Homeಅಂಕಣಗಳುಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್...

ಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ?

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ...

- Advertisement -
- Advertisement -

ಪೂರ್ಣಾವಧಿ ಸೋಶಿಯಲ್ ಮೀಡಿಯಾ ಸ್ಟಾರ್, ಅಲ್ಪಾವಧಿ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಸೂರ್ಯ ನಾರಾಯಣರಾವು ಅವರು ಮೊನ್ನೆ ಬೆಂಗಳೂರು ಎಂಬೋ ಮಾಯಾನಗರಿಯೊಳಗ ಒಂದು ಕಾಲ್ ಸೆಂಟರ್‌ದೊಳಗಿನ 17 ಮಂದಿ ಮುಸ್ಲಿಂ ಕೆಲಸಗಾರರ ಹೆಸರು ಓದಿ, ಮರುದಿವಸ ಒಂಬತ್ತು ಮಂದಿ ಗೈರು ಮುಸ್ಲಿಂರ ದಸ್ತಗಿರಿ ಮಾಡಿಸಿದ್ದು ನಮಗ ಗೊತ್ತು.

ಇಲ್ಲೇ ಪ್ರಶ್ನೆ ಏನು ಅಂದ್ರ ಒಬ್ಬ ಎಂಪಿ ಕೆಲಸ ಏನು? ಪತ್ತೇದಾರಿ ವರದಿಗಾರರಂತೆ ಹಗರಣ ಹೊರಗೆ ತೆಗೆಯೋದೋ ಅಥವಾ ಸರ್ಕಾರದ ಕೆಲ್ಸಗಳು ಸರಿಯಾಗಿ ನಡಿಯೋ ಹಂಗ ಮಾಡೋದೋ?

ತೇಜಸ್ವಿ ಅವ್ರು ಮಾಡಿದ್ದೇ ಸರಿ. ಅವ್ರು ಈ ಹುಳುಕು ಹೊರಗೆ ತೆಗೆಯದೇ ಇದ್ದರೆ ಯಾರು ತೆಗೆಯಬೇಕಿತ್ತು? ಅಂತ ಅವರನ್ನು ಹೊಗಳುವ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಕ್ಕೆಬಿಟ್ಟರು ಅಂತ ಖುಷಿಯಿಂದ ಕುಣಿಯುತ್ತಿರುವ ಜನರಿಗೆ ಏನೂ ಕಮ್ಮಿ ಇಲ್ಲಾ.

ಈ ಜನರ ಭಾವನೆ ಸರಿ. ಅದನ್ನು ನಾನು ಮೈಸೂರು ತೇರು ಮೈದಾನದಿಂದ ಬೇಕಾದರೂ ಹೇಳಬಲ್ಲೆ ಅಂತ ಇನ್ನೊಬ್ಬ ಯುವ ಸಂಸದ ಪ್ರತಾಪ್ ಸಿಂಹ ಅವ್ರು ಹೇಳಿಬಿಟ್ಟಾರ. ಅವ್ರು ಇಂಥ ಕೆಲ್ಸಾ ಮಾಡಿಯೇ ಮುಂದೆ ಬಂದಾರ. ಎರಡು ವರ್ಷದ ಹಿಂದೆ ಕೊಡಗು ಜಿಲ್ಲೆಯೊಳಗ ಪ್ರವಾಹ ಬಂದಾಗ ಅವ್ರು ಒಂದು ಕೆಂಪು ಅಂಗಿ ಬಿಳೆ ಬೂಟು ಹಾಕಿಕೊಂಡು ಕರೆಂಟ್ ಕಂಬಾ ಭೂಮಿಯೊಳಗ ನೆಡುವ ಪ್ರಯತ್ನ ಮಾಡಿದ್ದ ಫೋಟೋ ಸೋಶಿಯಲ್ ಮೀಡಿಯಾದಾಗ ಓಡಾಡಲಿಕ್ಕೆ ಹತ್ತಿತ್ತು. ಆವಾಗ ಅವರ ಸಹೋದ್ಯೋಗಿಯಾಗಿದ್ದ ಹಿರಿಯ ಪತ್ರಕರ್ತರು ಒಬ್ಬರು “ನಾವು ಈ ಯುವ ಸಂಸದರನ್ನು ದೆಹಲಿಗೆ ಕಳಿಸಿದ್ದು ಯಾಕೆ ಅಂದ್ರೆ ಅವರು ಪ್ರಧಾನಿ ಹಾಗೂ ಇತರ ಮಂತ್ರಿಗಳ ಜೊತೆ ಸೇರಿ ಕರ್ನಾಟಕಕ್ಕೆ ಹೆಚ್ಚಿನ ನೆರವು ಕೊಡಿಸಲಿ ಅಂತ. ಹಸಿ ಮಣ್ಣಿನ ನೆಲದಲ್ಲಿ ಕರೆಂಟ್ ಕಂಬ ನೆಡಲಿ ಅಂತ ಅಲ್ಲಾ” ಅಂತ ಕಾಮೆಂಟ್ ಮಾಡಿದ್ರು. ಇದು ದೊಡ್ಡ ಸುದ್ದಿಯಾಗಿತ್ತು.

