Homeಮುಖಪುಟಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

ಮಿಡ್‍ನೈಟ್ ಕೌಬಾಯ್ ಮತ್ತು ಮಿಡ್‍ನೈಟ್ ರನ್: ಮರೆಯಲಾಗದ ಎರಡು ಹಾಲಿವುಡ್ ಚಿತ್ರಗಳು

- Advertisement -
- Advertisement -

ನಮಗೆ ಯಾವಾಗಲೋ ನೋಡಿದ ಯಾವ್ಯಾವುದೋ ಚಿತ್ರಗಳು ತಲೆಯಲ್ಲಿ ಉಳಿದುಬಿಡುತ್ತವೆ. ಆ ಚಿತ್ರಗಳನ್ನು ನಾವೇಕೆ ಮರೆಯಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಅನೇಕ ಸಲ ಎಂದೋ ನೋಡಿದ, ಎಂದೋ ಓದಿದ ನಾವು ಇಷ್ಟಪಡದ ಕಥೆಗಳು, ಚಿತ್ರಗಳೂ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಕರ್ನಾಟಕದ ಮೂಲೆಗಳಲ್ಲಿ, ಇಂಗ್ಲಿಷ್ ಗೊತ್ತಿಲ್ಲದೇ ಬೆಳೆದ ನಮ್ಮಂತವರಿಗೆ ಹಾಲಿವುಡ್ ಎನ್ನುವುದು ಗೊತ್ತಾಗಿದ್ದು ಕಾಲೇಜಿಗೆ ತಲುಪಿದ ಮೇಲೆಯೇ. ಸಿಕ್ಕಸಿಕ್ಕ ಸಿನೆಮಾಗಳನ್ನು ನೋಡುತ್ತಿದ್ದ ನಮಗೆ ಯಾವ ಚಿತ್ರ ಯಾವ ಕಾರಣಕ್ಕೆ ಇಷ್ಟವಾಗುತ್ತಿದೆ ಎನ್ನುವುದು ತಿಳಿಯುತ್ತಿರಲಿಲ್ಲ (ತಿಳಿಯಬೇಕು ಎನ್ನುವ ಯಾವ ನಿಯಮವೂ ಇಲ್ಲ). ಈ ಎರಡು ಚಿತ್ರಗಳು ನೋಡಿ ಎರಡು ದಶಕಗಳಾಗುತ್ತಿದ್ದರೂ ಸ್ಮೃತಿಪಟಲದಿಂದ ಒಂದಿಷ್ಟೂ ಮಾಸಿಲ್ಲ. ಈ ಎರಡು ಚಿತ್ರಗಳೂ ಹಾಲಿವುಡ್ ಅನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ಬಿಟ್ಟರೆ ಬೇರಾವ ಸಾಮ್ಯತೆಗಳೂ ಇಲ್ಲ.

ಟೆಕ್ಸಾಸ್‍ನ ಹೋಟೆಲ್ ಒಂದರಲ್ಲಿ ಪಾತ್ರ ತೊಳೆಯುವ ಕೆಲಸಕ್ಕಿದ್ದ ಒಬ್ಬ ಯುವಕ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ನ್ಯೂಯಾರ್ಕ್‍ಗೆ ಬಂದಿಳಿಯುತ್ತಾನೆ. ಬಿಗ್ ಆ್ಯಪಲ್ ಎಂದು ಕರೆಯಲ್ಪಡುವ ದೊಡ್ಡ ನಗರ ನ್ಯೂ ಯಾರ್ಕ್‍ನಲ್ಲಿರುವ ಮಹಿಳೆಯರಿಗೆ ಸೆಕ್ಸ್ ಮಾಡಲು ಪುರುಷರೇ ಸಿಗುವುದಿಲ್ಲವೆಂದು, ತಾನೊಬ್ಬ ಒಳ್ಳೆಯ ಪ್ರೇಮಿಯಾಗಿದ್ದರಿಂದ ಒಬ್ಬ ಯಶಸ್ವೀ ಪುರುಷ ವೇಶ್ಯೆ ಆಗಬಹುದು ಎನ್ನುವ ಬಲವಾದ ನಂಬಿಕೆ ಜೋ ಬಕ್‍ನದು (ಜಾನ್ ವಾಯಿಟ್). ಟೆಕ್ಸಾಸ್‍ನಿಂದ ನ್ಯೂಯಾರ್ಕ್‍ವರೆಗಿನ ಪಯಣದಲ್ಲಿ ಕಾಣಿಸುವ ಎಲ್ಲಾ ಬಿಲ್‍ಬೋರ್ಡ್‍ಗಳು, ರೇಡಿಯೋದಲ್ಲಿ ಬರುವ ಜಾಹೀರಾತುಗಳೆಲ್ಲವೂ ಅವನ ನಂಬಿಕೆಯನ್ನು ಬಲಪಡಿಸುತ್ತಲೇ ಇರುತ್ತವೆ. ಜೇಬಿನಲ್ಲಿ ಒಂದಿಷ್ಟು ಕಾಸನ್ನು ಇಟ್ಟುಕೊಂಡು ಬಂದಿಳಿದು, ಒಂದು ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾನೆ. ತಾನೊಬ್ಬ ಗಟ್ಟಿಗ, ಪ್ರೇಮಿ ಎಂದು ತೋರಿಸಿಕೊಳ್ಳಲು ಕೌಬಾಯ್‍ಗಳು ಹಾಕಿಕೊಳ್ಳುವ ಒಂದು ಜಾಕೆಟ್ ಮತ್ತು ಹ್ಯಾಟ್‍ಅನ್ನು ಸದಾಕಾಲ ಹಾಕಿಕೊಂಡಿರುತ್ತಾನೆ.

