Homeಕರ್ನಾಟಕಮುಟ್ಟಿನ ಬೆಳಕು : ಸತ್ಯಾ ಎಸ್

ಮುಟ್ಟಿನ ಬೆಳಕು : ಸತ್ಯಾ ಎಸ್

- Advertisement -
- Advertisement -

‘ಮುಟ್ಟಿನಿಂದ ಹುಟ್ಟು’ ಎನ್ನುವ ಸರಳ ಸತ್ಯ ಎಲ್ಲರಿಗೂ ಬೆಳಕಿನಷ್ಟು ನಿಚ್ಚಳವಾಗಿದ್ದರೂ, ಮುಟ್ಟನ್ನು ಮೈಲಿಗೆ ಎನ್ನುವಷ್ಟು ದ್ರಾಷ್ಟ್ಯ ಮನುಷ್ಯ ಕುಲವನ್ನು ಕಾಡುತ್ತಿರುವುದು ಗಂಭೀರವಾದ ವಿಷಯ. ತನ್ನ ಹುಟ್ಟಿಗೆ ಕಾರಣವಾದ, ನೈಸರ್ಗಿಕವಾದ, ವೈಜ್ಞಾನಿಕವಾದ ಕ್ರಿಯೆಯನ್ನೇ ಮನುಷ್ಯ ತನ್ನ ಅಹಂಕಾರ, ಅಧಿಕಾರ ಲಾಲಸೆ, ದೊಡ್ಡಸ್ತಿಕೆಯ ಅಸ್ತ್ರವಾಗಿ ಬಳಸುತ್ತಿರುವುದು ಮನುಷ್ಯ ಕುಲ ಇನ್ನೂ ಎಷ್ಟೊಂದು ಅವೈಜ್ಞಾನಿಕವಾಗಿ, ಅವೈಚಾರಿಕಾಗಿ ಹಾಗೂ ಅನೈಸರ್ಗಿಕವಾಗಿ ಆಲೋಚಿಸುತ್ತಿದೆ, ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಪ್ರಜಾಸತ್ತಾತ್ಮಕವಾದ ದಸರಾ ಆಚರಣೆಯನ್ನು ಉದ್ಘಾಟಿಸಿದ ಪುರೋಗಾಮಿ ಚಿಂತನೆಯ ಲೇಖಕ ಎಸ್ ಎಲ್ ಬೈರಪ್ಪನವರು ಮುಟ್ಟಾಗುವ ಹೆಂಗಸರು ದೇವಸ್ಥಾನಕ್ಕೆ ಹೋಗುವಂತಿಲ್ಲ, ಆಫೀಸಿಗೆ ಹೋಗಬಹುದು ಎನ್ನುವ ಮೂಲಕ ಬಹುಪಾಲು ಮನುಷ್ಯರ ಹಿಮ್ಮುಖದ ಚಲನೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಹೆಣ್ಣನ್ನು ನಿಯಂತ್ರಿಸುವ ಮತ್ತು ಬಳಸಿಕೊಳ್ಳುವ ಪಿತೃಪ್ರಧಾನ ಹಾಗೂ ಪಾಳೇಗಾರಿ ಮನೋಭಾವವನ್ನು ಯಾವ ಹಿಂಜರಿಕೆ, ಸಂಕೋಚವಿಲ್ಲದೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನೀಲಾಂಚಲದಲ್ಲಿರುವ, ಫಲವಂತಿಕೆಯ ಸ್ವರೂಪ ಎಂದು ಹೆಸರಾದ ದೇವಸ್ಥಾನ, ಕಾಮಾಕ್ಯ ದೇವಿಯ ದೇವಸ್ಥಾನ. ಗರ್ಭಾಶಯ ಆಕೃತಿಯ ಗರ್ಭಗೃಹ, ಯೋನಿ ರೂಪದ ದೇವತೆ ಮತ್ತು ನಸುಗೆಂಪು ಬಣ್ಣದ ಯೋನಿಯಿಂದ ಸ್ರವಿಸುವ ನೀರು- ಇವು ಆ ದೇವಾಲಯದ ಮುಖ್ಯಾಂಶಗಳು. ತಮ್ಮ ಒಂದೊಂದು ಕಾದಂಬರಿಗೂ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಅಪಾರ ಖಚಿತತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುವ ಬೈರಪ್ಪನವರು, ಈ ಕಾಮಾಕ್ಯ ದೇವಸ್ಥಾನಕ್ಕೂ ಹೋಗಿಬಂದಿದ್ದಾರೆ. ಹಾಗಿದ್ದ ಮೇಲೆ, ಮುಟ್ಟಿನ ಕುರಿತು ಇವರು ಯಾವ ರೀತಿಯ ಅನುಸಂಧಾನ ನಡೆಸಿದ್ದಾರೆ? ಎಂದು ಅಚ್ಚರಿಯಾಗುತ್ತದೆ.

