Homeಮುಖಪುಟನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ

- Advertisement -
- Advertisement -

ಈ ವಿಡಿಯೋ ನೋಡಿ….
ಸಂದರ್ಶಕರಲ್ಲೊಬ್ಬರು ಕೇಳಿದ ಪ್ರಶ್ನೆ ಮೋದಿ ರೆಫರ್ ಮಾಡುತ್ತಿದ್ದ ಫೋಲ್ಡರಿನ ಒಂದು ಕಾಗದದ ಮೇಲ್ಭಾಗದಲ್ಲಿ ಯಥಾವತ್ತಾಗಿ ಪ್ರಿಂಟಾಗಿತ್ತು! ಅಂದರೆ, ಸಂದರ್ಶನಕ್ಕೂ ಮೊದಲೇ ಪ್ರಶ್ನೆಗಳು ಮೋದಿ ಬಳಿ ಇರುತ್ತವೆ. ಅದಕ್ಕೆ ಅವರು ಉತ್ತರ ರೆಡಿ ಮಾಡಿಕೊಂಡು ಬಂದಿರುತ್ತಾರೆ… ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ…. ಥೂ ಅಸಹ್ಯ…

ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಅಲ್ಟ್‍ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾರವರು, ನ್ಯೂ ನೇಷನ್ ಚಾನೆಲ್ ಮೋದಿಯೊಂದಿಗೆ ನಡೆಸಿದ ಸಂದರ್ಶನದ ವಿಡಿಯೋವನ್ನು ಸ್ಲೋ ಡೌನ್ ಮಾಡಿ, ಈ ವಿವರಗಳನ್ನು ತೆರೆದು ಇಟ್ಟಿದ್ದಾರೆ…
ಮೊದಲಿಗೆ , ಪ್ರತೀಕ್ ಸಿನ್ಹಾ ಈ ಕುರಿತಂತೆ ಮಾಡಿರುವ ಈ ಟ್ವೀಟ್‍ಗಳನ್ನು ಓದಿ:

ಪ್ರತೀಕ್ ಟ್ವೀಟ್: ‘ನಿರೂಪಕ (ಸಂದರ್ಶಕ) ದೀಪಕ್ ಚೌರಾಸಿಯಾ ಕೇಳುವ ಒಂದು ಪ್ರಶ್ನೆಯು, ಮೋದಿ ಉತ್ತರಿಸಲು ರೆಫರ್ ಮಾಡುತ್ತಿದ್ದ ಕಾಗದದ ಮೇಲ್ಭಾಗದಲ್ಲಿ ಅಕ್ಷರಶ: ಯಥಾವತ್ತಾಗಿ ಮುದ್ರಣವಾಗಿದೆ….’

ಪ್ರತೀಕ್ ಟ್ವೀಟ್2: ಇಲ್ಲಿರುವ ಸಂದರ್ಶನದ ವಿಡಿಯೊ ( ಸ್ಲೋ ಡೌನ್ ಮಾಡಿದ್ದೇವೆ) ನೋಡಿ… ಮೋದಿ ಉತ್ತರಿಸುವ ಮೊದಲು ತಮ್ಮಲ್ಲಿರುವ ಫೈಲ್‍ನಲ್ಲಿನ ಕಾಗದವೊಂದನ್ನು ನೋಡುತ್ತಿರುವ ದೃಶ್ಯ…

ಈಗ ವಿಷಯಕ್ಕೆ ಬರೋಣ. ಪತ್ರಿಕಾಗೋಷ್ಠಿಯನ್ನೇ ನಡೆಸದ ಪ್ರಧಾನಿ ಎಂಬ ಕುಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣಾ ಸುಗ್ಗಿಯಲ್ಲಿ ಹಲವು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಈ ಸಂದರ್ಶನಗಳ ಬಗ್ಗೆ ಇರುವ ಒಂದು ಸಾಮಾನ್ಯ ವಿಮರ್ಶೆ ಎಂದರೆ, ಸಂದರ್ಶಕರು ಯಾವುದೇ ‘ಟಫ್’ ಪ್ರಶ್ನೆ ಕೇಳುತ್ತಿಲ್ಲ ಎಂಬುದು…

