Homeಅಂತರಾಷ್ಟ್ರೀಯನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

ನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

- Advertisement -
- Advertisement -

ಮಿಥ್ಯ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ಶೆ.58% ರಷ್ಟು ಭಾರತೀಯರಿದ್ದಾರೆ…
ಹೀಗೊಂದು ಅಂಕಿ-ಅಂಶ ಕಳೆದ ವಾರದಿಂದ ಹರಿದಾಡುತ್ತಿದೆ. ಭಾರತ ಮುಂದಿನ ಸೂಪರ್ ಪವರ್ ಎಂದು ಭ್ರಮೆ ಹೊತ್ತಿರುವ ಕೆಲವು ಭಕ್ತರು ಇದನ್ನು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಸಾವಿರಾರು ಜನ, ಸುಳ್ಳು ಎಂದು ಗೊತ್ತಿರುವ ಕೆಲವು ವೇಷಭಕ್ತರು ಫೇಸ್‍ಬುಕ್, ವ್ಯಾಟ್ಸಾಪ್‍ಗಳಲ್ಲಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ.

ಕಳೆದ ವಾರ 2030ಕ್ಕೆ ಚಂದ್ರನಲ್ಲಿ ಬಾಹ್ಯಾಕಾಶ ನಿಲ್ದಾಣ ಸಿದ್ಧ ಎಂದು ಇಸ್ರೋ ಮುಖ್ಯಸ್ಥ ಶಿವನ್ ಘೋಷಿಸಿದಾಗ ಬಹುಪಾಲು ಟಿವಿ ಪರದೆಗಳ ಮೇಲೆ ಚಂದ್ರಯಾನಕ್ಕೆ ಸಂಬಂಧಿಸಿದ ಅಥವಾ ಇಸ್ರೋದ ಫೋಟೊ ಪಕ್ಕ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಫೋಟೊವನ್ನು ತಗುಲಿಸಲಾಗಿತ್ತು. ಮೋದಿ ಈ ಘೋಷಣೆಯನ್ನೂ ಮಾಡಿಲ್ಲ, ಇಸ್ರೋ ತನ್ನ ಕಾರ್ಯ ಚಟುವಟಿಕೆಯ ಬಗ್ಗೆ ಎಂದಿನಂತೆ ಮಾಹಿತಿ ನೀಡಿದೆ. ಚಾನೆಲ್‍ಗಳ ಈ ಹುಚ್ಚಾಟವೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹರಿದು ಬಂತು. ಮೋದಿ ಕಾರಣದಿಂದಾಗಿಯೇ ಇದೆಲ್ಲ ಆಗುತ್ತಿದೆ ಎಂಬ ಭಾವವನ್ನು ಬಿತ್ತುವ ಯತ್ನವದು.

ಯಾವುದೇ ಸಂಸ್ಥೆ ಸಾಧನೆ ಮಾಡಿದಾಗ ಅದರ ಕ್ರೆಡಿಟ್ ಆ ಸರ್ಕಾರ, ಮತ್ತು ಹಿಂದೆ ಆ ಯೋಜನೆಗೆ ನೆರವು ನೀಡಿದ ಸರ್ಕಾರಗಳಿಗೂ ಹೋಗುತ್ತದೆ. ಅದಕ್ಕೂ ಮೊದಲು ಆ ಸಂಸ್ಥೆಯ ನೌಕರರಿಗೆ ಸಲ್ಲಬೇಕು. ಆದರೆ ಇಲ್ಲಿ ಬಾಲಾಕೋಟ್ ದಾಳಿಯನ್ನು ಮೋದಿಯೇ ಆಯೋಜಿಸಿದರು ಎಂಬರ್ಥದಲ್ಲಿ ಫೇಕು ಸುದ್ದಿ ಹರಡಲಾಗಿತು. ಕನ್ನಡದ ಕೆಲವು ದಿನಪತ್ರಿಕೆಗಳು ದೇಶದ ಸೇನೆಯನ್ನು ಮೋದಿ ಸೇನೆ ಎಂದೆಲ್ಲ ಬರೆದವು.

ಇವತ್ತಿಗೂ ಭಾರತದ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಇರುವ ಬಹುಪಾಲು ಯುವ ಮತ್ತು ಮಧ್ಯಮವರ್ಗಗಳ ಇಂಜನಿಯರ್‍ಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (ನ್ಯಾಷನಲ್ ಏರೊಸ್ಪೇಸ್ ಮತ್ತು ಸ್ಪೇಸ್ ಅಡ್ಮಿನಿಷ್ಟ್ರೇಷನ್)ದಲ್ಲಿ ‘ಭಾರತೀಯರೇ ಅಧಿಕ’ ಎಂದು ಸುದ್ದಿ ಹಬ್ಬಿಸುತಿದ್ದಾರೆ. ಈ ವಾರ ಹರಿದಾಡುತ್ತಿರುವ ಸುಳ್ ಸುದ್ದಿಗಳಲ್ಲಿ ನಾಸಾದಲ್ಲಿ ಶೇ. 58% ರಷ್ಟು ಭಾರತೀಯರೇ ತುಂಬಿದ್ದಾರಂತೆ. ಇಲ್ಲಿ ಇಸ್ರೋ ಪ್ರಕಟಿಸಿದ ತನ್ನ ಮುಂದಿನ ಯೋಜನೆಯ ಪಕ್ಕ ಮೋದಿ ಫೋಟೊ ಹಾಕುವ ಸಂದರ್ಭದಲ್ಲಿಯೇ ಈ ಸುಳ್ ಸುದ್ದಿ ಓಡಾಡುತ್ತಿದೆ. ಬಹುಪಾಲು ಇಂಜಿನಿಯರ್‍ಗಳು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದವರೇ ಹೆಚ್ಚು. ಇದನ್ನು ತಮ್ಮ ಸಂಗಾತಿಗೂ ಅವರು ದಾಟಿಸುತ್ತಾರೆ. ಮನೆಯ ಮಕ್ಕಳಿಗೂ ಇದನ್ನೇ ಬೋಧಿಸುತ್ತಾರೇನೋ?

