Homeಕರ್ನಾಟಕಮುಟ್ಟಿನ ಬೆಳಕು : ಸತ್ಯಾ ಎಸ್

ಮುಟ್ಟಿನ ಬೆಳಕು : ಸತ್ಯಾ ಎಸ್

- Advertisement -
- Advertisement -

‘ಮುಟ್ಟಿನಿಂದ ಹುಟ್ಟು’ ಎನ್ನುವ ಸರಳ ಸತ್ಯ ಎಲ್ಲರಿಗೂ ಬೆಳಕಿನಷ್ಟು ನಿಚ್ಚಳವಾಗಿದ್ದರೂ, ಮುಟ್ಟನ್ನು ಮೈಲಿಗೆ ಎನ್ನುವಷ್ಟು ದ್ರಾಷ್ಟ್ಯ ಮನುಷ್ಯ ಕುಲವನ್ನು ಕಾಡುತ್ತಿರುವುದು ಗಂಭೀರವಾದ ವಿಷಯ. ತನ್ನ ಹುಟ್ಟಿಗೆ ಕಾರಣವಾದ, ನೈಸರ್ಗಿಕವಾದ, ವೈಜ್ಞಾನಿಕವಾದ ಕ್ರಿಯೆಯನ್ನೇ ಮನುಷ್ಯ ತನ್ನ ಅಹಂಕಾರ, ಅಧಿಕಾರ ಲಾಲಸೆ, ದೊಡ್ಡಸ್ತಿಕೆಯ ಅಸ್ತ್ರವಾಗಿ ಬಳಸುತ್ತಿರುವುದು ಮನುಷ್ಯ ಕುಲ ಇನ್ನೂ ಎಷ್ಟೊಂದು ಅವೈಜ್ಞಾನಿಕವಾಗಿ, ಅವೈಚಾರಿಕಾಗಿ ಹಾಗೂ ಅನೈಸರ್ಗಿಕವಾಗಿ ಆಲೋಚಿಸುತ್ತಿದೆ, ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಪ್ರಜಾಸತ್ತಾತ್ಮಕವಾದ ದಸರಾ ಆಚರಣೆಯನ್ನು ಉದ್ಘಾಟಿಸಿದ ಪುರೋಗಾಮಿ ಚಿಂತನೆಯ ಲೇಖಕ ಎಸ್ ಎಲ್ ಬೈರಪ್ಪನವರು ಮುಟ್ಟಾಗುವ ಹೆಂಗಸರು ದೇವಸ್ಥಾನಕ್ಕೆ ಹೋಗುವಂತಿಲ್ಲ, ಆಫೀಸಿಗೆ ಹೋಗಬಹುದು ಎನ್ನುವ ಮೂಲಕ ಬಹುಪಾಲು ಮನುಷ್ಯರ ಹಿಮ್ಮುಖದ ಚಲನೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಹೆಣ್ಣನ್ನು ನಿಯಂತ್ರಿಸುವ ಮತ್ತು ಬಳಸಿಕೊಳ್ಳುವ ಪಿತೃಪ್ರಧಾನ ಹಾಗೂ ಪಾಳೇಗಾರಿ ಮನೋಭಾವವನ್ನು ಯಾವ ಹಿಂಜರಿಕೆ, ಸಂಕೋಚವಿಲ್ಲದೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನೀಲಾಂಚಲದಲ್ಲಿರುವ, ಫಲವಂತಿಕೆಯ ಸ್ವರೂಪ ಎಂದು ಹೆಸರಾದ ದೇವಸ್ಥಾನ, ಕಾಮಾಕ್ಯ ದೇವಿಯ ದೇವಸ್ಥಾನ. ಗರ್ಭಾಶಯ ಆಕೃತಿಯ ಗರ್ಭಗೃಹ, ಯೋನಿ ರೂಪದ ದೇವತೆ ಮತ್ತು ನಸುಗೆಂಪು ಬಣ್ಣದ ಯೋನಿಯಿಂದ ಸ್ರವಿಸುವ ನೀರು- ಇವು ಆ ದೇವಾಲಯದ ಮುಖ್ಯಾಂಶಗಳು. ತಮ್ಮ ಒಂದೊಂದು ಕಾದಂಬರಿಗೂ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಅಪಾರ ಖಚಿತತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುವ ಬೈರಪ್ಪನವರು, ಈ ಕಾಮಾಕ್ಯ ದೇವಸ್ಥಾನಕ್ಕೂ ಹೋಗಿಬಂದಿದ್ದಾರೆ. ಹಾಗಿದ್ದ ಮೇಲೆ, ಮುಟ್ಟಿನ ಕುರಿತು ಇವರು ಯಾವ ರೀತಿಯ ಅನುಸಂಧಾನ ನಡೆಸಿದ್ದಾರೆ? ಎಂದು ಅಚ್ಚರಿಯಾಗುತ್ತದೆ.

