Homeಕರ್ನಾಟಕಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ಬಾರುಕೋಲ್‌ ನನ್ನ ರೂಲ್‌ ಆಫ್ ಲಾ ಎಂದವರು ಪ್ರೊ.ಎಂಡಿಎನ್‌: ಸಿದ್ದರಾಮಯ್ಯ

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ಇಂದು ಬಿಡುಗಡೆ ಮಾಡಲಾಯಿತು.

- Advertisement -
- Advertisement -

“ರೈತ ಬಳಸುವ ಬಾರುಕೋಲನ್ನು ತನ್ನ ರೂಲ್‌ ಆಫ್‌ ಲಾ ಎಂದವರು ಪ್ರೊ.ನಂಜುಂಡಸ್ವಾಮಿ” ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಟರಾಜ್‌ ಹುಳಿಯಾರ್‌‌, ರವಿಕುಮಾರ್‌ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಪ್ರೊ.ಎನ್‌ಡಿಎಂ ಅವರಿಗೆ ಜಗತ್ತಿನ ಎಲ್ಲ ಸಮಸ್ಯೆಗಳೂ ಗೊತ್ತಿದ್ದವು. ಬಹಳ ಓದಿಕೊಂಡಿದ್ದರು. ಅವರ ಒಂದು ಸ್ವಭಾವ ಏನೆಂದರೆ ಬೇರೆಯವರ ಅಭಿಪ್ರಾಯಕ್ಕೆ ಅಷ್ಟಾಗಿ ಬೆಲೆ ಕೊಡುತ್ತಿರಲಿಲ್ಲ. ಅವರು ಹೇಳಿದ್ದೇ ಸರಿ ಅಂತ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಳ್ಳದಿದ್ದರೆ ತೋರು ಬೆರಳು ತೋರಿಸಿ- ನಿನಗೆ ಗೊತ್ತಿಲ್ಲ, ನೀನು ಓದಿಕೊಂಡಿಲ್ಲ ಕುಳಿತುಕೋ ಎನ್ನುತ್ತಿದ್ದರು” ಎಂದು ಪ್ರೊಫೆಸರ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಾನು ರಾಜಕಾರಣಕ್ಕೆ ಬರಲು ಕಾರಣರಾದವರು ಪ್ರೊ.ಎಂಡಿಎನ್‌. ಅವರೊಂದಿಗೆ ರಾಜಕೀಯ ಚರ್ಚೆಗಳನ್ನು ನಡೆಸುತ್ತಿದ್ದೆವು. ರಾಮಮನೋಹರ್‌ ಲೋಹಿಯಾ ಅವರು ಹೊರತರುತ್ತಿದ್ದ ‘ಮ್ಯಾನ್‌ಕೈಂಡ್‌’ ವಾರ ಪತ್ರಿಕೆಯನ್ನು ಕನ್ನಡದಲ್ಲಿ ‘ಮಾನವ’ ಎಂದು ಪ್ರಕಟಿಸಲಾಗುತ್ತಿತ್ತು. ಆಂದೋಲನ ಪತ್ರಿಕೆಯ ಸಂಸ್ಥಾಪಕರಾದ ರಾಜಶೇಖರ್‌ ಕೋಟಿಯವರು ಮೈಸೂರು ಕೆ.ಆರ್‌.ಸರ್ಕಲ್‌ನಲ್ಲಿ ಮಾನವ ಪತ್ರಿಕೆಯನ್ನು ಮಾರುತ್ತಿದ್ದರು. ನಂತರ ನಂಜುಂಡಸ್ವಾಮಿಯವರು ಬೆಂಗಳೂರಿಗೆ ಬಂದರು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿಯವರ ಪರಿಚಯವಾದದ್ದು 1969ನೇ ಇಸವಿಯಲ್ಲಿ. ನಂಜುಂಡಸ್ವಾಮಿಯವರು ಶಾರದಾ ವಿಲಾಸ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ನಮಗೆ ತರಗತಿಯಲ್ಲಿ ಪಾಠ ಮಾಡಿದ ಗುರುಗಳಾಗಿರಲಿಲ್ಲ. ರಾಜಕೀಯ ಗುರುಗಳಾಗಿದ್ದರು. ನಾನು, ಬಸವರಾಜು, ನರೇಂದ್ರ, ಲಿಂಗಪ್ಪ, ಅಣ್ಣೇಗೌಡ ಯಾವಾಗಲೂ ಎಂಡಿಎನ್‌ ಜೊತೆ ಇರುತ್ತಿದ್ದೆವು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಸ್ಟುಡೆಂಟ್ ಯೂನಿಯನ್‌ ಚುನಾವಣೆಯನ್ನು ಪ್ರಶ್ನಿಸುವಂತೆ ಎಂಡಿಎನ್‌ ನಮಗೆ ಸೂಚಿಸಿದ್ದರು. ನಮ್ಮ ಆಗ್ರಹಕ್ಕೆ ಮಣಿದು ಒಂದು ವರ್ಷದ ನಂತರ ಬದಲಾವಣೆ ತರಲಾಯಿತು ಎಂದು ನೆನಪಿಸಿಕೊಂಡರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಸಿದ್ದರಾಮಯ್ಯನವರು ಧರಿಸಿದ್ದು ಹೀಗೆ…

