Homeರಾಜಕೀಯಮೋದಿ ಗ್ಯಾಸಾಯಣ

ಮೋದಿ ಗ್ಯಾಸಾಯಣ

- Advertisement -
- Advertisement -

ಪ್ರಧಾನಿ ಮೋದಿಯವರು ಮತ್ತೊಂದು ಸೈಂಟಿಫಿಕ್ ಸಂಶೋಧನೆಯಿಂದ ಸುದ್ದಿಗೆ ಬಂದಿದ್ದಾರೆ. ಇತಿಹಾಸವನ್ನು ತಮಗಿಷ್ಟ ಬಂದಂತೆ ಬದಲಿಸುತ್ತಾ, ಬಳುಕಿಸುತ್ತಾ, ತುಳುಕಿಸುತ್ತಾ ಹೋಗುವ ನಮ್ಮ ಪ್ರಧಾನ ಸೇವಕರಿಗೆ ಸೈನ್ಸಿನ ಬಗ್ಗೆಯೂ `ಕೆಟ್ಟ’ ಕುತೂಹಲವಿದೆ; ಭಾರೀ ಪಾಂಡಿತ್ಯವೂ ಇದೆ! ಎಷ್ಟೇ ಆಗಲಿ, ಸಾಕ್ಷಾತ್ ಪರಶಿವನಿಂದ ಗಣಪತಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ, ಗಾಂಧಾರಿಯ ಸಂತಾನಗಳನ್ನು ಟೆಸ್ಟ್ ಟ್ಯೂಬ್ ಬೇಬಿಯಾಗಿಸಿದ, ರಾವಣನ ಪುಷ್ಪಕ ವಿಮಾನದ ಮೂಲಕ ಭಾರತಕ್ಕೆ ವಿಮಾನ ತಂತ್ರಜ್ಞಾನದ ಋಣಭಾರ ಹೊರಿಸಿದ, ಹವಾಮಾನ ವೈಪರೀತ್ಯವನ್ನೇ ತಲೆಕೆಳಗು ಮಾಡಿ ವಯೋವೃದ್ಧ ಸೈಕಾಲಜಿಯಾಗಿಸಿದ, ನಾರ್ಮಲ್ ಡೆಲಿವರಿಗೆ ಸೆಗಣಿ ಜೊತೆ ರಾಸುಗಳ ಮೂತ್ರ ಬೆರಕೆಯ ದಿವ್ಯ ಮೆಡಿಸಿನ್ ಶೋಧಿಸಿದ ವಿಚಾರಧಾರೆಯಿಂದ ಬಂದವರಲ್ಲವೇ ಅವರು.
ಅಷ್ಟಾದರು ಪಾಂಡಿತ್ಯ ಇರದಿದ್ದರೆ ಏನು ಚೆನ್ನ.
ಅರವತ್ತು ಸಾವಿರ ಬೆಲೆಬಾಳುವ ಅಣಬೆ ತಿಂದು ಅದುನ್ನ ಅರಗಿಸಿಕೊಳ್ಳೋ ಸಲುವಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಟೂರು ಹೋಗುವ ಸಂದರ್ಭದಲ್ಲಿ ಹವಾಯಿ ಜಹಾಜಿನೊಳಗೆ ಖಾಲಿ ಕೂರಬೇಕಾದ ಸಂದರ್ಭದಲ್ಲಿ ನಮ್ಮ ಪಕೀರರು ಸುಮ್ಮನೇ ಕಾಲಹರಣ ಮಾಡುವುದಿಲ್ಲ. ವಿಜ್ಞಾನದಲ್ಲಿ ಏನೆಲ್ಲ ವಿಚಿತ್ರ ಸಂಶೋಧನೆಗಳು ನುಸುಳಿಹೋಗಿವೆ ಅನ್ನೋದನ್ನು ಅಧ್ಯಯನ ಮಾಡುತ್ತಿರುತ್ತಾರೆ. ಆ ಅಧ್ಯಯನದಿಂದಲೇ ಅವರಿಗೆ ವಿಜ್ಞಾನದ ಆ ಪಾಂಡಿತ್ಯ ಸಿದ್ಧಿಸಿರೋದು! ಮೊನ್ನೆ, ಅಂದರೆ ಆಗಸ್ಟ್ 10ರಂದು ಅಂತದ್ದೊಂದು `ವಿಶಿಷ್ಟ’ ಅನ್ವೇಷಣೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟು ಜನರ ಶಹಬ್ಭಾಶ್‍ಗಿರಿಗೂ ಭಾಜನರಾಗಿದ್ದಾರೆ.
