Homeಕರ್ನಾಟಕನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

ನಂದಿನಿ ವರ್ಸಸ್ ಅಮುಲ್ ಪ್ರಶ್ನೆ ಮಾರುಕಟ್ಟೆ ಆಕ್ರಮಣವಲ್ಲ; ಇದು ವಿಲೀನದ ಆಕ್ರಮಣ

- Advertisement -
- Advertisement -

ಇಂದು ನಮ್ಮ ದೇಶ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದುಕುತ್ತಿದೆ. ಅಮುಲ್ ಉತ್ಪನ್ನಗಳು (ಐಸ್‌ಕ್ರೀಮ್, ಚೀಸ್, ಬೆಣ್ಣೆ, ತುಪ್ಪ, ಪನ್ನೀರ್, ಪಿಜ್ಜಾ, ಚೀಸ್ ಪಿಜ್ಜಾ, ಚಾಕಲೇಟ್, ಭಾರತೀಯ ಸಿಹಿ ಪದಾರ್ಥಗಳು ಇತ್ಯಾದಿ) ಕರ್ನಾಟಕದಲ್ಲಿ ಬಹಳ ಹಿಂದಿನಿಂದ ಮಾರಾಟವಾಗುತ್ತಿವೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ, ದೊಡ್ಡ ನಗರಗಳಾದ ಮೈಸೂರು-ಬೆಂಗಳೂರು-ಮಂಗಳೂರುಗಳಲ್ಲಿ ಅಮುಲ್ ಉತ್ಪನ್ನಗಳು ಮಾರಾಟವಾಗುತ್ತಿವೆ. ಇದೀಗ ಬೆಂಗಳೂರಿನಲ್ಲಿ ಹಾಲು-ಮೊಸರು ಮಾರಾಟವನ್ನು ಆರಂಭಿಸುವುದರ ಬಗ್ಗೆ ಅಮುಲ್ ಸಾರ್ವಜನಿಕ ಹೇಳಿಕೆ ನೀಡಿದೆ. ಕರ್ನಾಟಕದಲ್ಲಿ ಅಮುಲ್‌ನ ಮಾರುಕಟ್ಟೆ ವಿಸ್ತರಣೆ ಮಾಡಿದರೆ ನಮ್ಮ ಅಭ್ಯಂತರಕ್ಕೆ ಕಾರಣವಿಲ್ಲ. ಈ ವಿವಾದದಲ್ಲಿನ ಮೂಲದಲ್ಲಿರುವ ’ನಂದಿನಿ-ಅಮುಲ್’ ವಿಲೀನದ ಪ್ರಶ್ನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆ ಪ್ರವೇಶ ಮತ್ತು ವಿಲೀನಗಳ ನಡುವೆ ನಾವು ಗೊಂದಲ ಮಾಡಿಕೊಳ್ಳಬಾರದು. ಈಗ ನಂದಿನಿ ರಕ್ಷಣೆಯ ಬಗ್ಗೆ ಮತ್ತು ಅಮುಲ್ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದು ಅದರ ಮಾರುಕಟ್ಟೆ ಪ್ರವೇಶದ ಬಗ್ಗೆಯಲ್ಲ. ಆದರೆ ಕರ್ನಾಟಕದ ಆಳುವ ಪಕ್ಷವು ಅಮಿತ್ ಷಾ ಹಮ್ಮಿಕೊಂಡಿರುವ ವಿಲೀನದ ಪ್ರಶ್ನೆಯನ್ನು ಮರೆಮಾಡಿ ಅಮುಲ್ ಮಾರುಕಟ್ಟೆ ಪ್ರವೇಶದ ಬಗ್ಗೆ ಮಾತ್ರ ಮಾತನಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ ವಿಲೀನದ ಪ್ರಶ್ನೆಯನ್ನು ಮುಂಚೂಣಿಗೆ ತಂದಿದ್ದಾರೆ. ಅಮಿತ್ ಷಾ ಅವರು ಒಕ್ಕೂಟ ಸರ್ಕಾರದ ಸಹಕಾರ ಮಂತ್ರಿ. ಇವರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ, ವಿನಾಕಾರಣವಾಗಿ-ಉದ್ದೇಶರಹಿತವಾಗಿ ಅಮುಲ್-ನಂದಿನಿ ವಿಲೀನದ ಯೋಜನೆಯನ್ನು ಮುಂದಿಡುವವರಲ್ಲ. ಇಲ್ಲಿರುವ ಅಪಾಯವನ್ನು ನಾವು ಗುರುತಿಸಬೇಕು.

