Homeಅಂಕಣಗಳುಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

ಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

- Advertisement -
- Advertisement -

ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ ದಿಕ್ಕಿನಲ್ಲಿ ಕೆಲಸ ಮಾಡಿದರು. ದೇವರ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ, ಧಾರ್ಮಿಕ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವ ಮತ್ತು ಸಮಾಜೋಧಾರ್ಮಿಕ ದೃಷ್ಟಿಯನ್ನು ವ್ಯಕ್ತಿಯು ನೇಮ ಮತ್ತು ನಿಷ್ಠೆಯ ಮೂಲಕ ಅನುಷ್ಠಾನಕ್ಕೆ ತರಲು ಬೇಕಾದಂತಹ ವಿಧಾನಗಳನ್ನು ಖಚಿತತೆಯಿಂದ ಮನಗಾಣಿಸಿದ್ದು, ಕ್ರಮಗೊಳಿಸಿದ್ದು ಪ್ರವಾದಿ ಮಹಮದ್. ತತ್ವ, ನಿಯಮ, ಒಳನೋಟ, ಬಹಳ ಮುಖ್ಯವಾಗಿ ದಾರಿ; ಇತ್ಯಾದಿಗಳನ್ನು ದಾಖಲಿಸಿದ್ದು ಕುರಾನಿನಲ್ಲಿ.

ಮಹಮದ್: ಹಿಸ್ ಲೈಫ್ ಬೇಸ್ಡ್ ಆನ್ ದ ಅರ್ಲಿಯೆಸ್ಟ್ ಸೋರ್ಸಸ್ ಎಂಬ ಮಾರ್ಟಿನ್ ಲಿಂಗ್ಸ್ ಅವರ ಪುಸ್ತಕವು ಮಹಮದರ ಜೀವನವನ್ನು ಬೇರಾವ ಪುಸ್ತಕದಲ್ಲಿಯೂ ನೀಡದಿರುವಷ್ಟು ವಿವರಗಳಿಂದ ಕಟ್ಟಿಕೊಡುತ್ತದೆ. ಬೋಳುವಾರು ಮಹಮದ್ ಕುಂಯ್ಞಿ ಅವರ ’ಓದಿರಿ’ ಕಾದಂಬರಿಯನ್ನು ಓದಿದರೆ ಮಹಮದರ ಜೀವನ ಚಿತ್ರಣವನ್ನು ಕಟ್ಟಿಕೊಳ್ಳಲು ಬಹುಪಾಲು ಸಾಧ್ಯವಾಗುತ್ತದೆ. ಈ ಎರಡೂ ಪುಸ್ತಕಗಳಲ್ಲಿ ಯಾವುದನ್ನೇ ಮೊದಲು ಓದಿದರೂ ಮತ್ತೊಂದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಮಾರ್ಟಿನ್ ಅವರ ಪುಸ್ತಕದ ಶಕ್ತಿಯೇ ಪುರಾತನ ಅರಬರ ಆಕರಗಳನ್ನು ಆಧರಿಸಿ ಬರೆದಿರುವುದು. ಅವುಗಳಲ್ಲಿ ಬಹಳಷ್ಟು ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡಿವೆ. ಹಾಗಂತ ಇದು ಮಹಮದರ ಬಗ್ಗೆ ಇರುವ ಇತರ ಬರಹಗಳಿಗೆ ವಿರೋಧಾಭಾಸವಾಗಿಯೇನೂ ಇಲ್ಲ. ಬದಲಾಗಿ ಒಳನೋಟಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

PC : Beyaz Tarih

ಮಹಮದರ ಸಮಕಾಲೀನರು ಮತ್ತು ಅವರ ಜೀವನಶೈಲಿ ಮತ್ತು ಕೆಲಸಗಳನ್ನು ನೇರವಾಗಿ ಸಾಕ್ಷೀಕರಿಸಿರುವವರ ಮಾತುಗಳು ಅರಬ್ ಸಾಹಿತ್ಯದಲ್ಲಿ ದಾಖಲಾಗಿವೆ. ಅವುಗಳನ್ನೂ ಮಾರ್ಟಿನ್ ಮುಖ್ಯವಾಗಿ ಆಕರವನ್ನಾಗಿ ಬಳಸಿಕೊಂಡಿದ್ದಾರೆ. ಇಸ್ಲಾಮಿನ ಮತ್ತು ಅರಬ್ಬರ ಚರಿತ್ರೆಯ ಮೈಲಿಗಲ್ಲುಗಳನ್ನು ಮತ್ತು ಮಹಮದರ ಜೀವನದ ಗತಿಯನ್ನು ಕಾಲಾನುಕ್ರಮಣಿಕೆಯ ಆಧಾರದಲ್ಲಿಯೇ ಮಾರ್ಟಿನ್ ಬರೆಯುತ್ತಾರೆ. ಹಾಗಾಗಿ ಇದು ಇತಿಹಾಸ ಅಧ್ಯಯನ ಮಾಡುವವರಿಗೆ ಮಾತ್ರವಲ್ಲದೇ ಸಂಶೋಧನಾಸಕ್ತಿ ಇರುವವರಿಗೂ ಒಂದು ಮುಖ್ಯ ಆಕರವಾಗಿ ಪರಿಣಮಿಸುತ್ತದೆ.

