Homeಕರೋನಾ ತಲ್ಲಣತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ಈ ಪಟ್ಟಿ "ಅಧಿಕೃತ ಮೂಲಗಳಿಂದ" ಬಂದಿಲ್ಲ ಎಂದು ಬಿಬಿಎಂಪಿಯ ಮೂವರು ಅಧಿಕಾರಿಗಳು ದಿ ಕ್ವಿಂಟ್‌ಗೆ ದೃಢಪಡಿಸಿದ್ದಾರೆ

- Advertisement -
- Advertisement -

ಮೇ 4 ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಗಳೂರು ದಕ್ಷಿಣ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕೋವಿಡ್ ವಾರ್‌ರೂಮಿಗೆ ಎಂಟ್ರಿ ನೀಡಿದರು. (ಮಾಧ್ಯಮಗಳ ಪ್ರಕಾರ ಇದು ದಾಳಿ). ನಂತರ ಅವರು 16 ಮುಸ್ಲಿಂ ಹೆಸರುಗಳನ್ನು ಓದಿದರು, “ಇವರೆಲ್ಲಾ ಯಾರು? ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು?” ಎಂದು ಪ್ರಶ್ನಿಸಿದ್ದರು ತೇಜಸ್ವಿ ಸೂರ್ಯರವರ ಚಿಕ್ಕಪ್ಪ ಮತ್ತು ಬಸವನಗುಡಿ ಬಿಜೆಪಿ ಶಾಸಕ ಎಲ್. ಎ. ರವಿಸುಬ್ರಮಣ್ಯ “ನೀವೇನು ಮದರಾಸಗೆ ನೇಮಕಾತಿ ಮಾಡುತ್ತಿದ್ದೀರೊ ಇಲ್ಲ, ಕಾರ್ಪೋರೇಷನ್‌ಗೋ?” ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ಬಿಜೆಪಿ ಶಾಸಕ ಸತೀಶ್ ರೆಡ್ಡಿ “ಇವರ್ಯಾರು ಮೇಡಂ, ಇವರನ್ನು ಹೇಗೆ ನೇಮಕ ಮಾಡಲಾಯಿತು? ಹಜ್ ಸಮಿತಿಗೆ ನೇಮಕ ಮಾಡುವ ಹಾಗೆ ಈ 16 ಜನರನ್ನು ನೇಮಕ ಮಾಡಿದ್ದೀರಾ ಹೇಗೆ?” ಎಂದು ಕೂಗಾಡಿದ್ದರು.

ತೇಜಸ್ವಿ ಸೂರ್ಯ ನಂತರ ಪತ್ರಿಕಾಗೋಷ್ಠಿ ಕರೆದು , ಬಿಬಿಎಂಪಿಯಲ್ಲಿ ಹಾಸಿಗೆ ಹಂಚಿಕೆ ಹಗರಣವನ್ನು ಬಹಿರಂಗಪಡಿಸಿದರು, ಹೆಚ್ಚಿನ ದರವನ್ನು ಪಾವತಿಸುವವರಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಸ್ವಲ್ಪ ಸಮಯದ ನಂತರ, 16 ಮುಸ್ಲಿಂ ಗುತ್ತಿಗೆ ನೌಕರರನ್ನು ಬಿಬಿಎಂಪಿ ವಾರ್‌ ರೂಂನಿಂದ ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಯಿತು. ಆದರೆ ನಂತರ ಅವರೆಲ್ಲರೂ ಅಮಾಯಕರೆಂದು ಬೆಡ್ ಬ್ಲಾಕಿಂಕ್ ದಂಧೆಯಲ್ಲಿ ಬಿಜೆಪಿ ಶಾಸಕರೇ ಭಾಗಿಯಾಗಿರುವುದು ಮಾಧ್ಯಮಗಳಿಂದ ಬಹಿರಂಗವಾಯಿತು. ಆಗಿನಿಂದ ತೇಜಸ್ವಿ ಸೂರ್ಯ ನನಗೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಲಿಸ್ಟ್ ಕೊಟ್ಟರು. ನಾನು ಓದಿದೆ ಅಷ್ಟೇ ಎಂದು ಹೇಳುತ್ತಿದ್ದಾರೆ.

