Homeಕರ್ನಾಟಕಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ಇಂದು ಬಿಡುಗಡೆ ಮಾಡಲಾಯಿತು.

- Advertisement -
- Advertisement -

“ರೈತ ಬಳಸುವ ಬಾರುಕೋಲನ್ನು ತನ್ನ ರೂಲ್‌ ಆಫ್‌ ಲಾ ಎಂದವರು ಪ್ರೊ.ನಂಜುಂಡಸ್ವಾಮಿ” ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಪ್ರೊ.ಎನ್‌ಡಿಎಂ ಅವರಿಗೆ ಜಗತ್ತಿನ ಎಲ್ಲ ಸಮಸ್ಯೆಗಳೂ ಗೊತ್ತಿದ್ದವು. ಬಹಳ ಓದಿಕೊಂಡಿದ್ದರು. ಅವರ ಒಂದು ಸ್ವಭಾವ ಏನೆಂದರೆ ಬೇರೆಯವರ ಅಭಿಪ್ರಾಯಕ್ಕೆ ಅಷ್ಟಾಗಿ ಬೆಲೆ ಕೊಡುತ್ತಿರಲಿಲ್ಲ. ಅವರು ಹೇಳಿದ್ದೇ ಸರಿ ಅಂತ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಳ್ಳದಿದ್ದರೆ ತೋರು ಬೆರಳು ತೋರಿಸಿ- ನಿನಗೆ ಗೊತ್ತಿಲ್ಲ, ನೀನು ಓದಿಕೊಂಡಿಲ್ಲ ಕುಳಿತುಕೋ ಎನ್ನುತ್ತಿದ್ದರು” ಎಂದು ಪ್ರೊಫೆಸರ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಾನು ರಾಜಕಾರಣಕ್ಕೆ ಬರಲು ಕಾರಣರಾದವರು ಪ್ರೊ.ಎಂಡಿಎನ್‌. ಅವರೊಂದಿಗೆ ರಾಜಕೀಯ ಚರ್ಚೆಗಳನ್ನು ನಡೆಸುತ್ತಿದ್ದೆವು. ರಾಮಮನೋಹರ್‌ ಲೋಹಿಯಾ ಅವರು ಹೊರತರುತ್ತಿದ್ದ ‘ಮ್ಯಾನ್‌ಕೈಂಡ್‌’ ವಾರ ಪತ್ರಿಕೆಯನ್ನು ಕನ್ನಡದಲ್ಲಿ ‘ಮಾನವ’ ಎಂದು ಪ್ರಕಟಿಸಲಾಗುತ್ತಿತ್ತು. ಆಂದೋಲನ ಪತ್ರಿಕೆಯ ಸಂಸ್ಥಾಪಕರಾದ ರಾಜಶೇಖರ್‌ ಕೋಟಿಯವರು ಮೈಸೂರು ಕೆ.ಆರ್‌.ಸರ್ಕಲ್‌ನಲ್ಲಿ ಮಾನವ ಪತ್ರಿಕೆಯನ್ನು ಮಾರುತ್ತಿದ್ದರು. ನಂತರ ನಂಜುಂಡಸ್ವಾಮಿಯವರು ಬೆಂಗಳೂರಿಗೆ ಬಂದರು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿಯವರ ಪರಿಚಯವಾದದ್ದು 1969ನೇ ಇಸವಿಯಲ್ಲಿ. ನಂಜುಂಡಸ್ವಾಮಿಯವರು ಶಾರದಾ ವಿಲಾಸ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ನಮಗೆ ತರಗತಿಯಲ್ಲಿ ಪಾಠ ಮಾಡಿದ ಗುರುಗಳಾಗಿರಲಿಲ್ಲ. ರಾಜಕೀಯ ಗುರುಗಳಾಗಿದ್ದರು. ನಾನು, ಬಸವರಾಜು, ನರೇಂದ್ರ, ಲಿಂಗಪ್ಪ, ಅಣ್ಣೇಗೌಡ ಯಾವಾಗಲೂ ಎಂಡಿಎನ್‌ ಜೊತೆ ಇರುತ್ತಿದ್ದೆವು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಸ್ಟುಡೆಂಟ್ ಯೂನಿಯನ್‌ ಚುನಾವಣೆಯನ್ನು ಪ್ರಶ್ನಿಸುವಂತೆ ಎಂಡಿಎನ್‌ ನಮಗೆ ಸೂಚಿಸಿದ್ದರು. ನಮ್ಮ ಆಗ್ರಹಕ್ಕೆ ಮಣಿದು ಒಂದು ವರ್ಷದ ನಂತರ ಬದಲಾವಣೆ ತರಲಾಯಿತು ಎಂದು ನೆನಪಿಸಿಕೊಂಡರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಸಿದ್ದರಾಮಯ್ಯನವರು ಧರಿಸಿದ್ದು ಹೀಗೆ…