ಈಗ ಇಲ್ಲಿ ತೋರಿಸುತ್ತಿರುವ ಒಂದು ವಿಡಿಯೋ ಕ್ಲಿಪ್ ಪ್ರಕಾರ, ನ್ಯೂಸ್ ನೇಷನ್ ಟಿವಿಗೆ ಕೊಟ್ಟ ಸಂದರ್ಶನದಲ್ಲಿ, ಇಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಪ್ರಶ್ನೆಯನ್ನು ಮೋದಿಗೆ ಸಂದರ್ಶನಕ್ಕೂ ಮೊದಲೇ ಕೊಡಲಾಗಿತ್ತು! ಅಲ್ಟ್‍ನ್ಯೂಸ್‍ನ ಪ್ರತೀಕ್ ಸಿನ್ಹಾ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಮೋದಿಗೆ ಮೊದಲೇ ಪ್ರಶ್ನೆಗಳನ್ನು ಕಳಿಸಿ ಕೊಟ್ಟು ಸಂದರ್ಶನ ಮಾಡಲಾಗುತ್ತಿದೆ ಎಂಬುದರ ಎಳೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಸಂದರ್ಶನದಲ್ಲಿ ನಿರೂಪಕ ದೀಪಕ್ ಚೌರಾಸಿಯಾ, ‘ಇತ್ತೀಚಿನ ವರ್ಷಗಳಲ್ಲಿ ತಾವು ಯಾವುದಾದರೂ ಕವನ ಬರೆದಿದ್ದೀರಾ?’ ಎಂದು ಮೋದಿಗೆ ಪ್ರಶ್ನಿಸುತ್ತಾರೆ. ಮೋದಿ ತಮ್ಮ ಫೈಲ್‍ನಲ್ಲಿ ‘ತಮ್ಮ’ ಕವನದ ಪೇಜ್ ತೆಗೆದಾಗ, ಅದರ ಮೇಲ್ಭಾಗದಲ್ಲಿ ಚೌರಾಸಿಯಾ ಪ್ರಶ್ನೆ ಯಥಾವತ್ ಮುದ್ರಣವಾಗಿದ್ದನ್ನು ಈ ವಿಡಿಯೋ ತುಣುಕು ತೋರಿಸುತ್ತದೆ…

ನಿರೂಪಕ ಇತ್ತೀಚೆಗೆ ಬರೆದ ಒಂದು ಕವಿತೆಯನ್ನು ವಾಚಿಸಿ ಎಂದಾಗ, ಮೋದಿ ತಮ್ಮ ಫೈಲ್ ಪಡೆದು ಕವಿತೆ (ಮುದ್ರಿತ) ಇರುವ ಪೇಜ್ ತೆಗೆಯುತ್ತಾರೆ… ಇಲ್ಲೇ ಇರುವುದು ರಹಸ್ಯ! ಆಪೇಜ್‍ನ ಮೇಲ್ಭಾಗದಲ್ಲಿ ನಿರೂಪಕ ಕೇಳಿದ ಪ್ರಶ್ನೆ ಡಿಟ್ಟೋ ಪ್ರಿಂಟ್ ಆಗಿದೆ!
ಈ ಸಂದರ್ಶನ ಈಗಾಗಲೇ ಸಾಕಷ್ಟು ತಮಾಷೆಗೆ ಒಳಗಾಗಿದೆ. ಬಾಲಾಕೋಟ್ ದಾಳಿಯ ದಿನದಂದು, ‘ಮೋಡಗಳಿರುವುದರಿಂದ ಪಾಕಿಸ್ತಾನದ ರೆಡಾರ್‍ಗಳಿಗೆ ನಮ್ಮ ವಿಮಾನಗಳನ್ನು ಗುರುತಿಸಲಾಗದು, ಇದೇ ಸುಸಂದರ್ಭ…ಬೇಗನೇ ದಾಳಿ ಆರಂಭಿಸಿ’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ತಾನು ಹೇಳಿದ್ದೆ, ಅದರಿಂದ ಕಾರ್ಯಾಚರಣೆ ಶುರುವಾಗಿತು ಎಂದು ಮೋದಿ ಹೇಳಿದ್ದನ್ನು ಜಗತ್ತೇ ಜೋಕ್ ತರಹ ನೋಡುತ್ತಿದೆ.

ಡಿಜಿಟಲ್ ಕ್ಯಾಮೆರಾ, ಇಮೇಲ್ ಮತ್ತು ಪರ್ಸ್‍ಲೆಸ್ ಮೋದಿ

ಅದೇ ಸಂದರ್ಶನದಲ್ಲೇ ಮೋದಿಯವರು 1987-89 ರಲ್ಲೇ ಡಿಜಿಟಲ್ ಕ್ಯಾಮೆರದಲ್ಲಿ ಫೋಟೊ ತೆಗೆದು ದೆಹಲಿಗೆ ಮೇಲ್ ಮಾಡಿದ್ದೆ ಎಂದು ಬೂಸಿ ಬಿಟ್ಟಿದ್ದಾರೆ. ಆಗ ಡಿಜಿಟಲ್ ಕ್ಯಾಮೆರಾವಾಗಲಿ, ಇಮೇಲ್ ಆಗಲಿ ಇರಲಿಲ್ಲ, ಮೋದಿ ಇನ್ನೊಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.

1997-98 ಎನ್ನುವ ಬದಲು ಮೋದೀಜಿ 1987-88 ಎಂದು ಬಾಯ್ತಪ್ಪಿ ಹೇಳಿದ್ದಾರೇನೋ ಎಂದು ಅವರ ಭಕ್ತರು ಈಗ ಸಬೂಬು ಕೊಡ್ತಾ ಇದ್ದಾರೆ. ಅಲ್ರಿ, ರೆಡಿಮೇಡ್ ಪ್ರಶ್ನೆ, ರೆಡಿಮೇಡ್ ಉತ್ತರದಲ್ಲೂ ಈ ರೀತಿ ಬಾಯ್ತಪ್ಪಿ ಹೇಳ್ತಾರಾ? ಇದು ಇನ್ನಷ್ಟು ಮೂರ್ಖತನದ ಸ್ಯಾಂಪಲ್ಲು, ಅದಕ್ಕಿಂತ ಹೆಚ್ಚಾಗಿ ಸುಳ್ಳನ ಎಡವಟ್ಟು!