ಆದರೆ ಬಿಬಿಎಂಪಿ ಅಂತಹ ಪಟ್ಟಿ ನೀಡಿಯೇ ಇಲ್ಲ ಎಂದು ಆಂಗ್ಲ ವೆಬ್ ಪೋರ್ಟಲ್ ದಿ ಕ್ವಿಂಟ್ ಕಂಡುಕೊಂಡಿದೆ. ಆ ತರಹದ ಕೋಮುವಾದಿ ಮನಸ್ಸಿನ ಪಟ್ಟಿ ತಯಾರಿಸಿದ್ದು ಯಾರು? ಹಾಗಿದ್ದರೆ, ಯಾರ ಮೂಲಕ ಸಂಸದರಿಗೆ ಅದು ತಲುಪಿತು?

ಬೆಂಗಳೂರು ಮಹಾನಗರ ಪಾಲಿಕೆ ಈ ಪಟ್ಟಿಯನ್ನು ತಯಾರಿಸಿಲ್ಲ ಅಥವಾ ತೇಜಸ್ವಿ ಸೂರ್ಯರಿಗೆ ತನ್ನ ಗುತ್ತಿಗೆ ನೌಕರರ ಹೆಸರನ್ನು ತಿಳಿಸಿಲ್ಲ ಎಂದು ಮೂವರು ಬಿಬಿಎಂಪಿ ಅಧಿಕಾರಿಗಳು ದಿ ಕ್ವಿಂಟ್‌ಗೆ ಖಚಿತಪಡಿಸಿದ್ದಾರೆ.

ಮೇ 10 ರಂದು, ಬಿಬಿಎಂಪಿಯು ಎಲ್ಲಾ 16 ಜನರನ್ನು ಪುನಃ ಕೆಲಸಕ್ಕೆ ನೇಮಿಸಿತು. ಬೆಂಗಳೂರು ಪೊಲೀಸರ ಪ್ರಕಾರ, ಆಪಾದಿತ ‘ಬೆಡ್-ಹಗರಣ’ದೊಂದಿಗೆ ಅವರಿಗೆ ಯಾವುದೇ ಯಾವುದೇ ಸಂಬಂಧವಿಲ್ಲ,

ಸೂರ್ಯ ಹೆಸರಿಸಿದ ಪಟ್ಟಿ ಅಧಿಕೃತವಲ್ಲ!

ಮೇ 10 ರಂದು ತೇಜಸ್ವಿ ಸೂರ್ಯ ಬೆಂಗಳೂರು ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದರು. ಹಾಗೆ ಹೆಸರುಗಳನ್ನು ಏಕೆ ಓದಿರಿ? ಯಾರೋ ಕೊಟ್ಟ ಹೆಸರುಗಳನ್ನು ಪರಿಶೀಲನೆ ಮಾಡದೇ ಒಂದು ಕೋಮಿನ ಯುವ ಉದ್ಯೋಗಿಗಳನ್ನು ಏಕೆ ಬಲಿಪಶು ಮಾಡಲು, ಆ ಮೂಲಕ ಕೋಮು ಸೌಹಾರ್ದ ಕದಡಲು ಯತ್ನಿಸಿದಿರಲ್ಲವೇ? ಎಂದು ಪತ್ರಕರ್ತರು ಕೇಳಿದರು. ಆದರೆ ಆಗಲೂ ಸಂಸದ ಸೂರ್ಯ ಅವರು ತಮ್ಮ ಹಿಂದಿನ ಉತ್ತರವನ್ನು ಪುನರಾವರ್ತಿಸಿದರು, ಅಂದರೆ “ನನಗೆ ಅಧಿಕಾರಿಗಳು ನೀಡಲಾದ” ಪಟ್ಟಿಯಿಂದ ಓದಿದ್ದೇನೆ ಎಂಬ ಉತ್ತರ!

