Homeಮುಖಪುಟಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು...

- Advertisement -
- Advertisement -

ನಮ್ಮ ಯೋಗಪ್ಪನವರನ್ನು ಕೊರೊನಾ ಬಲಿ ಪಡೆದಿದೆ. ಇದು ಕನ್ನಡ ಸಾಹಿತ್ಯಾಕ್ಕಾದ ದೊಡ್ಡ ನಷ್ಟ. ಏಕೆಂದರೆ, ಯೋಗಪ್ಪನವರು ಇನ್ನೂ ಮಹತ್ತರವಾದುದನ್ನು ಬರೆಯುವವರಿದ್ದರು. ಅವರು ಲಂಕೇಶರಿಗೆ ಪರಿಚಯವಾದುದ್ದೇ ತಮ್ಮ ಗಟ್ಟಿಯಾದ ಬರಹ ಮತ್ತು ಓದಿನ ಮುಖಾಂತರ. ಇಂಗ್ಲಿಷ್ ಸಾಹಿತ್ಯದ ಓದಿನ ವಿಷಯದಲ್ಲಿ ಪಾಂಡಿತ್ಯದ ಔನ್ನತ್ಯದಲ್ಲಿದ್ದ ಯೋಗಪ್ಪನವರು ನಮ್ಮಂತವರ ಜೊತೆಯೂ ಸಹಜವಾದ ಸ್ನೇಹದಿಂದಿದ್ದರು. ಅವರು ಲಂಕೇಶ್ ಜೊತೆ ಮಾತನಾಡುತ್ತ ಕುಳಿತಿದ್ದರೆ ನಾವು ಉಸಿರೆತ್ತದೆ ಸುಮ್ಮನೆ ಕೇಳಿಸಿಕೊಳ್ಳುವಂತಾಗುತ್ತಿತ್ತು.

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು. ಆಗಲೇ ಅವರ ಮನದಾಳದಲ್ಲಿ ಈ ಜಗತ್ತಿನ ರೂಪಕ ಲೇಖಕರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಸಂಕ್ಷಿಪ್ತವಾಗಿ ಕೊಡಬೇಕೆನ್ನಿಸಿರಬೇಕು. ಲಂಕೇಶ್ ಪತ್ರಿಕೆಯನ್ನ ನಿರಂತರ ಪ್ರಯೋಗಶೀಲತೆಗೆ ಗುರಿ ಮಾಡುತ್ತಿದ್ದರಿಂದ ಈ ಹಿಂದೆ ಎನ್.ಎಸ್ ಶಂಕರ್ ಕೈಲಿ ’ಚಂಚಲೆ’ ಮತ್ತು ನಟರಾಜ್ ಹುಳಿಯಾರ್‌ರಿಂದ ’ಬರೆವ ಬದುಕು’ ಅಂಕಣಗಳನ್ನು ಬರೆಸಿದ್ದರು. ಮಹಿಳಾ ಲೇಖಕಿಯರಿಂದ ’ನಿಮ್ಮಿ’ ಬರೆಸಿದ್ದರು. ಇವನ್ನೆಲ್ಲಾ ಶುರುಮಾಡಿ ಪತ್ರಿಕೆಯ ನೌಕರರಿಗೆ ಮುಂದುವರಿಸಲು ಬಿಡುತ್ತಿದ್ದರು.

ಹಾಗೆಯೇ ಯೋಗಪ್ಪನವರಿಂದ ಜಗತ್ತಿನ ವಿಸ್ಮಯಕಾರಿ ಲೇಖಕರ ಬಗೆಗಿನ ಸಂಗತಿಗಳನ್ನು ಬರೆಸುತ್ತಿದ್ದರು. ಪತ್ರಿಕೆಯ ಸಾಹಿತ್ಯ ಮತ್ತು ರಾಜಕಾರಣದ ಸಮತೂಕವನ್ನು ನಿಭಾಯಿಸುವುದರಲ್ಲಿ ಯೋಗಪ್ಪನವರ ಬರವಣಿಗೆ ಮಹತ್ವ ಪಡೆದುಕೊಂಡಿದ್ದವು.