ತರಗತಿ ಮುಗಿದ ಮೇಲೆ ನಂಜುಂಡಸ್ವಾಮಿ ಅವರ ಜೊತೆಯಲ್ಲಿ ಕ್ಯಾಂಟೀನ್‌ಗೆ ಹೋಗುತ್ತಿದ್ದೆವು. ನಮಗೆ ಚಾರ್‌ಮಿನಾರ್‌ ಸಿಗರೇಟ್ ಹಾಗೂ ಅರ್ಧ ಗಂಟೆಗೊಮ್ಮೆ ಟೀ ಕೊಡಿಸುತ್ತಿದ್ದರು. ಚರ್ಚಿಸುತ್ತಿದ್ದರು. ಅಲ್ಲಿಯವರೆಗೆ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬರಲು ಎನ್‌ಡಿಎಂ ಕಾರಣಕರ್ತರು. ನಂತರ ಸಮಾಜವಾದಿ ಯುವಜನ ಸಭಾ ಸೇರಿದೆ. ಅಲ್ಲಿಂದ ರಾಜಕೀಯ ಶುರುವಾಯಿತು ಎಂದು ಹೇಳಿದರು.

ರೈತ ಚಳವಳಿಯ ಬಹಳ ಎತ್ತರಕ್ಕೆ ಹೋಗಿತ್ತು. ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಎರಡು ವರ್ಷ ಸಕ್ರಿಯವಾಗಿ ರೈತ ಸಂಘದಲ್ಲಿ ಇದ್ದೆ. ಈ ಧೈರ್ಯಕ್ಕೆ, ಅಧಿಕಾರಿಗಳ ವಿರುದ್ಧ ಮಾತನಾಡಲಿಕ್ಕೆ ಪ್ರೊಫೆಸರ್‌ ಕಾರಣ. ಸರ್ಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳು ಬಳಸಿದರೆ ಚೆಕ್‌ ಮಾಡಲು ನಮಗೆ ಪ್ರೊಫೆಸರ್‌ ತಿಳಿಸಿದ್ದರು. ನಾವು ತಾಲ್ಲೂಕು ಕಚೇರಿಗೆ ಹೋದರೆ ಎಲ್ಲ ಅಧಿಕಾರಿಗಳು ಅಲರ್ಟ್ ಆಗುತ್ತಿದ್ದರು. ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಹೆದರುತ್ತಿದ್ದರು. ಅದಕ್ಕೆ ನಂಜುಂಡಸ್ವಾಮಿಯವರು ಕಾರಣ ಎಂದು ಶ್ಲಾಘಿಸಿದರು.

ರೈತ ಸಂಘವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆಗ್ರಹಿಸಿದೆವು. ಎನ್‌.ಡಿ.ಸುಂದರೇಶ್‌, ಕಡಿದಾಳು ಶಾಮಣ್ಣ ವಿರೋಧಿಸಿದರು. ನಾವು ಚುನಾವಣೆಗೆ ನಿಲ್ಲಬೇಕೆಂದು ಆಗ್ರಹಿಸಿ ವಾಕ್‌ಔಟ್ ಮಾಡಿದೆವು. ಅದಾದ ಮೇಲೆ ಸಂಪರ್ಕ ಕಡಿಮೆಯಾಯಿತು ಎಂದು ವಿಷಾದಿಸಿದರು.

ರೈತರೊಂದಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಒಂದು ಸಭೆ ಏರ್ಪಾಡು ಮಾಡಿದ್ದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನು ಉದ್ದೇಶಿಸಿ ಪ್ರೊಫೆಸರ್‌, ಆ ದೊಡ್ಡ ಕೂಲಿ ಇದ್ದಾನಲ್ಲ, ಆತ ಎದ್ದು ಹೋದರೆ ಮಾತ್ರ ನಾನು ಮಾತನಾಡೋದು ಎಂದು ಮುಖ್ಯಮಂತ್ರಿಗೆ ತಿಳಿಸಿದ್ದರು.  ಅಷ್ಟು ಧೈರ್ಯ ಅವರಿಗಿತ್ತು ಎಂದು ಸ್ಮರಿಸಿದರು.

ಪ್ರಜಾಪ್ರಭುತ್ವ, ಸಮಾಜವಾದ, ಸಂವಿಧಾನ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರದ್ದೇ ಆದ ಚಿಂತನೆಗಳಿದ್ದವು. ಅವರ ಎಲ್ಲ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆಗದಿದ್ದರೂ ಕೆಲವೊಂದು ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇವೆ. ಇಂದಿಗೂ ನಂಜುಂಡಸ್ವಾಮಿಯವರ ಚಿಂತನೆಗಳು ಬಹಳ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಕೈಯಲಿದ್ದ ಚಾಟಿಯನ್ನು ಜನರ ಕೈಗೆ ನೀಡಿದ ಎಂಡಿಎನ್‌: ಪ್ರೊ.ರವಿವರ್ಮ ಕುಮಾರ್‌

ಸಿದ್ದರಾಮಯ್ಯನವರಿಗೂ ಮೊದಲು ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‌ ಅವರು ಪ್ರೊಫೆಸರ್‌ ಎಂಡಿಎನ್‌ ಅವರ ಧೈರ್ಯ ಹಾಗೂ ಪ್ರಭಾವಕ್ಕೆ ಸಂಬಂಧಿಸಿದಂತೆ ಘಟನೆಯೊಂದನ್ನು ಮೆಲುಕುಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರೈತ ಸಂಘದ ಪ್ರಾರಂಭದ ದಿನಗಳಲ್ಲಿ ನರಗುಂದ, ನವಲಗುಂದದಲ್ಲಿ ಗೋಲಿಬಾರ್‌ ಆಗಿ ಮೂರು ಜನ ರೈತರನ್ನು ಕೊಲ್ಲಲಾಯಿತು. ಆ ಸನ್ನಿವೇಶದಲ್ಲಿ ಶಿವಮೊಗ್ಗದಲ್ಲಿ ಎಂ.ಡಿ.ಸುಂದರೇಶ್‌, ಕಡಿದಾಳ್ ಶಾಮಣ್ಣ, ಎಚ್‌.ಎಸ್‌.ರುದ್ರಪ್ಪ ನೇತೃತ್ವದಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿತ್ತು. ರೈತರ ದೊಡ್ಡ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಎಲ್ಲ ದರ್ಪ, ದವಲತ್ತು ಪ್ರದರ್ಶಿಸಬಹುದಾಗಿದ್ದ ಒಬ್ಬ ಪೊಲೀಸ್‌ ಅಧಿಕಾರಿ ಕುದುರೆ ಮೇಲೆ ಬಂದ. ಆತನ ಕೈಯಲ್ಲಿ ಒಂದು ಚಾಟಿ ಇರುತ್ತದೆ. ದಾರಿಯುದ್ಧಕ್ಕೂ ಜನರ ಮೇಲೆ ಜಳಪಿಸುತ್ತಿದ್ದ. ಪ್ರೊಫೆಸರ್‌ ನೋಡಿದರು. ಪೊಲೀಸ್ ಸೂಪರಿಡೆಂಟ್, ಡೆಪ್ಯೂಟಿ ಕಮಿಷನರ್‌ ಎಲ್ಲರೂ ಇದ್ದರು. ಆಗ ನಂಜುಂಡಸ್ವಾಮಿಯವರು ಒಂದು ಮಾತು ಹೇಳಿದರು. ಡಿಸಿ ಆದಿಯಾಗಿ ಖಾಕಿ ಧರಿಸಿರುವ ನೀವೆಲ್ಲ ಪ್ರಜಾ ಸೇವಕರು. ಪ್ರಜೆಗಳು ನಿಮ್ಮನ್ನು ನೇಮಕ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸೇವಕರಂತೆ ನೀವು ನಡೆದುಕೊಳ್ಳಬೇಕು. ಈ ದರ್ಪ, ದೌಲತ್ತು ನಡೆಸುವ ಚಾಳಿಯನ್ನು ಬಿಡಿ. ಯಾರು ಈ ಅಧಿಕಾರಿ, ಇವನ ಕೈಗೆ ಚಾಟಿ ಕೊಟ್ಟಿದ್ದು ಯಾರು? ಡಿಸಿಯವರೇ ನಿಮಗೆ ಐದು ನಿಮಿಷ ಸಮಯ ಕೊಡುತ್ತೇನೆ. ಇನ್ನೈದು ನಿಮಿಷದಲ್ಲಿ ಆ ಅಧಿಕಾರಿ ಕೈಯಿಂದ ಆ ಚಾಟಿಯನ್ನು ಕಿತ್ತುಕೊಳ್ಳದೆ ಹೋದರೆ ಆರನೇ ನಿಮಿಷಕ್ಕೆ ರೈತರು ಆ ಕೆಲಸವನ್ನು ಮಾಡುತ್ತಾರೆ ಎಂದರು. ಈ ಮಾತು ಕೇಳಿದ ತಕ್ಷಣ ರೈತರು ಎದ್ದು ನಿಂತರು. ಆ ಅಧಿಕಾರಿ ಎಲ್ಲಿ ಓಡಿ ಹೋದನೋ ಗೊತ್ತಿಲ್ಲ. ಆ ರೀತಿ ನಂಜುಂಡಸ್ವಾಮಿಯವರು ಸರ್ಕಾರದ ಕೈಯಲ್ಲಿದ್ದ ಚಾಟಿಯನ್ನು ಕಿತ್ತುಕೊಂಡು ರೈತರ ಕೈಗೆ ಕೊಟ್ಟರು” ಎಂದು ಪ್ರೊ.ರವಿವರ್ಮಕುಮಾರ್‌ ತಿಳಿಸಿದರು.

