Homeಕರ್ನಾಟಕಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

- Advertisement -
- Advertisement -

ಕಾಳಿ-ಮಲಪ್ರಭಾ-ಘಟಪ್ರಭಾ ನದಿ ಜೋಡಣೆಗೆ ಉತ್ತರ ಕನ್ನಡದಲ್ಲಿ ವಿರೋಧ ವ್ಯಕ್ತವಾಗಿದೆ. ಕಾಳಿ ನದಿ ಉತ್ತರ ಕನ್ನಡದ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಜೀವಜಾಲದ ಜೀವನ! ಈ ತಾಲೂಕಿನ ಬದುಕಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕಾಳಿ ಇಲ್ಲದಿದ್ದರೆ ಎಲ್ಲವೂ ಖಾಲಿ-ಖಾಲಿ!! ಉತ್ತರ ಕರ್ನಾಟಕದ ಸಕ್ಕರೆ ಫ್ಯಾಕ್ಟರಿ ಲಾಬಿಯ ಕಣ್ಣು ಕಾಳಿ ಮೇಲೆ ಬಿದ್ದಾಗಿಂದ ಅದರ ಎರಡೂ ದಂಡೆ ಮೇಲಿರುವ ಮಂದಿ ಕಂಗಾಲಾಗಿ ಹೋಗಿದ್ದಾರೆ. ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕಾ ಮಂತ್ರಿಯಾದಾಗೆಲ್ಲ ಕಾಳಿಯನ್ನು ಮಲಪ್ರಭಾ ಮತ್ತು ಘಟಪ್ರಭಾ ನದಿಗೆ ಜೋಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರೊದಗಿಸುವ ಕಾರ್ಯಸಾಧ್ಯವಲ್ಲದ ಹುಚ್ಚು ಯೋಜನೆ ಕಾರ್ಯಗತಗೊಳಿಸುವ ಸಂಚೊಂದು ಒಳಗೊಳಗೇ ಬಿರುಸಿಂದ ನಡೆಯುತ್ತದೆಂದು ಕಾಳಿ ನದಿ ಪಾತ್ರದ ಮಂದಿ ಆತಂಕಿತರಾಗುತ್ತಾರೆ.

ಮೊನ್ನೆ ನಿರಾಣಿ ಮತ್ತೆ ದೊಡ್ಡ ಕೈಗಾರಿಕಾ ಮಂತ್ರಿಯಾಗುತ್ತಲೇ ತಮ್ಮ ಜೀವ ನದಿಗೆ ಕುತ್ತು ಬರುವ ಭಯಕ್ಕೆ ಕಾಳಿ ಮಕ್ಕಳು ಬಿದ್ದಿದ್ದಾರೆ. 2019ರಲ್ಲಿ ನಿರಾಣಿ ಸಹೋದರರಾದ ಮಂತ್ರಿ ಮುರುಗೇಶ್, ಎಮ್‌ಎಲ್‌ಸಿ ಹನುಮಂತ ಮತ್ತು ಉದ್ಯಮಿ ಸಂಗಮೇಶ್‌ರ ನಿರಾಣಿ ಪೌಂಡೇಶನ್ ಘಟಪ್ರಭಾ-ಮಲಪ್ರಭಾ ನದಿಗಳಿಗೆ ಉತ್ತರ ಕನ್ನಡದ ಕಾಳಿ ನದಿಯ 25 ಟಿಎಮ್‌ಸಿ ನೀರನ್ನು ಹರಿಸುವ ವಿಸ್ತ್ರತ ವರದಿಯೊಂದನ್ನು ಸರಕಾಕ್ಕೆ ನೀಡಿತ್ತು. ಏತ ನೀರಾವರಿ ಯೋಜನೆಯಿಂದ ಘಟಪ್ರಭಾ ಮತ್ತು ಮಲಪ್ರಭಾಕ್ಕೆ ಕಾಳಿ ನೀರನ್ನು ತುಂಬಿದರೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಮಗ್ರ ಕುಡಿಯುವ ನೀರು ಮತ್ತು ಸುಮಾರು 600 ಕೆರೆಗಳ ಪುನಶ್ಚೇತನ ಯೋಜನೆಗಳನ್ನು ಕೈಗೊಳ್ಳಬಹುದೆಂಬ ಆಕರ್ಷಕ ವರದಿ ನಿರಾಣಿ ಪೌಂಡೇಶನ್ ತಯಾರು ಮಾಡಿತ್ತು. ಸದ್ರಿ ಯೋಜನೆಗೆ ಒಪ್ಪಿಗೆ ಪಡೆಯಲು ಸಚಿವ ನಿರಾಣಿ ಆರು ಬಾರಿ ಕೇಂದ್ರ ಸರಕಾರದ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

PC : Kannada News – News18, (ಮುರುಗೇಶ್ ನಿರಾಣಿ)

