Homeಮುಖಪುಟಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

ಮೋದಿಯವರು ಲೋಕಲ್‌ ವೋಕಲ್‌ ಭಾಷಣ: ಅವರು ಯಾವ ಲೋಕಲ್ ತಾಲೂಕದಾರಿ ಬಗ್ಗೆ ಮಾತಾಡತಾರ?

- Advertisement -
- Advertisement -

ಈ ದೇಶದಾಗ ಲೋಕಲ್ ಅನ್ನೋ ಶಬ್ದಕ್ಕ ಬ್ಯಾರೆ ಬ್ಯಾರೆ ಕಡೆ ಬ್ಯಾರೆ ಬ್ಯಾರೆ ಅರ್ಥ ಅದಾವು. ಹಾವೇರಿ ಒಳಗ ಲೋಕಲ್ ಅಂದರ ದ್ಯಾಮನೂರು ಮೆಣಸಿನಕಾಯಿ, ಗುಲಬರ್ಗಾದಾಗ ಲೋಕಲ್ ಅಂದರ ಸಣ್ಣ ತೊಗರಿ ಬ್ಯಾಳಿ, ಮೈಸೂರಿನ್ಯಾಗ ಲೋಕಲ್ ಅಂದರ ಬನ್ನೂರು ಕುರಿ, ಇನ್ನ ಮುಂಬಯಿದಾಗ ಲೋಕಲ್ ಅಂದರ ಟ್ರೇನು.

ಹಂಗಾರ, ಹೋದ ಮಂಗಳವಾರ ಪಂತ ಪ್ರಧಾನರು ಠೀವಿಯೊಳಗ ಹೇಳಿದ ಲೋಕಲ್ ಅಂದರೆ ಏನು? ಅವರ ಭಾಷಣ ಇನ್ನೂ ಅರ್ಧ ಆಗಿರಲಿಲ್ಲ, ಆವಾಗನ ಐಟಿ ಸೆಲ್ಲಿನವರು ನೂರಾ ಎಂಟು ಮೀಮು ಮಾಡಿದರು. ಅವನ್ನು ನೀವು ಠೀವಿ ಪರದೆ ಬಿಟ್ಟು ನಿಮ್ಮ ಅಂಗೈಯೊಳಗಿನ ಪರದೆ ಮ್ಯಾಲೆ ಕಣ್ಣು ಹಾಕೋ ಕಿಂತ ಮುಂಚೆ

ಆ ಮೀಮುಗಳು ಒಂದು ಅಕ್ಷೋಷಿಣಿ ಸಂಖ್ಯೆಯೊಳಗ ಷೇರು, ಲೈಕು, ಕಮೆಂಟು ಆಗಿ ಹೋದವು.

ಅದರಾಗ ಒಂದು ಮೀಮು ʻಬಿ ವೋಕಲ್ ಅಬೌಟ್ ಲೋಕಲ್ʼ ಅಂತ ಇತ್ತು. ಅದನ್ನು ಪಂತ ಪ್ರಧಾನರು ಹೇಳಿರದಿದ್ದರೂ ಐಟಿ ಸೆಲ್ಲಿನವರು ಹೇಳಿದರು. ಒಮ್ಮೊಮ್ಮೆ ಇವರನ್ನ ನೋಡಿ ಅವರು ಮಾತಾಡತಾರೋ ಅಥವಾ ಅವರನ್ನು ನೋಡಿ ಇವರು ಮಾತಾಡತಾರೋ ಗೊತ್ತಾಗೋದಿಲ್ಲ. ಐಟಿ ಸೆಲ್ಲಿನವರ ಭಾಷಣ ಪಂತ ಪ್ರಧಾನರು ಬರೀತಾರೋ, ಅಥವಾ ಪಂತ ಪ್ರಧಾನರ ಭಾಷಣ ಐಟಿ ಸೆಲ್ಲಿನವರು ಬರೀತಾರೋ ಗೊತ್ತಿಲ್ಲ.

ಈ ಐಟಿ ಸೆಲ್ಲಿನವರು ಹಂಗ ಇದ್ದಾರ ಅಂದರ ನಮ್ಮ ನಾಯಕರು ನಮ್ಮದು ʻಸ್ವದೇಶಿ ಸಿದ್ಧಾಂತʼ ಅಂತ ಹೇಳಿದಾಗ ನಾವು ಚಪ್ಪಾಳೆ ಹೊಡೆಯೋ ಮಾಡತಾರ. ಸ್ವದೇಶಿ ಹಳೆಯದು, ಈಗ ಬೇಕಾಗಿರೋದು ʻಮೇಕ್ ಇನ್ ಇಂಡಿಯಾʼ ಅಂದಾಗುನೂ ಮಾಡತಾರ, ಕಡೀಕೆ ʻನಾವು ಆತ್ಮ ನಿರ್ಭರರಾಗಿ ಇರಬೇಕು. ನಾವೆಲ್ಲಾ ಲೋಕಲ್ ಕಡೆ ನೋಡಬೇಕುʼ ಅಂತ ಅಂದಾಗುನೂ ನಾವು ಅವರನ್ನ ಬೆಂಬಲಿಸೋಹಂಗ ಮಾಡತಾರ. ಅದು ಹೆಂಗ ಅಂದರ ತಲಿ ಅವರದು, ತಲಿ ಬುರಡಿ ನಮ್ಮದು. ಅಷ್ಟ ಆಗೋದರಾಗ ಬುರುಡಿ ಬಿಡೋರು ಯಾರು ಅಂತ ಗೊತ್ತಾಗೋದಿಲ್ಲ.