ಎಪ್ಪತ್ತರ ದಶಕದ ಎರಡನೇ ಭಾಗದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಚಲಾವಣೆಗೆ ಬಂದಾಗ ಮಹಿಳೆಯರ ನಡುವೆ ಮುಟ್ಟು ಮೌನ ಮುರಿದು ‘ಗುಸುಗುಸು’ ಮಾತಿನ ಅಂಗಳಕ್ಕೆ ಬಂದು ನಿಂತಿತ್ತು. ಸ್ಯಾನಿಟರಿ ಪ್ಯಾಡ್‍ಗಳ ಜಾಹಿರಾತು ಟಿವಿ ಪರದೆಯಲ್ಲಿ ಮೂಡತೊಡಗಿದಾಗ ಗಂಡಸರೂ ಈ ಕುರಿತು ಗುಸುಗುಸು ಮಾಡತೊಡಗಿದರು. ಸ್ಯಾನಿಟರಿ ಪ್ಯಾಡ್ ಕಂಪೆನಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಋತುಸ್ರಾವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭಿಸಿದವು. ಹೀಗೆ ಮಾರುಕಟ್ಟೆಯ ಕಾರಣ ಮುಟ್ಟಿನ ಮಾತು ಕೌಟುಂಬಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ವಿಸ್ತರಣೆಯಾಯಿತು. ಆದರೆ ಸಾಂಸ್ಕøತಿಕವಾಗಿ ಮುಟ್ಟು ಯಾವತ್ತಿಗೂ ಮುಕ್ತವಾಗಿ ಹಾಗೂ ಗುಪ್ತವಾಗಿ ಮಾತಿನಲ್ಲಿ, ಚರ್ಚೆಯಲ್ಲಿ, ಆಚರಣೆಯಲ್ಲಿ ಹಾಗೂ ವಿಜೃಂಭಣೆಯಲ್ಲಿ ವಸ್ತುವಾಗಿದ್ದುಕೊಂಡೇ ಇದೆ.

ಇತ್ತೀಚೆಗೆ ಶಬರಿಮಲೆ ನಿಮಿತ್ತ ಮುಟ್ಟು ಸಾರ್ವಜನಿಕ ಚರ್ಚೆಗೆ ಹೆಚ್ಚೆಚ್ಚು ತೆರೆದುಕೊಂಡು, ಮುಟ್ಟನ್ನು ಗಲೀಜು ಎಂದು ಜರೆಯುವವರ ಮನಸ್ಸಿನ ಕೊಳಕನ್ನೆಲ್ಲ ಹೊರಗೆ ಚೆಲ್ಲುತ್ತಿದೆ. 2015ರ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣನ್, ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಸ್ಕ್ಯಾನ್ ಮಾಡುವ ಯಂತ್ರ ಸ್ಥಾಪಿಸುವ ಕುರಿತು ಮಾತನಾಡಿದಾಗ, ಸಿಟ್ಟಿಗೆದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಕಿತಾ ಅರೋರಾ ‘ಹ್ಯಾಪಿ ಟು ಬ್ಲೀಡ್’ ಎಂಬ ಆಂದೋಲನವನ್ನೇ ಹುಟ್ಟು ಹಾಕಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ಹಿಡಿದುಕೊಂಡ ಯುವತಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ, ಮುಟ್ಟಿಗೆ ಸಂಬಂಧಿಸಿದ ಮೂಢ ಆಚರಣೆಗಳು ಹಾಗೂ ವಿಧಿ ನಿಷೇಧಗಳನ್ನು ವಿರೋಧಿಸಿದರು.

