Homeಅಂಕಣಗಳುದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

- Advertisement -
- Advertisement -

ಈ ಸಂಚಿಕೆಯಲ್ಲಿ ಡಾ.ಕಫೀಲ್‌ ಖಾನ್‌ರವರ ಸಂದರ್ಶನವಿದೆ. ಇವರೊಂದು ಸೋಜಿಗ. ಜೆಎನ್‌ಯು ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿಯಂತೆ. ಇವರು ಕೆಲಕಾಲದ ಹಿಂದೆ ʼಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದುʼ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ತಮ್ಮ ಬದುಕಿನಲ್ಲಾದ ʼಬೇರೆಯವರಾದರೆ ತತ್ತರಿಸಿ ಮೂಲೆಯಲ್ಲಿ ಕೂತುಬಿಡುವʼ ಭಯಾನಕ ಘಟನೆಗಳ ನಂತರ ಗಟ್ಟಿಯಾದವರು. ಕಫೀಲ್‌ ಖಾನ್‌ ಗೋರಖಪುರದ ತಾನು ಕೆಲಸ ಮಾಡುತ್ತಿದ್ದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮಕ್ಕಳ ಸರಣಿ ಸಾವುಗಳಾಗುತ್ತಿದ್ದಾಗ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಆಕ್ಸಿಜನ್‌ ಕೊರತೆಗೆ ಕಾರಣವಾಗಿದ್ದ ಸರ್ಕಾರವು, ಅಂತಹ ವ್ಯಕ್ತಿಯನ್ನು ಅಮಾನತು ಮಾಡಿತು, ಬಂಧಿಸಿತು.

ಬಂಧನದ ನಂತರ ಹೊರಬಂದ ವ್ಯಕ್ತಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದರು. ಶಾಂತಿ ಸಾರುವ ಮಾತುಗಳನ್ನಾಡುತ್ತಾ ಹೋದವರನ್ನು, ಗಲಭೆಗೆ ಪ್ರಚೋದನೆ ನೀಡಿದರು ಎಂದು ಮತ್ತೆ ಬಂಧಿಸಲಾಯಿತು. ಬಂಧನದಿಂದ ಮತ್ತೆ ಹೊರಬಂದ ಮೇಲೆ ʼನನಗೆ ದೇಶದ ಜನರ ಸೇವೆ ಮಾಡಲು ಅವಕಾಶ ಕೊಡಿʼ ಎಂದು ಕೇಳಿದರು. ಇಡೀ ವ್ಯವಸ್ಥೆಯ ಮೇಲೆ, ದೇಶದ ಜನರ ಮೇಲೆ ಸಿಟ್ಟು ಮಾಡಿಕೊಂಡು ʼಎಲ್ಲಾ ಹಾಳಾಗಲಿʼ ಎನ್ನಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ವಾತಾವರಣವಿರುವೆಡೆ ಈ ಜೀವ ಪ್ರೀತಿ ಹೇಗೆ ಸಾಧ್ಯವಾಗಿದೆ?

ಡಾ.ಕಫೀಲ್ ಖಾನ್

ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಒಬ್ಬರ ಭೇಟಿಯಾಯಿತು. ಮೂರು ಮಹಾನಗರಗಳಲ್ಲಿ ದೊಡ್ಡ ಹೋಟೆಲುಗಳ ಒಡೆಯರಾದ ಅಶ್ರಫ್‌ ಅಲಿಯವರು ಭಾರೀ ದೊಡ್ಡ ಕುಳ. ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಸೇರಲಾಗದ ಜನರಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಿಸಲು ಒದ್ದಾಡುತ್ತಿದ್ದರು. ಆಕ್ಸಿಜನ್‌ ಇರುವ ಬೆಡ್‌ ಇಲ್ಲ ಎಂದು ವೈದ್ಯರು ಹೇಳಿದಾಗ, ತಾನೇ ವಾರ್ಡ್‌ ವಾರ್ಡ್‌ ಸುತ್ತಾಡಿ, ಅಲ್ಲೊಂದು ಬೆಡ್‌ ಹುಡುಕಿ ರೋಗಿಯನ್ನು ದಾಖಲಿಸಿ ನಂತರ ನಮ್ಮನ್ನು ನೋಡಲು ಬಂದರು. ಹೋಟೆಲ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡುಗಳಾಗಿ ಮಾಡಿ ದುಡ್ಡು ಮಾಡುವ ಸಂದರ್ಭ ಬರುವ ಮುಂಚೆಯೇ ತಮ್ಮ ಹೋಟೆಲ್‌ಅನ್ನು ಉಚಿತವಾಗಿ ಅದಕ್ಕಾಗಿ ಬಿಟ್ಟುಕೊಟ್ಟಿದ್ದರು. ಇದೆಲ್ಲಾ ಮಾಡಲು ಪ್ರೇರಣೆ ಏನು?