ಅದು ವಿಶ್ವ ಜೈವಿಕ ಅನಿಲ ದಿನ. ನ್ಯೂಡೆಲ್ಲಿಯ ವಿಜ್ಞಾನ ಭವನದ ಸಭಾಂಗಣ. ರೈತರು, ವಿದ್ಯಾರ್ಥಿಗಳಿಂದ ಶುರುವಾಗಿ ದೊಡ್ಡದೊಡ್ಡ ವಿಜ್ಞಾನಿಗಳೂ ಅಲ್ಲಿ ನೆರೆದಿದ್ದರು. ಮೈಕಿನ ಮುಂದಕ್ಕೆ ಬರುತ್ತಿದ್ದಂತೆಯೇ ಮೋದಿಯವರು ಭಾವಾವೇಶಕ್ಕೆ ತುತ್ತಾಗಿ ಮಾತು ಶುರು ಮಾಡಿದರು. ಮಾತಿನ ನಡುವೆ ಎರಡು ಅದ್ಭುತ ಸಂಶೋಧನೆಗಳನ್ನೂ ಹೊರಗೆಡವಿದರು. ಆ ವಿಚಾರವನ್ನ ಅವರ ಬಾಯಿಂದಲೇ ಕೇಳಿದರೆ ಚೆನ್ನ. ಸೋ, ಓವರ್ ಟು ಪ್ರಧಾನ ಸೇವಕ್‍ಜೀ…..
`ಮಿತ್ರೋಂ, ನಿಮುಗೆ ಒಬ್ಬ ಚಾಯ್‍ವಾಲುನ ಕಥೆ ಹ್ಯೇಳ್ತೀನಿ ಕ್ಯೇಳಿ. ಈ ಚಾಯ್‍ವಾಲುನದೇ ಕಥೆ ಯಾಕೆ ಅನ್ನೋದು ನಿಮುಗೂ ಗೊತ್ತಿರೋ ಇಚಾರುವೇ. ನನಿಗೂ, ಈ ಚಾಯ್‍ಗೂ ಅಂಥಾ ಎಮೋಷುನಲ್ ಕನೆಕ್ಸನ್ ಉಂಟು. ನನ್ನಪ್ಪ ಚಾಯ್ ಮಾಡುವಾಗ ನಾನು ಹೆಲುಪು ಮಾಡುತಿದ್ದೆ. ಹಂಗಾಗಿ ಆ ಕನೆಕ್ಸೆನ್ನು. ಈಗ ಈ ಚಾಯ್‍ವಾಲುನ ಇಚಾರುಕ್ಕೆ ಬರೋಣ. ಈತನ ಅಂಗಡಿ ಪಕ್ಕುದಲ್ಲೇ ಒಂದು ದ್ವೊಡ್ಡ ಗಟಾರ ಹರೀತಿತ್ತು. ದಿನಾ ಕೆಟ್ಟ ವಾಸುನೆ ಅದುರಿಂದ. ಸಹಿಸಿಕೊಳ್ಳಕ್ಕೇ ಆಗುತಿರಲಿಲ್ಲ. ಒಂದಿನ ಅವುನ ದಿಮಾಗಿನಲ್ಲಿ ಒಂದು ಇಚಾರ ಬಂತು. ಸಾಭುವಿಕವಾಗಿ ಕೊಳಕು ಚರಂಡಿಗುಳು ಇರೋ ಕಡೆ ಗ್ಯಾಸೂ ಉತುಪತ್ತಿಯಾಗಿ ಹೊರಕ್ಕೆ ಬರುತಿರುತ್ತೆ’
`ಅವುನು ಒಂದು ಸಣ್ಣ ಬಾಂಡ್ಲಿಯಂಥಾ ಪಾತ್ರೆ ತಕಂಡು, ಅದುನ್ನ ಆ ಗಟಾರುದ ಮ್ಯಾಲೆ ದಬಾಕಿದ. ಅದರ ತಳುಕ್ಕೆ ಒಂದು ತೂತು ಕುಟ್ಟಿ, ಅದರೊಳಕ್ಕೆ ಗ್ಯಾಸ್ ಪೈಪು ತುರುಕಿದ. ಆ ಪೈಪನ್ನು ಸೀದಾ ತಕಂಡೋಗಿ ತನ್ನ ಗ್ಯಾಸ್‍ಸ್ಟೌವ್ವಿಗೆ ಕನೆಕ್ಟು ಮಾಡಿದ. ಗಟಾರುದಿಂದ ಏನು ಗ್ಯಾಸು ಬರ್ತಿತ್ತೊ ಅದು ಪೈಪಿನ ಮೂಲಕ ಸ್ಟೌವಿಗೆ ಬಂತು. ಅವುನು ಚಾಯ್ ತಯಾರು ಮಾಡಕ್ಕೆ ಅದೇ ಗ್ಯಾಸುನ್ನ ಬಳಿಸಿಕ್ಯಂಡ…. ವ್ಹಾವ್, ಎಂಥಾ ಸಿಂಪಲ್ಲುssss ಟೆಕ್ನಾಲಜಿ.’
