Homeಅಂತರಾಷ್ಟ್ರೀಯಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಕೈದಿಗಳು ಪೋಲಿಸ್ ಆತಿಥ್ಯದಲ್ಲಿ ತಾವು ಮಾಡದೇ ಇದ್ದ ತಪ್ಪನ್ನೂ ಸಹ ತಮ್ಮದೇ ಎಂದು ಕೆಲವೊಮ್ಮೆ ಒಪ್ಪಿಕೊಳ್ಳುವುದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಒಂದು ವೈಜ್ಞಾನಿಕ ಉತ್ತರ, ನಾನು ಹೇಳುತ್ತಿರುವುದು ಓರ್ವ ವಿಕಸಿತ ದೇಶದ ಪೋಲಿಸ್ ಕಾರ್ಯ ವೈಖರಿಯನ್ನು ಆಧರಿಸಿದ ವಿಚಾರವಾದ. (ಡಿಸ್ಕ್ಲೇಮರ್: ಇದು ನಮ್ಮ ದೇಶದ ಪೋಲಿಸ್ ಬಗ್ಗೆ ಅಲ್ಲ, ಏಕೆಂದರೆ ಅವರ ತನಿಖಾ/ವಿಚಾರಣಾ ವೈಖರಿಯ ಬಗ್ಗೆ ನನಗೆ ಯಾವ ವೈಯುಕ್ತಿಕ ಅನುಭವವೂ ಇಲ್ಲ). ಇದು ಒಂದು ಆಟದ ರೀತಿಯಲ್ಲಿರುವ ತತ್ವವಾದ. ಇದನ್ನು “ದಿ ಪ್ರಿಸನರ್ಸ್ ಡೈಲೆಮ್ಮಾ” (ಕೈದಿಗಳ ಉಭಯ ಸಂಕಟ) ಎನ್ನುತ್ತಾರೆ.

ಒಂದು ದಿನ, ಏಕ ಕಾಲಕ್ಕೆ, ನಗರದ ಪೋಲಿಸರು ಇಬ್ಬರು ಅಪರಾಧಿಗಳನ್ನು, ಒಂದೇ ರೀತಿಯ ಅಪರಾಧಕ್ಕೆ ಬಂಧಿಸಿ, ಒಂದೇ ಲಾಕಪ್ಪಿನ ಬೇರೆ ಬೇರೆ ಕೋಣೆಯಲ್ಲಿ ಹಾಕುತ್ತಾರೆ. ಒಬ್ಬನ ಹೆಸರು “ಎ”, ಇನ್ನೊಬ್ಬನ ಹೆಸರು “ಬಿ” ಎಂದು ಇಟ್ಟುಕೊಳ್ಳೋಣ. ಇಬ್ಬರಿಗೂ ಪರಸ್ಪರ ಯಾವ ರೀತಿಯ ಪರಿಚಯವೂ ಇಲ್ಲ, ಹೆಸರಾಗಲೀ ಗೊತ್ತಿಲ್ಲ, ಕೇಳಿಲ್ಲ, ಸಂಬಂಧವಾಗಲೀ, ಸಂಪರ್ಕವಾಗಲೀ, ಅನುಕಂಪವಾಗಲೀ ಇಲ್ಲ. ಇಬ್ಬರಿಗೂ ಅವರು ಮಾಡಿ ಸಿಕ್ಕಿಬಿದ್ದ ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಯೂ ಒಂದೇ ಪ್ರಮಾಣದ್ದಾಗಿರುತ್ತದೆ. ವಿಚಾರಣಗೆ ಬಂದ ತನಿಖಾಧಿಕಾರಿ ಇಬ್ಬರ ದಾಖಲೆಯನ್ನು ನೋಡಿ ಇಬ್ಬರಿಗೂ ಒಂದು ವರ್ಷ ಕಾರಾಗೃಹವಾಸ ಖಚಿತ ಎಂದುಕೊಳ್ಳುತ್ತಾನೆ. ಆದರೆ ಏನೋ ಅನುಮಾನ ಬಂದು, ಇವರಿಬ್ಬರೂ ಸೇರಿ ಇನ್ಯಾವುದೋ ದೊಡ್ಡ ಅಪರಾಧ ಏಕೆ ಎಸಗಿರಬಾರದು ಎಂದು ಯೋಚಿಸುತ್ತಾನೆ.

