Homeಮುಖಪುಟದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ...

ದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ…

’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ "ದೇಶಪ್ರೇಮದ ಆಯಾಮಗಳು"ಎಂಬುವಲ್ಲಿಗೆ ಬಂದು ನಿಂತಿದೆ.

- Advertisement -
- Advertisement -

ಯುವ ಬರಹಗಾರರು, ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾಗುತ್ತ ತಮ್ಮ ಓದು-ಬರಹವನ್ನು ತಾವೇ ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮ-ಕಮ್ಮಟವೇ ನಾವು-ನಮ್ಮಲ್ಲಿ. 2002ರಿಂದ ಆರಂಭವಾಗಿ ಹಲವು ಪುಟ್ಟ ಹೆಜ್ಜೆಗಳ ದಿಟ್ಟ ಪಯಣ ನಡೆಸುತ್ತಿರುವ ನಾವು-ನಮ್ಮಲ್ಲಿ ಕಮ್ಮಟವು ಈ ಬಾರಿ ಗಂಗಾವತಿಯಲ್ಲಿ ಜರುಗಲಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಜರುಗುವ ನಾವು ನಮ್ಮಲ್ಲಿ ಬಳಗ ಪ್ರತಿವರ್ಷವೂ ಹಿಗ್ಗುತ್ತಲೇ ಇದೆ.  ಸಾಹಿತಿ-ಬರಹಗಾರರಿಗೆ ಮಾತ್ರ ಸೀಮಿತವಾಗದಿರುವುದು, ಸಮಕಾಲೀನತೆಗೆ ತೆರೆದುಕೊಂಡಿರುವುದು ಮತ್ತು ಎಲ್ಲಾ ಜೀವಪರರನ್ನು ಮುಕ್ತವಾಗಿ ಅಪ್ಪಿಕೊಳ್ಳುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ನಾವು ನಮ್ಮ ಬರಹಗಳ ಆಚೆಗೂ ’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ “ದೇಶಪ್ರೇಮದ ಆಯಾಮಗಳು”ಎಂಬುವಲ್ಲಿಗೆ ಬಂದು ನಿಂತಿದೆ.

ದೇವನೂರು ಮಹಾದೇವ, ಭಾನುಮುಷ್ತಾಕ್, ಯು.ಆರ್.ಅನಂತಮೂರ್ತಿ, ಜಿ.ರಾಜಶೇಖರ್, ಫಣಿರಾಜ್, ಕೆ.ಟಿ.ಶಿವಪ್ರಸಾದ್‌, ಎಚ್‌.ನಾಗವೇಣಿ, ಹೆಚ್.ಎಸ್.ರಾಘವೇಂದ್ರರಾವ್, ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ, ವಿನಯಾ, ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಸುಗತ ಶ್ರೀನಿವಾಸರಾಜು, ಜಿ.ಎನ್.ದೇವಿ, ಅಜಿತ್ ಪಿಳ್ಳೆ, ಜಿ.ರಾಜಶೇಖರ್, ಫಣಿರಾಜು, ಕೆ.ನೀಲಾ, ಕೆ.ರಾಮಯ್ಯ, ರಾಜೇಂದ್ರ ಚೆನ್ನಿ ಒಳಗೊಂಡಂತೆ ಕರ್ನಾಟಕದ ಬಹುಪಾಲು ಹಿರಿ ಕಿರಿ ಬರಹಗಾರ್ತಿ ಬರಹಗಾರರು ನಾವುನಮ್ಮಲ್ಲಿ ಬಳಗದ ಬೆನ್ನಿಗಿರುವುದು ಕಾಲದ ಎಚ್ಚರವನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಸ್ವಾತಂತ್ರ್ಯ ಚಳವಳಿಯ ಕಾಲ ಮತ್ತು ನಂತರದಲ್ಲಿ ಭಾರತೀಯರೆಲ್ಲರೂ ಒಂದು ಎಂಬ ಬೆಸುಗೆಗೆ ಕೆಲಸ ಮಾಡಿದ ದೇಶಪ್ರೇಮ ಎಂಬ ಪದವೀಗ ಜಾತಿ, ಧರ್ಮ, ಬಣ್ಣ, ಪ್ರದೇಶ, ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಲು ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಹಾಗಾಗಿ ನಿಜವಾದ ದೇಶಪ್ರೇಮವೆಂದರೇನು, ಅದರ ವಿವಿಧ ಆಯಾಮಗಳೇನು, ದೇಶಪ್ರೇಮದ ಅಪವ್ಯಾಖ್ಯಾನವನ್ನು ತಡೆಯಲು ನಾವು ಮಾಡಬೇಕಾದುದ್ದೇನು ಎಂಬುದರ ಮುಕ್ತ ಆರೋಗ್ಯಕರ ಚರ್ಚೆಗೆ ಈ ಬಾರಿಯ ನಾವು ನಮ್ಮಲ್ಲಿ ವೇದಿಕೆ ಸಿದ್ದಗೊಂಡಿದೆ.

