HomeUncategorized‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

- Advertisement -
- Advertisement -

ಇತ್ತಿಚಿಗೆ ಒಂದು ನಾಲ್ಕು ದಿನ ಜಯದೇವ ಆಸ್ಪತ್ರೆಯಲಿ ನಮ್ಮೆಲ್ಲರ ಸ್ಫೂರ್ತಿ ದೊರೆಸ್ವಾಮಿ ತಾತನ ಆರೈಕೆಯಲ್ಲಿ ಇದ್ದೆ. ಈ ಮುಂಚೆಯೂ ಮನೆಯಲ್ಲಿದ್ದಾಗಲೂ ಕೆಲವೊಮ್ಮೆ ಹೋಗಿದ್ದೆ. ತಾತಾನಿಗೆ ಅವರ ಜೊತೆ ಇರುವವರಿಗೆ ಯಾರಿಗೂ ತೊಂದರೆ ಕೊಡಬಾರದು, ಬೇಜಾರು ಮಾಡಬಾರದು ಎಂಬ ಸೂಕ್ಷ್ಮತೆ ತುಂಬಾ ಇತ್ತು.

ಒಮ್ಮೆ ಹೀಗೆ ರಾತ್ರಿ 12 ಸಮಯದಲ್ಲಿ ಒಮ್ಮೆ ಕರೆದು ‘ಏನಪ್ಪ ನಿನಗೆ ಈ ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ? ನಿನ್ನ ಅಭಿಪ್ರಾಯ ಏನು’ ಎಂದು ಕೇಳಿದರು. ನಾನು ಇಲ್ಲ ಅನಿಸುತ್ತೆ ತಾತಾ ಅಂದೆ. ಆಗ ಮತ್ತೆ ಅಲ್ಲಪ್ಪ ಹಾಗದರೆ ಈ ಬೆಟ್ಟ ಗುಡ್ಡ ಇಷ್ಟೆಲ್ಲ ಪರಿಸರ ಜಗತ್ತನ್ನ ಯಾರು ಸೃಷ್ಟಿ ಮಾಡಿದರು ಅದಕ್ಕೆ ಒಬ್ಬ ಸರ್ವಶಕ್ತನೋ ಸರ್ವಶಕ್ತೆಯೋ ಇರಬೇಕಲ್ಲ? ಅಂದರು. ನಾನು ತಾತ ಅದು ಏನು ಇದ್ದರೂ ಎಲ್ಲಾ ವೈಜ್ಞಾನಿಕವಾಗಿ ನಡೆಯುತ್ತೆ. ಈಗ ದೇವರು ದಿಂಡ್ರು ಅನ್ನೋ ಹೆಸರಲ್ಲಿ ಮೋಸ ನಡಿತಿದಿಯಲ್ಲ ಆ ದೇವರು ಇಲ್ಲ ಅಂದೆ. ಆಗ ಸ್ವಲ್ಪ ಯೋಚಿಸಿ ಸರಿ ಕಣಪ್ಪ ನಿನ್ನ ಅಭಿಪ್ರಾಯನು ನಾನು ಗೌರವಿಸ್ತೀನಿ ಅಂದರು. ಹೀಗೆ ಬೇರೆ ಬೇರೆ ವಿಚಾಗಳಲ್ಲಿ ಅಭಿಪ್ರಾಯ ಕೇಳುತ್ತಿದ್ದರು.

ಆಸ್ಪತ್ರೆಯಲ್ಲಿ ಪತ್ರಿಕೆ ಓದುತ್ತಿರುವ ದೊರೆಸ್ವಾಮಿ

ಒಂದೆರಡು ದಿನ ರಾತ್ರಿ ಕೆಮ್ಮು ಮತ್ತು ಕಫದಿಂದ ತಾತಾ ನಿದ್ದೆ ಮಾಡೋಕೆ ಆಗಿರಲಿಲ್ಲ. ತಾತ ನನ್ನ ಕುಟುಂಬದ ಬಗ್ಗೆ ನಮ್ಮ ತಂದೆ ತಾಯಿ ಮಾಡೋ ಕೆಲಸದ ಬಗ್ಗೆ ವಿಚಾರಿಸಿದ್ದರು. ಸ್ವಾಭಿಮಾನಿ ಕುಟುಂಬ ವೆರಿ ಗುಡ್ ಎಂದರು.

ಇದನ್ನೂ ಓದಿ: ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು

ನೀನು ಸಂಘಟನೆ ಹೋರಾಟದ ಸಹವಾಸಕ್ಕೆ ಹೇಗೆ ಬಂದೆ ಎಂದು ಕೇಳಿದ್ದಕ್ಕೆ, ಸಾಣೇಹಳ್ಳಿ ಮಠ – ರಂಗಭೂಮಿ – ಸಮಾನ ಶಿಕ್ಷಣಕ್ಕಾಗಿ ಹೋರಾಟ – ಉಡುಪಿ ಚಲೋ ಎಲ್ಲಾ ಕೇಳಿಸಿಕೊಂಡು ಮಧ್ಯೆ ಮಧ್ಯೆ ಪ್ರಶ್ನೆ ಮಾಡಿ ಎಲ್ಲಾ ವಿಚಾರಿಸಿಕೊಂಡು ಬೇಷ್ ಹೇಳಿದರು. ನಮ್ಮ ಊರು ಹಿಂದೂಪುರದ ಹತ್ತಿರ ಅಂದಾಗ ಅವರ ಮುಖ ಅರಳಿತು. ಅವರು ಸ್ವತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ಅವರ ಪತ್ರಿಕೆ ತಡೆದದ್ದರಿಂದ ಹಿಂದೂಪುರಕ್ಕೆ ಹೋಗಿ ಆಂಧ್ರದಿಂದ ಪತ್ರಿಕೆ ತಂದ ಸಾಹಸಗಳ ಬಗ್ಗೆ ಹೇಳಿದರು. ಅಲ್ಲಿ ಸಹಾಯ ಮಾಡಿದ ಗೆಳೆಯರನ್ನು ನೆನೆದರು.

ಆರೋಗ್ಯ ಕೈ ಕೊಟ್ಟಿದ್ದಕ್ಕಾಗಿ ತುಂಬಾ ನೊಂದಿದ್ದರು. ನಾನು ವಾಪಸ್ಸು ಆಸ್ಪತ್ರೆಯಿಂದ ಬರೋ ದಿನಕ್ಕಿಂತ ಮುಂಚಿನ ರಾತ್ರಿ ಕೆಮ್ಮು ಏನು ಇಲ್ಲದೆ ಚನ್ನಾಗಿ ನಿದ್ದೆ ಮಾಡಿದ್ದರು. ನನಗೆ ನೀನು ಮೊದಲು ಹೋಗಿ ರೆಸ್ಟ್ ಮಾಡು ಅಂದರು. ಎಲ್ಲಾ ಯುವ ಜನರು ಮೊದಲು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕು. ಇಡೀ ದೇಶಕ್ಕೆ ಬಂದಿರೋದು ನನಗೂ ಬಂದಿದೆ (ಕೊರೊನಾ), ಇದನ್ನ ಗೆಲ್ಲಬೇಕಾದರೆ ಎಲ್ಲರೂ ಧೈರ್ಯ ಮತ್ತು ಪ್ರೀತಿಯಿಂದ ಜನರ ಬಳಿ ಹೋಗಬೇಕು. ಆಗ ಮಾತ್ರ ಗೆಲ್ಲೋಕೆ ಆಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

