Homeಮುಖಪುಟನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ

- Advertisement -
- Advertisement -

ಈ ವಿಡಿಯೋ ನೋಡಿ….
ಸಂದರ್ಶಕರಲ್ಲೊಬ್ಬರು ಕೇಳಿದ ಪ್ರಶ್ನೆ ಮೋದಿ ರೆಫರ್ ಮಾಡುತ್ತಿದ್ದ ಫೋಲ್ಡರಿನ ಒಂದು ಕಾಗದದ ಮೇಲ್ಭಾಗದಲ್ಲಿ ಯಥಾವತ್ತಾಗಿ ಪ್ರಿಂಟಾಗಿತ್ತು! ಅಂದರೆ, ಸಂದರ್ಶನಕ್ಕೂ ಮೊದಲೇ ಪ್ರಶ್ನೆಗಳು ಮೋದಿ ಬಳಿ ಇರುತ್ತವೆ. ಅದಕ್ಕೆ ಅವರು ಉತ್ತರ ರೆಡಿ ಮಾಡಿಕೊಂಡು ಬಂದಿರುತ್ತಾರೆ… ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ…. ಥೂ ಅಸಹ್ಯ…

ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಅಲ್ಟ್‍ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾರವರು, ನ್ಯೂ ನೇಷನ್ ಚಾನೆಲ್ ಮೋದಿಯೊಂದಿಗೆ ನಡೆಸಿದ ಸಂದರ್ಶನದ ವಿಡಿಯೋವನ್ನು ಸ್ಲೋ ಡೌನ್ ಮಾಡಿ, ಈ ವಿವರಗಳನ್ನು ತೆರೆದು ಇಟ್ಟಿದ್ದಾರೆ…
ಮೊದಲಿಗೆ , ಪ್ರತೀಕ್ ಸಿನ್ಹಾ ಈ ಕುರಿತಂತೆ ಮಾಡಿರುವ ಈ ಟ್ವೀಟ್‍ಗಳನ್ನು ಓದಿ:

ಪ್ರತೀಕ್ ಟ್ವೀಟ್: ‘ನಿರೂಪಕ (ಸಂದರ್ಶಕ) ದೀಪಕ್ ಚೌರಾಸಿಯಾ ಕೇಳುವ ಒಂದು ಪ್ರಶ್ನೆಯು, ಮೋದಿ ಉತ್ತರಿಸಲು ರೆಫರ್ ಮಾಡುತ್ತಿದ್ದ ಕಾಗದದ ಮೇಲ್ಭಾಗದಲ್ಲಿ ಅಕ್ಷರಶ: ಯಥಾವತ್ತಾಗಿ ಮುದ್ರಣವಾಗಿದೆ….’

ಪ್ರತೀಕ್ ಟ್ವೀಟ್2: ಇಲ್ಲಿರುವ ಸಂದರ್ಶನದ ವಿಡಿಯೊ ( ಸ್ಲೋ ಡೌನ್ ಮಾಡಿದ್ದೇವೆ) ನೋಡಿ… ಮೋದಿ ಉತ್ತರಿಸುವ ಮೊದಲು ತಮ್ಮಲ್ಲಿರುವ ಫೈಲ್‍ನಲ್ಲಿನ ಕಾಗದವೊಂದನ್ನು ನೋಡುತ್ತಿರುವ ದೃಶ್ಯ…

ಈಗ ವಿಷಯಕ್ಕೆ ಬರೋಣ. ಪತ್ರಿಕಾಗೋಷ್ಠಿಯನ್ನೇ ನಡೆಸದ ಪ್ರಧಾನಿ ಎಂಬ ಕುಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣಾ ಸುಗ್ಗಿಯಲ್ಲಿ ಹಲವು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಈ ಸಂದರ್ಶನಗಳ ಬಗ್ಗೆ ಇರುವ ಒಂದು ಸಾಮಾನ್ಯ ವಿಮರ್ಶೆ ಎಂದರೆ, ಸಂದರ್ಶಕರು ಯಾವುದೇ ‘ಟಫ್’ ಪ್ರಶ್ನೆ ಕೇಳುತ್ತಿಲ್ಲ ಎಂಬುದು…