`ಹಂಗೆ ಇನ್ನೊಂದು ಸಿಂಪಲ್ ಸ್ಟೋರಿ ಬಿಡ್ತೀನಿ ಕ್ಯೇಳಿಸಿಕಳ್ರಿ. ನಾನಿನ್ನು ಗುಜರಾತಿನಲ್ಲಿದ್ದಾಗ, ಒಮ್ಮೆ ನನ್ನ ಬೆಂಗಾವಲು ಸವಾರಿ ಹ್ವೊಂಟಿತ್ತು. ಆಗ ನನ್ನು ಮುಂದುಗಡೇನೆ ಒಬ್ಬ ಸ್ಕೂಡರಿನ್ಯಾಗೆ ಟ್ಯಾಕ್ಟರಿಯ ದ್ವೊಡ್ಡ ಟ್ಯೂಬು ಇರುತ್ತಲ್ಲಾ, ಅದುನ್ನ ಇಟಗಂಡು, ಸರ್ಕಸ್ಸು ಮಾಡಿಕ್ಯಂತ ತಕಂಡು ಹ್ವೊಂಟಿದ್ದ. ಅವುನ ಅವುಥಾರ ನೋಡುದ್ರೆ ಹಿಂದುಗಡೆ ಬರೊ ವಾಹನುದವರಿಗೆ ಭಯ ಆಗುತ್ತಿತ್ತು. ನನಿಗೂ ತಲೆ ಕ್ಯೆಟ್ಟೋಯ್ತು. ಇವುನು ಯಾಕಪಾ ಹಿಂಗೆ ತಗಂಡು ಹೊಂಟವುನೇ ಅಂಥಾ. ತಲೇನಾಗಿ ಚೂರುಪಾರು ಬುದ್ದಿ ಇರೋ ಯಾವನೇ ಮನುಸ್ಯ, ಟ್ಯೂಬಿನಾಗಿರೋ ಗಾಳೀನೆಲ್ಲ ಹೊರಗೆ ಬಿಟ್ಟು, ಖಾಲಿ ಮಾಡಿಕ್ಯಂಡು, ಮಡುಚಿಕ್ಯಂಡು ಸುಲುಭುವಾಗಿ ಹೊಯ್ತಾರೆ. ಸೇರಬೇಕಾದ ಜಾಗ ಮುಟ್ಟಿದ ಮ್ಯಾಲೆ, ಗಾಳಿ ತುಂಬಿಸಿಗಂತಾರೆ. ನನಿಗೆ ತಲೆಕ್ಯೆಟ್ಟು ಅವುನ ಗಾಡೀನ ನಿಲ್ಸಿದೆ. `ಏಯ್, ಅಣ್ಣಾ, ಸಲುಪಾ ನಿಲ್ಲಪ್ಪಾ, ನಿಲ್ಲಪ್ಪಾ, ಅಂದೆ’. `ಯೋನಪಾ ಇದೆಲ್ಲಾ, ಯೋನ್ ಮಾಡುತಾ ಇದೀಯ ನೀನು. ಅಲ್ಲ, ಬಿದ್ದುಗಿದ್ದ್ರೆ ಏಟು ಆಗಲ್ಲುವಾ, ಗಾಯ ಮಾಡಿಕ್ಯಂತೀಯ. ಎಲ್ಲಿಗೆ ಹೊಂಟಿದೀಯ’ ಅಂದೆ. ಹೊಲುಕ್ಕೆ ಹೋಗ್ತಾ ಇವುನಿ ಅಂತ ಅಂದ.