ನಂಜುಂಡಸ್ವಾಮಿಯವರ ಪುತ್ರಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ನಮ್ಮ ತಂದೆಯವರು ದೈಹಿಕವಾಗಿ ನಿರ್ಗಮನವಾಗಿ 18 ವರ್ಷಗಳಾದವು. ರೈತ ಸಂಘ ಕವಲುಗಳಾಗಿದೆ. ಎಂಡಿಎನ್‌ ಅವರ ಭಾವಚಿತ್ರವನ್ನು ಎಲ್ಲರೂ ಬಳಸುತ್ತಾರೆ. ಆದರೆ ಅವರಿಗಿದ್ದ ವೈಚಾರಿಕ ಬದ್ಧತೆ, ಆತ್ಮಸ್ಥೈರ್ಯ, ರಾಜೀ ಇಲ್ಲದೆ ಸತ್ಯಕ್ಕಾಗಿ ನಿಲ್ಲುವ ಗುಣ ಯಾರಲ್ಲಿ ಇದೆ ಎಂದು ಹುಡುಕಾಡುತ್ತಿದ್ದಾಗ ಸಿದ್ದರಾಮಯ್ಯನವರಲ್ಲಿ ಕಂಡೆ” ಎಂದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಚುಕ್ಕಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯನವರಿಗೆ ನೀಡಿದರು. ಬಳಿಕ ಚಾಟಿಯನ್ನು ಬೀಸಿದ ಅವರು, ಹೆಗಲಿಗೆ ಬಾರುಕೋಲನ್ನು ಧರಿಸಿ ಎನ್‌ಡಿಎಂ ಅವರ ಹೋರಾಟವನ್ನು ಮೆಲುಕು ಹಾಕಿದರು.

ಕೃತಿಯ ಸಂಪಾದಕರಾದ ನಟರಾಜ್‌ ಹುಳಿಯಾರ್‌, ರವಿಕುಮಾರ್ ಬಾಗಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಡಾ.ವೆಂಕಟೇಶ್ ನೆಲ್ಲುಕುಂಟೆ, ಮುಖಂಡರಾದ ರಾಠೋಡ್‌, ನಾಗರಾಜ್‌ ರೆಡ್ಡಿ ಹಾಗೂ ಇತರ ಮುಖಂಡರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...