ಈ ಹೊಸ ಅಪರಿಚಿತ ನಗರದಲ್ಲಿ ಗಮ್ ಅಗಿಯುತ್ತ, ರಸ್ತೆಗಳಲ್ಲಿ ಅಲೆಯುತ್ತ ಕಂಡಕಂಡ ಮಹಿಳೆಯರಿಗೆ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಕನಸುಗಳು ಎಷ್ಟೇ ಪ್ರಬಲವಾಗಿದ್ದರೂ ಶಹರದ ವಾಸ್ತವ, ತನ್ನ ಕೆಲಸದಲ್ಲಿ ಮರೀಚಿಕೆಯಾದ ಯಶಸ್ಸು, ಬರಿದಾಗುತ್ತಿರುವ ಜೇಬು ಇವನನ್ನು ವಾಸ್ತವಕ್ಕೆ ಎಳೆಯುವ ಪ್ರಯತ್ನ ಮಾಡುತ್ತವೆ. ಆದರೆ ನಮ್ಮ ಹೀರೋನ ಭ್ರಮೆ ಅಷ್ಟು ಸುಲಭಕ್ಕೆ ಕರಗುವಷ್ಟು ಪೊಳ್ಳಾಗಿಲ್ಲ. ಆಗ ಅವನಿಗೆ ಸಿಗುವನು ರಿಕೊ/ರ್ಯಾಟ್ಸೋ (ಡಸ್ಟಿನ್ ಹಾಫ್‍ಮನ್). ರಿಕೋ ಸದಾ ಕೆಮ್ಮುತ್ತಿರುವ, ಕುಂಟುನಡೆಯುವ ಸಣ್ಣಪುಟ್ಟ ಕಳ್ಳತನ, ಜನರಿಗೆ ಟೋಪಿ ಹಾಕುವ ಕೆಲಸ ಮಾಡುವ ವ್ಯಕ್ತಿ. ಜೋ ಬಕ್‍ನನ್ನು ನೋಡಿದಕೂಡಲೇ, ಅವನ ಸ್ನೇಹ ಸಂಪಾದಿಸಿ, ಅವನು ಹೀಗೆಲ್ಲ ರಸ್ತೆಯಲ್ಲಿ ಹುಡುಕಾಟ ಮಾಡಬಾರದೆಂದೂ, ಅವನಿಗೆ ಒಬ್ಬ ಮ್ಯಾನೇಜರ್‍ನ ಅವಶ್ಯಕತೆ ಇದೆಯೆಂದು ನಂಬಿಸಿ, ಒಂದಿಷ್ಟು ದುಡ್ಡು ಕಿತ್ತುಕೊಂಡು ಕಳುಹಿಸುತ್ತಾನೆ. ತಾನು ಮೋಸ ಹೋದೆನೆಂದು ತಿಳಿಯಲು ಜೋಗೆ ಹೆಚ್ಚು ಸಮಯ ಹಿಡಿಯುವದಿಲ್ಲ.