ಇರಲಿ, ಲೋಕಲ್ಲು ಅನ್ನೋದರ ಅರ್ಥ ʻಸ್ಥಳೀಯʼ, ʻಮಕಾಮಿʼ, ಅಥವಾ ʻತಾಲೂಕದಾರಿʼ ಅಂತ ಆಗತದ. ಹಂಗಂದರೇನು? ಹಂಗಂದರ ಸ್ಥಳೀಯರ ದುಡ್ಡು, ಅಧಿಕಾರ, ಅವರ ಜೀವಕ್ಕ ಸಂಬಂಧ ಪಟ್ಟ ನಿರ್ಧಾರಗಳನ್ನ ಅವರೇ ತೊಗೋಬೇಕು ಅನ್ನೋದು. ಅಧಿಕಾರ ಅನ್ನೋದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಹರಿದು ಬರಬೇಕು, ಆಡಳಿತದೊಳಗ ಸರಿಸಮನಾದ ಭಾಗಿದಾರಿ ಇರಬೇಕು. ಇದನ್ನ ಮಾಡಲಿಕ್ಕೆ ಈ ಸರಕಾರದವರು ತಯಾರು ಇದ್ದಾರೇನು?

ಮೊದಲಿಗೆ ಆ ಕಿತ್ತಳೆ ಪಕ್ಷದವರು ಒಕ್ಕೂಟ ವ್ಯವಸ್ಥೆಯೊಳಗ ನಂಬಿಕೆ ಇಟಗೋಬೇಕು. ಅದರ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ನೀತಿ ನಿರೂಪಣೆಯೊಳಗ, ಕಾರ್ಯಕ್ರಮ ಜಾರಿಯೊಳಗ ಭಾಗವಹಿಸಲಿಕ್ಕೆ ರಾಜ್ಯಗಳಿಗೆ ಅವಕಾಶ ಕೊಡಬೇಕು. ಇದನ್ನ ಇವರು ಈಗಂತೂ ಮಾಡಲಿಕ್ಕೆ ಹತ್ತಿಲ್ಲ. ಇವರು ಬಂದಾಗಿನಿಂದ ಕೇಂದ್ರೀಕರಣನ ಜಾಸ್ತಿ ಆಗೇದ ಹೊರತು ವಿಕೇಂದ್ರೀಕರಣ ಇಲ್ಲ. ಯಾರು ಏಕೋಪಾಧ್ಯಾಯ ಶಾಲೆ ರೀತಿಯೊಳಗ ಏಕ ವ್ಯಕ್ತಿ ಸರಕಾರ ನಡಸತಾರೋ, ಯಾರು ಇರೋಬರೋ ಅಧಿಕಾರನ್ನೆಲ್ಲಾ ಕೇಂದ್ರದ ಮಂತ್ರಿಮಂಡಲಕ್ಕಿಂತ ಪ್ರಧಾನಿ ಕಚೇರಿಯೊಂದರ ಒಳಗ ತುರುಕಿ ಬಿಟ್ಟಾರೋ, ಅವರು ಗ್ರಾಮ ಪಂಚಾಯಿತಿ ಮಟ್ಟಕ್ಕ ಅಧಿಕಾರ ವಿಕೇಂದ್ರೀಕರಣ ಮಾಡರಿ ಅಂದರ ಕೇಳತಾರ?