ಕೊರೊನಾದಿಂದ ಗುಣಮುಖನಾಗಿ ಬಂದ ನಾನು ಪ್ಲಾಸ್ಮಾ ಕೊಡಬಹುದು. ಆದರೆ, ಸ್ವಲ್ಪ ಸಮಯವೂ ಇಲ್ಲದಂತಹ ಸುತ್ತಾಟ ಮತ್ತು ಪ್ಲಾಸ್ಮಾ ಥೆರಪಿ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣದಿಂದ ಅಷ್ಟು ಗಮನ ಹರಿಸಲಿಲ್ಲ. ಆದರೆ, ಯಾವುದೋ ಆಸ್ಪತ್ರೆಯಲ್ಲಿ ಯಾರೋ ಬಡ ರೋಗಿಗೆ ಪ್ಲಾಸ್ಮಾ ಹೊಂದಿಸಲು ಪ್ರಯತ್ನಿಸುತ್ತಿರುವ ಮರ್ಸಿ ಮಿಷನ್‌ (ಸ್ವಯಂಸೇವಕ ಮುಸ್ಲಿಂ ಯುವಕರ ಗುಂಪು) ವಾಲಂಟಿಯರ್‌ಗಳು ನಾನು ಪ್ಲಾಸ್ಮಾ ಕೊಡುವತನಕ ಬಿಡುವಂತೆ ಕಾಣುತ್ತಿಲ್ಲ. ಆ ಕಡೆ ಇರುವ ರೋಗಿಯನ್ನು ಅವರು ಧರ್ಮ ನೋಡಿ ನೆರವು ಕೊಡುತ್ತಿಲ್ಲ ಎಂಬುದು ಮಾತ್ರ ಖಚಿತ. ಬೆಂಗಳೂರಿನಲ್ಲಿ ಕ್ರಿಶ್ಚಿಯನ್‌, ಹಿಂದೂ ಜನರ ಅಂತ್ಯ ಸಂಸ್ಕಾರವನ್ನೂ, ಸತ್ತವರ ನಂಬಿಕೆಗನುಗುಣವಾಗಿ ಮಾಡಿದವರು. ಇವರನ್ನು ಕೈ ಹಿಡಿದು ನಡೆಸುತ್ತಿರುವುದು ಏನು?

ಅವರ ಪ್ರಕಾರ ಅವರು ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಈ ದೇಶದ ಸಹಮನುಷ್ಯರಿಗೆ ಸಹಾಯ ಮಾಡುವುದು, ಸಂವಿಧಾನದ ತತ್ವಗಳಿಗನುಗುಣವಾಗಿ ನಡೆದುಕೊಳ್ಳುವುದು ಎಲ್ಲವೂ ಧರ್ಮದ ಭಾಗವೇ. ಇದೇ ದೇಶದಲ್ಲಿ, ಅವರದ್ದೇ ದೇಶವಾದರೂ ಅವರನ್ನು ಸತತವಾಗಿ ಅನ್ಯರನ್ನಾಗಿಸುತ್ತಿರುವ ದೇಶದಲ್ಲಿ ಅವರ ನಂಬಿಕೆ ಅವರನ್ನು ಮನುಷ್ಯರನ್ನಾಗಿ ಉಳಿಸಿದೆ.

ಹೌದು ಬಾಂಬ್‌ ಕಟ್ಟಿಕೊಂಡು ಸ್ಫೋಟಿಸಿ ಅಮಾಯಕರನ್ನು ಕೊಂದವರೂ ಈ ಧರ್ಮದಲ್ಲಿದ್ದರು. ಆದರೆ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಈ ದೇಶದ ಶೇ.1ರಷ್ಟು ಜನ ಮುಸ್ಲಿಮರು ಹಾಗೆ ಮಾಡಿದ್ದರೂ, ದೇಶವೇ ಉಳಿಯುತ್ತಿರಲಿಲ್ಲ. ಸಾಯಲು ಸಿದ್ಧರಾದವರಿಗೆ ಯಾವ ಭಯ?

ಆದರೆ ಅದೇ ಧರ್ಮ ಅವರಲ್ಲಿ ಮನುಷ್ಯಪ್ರೀತಿಯನ್ನು ಅರಳಿಸಿದ್ದಿದೆಯಲ್ಲಾ ಅದಕ್ಕೇನು ಹೇಳುವುದು? ಈ ದೇಶದ ಮುಸ್ಲಿಮರನ್ನು ನೋಡಲು ಮುಸ್ಲಿಮೇತರರಿಗೆ ಇನ್ನೊಂದು ಕಣ್ಣೂ ಬೇಕಿದೆ. ಇಲ್ಲವಾದರೆ ಧರ್ಮವೂ ಉಳಿಯುವುದಿಲ್ಲ, ದೇಶವೂ.


ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....