ಆಯ್ತು ಅದು ಸರಿ ಎಂದಿಟ್ಟುಕಳ್ಳೋಣ….ಅದೇ ಸಂದರ್ಶನದಲ್ಲಿ ಆ ಸಂದರ್ಭದಲ್ಲಿ ತಮಗೆ ಒಂದು ಪರ್ಸ್ ಖರೀದಿಸುವಷ್ಟೂ ಕಾಸು ಇರಲಿಲ್ಲ ಎಂದಿದ್ದಾರೆ. ಆದರೆ 1995ರ ಸುಮಾರಿಗೆ ಒಂದು ಡಿಜಿಟಲ್ ಕ್ಯಾಮೆರಾದ ದರ 5 ಸಾವಿರ ರೂ.ಗಿಂತ ಹೆಚ್ಚಿತ್ತು. 1995ರಲ್ಲಿ ವಿಎಸ್‍ಎನ್‍ಎಲ್‍ನಿಂದ ಒಂದು ಶೆಲ್ ಇಮೇಲ್ ಅಕೌಂಟ್ ಪಡೆಯಲು ವಾರ್ಷಿಕ 5 ಸಾವಿರ ರೂ ಮೇಲೆ ಹಣ ನೀಡಬೇಕಿತ್ತು…ಆಗ ಟಿಸಿಪಿ/ಐಪಿ ಅಥವಾ ಡಿಜಿಟಲ್ ಅಕೌಂಟಿಗೆ ವಾರ್ಷಿಕ 15 ಸಾವರಿದಷ್ಟು ಫೀಸ್ ತೆರಬೇಕಿತ್ತು… ವಿಎಸ್‍ಎನ್‍ಎಲ್‍ಗೂ ಮೊದಲು 1990ರ ದಶಕದ ಮಧ್ಯಭಾದಲ್ಲಿ ‘ಅಕ್ಸೆಸ್ ಮೇಲ್’ ಇಮೇಲ್ ಸೇವೆ ಕೊಡುತ್ತಿತ್ತಾದರೂ, ಅದು ಕೆಲವೇ ಬುಲೆಟಿನ್ ಬೋರ್ಡ್ ಸೇವೆಗಳನ್ನು ಒಳಗೊಂಡಿತ್ತು…
ಸಾರಾಂಶ: ಒಂದು ಸುಳ್ಳು, ಅದರ ಹಿಂದೊಂದು ಸುಳ್ಳು…. ಮೋದಿ ಸಮರ್ಥಿಸಿಕೊಳ್ಳಲು ಹೋದವರೇ ನಾಚಿಕೆ ಪಡಬೇಕಾದ ಸ್ಥಿತಿ!

ಅಂದರೆ, ತಮಗೆ ಬೇಕಾದ ಮಾಧ್ಯಮಗಳಿಗೆ ಸಂದರ್ಶನ ನೀಡುವ ಡೇರ್‍ಡೆವಿಲ್ ಮೋದಿ, ಮೊದಲೇ ಸಂದರ್ಶಕರಿಂದ ಪ್ರಶ್ನೆ ಪಡೆದಿರುತ್ತಾರೆ. ಅಲ್ಲಿ ಯಾವ ಕಠಿಣ ಪ್ರಶ್ನೆಗಳೂ ಇರುವುದಿಲ್ಲ. ಮೋದಿ ಬಯಸಿದ ಪ್ರಶ್ನೆಗಳೇ ಇರುತ್ತವೆ. ಅದಕ್ಕ ಮೋದಿ ಉತ್ತರಗಳನ್ನು ಸಿದ್ಧ ಮಾಡಿಕೊಡು ಬಂದಿರುತ್ತಾರೆ!

ಇದು ಪಕೋಡಾ ಪ್ರಧಾನಿ ಪೇಯ್ಡ್ ಮೀಡಿಯಾಕ್ಕೆ ಪೇಪ್ಪರಮೆಂಟು ತಿನ್ನಿಸುವ, ಪೇಯ್ಡ್ ಮೀಡಿಯಾ ವೀಕ್ಷಕರು/ಓದುಗರನ್ನು ವಂಚಿಸುವ ಪರಿ… ಕಳೆದ 5 ವರ್ಷಗಳಿಂದ ಇದೇ ನಡೆದಿದೆ ಅಲ್ಲವೇ?
ಪೂರ್ಣ ಸಂದರ್ಶನಕ್ಕಾಗಿ ಈ ಕೆಳಗಿನ ವಿಡಿಯೋ ನೋಡಿ:

(ಆಧಾರ: thescroll.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...