ಇನ್ನ ವಿಕೇಂದ್ರೀಕೃತ ಆರ್ಥಿಕತೆ. ಸರಳವಾಗಿ ಹೇಳಬೇಕಂದರ ಅದು ಹಳ್ಳೀ ಸಾಮಾನು ಹಳ್ಳಿಯೊಳಗ ಮಾರಾಟ ಆಗಬೇಕು, ಅನ್ನೂ ಸೂತ್ರದ ಮ್ಯಾಲೆ ನಿಂತಿರೋದು. ಇದರಾಗ ಇವರಿಗೆ ನಿಜವಾಗಿಯೂ ನಂಬಿಕೆ ಅದ ಏನು? ತಾವು ನೂರಾರು ವರ್ಷದಿಂದ ಹೇಳತಾ ಬಂದಿದ್ದ ಸ್ವದೇಶಿ ಸೂತ್ರವನ್ನು ಧಡಕ್ಕನೇ ಬದಲಾಯಿಸಿ ಮೇಕ್ ಇನ್ ಇಂಡಿಯಾ ತಂದವರು ಇವರು. ಭಾರತೀಯ ಕಂಪನಿಗೆ ಕಾರುಬಾರು-ಲಾಭ ಸಿಗಬೇಕು. ಅದಕ್ಕ ನೀವು ಕಾಲ್ಗೇಟು ಬಿಟ್ಟು ಉಪ್ಪಿನಿಂದ ಹಲ್ಲು ತಿಕ್ಕರಿ, ಹಾಲಿನಿಂದ ದಾಡಿ ಮಾಡಿಕೊಳ್ಳಿರಿ ಅಂತ ಹೇಳತಿದ್ದವರು ಏಕಾಏಕಿ ಯಾವ ದೇಶದ ಕಂಪನಿ ಆದರೇನು ಭಾರತದಾಗ ಕಾರಖಾನೆ ಹಾಕಿದರ ಸಾಕು ಅಂತ ಭಾರತದಲ್ಲಿ ತಯಾರಿಸಿ ಅಂತ ಫರಮಾನು ಕೊಟ್ಟರು. ಈಗ ಈ ಕೊರೋನಾದಾಗ ಅದು ಉಲ್ಟಾ ಹೊಡದಂಗ ಕಾಣೋದಕ್ಕ ಮತ್ತ ಲೋಕಲ್ಲಿಗೆ ಬಂದಾರ.

ಗ್ರಾಮ ಉದ್ಯೋಗ, ಖಾದಿ, ಹಳ್ಳಿಗಳ ಕಾಯಿಪಲ್ಯಾ ಸಂತಿ- ದನದ ಸಂತಿ, ಉತ್ಸವ- ಜಾತ್ರಿ- ತೇರು ಇವು ಈ ದೇಶದ ಆರ್ಥಿಕತೆಗೆ ಎಷ್ಟು ಕೊಡುಗೆ ಕೊಡತಿದ್ದವು ಅನ್ನೋದು ಎಲ್ಲಾರಿಗೂ ಮರತು ಹೋಗುವಂತೆ ಮಾಡಿ. ಬರೇ ಐಟಿ-ಬಿಟಿ, ಮೈನಿಂಗು, ಅದಾನಿ -ಅಂಬಾನಿ, ಮಾತ್ರ ಖರೇ. ಬ್ಯಾರೆ ಎಲ್ಲಾ ಸುಳ್ಳು ಅಂತ ನಮ್ಮನ್ನ ನಂಬಿಸಿದರು.

ಇವರು ಲೋಕಲ್ಲಿನ ಬಗ್ಗೆ ವೋಕಲ್ಲು ಆಗೋದನ್ನ ನಂಬಲಿಕ್ಕೆ ಸಾಧ್ಯ ಇಲ್ಲ.

ಹಂಗಾದರ ಇಷ್ಟು ದಿವಸ ಜಾಗತಿಕ ಮಟ್ಟದ ಯೋಚನೆ ಇಟಗೋರಿ, ಇಡೀ ಜಗತ್ತಿನ ಮಾರುಕಟ್ಟೆಯೊಳಗ ಸ್ಪರ್ಧೆ ಮಾಡೋವಂಥಾ ಉತ್ಪನ್ನ ತಯಾರು ಮಾಡ್ರಿ, ನಿಮ್ಮ ಐಟಿ, ಬಿಟಿ ಸೇವೆ ಹೆಂಗ ಇರಬೇಕು ಅಂದರ ಅದು ವಿಶ್ವದ ಇತರ ದೇಶಗಳನ್ನ ಸೋಲಿಸಿ ಮುಂಚೂಣಿಗೆ ಬರಬೇಕು, ಅಂತ ಭಾಷಣ ಕುಟ್ಟತಿದ್ದರಲ್ಲಾ ಅದು ಏನಾತು?

ʻʻಸ್ವಾತಂತ್ರ‍್ಯ ಅಂದರ ವಿಕೇಂದ್ರೀಕರಣ. ವಿಕೇಂದ್ರೀಕರಣ ಇಲ್ಲದಿದ್ದರೆ ಸ್ವಾತಂತ್ರ‍್ಯಕ್ಕೆ ಅರ್ಥ ಇಲ್ಲ.

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉಳಿಯದಿದ್ದರೆ ಈ ದೇಶ ಉಳಿಯೋದಿಲ್ಲʼʼ ಅಂತ ಹಿಂದೊಮ್ಮೆ ಇನ್ನೊಬ್ಬ ಗುಜರಾತಿ ನಾಯಕ ಹೇಳಿದ್ದರು. ಈ ದುರಿತ ಕಾಲದಾಗ ನಾವು ಆ ವಿಚಾರಗಳನ್ನು ನಮ್ಮ ಮುಂದ ಇಟ್ಟ ಮೋಹನದಾಸ ಗಾಂಧಿ ಅವರನ್ನು ನೆನಪು ಮಾಡಕೊಳ್ಳೋದು ನಮಗ ಸ್ವಲ್ಪವಾದರೂ ಸಮಾಧಾನ ತರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...