ಅಮುಲ್-ನಂದಿನಿ ಪೈಪೋಟಿ

ಇದು ಕೇವಲ ಮಾರುಕಟ್ಟೆ ಪ್ರವೇಶದ ಬಗ್ಗೆಯಾಗಿದ್ದರೆ ನಾವು ಭಯ ಪಡಬೇಕಾಗಿರಲಿಲ್ಲ. ಏಕೆಂದರೆ ಮಾರುಕಟ್ಟೆ ಪೈಪೋಟಿಯಲ್ಲಿ ನಂದಿನಿಯು ಅಮುಲ್‌ಗಿಂತ ಉತ್ತಮ ಸ್ಥಾನದಲ್ಲಿದೆ. ಅಮುಲ್ ಹಾಲು ಲೀಟರ್‌ಗೆ ರೂ. 65; ನಂದಿನಿ ಹಾಲು ರೂ. 49. ಅಮುಲ್ ಮೊಸರು ಲೀಟರ್‌ಗೆ ರೂ. 67; ನಂದಿನಿ ಮೊಸರು ರೂ. 47. ಕೆನೆಭರಿತ ಹಾಲಿನ ಬೆಲೆ ಅಮುಲ್ ರೂ. 64. ನಂದಿನಿಯದ್ದು 900 ಮಿಲಿಲೀಟರ್‌ಗೆ ರೂ. 50. ಅಮುಲ್ ದೇಶದಲ್ಲಿ ಪ್ರಥಮ ಸ್ಥಾನದಲ್ಲಿರುವ ಹಾಲು ಸಹಕಾರ ಸಂಸ್ಥೆಯಾದರೆ ನಂದಿನಿ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ. ಅಮುಲ್ ಹೇಗೆ ಗುಜರಾತಿನ ಹೊರಗೆ ತನ್ನ ವ್ಯವಹಾರವನ್ನು ಬೆಳೆಸುತ್ತಿದೆಯೋ ಅದೇ ರೀತಿಯಲ್ಲಿ ನಂದಿನಿಯು ತನ್ನ ವ್ಯಾಪಾರವನ್ನು ರಾಜ್ಯದ ಹೊರಗೆ ಬೆಳೆಸುತ್ತಿದೆ. ಉದಾ: ಪ್ರತಿ ದಿನ ನಂದಿನಿ 2.5 ಲಕ್ಷ ಲೀಟರ್ ಹಾಲನ್ನು ಮುಂಬೈಗೆ ರವಾನಿಸುತ್ತಿದೆ. ಹೈದರಾಬಾದಿಗೆ ದಿನನಿತ್ಯ 1.5 ಲಕ್ಷ ಲೀಟರ್ ಹಾಲನ್ನು ರವಾನಿಸುತ್ತಿದೆ. ತಮಿಳುನಾಡಿನಲ್ಲಿಯೂ ಮಾರಾಟ ಮಾಡುತ್ತಿದೆ.

ಅಮಿತ್ ಷಾ ಸೃಷ್ಟಿಸಿದ ವಿವಾದ!