2017ರಲ್ಲಿ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ತೆರಿಗೆ ಹೇರುವ ಕೇಂದ್ರ ಸರ್ಕಾರದ ಮೂರ್ಖ ಕ್ರಮವು ‘ರಕ್ತಕ್ಕೆ ತೆರಿಗೆ’ ಎಂಬ ತೆರಿಗೆ ವಿರೋಧಿ ಚಳವಳಿಯನ್ನು ಹುಟ್ಟುಹಾಕಿತು; 2018ರಲ್ಲಿ ತೆರಿಗೆ ರದ್ಧತಿಗೆ ಕಾರಣವಾಯಿತು. 2018ರ ಸೆಪ್ಟೆಂಬರ್‍ನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಮುಕ್ತ ಅವಕಾಶ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಣ್ಣನ್ನು ಕುರಿತಾಗಿ ಈ ದೇಶಕ್ಕೆ ಇರುವ ಕೊಳಕು ನಿಲುವುಗಳನ್ನೆಲ್ಲ ಬೀದಿಗೆ ಚೆಲ್ಲಿತು. ಹೆಣ್ಣಿನಿಂದಲೇ ಹುಟ್ಟಿದ ದೇವರು ಹೆಣ್ಣಿನಿಂದಲೇ ಅಪವಿತ್ರನಾಗುತ್ತಾನೆ ಎನ್ನುವ ಭಕ್ತ ಗಣದ ಕುರುಡುತನವು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯನ್ನೂ ಅನಾವರಣಗೊಳಿಸಿತು.

ಆದರೆ, ಈ ಕಾರಣಗಳು ಮುಟ್ಟಿನ ಕುರಿತಾದ ಚರ್ಚೆಯನ್ನು ಹೆಚ್ಚಿಸಿವೆ. ಜನರಲ್ಲಿ ಈ ಕುರಿತ ತಿಳಿವಳಿಕೆಯು ಹೆಚ್ಚಾಗುತ್ತಾ ಬಂದಿದೆ. ಮುಟ್ಟಿನ ಸಂದರ್ಭದ ಅಗತ್ಯಗಳ ಕುರಿತು, ಆರೋಗ್ಯದ ಕುರಿತು ಸಾಕಷ್ಟು ಧನಾತ್ಮಕ ಚಿಂತನೆಗಳು, ಬೆಳವಣಿಗೆಗಳು ನಡೆದಿವೆ. ಬರಹಗಾರರು, ಕಾರ್ಯಕರ್ತರು, ಸಂಘಟನೆಗಳು ಮುಟ್ಟಿನ ಕುರಿತು ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಸ್ವತಂತ್ರ ಯುಟ್ಯೂಬ್ ಚಾನೆಲ್‍ಗಳು ‘ಮುಟ್ಟು ಎಂದರೇನು’ ಎಂಬ ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿವೆ. ಮಂಗಳೂರಿನ ಶ್ರೀನಿವಾಸ ಕಾರ್ಕಳ ಅವರು ದಶಕಕ್ಕೂ ಹಿಂದೆಯೇ ‘ಮುಟ್ಟು ಮುಟ್ಟೇಂದೇಕೆ ಹೀಯಾಳಿಸುವಿರಿ?/ಮುಟ್ಟಿನಿಂದಲ್ಲವೇ ನಮ್ಮೆಲ್ಲ ಹುಟ್ಟು/ ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು..’ ಎಂದು ಬರೆದ ಹಾಡು ಅಸಂಖ್ಯಾತ ಮಹಿಳಾ ತರಬೇತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಮುಟ್ಟಿನ ಕುರಿತಾದ ಮುಜುಗರವನ್ನು ಹೊಡೆದೋಡಿಸಿದೆ.

