HomeUncategorized‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

- Advertisement -
- Advertisement -

ಇತ್ತಿಚಿಗೆ ಒಂದು ನಾಲ್ಕು ದಿನ ಜಯದೇವ ಆಸ್ಪತ್ರೆಯಲಿ ನಮ್ಮೆಲ್ಲರ ಸ್ಫೂರ್ತಿ ದೊರೆಸ್ವಾಮಿ ತಾತನ ಆರೈಕೆಯಲ್ಲಿ ಇದ್ದೆ. ಈ ಮುಂಚೆಯೂ ಮನೆಯಲ್ಲಿದ್ದಾಗಲೂ ಕೆಲವೊಮ್ಮೆ ಹೋಗಿದ್ದೆ. ತಾತಾನಿಗೆ ಅವರ ಜೊತೆ ಇರುವವರಿಗೆ ಯಾರಿಗೂ ತೊಂದರೆ ಕೊಡಬಾರದು, ಬೇಜಾರು ಮಾಡಬಾರದು ಎಂಬ ಸೂಕ್ಷ್ಮತೆ ತುಂಬಾ ಇತ್ತು.

ಒಮ್ಮೆ ಹೀಗೆ ರಾತ್ರಿ 12 ಸಮಯದಲ್ಲಿ ಒಮ್ಮೆ ಕರೆದು ‘ಏನಪ್ಪ ನಿನಗೆ ಈ ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ? ನಿನ್ನ ಅಭಿಪ್ರಾಯ ಏನು’ ಎಂದು ಕೇಳಿದರು. ನಾನು ಇಲ್ಲ ಅನಿಸುತ್ತೆ ತಾತಾ ಅಂದೆ. ಆಗ ಮತ್ತೆ ಅಲ್ಲಪ್ಪ ಹಾಗದರೆ ಈ ಬೆಟ್ಟ ಗುಡ್ಡ ಇಷ್ಟೆಲ್ಲ ಪರಿಸರ ಜಗತ್ತನ್ನ ಯಾರು ಸೃಷ್ಟಿ ಮಾಡಿದರು ಅದಕ್ಕೆ ಒಬ್ಬ ಸರ್ವಶಕ್ತನೋ ಸರ್ವಶಕ್ತೆಯೋ ಇರಬೇಕಲ್ಲ? ಅಂದರು. ನಾನು ತಾತ ಅದು ಏನು ಇದ್ದರೂ ಎಲ್ಲಾ ವೈಜ್ಞಾನಿಕವಾಗಿ ನಡೆಯುತ್ತೆ. ಈಗ ದೇವರು ದಿಂಡ್ರು ಅನ್ನೋ ಹೆಸರಲ್ಲಿ ಮೋಸ ನಡಿತಿದಿಯಲ್ಲ ಆ ದೇವರು ಇಲ್ಲ ಅಂದೆ. ಆಗ ಸ್ವಲ್ಪ ಯೋಚಿಸಿ ಸರಿ ಕಣಪ್ಪ ನಿನ್ನ ಅಭಿಪ್ರಾಯನು ನಾನು ಗೌರವಿಸ್ತೀನಿ ಅಂದರು. ಹೀಗೆ ಬೇರೆ ಬೇರೆ ವಿಚಾಗಳಲ್ಲಿ ಅಭಿಪ್ರಾಯ ಕೇಳುತ್ತಿದ್ದರು.

ಆಸ್ಪತ್ರೆಯಲ್ಲಿ ಪತ್ರಿಕೆ ಓದುತ್ತಿರುವ ದೊರೆಸ್ವಾಮಿ

ಒಂದೆರಡು ದಿನ ರಾತ್ರಿ ಕೆಮ್ಮು ಮತ್ತು ಕಫದಿಂದ ತಾತಾ ನಿದ್ದೆ ಮಾಡೋಕೆ ಆಗಿರಲಿಲ್ಲ. ತಾತ ನನ್ನ ಕುಟುಂಬದ ಬಗ್ಗೆ ನಮ್ಮ ತಂದೆ ತಾಯಿ ಮಾಡೋ ಕೆಲಸದ ಬಗ್ಗೆ ವಿಚಾರಿಸಿದ್ದರು. ಸ್ವಾಭಿಮಾನಿ ಕುಟುಂಬ ವೆರಿ ಗುಡ್ ಎಂದರು.