ಜೋ ದುಡ್ಡು ಕಟ್ಟಿಲ್ಲವೆಂದು ಹೋಟೆಲ್‍ನಿಂದ ಹೊರದಬ್ಬಲ್ಪಟ್ಟು, ತಿನ್ನಲೂ ಕಾಸಿಲ್ಲದೇ ಅಲೆಯುತ್ತಿರುವಾಗ ಮತ್ತೆ ಸಿಗುವನು ರ್ಯಾಟ್ಸೋ. ಆಗ ಶುರುವಾಗುವುದು ಅವರಿಬ್ಬರ ಸೋಲು, ಗೆಲುವು, ನೋವು, ಹತಾಶೆಗಳ ಪಯಣ.

ಈ ಚಿತ್ರ ಏಕೆ ಇಷ್ಟವಾಗುತ್ತೆ ಎಂದು ಅನೇಕ ಸಲ ಪ್ರಶ್ನೆ ಕೇಳಿದ್ದೇನೆ. ಅಲೆಕ್ಸಾಂಡರ್ ಪೇನ್ ಒಂದು ಮಾತು ಹೇಳುತ್ತಾರೆ, ‘ನಿರ್ದೇಶನವೆಂದರೆ 90% ಕಾಸ್ಟಿಂಗ್ ಹಾಗೂ ಬಾಕಿ 10% ಮಾತ್ರ ನಿರ್ದೇಶನ’. ಈ ಚಿತ್ರದಲ್ಲಿ ಕನಸುಗಣ್ಣುಗಳ ಮುಗ್ಧ ಜಾನ್ ವಾಯಿಟ್ ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಾನೆ. ಚಿತ್ರದಲ್ಲಿ ಬರುವ ಫ್ಲ್ಯಾಷ್‍ಬ್ಯಾಕ್, ಕನಸುಗಳು, ಪಾರ್ಟಿಯ ದೃಶ್ಯಗಳು, ಹಿಂಸೆ, ಲೈಂಗಿಕತೆಯ ಬಗ್ಗೆ ಟೀಕೆಗಳು ಬಂದಿವೆ. ಅವುಗಳು ಇಲ್ಲದಿದ್ದರೂ ಈ ಚಿತ್ರ ನಮಗೆ ಇಷ್ಟವಾಗುತ್ತಿತ್ತೇನೋ.

ನಮಗೆ ಈ ಚಿತ್ರ ನೆನಪಿನಲ್ಲುಳಿಯುವುದು ಪಾತ್ರಗಳ ಮುಗ್ಧತೆಯಿಂದ. ದೊಡ್ಡ ನಗರದಲ್ಲಿ ಮಿಸ್‍ಫಿಟ್ ಆಗಿರುವ ಇವರು, ನಿಜಜೀವನದಲ್ಲಿ ನಮಗೆ ಕಂಡರೆ ಬಹುಶಃ ಹೇಸಿಗೆ ಪಟ್ಟು ಮುಂದೆ ಹೋಗುತ್ತೇವೆ ಆದರೆ ಇಲ್ಲಿ ಅವರನ್ನೇ ಇಷ್ಟಪಡುತ್ತೇವೆ. ಇವರ ಮೂರ್ಖತೆ ಮುರ್ಖತೆಯಾಗಿ ಕಾಣಿಸದೇ ಮುಗ್ಧತೆಯಾಗಿ ಕಾಣಿಸುತ್ತದೆ. ಇವರ ಸತ್ಯವನ್ನು ನಾಗರಿಕ ಸಮಾಜವೇಕೆ ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುತ್ತೇವೆ. ತನ್ನನ್ನು ತಾನು ಒಪ್ಪಿಕೊಳ್ಳುವ ಕಥೆಯನ್ನು ಹೇಳುವ, ತನ್ನ ತಪ್ಪುಗಳನ್ನು ಕ್ಷಮಿಸುವ ಕಥೆಯಾಗಿ ನೆನಪಿನಲ್ಲಿ ಉಳಿಯುತ್ತದೆ ಜಾನ್ ಶ್ಲೆಲಿಂಜರ್ ಅವರ ನಿರ್ದೇಶನದ ಈ ಚಿತ್ರ ಮಿಡ್‍ನೈಟ್ ಕೌಬಾಯ್.

