Homeಕರ್ನಾಟಕಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

- Advertisement -
- Advertisement -

ಕಾಳಿ-ಮಲಪ್ರಭಾ-ಘಟಪ್ರಭಾ ನದಿ ಜೋಡಣೆಗೆ ಉತ್ತರ ಕನ್ನಡದಲ್ಲಿ ವಿರೋಧ ವ್ಯಕ್ತವಾಗಿದೆ. ಕಾಳಿ ನದಿ ಉತ್ತರ ಕನ್ನಡದ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಜೀವಜಾಲದ ಜೀವನ! ಈ ತಾಲೂಕಿನ ಬದುಕಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕಾಳಿ ಇಲ್ಲದಿದ್ದರೆ ಎಲ್ಲವೂ ಖಾಲಿ-ಖಾಲಿ!! ಉತ್ತರ ಕರ್ನಾಟಕದ ಸಕ್ಕರೆ ಫ್ಯಾಕ್ಟರಿ ಲಾಬಿಯ ಕಣ್ಣು ಕಾಳಿ ಮೇಲೆ ಬಿದ್ದಾಗಿಂದ ಅದರ ಎರಡೂ ದಂಡೆ ಮೇಲಿರುವ ಮಂದಿ ಕಂಗಾಲಾಗಿ ಹೋಗಿದ್ದಾರೆ. ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕಾ ಮಂತ್ರಿಯಾದಾಗೆಲ್ಲ ಕಾಳಿಯನ್ನು ಮಲಪ್ರಭಾ ಮತ್ತು ಘಟಪ್ರಭಾ ನದಿಗೆ ಜೋಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರೊದಗಿಸುವ ಕಾರ್ಯಸಾಧ್ಯವಲ್ಲದ ಹುಚ್ಚು ಯೋಜನೆ ಕಾರ್ಯಗತಗೊಳಿಸುವ ಸಂಚೊಂದು ಒಳಗೊಳಗೇ ಬಿರುಸಿಂದ ನಡೆಯುತ್ತದೆಂದು ಕಾಳಿ ನದಿ ಪಾತ್ರದ ಮಂದಿ ಆತಂಕಿತರಾಗುತ್ತಾರೆ.

ಮೊನ್ನೆ ನಿರಾಣಿ ಮತ್ತೆ ದೊಡ್ಡ ಕೈಗಾರಿಕಾ ಮಂತ್ರಿಯಾಗುತ್ತಲೇ ತಮ್ಮ ಜೀವ ನದಿಗೆ ಕುತ್ತು ಬರುವ ಭಯಕ್ಕೆ ಕಾಳಿ ಮಕ್ಕಳು ಬಿದ್ದಿದ್ದಾರೆ. 2019ರಲ್ಲಿ ನಿರಾಣಿ ಸಹೋದರರಾದ ಮಂತ್ರಿ ಮುರುಗೇಶ್, ಎಮ್‌ಎಲ್‌ಸಿ ಹನುಮಂತ ಮತ್ತು ಉದ್ಯಮಿ ಸಂಗಮೇಶ್‌ರ ನಿರಾಣಿ ಪೌಂಡೇಶನ್ ಘಟಪ್ರಭಾ-ಮಲಪ್ರಭಾ ನದಿಗಳಿಗೆ ಉತ್ತರ ಕನ್ನಡದ ಕಾಳಿ ನದಿಯ 25 ಟಿಎಮ್‌ಸಿ ನೀರನ್ನು ಹರಿಸುವ ವಿಸ್ತ್ರತ ವರದಿಯೊಂದನ್ನು ಸರಕಾಕ್ಕೆ ನೀಡಿತ್ತು. ಏತ ನೀರಾವರಿ ಯೋಜನೆಯಿಂದ ಘಟಪ್ರಭಾ ಮತ್ತು ಮಲಪ್ರಭಾಕ್ಕೆ ಕಾಳಿ ನೀರನ್ನು ತುಂಬಿದರೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಮಗ್ರ ಕುಡಿಯುವ ನೀರು ಮತ್ತು ಸುಮಾರು 600 ಕೆರೆಗಳ ಪುನಶ್ಚೇತನ ಯೋಜನೆಗಳನ್ನು ಕೈಗೊಳ್ಳಬಹುದೆಂಬ ಆಕರ್ಷಕ ವರದಿ ನಿರಾಣಿ ಪೌಂಡೇಶನ್ ತಯಾರು ಮಾಡಿತ್ತು. ಸದ್ರಿ ಯೋಜನೆಗೆ ಒಪ್ಪಿಗೆ ಪಡೆಯಲು ಸಚಿವ ನಿರಾಣಿ ಆರು ಬಾರಿ ಕೇಂದ್ರ ಸರಕಾರದ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

PC : Kannada News – News18, (ಮುರುಗೇಶ್ ನಿರಾಣಿ)