ಅವರು ನನಗೆ ಅಷ್ಟಾಗಿ ಪರಿಚಯವಿಲ್ಲದ ಸಮಯದಲ್ಲಿ ಅವರ ಗೆಳೆಯನಂತಿದ್ದ ಉತ್ತರ ಕರ್ನಾಟಕದ ವರದಿಗಾರನೊಬ್ಬ ಲಂಕೇಶರಿಗೆ ಯೋಗಪ್ಪನವರ ವಿಷಯದಲ್ಲಿ ಚಾಡಿ ಹೇಳುತ್ತ ಕುಳಿತಿದ್ದ. ಅದನ್ನ ಕೇಳಿಸಿಕೊಂಡ ನಾನು ಇನ್ನು ಯೋಗಪ್ಪನವರು ಪತ್ರಿಕೆಯಿಂದ ಹೊರನಡೆದಂತೆಯೇ ಎಂದು ಭಾವಿಸಿದ್ದೆ. ಆದರೆ ಲಂಕೇಶ್ ಚಾಡಿ ಹೇಳಿದವನ ಮಾತನ್ನು ಪಕ್ಕಕ್ಕಿಟ್ಟು ಯೋಗಪ್ಪನವರನ್ನು ಗೌರವಿಸಿದ್ದರು. ಆಗೊಮ್ಮೆ ಪತ್ರಿಕೆ ಆಫೀಸಿನಲ್ಲಿ ಶರ್ಮರ ಕಾವ್ಯ ಕುರಿತ ಚರ್ಚೆಯಲ್ಲಿ ಯೋಗಪ್ಪನವರು ಶರ್ಮರ ಎದುರೇ ಅವರ ಕಾವ್ಯದ ಅಂತರಾಳವನ್ನು ಅನಾವರಣ ಮಾಡಿದ್ದರು. ಇದರಿಂದ ಕೆರಳಿದ ಶರ್ಮರು ಯೋಗ್ಯಪ್ಪನವರು ಎಂದು ವ್ಯಂಗ್ಯವಾಗಿ ಮೂದಲಿಸಿದ್ದರು. ಆದರೂ ಯೋಗಪ್ಪನವರು ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ತುಟಿಬಿರಿದರು. ಆಗ ನಟರಾಜ್ ಹುಳಿಯಾರ್ ಮತ್ತು ಲಂಕೇಶರು ಯೋಗಪ್ಪನವರ ವ್ಯಾಖ್ಯಾನವನ್ನು ಸಮರ್ಥಿಸಿಕೊಂಡಿದ್ದರು.

ಒಮ್ಮೆ ಪಶುಸಂಗೋಪನಾ ಸಚಿವರಾಗಿದ್ದ ಬಿ.ಬಿ ನಿಂಗಯ್ಯ ನನ್ನ ಗೆಳೆಯರಾದ ಕಾರಣಕ್ಕೆ ಆಫೀಸಿಗೆ ಕರೆದರು. ಹೋದಾಗ ಇಲ್ಲೆ ಊಟ ಮಾಡಿ ಎಂದರು. ಆಯ್ತು ಎಂದು ಊಟಕ್ಕೆ ಕುಳಿತಾಗ ನಿಂಗಯ್ಯನವರಿಗೆ ಪಿ.ಎಸ್ ಆಗಿದ್ದ ಯೋಗಪ್ಪನವರು ವಿಧೇಯ ಪರಿಚಾರಕನಂತೆ ಊಟ ಬಡಿಸಿದ್ದು ನಾನು ಮರೆಯಲಾಗದ ಮುಜುಗರಕ್ಕೆ ಈಡುಮಾಡಿತ್ತು. ಆದರೆ ಯೋಗಪ್ಪನವರಿಗೆ ಏನೂ ಅನ್ನಿಸಿರಲಿಲ್ಲ ಬದಲಿಗೆ ಗೆಳೆಯನಿಗೆ ಆತಿಥ್ಯ ನೀಡಿದ ಖುಷಿಯಲ್ಲಿದ್ದರು.

ಅವರು ಪಿ.ಎಸ್‌ ಆಗಿ ಕೆಲಸ ಮಾಡಿದ ಮಂತ್ರಿಗಳು ನೆನೆಸಿಕೊಳ್ಳುವಂತಹ ಅಧಿಕಾರಿಯಾಗಿದ್ದರು. ಅವರು ಉದಾಸಿ ಬಳಿಯಿದ್ದಾಗ ನಾನೊಮ್ಮೆ ಹೋಗಿದ್ದೆ. ನನ್ನನ್ನು ಉದಾಸಿಗೆ ಪರಿಚಯಿಸಿದ್ದನ್ನು ನೋಡಿ ದಂಗು ಬಡಿದಿದ್ದೆ. ಏಕೆಂದರೆ, ನನ್ನ ಕಟ್ಟೆಪುರಾಣವನ್ನು ಆ ರೂಪದಲ್ಲಿ ಉದಾಸಿಗೆ ವಿವರಿಸಿದ್ದರು. ಉದಾಸಿ ಕೂಡ ಎಂ.ಪಿ ಪ್ರಕಾಶರ ಒಡನಾಡಿಯಾದ್ದರಿಂದ ಯೋಗಪ್ಪನವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಮುಂದೆ ನಾನು ಕಟ್ಟೆಪುರಾಣವನ್ನು ಪುಸ್ತಕವಾಗಿ ಪ್ರಕಟಿಸಿದಾಗ ಯೋಗಪ್ಪನವರಿಂದಲೇ ಮುನ್ನುಡಿ ಬರೆಸಿದ್ದೆ.

