Homeಮುಖಪುಟವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆ ಕಾರ್ಮಿಕರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವುದಕ್ಕಾಗಿ ಆರಂಭವಾದ ಕರ್ನಾಟಕ ಜನಶಕ್ತಿ ಹೆಲ್ಫ್‌ಲೈನ್‌ನ ಭಾಗವಾದ ಮಲ್ಲಿಗೆ ಸಿರಿಮನೆಯವರು ತಮ್ಮ ಅನುಭವಕ್ಕೆ ಬಂದ ಕಾರ್ಮಿಕರ ವಸಲೆಯ ವ್ಯಥೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

- Advertisement -
- Advertisement -

ಅಸ್ಸಾಂನ ರಾಜಧಾನಿ ಮತ್ತು ಸುಂದರ ಪಟ್ಟಣವಾದ ಗೌಹಾಟಿಯ ಅರಬಿಂದೋ ಕನ್ವರ್ 20 ವರ್ಷದ ಯುವಕ. ಇದೇ ಫೆಬ್ರವರಿ ತಿಂಗಳಿನಲ್ಲಷ್ಟೇ ಬೆಂಗಳೂರಿಗೆ ಬಂದ. ಕಟ್ಟಡ ಕಾರ್ಮಿಕನಾಗಿ ಸಿಫ್ಲೋ ಎಂಬ ಬೃಹತ್ ನಿರ್ಮಾಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಇದೇ ಕಂಪೆನಿಯಲ್ಲಿ ಈತನ ತಂದೆ ಪ್ರಥಮ್ ಕನ್ವರ್ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಈ ಕಂಪೆನಿಯ ಪ್ರಮುಖ ಕೆಲಸದ ಕ್ಷೇತ್ರ ದೊಡ್ಡ ಕಟ್ಟಡಗಳ ಛಾವಣಿಯನ್ನು ಜೋಡಿಸುವುದು. ಬಹುಮಹಡಿ ಕಟ್ಟಡಗಳ ಅತಿಯಾದ ಎತ್ತರದ ಮೇಲೆ ನಿಂತು, ಅವುಗಳ ಮೇಲ್ಛಾವಣಿಯನ್ನು (ಸೀಲಿಂಗ್) ಜೋಡಿಸುವ ಅತ್ಯಂತ ಅಪಾಯಕಾರಿ ಮತ್ತು ಅಷ್ಟೇ ಕೌಶಲ್ಯಪೂರ್ಣ ಕೆಲಸಕ್ಕೆ ಇವರಿಗೆ ಸಿಗುವುದು ದಿನಕ್ಕೆ 250-350 ರೂ ಮಾತ್ರ.

ಈತನ ಹಾಗೆಯೇ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ದುಡಿಯಲು ಬಂದ ನೂರಾರು ಕಾರ್ಮಿಕರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯೇ ಮಾಡಿಕೊಟ್ಟ ಚಿಕ್ಕ ರೂಮುಗಳಲ್ಲಿ 8-10 ಮಂದಿ ಕಾರ್ಮಿಕರು ಇದ್ದುಕೊಂಡು, ಇಲ್ಲಿನ ಬದುಕುವ ಖರ್ಚು ಕಳೆದು ಒಂದಷ್ಟನ್ನಾದರೂ ಉಳಿಸಿ ಊರಿಗೆ ಕಳಿಸುವ ಪ್ರಯತ್ನದಲ್ಲಿರುತ್ತಾರೆ.