`ಸರಿಯಪ್ಪಾ, ಇದುನ್ಯಾಕೆ ತಗಂಡು ಹೊಯ್ತಾ ಇದೀಯಾ ಅಂತ ಕ್ಯೇಳಿದೆ. ಅದುಕ್ಕೆ ಅವುನಂದ, ನೋಡಿ ಸ್ವಾಮಿ ನನ್ನ ಮನೇಲಿ ಅಡುಗೆ ಮನಿಂದ ಒಂದೀಟು ವೇಸ್ಟೇಜು ಬತ್ತದೆ, ಜ್ವೊತೀಗೆ ನನ್ನತಾವ ಇರೋ ಎಲ್ಡು ಪಸುಗಳ ಗೊಬ್ಬರನುವೇ ಸೇರುಸಿ ಮನೆ ಹತ್ರಾನೆ ಗೋಬರ್ ಗ್ಯಾಸು ಉತುಪಾದನೆ ಮಾಡಿಕ್ಯಂತೀನಿ. ಆ ಗ್ಯಾಸುನ್ನ ಈ ಟ್ಯೂಬಿನೊಳಿಕ್ಕೆ ತುಂಬಿಸಿಕ್ಯಂಡು ಹೊಲುಕ್ಕೆ ತಗೊಂಡೋಗಿ ಆ ಗ್ಯಾಸಿನಿಂದ ನನ್ನ ಪಂಪು ಓಡಿಸಿ, ನೀರು ಹಾಯಿಸಿಕೊಳ್ತೀನಿ ಅಂದ.’
`ನೀವು ಕಲುಪನೆ ಮಾಡ್ಕ್ಯಳಿ ನಮ್ಮ ದೇಶುದ ರೈತೃ ಎಂಥಾ ಟೆಕ್ನಾಲಜಿಸ್ಟುಗಳು ಅಂತಾ…’
(ಕೂತಿದ್ದ ಮಹಾತ್ಮರಿಂದ ಚಪ್ಪಾಳೆ.. ಚಪ್ಪಾಳೆ… ಚಪ್ಪಾಳೆ….)
ಮೋದಿಯವರು ಇಂಥಾ ಜೋಡಿಕಥೆ ಹೊಡೆದಿದ್ದೇ ತಡ ಟ್ವಿಟ್ಟರಿಗರು ಶ್ಯಾನೆ ತಪರಾಕಿ ಕೊಡಲು ಶುರು ಮಾಡಿದರು. ಬೆಚ್ಚಿಬಿದ್ದ ಮೋದಿ ಬ್ರ್ಯಾಂಡಿನ ಟೀವಿ ಚಾನೆಲ್ಲುಗಳು, ಭಕ್ತ ಮಂಡಳಿ ಏನೇನೊ ತೇಪೆ ಹಚ್ಚಲು ಮುಂದಾಯ್ತು. ಛತ್ತೀಸ್‍ಗಢದ ಶ್ಯಾಂ ರೈ ಎಂಬ ಚಾಯ್‍ವಾಲನ ಕಥೆಯನ್ನೇ ಮೋದಿ ಹೇಳಿದ್ದು ಅಂತ ಅವನ ಸಂಶೋಧನೆ ಬಗ್ಗೆ ವಿವರಿಸಲು ಮುಂದಾದರು. ಅಸಲಿಗೆ ಆ ಶ್ಯಾಂ ರೈ ಕೂಡಾ ಗಟಾರದ ಮೇಲೆ ಪಾತ್ರೆ ದಬಾಕಿ ಗ್ಯಾಸು ಸಂಶೋಧನೆ ಮಾಡಿರಲಿಲ್ಲ. ಗೋಬಲ್ ಪ್ಲ್ಯಾಂಟ್ ಪ್ರಕಾರ ಚರಂಡಿಯ ಕೊಚ್ಚೆಯನ್ನು ಸಂಶೋಧಿಸಿ ಗ್ಯಾಸ್ ಉತ್ಪಾದಿಸಿದ್ದ! ಇನ್ನು ಮೋದಿ ಸಾಹೇಬರಿಗೆ ಬಿಸಿ ಮುಟ್ಟಿಸಿದ ಟ್ವಿಟ್ಟರ್ ಮತ್ತು ಕಾರ್ಟೂನ್ ಸ್ಯಾಂಪಲ್‍ಗಳು ಇಲ್ಲಿವೆ ನೋಡಿ.
ಟ್ವಿಟ್ಟರ್ 1 (ಪರ್ವೇಜ್): ಜಿಪಿಜಿ (ಗಟಾರ ಉತ್ಪಾದಿತ ಗ್ಯಾಸು) ಕಂಡುಹಿಡಿದಿದ್ದಕ್ಕೆ ನಮ್ಮ ಭಾರತ ಸರ್ಕಾರ ನರೇಂದ್ರ ಹಾಕಿನ್ಸ್ ಮೋದಿಯವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು.
