Homeಕರ್ನಾಟಕಮುಟ್ಟಿನ ಬೆಳಕು : ಸತ್ಯಾ ಎಸ್

ಮುಟ್ಟಿನ ಬೆಳಕು : ಸತ್ಯಾ ಎಸ್

- Advertisement -
- Advertisement -

‘ಮುಟ್ಟಿನಿಂದ ಹುಟ್ಟು’ ಎನ್ನುವ ಸರಳ ಸತ್ಯ ಎಲ್ಲರಿಗೂ ಬೆಳಕಿನಷ್ಟು ನಿಚ್ಚಳವಾಗಿದ್ದರೂ, ಮುಟ್ಟನ್ನು ಮೈಲಿಗೆ ಎನ್ನುವಷ್ಟು ದ್ರಾಷ್ಟ್ಯ ಮನುಷ್ಯ ಕುಲವನ್ನು ಕಾಡುತ್ತಿರುವುದು ಗಂಭೀರವಾದ ವಿಷಯ. ತನ್ನ ಹುಟ್ಟಿಗೆ ಕಾರಣವಾದ, ನೈಸರ್ಗಿಕವಾದ, ವೈಜ್ಞಾನಿಕವಾದ ಕ್ರಿಯೆಯನ್ನೇ ಮನುಷ್ಯ ತನ್ನ ಅಹಂಕಾರ, ಅಧಿಕಾರ ಲಾಲಸೆ, ದೊಡ್ಡಸ್ತಿಕೆಯ ಅಸ್ತ್ರವಾಗಿ ಬಳಸುತ್ತಿರುವುದು ಮನುಷ್ಯ ಕುಲ ಇನ್ನೂ ಎಷ್ಟೊಂದು ಅವೈಜ್ಞಾನಿಕವಾಗಿ, ಅವೈಚಾರಿಕಾಗಿ ಹಾಗೂ ಅನೈಸರ್ಗಿಕವಾಗಿ ಆಲೋಚಿಸುತ್ತಿದೆ, ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಪ್ರಜಾಸತ್ತಾತ್ಮಕವಾದ ದಸರಾ ಆಚರಣೆಯನ್ನು ಉದ್ಘಾಟಿಸಿದ ಪುರೋಗಾಮಿ ಚಿಂತನೆಯ ಲೇಖಕ ಎಸ್ ಎಲ್ ಬೈರಪ್ಪನವರು ಮುಟ್ಟಾಗುವ ಹೆಂಗಸರು ದೇವಸ್ಥಾನಕ್ಕೆ ಹೋಗುವಂತಿಲ್ಲ, ಆಫೀಸಿಗೆ ಹೋಗಬಹುದು ಎನ್ನುವ ಮೂಲಕ ಬಹುಪಾಲು ಮನುಷ್ಯರ ಹಿಮ್ಮುಖದ ಚಲನೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಹೆಣ್ಣನ್ನು ನಿಯಂತ್ರಿಸುವ ಮತ್ತು ಬಳಸಿಕೊಳ್ಳುವ ಪಿತೃಪ್ರಧಾನ ಹಾಗೂ ಪಾಳೇಗಾರಿ ಮನೋಭಾವವನ್ನು ಯಾವ ಹಿಂಜರಿಕೆ, ಸಂಕೋಚವಿಲ್ಲದೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನೀಲಾಂಚಲದಲ್ಲಿರುವ, ಫಲವಂತಿಕೆಯ ಸ್ವರೂಪ ಎಂದು ಹೆಸರಾದ ದೇವಸ್ಥಾನ, ಕಾಮಾಕ್ಯ ದೇವಿಯ ದೇವಸ್ಥಾನ. ಗರ್ಭಾಶಯ ಆಕೃತಿಯ ಗರ್ಭಗೃಹ, ಯೋನಿ ರೂಪದ ದೇವತೆ ಮತ್ತು ನಸುಗೆಂಪು ಬಣ್ಣದ ಯೋನಿಯಿಂದ ಸ್ರವಿಸುವ ನೀರು- ಇವು ಆ ದೇವಾಲಯದ ಮುಖ್ಯಾಂಶಗಳು. ತಮ್ಮ ಒಂದೊಂದು ಕಾದಂಬರಿಗೂ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಅಪಾರ ಖಚಿತತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುವ ಬೈರಪ್ಪನವರು, ಈ ಕಾಮಾಕ್ಯ ದೇವಸ್ಥಾನಕ್ಕೂ ಹೋಗಿಬಂದಿದ್ದಾರೆ. ಹಾಗಿದ್ದ ಮೇಲೆ, ಮುಟ್ಟಿನ ಕುರಿತು ಇವರು ಯಾವ ರೀತಿಯ ಅನುಸಂಧಾನ ನಡೆಸಿದ್ದಾರೆ? ಎಂದು ಅಚ್ಚರಿಯಾಗುತ್ತದೆ.

