Homeಅಂಕಣಗಳುಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

ಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

- Advertisement -
- Advertisement -

ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ ದಿಕ್ಕಿನಲ್ಲಿ ಕೆಲಸ ಮಾಡಿದರು. ದೇವರ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ, ಧಾರ್ಮಿಕ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವ ಮತ್ತು ಸಮಾಜೋಧಾರ್ಮಿಕ ದೃಷ್ಟಿಯನ್ನು ವ್ಯಕ್ತಿಯು ನೇಮ ಮತ್ತು ನಿಷ್ಠೆಯ ಮೂಲಕ ಅನುಷ್ಠಾನಕ್ಕೆ ತರಲು ಬೇಕಾದಂತಹ ವಿಧಾನಗಳನ್ನು ಖಚಿತತೆಯಿಂದ ಮನಗಾಣಿಸಿದ್ದು, ಕ್ರಮಗೊಳಿಸಿದ್ದು ಪ್ರವಾದಿ ಮಹಮದ್. ತತ್ವ, ನಿಯಮ, ಒಳನೋಟ, ಬಹಳ ಮುಖ್ಯವಾಗಿ ದಾರಿ; ಇತ್ಯಾದಿಗಳನ್ನು ದಾಖಲಿಸಿದ್ದು ಕುರಾನಿನಲ್ಲಿ.

ಮಹಮದ್: ಹಿಸ್ ಲೈಫ್ ಬೇಸ್ಡ್ ಆನ್ ದ ಅರ್ಲಿಯೆಸ್ಟ್ ಸೋರ್ಸಸ್ ಎಂಬ ಮಾರ್ಟಿನ್ ಲಿಂಗ್ಸ್ ಅವರ ಪುಸ್ತಕವು ಮಹಮದರ ಜೀವನವನ್ನು ಬೇರಾವ ಪುಸ್ತಕದಲ್ಲಿಯೂ ನೀಡದಿರುವಷ್ಟು ವಿವರಗಳಿಂದ ಕಟ್ಟಿಕೊಡುತ್ತದೆ. ಬೋಳುವಾರು ಮಹಮದ್ ಕುಂಯ್ಞಿ ಅವರ ’ಓದಿರಿ’ ಕಾದಂಬರಿಯನ್ನು ಓದಿದರೆ ಮಹಮದರ ಜೀವನ ಚಿತ್ರಣವನ್ನು ಕಟ್ಟಿಕೊಳ್ಳಲು ಬಹುಪಾಲು ಸಾಧ್ಯವಾಗುತ್ತದೆ. ಈ ಎರಡೂ ಪುಸ್ತಕಗಳಲ್ಲಿ ಯಾವುದನ್ನೇ ಮೊದಲು ಓದಿದರೂ ಮತ್ತೊಂದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಮಾರ್ಟಿನ್ ಅವರ ಪುಸ್ತಕದ ಶಕ್ತಿಯೇ ಪುರಾತನ ಅರಬರ ಆಕರಗಳನ್ನು ಆಧರಿಸಿ ಬರೆದಿರುವುದು. ಅವುಗಳಲ್ಲಿ ಬಹಳಷ್ಟು ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡಿವೆ. ಹಾಗಂತ ಇದು ಮಹಮದರ ಬಗ್ಗೆ ಇರುವ ಇತರ ಬರಹಗಳಿಗೆ ವಿರೋಧಾಭಾಸವಾಗಿಯೇನೂ ಇಲ್ಲ. ಬದಲಾಗಿ ಒಳನೋಟಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

PC : Beyaz Tarih

ಮಹಮದರ ಸಮಕಾಲೀನರು ಮತ್ತು ಅವರ ಜೀವನಶೈಲಿ ಮತ್ತು ಕೆಲಸಗಳನ್ನು ನೇರವಾಗಿ ಸಾಕ್ಷೀಕರಿಸಿರುವವರ ಮಾತುಗಳು ಅರಬ್ ಸಾಹಿತ್ಯದಲ್ಲಿ ದಾಖಲಾಗಿವೆ. ಅವುಗಳನ್ನೂ ಮಾರ್ಟಿನ್ ಮುಖ್ಯವಾಗಿ ಆಕರವನ್ನಾಗಿ ಬಳಸಿಕೊಂಡಿದ್ದಾರೆ. ಇಸ್ಲಾಮಿನ ಮತ್ತು ಅರಬ್ಬರ ಚರಿತ್ರೆಯ ಮೈಲಿಗಲ್ಲುಗಳನ್ನು ಮತ್ತು ಮಹಮದರ ಜೀವನದ ಗತಿಯನ್ನು ಕಾಲಾನುಕ್ರಮಣಿಕೆಯ ಆಧಾರದಲ್ಲಿಯೇ ಮಾರ್ಟಿನ್ ಬರೆಯುತ್ತಾರೆ. ಹಾಗಾಗಿ ಇದು ಇತಿಹಾಸ ಅಧ್ಯಯನ ಮಾಡುವವರಿಗೆ ಮಾತ್ರವಲ್ಲದೇ ಸಂಶೋಧನಾಸಕ್ತಿ ಇರುವವರಿಗೂ ಒಂದು ಮುಖ್ಯ ಆಕರವಾಗಿ ಪರಿಣಮಿಸುತ್ತದೆ.