ಇದು ಕಾದಂಬರಿಯಲ್ಲದಿದ್ದರೂ ಭಾಷೆಯ ಸರಳ ಶೈಲಿ ಮತ್ತು ಓಘದ ರೀತಿಯು ಕತೆಯನ್ನು ಓದಿಸುವಷ್ಟೇ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಸ್ಲಾಮಿನ ಬೋಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದ ಇದು ಮಹಮದರ ಜೀವನವನ್ನೇ ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಇಂಗ್ಲೆಂಡಿನ ಇಂಗ್ಲಿಷಾದರೂ ಜಾಗತಿಕ ಮಟ್ಟದ ಇಂಗ್ಲಿಷಿನ ಸರಳತೆಯನ್ನು ಹೊಂದಿದೆ. ಇತಿಹಾಸದ ದೃಷ್ಟಿಯಲ್ಲಿ ಇದರಲ್ಲಿರುವ ನಿಖರತೆಯ ಕಾರಣ ಇದನ್ನು ಇಂಗ್ಲಿಷ್ ಭಾಷೆಯಲ್ಲಿರುವ ವ್ಯಕ್ತಿಚರಿತ್ರೆಗಳ ಸಾಲಿನಲ್ಲಿ ಬಹಳ ಮಹತ್ವದ ಪುಸ್ತಕವನ್ನಾಗಿ ಪರಿಗಣಿಸುತ್ತಾರೆ.

ಆದರೆ, ಈ ಪುಸ್ತಕವು ಸುದೀರ್ಘಕಾಲಿನ ವಿಷಯಭರಿತವಾಗಿದೆ ಎಂದು ಅರಬ್ಬಿನ ಸಂಪ್ರದಾಯವಾದಿಗಳು ಟೀಕಿಸಿರುವುದುಂಟು. ಆದರೆ, ಅರಬ್ ಭಾಷೆಯ ನಿಯತಕಾಲಿಕಗಳಲ್ಲಿ ಮಾರ್ಟಿನ್ ಅವುಗಳಿಗೆಲ್ಲಾ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಪ್ರಾಯಶಃ ಮಾರ್ಟಿನ್ ಅವರ ಬರಹಗಳಲ್ಲಿ ಇಸ್ಲಾಮಿನ ತಾತ್ವಿಕತೆಯು ಸೂಫಿ ಪಂಥದ ಛಾಯೆಯನ್ನು ಪಡೆದುಕೊಳ್ಳುವುದರ ಕಾರಣವೂ ಈ ಬಗೆಯ ವಿರೋಧಗಳನ್ನು ಎದುರಿಸಿದ್ದಿರಬಹುದು. ಇವರನ್ನು ಹತ್ತಿರದಿಂದ ಬಲ್ಲವರು ಸೂಫಿ ಸಂತರೆಂದೇ ಕರೆಯುತ್ತಿದ್ದರು. ಬೌದ್ಧಿಕವಾಗಿ ಮನವೊಲಿಸುವ ಕಲೆಯಂತೂ ಮಾರ್ಟಿನರಿಗೆ ಕರಗತವಾಗಿದ್ದು, ಮುಸಲ್ಮಾನೇತರರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು.

ಪ್ರಾಟಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ ಮಾರ್ಟಿನ್ ನಾಸ್ತಿಕರಾಗಿ ಪರಿವರ್ತನೆ ಹೊಂದಿದ್ದರು. ಅನೇಕ ಐರೋಪ್ಯ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದ ಮಾರ್ಟಿನ್ ಅವರ ಈಜಿಪ್ಟಿನ ಹೆಂಡತಿಯ ಜೊತೆ ಸಂವಹನ ನಡೆಸಲು ಅರಬ್ ಭಾಷೆಯನ್ನು ಕಲಿತರು. ನಂತರ ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾದ ಮಾರ್ಟಿನ್ ಇಸ್ಲಾಂ ಸ್ವೀಕರಿಸಿದರು. ಧಾರ್ಮಿಕತೆಯಲ್ಲದ ಆಧ್ಯಾತ್ಮಿಕತೆಯ ಒಲವನ್ನು ಹೊಂದಿದ್ದ ಮಾರ್ಟಿನ್ ಸೂಫಿಯ ರೀತಿ ನೀತಿಗಳ ಅಧ್ಯಯನ ಮತ್ತು ಅನುಸರಣೆಗಳನ್ನು ಮಾಡತೊಡಗಿದ್ದರು.

ಒಟ್ಟಾರೆ ಪ್ರಾಚೀನ ಅರಬ್ ಆಕರಗಳನ್ನು ಆಧರಿಸಿ ರಚಿಸಿರುವ ಮಹಮದ್, ಇಸ್ಲಾಂಅನ್ನು ಧಾರ್ಮಿಕವಾಗಿ ಮಾತ್ರವಲ್ಲದೇ ಚಾರಿತ್ರಿಕವಾಗಿ ತಿಳಿಯಲು ನೆರವಾಗುತ್ತದೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...