Homeಕರ್ನಾಟಕಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

ಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

- Advertisement -
- Advertisement -

ಕರ್ನಾಟಕದಲ್ಲಿ ಹತ್ತಾರು ಪತ್ರಿಕೆಗಳು ತಮ್ಮ ಕೆಲಸ ಮಾಡಿ ಬೇರೆಬೇರೆ ಕಾರಣಗಳಿಗೆ ಮರೆಗೆ ಮತ್ತು ಮರೆವಿಗೆ ಸರಿದಿವೆ. ಅಂತಹ ಪತ್ರಿಕೆಗಳ ಸ್ಮರಣೆ ಸಾಂಸ್ಕೃತಿಕ ಲೋಕದಲ್ಲಿ ಆಗಾಗ ನಡೆಯುತ್ತಿರುತ್ತದೆ. ಈ ಸ್ಮರಣೆಯಲ್ಲಿ ಸಣ್ಣ ಸಾಹಿತ್ಯಿಕ ಪತ್ರಿಕೆಗಳಾದ ಸಾಕ್ಷಿ (ಸಂ: ಗೋಪಾಲಕೃಷ್ಣ ಅಡಿಗ), ರುಜುವಾತು (ಸಂ: ಯು ಆರ್ ಅನಂತಮೂರ್ತಿ) ಅಂತಹವು ಸಿಂಹಪಾಲು ಜಾಗ ಪಡೆಯುತ್ತವೆ. ರಾಜಕೀಯ ಮತ್ತು ಸಾಹಿತ್ಯವನ್ನು ಮೇಳೈಸಿದ ಲಂಕೇಶ್ ಪತ್ರಿಕೆ ಕೂಡ ಮತ್ತೆಮತ್ತೆ ಕನ್ನಡ ಬೌದ್ಧಿಕ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತೆ. ಬಹಳ ದೀರ್ಘ ಕಾಲ ನಡೆದ ಸಂಕ್ರಮಣದಿಂದ ಹಿಡಿದು ಒಂದಷ್ಟು ಕಾಲ ನಡೆದು ಪ್ರಾತಿನಿಧ್ಯದ ಪ್ರಶ್ನೆಗೆ ಟೀಕೆಗೆ ಗುರಿಯಾದ ದೇಶಕಾಲದಂತಹ ಸಣ್ಣ ಸಾಹಿತ್ಯ ಪತ್ರಿಕೆಗಳು ಕೂಡ ನೆನಪಿನ ಸಂಭ್ರಮಗಳಲ್ಲಿ ಸದಾ ಭಾಗಿಯಾಗಿರುತ್ತವೆ. ಆದರೆ 70-80ರ ದಶಕದಲ್ಲಿ ಹತ್ತಾರು ವರ್ಷಗಳ ಕಾಲ ದಲಿತ ಸಂಘರ್ಷ ಸಮಿತಿಯ ಮುಖವಾಣಿಯಾಗಿ, ದಲಿತ ದೌರ್ಜನ್ಯಗಳ ಬಗ್ಗೆ ಪ್ರತಿಭಟಿಸಿದ, ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ, ವರದಿಗಳು, ಕಥೆ, ಕವನ, ಹಾಡುಗಳ ಮೂಲಕ ಜನಸಾಮಾನ್ಯರನ್ನು ಎಚ್ಚರಿಸಿ ಅಸಾಮಾನ್ಯ ಕೊಡುಗೆ ನೀಡಿದ ’ಪಂಚಮ’ ಪತ್ರಿಕೆಯ ನೆನಪು ಮೇಲೆ ಹೆಸರಿಸಿದ ಪತ್ರಿಕೆಗಳಷ್ಟು ಸಾಮಾನ್ಯವಾಗಿಲ್ಲ ಅಥವಾ ಆ ನೆನಪನ್ನು ಮರೆಗೆ ಸರಿಸಲಾಗಿದೆ ಎಂದರೂ ಸರಿಯೇ. ಇಂತಹ ಪಕ್ಷಪಾತಿ ಸಾಂಸ್ಕೃತಿಕ ರಾಜಕೀಯವನ್ನು ಪ್ರಶ್ನೆ ಮಾಡುವುದರೊಂದಿಗೆ, ಪಂಚಮ ಪತ್ರಿಕೆಯ ಕೊಡುಗೆ, ದಸಂಸ ಮತ್ತು ದಲಿತ ಹೋರಾಟಗಳನ್ನು ಸ್ಮರಿಸಲು ಜಂಗಮ ತಂಡ ’ಪಂಚಮ ಪದ’ವನ್ನು ಪ್ರಸ್ತುತಪಡಿಸಿದೆ. ಹಾಡುಗಳು, ಪತ್ರಿಕೆಯ ಕೆಲವು ಪ್ರಾತಿನಿಧಿಕ ಬರಹಗಳ ಓದು, ಪ್ರೇಕ್ಷಕರ ಜತೆಗೆ ಸಂವಾದಗಳಿಂದ ಕೂಡಿರುವ ಪಂಚಮ ಪದ ಒಂದು ವಿಶಿಷ್ಟ ಪ್ರಯೋಗ.

ಸುಮಾರು ಮೂರು ದಶಕಗಳ ಹಿಂದೆ, ಕಮ್ಮಸಂದ್ರ ಎಂಬ ಗ್ರಾಮದಲ್ಲಿ ಉತ್ಸವದ ದೇವರು ದಲಿತರ ಕೇರಿಗೆ ಬರದೆ ಇರುವ ಬಗ್ಗೆ, ಪ್ರತಿಭಟನೆಗಳ ನಂತರ ಅದು ಬಂದರೂ ದೂರದಿಂದಲೇ ಪೂಜೆ ಸಲ್ಲಿಸಬೇಕಿದ್ದ ಬಗ್ಗೆ ಬರೆದ ಹಾಡೊಂದನ್ನು (ಮುತ್ತಿನ ಪಲ್ಲಕ್ಕಿ ಮುಟ್ಟಾದ ಮುಟ್ಟಿದರೆ ಅನ್ಯಾಯವೇನಣ್ಣ) ಪ್ರಸ್ತುತಪಡಿಸುವ ಮೂಲಕ 22 ಏಪ್ರಿಲ್ 2024ರಂದು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಪಂಚಮ ಪದ ಪ್ರಸ್ತುತಿ ಆರಂಭವಾಯಿತು. ಆ ಹಾಡಿನ ಭಾವ ಮರಿಯಮ್ಮ ಅವರ ಮುಖದಲ್ಲಿ ಸಮಾಜದ ಬಗ್ಗೆ ಸಿಟ್ಟಿನ ಅವತರಣಿಕೆಯಾಗಿ ಮೈದಾಳಿತ್ತು; ಹಾಡಿನ ಕೊನೆಯಲ್ಲಿ, ಕಮ್ಮಸಂದ್ರ ಗ್ರಾಮದಲ್ಲಿ ಈ ರೀತಿ ಮಾಡಿದ್ದು ತಪ್ಪಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರೆ, ಒಂದಷ್ಟು ಹೊತ್ತು ಮೌನವಾಗಿದ್ದ ಸಭೆ, ನಂತರ ಅಲ್ಲಲ್ಲಿ ಹೌದು-ತಪ್ಪು ಎಂಬ ಉತ್ತರ ಕೇಳಿಬಂತು. ಪಂಚಮ ಪದ ಪ್ರಸ್ತುತಿಯುದ್ದಕ್ಕೂ ಪ್ರೇಕ್ಷಕರನ್ನು ತುಸು ತಬ್ಬಿಬ್ಬುಗೊಳಿಸುವ ಮತ್ತು ಪ್ರಶ್ನಿಸುವ ನಿಟ್ಟಿನಲ್ಲಿ ಕಟ್ಟಿರುವ ಸಂಭಾಷಣೆಗಳು ಬಹಳ ಗಟ್ಟಿ ದನಿಯಲ್ಲಿ ಮೂಡಿಬಂದಿರುವುದು, ಶತಮಾನಗಳ ದಬ್ಬಾಳಿಕೆ ಇಂದಿಗೂ ಕೊನೆಯಾಗದಿರುವುದನ್ನು ಪ್ರತಿನಿಧಿಸಿದೆ ಎಂದೆನಿಸುತ್ತದೆ. ಮುಂದುವರಿದು ಅಂದು ದಲಿತರ ಮೇಲಿನ ದೌರ್ಜನ್ಯಗಳ ಕಥೆಯನ್ನು ಹೇಳಲು ಪಂಚಮವೇ ಬರಬೇಕಾಯಿತು, ಪಂಚಮವನ್ನು ನೆನಪಿಸಿಕೊಳ್ಳಲು ಜಂಗಮವೇ ಬರಬೇಕಾಯಿತು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಪ್ರೇಕ್ಷಕರನ್ನು ಆಹ್ವಾನಿಸುತ್ತದೆ.

ನಂತರ ಬಾನಂದೂರ ಕೆಂಪಯ್ಯ ಅವರ ಜನಿವಾರದ ಕಥೆಯ ಪ್ರಸ್ತುತಿ, ಅವರು ಸಂಗ್ರಹಿಸಿದ್ದ ಜನಪದ ಗೀತೆ ’ತನುವಿನೊಳಗನುದಿನವಿದ್ದು’ ಗಾಯನದ ಮೂಲಕ ಮುಂದುವರಿಯುತ್ತದೆ. ಕುಣಿಗಲ್ ತಾಲೂಕಿನ ದಾಸನಪುರದಲ್ಲಿ ನಡೆದ ಚಿಕ್ಕತಿಮ್ಮಯ್ಯನವರ ಕೊಲೆಯ ವರದಿ, ಅದರ ಸುತ್ತ ಕವಿ-ಸಾಹಿತಿ ಕೆ.ಬಿ ಸಿದ್ದಯ್ಯ ಅವರು ಕಟ್ಟಿದ ಹಾಡು, ಕೋಲಾರದ ಅನಸೂಯಮ್ಮ ಅತ್ಯಾಚಾರ ಮತ್ತು ಶೇಷಗಿರಿಯಪ್ಪ ಕೊಲೆ ಪ್ರಕರಣಗಳು, ಅದರ ಸುತ್ತ ನಡೆದ ಹೋರಾಟ ಎಲ್ಲವೂ ಹೇಗೆ ಪಂಚಮ ಪತ್ರಿಕೆಯಲ್ಲಿ ಪ್ರತಿಧ್ವನಿಸಿತ್ತು ಎಂಬುದು ಓದು ಮತ್ತು ಹಾಡುಗಳ ಮೂಲಕ ರಂಗದ ಮೇಲೆ ಮಾರ್ದನಿಸುತ್ತದೆ. ಕೆ ಚಂದ್ರಶೇಖರ್ (ಈ ಪ್ರಸ್ತುತಿಯ ನಿರ್ದೇಶಕರು ಕೂಡ), ಮರಿಯಮ್ಮ, ಶ್ರದ್ಧಾ, ಲಕ್ಷ್ಮಣ್, ಭರತ ಡಿಂಗ್ರಿ, ಶ್ವೇತಾ ಎಚ್ ಕೆ ನಂದಿನಿ ಮತ್ತು ನರಸಿಂಹರಾಜು ಒಬ್ಬರನಂತರಒಬ್ಬರು ಮೈಕ್ ಹಿಡಿದು, ಕೆ ಬಿ ಸಿದ್ದಯ್ಯ, ಸಿದ್ದಲಿಂಗಯ್ಯ, ಬಾನಂದೂರು ಕೆಂಪಯ್ಯ, ಜೆನ್ನಿ, ಕೆ ರಾಮಯ್ಯ, ಇಂಧೂದರ ಹೊನ್ನಾಪುರ, ದೇವನೂರ ಮಹಾದೇವ ಇವರುಗಳ ಬರಹಗಳನ್ನ ಪರ್ಫಾಮ್ ಮಾಡುತ್ತಾ, ಹಾಡುಗಳನ್ನು ಹಾಡುತ್ತಾ, ತಾವೇ ಅವರಾಗಿ, 70-80ರ ದಶಕದ ದೌರ್ಜನ್ಯಗಳ ಕಡೆಗೆ, ಅವುಗಳ ವಿರುದ್ಧ ನಡೆದ ಹೋರಾಟಗಳ ಕಡೆಗೆ ಗಮನ ಸೆಳೆಯುತ್ತಾರೆ. ಈ ಪ್ರದರ್ಶನದಲ್ಲಿ ಈ ಹಿಂದಿನ ’ಮುಖ್ಯವಾಹಿನಿ’ ಏಸ್ಥೆಟಿಕ್‌ಅನ್ನು ಮುರಿಯುತ್ತಾ, ಅರೆ ಮತ್ತು ತಮೆಟೆಯ ವಾದ್ಯಗಳ ಶಬ್ದಗಳೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿ, ಕೇಳಿ ಗುನುಗಿ ಬಿಟ್ಟುಬಿಡಬಹುದಾಗಿದ್ದ ಭಾವದಿಂದ ಪ್ರೇಕ್ಷಕರನ್ನು ಬೇರೆಡೆ ಹೊರಳಿಸಿ, ಅವರನ್ನು ಬೌದ್ಧಿಕವಾಗಿ ಬಡಿದೆಬ್ಬಿಸಲು ತಂಡ ಪ್ರಯತ್ನಿಸುತ್ತದೆ. ಆ ನಿಟ್ಟಿನಲ್ಲಿ ಮೂಡಿರುವ ಸಿದ್ದಲಿಂಗಯ್ಯನವರ ’ಇಕ್ರಲ, ಒದಿರ್ಲ’ ಕಾಂಪೊಸಿಷನ್ ಹೆಚ್ಚು ಅರ್ಥಪೂರ್ಣವಾಗಿಯೂ, ಹೆಚ್ಚು ಪ್ರವೊಕೆಟಿವ್ ಆಗಿಯೂ ಕೇಳಿಸುತ್ತದೆ. ಸಿದ್ದಲಿಂಗಯ್ಯನವರ ’ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’, ಆರ್ ಮಾನಸಯ್ಯನವರ ’ಸತ್ತಂತ ತೊಗಲಿಗೆ’, ಇಂಧೂದರ ಹೊನ್ನಾಪುರ ಅವರ ’ಕಪ್ಪು ಮನುಜರು ನಾವು..’- ಹೀಗೆ ಹಲವು ಹಾಡುಗಳ ಪ್ರಸ್ತುತಿ, ’ಬತ್ತಿದ ನೆಲಕ್ಕಾಗಿ ಎಚ್ಚೆತ್ತ ಜನಕ್ಕಾಗಿ ಮುತ್ತಿನ ಮಳೆಯ ನಾವು ಕರೆಯೋಣ’ ಎಂಬಂತೆ ಶೋಷಕ ಹಿನ್ನೆಲೆಯಿಂದ ಬಂದವರು ಬದಲಾವಣೆಗೆ ತೆರೆದುಕೊಂಡು ಎಲ್ಲರನ್ನು ಒಳಗೊಳ್ಳಬೇಕಾದ ವಿವೇಕಕ್ಕೆ ಕರೆಕೊಡುತ್ತದೆ.