ಈಗ ಇಲ್ಲಿ ತೋರಿಸುತ್ತಿರುವ ಒಂದು ವಿಡಿಯೋ ಕ್ಲಿಪ್ ಪ್ರಕಾರ, ನ್ಯೂಸ್ ನೇಷನ್ ಟಿವಿಗೆ ಕೊಟ್ಟ ಸಂದರ್ಶನದಲ್ಲಿ, ಇಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಪ್ರಶ್ನೆಯನ್ನು ಮೋದಿಗೆ ಸಂದರ್ಶನಕ್ಕೂ ಮೊದಲೇ ಕೊಡಲಾಗಿತ್ತು! ಅಲ್ಟ್‍ನ್ಯೂಸ್‍ನ ಪ್ರತೀಕ್ ಸಿನ್ಹಾ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಮೋದಿಗೆ ಮೊದಲೇ ಪ್ರಶ್ನೆಗಳನ್ನು ಕಳಿಸಿ ಕೊಟ್ಟು ಸಂದರ್ಶನ ಮಾಡಲಾಗುತ್ತಿದೆ ಎಂಬುದರ ಎಳೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಸಂದರ್ಶನದಲ್ಲಿ ನಿರೂಪಕ ದೀಪಕ್ ಚೌರಾಸಿಯಾ, ‘ಇತ್ತೀಚಿನ ವರ್ಷಗಳಲ್ಲಿ ತಾವು ಯಾವುದಾದರೂ ಕವನ ಬರೆದಿದ್ದೀರಾ?’ ಎಂದು ಮೋದಿಗೆ ಪ್ರಶ್ನಿಸುತ್ತಾರೆ. ಮೋದಿ ತಮ್ಮ ಫೈಲ್‍ನಲ್ಲಿ ‘ತಮ್ಮ’ ಕವನದ ಪೇಜ್ ತೆಗೆದಾಗ, ಅದರ ಮೇಲ್ಭಾಗದಲ್ಲಿ ಚೌರಾಸಿಯಾ ಪ್ರಶ್ನೆ ಯಥಾವತ್ ಮುದ್ರಣವಾಗಿದ್ದನ್ನು ಈ ವಿಡಿಯೋ ತುಣುಕು ತೋರಿಸುತ್ತದೆ…

ನಿರೂಪಕ ಇತ್ತೀಚೆಗೆ ಬರೆದ ಒಂದು ಕವಿತೆಯನ್ನು ವಾಚಿಸಿ ಎಂದಾಗ, ಮೋದಿ ತಮ್ಮ ಫೈಲ್ ಪಡೆದು ಕವಿತೆ (ಮುದ್ರಿತ) ಇರುವ ಪೇಜ್ ತೆಗೆಯುತ್ತಾರೆ… ಇಲ್ಲೇ ಇರುವುದು ರಹಸ್ಯ! ಆಪೇಜ್‍ನ ಮೇಲ್ಭಾಗದಲ್ಲಿ ನಿರೂಪಕ ಕೇಳಿದ ಪ್ರಶ್ನೆ ಡಿಟ್ಟೋ ಪ್ರಿಂಟ್ ಆಗಿದೆ!
ಈ ಸಂದರ್ಶನ ಈಗಾಗಲೇ ಸಾಕಷ್ಟು ತಮಾಷೆಗೆ ಒಳಗಾಗಿದೆ. ಬಾಲಾಕೋಟ್ ದಾಳಿಯ ದಿನದಂದು, ‘ಮೋಡಗಳಿರುವುದರಿಂದ ಪಾಕಿಸ್ತಾನದ ರೆಡಾರ್‍ಗಳಿಗೆ ನಮ್ಮ ವಿಮಾನಗಳನ್ನು ಗುರುತಿಸಲಾಗದು, ಇದೇ ಸುಸಂದರ್ಭ…ಬೇಗನೇ ದಾಳಿ ಆರಂಭಿಸಿ’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ತಾನು ಹೇಳಿದ್ದೆ, ಅದರಿಂದ ಕಾರ್ಯಾಚರಣೆ ಶುರುವಾಗಿತು ಎಂದು ಮೋದಿ ಹೇಳಿದ್ದನ್ನು ಜಗತ್ತೇ ಜೋಕ್ ತರಹ ನೋಡುತ್ತಿದೆ.

ಡಿಜಿಟಲ್ ಕ್ಯಾಮೆರಾ, ಇಮೇಲ್ ಮತ್ತು ಪರ್ಸ್‍ಲೆಸ್ ಮೋದಿ

ಅದೇ ಸಂದರ್ಶನದಲ್ಲೇ ಮೋದಿಯವರು 1987-89 ರಲ್ಲೇ ಡಿಜಿಟಲ್ ಕ್ಯಾಮೆರದಲ್ಲಿ ಫೋಟೊ ತೆಗೆದು ದೆಹಲಿಗೆ ಮೇಲ್ ಮಾಡಿದ್ದೆ ಎಂದು ಬೂಸಿ ಬಿಟ್ಟಿದ್ದಾರೆ. ಆಗ ಡಿಜಿಟಲ್ ಕ್ಯಾಮೆರಾವಾಗಲಿ, ಇಮೇಲ್ ಆಗಲಿ ಇರಲಿಲ್ಲ, ಮೋದಿ ಇನ್ನೊಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.

1997-98 ಎನ್ನುವ ಬದಲು ಮೋದೀಜಿ 1987-88 ಎಂದು ಬಾಯ್ತಪ್ಪಿ ಹೇಳಿದ್ದಾರೇನೋ ಎಂದು ಅವರ ಭಕ್ತರು ಈಗ ಸಬೂಬು ಕೊಡ್ತಾ ಇದ್ದಾರೆ. ಅಲ್ರಿ, ರೆಡಿಮೇಡ್ ಪ್ರಶ್ನೆ, ರೆಡಿಮೇಡ್ ಉತ್ತರದಲ್ಲೂ ಈ ರೀತಿ ಬಾಯ್ತಪ್ಪಿ ಹೇಳ್ತಾರಾ? ಇದು ಇನ್ನಷ್ಟು ಮೂರ್ಖತನದ ಸ್ಯಾಂಪಲ್ಲು, ಅದಕ್ಕಿಂತ ಹೆಚ್ಚಾಗಿ ಸುಳ್ಳನ ಎಡವಟ್ಟು!