“ಪ್ರೀತಿಯೆಂಬುದು ಚಂದ್ರನ ದಯೆ” ಎಂಬ ಕಾವ್ಯದ ಗಣಿಯಂತಿರುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಈಗಾಗಲೇ ಕೆಎಎಸ್ ಅಧಿಕಾರಿಯಾಗಿರುವ ಅವರ ಮಗಳೊಂದಿಗೆ ದಿಢೀರನೆ ಪತ್ರಿಕೆ ಆಫೀಸಿಗೆ ಬಂದು ಗೌರಿ ಕೈಯಿಂದ ಬಿಡುಗಡೆ ಮಾಡಿಸಿದರು. ನಂತರ ಕ್ರಿಕೆಟ್ ಕ್ಲಬ್ಬಿನಲ್ಲಿ ಗೌರಿ, ಸತೀಶ್, ಶ್ರೀನಿವಾಸ ಕರಿಯಪ್ಪ ಮತ್ತು ಈ ಚಂದ್ರನಿಗೆ ಪಾರ್ಟಿ ಕೊಟ್ಟರು. ಸಾಮಾನ್ಯವಾಗಿ ಯಾರಾದರೂ ಕುಡಿಸಿದಾಗ ಆಗುವಂತೆಯೇ, ಜಾಸ್ತಿ ಕುಡಿದು ಪೊಲೀಸರಿಗೆ ಸಿಕ್ಕಿಬಿದ್ದೆವು. ಆಗ ಪೊಲೀಸರಿಗೆ, ಕೆಎಎಸ್ ಅಧಿಕಾರಿ ಮತ್ತು ಕನ್ನಡದ ದೊಡ್ಡ ಸಾಹಿತಿ ಯೋಗಪ್ಪನವರು ಪಾರ್ಟಿ ಕೊಟ್ಟರು, ಆದ್ದರಿಂದ ಬಿಡಿ ಸಾರ್ ಎಂದೆವು. ಸಾಹಿತಿ ಪಾರ್ಟಿ ಕೊಟ್ರು ಅಂತ ಇಷ್ಟೊಂದೇನ್ರಿ ಕುಡಿಯದು. ಈ ಕಡೆ ಬನ್ನಿ ಗಾಡಿ ಹಾಕಿ ಎಂದರು. ದಿಕ್ಕು ಕಾಣದ ನಾನು  ಕೊನೆಗೆ ಕಷ್ಟಪಟ್ಟು ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ರಾತ್ರಿಯಾಯ್ತು. ಇದನ್ನು ಯೋಗಪ್ಪನವರಿಗೆ ಹೇಳಿದಾಗ, ಅದಾಗಲೇ ಜಗತ್ತಿನ ರೂಪಕ ಲೇಖಕರ ಬಗ್ಗೆ ಅರೆದು ಕುಡಿದಿದ್ದ ಯೋಗಪ್ಪನವರು ತುಟಿ ಬಿರಿದು ಹೌದ್ರಾ ಎಂದಿದ್ದರು!

ಅವರು ’ಪ್ರೀತಿಯೆಂಬುದು ಚಂದ್ರನ ದಯೆ’ ಎಂಬ ಪುಸ್ತಕ ಕೊಟ್ಟು ಅಭಿಪ್ರಾಯ ಕೇಳಿದ್ದರು. ಆಗ ನಾನು ಫೋನು ಮಾಡಿ “ಸಂಗವ್ವಕ್ಕನ ಮುದ್ದಿನ.. ಬನಶಂಕರಿ ಜಾತ್ರೆಯಲ್ಲಿ ಮಾಯವಾದವಲ್ಲೊ ಎಂಬ ಹಾಡಿನ ಸಾಲುಗಳನ್ನು ರಾಗವಾಗಿ ಹೇಳಿ ಬನಶಂಕರಿ ಜಾತ್ರೆ ನೋಡಬೇಕಲ್ರಿ ಸರ ಎಂದಿದ್ದೆ. ಅದಕೇನಂತೆ ಈ ಬಾರಿ ನೋಡೋನು ಎಂದು ಆ ಜಾತ್ರೆಯನ್ನು ವರ್ಣಿಸಿದ್ದರು.