ಘಟಪ್ರಭಾ-ಮಲಪ್ರಭಾದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬಯಲು ಸೀಮೆ ಕಡೆಯ ಕೆಲವು ಮಠಾಧೀಶರು ಮತ್ತು ರೈತ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ ಸದ್ರಿ ನದಿ ತಿರುವು ಯೋಜನೆ ವಿರುದ್ಧ ದೊಡ್ಡ ಕೂಗೆದದ್ದಿದೆ. ಕಾಳಿಯ 140 ಟಿಎಮ್‌ಸಿ ನೀರು ವಿದ್ಯುತ್ ಉತ್ಪಾದನೆಯ ಬಳಿಕ ವ್ಯರ್ಥವಾಗಿ ಸಮುದ್ರ ಸೇರುತ್ತದೆಂಬುದು ನಿರಾಣಿ ಬಳಗದ ವಾದ. ಆದರೆ ಸೂಪಾ ಜಲಾಶಯದ ನೀರಿನ ಸಂಗ್ರಹದ ಸಾಮರ್ಥ್ಯವೇ 144 ಟಿಎಮ್‌ಸಿ; ನಿರಾಣಿಗಳ ವರದಿಯಲ್ಲಿ ಹೇಳಿರುವಷ್ಟು ಸುಲಭವಾಗಿ ಕಾಳಿ ನೀರನ್ನು ಬಯಲು ಸೀಮೆಯೆಡೆ ತಿರುಗಿಸಲಾಗದು. ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಕಾಳಿ ಜನ್ಮ ತಳೆಯುವ ಜೋಯಿಡಾದ ಡಿಗ್ಗಿ ಗ್ರಾಮದಿಂದ ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ತನಕ ಐದು ಜಲ ವಿದ್ಯುತ್ ತಯಾರಿಸುವ ಆಣೆಕಟ್ಟುಗಳಿವೆ. ಈ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರು ವಿದ್ಯುತ್ ಉತ್ಪಾದನೆ ನಂತರ ಸಮುದ್ರ ಸೇರುತ್ತದೆ. ಇದು ನಿರಾಣಿಗಳು ಹೇಳುವಂತೆ ವ್ಯರ್ಥ ನೀರಲ್ಲ. ಸಮುದ್ರದ ಲವಣಾಂಶ ಕಾಪಾಡಲು ಸಿಹಿ ನಿರು ಬೇಕು. ಆಗ ಮಾತ್ರ ಸಮುದ್ರದಲ್ಲಿರುವ ಜಲಚರಗಳು ಬದುಕಲು ಸಾಧ್ಯವೆಂದು ಅಧ್ಯಯನ ವರದಿಗಳು ಹೇಳುತ್ತವೆ. ನದಿಯ ಇಕ್ಕೆಲದಲ್ಲಿ ಕುಡಿಯುವ ನೀರಿಗಾಗಿ ಹಲವು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಕಾಳಿ ದಡದ ಮೇಲೆಯೇ ಕೈಗಾ ಅಣು ಸ್ಥಾವರವಿದ್ದು ಅದರ ಶೀಥಲೀಕರಣಕ್ಕೆ ಕಾಳಿ ನೀರನ್ನೆ ಬಳಸಲಾಗುತ್ತಿದೆ. ಹಳಿಯಾಳ ಭಾಗದ ರೈತರಿಗೆ ಅನಿವಾರ್ಯವಾದ ಕಾಳಿ ನೀರಾವರಿ ಯೋಜನೆಯಿದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿದ್ಯತೆಯ ಮತ್ತು ತೀರಾ ಸೂಕ್ಷ್ಮಜೀವವಲಯವಾದ ಮಧ್ಯ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿಯುತ್ತಿದೆ. ಇಂಥ ನದಿಯನ್ನು ತಿರುಗಿಸಲು ಪ್ರಯತ್ನಿಸುವುದು ಅಪಾಯಕಾರಿ ದುಸ್ಸಾಹಸವೆಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಕಾಳಿ ನೀರು ಬಯಲು ಸೀಮೆಯೆಡೆ ತಿರುಗಿಸಿದರೆ ನದಿ ಪಾತ್ರದಲ್ಲಿ ಹರಿವು ಸೊರಗಿ ಕಣಿವೆ ಬರಡಾಗುವುದು ಖಂಡಿತ. ಅಷ್ಟೇ ಅಲ್ಲ, ನೀರು ಬಯಲು ಸೀಮೆಗೂ ತಲುಪದೆ ಯೋಜಿತ ಉದ್ದೇಶ ವಿಫಲವಾಗಲಿದೆ.

