Homeಅಂಕಣಗಳುದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

- Advertisement -
- Advertisement -

ಈ ಸಂಚಿಕೆಯಲ್ಲಿ ಡಾ.ಕಫೀಲ್‌ ಖಾನ್‌ರವರ ಸಂದರ್ಶನವಿದೆ. ಇವರೊಂದು ಸೋಜಿಗ. ಜೆಎನ್‌ಯು ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿಯಂತೆ. ಇವರು ಕೆಲಕಾಲದ ಹಿಂದೆ ʼಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದುʼ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ತಮ್ಮ ಬದುಕಿನಲ್ಲಾದ ʼಬೇರೆಯವರಾದರೆ ತತ್ತರಿಸಿ ಮೂಲೆಯಲ್ಲಿ ಕೂತುಬಿಡುವʼ ಭಯಾನಕ ಘಟನೆಗಳ ನಂತರ ಗಟ್ಟಿಯಾದವರು. ಕಫೀಲ್‌ ಖಾನ್‌ ಗೋರಖಪುರದ ತಾನು ಕೆಲಸ ಮಾಡುತ್ತಿದ್ದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮಕ್ಕಳ ಸರಣಿ ಸಾವುಗಳಾಗುತ್ತಿದ್ದಾಗ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಆಕ್ಸಿಜನ್‌ ಕೊರತೆಗೆ ಕಾರಣವಾಗಿದ್ದ ಸರ್ಕಾರವು, ಅಂತಹ ವ್ಯಕ್ತಿಯನ್ನು ಅಮಾನತು ಮಾಡಿತು, ಬಂಧಿಸಿತು.

ಬಂಧನದ ನಂತರ ಹೊರಬಂದ ವ್ಯಕ್ತಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದರು. ಶಾಂತಿ ಸಾರುವ ಮಾತುಗಳನ್ನಾಡುತ್ತಾ ಹೋದವರನ್ನು, ಗಲಭೆಗೆ ಪ್ರಚೋದನೆ ನೀಡಿದರು ಎಂದು ಮತ್ತೆ ಬಂಧಿಸಲಾಯಿತು. ಬಂಧನದಿಂದ ಮತ್ತೆ ಹೊರಬಂದ ಮೇಲೆ ʼನನಗೆ ದೇಶದ ಜನರ ಸೇವೆ ಮಾಡಲು ಅವಕಾಶ ಕೊಡಿʼ ಎಂದು ಕೇಳಿದರು. ಇಡೀ ವ್ಯವಸ್ಥೆಯ ಮೇಲೆ, ದೇಶದ ಜನರ ಮೇಲೆ ಸಿಟ್ಟು ಮಾಡಿಕೊಂಡು ʼಎಲ್ಲಾ ಹಾಳಾಗಲಿʼ ಎನ್ನಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ವಾತಾವರಣವಿರುವೆಡೆ ಈ ಜೀವ ಪ್ರೀತಿ ಹೇಗೆ ಸಾಧ್ಯವಾಗಿದೆ?

ಡಾ.ಕಫೀಲ್ ಖಾನ್

ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಒಬ್ಬರ ಭೇಟಿಯಾಯಿತು. ಮೂರು ಮಹಾನಗರಗಳಲ್ಲಿ ದೊಡ್ಡ ಹೋಟೆಲುಗಳ ಒಡೆಯರಾದ ಅಶ್ರಫ್‌ ಅಲಿಯವರು ಭಾರೀ ದೊಡ್ಡ ಕುಳ. ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಸೇರಲಾಗದ ಜನರಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಿಸಲು ಒದ್ದಾಡುತ್ತಿದ್ದರು. ಆಕ್ಸಿಜನ್‌ ಇರುವ ಬೆಡ್‌ ಇಲ್ಲ ಎಂದು ವೈದ್ಯರು ಹೇಳಿದಾಗ, ತಾನೇ ವಾರ್ಡ್‌ ವಾರ್ಡ್‌ ಸುತ್ತಾಡಿ, ಅಲ್ಲೊಂದು ಬೆಡ್‌ ಹುಡುಕಿ ರೋಗಿಯನ್ನು ದಾಖಲಿಸಿ ನಂತರ ನಮ್ಮನ್ನು ನೋಡಲು ಬಂದರು. ಹೋಟೆಲ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡುಗಳಾಗಿ ಮಾಡಿ ದುಡ್ಡು ಮಾಡುವ ಸಂದರ್ಭ ಬರುವ ಮುಂಚೆಯೇ ತಮ್ಮ ಹೋಟೆಲ್‌ಅನ್ನು ಉಚಿತವಾಗಿ ಅದಕ್ಕಾಗಿ ಬಿಟ್ಟುಕೊಟ್ಟಿದ್ದರು. ಇದೆಲ್ಲಾ ಮಾಡಲು ಪ್ರೇರಣೆ ಏನು?