ಇದು ಕಾದಂಬರಿಯಲ್ಲದಿದ್ದರೂ ಭಾಷೆಯ ಸರಳ ಶೈಲಿ ಮತ್ತು ಓಘದ ರೀತಿಯು ಕತೆಯನ್ನು ಓದಿಸುವಷ್ಟೇ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಸ್ಲಾಮಿನ ಬೋಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದ ಇದು ಮಹಮದರ ಜೀವನವನ್ನೇ ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಇಂಗ್ಲೆಂಡಿನ ಇಂಗ್ಲಿಷಾದರೂ ಜಾಗತಿಕ ಮಟ್ಟದ ಇಂಗ್ಲಿಷಿನ ಸರಳತೆಯನ್ನು ಹೊಂದಿದೆ. ಇತಿಹಾಸದ ದೃಷ್ಟಿಯಲ್ಲಿ ಇದರಲ್ಲಿರುವ ನಿಖರತೆಯ ಕಾರಣ ಇದನ್ನು ಇಂಗ್ಲಿಷ್ ಭಾಷೆಯಲ್ಲಿರುವ ವ್ಯಕ್ತಿಚರಿತ್ರೆಗಳ ಸಾಲಿನಲ್ಲಿ ಬಹಳ ಮಹತ್ವದ ಪುಸ್ತಕವನ್ನಾಗಿ ಪರಿಗಣಿಸುತ್ತಾರೆ.

ಆದರೆ, ಈ ಪುಸ್ತಕವು ಸುದೀರ್ಘಕಾಲಿನ ವಿಷಯಭರಿತವಾಗಿದೆ ಎಂದು ಅರಬ್ಬಿನ ಸಂಪ್ರದಾಯವಾದಿಗಳು ಟೀಕಿಸಿರುವುದುಂಟು. ಆದರೆ, ಅರಬ್ ಭಾಷೆಯ ನಿಯತಕಾಲಿಕಗಳಲ್ಲಿ ಮಾರ್ಟಿನ್ ಅವುಗಳಿಗೆಲ್ಲಾ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಪ್ರಾಯಶಃ ಮಾರ್ಟಿನ್ ಅವರ ಬರಹಗಳಲ್ಲಿ ಇಸ್ಲಾಮಿನ ತಾತ್ವಿಕತೆಯು ಸೂಫಿ ಪಂಥದ ಛಾಯೆಯನ್ನು ಪಡೆದುಕೊಳ್ಳುವುದರ ಕಾರಣವೂ ಈ ಬಗೆಯ ವಿರೋಧಗಳನ್ನು ಎದುರಿಸಿದ್ದಿರಬಹುದು. ಇವರನ್ನು ಹತ್ತಿರದಿಂದ ಬಲ್ಲವರು ಸೂಫಿ ಸಂತರೆಂದೇ ಕರೆಯುತ್ತಿದ್ದರು. ಬೌದ್ಧಿಕವಾಗಿ ಮನವೊಲಿಸುವ ಕಲೆಯಂತೂ ಮಾರ್ಟಿನರಿಗೆ ಕರಗತವಾಗಿದ್ದು, ಮುಸಲ್ಮಾನೇತರರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು.

ಪ್ರಾಟಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ ಮಾರ್ಟಿನ್ ನಾಸ್ತಿಕರಾಗಿ ಪರಿವರ್ತನೆ ಹೊಂದಿದ್ದರು. ಅನೇಕ ಐರೋಪ್ಯ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದ ಮಾರ್ಟಿನ್ ಅವರ ಈಜಿಪ್ಟಿನ ಹೆಂಡತಿಯ ಜೊತೆ ಸಂವಹನ ನಡೆಸಲು ಅರಬ್ ಭಾಷೆಯನ್ನು ಕಲಿತರು. ನಂತರ ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾದ ಮಾರ್ಟಿನ್ ಇಸ್ಲಾಂ ಸ್ವೀಕರಿಸಿದರು. ಧಾರ್ಮಿಕತೆಯಲ್ಲದ ಆಧ್ಯಾತ್ಮಿಕತೆಯ ಒಲವನ್ನು ಹೊಂದಿದ್ದ ಮಾರ್ಟಿನ್ ಸೂಫಿಯ ರೀತಿ ನೀತಿಗಳ ಅಧ್ಯಯನ ಮತ್ತು ಅನುಸರಣೆಗಳನ್ನು ಮಾಡತೊಡಗಿದ್ದರು.

ಒಟ್ಟಾರೆ ಪ್ರಾಚೀನ ಅರಬ್ ಆಕರಗಳನ್ನು ಆಧರಿಸಿ ರಚಿಸಿರುವ ಮಹಮದ್, ಇಸ್ಲಾಂಅನ್ನು ಧಾರ್ಮಿಕವಾಗಿ ಮಾತ್ರವಲ್ಲದೇ ಚಾರಿತ್ರಿಕವಾಗಿ ತಿಳಿಯಲು ನೆರವಾಗುತ್ತದೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...