ಜಾಕ್ (ರಾಬರ್ಟ್ ಡಿ ನೀರೊ) ಒಬ್ಬ ಮಾಜಿ ಪೊಲೀಸ್, ಈಗ ಒಬ್ಬ ಬೌಂಟಿ ಹಂಟರ್, ಜಾಮೀನಿನ ಮೇಲೆ ಹೊರಗೆ ಬಂದು ತಪ್ಪಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವುದು ಇವನ ಕೆಲಸ. ಜಾನಾಥನ್ ಒಬ್ಬ ಅಕೌಂಟಂಟ್, ಜಾಮೀನಿನಲ್ಲಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಈಗ ಅವನನ್ನು ಹಿಡಿದು ಒಪ್ಪಿಸಬೇಕಿದೆ. ಇದು ಮಾರ್ಟಿನ್ ಬ್ರೆಸ್ಟ್ ಅವರ ಮಿಡ್‍ನೈಟ್ ರನ್ ಚಿತ್ರ.

ಜಾನಾಥನ್ ಎಂಬ ಈ ಅಕೌಂಟಂಟ್ ಜಿಮಿ ಸೆರಾನೋ ಎನ್ನುವ ಮಾಫಿಯಾ ಡಾನ್‍ನ ದುಡ್ಡನ್ನೆ ಎಗರಿಸಿ ಚಾರಿಟಿಗೆ ಹಂಚಿದ್ದಾನೆ. ಹಾಗಾಗಿ ಆ ಡಾನ್ ಇವನನ್ನು ಹುಡುಕಿ ಮುಗಿಸಬೇಕಿದೆ. ಪೊಲೀಸರಿಗೂ ಇವನ ಹುಡುಕಾಟ, ಜಾನಾಥನ್‍ನ್ನು ಜಾಕ್ ತನ್ನ ವಶಕ್ಕೆ ತೆಗೆದುಕೊಂಡರೆ ಪೊಲೀಸರ ಕೆಲಸ ಕೆಡುತ್ತೆ ಹಾಗಾಗಿ ಜಾಕ್ ಮೇಲೆ ಕಣ್ಣಿಟ್ಟಿದ್ದಾರೆ. ಯಾರೇ ಬಂಧಿಸಿದರೂ ತನ್ನನ್ನು ಮುಗಿಸಿಬಿಡುವರು ಎಂದು ಜಾನಾಥನ್‍ಗೆ ತಿಳಿದಿದೆ ಹಾಗಾಗಿ ಅವನು ಈ ಮೂವರಿಂದಲೂ ಪಾರಾಗಬೇಕು. ಜಾಕ್‍ಗೆ ಜಾನಾಥನ್‍ನನ್ನು ಹುಡುಕುವುದು ಕಷ್ಟವಾಗಿಲ್ಲ, ಆದರೆ ಅವನನ್ನು ನ್ಯೂ ಯಾರ್ಕ್‍ನಿಂದ ಲಾಸ್ ಏಂಜೆಲ್ಸ್‍ಗೆ ತರಲೇಬೇಕಿದೆ, ಇಲ್ಲದಿದ್ದರೆ ಅವನಿಗೆ ದುಡ್ಡು ಸಿಗುವುದಿಲ್ಲ. ಈ ಪಯಣದಲ್ಲಿ ಅವರಿಬ್ಬರ ಸಂಬಂಧ. ಇಬ್ಬರೂ ಒಳ್ಳೆಯವರೆ ಆದರೆ ಸಂದರ್ಭ ಒಳ್ಳೆಯತನಕ್ಕೆ ಅನುವು ಮಾಡಿಕೊಡುವುದಿಲ್ಲ.