ಎಪ್ಪತ್ತರ ದಶಕದ ಎರಡನೇ ಭಾಗದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಚಲಾವಣೆಗೆ ಬಂದಾಗ ಮಹಿಳೆಯರ ನಡುವೆ ಮುಟ್ಟು ಮೌನ ಮುರಿದು ‘ಗುಸುಗುಸು’ ಮಾತಿನ ಅಂಗಳಕ್ಕೆ ಬಂದು ನಿಂತಿತ್ತು. ಸ್ಯಾನಿಟರಿ ಪ್ಯಾಡ್‍ಗಳ ಜಾಹಿರಾತು ಟಿವಿ ಪರದೆಯಲ್ಲಿ ಮೂಡತೊಡಗಿದಾಗ ಗಂಡಸರೂ ಈ ಕುರಿತು ಗುಸುಗುಸು ಮಾಡತೊಡಗಿದರು. ಸ್ಯಾನಿಟರಿ ಪ್ಯಾಡ್ ಕಂಪೆನಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಋತುಸ್ರಾವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭಿಸಿದವು. ಹೀಗೆ ಮಾರುಕಟ್ಟೆಯ ಕಾರಣ ಮುಟ್ಟಿನ ಮಾತು ಕೌಟುಂಬಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ವಿಸ್ತರಣೆಯಾಯಿತು. ಆದರೆ ಸಾಂಸ್ಕøತಿಕವಾಗಿ ಮುಟ್ಟು ಯಾವತ್ತಿಗೂ ಮುಕ್ತವಾಗಿ ಹಾಗೂ ಗುಪ್ತವಾಗಿ ಮಾತಿನಲ್ಲಿ, ಚರ್ಚೆಯಲ್ಲಿ, ಆಚರಣೆಯಲ್ಲಿ ಹಾಗೂ ವಿಜೃಂಭಣೆಯಲ್ಲಿ ವಸ್ತುವಾಗಿದ್ದುಕೊಂಡೇ ಇದೆ.

ಇತ್ತೀಚೆಗೆ ಶಬರಿಮಲೆ ನಿಮಿತ್ತ ಮುಟ್ಟು ಸಾರ್ವಜನಿಕ ಚರ್ಚೆಗೆ ಹೆಚ್ಚೆಚ್ಚು ತೆರೆದುಕೊಂಡು, ಮುಟ್ಟನ್ನು ಗಲೀಜು ಎಂದು ಜರೆಯುವವರ ಮನಸ್ಸಿನ ಕೊಳಕನ್ನೆಲ್ಲ ಹೊರಗೆ ಚೆಲ್ಲುತ್ತಿದೆ. 2015ರ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣನ್, ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಸ್ಕ್ಯಾನ್ ಮಾಡುವ ಯಂತ್ರ ಸ್ಥಾಪಿಸುವ ಕುರಿತು ಮಾತನಾಡಿದಾಗ, ಸಿಟ್ಟಿಗೆದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಕಿತಾ ಅರೋರಾ ‘ಹ್ಯಾಪಿ ಟು ಬ್ಲೀಡ್’ ಎಂಬ ಆಂದೋಲನವನ್ನೇ ಹುಟ್ಟು ಹಾಕಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ಹಿಡಿದುಕೊಂಡ ಯುವತಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ, ಮುಟ್ಟಿಗೆ ಸಂಬಂಧಿಸಿದ ಮೂಢ ಆಚರಣೆಗಳು ಹಾಗೂ ವಿಧಿ ನಿಷೇಧಗಳನ್ನು ವಿರೋಧಿಸಿದರು.