ಅದೇ ಲಹರಿಯಲ್ಲಿ ತನ್ನ ತನಿಖೆ ಮುಂದುವರೆಸುತ್ತಾ, ಮೊದಲು “ಎ” ಜೊತೆ ಮಾತನಾಡುತ್ತಾ “ನೋಡು, ಇಂದು ನೀನು ಸಿಕ್ಕಿಬಿದ್ದ ಅಪರಾಧಕ್ಕೆ ನಿನಗೆ ಒಂದು ವರ್ಷ ಜೈಲು ಶಿಕ್ಷೆ ಖಚಿತ ಆದರೆ ಹೋದ ವಾರ ನೀನು ಮತ್ತು ನಿನ್ನ ಸಂಗಡಿಗ ಮಾಡಿದ ಜಂಟಿ ಅಪರಾಧಕ್ಕೂ ಸೇರಿ, ಒಟ್ಟು ಮೂರು ವರ್ಷ ಜೈಲಾಗುತ್ತದೆ. ನಿನ್ನ ಸ್ನೇಹಿತನೂ ನಮ್ಮ ಕೈಗೆ ಸಿಕ್ಕಿದ್ದಾನೆ. ನೀವಿಬ್ಬರೂ ಅಪರಾಧ ಒಪ್ಪಿಕೊಂಡಲ್ಲಿ ಇಬ್ಬರಿಗೂ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗದಂತೆ ನಾನು ಭರವಸೆ ಕೊಡುತ್ತೇನೆ. ಒಂದು ಪಕ್ಷ ನೀವಿಬ್ಬರೂ ನಿರಾಕರಿಸಿದರೆ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಆಗುತ್ತದೆ, ಆದರೆ ನೀನು ನಮ್ಮೊಂದಿಗೆ ಸಹಕರಿಸಿ, ಅಪರಾಧ ಒಪ್ಪಿಕೊಂಡು, ನಿನ್ನ ಸಂಗಡಿಗ ಒಪ್ಪಿಕೊಳ್ಳದಿದ್ದರೆ ನಿನಗೆ ಕೇವಲ ಒಂದು ವರ್ಷ ಜೈಲು ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಆದರೆ ಅಂತಹ ಪರಿಸ್ಥಿತಿಯಲ್ಲಿ ನಿನ್ನ ಸಂಗಡಿಗನಿಗೆ ಹತ್ತು ವರ್ಷ ಜೈಲು ಗ್ಯಾರಂಟಿ. ಅದೇ ರೀತಿ ನಿನ್ನ ಸಂಗಡಿಗ ನಮ್ಮೊಂದಿಗೆ ಸಹಕರಿಸಿ, ತಪ್ಪೊಪ್ಪಿಕೊಂಡು, ನೀನು ನಿರಾಕರಿಸಿದಲ್ಲಿ, ನಿನಗೆ ಹತ್ತು ವರ್ಷ, ನಿನ್ನ ಸಂಗಡಿಗ ಒಂದು ವರ್ಷದಲ್ಲಿ ಜೈಲಿನಿಂದ ಹೊರಹೋಗುತ್ತಾನೆ, ಸರಿಯಾಗಿ ಯೋಚಿಸಿ ನೋಡು” ಎಂದು ಹೇಳಿ ಹೊರ ಹೋಗುತ್ತಾನೆ.

ಇದೇ ವರಸೆಯನ್ನು ಆತ “ಬಿ” ಕೈದಿಗೂ ವಿವರಿಸುತ್ತಾನೆ. ಇಬ್ಬರೂ ಮಾಡಿರುವುದು ಕೇವಲ ಒಂದು ವರ್ಷ ಶಿಕ್ಷೆ ಆಗಬಹುದಾದ ಅಪರಾಧ. ಇಬ್ಬರೂ ಸೇರಿ ಯಾವ ಜಂಟೀ ಅಪರಾಧವನ್ನು ಮಾಡಿರುವುದಿಲ್ಲ. ಒಬ್ಬನಿಗೆ ಇನ್ನೋರ್ವ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ತಿಳಿದಿಲ್ಲ. ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಅವರ ತಪ್ಪಿಗೆ ಆಗಬೇಕಾದ ಶಿಕ್ಷೆ ಒಂದು ವರ್ಷ. ಈಗ ನೀವೇ ಹೇಳಿ ಅವರಿಗೆ ಅವರ ತಪ್ಪೊಪ್ಪಿಗೆ/ನಿರಾಕರಣೆಯ ಆಧಾರದ ಮೇಲೆ ಎಷ್ಟು ಶಿಕ್ಷೆ ಆಗುತ್ತದೆ? ಇಬ್ಬರೂ ಕೈದಿಗಳು ತಾವು ಮಾಡದೇ ಇದ್ದ ತಪ್ಪು ಒಪ್ಪಿಕೊಳ್ಳಬೇಕೋ ಬೇಡವೋ? ಇದೇ “ಪ್ರಿಸನರ್ಸ್ ಡೈಲೆಮ್ಮಾ” – ಕೈದಿಗಳ ಉಭಯ ಸಂಕಟ.