ಇದೊಂದು ಪಕ್ಕಾ ಹಾಲಿವುಡ್ ಫಾರ್ಮುಲಾ ಸಿನೆಮಾ. ಇವುಗಳನ್ನು ‘ಬಡಿ’ (buddy) ಫಿಲ್ಮ್‍ಗಳು ಎನ್ನಲಾಗುತ್ತದೆ. ಇಬ್ಬರು ವ್ಯವಸ್ಥೆ ಮತ್ತು ತಮ್ಮತಮ್ಮ ಪರಿಸ್ಥಿತಿಗಳ ವಿರುದ್ಧ ಹೋರಾಡುವ ಕಥೆ ಹಾಗೂ ಇದೊಂದು ಕಾಮೆಡಿ. ಎಲ್ಲಾ ಪಾತ್ರಗಳಿಗೂ ಒಂದು ಉದ್ದೇಶವಿದೆ, ಕಥೆ ಲೀನಿಯರ್ ಆಗಿ, ಗಂಭೀರಗೊಂಡಂತೆ ಹೆಚ್ಚೆಚ್ಚು ಕಾಮೆಡಿಯಾಗತೊಡಗುತ್ತದೆ. ಸಂಘರ್ಷವೆನ್ನುವುದು ಗಟ್ಟಿಗೊಳ್ಳುತ್ತ ಕ್ಲೈಮ್ಯಾಕ್ಸ್ ತಲುಪುತ್ತದೆ. ಸಾಹಸದೃಶ್ಯಗಳು, ಚೇಸ್‍ಗಳು, ಚಾಪರ್ ಶಾಟ್‍ಗಳನ್ನು ಒಳಗೊಂಡ ಈ ಚಿತ್ರವನ್ನು ಫಾರ್ಮುಲಾ ಚಿತ್ರವೆಂದು ಕರೆದಲ್ಲಿ, ಫಾರ್ಮುಲಾ ಚಿತ್ರದ ಶ್ರೇಷ್ಠ ನಿದರ್ಶನ ಎನ್ನಬಹುದು. ಈ ಚಿತ್ರದ ವಿಶೇಷತೆಯೂ ಇದರ ಕಾಸ್ಟಿಂಗ್. ಬೌಂಟಿ ಹಂಟರ್ ಆಗಿರುವ ರಾಬರ್ಟ್ ಡಿ ನೀರೋ ಯಾವಾಗಲೂ ಗಂಭೀರವಾಗಿಯೇ ಇದ್ದಾನೆ; ಚಾಲ್ರ್ಸ್ ಗೋರ್ಡಿನ್ ಒಬ್ಬ ವೈಟ್‍ಕಾಲರ್ ಕೆಲಸದ ಸಂಭಾವಿತ ವ್ಯಕ್ತಿಯಾಗಿ ಶಾಂತವಾಗೇ ಇರುತ್ತಾನೆ. ಇವರು ಯಾವ ಸಂದರ್ಭದಲ್ಲೂ ಕಾಮೆಡಿ ಮಾಡುವ ಪ್ರಯತ್ನ ಮಾಡುವುದಿಲ್ಲ. ಅವರ ಪರಿಸ್ಥಿತಿಗಳೆ, ಅವರ ಸಂಕಷ್ಟಗಳೇ ಕಾಮೆಡಿಯಾಗಿ ಪರಿಣಮಿಸುತ್ತವೆ.

ಫಾರ್ಮುಲಾ ಚಿತ್ರವಾಗಿದ್ದು, ಹಾಲಿವುಡ್‍ನ ಸ್ಟ್ರಕ್ಚರ್‍ಗೆ ಬದ್ಧವಾಗಿದ್ದು, ಸ್ಟಾರ್‍ಗಳನ್ನು ಹಾಕಿಕೊಂಡರೂ ಈ ಚಿತ್ರ ಮಾನವೀಯತೆಗೆ ಬದ್ಧವಾಗಿದೆ. ಕಾಮೆಡಿ, ಥ್ರಿಲರ್, ಬಡಿ, ಚೇಸ್ ಸಿನೆಮಾ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಂದರೂ, ಪಾತ್ರಗಳು ಮಾನವೀಯತೆಯನ್ನು ಎತ್ತಿಹಿಡಿಯುತ್ತವೆ, ಅವರ ಸಮಸ್ಯೆಗಳಿಗೆ ಮಿಡಿಯುವಂತೆ ಮಾಡುತ್ತದೆ. ಜಾಕ್ ತನ್ನ ಮಾಜಿ ಹೆಂಡತಿಯನ್ನು ಭೇಟಿ ಮಾಡುವುದು, ತನ್ನ ಮಗಳನ್ನು ಅನೇಕ ವರ್ಷಗಳ ನಂತರ ನೋಡುವುದು, ಸೆಂಟಿಮೆಂಟಲ್ ಅಂಶಗಳನ್ನು ತುರುಕುವ ಸಲುವಾಗಿ ಸೇರಿಸಿಲ್ಲ. ತಾನು ಹೇಳಬೇಕಾದ ಕಥೆಗೆ ಬದ್ಧನಾಗಿ ಪ್ರಾಮಾಣಿಕವಾಗಿ ಹೇಳಿದ್ದರಿಂದಲೇ ಮೂಡಿಬಂದಿದ್ದು ಮಿಡ್‍ನೈಟ್ ರನ್ ಎನ್ನುವ ಮಾರ್ಟಿನ್ ಬ್ರೆಸ್ಟ್ ಅವರ ನಿರ್ದೇಶನದ ಅದ್ಭುತ ಚಿತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...