ಈ ಪ್ರಸ್ತುತಿಯಲ್ಲಿ ಕೆಲವು ಆಸಕ್ತಿಕಾರಕ ಸಂಗತಿಗಳು ಕೂಡ ಸುಳಿಯುತ್ತವೆ. ಅಂತಹುದರಲ್ಲಿ ಒಂದು, ದೇವನೂರ ಮಹದೇವರ ಬೀಡಿ ಕುಂಚವಾಗಿ, ದಸಂಸ ಪ್ರಕಟಿಸಿದ ’ಹೋರಾಟದ ಹಾಡುಗಳ’ ಮುಖಪುಟ ರಚನೆಯಾಗಿದ್ದು.

ಪಂಚಮಕ್ಕೆ, ದಲಿತ ಹೋರಾಟಕ್ಕೆ ಗೌರವ ಸಲ್ಲಿಸುವ ಪ್ರಸ್ತುತಿಯ ನಡುವೆಯೇ, ಈ ರಂಗತಂಡ ಇದೇ ಪ್ರಸ್ತುತಿಯನ್ನು ಇಂದಿನ ಹೊಸ ಚಿಂತನೆಗಳ ಚರ್ಚೆಯ ಹಿನ್ನೆಲೆಯಲ್ಲಿ ತಮ್ಮ ಹೋರಾಟಗಳನ್ನು ರಿಫ್ಲೆಕ್ಟ್ ಮಾಡಿಕೊಳ್ಳುವುದಕ್ಕೂ ಬಳಸಿಕೊಂಡಿದೆ. ಅನಸೂಯಮ್ಮ ಹೋರಾಟದ ಭಾಗವಾಗಿ ಕೆ ರಾಮಯ್ಯನವರು ರಚಿಸಿದ ಸಾಹಿತ್ಯದಲ್ಲಿ ಇರುವ ಮತ್ತು ಹೋರಾಟದಲ್ಲಿ ಹೆಚ್ಚು ಮಹಿಳೆಯರನ್ನು ತೊಡಗಿಸಿಕೊಳ್ಳದೆ ಪುರುಷರೇ ಲೀಡ್ ಮಾಡಿದ ಪೇಟ್ರಿಯಾರ್ಕಲ್ ಸಮಸ್ಯೆಯ ಬಗ್ಗೆ ರಾಮಯ್ಯನವರ ಮಗಳು ದಿಶಾ ಬರೆಯುವ ಪತ್ರವನ್ನು ಓದುವ ಮೂಲಕ ವಿಶಾಲ ಪ್ರಾತಿನಿಧಿಕ ದಾರಿಯನ್ನು ರಂಗತಂಡ ಶೋಧಿಸಿಕೊಳ್ಳುತ್ತದೆ ಮತ್ತು ಈ ಪ್ರಸ್ತುತಿಯ ತಂಡದ ಕಾಂಪೊಸಿಷನ್‌ನಲ್ಲೂ ಅದು ಧನಾತ್ಮಕವಾಗಿ ರಿಫ್ಲೆಕ್ಟ್ ಆಗತ್ತೆ. ಈ ರೀತಿಯಲ್ಲಿ ಪ್ರಚೋದನೆಯ ಜತೆಗೆ ತಾನೂ ಹೇಗೆ ಪ್ರಶ್ನಿಸಿಕೊಂಡಿದ್ದೇನೆ ಎಂದು ತೋರಿಸುವ ಜಂಗಮ ತಂಡದ ಈ ಪ್ರಸ್ತುತಿ ಮರೆವಿಗೆ ಸರಿಸುವ ಸಾಂಸ್ಕೃತಿಕ ರಾಜಕೀಯದ ವಿರುದ್ಧ ಹೇಳಿಕೆಯೂ ಹೌದು ಮತ್ತು ಪ್ರಾತಿನಿಧ್ಯವನ್ನು ಸರಿಪಡಿಸಿಕೊಳ್ಳುವ ಆಹ್ವಾನವೂ ಹೌದು.