ತರಗತಿ ಮುಗಿದ ಮೇಲೆ ನಂಜುಂಡಸ್ವಾಮಿ ಅವರ ಜೊತೆಯಲ್ಲಿ ಕ್ಯಾಂಟೀನ್‌ಗೆ ಹೋಗುತ್ತಿದ್ದೆವು. ನಮಗೆ ಚಾರ್‌ಮಿನಾರ್‌ ಸಿಗರೇಟ್ ಹಾಗೂ ಅರ್ಧ ಗಂಟೆಗೊಮ್ಮೆ ಟೀ ಕೊಡಿಸುತ್ತಿದ್ದರು. ಚರ್ಚಿಸುತ್ತಿದ್ದರು. ಅಲ್ಲಿಯವರೆಗೆ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬರಲು ಎನ್‌ಡಿಎಂ ಕಾರಣಕರ್ತರು. ನಂತರ ಸಮಾಜವಾದಿ ಯುವಜನ ಸಭಾ ಸೇರಿದೆ. ಅಲ್ಲಿಂದ ರಾಜಕೀಯ ಶುರುವಾಯಿತು ಎಂದು ಹೇಳಿದರು.

ರೈತ ಚಳವಳಿಯ ಬಹಳ ಎತ್ತರಕ್ಕೆ ಹೋಗಿತ್ತು. ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಎರಡು ವರ್ಷ ಸಕ್ರಿಯವಾಗಿ ರೈತ ಸಂಘದಲ್ಲಿ ಇದ್ದೆ. ಈ ಧೈರ್ಯಕ್ಕೆ, ಅಧಿಕಾರಿಗಳ ವಿರುದ್ಧ ಮಾತನಾಡಲಿಕ್ಕೆ ಪ್ರೊಫೆಸರ್‌ ಕಾರಣ. ಸರ್ಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳು ಬಳಸಿದರೆ ಚೆಕ್‌ ಮಾಡಲು ನಮಗೆ ಪ್ರೊಫೆಸರ್‌ ತಿಳಿಸಿದ್ದರು. ನಾವು ತಾಲ್ಲೂಕು ಕಚೇರಿಗೆ ಹೋದರೆ ಎಲ್ಲ ಅಧಿಕಾರಿಗಳು ಅಲರ್ಟ್ ಆಗುತ್ತಿದ್ದರು. ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಹೆದರುತ್ತಿದ್ದರು. ಅದಕ್ಕೆ ನಂಜುಂಡಸ್ವಾಮಿಯವರು ಕಾರಣ ಎಂದು ಶ್ಲಾಘಿಸಿದರು.

ರೈತ ಸಂಘವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆಗ್ರಹಿಸಿದೆವು. ಎನ್‌.ಡಿ.ಸುಂದರೇಶ್‌, ಕಡಿದಾಳು ಶಾಮಣ್ಣ ವಿರೋಧಿಸಿದರು. ನಾವು ಚುನಾವಣೆಗೆ ನಿಲ್ಲಬೇಕೆಂದು ಆಗ್ರಹಿಸಿ ವಾಕ್‌ಔಟ್ ಮಾಡಿದೆವು. ಅದಾದ ಮೇಲೆ ಸಂಪರ್ಕ ಕಡಿಮೆಯಾಯಿತು ಎಂದು ವಿಷಾದಿಸಿದರು.

ರೈತರೊಂದಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಒಂದು ಸಭೆ ಏರ್ಪಾಡು ಮಾಡಿದ್ದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನು ಉದ್ದೇಶಿಸಿ ಪ್ರೊಫೆಸರ್‌, ಆ ದೊಡ್ಡ ಕೂಲಿ ಇದ್ದಾನಲ್ಲ, ಆತ ಎದ್ದು ಹೋದರೆ ಮಾತ್ರ ನಾನು ಮಾತನಾಡೋದು ಎಂದು ಮುಖ್ಯಮಂತ್ರಿಗೆ ತಿಳಿಸಿದ್ದರು.  ಅಷ್ಟು ಧೈರ್ಯ ಅವರಿಗಿತ್ತು ಎಂದು ಸ್ಮರಿಸಿದರು.

ಪ್ರಜಾಪ್ರಭುತ್ವ, ಸಮಾಜವಾದ, ಸಂವಿಧಾನ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರದ್ದೇ ಆದ ಚಿಂತನೆಗಳಿದ್ದವು. ಅವರ ಎಲ್ಲ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆಗದಿದ್ದರೂ ಕೆಲವೊಂದು ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇವೆ. ಇಂದಿಗೂ ನಂಜುಂಡಸ್ವಾಮಿಯವರ ಚಿಂತನೆಗಳು ಬಹಳ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಕೈಯಲಿದ್ದ ಚಾಟಿಯನ್ನು ಜನರ ಕೈಗೆ ನೀಡಿದ ಎಂಡಿಎನ್‌: ಪ್ರೊ.ರವಿವರ್ಮ ಕುಮಾರ್‌

ಸಿದ್ದರಾಮಯ್ಯನವರಿಗೂ ಮೊದಲು ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‌ ಅವರು ಪ್ರೊಫೆಸರ್‌ ಎಂಡಿಎನ್‌ ಅವರ ಧೈರ್ಯ ಹಾಗೂ ಪ್ರಭಾವಕ್ಕೆ ಸಂಬಂಧಿಸಿದಂತೆ ಘಟನೆಯೊಂದನ್ನು ಮೆಲುಕುಹಾಕಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರೈತ ಸಂಘದ ಪ್ರಾರಂಭದ ದಿನಗಳಲ್ಲಿ ನರಗುಂದ, ನವಲಗುಂದದಲ್ಲಿ ಗೋಲಿಬಾರ್‌ ಆಗಿ ಮೂರು ಜನ ರೈತರನ್ನು ಕೊಲ್ಲಲಾಯಿತು. ಆ ಸನ್ನಿವೇಶದಲ್ಲಿ ಶಿವಮೊಗ್ಗದಲ್ಲಿ ಎಂ.ಡಿ.ಸುಂದರೇಶ್‌, ಕಡಿದಾಳ್ ಶಾಮಣ್ಣ, ಎಚ್‌.ಎಸ್‌.ರುದ್ರಪ್ಪ ನೇತೃತ್ವದಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿತ್ತು. ರೈತರ ದೊಡ್ಡ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಎಲ್ಲ ದರ್ಪ, ದವಲತ್ತು ಪ್ರದರ್ಶಿಸಬಹುದಾಗಿದ್ದ ಒಬ್ಬ ಪೊಲೀಸ್‌ ಅಧಿಕಾರಿ ಕುದುರೆ ಮೇಲೆ ಬಂದ. ಆತನ ಕೈಯಲ್ಲಿ ಒಂದು ಚಾಟಿ ಇರುತ್ತದೆ. ದಾರಿಯುದ್ಧಕ್ಕೂ ಜನರ ಮೇಲೆ ಜಳಪಿಸುತ್ತಿದ್ದ. ಪ್ರೊಫೆಸರ್‌ ನೋಡಿದರು. ಪೊಲೀಸ್ ಸೂಪರಿಡೆಂಟ್, ಡೆಪ್ಯೂಟಿ ಕಮಿಷನರ್‌ ಎಲ್ಲರೂ ಇದ್ದರು. ಆಗ ನಂಜುಂಡಸ್ವಾಮಿಯವರು ಒಂದು ಮಾತು ಹೇಳಿದರು. ಡಿಸಿ ಆದಿಯಾಗಿ ಖಾಕಿ ಧರಿಸಿರುವ ನೀವೆಲ್ಲ ಪ್ರಜಾ ಸೇವಕರು. ಪ್ರಜೆಗಳು ನಿಮ್ಮನ್ನು ನೇಮಕ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸೇವಕರಂತೆ ನೀವು ನಡೆದುಕೊಳ್ಳಬೇಕು. ಈ ದರ್ಪ, ದೌಲತ್ತು ನಡೆಸುವ ಚಾಳಿಯನ್ನು ಬಿಡಿ. ಯಾರು ಈ ಅಧಿಕಾರಿ, ಇವನ ಕೈಗೆ ಚಾಟಿ ಕೊಟ್ಟಿದ್ದು ಯಾರು? ಡಿಸಿಯವರೇ ನಿಮಗೆ ಐದು ನಿಮಿಷ ಸಮಯ ಕೊಡುತ್ತೇನೆ. ಇನ್ನೈದು ನಿಮಿಷದಲ್ಲಿ ಆ ಅಧಿಕಾರಿ ಕೈಯಿಂದ ಆ ಚಾಟಿಯನ್ನು ಕಿತ್ತುಕೊಳ್ಳದೆ ಹೋದರೆ ಆರನೇ ನಿಮಿಷಕ್ಕೆ ರೈತರು ಆ ಕೆಲಸವನ್ನು ಮಾಡುತ್ತಾರೆ ಎಂದರು. ಈ ಮಾತು ಕೇಳಿದ ತಕ್ಷಣ ರೈತರು ಎದ್ದು ನಿಂತರು. ಆ ಅಧಿಕಾರಿ ಎಲ್ಲಿ ಓಡಿ ಹೋದನೋ ಗೊತ್ತಿಲ್ಲ. ಆ ರೀತಿ ನಂಜುಂಡಸ್ವಾಮಿಯವರು ಸರ್ಕಾರದ ಕೈಯಲ್ಲಿದ್ದ ಚಾಟಿಯನ್ನು ಕಿತ್ತುಕೊಂಡು ರೈತರ ಕೈಗೆ ಕೊಟ್ಟರು” ಎಂದು ಪ್ರೊ.ರವಿವರ್ಮಕುಮಾರ್‌ ತಿಳಿಸಿದರು.