ಆಗಸ್ಟ್‌ ಆರಂಭದಲ್ಲಿ ನಡೆಯಬೇಕಿದ್ದ ಈ ಬಾರಿಯ ನಾವು ನಮ್ಮಲ್ಲಿ ಕಾರ್ಯಕ್ರಮ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಕ್ಕೆ ಮೂಂದೂಡಿ ಈಗ ನವೆಂಬರ್‌ 16-17ರ ಶನಿವಾರ-ಭಾನುವಾರಕ್ಕೆ ನಿಗಧಿಯಾಗಿದೆ. ಗಂಗಾವತಿಯ ಐಎಂಎ ಸಭಾಂಗಣದಲ್ಲಿ ನಡೆಯುವ ನಾವು-ನಮ್ಮಲ್ಲಿ ಕಮ್ಮಟವನ್ನು ನವೆಂಬರ್‌ 16ರ ಶನಿವಾರ ಬೆಳಿಗ್ಗೆ 10:30ಕ್ಕೆ ಹಿರಿಯ ಚಿಂತಕರು ಮತ್ತು ಹೋರಾಟಗಾರರಾದ ಜಿ.ರಾಮಕೃಷ್ಣರವರು ಉದ್ಘಾಟಿಸಲಿದ್ದಾರೆ. ಹೋರಾಟಗಾರ್ತಿ, ಚಿಂತಕಿ ಕೆ.ನೀಲಾರವರು ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು, ಶೈಲಜಾ ಹಿರೇಮಠ, ಜೆ.ಭಾರದ್ವಾಜ್‌, ಸಿ.ಎಚ್‌ ನಾರಿನಾಳ್‌ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 2 ಗಂಟೆಗೆ “ಭಾರತೀಯತೆಯ ವ್ಯಾಖ್ಯಾನಗಳು” ಗೋಷ್ಠಿ ಜರುಗಲಿದ್ದು ಚಿಂತಕರಾದ ಶಿವಸುಂದರ್‌ ಮತ್ತು ಅಂಕಣಕಾರರಾದ ಎ.ನಾರಾಯಣರವರು ಮಾತನಾಡಲಿದ್ದಾರೆ. ಡಾ.ಪ್ರಕಾಶ್‌ ಬಡವನಹಳ್ಳಿ ಮತ್ತು ಡಾ.ನರಸಿಂಹಮೂರ್ತಿ ಹಳೇಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಅರ್ಹನಿಶಿ ಪ್ರಕಾಶನ ಹೊರತಂದಿರುವ ನಾಗರಾಜ ಕೋರಿಯವರ “ತನುಬಿಂದಿಗೆ” ಕಥಾಸಂಕಲನ ಬಿಡುಗಡೆಯಾಗಲಿದೆ. ಯುವ ಲೇಖಕರಾದ ಚಿದಾನಂದಸಾಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಅಮರೇಶ ನುಗಡೋಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಸಂಜೆ 5:30ಕ್ಕೆ ಎಲ್ಲರ ಮೆಚ್ಚಿನ ಕವಿಗೋಷ್ಠಿ ನಡೆಯಲಿದ್ದು ಗಜಲ್‌ ಕವಿ ಆರಿಫ್‌ ರಾಜಾ ಆಶಯ ಮಾತುಗಳನ್ನಾಡಿದರೆ, ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮತ್ತು ಮುಖ್ಯವಾಗಿ ಹೈದರಾಬಾದ್‌ ಕರ್ನಾಟಕದ ಯುವಕವಿಗಳು ಕವನ ವಾಚಿಸಲು ಸಿದ್ದರಿದ್ದಾರೆ. ಅಲ್ಲಿಗೆ ಮೊದಲ ದಿನ ಕಮ್ಮಟ ಕೊನೆಗೊಳ್ಳಲಿದೆ.