ಎಪ್ಪತ್ತರ ದಶಕದ ಎರಡನೇ ಭಾಗದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಚಲಾವಣೆಗೆ ಬಂದಾಗ ಮಹಿಳೆಯರ ನಡುವೆ ಮುಟ್ಟು ಮೌನ ಮುರಿದು ‘ಗುಸುಗುಸು’ ಮಾತಿನ ಅಂಗಳಕ್ಕೆ ಬಂದು ನಿಂತಿತ್ತು. ಸ್ಯಾನಿಟರಿ ಪ್ಯಾಡ್‍ಗಳ ಜಾಹಿರಾತು ಟಿವಿ ಪರದೆಯಲ್ಲಿ ಮೂಡತೊಡಗಿದಾಗ ಗಂಡಸರೂ ಈ ಕುರಿತು ಗುಸುಗುಸು ಮಾಡತೊಡಗಿದರು. ಸ್ಯಾನಿಟರಿ ಪ್ಯಾಡ್ ಕಂಪೆನಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಋತುಸ್ರಾವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭಿಸಿದವು. ಹೀಗೆ ಮಾರುಕಟ್ಟೆಯ ಕಾರಣ ಮುಟ್ಟಿನ ಮಾತು ಕೌಟುಂಬಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ವಿಸ್ತರಣೆಯಾಯಿತು. ಆದರೆ ಸಾಂಸ್ಕøತಿಕವಾಗಿ ಮುಟ್ಟು ಯಾವತ್ತಿಗೂ ಮುಕ್ತವಾಗಿ ಹಾಗೂ ಗುಪ್ತವಾಗಿ ಮಾತಿನಲ್ಲಿ, ಚರ್ಚೆಯಲ್ಲಿ, ಆಚರಣೆಯಲ್ಲಿ ಹಾಗೂ ವಿಜೃಂಭಣೆಯಲ್ಲಿ ವಸ್ತುವಾಗಿದ್ದುಕೊಂಡೇ ಇದೆ.

ಇತ್ತೀಚೆಗೆ ಶಬರಿಮಲೆ ನಿಮಿತ್ತ ಮುಟ್ಟು ಸಾರ್ವಜನಿಕ ಚರ್ಚೆಗೆ ಹೆಚ್ಚೆಚ್ಚು ತೆರೆದುಕೊಂಡು, ಮುಟ್ಟನ್ನು ಗಲೀಜು ಎಂದು ಜರೆಯುವವರ ಮನಸ್ಸಿನ ಕೊಳಕನ್ನೆಲ್ಲ ಹೊರಗೆ ಚೆಲ್ಲುತ್ತಿದೆ. 2015ರ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣನ್, ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಸ್ಕ್ಯಾನ್ ಮಾಡುವ ಯಂತ್ರ ಸ್ಥಾಪಿಸುವ ಕುರಿತು ಮಾತನಾಡಿದಾಗ, ಸಿಟ್ಟಿಗೆದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಕಿತಾ ಅರೋರಾ ‘ಹ್ಯಾಪಿ ಟು ಬ್ಲೀಡ್’ ಎಂಬ ಆಂದೋಲನವನ್ನೇ ಹುಟ್ಟು ಹಾಕಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ಹಿಡಿದುಕೊಂಡ ಯುವತಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ, ಮುಟ್ಟಿಗೆ ಸಂಬಂಧಿಸಿದ ಮೂಢ ಆಚರಣೆಗಳು ಹಾಗೂ ವಿಧಿ ನಿಷೇಧಗಳನ್ನು ವಿರೋಧಿಸಿದರು.