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವ ಜೋಡಿಯೊಂದು ಮುಟ್ಟಿನ ಕುರಿತು ತಿಳಿವಳಿಕೆ ಹೆಚ್ಚಿಸಲು ತಮ್ಮ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸಖೀಭವ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ, ‘ಸುಸ್ಥಿರ ಮುಟ್ಟಿನ ಆರೋಗ್ಯ’ ಕುರಿತು ಆಂದೋಲನವನ್ನೇ ನಡೆಸಿದೆ. ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಜ್ಯೋತಿ ಇಟ್ನಾಳ್ ಮುಟ್ಟಿನ ಆಚರಣೆಗಳು ಹಾಗೂ ವಿಧಿ ನಿಷೇಧಗಳ ಕುರಿತಾಗಿಯೇ ಪಿಎಚ್‍ಡಿ ಸಂಶೋಧನೆಗೆ ಕೈಹಾಕಿದ್ದಾರೆ.

ಕಳೆದ ವರ್ಷ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದಲ್ಲಿ ಮುಟ್ಟಾದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ನ ಬದಲಿಗೆ ಮುಟ್ಟಿನ ಬಟ್ಟಲುಗಳನ್ನು ಒದಗಿಸುವ ಕ್ರಾಂತಿಕಾರಿ ಕ್ರಮವನ್ನು ಅನುಸರಿಸಲಾಯಿತು. ಇದೇ ಮಾರ್ಗವನ್ನು ಅನುಸರಿಸಿ ಕಳೆದ ತಿಂಗಳು ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಶಿವಲೀಲಾ, ಸಂಜ್ಯೋತಿ, ದೀಪಾ ಮತ್ತು ಜ್ಯೋತಿಯವರ ಮುಂದಾಳತ್ವದಲ್ಲಿ ಸಾವಿರಾರು ಮುಟ್ಟಿನ ಬಟ್ಟಲುಗಳು ಪ್ರವಾಹಸಂತ್ರಸ್ತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ, ಅದರ ಬಳಕೆಯ ಕುರಿತು ತಿಳಿಸಿಕೊಡಲಾಗಿದೆ. ಮುಟ್ಟಿನ ಕುರಿತು ವೈಜ್ಞಾನಿಕ ಮಾಹಿತಿ, ಆಚರಣೆಗಳು ಇತ್ಯಾದಿಗಳ ಜೊತೆಗೆ, ಗಂಡಸರು ಮುಟ್ಟನ್ನು ಎದುರುಗೊಂಡ ಬಗೆಯೂ ಸಾರ್ವಜನಿಕ ಚರ್ಚೆಯ ವಲಯ ಪ್ರವೇಶಿಸಿರುವದು ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ.

ಹೀಗೆ ಒಂದು ಕಡೆ ಮುಟ್ಟಿನ ಕುರಿತಾದ ಸಂಕುಚಿತತೆಯ ನೆರಳಿನಲ್ಲೇ ಮುಟ್ಟಿನ ಕುರಿತಾದ ಅರಿವು ಹೆಚ್ಚಿಸುವ ಬೆಳಕು ಮೂಡುತ್ತಿರುವುದು ಗಮನಾರ್ಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅದ್ಭುತವಾದ ಲೇಖನ. ಈ ಲೇಖನವನ್ನು “ಡಾಬಸ್ ಪೇಟೆ ವಾಯ್ಸ್” ಕನ್ನಡ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...