Homeಕರ್ನಾಟಕಮುರುಘಾ ಶರಣರ ಪ್ರಕರಣ: ‘ಮಕ್ಕಳ ಮೇಲೆ ಸಂಭೋಗವಾಗಿಲ್ಲ’ ಎಂದಿರುವ ವೈದ್ಯಕೀಯ ವರದಿಯ ಅಸಲಿಯತ್ತೇನು?

ಮುರುಘಾ ಶರಣರ ಪ್ರಕರಣ: ‘ಮಕ್ಕಳ ಮೇಲೆ ಸಂಭೋಗವಾಗಿಲ್ಲ’ ಎಂದಿರುವ ವೈದ್ಯಕೀಯ ವರದಿಯ ಅಸಲಿಯತ್ತೇನು?

- Advertisement -
- Advertisement -

“ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿರುವ ಇಬ್ಬರು ಅಪ್ರಾಪ್ತ ಬಾಲಕಿಯರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಯಾವುದೇ ಸಂಭೋಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ” ಎಂದು ವರದಿಯಾಗಿದೆ.

ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 27ರಂದು ಮುರುಘಾ ಮಠಾಧೀಶರ ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದರು. ಅದನ್ನು ಆಧರಿಸಿ ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, “ಒಬ್ಬ ಬಾಲಕಿಯನ್ನು ಆಗಸ್ಟ್ 28, 2022ರಂದು ಮತ್ತು ಇನ್ನೊಬ್ಬ ಬಾಲಕಿಯನ್ನು ಸೆಪ್ಟೆಂಬರ್ 29, 2022ರಂದು ಪರೀಕ್ಷಿಸಲಾಗಿದೆ.”

ಇಬ್ಬರು ಬಾಲಕಿಯರನ್ನು ಪರೀಕ್ಷಿಸಿದ ವೈದ್ಯಕೀಯ ಅಧಿಕಾರಿ, “ಬಾಲಕಿಯ ಕನ್ಯಾ ಪೊರೆ (hymen) ಹಾಗೆಯೇ ಇದೆ” ಎಂದು ತೀರ್ಮಾನಿಸಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಮೊದಲು ಬಾಲಕಿಯರು ಸಮಲೋಚಕರಿಗೆ, “ಸಂಭೋಗ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ಆದರೆ ಕನ್ನಡದ ಕೆಲವು ಮಾಧ್ಯಮಗಳು ವರದಿ ಮಾಡುತ್ತಾ, “ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ, ಮರುಘಾ ಶರಣರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ” ಎಂದೆಲ್ಲ ಬಣ್ಣಿಸಿವೆ.

ಮರುಘಾ ಮಠಾಧೀಶರ ಪ್ರಕರಣ ಹೊರಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯೂ ಒಂದು. ಈ ವರದಿಗಳ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಒಡನಾಡಿಯ ಕೆ.ವಿ.ಸ್ಟ್ಯಾನ್ಲಿ ಅವರು ಹೇಳಿದ್ದೇ ಬೇರೆ!

“ಇದು ತುಂಬಾ ಬಾಲಿಷವಾದ ಸಂಗತಿ. ಈ ವರದಿಯನ್ನು 2022ರ ಆಗಸ್ಟ್‌ನಲ್ಲಿಯೇ ಸ್ಥಳೀಯ ವೈದ್ಯರು ಸಲ್ಲಿಸಿದ್ದರು. ಇದು ಹೊಸದಾದ ವರದಿಯಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಪ್ರಕರಣಕ್ಕೆ ಸಂಬಂಧಿಸಿದಂತೆ ‌ಎಫ್ಎ‌ಸ್‌ಎಲ್‌ ವರದಿ ಹುಬ್ಬಳ್ಳಿಯಿಂದ ಇನ್ನೂ ಬಂದಿಲ್ಲ. ಸ್ಥಳೀಯ ವೈದ್ಯಾಧಿಕಾರಿಗಳ ವರದಿಗೆ ಯಾವುದೇ ಮಾನ್ಯತೆ ಇಲ್ಲ” ಎಂದರು.