ಕಳೆದ ಕೊರೊನಾ ಟೈಮಿನಲ್ಲಿ ನಾನು ಮನೆಯಲ್ಲೇ ಇದ್ದು ಲಂಕೇಶರ ಒಡನಾಟದಲ್ಲಿನ ವಿವರಕ್ಕೆ ರೂಪಕೊಟ್ಟು ಒಂದು ಪುಸ್ತಕ ಮಾಡಿ ಅದಕ್ಕೊಂದು ಟೈಟಲ್ ಬೇಕು ಎಂದು ಕೇಳಿದ್ದೆ. ಅದಕ್ಕವರು, ಲಂಕೇಶ್ ಜೊತೆಯಾಗಿದ್ದವುರು ಏನೇನಾದ್ರು ಅನ್ನದನ್ನ ನೀವು ಮಾತ್ರ ಬರೀತಿರಿ ಅದಕ “ಲಂಕೇಶ್ ಜೊತೆಗೆ” ಅಂತ ಟೈಟಲ್ ಇಡ್ರಲ್ಲಾ ಎಂದಿದ್ದರು. ಆ ಪುಸ್ತಕವನ್ನು ಅವರಿಗೆ ಕೊಡಲು ಇಂದು ನಾಳೆ ಎನ್ನುತ್ತಿದ್ದ ನನಗೆ ಕೊರೊನಾ ಸರಿಯಾದ ಉತ್ತರ ಕೊಟ್ಟಿತು. ಆರೋಗ್ಯದ ವಿಷಯದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದ ಯೋಗಪ್ಪನವರು ಮಗನ ಮದುವೆ ಸಲುವಾಗಿ ಲಗ್ನಪತ್ರಿಕೆ ಕೊಡಲು ಹೋದಾಗ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗ ಚೇತರಿಸಿಕೊಂಡಿರುವುದು ಸುದೈವ. ಈಗಿನ ಸರಕಾರದ ಸುಮಾರು ಜನ ನಮಗೊಬ್ಬ ಸಮರ್ಥ ಪಿಎಸ್ ಬೇಕಾಗಿದ್ದಾರೆಂದು ವಿಚಾರಿಸುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಗಮನಕ್ಕೆ ಯೋಗಪ್ಪನವರು ಬಂದಿದ್ದರು. ಇನ್ನೇನು ನೇಮಕ ಹೊರಬೀಳುವ ಸಮಯಕ್ಕೆ ಸರಿಯಾಗಿ ಅಪ್ಪ ಮಕ್ಕಳ ಪಕ್ಷ ತಮ್ಮ ಕಡೆಯವರೊಬ್ಬರನ್ನು ಹೊರಟ್ಟಿಯವರ ಮೇಲೆ ಹೇರಿದ್ದರು. ಎಂದಿನಂತೆ ಯೋಗಪ್ಪನವರು “ಬೇಷಾತು ಬಿಡ್ರಿ” ಎಂದು ನೆಮ್ಮದಿಯಾಗಿದ್ದರು.

ಯೋಗಪ್ಪನವರ ಬರವಣಿಗೆ ಕಡಿಮೆಯಿದ್ದರೂ ಅವು ಮತ್ತೆ ಮತ್ತೆ ಓದುವಂತಹ ತೂಕವುಳ್ಳ ಕೃತಿಗಳಾಗಿವೆ. ’ದೇವರ ಹೆಸರಲ್ಲಿ ಪ್ರಮಾಣ ಮಾಡಿ’ ಎಂಬ ಕಾದಂಬರಿ, ’ಆರಾಮ ಕುರ್ಚಿ’ ಎಂಬ ಕಥಾಸಂಕಲನ, ’ರೂಪಕ ಲೇಖಕರು’, ’ಪ್ರೀತಿಯೆಂಬುದು ಚಂದ್ರನ ದಯೆ’, ನೀಲು ಕುರಿತ ವಿಶ್ಲೇಷಣೆ ಇವೆಲ್ಲಾ ಕನ್ನಡ ಸಾಹಿತ್ಯಕ್ಕೆ ಯೋಗಪ್ಪನವರು ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.


ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...