ರಾಜಕೀಯ ಒತ್ತಡದ ಕಾರಣಕ್ಕೆ ತಮ್ಮ ಹೆಸರು ಗುರುತಿಸಿಕೊಳ್ಳಲು ಇಷ್ಟಪಡದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, ದಿ ಕ್ವಿಂಟ್ ಪತ್ರಿಕೆಗೆ ಹೀಗೆ ಹೇಳಿದ್ದಾರೆ, “ಬಿಬಿಎಂಪಿಯು ವಾರ್‌ರೂಮಿನಲ್ಲಿ ಉದ್ಯೋಗದಲ್ಲಿದ್ದ ಎಲ್ಲಾ 214 ಜನರ ಪಟ್ಟಿಯನ್ನು ಹೊಂದಿದೆ. ನಿರ್ದಿಷ್ಟ ನಂಬಿಕೆಗೆ, ಧರ್ಮಕ್ಕೆ ಸೇರಿದವರ ಪ್ರತ್ಯೇಕ ಪಟ್ಟಿಯನ್ನು ನಾವು ಮಾಡಿಲ್ಲ. ಈ ಪಟ್ಟಿಯನ್ನು ನಮ್ಮ ಅಧಿಕಾರಿಗಳು ತಯಾರಿಸಿಲ್ಲ. ಅದರ ಅಗತ್ಯವೂ ಇಲ್ಲ….”

ಬಿಬಿಎಂಪಿ ವಿಷಯಗಳ ಬಗ್ಗೆ ತಿಳಿದಿರುವ ಇನ್ನೊಬ್ಬ ಅಧಿಕಾರಿ, “ಇದು ಕೋಮುವಾದಿ ನೆಲೆಯಲ್ಲಿ ನೌಕರರನ್ನು ವರ್ಗಿಕರಿಸಿದ ಪಟ್ಟಿ. ಅಂತಹ ಪಟ್ಟಿಯನ್ನು ಬಿಬಿಎಂಪಿ ಎಂದೂ ತಯಾರು ಮಾಡಿಲ್ಲ” ಎಂದಿದ್ದಾರೆ.

ಒಮ್ಮೆ ಪಟ್ಟಿಯಲ್ಲಿರುವ ಹೆಸರುಗಳನ್ನು ಸೂರ್ಯ ಓದಿದ ನಂತರ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಇದರಿಂದಾಗಿ ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಿಬಿಎಂಪಿ ಅಧಿಕಾರಿಗಳನ್ನು “ಹಿಂದೂ ಜೀವಗಳನ್ನು” ತೆಗೆದುಕೊಂಡ “ಭಯೋತ್ಪಾದಕರು” ಎಂದು ಗುರಿಯಾಗಿಸಲಾಯಿತು.

ಸೂರ್ಯ ಭೇಟಿ ನೀಡಿದಾಗ ವಾರ್‌ರೂಮಿನಲ್ಲಿದ್ದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, “ಸಂಸದರು ವಾರ್‌ರೂಮಿಗೆ ಕಾಲಿಟ್ಟಾಗ ಕಾಗದದ ತುಂಡೊಂದನ್ನು ತಂದಿದ್ದರು. ಅವರು ಯಾವುದೇ ಬಿಬಿಎಂಪಿ ಅಧಿಕಾರಿಯೊಂದಿಗೆ ಪಟ್ಟಿ ಅಧಿಕೃತವಾಗಿದೆಯೇ ಅಥವಾ ಯಾವುದೇ ಉದ್ದೇಶಕ್ಕಾಗಿ ಅದನ್ನು ತಯಾರಿಸಿದ್ದಾರೆ ಎಂದು ಪರಿಶೀಲಿಸಲಿಲ್ಲ” ಎಂದು ಬಿಬಿಎಂಪಿ ಅಧಿಕಾರಿಗಳು ಕ್ವಿಂಟ್‌ಗೆ ತಿಳಿಸಿದ್ದಾರೆ.  ಘಟನೆ ಕುರಿತು ಬಿಬಿಎಂಪಿ ಅಧಿಕೃತ ಹೇಳಿಕೆ ನೀಡಿಲ್ಲ.