ಇದನ್ನೂ ಓದಿ: ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು

ನೀನು ಸಂಘಟನೆ ಹೋರಾಟದ ಸಹವಾಸಕ್ಕೆ ಹೇಗೆ ಬಂದೆ ಎಂದು ಕೇಳಿದ್ದಕ್ಕೆ, ಸಾಣೇಹಳ್ಳಿ ಮಠ – ರಂಗಭೂಮಿ – ಸಮಾನ ಶಿಕ್ಷಣಕ್ಕಾಗಿ ಹೋರಾಟ – ಉಡುಪಿ ಚಲೋ ಎಲ್ಲಾ ಕೇಳಿಸಿಕೊಂಡು ಮಧ್ಯೆ ಮಧ್ಯೆ ಪ್ರಶ್ನೆ ಮಾಡಿ ಎಲ್ಲಾ ವಿಚಾರಿಸಿಕೊಂಡು ಬೇಷ್ ಹೇಳಿದರು. ನಮ್ಮ ಊರು ಹಿಂದೂಪುರದ ಹತ್ತಿರ ಅಂದಾಗ ಅವರ ಮುಖ ಅರಳಿತು. ಅವರು ಸ್ವತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ಅವರ ಪತ್ರಿಕೆ ತಡೆದದ್ದರಿಂದ ಹಿಂದೂಪುರಕ್ಕೆ ಹೋಗಿ ಆಂಧ್ರದಿಂದ ಪತ್ರಿಕೆ ತಂದ ಸಾಹಸಗಳ ಬಗ್ಗೆ ಹೇಳಿದರು. ಅಲ್ಲಿ ಸಹಾಯ ಮಾಡಿದ ಗೆಳೆಯರನ್ನು ನೆನೆದರು.

ಆರೋಗ್ಯ ಕೈ ಕೊಟ್ಟಿದ್ದಕ್ಕಾಗಿ ತುಂಬಾ ನೊಂದಿದ್ದರು. ನಾನು ವಾಪಸ್ಸು ಆಸ್ಪತ್ರೆಯಿಂದ ಬರೋ ದಿನಕ್ಕಿಂತ ಮುಂಚಿನ ರಾತ್ರಿ ಕೆಮ್ಮು ಏನು ಇಲ್ಲದೆ ಚನ್ನಾಗಿ ನಿದ್ದೆ ಮಾಡಿದ್ದರು. ನನಗೆ ನೀನು ಮೊದಲು ಹೋಗಿ ರೆಸ್ಟ್ ಮಾಡು ಅಂದರು. ಎಲ್ಲಾ ಯುವ ಜನರು ಮೊದಲು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕು. ಇಡೀ ದೇಶಕ್ಕೆ ಬಂದಿರೋದು ನನಗೂ ಬಂದಿದೆ (ಕೊರೊನಾ), ಇದನ್ನ ಗೆಲ್ಲಬೇಕಾದರೆ ಎಲ್ಲರೂ ಧೈರ್ಯ ಮತ್ತು ಪ್ರೀತಿಯಿಂದ ಜನರ ಬಳಿ ಹೋಗಬೇಕು. ಆಗ ಮಾತ್ರ ಗೆಲ್ಲೋಕೆ ಆಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