“ಈ ರೀತಿಯ ವರದಿ ಹೊರಬಿದ್ದಿರುವ ಕಾರಣವನ್ನು ತಿಳಿದುಕೊಳ್ಳಬೇಕಾಗಿದೆ. ಪೋಕ್ಸೋ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಕಷ್ಟ. ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಿ ನ್ಯಾಯಾಲಯ ಜೈಲಿಗೆ ಕಳಿಸಿರುತ್ತದೆ. ಮುರುಘಾ ಮಠಾಧೀಶರಿಗೆ ಜಾಮೀನು ದೊರಕಿಸಲು ಶತಾಯಗತಾಯ ಪ್ರಯತ್ನಗಳನ್ನು ಆರೋಪಿಗಳ ಪರವಾಗಿರುವವರು ಮಾಡುತ್ತಿದ್ದಾರೆ” ಎಂದು ವಿವರಿಸಿದರು.

“ಜಾಮೀನು ಸಿಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಸಂದೇಹಗಳನ್ನು ಸೃಷ್ಟಿಸುವುದಾಗಿದೆ. ಯಾವುದೇ ಸಂದೇಹಗಳಿಲ್ಲದಿದ್ದರೆ ನ್ಯಾಯಾಧೀಶರು ಜಾಮೀನು ನೀಡುವುದಿಲ್ಲ. ಮಠಾಧೀಶರ ಪರವಾಗಿ ಕೆಲವು ತಜ್ಞರು ಕೆಲಸ ಮಾಡುತ್ತಿದ್ದಾರೆ. ತಮ್ಮ ತಂತ್ರಗಾರಿಕೆಯನ್ನು ಅವರು ಮಾಡುತ್ತಲೇ ಇದ್ದಾರೆ. ಅದರ ಭಾಗವಾಗಿಯೇ ನಮ್ಮ ಮೇಲೆ ಸುಳ್ಳು ಪ್ರಕರಣ ಹಾಕಿದ್ದರು. ಗೊಂದಲ ಸೃಷ್ಟಿಸುವ ತಂತ್ರಗಾರಿಕೆ ಇದಾಗಿತ್ತು. ಈಗ ವೈದ್ಯಕೀಯ ವರದಿಯ ಮೂಲಕ ಗೊಂದಲವೊಂದನ್ನು ಹರಿಬಿಡಲಾಗಿದೆ” ಎಂದು ಅಭಿಪ್ರಾಯಪಟ್ಟರು.

“ಈಗ ಹರಿದಾಡಿರುವ ವರದಿ ಮಾನ್ಯತೆಯನ್ನು ಪಡೆದದ್ದಲ್ಲ. ಎಫ್ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬರಬೇಕಿದೆ. ಪೋಕ್ಸೋ ಕಾನೂನು, ವೈದ್ಯಕೀಯ ಪರೀಕ್ಷೆ ವರದಿಯನ್ನು ಪ್ರಮುಖವಾಗಿ ಪರಿಗಣಿಸಲ್ಲ. ಮಕ್ಕಳ ಹೇಳಿಕೆಯನ್ನಷ್ಟೇ ಪ್ರಮುಖವಾಗಿ ಪರಿಗಣಿಸುತ್ತದೆ. ವೈದ್ಯಕೀಯ ವರದಿ ಸೇರಿದಂತೆ ಉಳಿದೆಲ್ಲ ಸಾಕ್ಷಿಗಳು ಹೆಚ್ಚುವರಿ ಸಾಕ್ಷಿಯಾಗಿ ಉಳಿಯುತ್ತವೆ. ಇದರ ಜೊತೆಗೆ ಘನ ನ್ಯಾಯಾಲಯ ಕೂಡ ಮಾನವೀಯವಾದ ಒಳಗಣ್ಣಿನಿಂದ ಗಮನಿಸುತ್ತಿರುತ್ತದೆ ಎಂಬುದನ್ನು ನಮ್ಮ ಅನುಭವದಲ್ಲಿ ಕಂಡುಕೊಂಡಿದ್ದೇವೆ. ಆರೋಪಿ ಮುರುಘಾ ಶರಣರಿಗೆ ಹೃದಯಾಘಾತವಾಗಿದೆ ಎಂದು ಇದೇ ಜಿಲ್ಲಾ ಆರೋಗ್ಯಾಧಿಕಾರಿ ಆರಂಭದಲ್ಲಿ ಹೇಳಿದ್ದರು. ಹೇರ್‌ಲಿಫ್ಟ್‌ ಮಾಡದಿದ್ದರೆ ಶರಣರು ಬದುಕುಳಿಯುವುದಿಲ್ಲ ಎಂದೆಲ್ಲ ಹಬ್ಬಿಸಲಾಗಿತ್ತು. ಆದರೆ ಅವರು ಆರೋಗ್ಯವಾಗಿಯೇ ಇದ್ದರು. ನ್ಯಾಯಾಧೀಶರಾದ ಕೋಮಲಾ ಅವರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ‘ಏನೇ ಆಗಲಿ, ಮುರುಘಾ ಶರಣರನ್ನು ಕೋರ್ಟ್‌ಗೆ ಕರೆತನ್ನಿ’ ಎಂದು ಸೂಚಿಸಿದ್ದರು. ಮುರುಘಾ ಶರಣರ ಹೃದಯ ಚೆನ್ನಾಗಿಯೇ ಕೆಲಸ ಮಾಡುತ್ತಿತ್ತು. ವೈದ್ಯಕೀಯ ವರದಿಗಳು ತಿರುಚಲ್ಪಡುತ್ತವೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ” ಎಂದು ಹೇಳಿದರು.

