ಮೊದಲ ಕೋವಿಡ್ ಅಲೆಯನ್ನು ದೇಶದ ಎಲ್ಲಾ ವರ್ಗದ ಜನರು ಮತ್ತು ಸರ್ಕಾರ ನಿರ್ಲಕ್ಷಿಸಿದ್ದರಿಂದಲೇ ನಾವು ಈ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವಾತ್ ಪ್ರತಿಪಾದಿಸಿದ್ದಾರೆ.
ಪಾಸಿಟಿವಿಟಿ ಅನ್ಲಿಮಿಟೆಡ್ (ಕೋವಿಡ್ ಕಷ್ಟಕಾಲದಲ್ಲಿ ಸಕರಾತ್ಮತೆಯನ್ನು ಹರಡಬೇಕು) ಎನ್ನುವ ಪ್ರಚಾರಾಂದೋಲನದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, “ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ವೈದ್ಯರುಗಳು ನಮಗೆ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ, ಆಡಳಿತ ಅಥವಾ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಚೆಲ್ಲಿದುದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ” ಎಂದರು.
ಈಗ ಮೂರನೇ ಅಲೆ ಬರಲಿದೆ ಎನ್ನಲಾಗಿದೆ. ಇದಕ್ಕೆ ನಾವು ಹೆದರಿ ಕೂರಬೇಕೆ ಅಥವಾ ಹೋರಾಡಿ ಅದರ ವಿರುದ್ಧ ಗೆಲುವು ಸಾಧಿಸಬೇಕೆ? ಈಗಿನ ಪರಿಸ್ಥಿತಿಯಿಂದ ನಾವು ಕಲಿತು ಭವಿಷ್ಯದ ಹೋರಾಟಕ್ಕೆ ಸಜ್ಜಾಗಬೇಕು. ಸದ್ಯ ಭಾರತ ಎದುರಿಸುತ್ತಿರುವ ಆಕ್ಸಿಜನ್, ಔಷಧ, ಬೆಡ್ ಕೊರತೆಗಳ ಸಮಸ್ಯೆಯನ್ನು ಕಡೆಗಣಿಸಿದ ಅವರು, ಇಂದಿನ ತಪ್ಪುಗಳಿಂದ ಪಾಠ ಕಲಿತು ಮುಂದಿನ ಮೂರನೇ ಅಲೆಗೆ ಆತ್ಮವಿಶ್ವಾಸದಿಂದ ಸಜ್ಜಾಗಬೇಕು ಎಂದರು.
“ಬದುಕು ಮತ್ತು ಸಾವಿನ ಚಕ್ರವು ಮುಂದುವರಿಯುತ್ತದೆ… ಈ ವಿಷಯಗಳು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಈ ಸಂದರ್ಭಗಳೇ ಭವಿಷ್ಯಕ್ಕಾಗಿ ನಮಗೆ ತರಬೇತಿ ನೀಡುತ್ತವೆ. ಯಶಸ್ಸು ಅಂತಿಮವಲ್ಲ. ವೈಫಲ್ಯ ಮಾರಕವಲ್ಲ. ಮುಂದುವರಿಯುವ ಧೈರ್ಯ ಮಾತ್ರ ಮುಖ್ಯವಾಗಿದೆ” ಎಂದು ಅವರು ಹೇಳಿದರು.
ಜನ ಸಾಯುತ್ತಿರುವುದು ಪಾಸಿಟಿವಿಟಿಯೇ?
ಕೋವಿಡ್ ಉಲ್ಬಣಕ್ಕೆ ಮೋದಿ ಸರ್ಕಾರದ ನಿರ್ಲಕ್ಷ್ಯ, ಅದಕ್ಷತೆ ಮತ್ತು ಅಹಂಕಾರಗಳೆ ನೇರ ಕಾರಣ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಸಿಟಿವಿಟಿ ಹರಡಿ ಎಂಬ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಜನ ಸಾಯುತ್ತಿರುವುದು ನಿಮಗೆ ಪಾಸಿಟಿವಿಯೇ ಎಂದು ವಿರೋಧ ಪಕ್ಷಗಳು ಸೇರಿದಂತೆ ಹಲವರು ಕಿಡಿಕಾರಿದ್ದಾರೆ.
Positivity! #Covid19India pic.twitter.com/kK9CQtkrEp
— Satish Acharya (@satishacharya) May 15, 2021
Too much positivity …. #FailendraModi pic.twitter.com/awHqU92XCS
— Sayantani Roy (@Sayaantani_Roy) May 15, 2021
Media positivity! #CovidIndia pic.twitter.com/ynpeQdLm5E
— Satish Acharya (@satishacharya) May 15, 2021
ಇದನ್ನೂ ಓದಿ: ಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ?
Foolish fellow
Shut your dirty mouth
Good response given by them anymore