Homeಅಂಕಣಗಳುದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

- Advertisement -
- Advertisement -

ಈ ಸಂಚಿಕೆಯಲ್ಲಿ ಡಾ.ಕಫೀಲ್‌ ಖಾನ್‌ರವರ ಸಂದರ್ಶನವಿದೆ. ಇವರೊಂದು ಸೋಜಿಗ. ಜೆಎನ್‌ಯು ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿಯಂತೆ. ಇವರು ಕೆಲಕಾಲದ ಹಿಂದೆ ʼಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದುʼ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ತಮ್ಮ ಬದುಕಿನಲ್ಲಾದ ʼಬೇರೆಯವರಾದರೆ ತತ್ತರಿಸಿ ಮೂಲೆಯಲ್ಲಿ ಕೂತುಬಿಡುವʼ ಭಯಾನಕ ಘಟನೆಗಳ ನಂತರ ಗಟ್ಟಿಯಾದವರು. ಕಫೀಲ್‌ ಖಾನ್‌ ಗೋರಖಪುರದ ತಾನು ಕೆಲಸ ಮಾಡುತ್ತಿದ್ದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮಕ್ಕಳ ಸರಣಿ ಸಾವುಗಳಾಗುತ್ತಿದ್ದಾಗ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಆಕ್ಸಿಜನ್‌ ಕೊರತೆಗೆ ಕಾರಣವಾಗಿದ್ದ ಸರ್ಕಾರವು, ಅಂತಹ ವ್ಯಕ್ತಿಯನ್ನು ಅಮಾನತು ಮಾಡಿತು, ಬಂಧಿಸಿತು.

ಬಂಧನದ ನಂತರ ಹೊರಬಂದ ವ್ಯಕ್ತಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದರು. ಶಾಂತಿ ಸಾರುವ ಮಾತುಗಳನ್ನಾಡುತ್ತಾ ಹೋದವರನ್ನು, ಗಲಭೆಗೆ ಪ್ರಚೋದನೆ ನೀಡಿದರು ಎಂದು ಮತ್ತೆ ಬಂಧಿಸಲಾಯಿತು. ಬಂಧನದಿಂದ ಮತ್ತೆ ಹೊರಬಂದ ಮೇಲೆ ʼನನಗೆ ದೇಶದ ಜನರ ಸೇವೆ ಮಾಡಲು ಅವಕಾಶ ಕೊಡಿʼ ಎಂದು ಕೇಳಿದರು. ಇಡೀ ವ್ಯವಸ್ಥೆಯ ಮೇಲೆ, ದೇಶದ ಜನರ ಮೇಲೆ ಸಿಟ್ಟು ಮಾಡಿಕೊಂಡು ʼಎಲ್ಲಾ ಹಾಳಾಗಲಿʼ ಎನ್ನಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ವಾತಾವರಣವಿರುವೆಡೆ ಈ ಜೀವ ಪ್ರೀತಿ ಹೇಗೆ ಸಾಧ್ಯವಾಗಿದೆ?

ಡಾ.ಕಫೀಲ್ ಖಾನ್

ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಒಬ್ಬರ ಭೇಟಿಯಾಯಿತು. ಮೂರು ಮಹಾನಗರಗಳಲ್ಲಿ ದೊಡ್ಡ ಹೋಟೆಲುಗಳ ಒಡೆಯರಾದ ಅಶ್ರಫ್‌ ಅಲಿಯವರು ಭಾರೀ ದೊಡ್ಡ ಕುಳ. ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಸೇರಲಾಗದ ಜನರಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಿಸಲು ಒದ್ದಾಡುತ್ತಿದ್ದರು. ಆಕ್ಸಿಜನ್‌ ಇರುವ ಬೆಡ್‌ ಇಲ್ಲ ಎಂದು ವೈದ್ಯರು ಹೇಳಿದಾಗ, ತಾನೇ ವಾರ್ಡ್‌ ವಾರ್ಡ್‌ ಸುತ್ತಾಡಿ, ಅಲ್ಲೊಂದು ಬೆಡ್‌ ಹುಡುಕಿ ರೋಗಿಯನ್ನು ದಾಖಲಿಸಿ ನಂತರ ನಮ್ಮನ್ನು ನೋಡಲು ಬಂದರು. ಹೋಟೆಲ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡುಗಳಾಗಿ ಮಾಡಿ ದುಡ್ಡು ಮಾಡುವ ಸಂದರ್ಭ ಬರುವ ಮುಂಚೆಯೇ ತಮ್ಮ ಹೋಟೆಲ್‌ಅನ್ನು ಉಚಿತವಾಗಿ ಅದಕ್ಕಾಗಿ ಬಿಟ್ಟುಕೊಟ್ಟಿದ್ದರು. ಇದೆಲ್ಲಾ ಮಾಡಲು ಪ್ರೇರಣೆ ಏನು?