ಸ್ಥಳಿಯ ಜೀವ ಜಾಲವನ್ನು ಛಿದ್ರಗೊಳಿಸುವ ಈ ನದಿ ತಿರುವು ಯೋಜನೆಗೆ ಅವಕಾಶ ಕೊಡುವುದಿಲ್ಲವೆಂದು ಕಾಳಿ ತೀರದ ಮಂದಿ ಒಂದಾಗಿ ಒಕ್ಕೊರಳಲ್ಲಿ ಹೇಳುತ್ತಿದ್ದಾರೆ. ಕಾಳಿ ಕಣಿವೆ ಇಡೀ ಭಾರತಕ್ಕೆ ಮುಂಗಾರು ಮಳೆ ತರುವ ಪಶ್ಚಿಮ ಘಟ್ಟದ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಅದರಲ್ಲೂ ಜೋಯಿಡಾ ಮತ್ತು ದಾಂಡೇಲಿ ಭಾಗಗಳು ಸೂಕ್ಷ್ಮಜೀವ ವಲಯ ವ್ಯಾಪ್ತಿಯಲ್ಲಿವೆ. ಯುನೆಸ್ಕೊ ಪಶ್ಚಿಮ ಘಟ್ಟವನ್ನು ಪಾರಂಪರಿಕ ತಾಣವೆಂದು ಘೋಶಿಸಿದೆ. ಕಾಳಿ ಕಣಿವೆ ಹುಲಿ ಸಂರಕ್ಷಿತ ಪ್ರದೇಶವಾದರೆ ಜೋಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದೆ. ಕಾಡು ಪ್ರಾಣಿಗಳಿಗೆ ಕಾಳಿ ನೀರೆ ಸಂಜೀವಿನಿ. ಇಂಥ ಜೀವ ಸಂಕುಲದ ಉಸಿರಾದ ನದಿ ನೀರನ್ನು ಬಲವಂತವಾಗಿ ತಿರುಗಿಸಿದರೆ ಇಡೀ ದೇಶದ ಪರಿಸರದ ಮೇಲೆ ದುಶ್ಪರಿಣಾಮವಾಗುತ್ತದೆಂದು ಹಲವು ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ.

PC : Prajavani , (ಸಂಗಮೇಶ ನಿರಾಣಿ)

ನಿರಾಣಿ ಸಹೋದರರು ನದಿ ಜೋಡಣೆ ವರದಿ ಸಿದ್ದಪಡಿಸುವ ಮೊದಲು ಪಶ್ಚಿಮ ಘಟ್ಟದ ಪರಿಸರದ ಬಗೆಗಿನ ಮಾಧವ ಗಾಡ್ಗೀಳ್ ವರದಿ ಅಥವಾ ಕಸ್ತೂರಿ ರಂಗನ್ ವರದಿ ಓದಿದಹಾಗಿಲ್ಲ; ತಮ್ಮ ಸಕ್ಕರೆ ಉದ್ಯಮದ ಹಿತಾಸಕ್ತಿ ಒಂದನ್ನೆ ಗಮನದಲ್ಲಿಟ್ಟುಕೊಂಡು ಅವೈಜ್ಞನಿಕ ನದಿ ತಿರುವು ಯೋಜನಾವರದಿ ತಯಾರಿಸಿದ್ದಾರೆಂದು ದಾಂಡೇಲಿಯ ಪರಿಸರ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ನಗರ ಸಭಾ ಸದಸ್ಯ ಮೋಹನ ಹಲವಾಯಿ, ದಾಂಡೇಲಿ ಪ್ರವಾಸೋದ್ಯಮ ಸಂಘದ ಸಲಹೆಗಾರ ಅನಿಲ್ ದಂಡಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಯಲು ಸೀಮೆಯ ಐದು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸು ಮತ್ತು ಕೆರೆಗಳನ್ನು ತುಂಬಿಸುವ ನೆಪದಲ್ಲಿ ಕಬ್ಬು ಬೆಳೆಯಲು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾದ ನೀರು ಪಡೆಯಲು ಸಕ್ಕರೆ ಲಾಬಿ ಕಾಳಿ ನೀರಿಗಾಗಿ ಹೊಂಚು ಹಾಕಿದೆ ಎಂಬುದು ಉತ್ತರ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯ. ಈ ಕಾರಣಕ್ಕಾಗಿಯೆ ಸಕ್ಕರೆ ಉದ್ಯಮಿಯಾದ ಸಚಿವ ನಿರಾಣಿ ನಿರಂತರವಾಗಿ ಕಾಳಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗೆ ತುಂಬಿಸುವ ಪ್ರಯತ್ನ ನಡೆಸಿದ್ದಾರೆಂದು ಜಿಲ್ಲೆಯ ಪರಿಸರ ಹೋರಟಗಾರರು ನೇರವಾಗಿಯೇ ಹೇಳುತ್ತಾರೆ.


ಇದನ್ನೂ ಓದಿ: ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...