ಅರಬಿಂದೋ ಇಂದ ನಮ್ಮ ಹೆಲ್ಪ್‌ಲೈನ್‌ಗೆ ಕರೆ ಬಂದಾಗ, ಅನೇಕ ಉತ್ತರ ಭಾರತದ ಕಾರ್ಮಿಕರಂತೆಯೇ ಈತನದ್ದೂ ಕೂಡಾ ‘ನಾವು ಯಾವಾಗ ಊರಿಗೆ ಹೋಗಲು ಸಾಧ್ಯ? ಸೇವಾ ಸಿಂಧು ಆಪ್ ನಲ್ಲಿ ಹೆಸರು ನೋಂದಣಿ ಮಾಡಿಸಲು ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದೇವೆ, ನಮಗಿನ್ನೂ ನಮ್ಮ ಸರದಿ ನಂಬರ್ ಸಿಕ್ಕಿಲ್ಲ, ಯಾವಾಗ ಸಿಗುತ್ತದೆ? ಹೇಗಾದರೂ ನಮ್ಮನ್ನು ಊರಿಗೆ ಕಳಿಸಿ’ ಎಂಬ ಅಳಲು.

ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದರೆ ಆಗುತ್ತದೆ, ಸ್ವಲ್ಪ ಕಾದು ನೋಡಿ ಎಂಬ ನಮ್ಮ ಧೈರ್ಯ ತುಂಬುವ ಮಾತುಗಳಿಂದ ಸ್ವಲ್ಪ ದಿನ ಸಮಾಧಾನಪಡಿಸುವ ಪ್ರಯತ್ನ ಮಾಡಿಯಾಯಿತು. ಆದರೆ, ಮತ್ತೆ ಮತ್ತೆ ಅರಬಿಂದೋನ ಕರೆ. ಕೊನೆಗೊಮ್ಮೆ, “ಎಲ್ಲ ಕಡೆ ಖಾಯಿಲೆ ಹರಡುತ್ತಿದೆ. ನಾನು ನಮ್ಮ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ, ನನ್ನನ್ನು ದಯವಿಟ್ಟು ಕಳಿಸಿಕೊಡಿ” ಎನ್ನುತ್ತಾ ಅಕ್ಷರಶಃ ಆತ ಅಳಲಾರಂಭಿಸಿದಾಗ, ಕರುಳು ಚುರ್ ಎಂದಿತು.

ಪುಟ್ಟ ಮಗುವಿನಂತೆ ತಾಯಿಗಾಗಿ ಹಂಬಲಿಸುತ್ತಿರುವ ಈ ಹುಡುಗನನ್ನು ಊರಿಗೆ ಕಳಿಸಲೇಬೇಕೆಂದು ತೀರ್ಮಾನಿಸಿ, ಆತನ ‘ಸೇವಾ ಸಿಂಧು’ ನೋಂದಣಿಯನ್ನು ಹೆಲ್ಪ್‌ಲೈನ್‌ನ ವಾಲಂಟಿಯರ್ ಆದ ಸಾಫ್ಟ್ವೇರ್ ತಂತ್ರಜ್ಞ ಭರತ್ ಹೆಬ್ಬಾಳ್ ಪರಿಶೀಲಿಸಿದರು. ನೋಡಿದರೆ ಆತನ ನೋಂದಣಿ ಆಗಿರಲಿಲ್ಲ. ಅದನ್ನೂ ನಾವೇ ಮಾಡೋಣವೆಂದು ಅಂದುಕೊಂಡು ವಿವರಗಳನ್ನು ತುಂಬಿಸುತ್ತಾ ಬಂದೆವು. ಆಗ ನಮಗೆ ಸರ್ಕಾರದ ನೀತಿಗಳಲ್ಲಿರುವ ಉದ್ದೇಶಪೂರ್ವಕ ಅಡೆತಡೆಗಳ ಮತ್ತೊಂದು ಜೀವಂತ ಉದಾಹರಣೆ ಸಿಕ್ಕಿತು.