ಕೊರೊನಾದಿಂದ ಗುಣಮುಖನಾಗಿ ಬಂದ ನಾನು ಪ್ಲಾಸ್ಮಾ ಕೊಡಬಹುದು. ಆದರೆ, ಸ್ವಲ್ಪ ಸಮಯವೂ ಇಲ್ಲದಂತಹ ಸುತ್ತಾಟ ಮತ್ತು ಪ್ಲಾಸ್ಮಾ ಥೆರಪಿ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣದಿಂದ ಅಷ್ಟು ಗಮನ ಹರಿಸಲಿಲ್ಲ. ಆದರೆ, ಯಾವುದೋ ಆಸ್ಪತ್ರೆಯಲ್ಲಿ ಯಾರೋ ಬಡ ರೋಗಿಗೆ ಪ್ಲಾಸ್ಮಾ ಹೊಂದಿಸಲು ಪ್ರಯತ್ನಿಸುತ್ತಿರುವ ಮರ್ಸಿ ಮಿಷನ್‌ (ಸ್ವಯಂಸೇವಕ ಮುಸ್ಲಿಂ ಯುವಕರ ಗುಂಪು) ವಾಲಂಟಿಯರ್‌ಗಳು ನಾನು ಪ್ಲಾಸ್ಮಾ ಕೊಡುವತನಕ ಬಿಡುವಂತೆ ಕಾಣುತ್ತಿಲ್ಲ. ಆ ಕಡೆ ಇರುವ ರೋಗಿಯನ್ನು ಅವರು ಧರ್ಮ ನೋಡಿ ನೆರವು ಕೊಡುತ್ತಿಲ್ಲ ಎಂಬುದು ಮಾತ್ರ ಖಚಿತ. ಬೆಂಗಳೂರಿನಲ್ಲಿ ಕ್ರಿಶ್ಚಿಯನ್‌, ಹಿಂದೂ ಜನರ ಅಂತ್ಯ ಸಂಸ್ಕಾರವನ್ನೂ, ಸತ್ತವರ ನಂಬಿಕೆಗನುಗುಣವಾಗಿ ಮಾಡಿದವರು. ಇವರನ್ನು ಕೈ ಹಿಡಿದು ನಡೆಸುತ್ತಿರುವುದು ಏನು?

ಅವರ ಪ್ರಕಾರ ಅವರು ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಈ ದೇಶದ ಸಹಮನುಷ್ಯರಿಗೆ ಸಹಾಯ ಮಾಡುವುದು, ಸಂವಿಧಾನದ ತತ್ವಗಳಿಗನುಗುಣವಾಗಿ ನಡೆದುಕೊಳ್ಳುವುದು ಎಲ್ಲವೂ ಧರ್ಮದ ಭಾಗವೇ. ಇದೇ ದೇಶದಲ್ಲಿ, ಅವರದ್ದೇ ದೇಶವಾದರೂ ಅವರನ್ನು ಸತತವಾಗಿ ಅನ್ಯರನ್ನಾಗಿಸುತ್ತಿರುವ ದೇಶದಲ್ಲಿ ಅವರ ನಂಬಿಕೆ ಅವರನ್ನು ಮನುಷ್ಯರನ್ನಾಗಿ ಉಳಿಸಿದೆ.

ಹೌದು ಬಾಂಬ್‌ ಕಟ್ಟಿಕೊಂಡು ಸ್ಫೋಟಿಸಿ ಅಮಾಯಕರನ್ನು ಕೊಂದವರೂ ಈ ಧರ್ಮದಲ್ಲಿದ್ದರು. ಆದರೆ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಈ ದೇಶದ ಶೇ.1ರಷ್ಟು ಜನ ಮುಸ್ಲಿಮರು ಹಾಗೆ ಮಾಡಿದ್ದರೂ, ದೇಶವೇ ಉಳಿಯುತ್ತಿರಲಿಲ್ಲ. ಸಾಯಲು ಸಿದ್ಧರಾದವರಿಗೆ ಯಾವ ಭಯ?

ಆದರೆ ಅದೇ ಧರ್ಮ ಅವರಲ್ಲಿ ಮನುಷ್ಯಪ್ರೀತಿಯನ್ನು ಅರಳಿಸಿದ್ದಿದೆಯಲ್ಲಾ ಅದಕ್ಕೇನು ಹೇಳುವುದು? ಈ ದೇಶದ ಮುಸ್ಲಿಮರನ್ನು ನೋಡಲು ಮುಸ್ಲಿಮೇತರರಿಗೆ ಇನ್ನೊಂದು ಕಣ್ಣೂ ಬೇಕಿದೆ. ಇಲ್ಲವಾದರೆ ಧರ್ಮವೂ ಉಳಿಯುವುದಿಲ್ಲ, ದೇಶವೂ.


ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...