ಅಂದಿನ ರಾತ್ರಿ ಸಿರಿಮನೆ ನಾಗರಾಜ್ ಅವರಿಗೆ ಕಾಲ್ ಮಾಡಿ ಹೆದರಬೇಡಿ ಅಂತ ಹೇಳಿದರು. ನೀವು ಅಷ್ಟು ಧೈರ್ಯಕೊಟ್ಟರೆ ಸಾಕು ಅಂತ ಸಿರಿಮನೆ ಕುಣಿದಾಡೋ ರೀತಿ ಮಾತಾಡಿದ್ದರು. ಬೆಳಿಗ್ಗೆ ನಾನು ಅಲ್ಲಿಂದ ಹೊರಡತೀನಿ ಎಂದು ಹೇಳಿದಾಗ ಮತ್ತೆ ಕಾಲ್ ಮಾಡಪ್ಪ ಮರಿಬೇಡ ದಿನಾ ಕಾಲ್ ಮಾಡು ಅಂತ ಹೇಳಿದರು.

ಅಭಿನಂದನ್‌, ಗಜೇಂದ್ರ (ಈ ಮುಂಚೆ ತಾತಾನನ್ನ ನೋಡಿಕೊಳ್ಳತ್ತಿದ್ದ ಇಬ್ಬರಿಗೂ ಆರೋಗ್ಯ ಕೆಟ್ಟಿತ್ತು) ಇಬ್ಬರಿಗೂ ಕಾಲ್‌ ಮಾಡೋಕೆ ಹೇಳು ಅವರಿಗೆ ಆರೋಗ್ಯ ನೋಡಿಕೊಳ್ಳೋಕೆ ಹೇಳು ಎಂದು ಹೇಳಿದರು.

ಪ್ರತಿ ದಿನ ರವಿಕೃಷ್ಣ ರೆಡ್ಡಿಯವರು ದೊರೆಸ್ವಾಮಿಯವರನ್ನು ಮಾತಾಡಿಸುತ್ತಿದ್ದು ಅವರಿಗೆ ತುಂಬಾ ರಿಲ್ಯಾಕ್ಸ್ ಕೊಡುತ್ತಿತ್ತು. ರವಿಕೃಷ್ಣ ರೆಡ್ಡಿಯವರಂತು ತುಂಬಾ ಕರ್ತವ್ಯ ಪ್ರಜ್ಞೆ, ತಾತನ ಮೇಲಿನ ಪ್ರೀತಿ, ಗೌರವಗಳನ್ನು ತುಂಬಾ ಗ್ರೇಟ್‌ಪುಲ್ ಆಗಿ ಅರ್ಪಿಸಿದರು. ತುಂಬಾ ಜನಕ್ಕೆ ಕಾಲ್ ಮಾಡೋಕೆ ಹೇಳಿ ಮಾತಾಡುತ್ತಿದ್ದರು. ಎಲ್ಲಾ ಪ್ರಗತಿಪರ ಹಿರಿಕಿರಿಯರನ್ನು ನೆನೆಸಿಕೊಳ್ಳುತ್ತಿದ್ದರು. ನಾನು ತುಂಬಾ ಒಳ್ಳೆಯ ಜನರ ಸಹವಾಸ ಮಾಡಿದೆ ಅದೇ ನನಗೆ ದೊಡ್ಡ ಸಾರ್ಥಕ ಎಂದು ಪದೇ ಪದೇ ಹೇಳುತ್ತಿದ್ದರು.

ಹಿಂದೂ ಪತ್ರಿಕೆಯ ಆದಿತ್ಯ ಅವರಿಗೆ ಕಾಲ್ ಮಾಡಿಸಿ ನನಗೆ ಪ್ರತಿದಿನ ಪತ್ರಿಕೆ ಬರೋ ವ್ಯವಸ್ಥೆ ಮಾಡಿಸಪ್ಪ ಎಂದಿದ್ದರು. ಅವರು ಪ್ರತಿದಿನ ಪತ್ರಿಕೆ ಸಿಗೋ ರೀತಿ ಮಾಡಿದ್ದರು.

ದೊರೆಸ್ವಾಮಿಯವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿರಬಹುದು ಆದರೆ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನವೇ ಅವರನ್ನ ಜೀವಂತ ಇರಿಸಲಿದೆ.

ಇದನ್ನೂ ಓದಿ: ‘ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು’ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...