ಆಧಾರ್ ಸಂಖ್ಯೆ ಇಲ್ಲದೆ ಸೇವಾ ಸಿಂಧುವಿನಲ್ಲಿ ನೋಂದಣಿ ಸಾಧ್ಯವಿರಲಿಲ್ಲ; ಈಶಾನ್ಯ ರಾಜ್ಯಗಳ ಪ್ರಜೆಯಾದ ಅರಬಿಂಧೋ ಬಳಿ ಆಧಾರ್ ಕಾರ್ಡ್ ಇರಲಿಲ್ಲ! ಅವನೊಬ್ಬನೇ ಅಲ್ಲ, ಅಂತಹ ಹಲವು ಮಂದಿ ಇದ್ದಾರೆಂದು ತಿಳಿಯಿತು.

ಮೊದಮೊದಲಿಗೆ ವಲಸೆ ಕಾರ್ಮಿಕರ ಮರಳುವಿಕೆಗೆ ಸಂಬಂಧಿಸಿ ಬಂದ ಪ್ರಕಟಣೆಗಳನ್ನು ಹುಡುಕಿ ತೆಗೆದು ನೋಡಿದರೆ, ಅದರಲ್ಲಿ ಯಾವುದಾದರೊಂದು ಐಡಿ ಪ್ರೂಫ್ ಇದ್ದರೆ ಸಾಕು ಎಂದು ಹೇಳಲಾಗಿದೆ. ಆದರೆ, ಸೇವಾಸಿಂಧು ರಚನೆಯಲ್ಲಿ ಮಾತ್ರ ಆಧಾರ್ ಸಂಖ್ಯೆ ಇಲ್ಲದೆ ಮುಂದುವರೆಯಲು ಸಾಧ್ಯವಿಲ್ಲದಂತಹ ವ್ಯವಸ್ಥೆ ಮಾಡಲಾಗಿದೆ. ಸರಾಗವಾಗಿ ನಡೆಯಬಹುದಾದ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿ, ಒಂದಷ್ಟು ಮಂದಿ ಕಾರ್ಮಿಕರು ಈ ಕೂಡಲೇ ಮರಳಲು ಸಾಧ್ಯವಾಗದಂತಹ ಸ್ಥಿತಿ ಉಂಟುಮಾಡುವುದು ಬಿಟ್ಟು ಇದಕ್ಕೆ ಬೇರೇನಾದರೂ ತರ್ಕವಿರಲು ಸಾಧ್ಯವೇ?

ಅದರ ಬಗ್ಗೆ ಎಲ್ಲ ದಿಕ್ಕಿನಿಂದ ಪರಿಶೀಲನೆ ನಡೆಸಿ ಆಯಿತು. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಪರಿಸ್ಥಿತಿ ವಿವರಿಸಿದೆವು; ಸರ್ಕಾರದ ಹಿರಿಯ ಅಧಿಕಾರಿಗಳನ್ನು ಮಾತಾಡಿಸಿದೆವು; ಅಷ್ಟೆಲ್ಲ ಮಾಡಿದ ನಂತರ ನಮಗೆ ಗೊತ್ತಾದದ್ದೇನೆಂದರೆ, ಅವರ‍್ಯಾರಿಗೂ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಷ್ಟಕ್ಕೂ ಹೆಚ್ಚಾಗಿ ಇದೊಂದಷ್ಟು ಮಂದಿ ಕಾರ್ಮಿಕರು ವಾಪಾಸ್ ಹೋಗದಿದ್ದರೆ ಯಾರ ಮನೆ ಕೊಚ್ಚಿಹೋಗುತ್ತದೆ ಎಂಬಂತಹ ಧೋರಣೆ ಕಂಡಿತು.