ಇದೆ ಮಾದರಿಯಲ್ಲಿ ಹಿರಿಯ ಭಾರತೀಯ ಪೊಲೀಸು ಸೇವೆ ಅಧಿಕಾರಿ ರೂಪ ದಿವಾಕರ್ ಅವ್ರು ತಾವು ಜೈಲಿನಲ್ಲಿ ಡಿಐಜಿ ಇದ್ದಾಗ ಅಲ್ಲಿನ ಆಡಳಿತದಲ್ಲಿನ ತಪ್ಪುಗಳನ್ನು ಸರಿ ಮಾಡುವುದನ್ನು ಬಿಟ್ಟು ಥೇಟು ಎನ್‌ಜಿಓ ಶೈಲಿಯಲ್ಲಿ ಒಂದು ದೊಡ್ಡ ರಿಪೋರ್ಟ್ ಬರೆದರು.

ಅವರು ನಾನು ನಿಗರಾಣಿ ಅಧಿಕಾರಿಯಾಗಿರುವ ಈ ಜೈಲಿನಲ್ಲಿ, ನನ್ನ ಕೆಳಗೆ ಹಾಗು ಮೇಲೆ ಇರುವ ಅಧಿಕಾರಿಗಳು ಇಂತಹ ತಪ್ಪುಗಳನ್ನು ಮಾಡಿದ್ದಾರೆ, ಮಾಡುತ್ತಾ ಇದ್ದಾರೆ, ಮುಂದೆಯೂ ಮಾಡುವ ಸಾಧ್ಯತೆ ಇದೆ ಅಂತ ಹೇಳಿ ಒಂದು ವರದಿ ಕೊಟ್ಟರು. ಅದನ್ನು ಮಾಧ್ಯಮದವರು ದೇವವಾಣಿಯಂತೆ ಕಂಡು ಪೂಜೆ ಮಾಡಿದ್ರು. ಅದನ್ನು ಬರೆದ ಅಧಿಕಾರಿಯನ್ನು ಪ್ರಮಥರಂತೆ ನೋಡಿದರು. ನಿಮ್ಮನ್ನು ಭಾ.ಪೋ.ಸೇ.ಗೆ ಸೇರಿಸಿ, ತೆರಿಗೆದಾರರ ಹಣದಿಂದ ನಿಮಗೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದು ಯಾಕೆ? ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲಿಕ್ಕೋ ಅಥವಾ ಇದು ನನ್ನ ಕಣ್ಣಿಗೆ ಬಿದ್ದಿದೆ ಆದರೆ ನಾನು ಅದರ ಬಗ್ಗೆ ಏನೂ ಮಾಡಲಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಲಿಕ್ಕೋ ಅಂತ ಯಾವ ಟಿವಿ ಚಾನೆಲ್‌ನ ಹಿಡಿಗೂಟಗಳೂ ಕೇಳಲಿಲ್ಲ.

ಇವತ್ತಿಗೂ ನಮ್ಮ ಜನರಿಗೆ ಯಾರ ಹತ್ತಿರ ಗೋಳು ಹೇಳಿಕೊಳ್ಳಬೇಕು ಅನ್ನುವುದು ಗೊತ್ತಿಲ್ಲ. ಸುಂಕ ವಸೂಲಾತಿಗೆ ಬಂದ ಕಂದಾಯ ಅಧಿಕಾರಿಯ ಮುಂದೆ ಯಪ್ಪಾ ನಮ್ಮ ಹತ್ತಿರ ಉಣ್ಣಾಕ್ ರೊಕ್ಕಾ ಇಲ್ಲ ಅಂದ್ರೆ ಬಿಡುತ್ತಾನೆಯೇ? ವಿಧಾನಸಭೆ – ಸಂಸತ್ತು ಸಭೆಗಳಲ್ಲಿ ಹೋಗಿ ನಮ್ಮ ಪರವಾಗಿ, ನಮ್ಮ ಸುಂಕ ಕಮ್ಮಿ ಮಾಡಬೇಕು ಅಂತ ಮಾತು ಆಡಬೇಕಾದವರು ಆಡೋದಿಲ್ಲ. ಅವ್ರ ಕುತ್ತಿಗೆ ಪಟ್ಟಿ ಹಿಡದು ನಾವು ಕೇಳೋದಿಲ್ಲಾ. ನಮ್ಮ ಮನಿಗೆ ನೀರು ಬರಲಿಲ್ಲ ಅಂದರ ಜಿಲ್ಲಾಧಿಕಾರಿಯ ಕಚೇರಿಗೆ ಹೋಗ್ತೆವಿ, ಹೊರತು, ನಮ್ಮ ನಗರಸಭೆ ಸದಸ್ಯರ ಮನಿಯ ಮುಂದ ಹೋಗಿ ಕೂಡೋದಿಲ್ಲಾ.

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ, ಸರಕಾರೀ ಆಸ್ಪತ್ರೆ ಒಳಗ ಹಾಸಿಗೆ ಸಿಗಲಿಲ್ಲಾ, ರೋಗಿಗಳಿಗೆ ಆಮ್ಲಜನಕ ಸಿಗಲಿಲ್ಲ, ರೆಮೆಡಿಸಿವಿರ್ ಇಂಜಕ್ಷನ್ ಕೊಡಲಿಲ್ಲ ಅಂತ ಹೇಳಿ ನಾವು ದೂರು ಕೊಡಲಿಕ್ಕೆ ಬರೋದಿಲ್ಲಾ.

ಕಾಶ್ಮೀರದಾಗಿನ ಸೇಬುಹಣ್ಣಿನ ಬಣ್ಣದ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕ ಜೀವನದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ. ಏನರ ಹೋಲಿಕೆ ಅದ ಏನು ಹೇಳ್ರಿ?


ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...