ಟ್ವಿಟ್ಟರ್ 2 (ರಾಗಾ-ದಿ ವಾರಿಯರ್) : ಬಹುಶಃ ಮಿಸ್ಟೇಕ್ಕೇ ಆಗಿರಬಹುದು, ಆದರೂ ಪ್ರಧಾನಿ ಮೋದಿಯವರು ನೈಟ್ರಸ್ ಆಕ್ಸೈಡ್ ಅಲ್ಲದೆ ಹೊಸದೊಂದು ನಗೆ ಅನಿಲವನ್ನು ಶೋಧಿಸಿದ್ದಾರೆ. ಆ ಗ್ಯಾಸನ್ನ ನಮೋ ಆಕ್ಸೈಡ್ ಅನ್ನಬಹುದು.
ಟ್ವಿಟ್ಟರ್ 3 (ಪೋಲಿ ಸರ್ಕಾರ್): ಪ್ರಧಾನಮಂತ್ರಿ ಉಜ್ವಲ ಯೋಜನೆಯ ಭಾಗವಾಗಿ ಇನ್ಮುಂದೆ ಒಳಚರಂಡಿ ಮತ್ತು ಗಟಾರಗಳನ್ನ ರಾಷ್ಟ್ರೀಯ ಖಜಾನೆಗಳನ್ನಾಗಿ ಘೋಷಿಸಬಹುದು.
ಟ್ವಿಟ್ಟರ್ 4 (ಹಿಸ್ಟರಿ ಆಫ್ ಇಂಡಿಯಾ): ಡಾ.ಹೋಮಿ ಜುಬಾನ್‍ಗಿರಿ ಬಾಬಾರವರು, ಗಟಾರ ಮತ್ತು ಮ್ಯಾನ್‍ಹೋಲ್ ವಿಷಾನಿಲಗಳನ್ನು ಬಳಸಿಕೊಂಡು ಅಡುಗೆ ಮಾಡುವ ತಮ್ಮ ಸಂಶೋಧನಾ ಪ್ರಬಂಧವನ್ನು ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ ಮಂಡಿಸುತ್ತಿದ್ದಾರೆ. (ಮೋದಿಯವರು ಭಾಷಣ ಮಾಡಿದ ವೀಡಿಯೋ ಲಿಂಕ್ ಉದ್ದೇಶಿಸಿ)
ಟ್ವಿಟ್ಟರ್ 5 (ಸಂಜೀವ್ ಭಟ್, ಐಪಿಎಸ್): ಎಲ್‍ಎನ್‍ಜಿ (ಲಿಕ್ವಿಡ್ ನಾಲಾ ಗ್ಯಾಸ್) ಸಂಶೋಧನೆಗಾಗಿ ಮುಂದಿನ ವರ್ಷದ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಮೋದಿಯವರ ಹೆಸರನ್ನು ನಾಮನಿರ್ದೇಶನ ಮಾಡುವುದಾಗಿ ಯುನೆಸ್ಕೋ ಘೋಷಿಸಿದೆ.
ಟ್ವಿಟ್ಟರ್ 6 (ಮಹಾರಾಣ ಬಲವರ್ಧನ್): ಬ್ರೇಕಿಂಗ್ ನ್ಯೂಸ್!…. ಮೋದಿಯವರ ಗಟಾರ ಗ್ಯಾಸ್ ಸಂಶೋಧನೆ ನಂತರ ಚರಂಡಿ ಅಕ್ಕಪಕ್ಕದ ಸೈಟುಗಳ ಬೆಲೆ ರಾಕೆಟ್ಟಿನಂತೆ ಏರತೊಡಗಿದೆ.
ಟ್ವಿಟ್ಟರ್ 7 (ರಾಣಾ ಬೇಗಂ): ಅನಿಲದ ಹೆಸರು-ಮಿತೋಜನ್, ಅನ್ವೇಷಣೆಯಾದ ವರ್ಷ-2018, ಅನುಕೂಲ-ನೇರವಾಗಿ ಚರಂಡಿಗಳಿಂದಲೇ ಸಂಗ್ರಹಿಸಬಹುದು, ಉಪಯೋಗಗಳು- ಗೃಹೋಪಯೋಗಿಯಾಗಿ ಅಡುಗೆ ಮಾಡಲು ಬಳಸಬಹುದು, ರಾಜಕೀಯವಾಗಿ ನೈಜ ಸವಾಲುಗಳಿಂದ ಜನರ ಚಿತ್ತವನ್ನು ಬೇರೆಡೆ ತಿರುಗಿಸಲು ಬಳಸಬಹುದು. ಇದನ್ನು ಸೇವಿಸಿದ ವ್ಯಕ್ತಿ ಜುಮ್ಲಾಗಳಿಗೆ ಬಲಿಯಾದರೆ, `ಭಕ್ತ’ನಾಗಿ ಬದಲಾಗುವನು.