ನವೆಂಬರ್‌ 17ರ ಭಾನುವಾರ ಬೆಳಿಗ್ಗೆ 9:30ಕ್ಕೆ ಎರಡನೇ ದಿನ ಕಮ್ಮಟ ಆರಂಭವಾಗಲಿದ್ದು ಮೊದಲ ಗೋಷ್ಠಿ “ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು” ಕುರಿತು ನಡೆಯಲಿದೆ. ಬಸವತತ್ವದ ಶಾಸಕ ಎಂದೇ ಖ್ಯಾತರಾದ ಬಸವಕಲ್ಯಾಣದ ಶಾಸಕರಾದ ಬಿ.ನಾರಾಯಣ್‌ರಾವ್‌ ಮತ್ತು ಹೋರಾಟಗಾರರಾದ ಸಿದ್ದನಗೌಡ ಪಾಟೀಲ್‌ರವರು ಮಾತನಾಡಲಿದ್ದು, ನಯನಾ ಮೋಟಮ್ಮ ಮತ್ತು ಲಿಂಗರಾಜ ಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪ್ರಜಾಪ್ರಭುತ್ವ: ಆಶಯ ಮತ್ತು ಕನಸು ಗೋಷ್ಟಿ ನಡೆಯಲಿದ್ದು ಆರ್‌.ಪ್ರತಿಭಾ, ಅಶ್ವಿನಿ ಮದನಕರ, ಕೊಟ್ರಪ್ಪ ಹಿರೇಮಾಗಡಿಯವರು ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟಗಾರ ರಝಾಕ್‌ ಉಸ್ತಾದ್‌ರವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯದಾಗಿ ಮಧ್ಯಾಹ್ನ 3;30ಕ್ಕೆ ಸಮಾರೋಪ ಗೋಷ್ಠಿ ಜರುಗಲಿದ್ದು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಸಮಾರೋಪ ಮಾತುಗಳನ್ನಾಡಲಿದ್ದು, ವಿಜಯಪುರ ಅಕ್ಕಮಹಾದೇವಿ ವಿ.ವಿಯ ಉಪಕುಲಪತಿಗಳಾದ ಡಾ.ಸಬೀಹಾರವರು ಗೋಷ್ಠಿಯ ಅಧ್ಯಕ್ಷೀಯ ಮಾತಗಳನ್ನಾಡಲಿದ್ದಾರೆ. ಡಾ.ಶಿವಕುಮಾರ ಮಾಲಿಪಾಟೀಲ್‌, ಸಂಗಮೇಶ ಸುಗ್ರೀವ ಮತ್ತು ಮಹಾಲಕ್ಷ್ಮಿ ಕೇಸರಹಟ್ಟಿಯವರು ಉಪಸ್ಥಿತರಿರುತ್ತಾರೆ.

ಒಟ್ಟಿನಲ್ಲಿ ಎರಡು ದಿನಗಳ ಕಾಲ ಸಮಾನ ಆಶಯದ ಮನಸ್ಸುಗಳು ಸಮಾಜದ ಕರೆಗೆ ಕಿವಿಯಾಗುವ, ದನಿಯಾಗುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಲಿದ್ದು ಭಾಗವಹಿಸಲು ಆಸಕ್ತಿಯುಳ್ಳವರು ನಾವು ನಮ್ಮಲ್ಲಿ ಬಳಗದ ಜಾಜಿ ದೇವೆಂದ್ರಪ್ಪ 9481662735 ಮತ್ತು ಟಿ.ಎಂ ಉಷಾರಾಣಿ: 9036550365 ಇವರನ್ನು ಸಂಪರ್ಕಿಸಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...