ಆಸಕ್ತಿದಾಯಕ ಪ್ರಯೋಗ

ಈ ಪ್ರಸ್ತುತಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಮಾಡಿರುವ ಪ್ರಯೋಗ ಉಲ್ಲೇಖನೀಯ. ಈ ಹೋರಾಟದ ಕಥನಗಳ ನಡುವೆ ಒಂದೈದು ನಿಮಿಷ ಬ್ರೇಕ್ ನೀಡಿ, ಪ್ರೇಕ್ಷಕರಿಗೆ ತಮ್ಮ ಹೋರಾಟದ ಅನುಭವಗಳನ್ನು, ನೋವಿನ ಕಥೆಗಳನ್ನು ನಿವೇದಿಸಿಕೊಳ್ಳಲು ಆಹ್ವಾನ ನೀಡುತ್ತದೆ. ನಾನು ನೋಡಿದ ಪ್ರದರ್ಶನದಲ್ಲಿ ಬ್ರಾಹ್ಮಣ ಸಮುದಾಯದ ಇಬ್ಬರು, ಜನಿವಾರ ಹಾಕಿಕೊಂಡಾಗ ಸಣ್ಣ ಮಕ್ಕಳಿಗಾಗುವ ಆಘಾತ ಮತ್ತು ನೋವಿನ ಕಥೆಗಳನ್ನು ಹಂಚಿಕೊಂಡರು.

ಪ್ರಸ್ತುತಿಯ ಕೊನೆಗೆ ನಡೆದ ಪ್ರಶ್ನೋತ್ತರ ಸಂವಾದವೂ ಆಸಕ್ತಿದಾಯಕ ಮಾತುಕತೆಗೆ ಸಾಕ್ಷಿಯಾಯಿತು. ಈ ಕಾಲಘಟ್ಟದಲ್ಲಿಯೂ ’ಇಕ್ರಲಾ ಒದಿರ್ಲಾ’ ಎಂಬ ಪ್ರವೊಕೇಶನ್ ಬೇಕಾ ಎನ್ನುವ ಪ್ರಶ್ನೆಗೆ, ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಿಜವಾಗಿಯೂ ತಾರತಮ್ಯಗಳು ನಿಂತಿವೆಯೇ ಎಂಬ ಮರುಪ್ರಶ್ನೆ ಬಂದಿತು ರಂಗತಂಡದಿಂದ. ಈ ದೌರ್ಜನ್ಯನ ಕಥೆಗಳನ್ನು ನೀವು ಹೇಳುವಾಗ ಮಾನಸಿಕವಾಗಿ ಕುಗ್ಗಿಹೋಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದನ್ನು ನಟನೆಗೆ ಒಗ್ಗಿಸಿಕೊಳ್ಳದೆ, ಓದು ಹಾಡಿನ ಪ್ರದರ್ಶನ ನೀಡುತ್ತಿರುವುದಕ್ಕೆ ಅದೂ ಒಂದು ಕಾರಣ ಎಂದಿತು ತಂಡ. ಬೇರೆಬೇರೆ ಶೋಗಳಲ್ಲಿ ಕುಹಕದ, ವ್ಯಂಗ್ಯದ ಮತ್ತು ಅವಮಾನಿಸುವ ಪ್ರತಿಕ್ರಿಯೆಗಳು ಬಂದಿದ್ದನ್ನು ಜಂಗಮ ತಂಡ ನರೇಟ್ ಮಾಡಿತು. ಈ ಮಟ್ಟಿಗೆ ಪ್ರೇಕ್ಷಕರನ್ನು ಚಿಂತಿಸುವಂತೆ ಪ್ರಚೋದಿಸಲು ಈ ಪ್ರಸ್ತುತಿ ನಿಜಕ್ಕೂ ಯಶಸ್ವಿಯಾಗಿದೆ ಎನ್ನಬಹುದು.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...