Homeಕರ್ನಾಟಕಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

- Advertisement -
- Advertisement -

ಕಾಳಿ-ಮಲಪ್ರಭಾ-ಘಟಪ್ರಭಾ ನದಿ ಜೋಡಣೆಗೆ ಉತ್ತರ ಕನ್ನಡದಲ್ಲಿ ವಿರೋಧ ವ್ಯಕ್ತವಾಗಿದೆ. ಕಾಳಿ ನದಿ ಉತ್ತರ ಕನ್ನಡದ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಜೀವಜಾಲದ ಜೀವನ! ಈ ತಾಲೂಕಿನ ಬದುಕಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕಾಳಿ ಇಲ್ಲದಿದ್ದರೆ ಎಲ್ಲವೂ ಖಾಲಿ-ಖಾಲಿ!! ಉತ್ತರ ಕರ್ನಾಟಕದ ಸಕ್ಕರೆ ಫ್ಯಾಕ್ಟರಿ ಲಾಬಿಯ ಕಣ್ಣು ಕಾಳಿ ಮೇಲೆ ಬಿದ್ದಾಗಿಂದ ಅದರ ಎರಡೂ ದಂಡೆ ಮೇಲಿರುವ ಮಂದಿ ಕಂಗಾಲಾಗಿ ಹೋಗಿದ್ದಾರೆ. ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕಾ ಮಂತ್ರಿಯಾದಾಗೆಲ್ಲ ಕಾಳಿಯನ್ನು ಮಲಪ್ರಭಾ ಮತ್ತು ಘಟಪ್ರಭಾ ನದಿಗೆ ಜೋಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರೊದಗಿಸುವ ಕಾರ್ಯಸಾಧ್ಯವಲ್ಲದ ಹುಚ್ಚು ಯೋಜನೆ ಕಾರ್ಯಗತಗೊಳಿಸುವ ಸಂಚೊಂದು ಒಳಗೊಳಗೇ ಬಿರುಸಿಂದ ನಡೆಯುತ್ತದೆಂದು ಕಾಳಿ ನದಿ ಪಾತ್ರದ ಮಂದಿ ಆತಂಕಿತರಾಗುತ್ತಾರೆ.

ಮೊನ್ನೆ ನಿರಾಣಿ ಮತ್ತೆ ದೊಡ್ಡ ಕೈಗಾರಿಕಾ ಮಂತ್ರಿಯಾಗುತ್ತಲೇ ತಮ್ಮ ಜೀವ ನದಿಗೆ ಕುತ್ತು ಬರುವ ಭಯಕ್ಕೆ ಕಾಳಿ ಮಕ್ಕಳು ಬಿದ್ದಿದ್ದಾರೆ. 2019ರಲ್ಲಿ ನಿರಾಣಿ ಸಹೋದರರಾದ ಮಂತ್ರಿ ಮುರುಗೇಶ್, ಎಮ್‌ಎಲ್‌ಸಿ ಹನುಮಂತ ಮತ್ತು ಉದ್ಯಮಿ ಸಂಗಮೇಶ್‌ರ ನಿರಾಣಿ ಪೌಂಡೇಶನ್ ಘಟಪ್ರಭಾ-ಮಲಪ್ರಭಾ ನದಿಗಳಿಗೆ ಉತ್ತರ ಕನ್ನಡದ ಕಾಳಿ ನದಿಯ 25 ಟಿಎಮ್‌ಸಿ ನೀರನ್ನು ಹರಿಸುವ ವಿಸ್ತ್ರತ ವರದಿಯೊಂದನ್ನು ಸರಕಾಕ್ಕೆ ನೀಡಿತ್ತು. ಏತ ನೀರಾವರಿ ಯೋಜನೆಯಿಂದ ಘಟಪ್ರಭಾ ಮತ್ತು ಮಲಪ್ರಭಾಕ್ಕೆ ಕಾಳಿ ನೀರನ್ನು ತುಂಬಿದರೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಮಗ್ರ ಕುಡಿಯುವ ನೀರು ಮತ್ತು ಸುಮಾರು 600 ಕೆರೆಗಳ ಪುನಶ್ಚೇತನ ಯೋಜನೆಗಳನ್ನು ಕೈಗೊಳ್ಳಬಹುದೆಂಬ ಆಕರ್ಷಕ ವರದಿ ನಿರಾಣಿ ಪೌಂಡೇಶನ್ ತಯಾರು ಮಾಡಿತ್ತು. ಸದ್ರಿ ಯೋಜನೆಗೆ ಒಪ್ಪಿಗೆ ಪಡೆಯಲು ಸಚಿವ ನಿರಾಣಿ ಆರು ಬಾರಿ ಕೇಂದ್ರ ಸರಕಾರದ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

PC : Kannada News – News18, (ಮುರುಗೇಶ್ ನಿರಾಣಿ)