ಸತ್ಯ: ಈಗಷ್ಟೇ ಅಲ್ಟ್‍ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್ ಪ್ರಕಾರ, ಅಲ್ಲಿರುವುದು ಶೇ 8% ಏಶಿಯನ್ನರು ( ಪೆಸಿಫಿಕ್ ಐಸ್ ಲ್ಯಾಂಡರ್ಸ್) ಮಾತ್ರ. ಅಂದರೆ ಇರುವ ಶೇ.8%ರಷ್ಟಲ್ಲೂ ಭಾರತೀಯರಷ್ಟೇ ಅಲ್ಲ, ಇತರ ಏಶಿಯಾದ ದೇಶಗಳ ವಿಜ್ಞಾನಿಗಳು, ಇಂಜಿನಿಯರ್ಸ್ ಇದ್ದಾರೆ.

ನಾಸಾ ಅಲ್ಲಿ ನೇಮಕಾತಿ ಮಾಡುವಾಗ, ಎಲ್ಲ ಜನಾಂಗ ಮತ್ತು ಪ್ರ್ಯಾಂತ್ಯಗಳಿಗೆ ಆದ್ಯತೆ ನೀಡುತ್ತದೆ. ಇದಂತೂ ಮೀಸಲಾತಿ ವಿರೋಧಿ ಭಕ್ತರಿಗೆ ಗೊತ್ತಾಗಲಿ ಎಂಬುದು ನಮ್ಮ ಆಶಯ. ನಾಸಾ ಪ್ರಕಾರ, ಅದು ವೈವಿಧ್ಯ ಹಿನ್ನೆಲೆಯಿರುವ ಸುಮಾರು 17 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ: ನಾಸಾದ ಉದ್ಯೋಗಿಗಳಲ್ಲಿ ಶೇ.72ರಷ್ಟು ಬಿಳಿಯರು(Caussasians), ಶೇ 12ರಷ್ಟು ಕರಿಯರು ಅಥವಾ ಆಫ್ರಿಕನ್ ಅಮೆರಿಕನ್ನರು, ಶೇ. 7-8 ಏಶಿಯನ್ನರು ( ಪೆಸಿಫಿಕ್ ಐಸ್‍ಲ್ಯಾಂಡರ್ಸ್), ಶೇ 7ರಷ್ಟು ಹಿಸ್ಪಾನಿಕ್ ಅಥವಾ ಲಾಟಿನೊ, ಶೇ 1.1 ರಷ್ಟು ಅಮೆರಿಕನ್ ಇಂಡಿಯನ್ಸ್ ಇದ್ದಾರೆ. ನಾಸಾದ ಅಂಕಿಸಂಖ್ಯೆ ಪ್ರಕಾರ, 1996ರಲ್ಲಿ ಶೇ. 4.5ರಷ್ಟಿದ್ದ ಏಶಿಯನ್ನರು ಈಗ 7.4ರಷ್ಟಿದ್ದಾರೆ.

ಹತ್ತು ವರ್ಷದಿಂದಲೂ ಇಂತಹ ಸುದ್ದಿ ಚಾಲ್ತಿಯಲ್ಲಿದೆ. ಆಗ ಶೇ 33ರಷ್ಟು ನಾಸಾ ನಮ್ಮವರೆ ಅಂತಿದ್ದವರು ಈಗ ಶೇ 58ಕ್ಕೆ ಏರಿದ್ದಾರೆ. ನಮ್ಮ ಭಾರತೀಯರು ಪ್ರಪಂಚದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮ ಹೆಮ್ಮೆಯೂ ಹೌದು ಜೊತೆಗೆ ಯಾಕೆ ಅವರು ಇಲ್ಲಿಯೇ ಕೆಲಸ ಮಾಡಿ, ನಮ್ಮ ದೇಶಕ್ಕೆ ಕೊಡುಗೆ ಕೊಡಬಹುದಿತ್ತಲ್ಲ ಎಂಬ ಕೊರಗು ಹೌದು.

ನಾವು ವಾಸ್ತವ ಅಂಶಗಳನ್ನು ಇಟ್ಟುಕೊಂಡು ಹೆಮ್ಮೆಪಡಬೇಕು. ಬದಲಿಗೆ ಈ ರೀತಿಯ 58% ಭಾರತೀಯರು ಎಂಬ ಸುಳ್ಳುಗಳನ್ನು ಇಟ್ಟು ಕೊಚ್ಚಿಕೊಂಡರೆ ಮುಂದೆ ನಮಗೆ ತೊಂದರೆ ಕಾದಿರುತ್ತದೆ. ಎಲ್ಲರಿಗೂ ಗೂಗಲ್ ನೆಟ್ ಕ್ಷಣಾರ್ಧದಲ್ಲಿ ಕೈಗೆ ಸಿಗುವುದರಿಂದ ಇದು ಸುಳ್ಳು ಎಂದು ಸುಲಭವಾಗಿ ಗೊತ್ತಾಗಿ ನಂತರ ನಮ್ಮ ದೇಶದವರನ್ನು ಅಪಹಾಸ್ಯ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸಬೇಕು.
(ಆಧಾರ: ಅಲ್ಟ್‍ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...