ಕಳೆದ ಕೆಲವು ತಿಂಗಳುಗಳ ಹಿಂದೆ ಒಕ್ಕೂಟ ಸರ್ಕಾರದ ಗೃಹ-ಸಹಕಾರ ಮಂತ್ರಿ ಅಮಿತ್ ಷಾ ಅವರು ಮಂಡ್ಯದಲ್ಲಿ ಮಾತನಾಡುತ್ತಾ ’ನಂದಿನಿ-ಅಮುಲ್ ಸಹಕಾರಿ ಸಂಘಗಳನ್ನು ವಿಲೀನಗೊಳಿಸಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವಂತೆ ಮಾಡುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇವರು ರಾಷ್ಟ್ರದ ಸಹಕಾರಿ ಮಂತ್ರಿ. ಆದರೆ ಇವರು ’ವಿಲೀನ’ದ ಮಾತನಾಡಿ ಕರ್ನಾಟಕ-ಗುಜರಾತ್ ನಡುವೆ ಅಸಹಕಾರ ಬೆಳೆಯುವಂತೆ ಮಾಡ್ಡಿದ್ದಾರೆ. ಈ ವಿಲೀನ ಎನ್ನುವುದು ಕರ್ನಾಟಕದ ಸಂದರ್ಭದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದ, ಕರ್ನಾಟಕದ ಆರ್ಥಿಕತೆಯ ಪ್ರತೀಕವಾಗಿದ್ದ ಮೈಸೂರು ಬ್ಯಾಂಕನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಈಗ ಮೈಸೂರು ಬ್ಯಾಂಕು ಇಲ್ಲ. ಅದು ಕೇವಲ ಒಂದು ಹಣಕಾಸಿನ ಬ್ಯಾಂಕಾಗಿರಲಿಲ್ಲ. ಕರ್ನಾಟಕದ ಅಸ್ಮಿತೆಯಾಗಿತ್ತು. ಬೆಂಗಳೂರಿನ ಒಂದು ಕೇಂದ್ರ ಸ್ಥಾನದಲ್ಲಿ ಮೈಸೂರು ಬ್ಯಾಂಕ್ ವೃತ್ತ ಇದೆ. ನಮಗೆ ಮೈಸೂರು

ಅಮಿತ್ ಶಾ

ಬ್ಯಾಂಕನ್ನು ಉಳಿಸಿಕೊಳ್ಳಲಾಗಲಿಲ್ಲ; ಮೈಸೂರು ಬ್ಯಾಂಕ್ ವೃತ್ತವನ್ನಾದರೂ ಉಳಿಸಿಕೊಳ್ಳೋಣ. ಇದನ್ನೂ ಬದಲಾಯಿಸಲು ಬಿಡಬಾರದು. ವಿಜಯ ಬ್ಯಾಂಕನ್ನು ಗುಜರಾತಿನ ಬರೋಡ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗಿದೆ. ಕರ್ನಾಟಕದ ಬಂದರುಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಮುಂತಾದವುಗಳ ನಿರ್ಮಾಣದ ಕ್ರಾಂಟ್ರಾಕ್ಟ್‌ಅನ್ನು ಗುಜರಾತಿನ ಆದಾನಿ ಎಂಬ ವ್ಯಾಪಾರಿಗೆ ನೀಡಲಾಗಿದೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಸಂಸ್ಥೆಯನ್ನು ಐಐಟಿ ರೀತಿಯ ಸಂಸ್ಥೆಯನ್ನಾಗಿ ಮಾಡುತ್ತೇವೆ ಎಂದು ಅದನ್ನು ನಾಶ ಮಾಡಲಾಗುತ್ತಿದೆ. ಸರ್ ಎಂ. ವಿಶ್ವೇಶ್ವರಯ್ಯ-ನಾಲ್ವಡಿ ಕೃಷ್ಣರಾಜ ಒಡೆಯರ್ 1924ರಲ್ಲಿ ಸ್ಥಾಪಿಸಿದ್ದ ’ವಿಐಎಸ್‌ಎಲ್’ ಸ್ಟೀಲ್ ಕಾರ್ಖಾನೆಯನ್ನು ಇಂದು ಮುಚ್ಚಲಾಗುತ್ತಿದೆ. ಇದೇ ರೀತಿಯ ಭಯಾನಕ ಸ್ಥಿತಿಯು ’ವಿಲೀನ’ ವಿವಾದದಿಂದ ನಂದಿನಿಗೂ ಬರಬಹುದು ಎಂಬ ಆತಂಕ ಜನತೆಯ ಮನದಲ್ಲಿ ಉಂಟಾಗಿದ್ದರೆ ಅದರಲ್ಲಿ ಸತ್ಯಾಂಶವಿಲ್ಲದಿಲ್ಲ.