ನಂಜುಂಡಸ್ವಾಮಿಯವರ ಪುತ್ರಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, “ನಮ್ಮ ತಂದೆಯವರು ದೈಹಿಕವಾಗಿ ನಿರ್ಗಮನವಾಗಿ 18 ವರ್ಷಗಳಾದವು. ರೈತ ಸಂಘ ಕವಲುಗಳಾಗಿದೆ. ಎಂಡಿಎನ್‌ ಅವರ ಭಾವಚಿತ್ರವನ್ನು ಎಲ್ಲರೂ ಬಳಸುತ್ತಾರೆ. ಆದರೆ ಅವರಿಗಿದ್ದ ವೈಚಾರಿಕ ಬದ್ಧತೆ, ಆತ್ಮಸ್ಥೈರ್ಯ, ರಾಜೀ ಇಲ್ಲದೆ ಸತ್ಯಕ್ಕಾಗಿ ನಿಲ್ಲುವ ಗುಣ ಯಾರಲ್ಲಿ ಇದೆ ಎಂದು ಹುಡುಕಾಡುತ್ತಿದ್ದಾಗ ಸಿದ್ದರಾಮಯ್ಯನವರಲ್ಲಿ ಕಂಡೆ” ಎಂದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಚುಕ್ಕಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯನವರಿಗೆ ನೀಡಿದರು. ಬಳಿಕ ಚಾಟಿಯನ್ನು ಬೀಸಿದ ಅವರು, ಹೆಗಲಿಗೆ ಬಾರುಕೋಲನ್ನು ಧರಿಸಿ ಎನ್‌ಡಿಎಂ ಅವರ ಹೋರಾಟವನ್ನು ಮೆಲುಕು ಹಾಕಿದರು.

ಕೃತಿಯ ಸಂಪಾದಕರಾದ ನಟರಾಜ್‌ ಹುಳಿಯಾರ್‌, ರವಿಕುಮಾರ್ ಬಾಗಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಡಾ.ವೆಂಕಟೇಶ್ ನೆಲ್ಲುಕುಂಟೆ, ಮುಖಂಡರಾದ ರಾಠೋಡ್‌, ನಾಗರಾಜ್‌ ರೆಡ್ಡಿ ಹಾಗೂ ಇತರ ಮುಖಂಡರು ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...