ಟ್ವಿಟ್ಟರ್ 8 (ಜಿಯೋ ಇನ್ಸ್‍ಟಿಟ್ಯೂಟ್) : ನಾವು ಜಿಯೋ ಕ್ಯಾಂಪಸ್‍ನಲ್ಲಿ ಭಕ್ತರಿಗಾಗಿ ಚಹಾ ಮಾಡುವ ಸ್ಪರ್ಧೆಯನ್ನ ಏರ್ಪಡಿಸಿದ್ದೇವೆ. ತಳಕ್ಕೆ ತೂತು ಕುಟ್ಟಿದ ಒಂದು ಪಾತ್ರೆ, ಒಂದು ಪೈಪು, ಒಂದು ಬರ್ನರ್ ಮತ್ತು ಒಂದು ಚರಂಡಿಯನ್ನು ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗುವುದು. ರೂಫಿ ಗಾಂಧಿಯವರು ಸ್ಪರ್ಧೆಯ ವಿಶೇಷ ಅತಿಥಿ ಮತ್ತು ತೀರ್ಪುಗಾರರೂ ಆಗಿರುತ್ತಾರೆ.
ಟ್ವಿಟ್ಟರ್ 9 (ಅರವಿಂದ ಕೇಜ್ರಿವಾಲ್); ಅದುಕ್ಕೇ ಹೇಳೋದು, ಓದು ಬರಹ ತಿಳಿದೋರೆ ಪ್ರಧಾನಮಂತ್ರಿ ಆಗಬೇಕು ಅಂತ..
ಟ್ವಿಟ್ಟರ್ 10 (ಸಾಗರಿಕಾ ಘೋಷ್): ಎಂಥಾ ನಿಬ್ಬೆರಗಾಗುವ ಸಂಶೋಧನೆ! ಪಾಶ್ಚಿಮಾತ್ಯ ವಿಜ್ಞಾನಿಗಳು ಇದುವರೆಗೆ ಇಂಥದ್ದನ್ನು ಶೋಧಿಸಿದ್ದರಾ?
ಟ್ವಿಟ್ಟರ್ 11 (ಶಾಹೀದ್ ಸಿದ್ದಿಕಿ): ಅಯ್ಯೋ, ದೇವರೆ, ಎಂಥಾ ಗ್ರೇಟ್ ಐಡಿಯಾ! ಅವರು ಯಾಕೆ ಇಷ್ಟೊಂದು ಮಹಾನ್ ನಾಯಕ ಅಂತ ಈಗ ಗೊತ್ತಾಯ್ತು. ದೇಶಕ್ಕಾಗಿ ಗಟಾರ ಆರ್ಥಿಕತೆ/ಗಟಾರ ಉದ್ಯೋಗಗಳು/ಗಟಾರ ಐಡಿಯಾಗಳು
ಟ್ವಿಟ್ಟರ್ 12 (ಅತುಲ್ ಖಾತ್ರಿ): ಕಳೆದ ರಾತ್ರಿ ನಾನು ಸಿಕ್ಕಾಪಟ್ಟೆ ಕಡ್ಲೆ ತಿಂದಿದ್ದೆ. ಬೆಳಿಗ್ಗೆ ನನ್ನ ಆ ಗ್ಯಾಸು ಬಳಸಿಕೊಂಡೇ ಚಾಯ್ ಮಾಡಿಕೊಂಡೆ….
ಟ್ವಿಟ್ಟರ್ 13 : ಮೋದಿಯವರದು, ಸ್ಥಾಪನೆಯೇ ಆಗಿರದ ಜಿಯೋ ಇನ್ಸ್‍ಟಿಟ್ಯೂಟ್‍ನ ಪ್ರಪ್ರಥಮ ಪಿಎಚ್‍ಡಿ ಸಂಶೋಧನಾ ಪ್ರಬಂಧ.

– ಜೀಟಿ ಮಾಚಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...