆ ನಂತರ ಗಡುವನ್ನು...

‘ಎಷ್ಟೇ ದೊಡ್ಡ ಸಂಸ್ಥೆಯಾದರೂ ಪ್ರಯಾಣಿಕರಿಗೆ ತೊಂದರೆ ನೀಡುವಂತಿಲ್ಲಾ’: ಇಂಡಿಗೋ ಸಂಸ್ಥೆಗೆ ಎಚ್ಚರಿಕೆ ನೀಡಿದ ವಿಮಾನಯಾನ ಸಚಿವ

ಡಿಸೆಂಬರ್ ಆರಂಭದಿಂದಲೂ ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ ಲೈಲ್ಸ್ ಸಂಸ್ಥೆಗೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಎಚ್ಚರಿಕೆ ನೀಡಿದ್ದಾರೆ.  "ಇಂಡಿಗೋದಲ್ಲಿನ ಅಡಚಣೆಗಳು ಸ್ಥಿರವಾಗುತ್ತಿವೆ; ದೇಶಾದ್ಯಂತ ಎಲ್ಲಾ ಇತರ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ....

ಜಾರ್ಖಂಡ್‌| ದಲಿತರಿಗೆ ಸೇವೆ ಬಹಿಷ್ಕರಿಸಿದ ಕ್ಷೌರಿಕರು; ಪೊಲೀಸರ ಎಚ್ಚರಿಕೆ ಹೊರತಾಗಿಯೂ ಅಂಗಡಿಗಳು ಬಂದ್

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್‌ನ ಬಹರಗೋರಾ ಬ್ಲಾಕ್‌ನ ಜಯಪುರ ಗ್ರಾಮದಲ್ಲಿ ನಮಗೆ ಕ್ಷೌರಿಕರು ಸೇವೆಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಹಳ್ಳಿಯಲ್ಲಿರುವ ಎಲ್ಲ ಆರು...

ಕಸಾಪ ಅಕ್ರಮ | 17 ಆರೋಪಗಳ ಪೈಕಿ 14ರ ವಿಚಾರಣೆ ಪೂರ್ಣ : ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳ ಪೈಕಿ 14ರ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 3 ಅಂಶಗಳ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ...

ವೇತನ ಸಹಿತ ಮುಟ್ಟಿನ ರಜೆ : ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆ

ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ...

‘ಸಿಎಂ ಹುದ್ದೆಗೆ 500 ಕೋಟಿ’ ಹೇಳಿಕೆ : ನವಜೋತ್ ಕೌರ್ ಸಿಧು ಕಾಂಗ್ರೆಸ್‌ನಿಂದ ಅಮಾನತು

"500 ಕೋಟಿ ರೂಪಾಯಿಯ ಸೂಟ್‌ಕೇಸ್ ನೀಡುವ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿಕೆ ನೀಡಿದ ಎರಡು ದಿನಗಳ ನಂತರ, ಮಾಜಿ ಕ್ರಿಕೆಟಿಗ ಮತ್ತು ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್...

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಕನಿಷ್ಠ 30 ಜನರಿಗೆ ಗಾಯ, ಸಾವಿರಾರು ಜನರ ಸ್ಥಳಾಂತರ

ಸೋಮವಾರ (ಡಿಸೆಂಬರ್ 8) ರಾತ್ರಿ (ಭಾರತೀಯ ಕಾಲಮಾನ ಸಂಜೆ 7.45) ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು...

ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ ‘ವಂದೇ ಮಾತರಂ’ ಕುರಿತು ಚರ್ಚೆ ಏಕೆ? ಪ್ರಿಯಾಂಕಾ ಗಾಂಧಿ

ಸೋಮವಾರ ಲೋಕಸಭೆಯಲ್ಲಿ 'ವಂದೇ ಮಾತರಂನ 150 ವರ್ಷಗಳು' ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಹೆಚ್ಚು ಮುಖ್ಯವಾದ ವಿಷಯಗಳಿರುವಾಗ, ಈ...

ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇ.30 ಮಹಿಳಾ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ

ಮಹತ್ವದ ಆದೇಶವೊಂದರಲ್ಲಿ, ಚುನಾವಣೆಗಳು ಇನ್ನೂ ಘೋಷಣೆಯಾಗದ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇಕಡ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಲು ಸೋಮವಾರ (ಡಿಸೆಂಬರ್ 8) ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಪ್ರಸಕ್ತ ವರ್ಷಕ್ಕೆ, ಶೇಕಡ 20ರಷ್ಟು ಮಹಿಳಾ...

ಮಹಾರಾಷ್ಟ್ರ| ಶಿವಾಜಿಯ ಪಾದ ಮುಟ್ಟಿ ಕ್ಷಮೆಯಾಚಿಸುವಂತೆ ಒತ್ತಾಯ; ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಂದುತ್ವ ಗುಂಪಿನಿಂದ ಕಿರುಕುಳ

ವಿದ್ಯಾರ್ಥಿಗಳು, ಆಡಳಿತ ಮಂಡಳಿ ಅನುಮತಿಯೊಂದಿಗೆ ಕ್ಯಾಂಪಸ್‌ನಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದ ನಂತರ ಅವರಿಗೆ ಕಿರುಕುಳ ನೀಡಿರುವ ಬಲಪಂಥೀಯ ಕಾರ್ಯಕರ್ತರ ಗುಂಪು, ಮುಸ್ಲಿಂ ವಿದ್ಯಾರ್ಥಿಗಳ ಗುಂಪನ್ನು ಕ್ಷಮೆಯಾಚಿಸಲು ಹಾಗೂ ಛತ್ರಪತಿ ಶಿವಾಜಿ...