ಆಯ್ತು ಅದು ಸರಿ ಎಂದಿಟ್ಟುಕಳ್ಳೋಣ….ಅದೇ ಸಂದರ್ಶನದಲ್ಲಿ ಆ ಸಂದರ್ಭದಲ್ಲಿ ತಮಗೆ ಒಂದು ಪರ್ಸ್ ಖರೀದಿಸುವಷ್ಟೂ ಕಾಸು ಇರಲಿಲ್ಲ ಎಂದಿದ್ದಾರೆ. ಆದರೆ 1995ರ ಸುಮಾರಿಗೆ ಒಂದು ಡಿಜಿಟಲ್ ಕ್ಯಾಮೆರಾದ ದರ 5 ಸಾವಿರ ರೂ.ಗಿಂತ ಹೆಚ್ಚಿತ್ತು. 1995ರಲ್ಲಿ ವಿಎಸ್‍ಎನ್‍ಎಲ್‍ನಿಂದ ಒಂದು ಶೆಲ್ ಇಮೇಲ್ ಅಕೌಂಟ್ ಪಡೆಯಲು ವಾರ್ಷಿಕ 5 ಸಾವಿರ ರೂ ಮೇಲೆ ಹಣ ನೀಡಬೇಕಿತ್ತು…ಆಗ ಟಿಸಿಪಿ/ಐಪಿ ಅಥವಾ ಡಿಜಿಟಲ್ ಅಕೌಂಟಿಗೆ ವಾರ್ಷಿಕ 15 ಸಾವರಿದಷ್ಟು ಫೀಸ್ ತೆರಬೇಕಿತ್ತು… ವಿಎಸ್‍ಎನ್‍ಎಲ್‍ಗೂ ಮೊದಲು 1990ರ ದಶಕದ ಮಧ್ಯಭಾದಲ್ಲಿ ‘ಅಕ್ಸೆಸ್ ಮೇಲ್’ ಇಮೇಲ್ ಸೇವೆ ಕೊಡುತ್ತಿತ್ತಾದರೂ, ಅದು ಕೆಲವೇ ಬುಲೆಟಿನ್ ಬೋರ್ಡ್ ಸೇವೆಗಳನ್ನು ಒಳಗೊಂಡಿತ್ತು…
ಸಾರಾಂಶ: ಒಂದು ಸುಳ್ಳು, ಅದರ ಹಿಂದೊಂದು ಸುಳ್ಳು…. ಮೋದಿ ಸಮರ್ಥಿಸಿಕೊಳ್ಳಲು ಹೋದವರೇ ನಾಚಿಕೆ ಪಡಬೇಕಾದ ಸ್ಥಿತಿ!

ಅಂದರೆ, ತಮಗೆ ಬೇಕಾದ ಮಾಧ್ಯಮಗಳಿಗೆ ಸಂದರ್ಶನ ನೀಡುವ ಡೇರ್‍ಡೆವಿಲ್ ಮೋದಿ, ಮೊದಲೇ ಸಂದರ್ಶಕರಿಂದ ಪ್ರಶ್ನೆ ಪಡೆದಿರುತ್ತಾರೆ. ಅಲ್ಲಿ ಯಾವ ಕಠಿಣ ಪ್ರಶ್ನೆಗಳೂ ಇರುವುದಿಲ್ಲ. ಮೋದಿ ಬಯಸಿದ ಪ್ರಶ್ನೆಗಳೇ ಇರುತ್ತವೆ. ಅದಕ್ಕ ಮೋದಿ ಉತ್ತರಗಳನ್ನು ಸಿದ್ಧ ಮಾಡಿಕೊಡು ಬಂದಿರುತ್ತಾರೆ!

ಇದು ಪಕೋಡಾ ಪ್ರಧಾನಿ ಪೇಯ್ಡ್ ಮೀಡಿಯಾಕ್ಕೆ ಪೇಪ್ಪರಮೆಂಟು ತಿನ್ನಿಸುವ, ಪೇಯ್ಡ್ ಮೀಡಿಯಾ ವೀಕ್ಷಕರು/ಓದುಗರನ್ನು ವಂಚಿಸುವ ಪರಿ… ಕಳೆದ 5 ವರ್ಷಗಳಿಂದ ಇದೇ ನಡೆದಿದೆ ಅಲ್ಲವೇ?
ಪೂರ್ಣ ಸಂದರ್ಶನಕ್ಕಾಗಿ ಈ ಕೆಳಗಿನ ವಿಡಿಯೋ ನೋಡಿ:

(ಆಧಾರ: thescroll.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...