2017ರಲ್ಲಿ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ತೆರಿಗೆ ಹೇರುವ ಕೇಂದ್ರ ಸರ್ಕಾರದ ಮೂರ್ಖ ಕ್ರಮವು ‘ರಕ್ತಕ್ಕೆ ತೆರಿಗೆ’ ಎಂಬ ತೆರಿಗೆ ವಿರೋಧಿ ಚಳವಳಿಯನ್ನು ಹುಟ್ಟುಹಾಕಿತು; 2018ರಲ್ಲಿ ತೆರಿಗೆ ರದ್ಧತಿಗೆ ಕಾರಣವಾಯಿತು. 2018ರ ಸೆಪ್ಟೆಂಬರ್‍ನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಮುಕ್ತ ಅವಕಾಶ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಣ್ಣನ್ನು ಕುರಿತಾಗಿ ಈ ದೇಶಕ್ಕೆ ಇರುವ ಕೊಳಕು ನಿಲುವುಗಳನ್ನೆಲ್ಲ ಬೀದಿಗೆ ಚೆಲ್ಲಿತು. ಹೆಣ್ಣಿನಿಂದಲೇ ಹುಟ್ಟಿದ ದೇವರು ಹೆಣ್ಣಿನಿಂದಲೇ ಅಪವಿತ್ರನಾಗುತ್ತಾನೆ ಎನ್ನುವ ಭಕ್ತ ಗಣದ ಕುರುಡುತನವು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯನ್ನೂ ಅನಾವರಣಗೊಳಿಸಿತು.

ಆದರೆ, ಈ ಕಾರಣಗಳು ಮುಟ್ಟಿನ ಕುರಿತಾದ ಚರ್ಚೆಯನ್ನು ಹೆಚ್ಚಿಸಿವೆ. ಜನರಲ್ಲಿ ಈ ಕುರಿತ ತಿಳಿವಳಿಕೆಯು ಹೆಚ್ಚಾಗುತ್ತಾ ಬಂದಿದೆ. ಮುಟ್ಟಿನ ಸಂದರ್ಭದ ಅಗತ್ಯಗಳ ಕುರಿತು, ಆರೋಗ್ಯದ ಕುರಿತು ಸಾಕಷ್ಟು ಧನಾತ್ಮಕ ಚಿಂತನೆಗಳು, ಬೆಳವಣಿಗೆಗಳು ನಡೆದಿವೆ. ಬರಹಗಾರರು, ಕಾರ್ಯಕರ್ತರು, ಸಂಘಟನೆಗಳು ಮುಟ್ಟಿನ ಕುರಿತು ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಸ್ವತಂತ್ರ ಯುಟ್ಯೂಬ್ ಚಾನೆಲ್‍ಗಳು ‘ಮುಟ್ಟು ಎಂದರೇನು’ ಎಂಬ ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿವೆ. ಮಂಗಳೂರಿನ ಶ್ರೀನಿವಾಸ ಕಾರ್ಕಳ ಅವರು ದಶಕಕ್ಕೂ ಹಿಂದೆಯೇ ‘ಮುಟ್ಟು ಮುಟ್ಟೇಂದೇಕೆ ಹೀಯಾಳಿಸುವಿರಿ?/ಮುಟ್ಟಿನಿಂದಲ್ಲವೇ ನಮ್ಮೆಲ್ಲ ಹುಟ್ಟು/ ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು..’ ಎಂದು ಬರೆದ ಹಾಡು ಅಸಂಖ್ಯಾತ ಮಹಿಳಾ ತರಬೇತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಮುಟ್ಟಿನ ಕುರಿತಾದ ಮುಜುಗರವನ್ನು ಹೊಡೆದೋಡಿಸಿದೆ.