ಪಟ್ಟಿ ಎಲ್ಲಿಂದ ಬಂತು?

ಕ್ವಿಂಟ್ ಪೋರ್ಟಲ್ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಅನ್ನು ಸಂಪರ್ಕಿಸಿದೆ. ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಬಿಬಿಎಂಪಿ ವಾರ್‌ರೂಮಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಕಾರ್ಯವಿಧಾನದ ಪ್ರಕಾರ ಅವರು ತಮ್ಮ ನೌಕರರ ಹೆಸರನ್ನು ಬಿಬಿಎಂಪಿಗೆ ನೀಡಿದ್ದಾರೆ ಎಂದು ಸಂಸ್ಥೆ ದೃಢ ಪಡಿಸಿದೆ. “ನಮ್ಮ ಪಟ್ಟಿಯಲ್ಲಿ ಹೆಚ್ಚಿನ ಹೆಸರುಗಳಿವೆ. ಕಳೆದ 10-15 ದಿನಗಳಲ್ಲಿ ನೇಮಕಗೊಂಡವರ ಹೆಸರನ್ನು ಮಾತ್ರ ಸಂಸದರು ಓದಿದ್ದಾರೆ”ಎಂದು ಕ್ರಿಸ್ಟಲ್ ಇನ್ಫೋಸಿಸ್ಟಮ್‌ನಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಯು ಪಟ್ಟಿಯನ್ನು ಸಂಸದರಿಗೆ ಒದಗಿಸಿದೆಯೇ? ಎಂಬ ಪ್ರಶ್ನೆಗೆ, “ಸಂಸದರು ಈ ಹೆಸರುಗಳನ್ನು ಹೇಗೆ ಗುರುತಿಸಿದ್ದಾರೆಂದು ನಮಗೆ ತಿಳಿದಿಲ್ಲ. ಇದು ನಮ್ಮಿಂದ ಪಡೆದ ಪಟ್ಟಿಯಲ್ಲ” ಎಂದು ಕ್ರಿಸ್ಟಲ್ ಉದ್ಯೋಗಿ ಹೇಳಿದರು.

ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, “ಸಂಸದರು ವಾರ್‌ರೂಮ್ ಮೇಲೆ ನಿಯಂತ್ರಣವನ್ನು ಬಯಸಿದ್ದರು ಮತ್ತು ನೇಮಕಾತಿ ಮತ್ತು ನಿರ್ವಹಣೆಯಲ್ಲಿ ನಿಯಂತ್ರಣ ಬಯಸಿದ್ದರು. ಅವರು ಇಲ್ಲಿಗೆ ಕಾಲಿಟ್ಟಾಗ ಅವರು ನೌಕರರನ್ನು ಭಯಭೀತರಾಗಿಸಲು ಕೋಮು ಉದ್ವೇಗವನ್ನು ಸೃಷ್ಟಿಸಲು ಪ್ರಯತ್ನಿಸಿದರು. ಇದು ಅವರ ರಾಜಕೀಯ ಶೈಲಿಗೆ ಹೊಂದುವಂತೆಯೇ ಇತ್ತು. ಈ ಪಟ್ಟಿಯನ್ನು ಸಂಸದರ ತಂಡವೇ ತಯಾರಿಸಿದಂತೆ ಕಾಣುತ್ತದೆ’ ಎಂದು ಅಧಿಕಾರಿ ಆರೋಪಿಸಿದ್ದಾರೆ. “ಸಂಸದರ ತಂಡದ ಹಲವಾರು ಸದಸ್ಯರು ಇತ್ತೀಚಿನ ದಿನಗಳಲ್ಲಿ ವಾರ್‌ರೂಮಿಗೆ ಭೇಟಿ ನೀಡಿದ್ದರು. ಅವರಲ್ಲಿ ಯಾರಾದರೂ ಪಟ್ಟಿಯನ್ನು ತಯರಿಸಬಹುದಿತ್ತು. ಈ ಪಟ್ಟಿಯು ಅಧಿಕೃತವಲ್ಲ… ಕೋಮು ವಿಭಜನೆಗಾಗಿ ರಚಿಸಲಾದ ಉದ್ದೇಶವನ್ನು ಮಾತ್ರ ಪೂರೈಸುತ್ತದೆ” ಎಂದು ಅಧಿಕಾರಿ ಹೇಳಿದರು.

ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಮೂವರು ಬಿಜೆಪಿ ಶಾಸಕರೊಂದಿಗೆ ಸಂಸದರು ಬಿಬಿಎಂಪಿ ಬಾರ್‌ರೂಮಿಗೆ ಭೇಟಿ ನೀಡಿದ್ದರು.

ಪಟ್ಟಿಯನ್ನು ಏಕೆ ತಯಾರಿಸಲಾಯಿತು?

ತೇಜಸ್ವಿ ಸೂರ್ಯ ಪ್ರವೇಶಿಸುವ ಮೊದಲು, ಅವರ ದಕ್ಷಿಣ ಬೆಂಗಳೂರು ಕಚೇರಿಯ ಮೂವರು ಸದಸ್ಯರು ವಾರ್‌ರೂಮಿಗೆ ಭೇಟಿ ನೀಡಿದ್ದರು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಂಸದರ ತಂಡವು, ಹಾಸಿಗೆಗಳನ್ನು ಹೇಗೆ ಹಂಚಲಾಗುತ್ತದೆ ಮತ್ತು ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದೆಲ್ಲ ಪ್ರಶ್ನೆ ಮಾಡಿತು. ತಾವು ಕೊರೊನಾ ವಾರ್‌ರೂಮಿನ ಭಾಗವಾಗಬಹುದೇ ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದರು. ಸರಿಯಾದ ಪ್ರಕ್ರಿಯೆಯ ಪ್ರಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಅದರ ಮರುದಿನವೇ, ಸಂಸದರು ಕಚೇರಿಗೆ ಭೇಟಿ (ದಾಳಿ) ನೀಡಿದರು” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಎಂ.ಪಿ ತಂಡವು ವಿನಾಶಕಾರಿ ಉದ್ದೇಶ ಹೊಂದಿದ್ದರಿಂದ ಈ ಪಟ್ಟಿಯನ್ನು ಸಂಗ್ರಹಿಸಲಾಗಿದೆ. “ಬಿಬಿಎಂಪಿ ಸಂಸದರ ಹಸ್ತಕ್ಷೇಪವನ್ನು ಬಯಸಲಿಲ್ಲ ಮತ್ತು ಇದು ಉದ್ವಿಗ್ನತೆಗೆ ಕಾರಣವಾಯಿತು. ಬಿಬಿಎಂಪಿ ಕೇವಲ ಮುಸ್ಲಿಂ ಸದಸ್ಯರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಲು ಸಂಸದರು ಬಯಸಿದ್ದರು” ಎಂದು ಅಧಿಕಾರಿಯೊಬ್ಬರು ಕ್ವಿಂಟ್‌ಗೆ ಹೇಳಿದ್ದಾರೆ.

ತೇಜಸ್ವಿ ಸೂರ್ಯ ಅವರ ಕಚೇರಿ ದಿ ಕ್ವಿಂಟ್‌ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. “ಸಂಸದರು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೇ ಮುಗೀತು. ಮತ್ತೆ ಇನ್ನೇನನ್ನೂ ಹೇಳುವ ಅಗತ್ಯವಿಲ್ಲ” ಎಂದು ತೇಜಸ್ವಿ ಸೂರ್ಯ ಅವರ ಕಚೇರಿ ಪ್ರತಿಕ್ರಿಯೆ ನೀಡಿದೆ..

ಕೃಪೆ: ದಿ ಕ್ವಿಂಟ್


ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...