ಪೊಲೀಸ್ ಠಾಣೆಯ ಮುಂದೆ ಕಾರ್ಮಿಕರ ಉದ್ದನೆಯ ಸರತಿ ಸಾಲಿನಲ್ಲಿ ನಿಂತು, ತಾನೇ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸಲು ಹೋದ ಅರಬಿಂಧೋ ಒಂದು ದಿನ ಅವರಿಂದ ಲಾಠಿಯೇಟು ತಿಂದು ನಿರಾಶನಾಗಿ ಮರಳಿ ಬಂದ. ಕಣ್ಣಲ್ಲಿ ನೀರು ತುಂಬಿಕೊಂಡು “ನನ್ನ ಬಳಿ ವೋಟರ್ ಐಡಿ ಇದೆ, ರೇಷನ್ ಕಾರ್ಡ್ ಇದೆ, ಪಾನ್ ಕಾರ್ಡ್ ಇದೆ, ಡ್ರೈವಿಂಗ್ ಲೈಸನ್ಸ್ ಇದೆ…………. ಇವ್ಯಾವುವೂ ನನ್ನ ಗುರುತಿನ ಅಧಿಕೃತ ದಾಖಲೆಗಳಲ್ಲವೇ? ಇವೆಲ್ಲವುಗಳ ಪ್ರಕಾರ ನಾನು ಈ ದೇಶದ ಪ್ರಜೆಯಲ್ಲವೇ? ನಮ್ಮ ರಾಜ್ಯದಲ್ಲಿ ನಮಗೆ ಆಧಾರ್ ಯಾವುದಕ್ಕೂ ಬೇಕಿಲ್ಲ. ಅದನ್ನು ಕಡ್ಡಾಯ ಮಾಡಿಲ್ಲ. ಆದ್ದರಿಂದ ನಾನು ಮಾಡಿಸಿಕೊಂಡಿರಲಿಲ್ಲ; ಇಲ್ಲಿಗೆ ಬಂದು ದುಡಿಯುವಾಗ ಬೇಕಿಲ್ಲದ ಆಧಾರ್, ಈಗ ಮಾತ್ರ ಬೇಕಾಗಿದೆಯೇ? ನಾನು ಮಾತ್ರ ಯಾಕೆ ವಾಪಾಸ್ ಹೋಗಲು ಸಾಧ್ಯವಿಲ್ಲ”? ಎಂದ ಅರಬಿಂಧೋನ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ!

ಅವನ ಕಣ್ಣೀರು ಮುಖದ ಗುರುತನ್ನು ಮರೆಮಾಡುತ್ತಿದ್ದ ಮಾಸ್ಕ್‌ನೊಳಗೆ ಇಂಗಿಹೋಯಿತು. ದೇಶದ ಪ್ರಜೆಯಾಗಿ ತನ್ನ ಗುರುತಿನ ಬಗ್ಗೆ ಅವನ ಪ್ರಶ್ನೆಗಳು ದೇಶದ ಬಡವರನ್ನು ಇಲ್ಲದ ಸಮಸ್ಯೆಗಳ ಸುಳಿಗಳಿಗೆ ಸಿಲುಕಿಸುತ್ತಿರುವ ಪ್ರಭುತ್ವಗಳು ಹೆಣೆದಿರುವ ಚಕ್ರವ್ಯೂಹದಲ್ಲಿ ಇಂಗಿಹೋದವು!

ಹೇಗಾದರೂ ಮಾಡಿ ಅರಬಿಂದೋ ಮತ್ತು ಅಂತಹ ದುಡಿಮೆಗಾರರನ್ನು ಅವರೂರಿಗೆ ತಲುಪಿಸಲು ನಮ್ಮ ಪ್ರಯತ್ನ ಮುಂದುವರೆದಿದೆ……… ಅರಬಿಂದೋನ ಕಾಯುವಿಕೆಯಂತೆಯೇ ನಿರಂತರವಾಗಿ………
ಈ ಪ್ರಯತ್ನದಲ್ಲಿ ಯಶಸ್ಸುಗಳಿತ್ತೇವೆಂದು ನಂಬಲು ನಮಗೆ ಯಾವುದೇ ‘ಆಧಾರ’ಗಳಿಲ್ಲ; ಆದರೂ ಪ್ರಯತ್ನ ನಿಲ್ಲುವುದಿಲ್ಲ!!


ಇದನ್ನೂ ಓದಿ: ವಲಸೆಯ ವ್ಯಥೆ: ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...