Homeಅಂಕಣಗಳುಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

ಮಾರ್ಟಿನ್ ಲಿಂಗ್ಸ್ ಅವರ ಮಹಮದ್ : ಇಸ್ಲಾಂನ ಧಾರ್ಮಿಕ ಮತ್ತು ಚಾರಿತ್ರಿಕ ಅನಾವರಣ

- Advertisement -
- Advertisement -

ಇಸ್ಲಾಂ, ಕುರಾನ್ ಮತ್ತು ಪ್ರವಾದಿ ಮಹಮದ್; ಈ ಮೂರರ ಬಗ್ಗೆ ಮುಸಲ್ಮಾನೇತರ ಜನರು ಅನೇಕಾನೇಕ ತಪ್ಪು ಅಭಿಪ್ರಾಯಗಳನ್ನು ಹೊಂದಿರುವುದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಭಿಯಾವನ್ನು ಹುಟ್ಟುಹಾಕಲು ಒಂದಷ್ಟು ರಾಷ್ಟ್ರಗಳು ಯಶಸ್ವಿ ಪ್ರಯತ್ನವನ್ನು ಮಾಡಿವೆ. ಸಾಮಾನ್ಯ ಜನರು ಹರಡುವ ಸಾಮಾನ್ಯ ತಪ್ಪು ಮಾಹಿತಿಯೆಂದರೆ ಇಸ್ಲಾಂ ಎಂಬ ಧರ್ಮವನ್ನು ಪ್ರವಾದಿ ಮಹಮದರು ಸ್ಥಾಪಿಸಿದರು ಎಂಬುದು. ಇಸ್ಲಾಂ ಮಹಮದರ ಪೂರ್ವದಲ್ಲಿಯೇ ಅರಬರಲ್ಲಿ ಇದ್ದಂತಹ ಒಂದು ಧಾರ್ಮಿಕತೆ. ಅದಕ್ಕೊಂದು ಅಚ್ಚುಕಟ್ಟಾದ ಕ್ರಮವನ್ನು ಒದಗಿಸುವ ದಿಕ್ಕಿನಲ್ಲಿ ಕೆಲಸ ಮಾಡಿದರು. ದೇವರ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ, ಧಾರ್ಮಿಕ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವ ಮತ್ತು ಸಮಾಜೋಧಾರ್ಮಿಕ ದೃಷ್ಟಿಯನ್ನು ವ್ಯಕ್ತಿಯು ನೇಮ ಮತ್ತು ನಿಷ್ಠೆಯ ಮೂಲಕ ಅನುಷ್ಠಾನಕ್ಕೆ ತರಲು ಬೇಕಾದಂತಹ ವಿಧಾನಗಳನ್ನು ಖಚಿತತೆಯಿಂದ ಮನಗಾಣಿಸಿದ್ದು, ಕ್ರಮಗೊಳಿಸಿದ್ದು ಪ್ರವಾದಿ ಮಹಮದ್. ತತ್ವ, ನಿಯಮ, ಒಳನೋಟ, ಬಹಳ ಮುಖ್ಯವಾಗಿ ದಾರಿ; ಇತ್ಯಾದಿಗಳನ್ನು ದಾಖಲಿಸಿದ್ದು ಕುರಾನಿನಲ್ಲಿ.