“ವೈದ್ಯಕೀಯ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ರಕ್ಷಿಸಲು ಮಾಡಿದ ಪ್ರಯತ್ನಗಳನ್ನು ನಾವು ನೋಡಿದ್ದೇವೆ. ಈಗ ಹರಿದಾಡುತ್ತಿರುವ ವರದಿಯು ಮಾನ್ಯತೆಯನ್ನು ಪಡೆದುಕೊಂಡಿಲ್ಲ. ಸಂತ್ರಸ್ತ ಮಕ್ಕಳಿಗೆ ನ್ಯಾಯವನ್ನು ನಮ್ಮ ನ್ಯಾಯ ವ್ಯವಸ್ಥೆ ದೊರಕಿಸಿಕೊಡುತ್ತದೆ ಎಂಬ ಭರವಸೆ ನಮಗಿದೆ” ಎಂದರು.

“ಮಗುವಿನ hymen ಹಾಗೆ ಇರಬೇಕೆಂಬ ನಿಯಮವೇನೂ ಇಲ್ಲ. ಮಗುವಿನ ಗುಪ್ತಾಂಗವನ್ನು ಸ್ಪರ್ಶಿಸಿದರೂ ಅದು ಅತ್ಯಾಚಾರವಾಗುತ್ತದೆ. ಒಂದು ಮಗು ಅತ್ಯಾಚಾರಕ್ಕೆ ಒಳಗಾಗಿರಬೇಕು ಎಂದರೆ hymen ಇಲ್ಲವಾಗಿರಬೇಕು ಎಂದು ನಾವು ನಿರೀಕ್ಷಿಸಬೇಕಾ? ನ್ಯಾಯ ಕೊಡಿಸಬೇಕೆಂದರೆ ಮಗು ಕೊಲೆಯಾಗಿಬೇಕೆಂದು ನಿರೀಕ್ಷಿಸಬೇಕಾ?” ಎಂದು ಪ್ರಶ್ನಿಸಿದ ಅವರು, “ಸದ್ಯ ಮಗು ಬದುಕಿ ಬಂದಿದೆಯಲ್ಲ ಎಂದು ಯೋಚಿಸಬೇಕಿತ್ತಲ್ಲವೇ? ಮಗು ಹೀಗೆಯೇ ಗಾಯಗೊಂಡಿರಬೇಕು ಎಂದು ಭಾವಿಸುವುದು ಕ್ರೂರ ಸಮಾಜದ ಪ್ರತೀಕವಾಗುತ್ತದೆ. ಮಗುವಿನ ಘನತೆಗೆ ಸಂಬಂಧಿಸಿದಂತೆ ಈ ರೀತಿಯ ಮಾತುಕತೆಗಳು ನಡೆಯಬಾರದು. ಮಗುವಿನ ಹೇಳಿಕೆಯನ್ನು ಅವಮಾನಿಸುವ, ಅನುಮಾನಿಸುವ ಪ್ರವೃತ್ತಿ ಅಮಾನಯವೀಯವಾದದ್ದು. ಯಾರನ್ನೋ ರಕ್ಷಿಸುವುದಕ್ಕಾಗಿ ಅಮಾಯಕ ಮಕ್ಕಳನ್ನು ಅವಮಾನಿಸುವ, ಅನುಮಾನಿಸುವುದನ್ನು ಮಾಡಬಾರದು” ಎಂದು ಆಶಿಸಿದರು.