ಕೊರೊನಾದಿಂದ ಗುಣಮುಖನಾಗಿ ಬಂದ ನಾನು ಪ್ಲಾಸ್ಮಾ ಕೊಡಬಹುದು. ಆದರೆ, ಸ್ವಲ್ಪ ಸಮಯವೂ ಇಲ್ಲದಂತಹ ಸುತ್ತಾಟ ಮತ್ತು ಪ್ಲಾಸ್ಮಾ ಥೆರಪಿ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣದಿಂದ ಅಷ್ಟು ಗಮನ ಹರಿಸಲಿಲ್ಲ. ಆದರೆ, ಯಾವುದೋ ಆಸ್ಪತ್ರೆಯಲ್ಲಿ ಯಾರೋ ಬಡ ರೋಗಿಗೆ ಪ್ಲಾಸ್ಮಾ ಹೊಂದಿಸಲು ಪ್ರಯತ್ನಿಸುತ್ತಿರುವ ಮರ್ಸಿ ಮಿಷನ್‌ (ಸ್ವಯಂಸೇವಕ ಮುಸ್ಲಿಂ ಯುವಕರ ಗುಂಪು) ವಾಲಂಟಿಯರ್‌ಗಳು ನಾನು ಪ್ಲಾಸ್ಮಾ ಕೊಡುವತನಕ ಬಿಡುವಂತೆ ಕಾಣುತ್ತಿಲ್ಲ. ಆ ಕಡೆ ಇರುವ ರೋಗಿಯನ್ನು ಅವರು ಧರ್ಮ ನೋಡಿ ನೆರವು ಕೊಡುತ್ತಿಲ್ಲ ಎಂಬುದು ಮಾತ್ರ ಖಚಿತ. ಬೆಂಗಳೂರಿನಲ್ಲಿ ಕ್ರಿಶ್ಚಿಯನ್‌, ಹಿಂದೂ ಜನರ ಅಂತ್ಯ ಸಂಸ್ಕಾರವನ್ನೂ, ಸತ್ತವರ ನಂಬಿಕೆಗನುಗುಣವಾಗಿ ಮಾಡಿದವರು. ಇವರನ್ನು ಕೈ ಹಿಡಿದು ನಡೆಸುತ್ತಿರುವುದು ಏನು?

ಅವರ ಪ್ರಕಾರ ಅವರು ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಈ ದೇಶದ ಸಹಮನುಷ್ಯರಿಗೆ ಸಹಾಯ ಮಾಡುವುದು, ಸಂವಿಧಾನದ ತತ್ವಗಳಿಗನುಗುಣವಾಗಿ ನಡೆದುಕೊಳ್ಳುವುದು ಎಲ್ಲವೂ ಧರ್ಮದ ಭಾಗವೇ. ಇದೇ ದೇಶದಲ್ಲಿ, ಅವರದ್ದೇ ದೇಶವಾದರೂ ಅವರನ್ನು ಸತತವಾಗಿ ಅನ್ಯರನ್ನಾಗಿಸುತ್ತಿರುವ ದೇಶದಲ್ಲಿ ಅವರ ನಂಬಿಕೆ ಅವರನ್ನು ಮನುಷ್ಯರನ್ನಾಗಿ ಉಳಿಸಿದೆ.

ಹೌದು ಬಾಂಬ್‌ ಕಟ್ಟಿಕೊಂಡು ಸ್ಫೋಟಿಸಿ ಅಮಾಯಕರನ್ನು ಕೊಂದವರೂ ಈ ಧರ್ಮದಲ್ಲಿದ್ದರು. ಆದರೆ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಈ ದೇಶದ ಶೇ.1ರಷ್ಟು ಜನ ಮುಸ್ಲಿಮರು ಹಾಗೆ ಮಾಡಿದ್ದರೂ, ದೇಶವೇ ಉಳಿಯುತ್ತಿರಲಿಲ್ಲ. ಸಾಯಲು ಸಿದ್ಧರಾದವರಿಗೆ ಯಾವ ಭಯ?

ಆದರೆ ಅದೇ ಧರ್ಮ ಅವರಲ್ಲಿ ಮನುಷ್ಯಪ್ರೀತಿಯನ್ನು ಅರಳಿಸಿದ್ದಿದೆಯಲ್ಲಾ ಅದಕ್ಕೇನು ಹೇಳುವುದು? ಈ ದೇಶದ ಮುಸ್ಲಿಮರನ್ನು ನೋಡಲು ಮುಸ್ಲಿಮೇತರರಿಗೆ ಇನ್ನೊಂದು ಕಣ್ಣೂ ಬೇಕಿದೆ. ಇಲ್ಲವಾದರೆ ಧರ್ಮವೂ ಉಳಿಯುವುದಿಲ್ಲ, ದೇಶವೂ.


ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...