ಅಂದಿನ ರಾತ್ರಿ ಸಿರಿಮನೆ ನಾಗರಾಜ್ ಅವರಿಗೆ ಕಾಲ್ ಮಾಡಿ ಹೆದರಬೇಡಿ ಅಂತ ಹೇಳಿದರು. ನೀವು ಅಷ್ಟು ಧೈರ್ಯಕೊಟ್ಟರೆ ಸಾಕು ಅಂತ ಸಿರಿಮನೆ ಕುಣಿದಾಡೋ ರೀತಿ ಮಾತಾಡಿದ್ದರು. ಬೆಳಿಗ್ಗೆ ನಾನು ಅಲ್ಲಿಂದ ಹೊರಡತೀನಿ ಎಂದು ಹೇಳಿದಾಗ ಮತ್ತೆ ಕಾಲ್ ಮಾಡಪ್ಪ ಮರಿಬೇಡ ದಿನಾ ಕಾಲ್ ಮಾಡು ಅಂತ ಹೇಳಿದರು.

ಅಭಿನಂದನ್‌, ಗಜೇಂದ್ರ (ಈ ಮುಂಚೆ ತಾತಾನನ್ನ ನೋಡಿಕೊಳ್ಳತ್ತಿದ್ದ ಇಬ್ಬರಿಗೂ ಆರೋಗ್ಯ ಕೆಟ್ಟಿತ್ತು) ಇಬ್ಬರಿಗೂ ಕಾಲ್‌ ಮಾಡೋಕೆ ಹೇಳು ಅವರಿಗೆ ಆರೋಗ್ಯ ನೋಡಿಕೊಳ್ಳೋಕೆ ಹೇಳು ಎಂದು ಹೇಳಿದರು.

ಪ್ರತಿ ದಿನ ರವಿಕೃಷ್ಣ ರೆಡ್ಡಿಯವರು ದೊರೆಸ್ವಾಮಿಯವರನ್ನು ಮಾತಾಡಿಸುತ್ತಿದ್ದು ಅವರಿಗೆ ತುಂಬಾ ರಿಲ್ಯಾಕ್ಸ್ ಕೊಡುತ್ತಿತ್ತು. ರವಿಕೃಷ್ಣ ರೆಡ್ಡಿಯವರಂತು ತುಂಬಾ ಕರ್ತವ್ಯ ಪ್ರಜ್ಞೆ, ತಾತನ ಮೇಲಿನ ಪ್ರೀತಿ, ಗೌರವಗಳನ್ನು ತುಂಬಾ ಗ್ರೇಟ್‌ಪುಲ್ ಆಗಿ ಅರ್ಪಿಸಿದರು. ತುಂಬಾ ಜನಕ್ಕೆ ಕಾಲ್ ಮಾಡೋಕೆ ಹೇಳಿ ಮಾತಾಡುತ್ತಿದ್ದರು. ಎಲ್ಲಾ ಪ್ರಗತಿಪರ ಹಿರಿಕಿರಿಯರನ್ನು ನೆನೆಸಿಕೊಳ್ಳುತ್ತಿದ್ದರು. ನಾನು ತುಂಬಾ ಒಳ್ಳೆಯ ಜನರ ಸಹವಾಸ ಮಾಡಿದೆ ಅದೇ ನನಗೆ ದೊಡ್ಡ ಸಾರ್ಥಕ ಎಂದು ಪದೇ ಪದೇ ಹೇಳುತ್ತಿದ್ದರು.

ಹಿಂದೂ ಪತ್ರಿಕೆಯ ಆದಿತ್ಯ ಅವರಿಗೆ ಕಾಲ್ ಮಾಡಿಸಿ ನನಗೆ ಪ್ರತಿದಿನ ಪತ್ರಿಕೆ ಬರೋ ವ್ಯವಸ್ಥೆ ಮಾಡಿಸಪ್ಪ ಎಂದಿದ್ದರು. ಅವರು ಪ್ರತಿದಿನ ಪತ್ರಿಕೆ ಸಿಗೋ ರೀತಿ ಮಾಡಿದ್ದರು.

ದೊರೆಸ್ವಾಮಿಯವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿರಬಹುದು ಆದರೆ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನವೇ ಅವರನ್ನ ಜೀವಂತ ಇರಿಸಲಿದೆ.

ಇದನ್ನೂ ಓದಿ: ‘ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು’ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...