ಇದನ್ನೂ ಓದಿ: ಅಮುಲ್‌ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ

ಗುಜರಾತ್ ಹೇಳಿ ಕೇಳಿ ವ್ಯಾಪಾರಿಗಳ ನಾಡು. ಕರ್ನಾಟಕದ ಎಲ್ಲ ನಗರಗಳಲ್ಲಿಯೂ ಗುಜರಾತಿ ವ್ಯಾಪಾರಿಗಳಿದ್ದಾರೆ. ಇದರಿಂದ ನಮ್ಮ ಸಹಬಾಳ್ವೆಗೆ ಸಮಸ್ಯೆ ಉಂಟಾಗಿಲ್ಲ. ಆದರೆ ’ವಿಲೀನ’ ಇದೆಯಲ್ಲ ಇದು ಲಕ್ಷಾಂತರ ಕರ್ನಾಟಕಸ್ಥರ ಬಾಳಿಗೆ ಮಣ್ಣು ಹಾಕಲಿದೆ. ನಂದಿನಿ ಬ್ರಾಂಡಿನಲ್ಲಿ ವ್ಯವಹಾರ ನಡೆಸುತ್ತಿರುವ ಕರ್ನಾಟಕ ಮಿಲ್ಕ್ ಫೆಡರೇಶನ್ನಿನ ವಾರ್ಷಿಕ ವ್ಯವಹಾರ ರೂ.20000 ಕೋಟಿ. ಲಕ್ಷಾಂತರ ಹೈನುಗಾರರು, ವಿಶೇಷವಾಗಿ ಮಹಿಳೆಯರು ನಂದಿನಿಯ ಸುತ್ತ ಬೆಳೆದಿರುವ ಹಾಲು ಒಕ್ಕೂಟಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರವು ಪ್ರತಿ ಲೀಟರ್ ಹಾಲಿಗೆ ಸಬ್ಸಿಡಿ ನೀಡುತ್ತಿದೆ. ಪಶು ಆಹಾರದ ಉದ್ದಿಮೆಯೂ ಬೆಳೆಯುತ್ತಿದೆ.

’ವಿಲೀನ’ವು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ!

ಅಮಿತ್ ಷಾ ಪ್ರತಿನಿಧಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ನಮ್ಮ ಸಂವಿಧಾನದತ್ತ ಒಕ್ಕೂಟ ತತ್ವದ ಬಗ್ಗೆ ನಂಬಿಕೆಯಿಲ್ಲ. ಸೈದ್ಧಾಂತಿಕವಾಗಿ ಅವರದ್ದು ಏಕರೂಪದ-ಕೇಂದ್ರೀಕೃತ ರಾಜಕೀಯದಲ್ಲಿ ನಂಬಿಕೆಯಿರುವ ಪಕ್ಷ. ರಾಜ್ಯಗಳ ಸ್ವಾಯತ್ತ ಬೆಳವಣಿಗೆಗೆ ’ವಿಲೀನ’ವು ಕಂಟಕಪ್ರಾಯವಾಗುತ್ತದೆ. ನಂದಿನಿ ಮತ್ತು ಅಮುಲ್ ಎರಡೂ ತಮ್ಮ ತಮ್ಮ ವ್ಯಾಪಾರ-ವ್ಯವಹಾರ, ಉತ್ಪಾದನೆ ನಡೆಸಿಕೊಂಡಿದ್ದರೆ ಅಮಿತ್ ಷಾಗೆ ಏನು ತೊಂದರೆ? ಇದೇ ರೀತಿಯ ಸಹಕಾರಿ ಹಾಲಿನ ಸಂಸ್ಥೆಗಳನ್ನು ಎಲ್ಲಾ ರಾಜ್ಯಗಳಲ್ಲೂ ಬೆಳೆಸಲು ಒಕ್ಕೂಟ ಸರ್ಕಾರ ಶ್ರಮ ಪಡಬೇಕೇ ವಿನಾ ನಂದಿನಿ-ಅಮುಲ್ ವಿಲೀನದ ಬಗ್ಗೆ ತಂತ್ರಗಾರಿಕೆ ಮಾಡುವುದಲ್ಲ. ಒಕ್ಕೂಟ ಸರ್ಕಾರ ನಂದಿನಿ ಬೆಳವಣಿಗೆಗೆ ಒಂದು ಬಿಡಿಗಾಸೂ ನೀಡುತ್ತಿಲ್ಲ. ಆದರೆ ಇದನ್ನು ಆಪೋಶನ ಮಾಡಿಕೊಳ್ಳಲು ಕಾಲು ಕೆರೆದುಕೊಂಡು ನಿಂತಿದೆ.

ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕ

ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಕರ್ನಾಟಕವು ಗುಜರಾತ್‌ಗಿಂತ ಮುಂದಿದೆ. ಉದಾ: 2020-21ರಲ್ಲಿ ಗುಜರಾತಿನ ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ರೂ.14.59 ಲಕ್ಷ ಕೋಟಿಯಾದರೆ ಕರ್ನಾಟಕದ್ದು ರೂ.15.75 ಲಕ್ಷ ಕೋಟಿ. ತಲಾ ವರಮಾನ ಗುಜರಾತಿನದ್ದು ರೂ. 212821ರಷ್ಟಿದ್ದರೆ ಕರ್ನಾಟಕದ್ದು ರೂ.236451. ಜನಸಂಖ್ಯಾ ದಶಕವಾರು ಬೆಳವಣಿಗೆ (2001-2011) ಗುಜರಾತನಲ್ಲಿ ಶೇ.19.3ರಷ್ಟಿದ್ದರೆ ಕರ್ನಾಟಕದಲ್ಲಿ ಶೇ.15.6ರಷ್ಟಿದೆ. ಲಿಂಗ ಅನುಪಾತ ಗುಜರಾತಿನಲ್ಲಿ (2011) 919, ಕರ್ನಾಟಕದಲ್ಲಿ ಇದು 973. ಸಾಕ್ಷರತೆಯಲ್ಲಿ ಲಿಂಗ ಸಂಬಂಧಿ ಅಂತರ ಕರ್ನಾಟಕದಲ್ಲಿ ಶೇ.14.7 ಅಂಶಗಳಷ್ಟಿದ್ದರೆ ಗುಜರಾತಿನಲ್ಲಿ ಇದು ಶೇ.16.5 ಅಂಶಗಳಷ್ಟಿದೆ. ಶಿಶು ಮರಣ ಪ್ರಮಾಣ 2019-20ರಲ್ಲಿ ಪ್ರತಿ ಸಾವಿರ ಜನನಗಳಿಗೆ ಗುಜರಾತಿನಲ್ಲಿ 31ರಷ್ಟಿದ್ದರೆ ಕರ್ನಾಟಕದಲ್ಲಿ 25. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವುದು ಕೃತವಾಗಿ ಕಟ್ಟಿದ್ದೇ ವಿನಾ ನಿಜಸ್ಥಿತಿಯು ಮಾದರಿಯಾಗಿಲ್ಲ. ಆರ್ಥಿಕ ಅಭಿವೃದ್ಧಿಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ಮತ್ತು ಲಿಂಗ ಸಮಾನತೆಯಲ್ಲಿ ಕರ್ನಾಟಕದಿಂದ ಗುಜರಾತ್ ಪಾಠ ಕಲಿಯಬೇಕೇ ವಿನಾ ಗುಜರಾತಿನಿಂದ ಕರ್ನಾಟಕ ಕಲಿಯಬೇಕಾದುದೇನಿಲ್ಲ. ಆದ್ದರಿಂದ ನಂದಿನಿಯನ್ನು ಅದರ ಪಾಲಿಗೆ ಅದನ್ನು ಬಿಡುವುದು ಒಳ್ಳೆಯದು. ಅವರು ತಮ್ಮ ತವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಕರ್ನಾಟಕದಿಂದ, ತಮಿಳುನಾಡಿನಿಂದ, ಕೇರಳದಿಂದ ಪಾಠ ಕಲಿತು ಅದನ್ನು ಉತ್ತಮಪಡಿಸಲಿ. ಅಮುಲ್-ನಂದಿನಿ ಮಾರುಕಟ್ಟೆ ಪೈಪೋಟಿಗೆ ಸ್ವಾಗತ. ಎರಡರ ವಿಲೀನಕ್ಕೆ ನಮ್ಮ ವಿರೋಧವಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...