2017ರಲ್ಲಿ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ತೆರಿಗೆ ಹೇರುವ ಕೇಂದ್ರ ಸರ್ಕಾರದ ಮೂರ್ಖ ಕ್ರಮವು ‘ರಕ್ತಕ್ಕೆ ತೆರಿಗೆ’ ಎಂಬ ತೆರಿಗೆ ವಿರೋಧಿ ಚಳವಳಿಯನ್ನು ಹುಟ್ಟುಹಾಕಿತು; 2018ರಲ್ಲಿ ತೆರಿಗೆ ರದ್ಧತಿಗೆ ಕಾರಣವಾಯಿತು. 2018ರ ಸೆಪ್ಟೆಂಬರ್‍ನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಮುಕ್ತ ಅವಕಾಶ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಣ್ಣನ್ನು ಕುರಿತಾಗಿ ಈ ದೇಶಕ್ಕೆ ಇರುವ ಕೊಳಕು ನಿಲುವುಗಳನ್ನೆಲ್ಲ ಬೀದಿಗೆ ಚೆಲ್ಲಿತು. ಹೆಣ್ಣಿನಿಂದಲೇ ಹುಟ್ಟಿದ ದೇವರು ಹೆಣ್ಣಿನಿಂದಲೇ ಅಪವಿತ್ರನಾಗುತ್ತಾನೆ ಎನ್ನುವ ಭಕ್ತ ಗಣದ ಕುರುಡುತನವು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯನ್ನೂ ಅನಾವರಣಗೊಳಿಸಿತು.

ಆದರೆ, ಈ ಕಾರಣಗಳು ಮುಟ್ಟಿನ ಕುರಿತಾದ ಚರ್ಚೆಯನ್ನು ಹೆಚ್ಚಿಸಿವೆ. ಜನರಲ್ಲಿ ಈ ಕುರಿತ ತಿಳಿವಳಿಕೆಯು ಹೆಚ್ಚಾಗುತ್ತಾ ಬಂದಿದೆ. ಮುಟ್ಟಿನ ಸಂದರ್ಭದ ಅಗತ್ಯಗಳ ಕುರಿತು, ಆರೋಗ್ಯದ ಕುರಿತು ಸಾಕಷ್ಟು ಧನಾತ್ಮಕ ಚಿಂತನೆಗಳು, ಬೆಳವಣಿಗೆಗಳು ನಡೆದಿವೆ. ಬರಹಗಾರರು, ಕಾರ್ಯಕರ್ತರು, ಸಂಘಟನೆಗಳು ಮುಟ್ಟಿನ ಕುರಿತು ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಸ್ವತಂತ್ರ ಯುಟ್ಯೂಬ್ ಚಾನೆಲ್‍ಗಳು ‘ಮುಟ್ಟು ಎಂದರೇನು’ ಎಂಬ ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿವೆ. ಮಂಗಳೂರಿನ ಶ್ರೀನಿವಾಸ ಕಾರ್ಕಳ ಅವರು ದಶಕಕ್ಕೂ ಹಿಂದೆಯೇ ‘ಮುಟ್ಟು ಮುಟ್ಟೇಂದೇಕೆ ಹೀಯಾಳಿಸುವಿರಿ?/ಮುಟ್ಟಿನಿಂದಲ್ಲವೇ ನಮ್ಮೆಲ್ಲ ಹುಟ್ಟು/ ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು..’ ಎಂದು ಬರೆದ ಹಾಡು ಅಸಂಖ್ಯಾತ ಮಹಿಳಾ ತರಬೇತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಮುಟ್ಟಿನ ಕುರಿತಾದ ಮುಜುಗರವನ್ನು ಹೊಡೆದೋಡಿಸಿದೆ.