ಘಟಪ್ರಭಾ-ಮಲಪ್ರಭಾದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬಯಲು ಸೀಮೆ ಕಡೆಯ ಕೆಲವು ಮಠಾಧೀಶರು ಮತ್ತು ರೈತ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ ಸದ್ರಿ ನದಿ ತಿರುವು ಯೋಜನೆ ವಿರುದ್ಧ ದೊಡ್ಡ ಕೂಗೆದದ್ದಿದೆ. ಕಾಳಿಯ 140 ಟಿಎಮ್‌ಸಿ ನೀರು ವಿದ್ಯುತ್ ಉತ್ಪಾದನೆಯ ಬಳಿಕ ವ್ಯರ್ಥವಾಗಿ ಸಮುದ್ರ ಸೇರುತ್ತದೆಂಬುದು ನಿರಾಣಿ ಬಳಗದ ವಾದ. ಆದರೆ ಸೂಪಾ ಜಲಾಶಯದ ನೀರಿನ ಸಂಗ್ರಹದ ಸಾಮರ್ಥ್ಯವೇ 144 ಟಿಎಮ್‌ಸಿ; ನಿರಾಣಿಗಳ ವರದಿಯಲ್ಲಿ ಹೇಳಿರುವಷ್ಟು ಸುಲಭವಾಗಿ ಕಾಳಿ ನೀರನ್ನು ಬಯಲು ಸೀಮೆಯೆಡೆ ತಿರುಗಿಸಲಾಗದು. ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಕಾಳಿ ಜನ್ಮ ತಳೆಯುವ ಜೋಯಿಡಾದ ಡಿಗ್ಗಿ ಗ್ರಾಮದಿಂದ ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ತನಕ ಐದು ಜಲ ವಿದ್ಯುತ್ ತಯಾರಿಸುವ ಆಣೆಕಟ್ಟುಗಳಿವೆ. ಈ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರು ವಿದ್ಯುತ್ ಉತ್ಪಾದನೆ ನಂತರ ಸಮುದ್ರ ಸೇರುತ್ತದೆ. ಇದು ನಿರಾಣಿಗಳು ಹೇಳುವಂತೆ ವ್ಯರ್ಥ ನೀರಲ್ಲ. ಸಮುದ್ರದ ಲವಣಾಂಶ ಕಾಪಾಡಲು ಸಿಹಿ ನಿರು ಬೇಕು. ಆಗ ಮಾತ್ರ ಸಮುದ್ರದಲ್ಲಿರುವ ಜಲಚರಗಳು ಬದುಕಲು ಸಾಧ್ಯವೆಂದು ಅಧ್ಯಯನ ವರದಿಗಳು ಹೇಳುತ್ತವೆ. ನದಿಯ ಇಕ್ಕೆಲದಲ್ಲಿ ಕುಡಿಯುವ ನೀರಿಗಾಗಿ ಹಲವು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಕಾಳಿ ದಡದ ಮೇಲೆಯೇ ಕೈಗಾ ಅಣು ಸ್ಥಾವರವಿದ್ದು ಅದರ ಶೀಥಲೀಕರಣಕ್ಕೆ ಕಾಳಿ ನೀರನ್ನೆ ಬಳಸಲಾಗುತ್ತಿದೆ. ಹಳಿಯಾಳ ಭಾಗದ ರೈತರಿಗೆ ಅನಿವಾರ್ಯವಾದ ಕಾಳಿ ನೀರಾವರಿ ಯೋಜನೆಯಿದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿದ್ಯತೆಯ ಮತ್ತು ತೀರಾ ಸೂಕ್ಷ್ಮಜೀವವಲಯವಾದ ಮಧ್ಯ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿಯುತ್ತಿದೆ. ಇಂಥ ನದಿಯನ್ನು ತಿರುಗಿಸಲು ಪ್ರಯತ್ನಿಸುವುದು ಅಪಾಯಕಾರಿ ದುಸ್ಸಾಹಸವೆಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಕಾಳಿ ನೀರು ಬಯಲು ಸೀಮೆಯೆಡೆ ತಿರುಗಿಸಿದರೆ ನದಿ ಪಾತ್ರದಲ್ಲಿ ಹರಿವು ಸೊರಗಿ ಕಣಿವೆ ಬರಡಾಗುವುದು ಖಂಡಿತ. ಅಷ್ಟೇ ಅಲ್ಲ, ನೀರು ಬಯಲು ಸೀಮೆಗೂ ತಲುಪದೆ ಯೋಜಿತ ಉದ್ದೇಶ ವಿಫಲವಾಗಲಿದೆ.