ಘಟಪ್ರಭಾ-ಮಲಪ್ರಭಾದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬಯಲು ಸೀಮೆ ಕಡೆಯ ಕೆಲವು ಮಠಾಧೀಶರು ಮತ್ತು ರೈತ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ ಸದ್ರಿ ನದಿ ತಿರುವು ಯೋಜನೆ ವಿರುದ್ಧ ದೊಡ್ಡ ಕೂಗೆದದ್ದಿದೆ. ಕಾಳಿಯ 140 ಟಿಎಮ್‌ಸಿ ನೀರು ವಿದ್ಯುತ್ ಉತ್ಪಾದನೆಯ ಬಳಿಕ ವ್ಯರ್ಥವಾಗಿ ಸಮುದ್ರ ಸೇರುತ್ತದೆಂಬುದು ನಿರಾಣಿ ಬಳಗದ ವಾದ. ಆದರೆ ಸೂಪಾ ಜಲಾಶಯದ ನೀರಿನ ಸಂಗ್ರಹದ ಸಾಮರ್ಥ್ಯವೇ 144 ಟಿಎಮ್‌ಸಿ; ನಿರಾಣಿಗಳ ವರದಿಯಲ್ಲಿ ಹೇಳಿರುವಷ್ಟು ಸುಲಭವಾಗಿ ಕಾಳಿ ನೀರನ್ನು ಬಯಲು ಸೀಮೆಯೆಡೆ ತಿರುಗಿಸಲಾಗದು. ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಕಾಳಿ ಜನ್ಮ ತಳೆಯುವ ಜೋಯಿಡಾದ ಡಿಗ್ಗಿ ಗ್ರಾಮದಿಂದ ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ತನಕ ಐದು ಜಲ ವಿದ್ಯುತ್ ತಯಾರಿಸುವ ಆಣೆಕಟ್ಟುಗಳಿವೆ. ಈ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರು ವಿದ್ಯುತ್ ಉತ್ಪಾದನೆ ನಂತರ ಸಮುದ್ರ ಸೇರುತ್ತದೆ. ಇದು ನಿರಾಣಿಗಳು ಹೇಳುವಂತೆ ವ್ಯರ್ಥ ನೀರಲ್ಲ. ಸಮುದ್ರದ ಲವಣಾಂಶ ಕಾಪಾಡಲು ಸಿಹಿ ನಿರು ಬೇಕು. ಆಗ ಮಾತ್ರ ಸಮುದ್ರದಲ್ಲಿರುವ ಜಲಚರಗಳು ಬದುಕಲು ಸಾಧ್ಯವೆಂದು ಅಧ್ಯಯನ ವರದಿಗಳು ಹೇಳುತ್ತವೆ. ನದಿಯ ಇಕ್ಕೆಲದಲ್ಲಿ ಕುಡಿಯುವ ನೀರಿಗಾಗಿ ಹಲವು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಕಾಳಿ ದಡದ ಮೇಲೆಯೇ ಕೈಗಾ ಅಣು ಸ್ಥಾವರವಿದ್ದು ಅದರ ಶೀಥಲೀಕರಣಕ್ಕೆ ಕಾಳಿ ನೀರನ್ನೆ ಬಳಸಲಾಗುತ್ತಿದೆ. ಹಳಿಯಾಳ ಭಾಗದ ರೈತರಿಗೆ ಅನಿವಾರ್ಯವಾದ ಕಾಳಿ ನೀರಾವರಿ ಯೋಜನೆಯಿದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿದ್ಯತೆಯ ಮತ್ತು ತೀರಾ ಸೂಕ್ಷ್ಮಜೀವವಲಯವಾದ ಮಧ್ಯ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿಯುತ್ತಿದೆ. ಇಂಥ ನದಿಯನ್ನು ತಿರುಗಿಸಲು ಪ್ರಯತ್ನಿಸುವುದು ಅಪಾಯಕಾರಿ ದುಸ್ಸಾಹಸವೆಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಕಾಳಿ ನೀರು ಬಯಲು ಸೀಮೆಯೆಡೆ ತಿರುಗಿಸಿದರೆ ನದಿ ಪಾತ್ರದಲ್ಲಿ ಹರಿವು ಸೊರಗಿ ಕಣಿವೆ ಬರಡಾಗುವುದು ಖಂಡಿತ. ಅಷ್ಟೇ ಅಲ್ಲ, ನೀರು ಬಯಲು ಸೀಮೆಗೂ ತಲುಪದೆ ಯೋಜಿತ ಉದ್ದೇಶ ವಿಫಲವಾಗಲಿದೆ.