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವ ಜೋಡಿಯೊಂದು ಮುಟ್ಟಿನ ಕುರಿತು ತಿಳಿವಳಿಕೆ ಹೆಚ್ಚಿಸಲು ತಮ್ಮ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸಖೀಭವ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ, ‘ಸುಸ್ಥಿರ ಮುಟ್ಟಿನ ಆರೋಗ್ಯ’ ಕುರಿತು ಆಂದೋಲನವನ್ನೇ ನಡೆಸಿದೆ. ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಜ್ಯೋತಿ ಇಟ್ನಾಳ್ ಮುಟ್ಟಿನ ಆಚರಣೆಗಳು ಹಾಗೂ ವಿಧಿ ನಿಷೇಧಗಳ ಕುರಿತಾಗಿಯೇ ಪಿಎಚ್‍ಡಿ ಸಂಶೋಧನೆಗೆ ಕೈಹಾಕಿದ್ದಾರೆ.

ಕಳೆದ ವರ್ಷ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದಲ್ಲಿ ಮುಟ್ಟಾದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ನ ಬದಲಿಗೆ ಮುಟ್ಟಿನ ಬಟ್ಟಲುಗಳನ್ನು ಒದಗಿಸುವ ಕ್ರಾಂತಿಕಾರಿ ಕ್ರಮವನ್ನು ಅನುಸರಿಸಲಾಯಿತು. ಇದೇ ಮಾರ್ಗವನ್ನು ಅನುಸರಿಸಿ ಕಳೆದ ತಿಂಗಳು ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಶಿವಲೀಲಾ, ಸಂಜ್ಯೋತಿ, ದೀಪಾ ಮತ್ತು ಜ್ಯೋತಿಯವರ ಮುಂದಾಳತ್ವದಲ್ಲಿ ಸಾವಿರಾರು ಮುಟ್ಟಿನ ಬಟ್ಟಲುಗಳು ಪ್ರವಾಹಸಂತ್ರಸ್ತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ, ಅದರ ಬಳಕೆಯ ಕುರಿತು ತಿಳಿಸಿಕೊಡಲಾಗಿದೆ. ಮುಟ್ಟಿನ ಕುರಿತು ವೈಜ್ಞಾನಿಕ ಮಾಹಿತಿ, ಆಚರಣೆಗಳು ಇತ್ಯಾದಿಗಳ ಜೊತೆಗೆ, ಗಂಡಸರು ಮುಟ್ಟನ್ನು ಎದುರುಗೊಂಡ ಬಗೆಯೂ ಸಾರ್ವಜನಿಕ ಚರ್ಚೆಯ ವಲಯ ಪ್ರವೇಶಿಸಿರುವದು ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ.

ಹೀಗೆ ಒಂದು ಕಡೆ ಮುಟ್ಟಿನ ಕುರಿತಾದ ಸಂಕುಚಿತತೆಯ ನೆರಳಿನಲ್ಲೇ ಮುಟ್ಟಿನ ಕುರಿತಾದ ಅರಿವು ಹೆಚ್ಚಿಸುವ ಬೆಳಕು ಮೂಡುತ್ತಿರುವುದು ಗಮನಾರ್ಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅದ್ಭುತವಾದ ಲೇಖನ. ಈ ಲೇಖನವನ್ನು “ಡಾಬಸ್ ಪೇಟೆ ವಾಯ್ಸ್” ಕನ್ನಡ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...