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವ ಜೋಡಿಯೊಂದು ಮುಟ್ಟಿನ ಕುರಿತು ತಿಳಿವಳಿಕೆ ಹೆಚ್ಚಿಸಲು ತಮ್ಮ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸಖೀಭವ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ, ‘ಸುಸ್ಥಿರ ಮುಟ್ಟಿನ ಆರೋಗ್ಯ’ ಕುರಿತು ಆಂದೋಲನವನ್ನೇ ನಡೆಸಿದೆ. ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಜ್ಯೋತಿ ಇಟ್ನಾಳ್ ಮುಟ್ಟಿನ ಆಚರಣೆಗಳು ಹಾಗೂ ವಿಧಿ ನಿಷೇಧಗಳ ಕುರಿತಾಗಿಯೇ ಪಿಎಚ್‍ಡಿ ಸಂಶೋಧನೆಗೆ ಕೈಹಾಕಿದ್ದಾರೆ.

ಕಳೆದ ವರ್ಷ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದಲ್ಲಿ ಮುಟ್ಟಾದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ನ ಬದಲಿಗೆ ಮುಟ್ಟಿನ ಬಟ್ಟಲುಗಳನ್ನು ಒದಗಿಸುವ ಕ್ರಾಂತಿಕಾರಿ ಕ್ರಮವನ್ನು ಅನುಸರಿಸಲಾಯಿತು. ಇದೇ ಮಾರ್ಗವನ್ನು ಅನುಸರಿಸಿ ಕಳೆದ ತಿಂಗಳು ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಶಿವಲೀಲಾ, ಸಂಜ್ಯೋತಿ, ದೀಪಾ ಮತ್ತು ಜ್ಯೋತಿಯವರ ಮುಂದಾಳತ್ವದಲ್ಲಿ ಸಾವಿರಾರು ಮುಟ್ಟಿನ ಬಟ್ಟಲುಗಳು ಪ್ರವಾಹಸಂತ್ರಸ್ತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ, ಅದರ ಬಳಕೆಯ ಕುರಿತು ತಿಳಿಸಿಕೊಡಲಾಗಿದೆ. ಮುಟ್ಟಿನ ಕುರಿತು ವೈಜ್ಞಾನಿಕ ಮಾಹಿತಿ, ಆಚರಣೆಗಳು ಇತ್ಯಾದಿಗಳ ಜೊತೆಗೆ, ಗಂಡಸರು ಮುಟ್ಟನ್ನು ಎದುರುಗೊಂಡ ಬಗೆಯೂ ಸಾರ್ವಜನಿಕ ಚರ್ಚೆಯ ವಲಯ ಪ್ರವೇಶಿಸಿರುವದು ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ.

ಹೀಗೆ ಒಂದು ಕಡೆ ಮುಟ್ಟಿನ ಕುರಿತಾದ ಸಂಕುಚಿತತೆಯ ನೆರಳಿನಲ್ಲೇ ಮುಟ್ಟಿನ ಕುರಿತಾದ ಅರಿವು ಹೆಚ್ಚಿಸುವ ಬೆಳಕು ಮೂಡುತ್ತಿರುವುದು ಗಮನಾರ್ಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅದ್ಭುತವಾದ ಲೇಖನ. ಈ ಲೇಖನವನ್ನು “ಡಾಬಸ್ ಪೇಟೆ ವಾಯ್ಸ್” ಕನ್ನಡ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...