ಸ್ಥಳಿಯ ಜೀವ ಜಾಲವನ್ನು ಛಿದ್ರಗೊಳಿಸುವ ಈ ನದಿ ತಿರುವು ಯೋಜನೆಗೆ ಅವಕಾಶ ಕೊಡುವುದಿಲ್ಲವೆಂದು ಕಾಳಿ ತೀರದ ಮಂದಿ ಒಂದಾಗಿ ಒಕ್ಕೊರಳಲ್ಲಿ ಹೇಳುತ್ತಿದ್ದಾರೆ. ಕಾಳಿ ಕಣಿವೆ ಇಡೀ ಭಾರತಕ್ಕೆ ಮುಂಗಾರು ಮಳೆ ತರುವ ಪಶ್ಚಿಮ ಘಟ್ಟದ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಅದರಲ್ಲೂ ಜೋಯಿಡಾ ಮತ್ತು ದಾಂಡೇಲಿ ಭಾಗಗಳು ಸೂಕ್ಷ್ಮಜೀವ ವಲಯ ವ್ಯಾಪ್ತಿಯಲ್ಲಿವೆ. ಯುನೆಸ್ಕೊ ಪಶ್ಚಿಮ ಘಟ್ಟವನ್ನು ಪಾರಂಪರಿಕ ತಾಣವೆಂದು ಘೋಶಿಸಿದೆ. ಕಾಳಿ ಕಣಿವೆ ಹುಲಿ ಸಂರಕ್ಷಿತ ಪ್ರದೇಶವಾದರೆ ಜೋಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದೆ. ಕಾಡು ಪ್ರಾಣಿಗಳಿಗೆ ಕಾಳಿ ನೀರೆ ಸಂಜೀವಿನಿ. ಇಂಥ ಜೀವ ಸಂಕುಲದ ಉಸಿರಾದ ನದಿ ನೀರನ್ನು ಬಲವಂತವಾಗಿ ತಿರುಗಿಸಿದರೆ ಇಡೀ ದೇಶದ ಪರಿಸರದ ಮೇಲೆ ದುಶ್ಪರಿಣಾಮವಾಗುತ್ತದೆಂದು ಹಲವು ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ.

PC : Prajavani , (ಸಂಗಮೇಶ ನಿರಾಣಿ)

ನಿರಾಣಿ ಸಹೋದರರು ನದಿ ಜೋಡಣೆ ವರದಿ ಸಿದ್ದಪಡಿಸುವ ಮೊದಲು ಪಶ್ಚಿಮ ಘಟ್ಟದ ಪರಿಸರದ ಬಗೆಗಿನ ಮಾಧವ ಗಾಡ್ಗೀಳ್ ವರದಿ ಅಥವಾ ಕಸ್ತೂರಿ ರಂಗನ್ ವರದಿ ಓದಿದಹಾಗಿಲ್ಲ; ತಮ್ಮ ಸಕ್ಕರೆ ಉದ್ಯಮದ ಹಿತಾಸಕ್ತಿ ಒಂದನ್ನೆ ಗಮನದಲ್ಲಿಟ್ಟುಕೊಂಡು ಅವೈಜ್ಞನಿಕ ನದಿ ತಿರುವು ಯೋಜನಾವರದಿ ತಯಾರಿಸಿದ್ದಾರೆಂದು ದಾಂಡೇಲಿಯ ಪರಿಸರ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ನಗರ ಸಭಾ ಸದಸ್ಯ ಮೋಹನ ಹಲವಾಯಿ, ದಾಂಡೇಲಿ ಪ್ರವಾಸೋದ್ಯಮ ಸಂಘದ ಸಲಹೆಗಾರ ಅನಿಲ್ ದಂಡಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಯಲು ಸೀಮೆಯ ಐದು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸು ಮತ್ತು ಕೆರೆಗಳನ್ನು ತುಂಬಿಸುವ ನೆಪದಲ್ಲಿ ಕಬ್ಬು ಬೆಳೆಯಲು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾದ ನೀರು ಪಡೆಯಲು ಸಕ್ಕರೆ ಲಾಬಿ ಕಾಳಿ ನೀರಿಗಾಗಿ ಹೊಂಚು ಹಾಕಿದೆ ಎಂಬುದು ಉತ್ತರ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯ. ಈ ಕಾರಣಕ್ಕಾಗಿಯೆ ಸಕ್ಕರೆ ಉದ್ಯಮಿಯಾದ ಸಚಿವ ನಿರಾಣಿ ನಿರಂತರವಾಗಿ ಕಾಳಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗೆ ತುಂಬಿಸುವ ಪ್ರಯತ್ನ ನಡೆಸಿದ್ದಾರೆಂದು ಜಿಲ್ಲೆಯ ಪರಿಸರ ಹೋರಟಗಾರರು ನೇರವಾಗಿಯೇ ಹೇಳುತ್ತಾರೆ.


ಇದನ್ನೂ ಓದಿ: ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...