ಸ್ಥಳಿಯ ಜೀವ ಜಾಲವನ್ನು ಛಿದ್ರಗೊಳಿಸುವ ಈ ನದಿ ತಿರುವು ಯೋಜನೆಗೆ ಅವಕಾಶ ಕೊಡುವುದಿಲ್ಲವೆಂದು ಕಾಳಿ ತೀರದ ಮಂದಿ ಒಂದಾಗಿ ಒಕ್ಕೊರಳಲ್ಲಿ ಹೇಳುತ್ತಿದ್ದಾರೆ. ಕಾಳಿ ಕಣಿವೆ ಇಡೀ ಭಾರತಕ್ಕೆ ಮುಂಗಾರು ಮಳೆ ತರುವ ಪಶ್ಚಿಮ ಘಟ್ಟದ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಅದರಲ್ಲೂ ಜೋಯಿಡಾ ಮತ್ತು ದಾಂಡೇಲಿ ಭಾಗಗಳು ಸೂಕ್ಷ್ಮಜೀವ ವಲಯ ವ್ಯಾಪ್ತಿಯಲ್ಲಿವೆ. ಯುನೆಸ್ಕೊ ಪಶ್ಚಿಮ ಘಟ್ಟವನ್ನು ಪಾರಂಪರಿಕ ತಾಣವೆಂದು ಘೋಶಿಸಿದೆ. ಕಾಳಿ ಕಣಿವೆ ಹುಲಿ ಸಂರಕ್ಷಿತ ಪ್ರದೇಶವಾದರೆ ಜೋಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದೆ. ಕಾಡು ಪ್ರಾಣಿಗಳಿಗೆ ಕಾಳಿ ನೀರೆ ಸಂಜೀವಿನಿ. ಇಂಥ ಜೀವ ಸಂಕುಲದ ಉಸಿರಾದ ನದಿ ನೀರನ್ನು ಬಲವಂತವಾಗಿ ತಿರುಗಿಸಿದರೆ ಇಡೀ ದೇಶದ ಪರಿಸರದ ಮೇಲೆ ದುಶ್ಪರಿಣಾಮವಾಗುತ್ತದೆಂದು ಹಲವು ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ.

PC : Prajavani , (ಸಂಗಮೇಶ ನಿರಾಣಿ)

ನಿರಾಣಿ ಸಹೋದರರು ನದಿ ಜೋಡಣೆ ವರದಿ ಸಿದ್ದಪಡಿಸುವ ಮೊದಲು ಪಶ್ಚಿಮ ಘಟ್ಟದ ಪರಿಸರದ ಬಗೆಗಿನ ಮಾಧವ ಗಾಡ್ಗೀಳ್ ವರದಿ ಅಥವಾ ಕಸ್ತೂರಿ ರಂಗನ್ ವರದಿ ಓದಿದಹಾಗಿಲ್ಲ; ತಮ್ಮ ಸಕ್ಕರೆ ಉದ್ಯಮದ ಹಿತಾಸಕ್ತಿ ಒಂದನ್ನೆ ಗಮನದಲ್ಲಿಟ್ಟುಕೊಂಡು ಅವೈಜ್ಞನಿಕ ನದಿ ತಿರುವು ಯೋಜನಾವರದಿ ತಯಾರಿಸಿದ್ದಾರೆಂದು ದಾಂಡೇಲಿಯ ಪರಿಸರ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ನಗರ ಸಭಾ ಸದಸ್ಯ ಮೋಹನ ಹಲವಾಯಿ, ದಾಂಡೇಲಿ ಪ್ರವಾಸೋದ್ಯಮ ಸಂಘದ ಸಲಹೆಗಾರ ಅನಿಲ್ ದಂಡಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಯಲು ಸೀಮೆಯ ಐದು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸು ಮತ್ತು ಕೆರೆಗಳನ್ನು ತುಂಬಿಸುವ ನೆಪದಲ್ಲಿ ಕಬ್ಬು ಬೆಳೆಯಲು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾದ ನೀರು ಪಡೆಯಲು ಸಕ್ಕರೆ ಲಾಬಿ ಕಾಳಿ ನೀರಿಗಾಗಿ ಹೊಂಚು ಹಾಕಿದೆ ಎಂಬುದು ಉತ್ತರ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯ. ಈ ಕಾರಣಕ್ಕಾಗಿಯೆ ಸಕ್ಕರೆ ಉದ್ಯಮಿಯಾದ ಸಚಿವ ನಿರಾಣಿ ನಿರಂತರವಾಗಿ ಕಾಳಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗೆ ತುಂಬಿಸುವ ಪ್ರಯತ್ನ ನಡೆಸಿದ್ದಾರೆಂದು ಜಿಲ್ಲೆಯ ಪರಿಸರ ಹೋರಟಗಾರರು ನೇರವಾಗಿಯೇ ಹೇಳುತ್ತಾರೆ.


ಇದನ್ನೂ ಓದಿ: ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...