ಒಂದು ಪೋಕ್ಸೋ ಪ್ರಕರಣ ಅಷ್ಟೇ ಅಲ್ಲ

ಮುರುಘಾ ಮಠದಲ್ಲಿ ಕೆಲಸ ಮಾಡುವ ಸೇವಕಿಯೊಬ್ಬರು ಶಿವಮೂರ್ತಿ ಶರಣರ ವಿರುದ್ಧ ಎರಡನೇ ಪ್ರಕರಣವನ್ನು ದಾಖಲಿಸಿದ್ದಾರೆ. ಮಠಾಧೀಶರು ತಮ್ಮ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊದಲ ಪ್ರಕರಣದಲ್ಲಿನ ಸಂತ್ರಸ್ತ ಬಾಲಕಿಯರಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಪೋಕ್ಸೋ ಕಾಯ್ದೆ ಸೇರಿದಂತೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲೂ ಮುರುಘಾ ಮಠಾಧೀಶರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇಂತಹ ಪ್ರಕರಣಗಳಲ್ಲಿ ಕನಿಷ್ಠ ಮೂರು ಸಂಸ್ಥೆಗಳಿಂದ ಪಾರದರ್ಶಕವಾಗಿ ಪರೀಕ್ಷೆಗೆ ಒಳಪಡಿಸಬೇಕು,ಅಲ್ಲದೆ ಪರೀಕ್ಷಿಸುವ ತಜ್ಞರು ಆ ಆರೋಪಿತನ ಜಾತಿ ಸಮುದಾಯದವನಾಗದೆ ,ಪೂರ್ವಾಗ್ರಹ ಪೀಡಿತನಾಗಿರದೇ ವಸ್ತುಸ್ಥಿತಿ ಎನಿದೆಯೋ ಅದನ್ನ ವರದಿ ಮಾಡತಕ್ಕದ್ದು .ಅದು ಈ ಪ್ರಕರಣದಲ್ಲಿ ಆಗಿದೆಯೇ ಎನ್ನುವುದು ಪ್ರಶ್ನಾರ್ಹ,ಮಠ ಮತ್ತು ಅದರ ಭಕ್ತವೃಂದ ಶಕ್ತಿಶಾಲಿ ಸಮುದಾಯ ಜೊತೆಗೆ ಅಧಿಕಾರರೂಡ ಮುಖ್ಯಮಂತ್ರಿ ಮತ್ತು ಬಹಳಷ್ಟು ಸಚಿವರು ಅದೇ ಸಮುದಾಯದವರೆ,ಎಂದಮೇಲೆ ಬಲಿಷ್ಠ ಸಮುದಾಯ ವರು ಅದೇ ಸಮುದಾಯದ ಆರೋಪಿತನ ಬಿಡುಗಡೆಗೆ ಇದು ಪ್ರಯತ್ನ ಅಲ್ಲ ಎಂದು ನಂಬುವುದು ಹೇಗೆ?

  2. ನಿಮ್ಮ ಅನಿಸಿಕೆ ಸರಿಯಾಗಿದೆ, ಇಂತಹ ವೈದ್ಯರು ಅವರ ಕುಲಕ್ಕೆ ಕಳಂಕ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...