ಮಹಮದ್: ಹಿಸ್ ಲೈಫ್ ಬೇಸ್ಡ್ ಆನ್ ದ ಅರ್ಲಿಯೆಸ್ಟ್ ಸೋರ್ಸಸ್ ಎಂಬ ಮಾರ್ಟಿನ್ ಲಿಂಗ್ಸ್ ಅವರ ಪುಸ್ತಕವು ಮಹಮದರ ಜೀವನವನ್ನು ಬೇರಾವ ಪುಸ್ತಕದಲ್ಲಿಯೂ ನೀಡದಿರುವಷ್ಟು ವಿವರಗಳಿಂದ ಕಟ್ಟಿಕೊಡುತ್ತದೆ. ಬೋಳುವಾರು ಮಹಮದ್ ಕುಂಯ್ಞಿ ಅವರ ’ಓದಿರಿ’ ಕಾದಂಬರಿಯನ್ನು ಓದಿದರೆ ಮಹಮದರ ಜೀವನ ಚಿತ್ರಣವನ್ನು ಕಟ್ಟಿಕೊಳ್ಳಲು ಬಹುಪಾಲು ಸಾಧ್ಯವಾಗುತ್ತದೆ. ಈ ಎರಡೂ ಪುಸ್ತಕಗಳಲ್ಲಿ ಯಾವುದನ್ನೇ ಮೊದಲು ಓದಿದರೂ ಮತ್ತೊಂದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಮಾರ್ಟಿನ್ ಅವರ ಪುಸ್ತಕದ ಶಕ್ತಿಯೇ ಪುರಾತನ ಅರಬರ ಆಕರಗಳನ್ನು ಆಧರಿಸಿ ಬರೆದಿರುವುದು. ಅವುಗಳಲ್ಲಿ ಬಹಳಷ್ಟು ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡಿವೆ. ಹಾಗಂತ ಇದು ಮಹಮದರ ಬಗ್ಗೆ ಇರುವ ಇತರ ಬರಹಗಳಿಗೆ ವಿರೋಧಾಭಾಸವಾಗಿಯೇನೂ ಇಲ್ಲ. ಬದಲಾಗಿ ಒಳನೋಟಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

PC : Beyaz Tarih

ಮಹಮದರ ಸಮಕಾಲೀನರು ಮತ್ತು ಅವರ ಜೀವನಶೈಲಿ ಮತ್ತು ಕೆಲಸಗಳನ್ನು ನೇರವಾಗಿ ಸಾಕ್ಷೀಕರಿಸಿರುವವರ ಮಾತುಗಳು ಅರಬ್ ಸಾಹಿತ್ಯದಲ್ಲಿ ದಾಖಲಾಗಿವೆ. ಅವುಗಳನ್ನೂ ಮಾರ್ಟಿನ್ ಮುಖ್ಯವಾಗಿ ಆಕರವನ್ನಾಗಿ ಬಳಸಿಕೊಂಡಿದ್ದಾರೆ. ಇಸ್ಲಾಮಿನ ಮತ್ತು ಅರಬ್ಬರ ಚರಿತ್ರೆಯ ಮೈಲಿಗಲ್ಲುಗಳನ್ನು ಮತ್ತು ಮಹಮದರ ಜೀವನದ ಗತಿಯನ್ನು ಕಾಲಾನುಕ್ರಮಣಿಕೆಯ ಆಧಾರದಲ್ಲಿಯೇ ಮಾರ್ಟಿನ್ ಬರೆಯುತ್ತಾರೆ. ಹಾಗಾಗಿ ಇದು ಇತಿಹಾಸ ಅಧ್ಯಯನ ಮಾಡುವವರಿಗೆ ಮಾತ್ರವಲ್ಲದೇ ಸಂಶೋಧನಾಸಕ್ತಿ ಇರುವವರಿಗೂ ಒಂದು ಮುಖ್ಯ ಆಕರವಾಗಿ ಪರಿಣಮಿಸುತ್ತದೆ.

ಇದು ಕಾದಂಬರಿಯಲ್ಲದಿದ್ದರೂ ಭಾಷೆಯ ಸರಳ ಶೈಲಿ ಮತ್ತು ಓಘದ ರೀತಿಯು ಕತೆಯನ್ನು ಓದಿಸುವಷ್ಟೇ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇಸ್ಲಾಮಿನ ಬೋಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದ ಇದು ಮಹಮದರ ಜೀವನವನ್ನೇ ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಇಂಗ್ಲೆಂಡಿನ ಇಂಗ್ಲಿಷಾದರೂ ಜಾಗತಿಕ ಮಟ್ಟದ ಇಂಗ್ಲಿಷಿನ ಸರಳತೆಯನ್ನು ಹೊಂದಿದೆ. ಇತಿಹಾಸದ ದೃಷ್ಟಿಯಲ್ಲಿ ಇದರಲ್ಲಿರುವ ನಿಖರತೆಯ ಕಾರಣ ಇದನ್ನು ಇಂಗ್ಲಿಷ್ ಭಾಷೆಯಲ್ಲಿರುವ ವ್ಯಕ್ತಿಚರಿತ್ರೆಗಳ ಸಾಲಿನಲ್ಲಿ ಬಹಳ ಮಹತ್ವದ ಪುಸ್ತಕವನ್ನಾಗಿ ಪರಿಗಣಿಸುತ್ತಾರೆ.

ಆದರೆ, ಈ ಪುಸ್ತಕವು ಸುದೀರ್ಘಕಾಲಿನ ವಿಷಯಭರಿತವಾಗಿದೆ ಎಂದು ಅರಬ್ಬಿನ ಸಂಪ್ರದಾಯವಾದಿಗಳು ಟೀಕಿಸಿರುವುದುಂಟು. ಆದರೆ, ಅರಬ್ ಭಾಷೆಯ ನಿಯತಕಾಲಿಕಗಳಲ್ಲಿ ಮಾರ್ಟಿನ್ ಅವುಗಳಿಗೆಲ್ಲಾ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಪ್ರಾಯಶಃ ಮಾರ್ಟಿನ್ ಅವರ ಬರಹಗಳಲ್ಲಿ ಇಸ್ಲಾಮಿನ ತಾತ್ವಿಕತೆಯು ಸೂಫಿ ಪಂಥದ ಛಾಯೆಯನ್ನು ಪಡೆದುಕೊಳ್ಳುವುದರ ಕಾರಣವೂ ಈ ಬಗೆಯ ವಿರೋಧಗಳನ್ನು ಎದುರಿಸಿದ್ದಿರಬಹುದು. ಇವರನ್ನು ಹತ್ತಿರದಿಂದ ಬಲ್ಲವರು ಸೂಫಿ ಸಂತರೆಂದೇ ಕರೆಯುತ್ತಿದ್ದರು. ಬೌದ್ಧಿಕವಾಗಿ ಮನವೊಲಿಸುವ ಕಲೆಯಂತೂ ಮಾರ್ಟಿನರಿಗೆ ಕರಗತವಾಗಿದ್ದು, ಮುಸಲ್ಮಾನೇತರರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು.

ಪ್ರಾಟಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದ ಮಾರ್ಟಿನ್ ನಾಸ್ತಿಕರಾಗಿ ಪರಿವರ್ತನೆ ಹೊಂದಿದ್ದರು. ಅನೇಕ ಐರೋಪ್ಯ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದ ಮಾರ್ಟಿನ್ ಅವರ ಈಜಿಪ್ಟಿನ ಹೆಂಡತಿಯ ಜೊತೆ ಸಂವಹನ ನಡೆಸಲು ಅರಬ್ ಭಾಷೆಯನ್ನು ಕಲಿತರು. ನಂತರ ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾದ ಮಾರ್ಟಿನ್ ಇಸ್ಲಾಂ ಸ್ವೀಕರಿಸಿದರು. ಧಾರ್ಮಿಕತೆಯಲ್ಲದ ಆಧ್ಯಾತ್ಮಿಕತೆಯ ಒಲವನ್ನು ಹೊಂದಿದ್ದ ಮಾರ್ಟಿನ್ ಸೂಫಿಯ ರೀತಿ ನೀತಿಗಳ ಅಧ್ಯಯನ ಮತ್ತು ಅನುಸರಣೆಗಳನ್ನು ಮಾಡತೊಡಗಿದ್ದರು.

ಒಟ್ಟಾರೆ ಪ್ರಾಚೀನ ಅರಬ್ ಆಕರಗಳನ್ನು ಆಧರಿಸಿ ರಚಿಸಿರುವ ಮಹಮದ್, ಇಸ್ಲಾಂಅನ್ನು ಧಾರ್ಮಿಕವಾಗಿ ಮಾತ್ರವಲ್ಲದೇ ಚಾರಿತ್ರಿಕವಾಗಿ ತಿಳಿಯಲು ನೆರವಾಗುತ್ತದೆ.


ಇದನ್ನೂ ಓದಿ: ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...