ಈ ಆಟವನ್ನು “ದಿ ಗೇಮ್ ಥಿಯರಿ” ಎಂದೂ ಕರೆಯುತ್ತಾರೆ. ಇದನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ಕಂಪನಿಯ ರಣನೀತಿ ತಂಡದವರು (Strategy Team) ನಿಯಮಿತವಾಗಿ ಉಪಯೋಗಿಸುತ್ತಾರೆ. ಇದು ಮನಶಾಸ್ತ್ರ, ಮಾನವ ನಡತೆ ಆಧರಿಸಿದ ಅರ್ಥಶಾಸ್ತ್ರ (ಬೆಹೇವಿಯರಲ್ ಎಕನಾಮಿಕ್ಸ್) ಮತ್ತು ಗಣಿತಶಾಸ್ತ್ರವನ್ನು ಆಧರಿಸಿರುತ್ತದೆ. ಇದನ್ನು 1950ರಲ್ಲಿ ಮೂಲರೂಪದಲ್ಲಿ ಸೃಷ್ಟಿಸಿದವರು ಅಮೇರಿಕದ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಸಂಸ್ಥೆಯ ಮೆರ್ರಿಲ್ ಫ್ಲಡ್ ಮತ್ತು ಮೆಲ್ವಿನ್ ಡ್ರೆಶರ್. ನಂತರ ಇದನ್ನು ಜೈಲು ಶಿಕ್ಷೆಯ ಆಟದ ಸ್ವರೂಪದಲ್ಲಿ ನಿರ್ಮಿಸಿದವರು ಆಲ್ಬರ್ಟ್ ಟಕರ್ ಎಂಬುವಾತ. ಇದರ ಉದ್ದೇಶ ಸಂಪೂರ್ಣ ಬುದ್ಧಿ ಸ್ಥಿಮಿತವುಳ್ಳ, ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ಇಬ್ಬರು ವ್ಯಕ್ತಿಗಳು ಏಕೆ ಸರಿಯಾದ ನಿರ್ಣಯಕ್ಕೆ ಬರಲಾಗುವುದಿಲ್ಲ ಎಂಬುದನ್ನು ಸಿದ್ಧಗೊಳಿಸುತ್ತದೆ.

ಎ ಮತ್ತು ಬಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುವ ಗಣಿತಶಾಸ್ತ್ರ ಆಧಾರದ ಲಾಭ-ನಷ್ಟದ ಕೋಷ್ಟಕ ನೋಡೋಣ. ಇದನ್ನು payoff matrix ಎಂದು ಕರೆಯುತ್ತಾರೆ.

ಮೊದಲೇ ತಿಳಿಸಿದಂತೆ ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಕೈದಿಗಳ ತಪ್ಪಿಗೆ ಆಗಬೇಕಾಗಿರುವ ಶಿಕ್ಷೆ ಕೇವಲ ಒಂದು ವರ್ಷ (ಆಯ್ಕೆ-4). ಕೈದಿಗಳು ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಇಬ್ಬರೂ ತಾವು ಇನ್ಯಾವ ಅಪರಾಧವನ್ನೂ ಮಾಡಿಲ್ಲ ಎಂದು ಆಪಾದನೆಯನ್ನು ನಿರಾಕರಿಸಿ ತಮ್ಮ ಆಯ್ಕೆ-4 ಎನ್ನುತ್ತಿದ್ದರು. ಆದರೆ ಪರಸ್ಪರ ಸಂಪರ್ಕವಿಲ್ಲದೆ ಇರುವುದರಿಂದ, ಇನ್ನೊಬ್ಬ ಯಾವ ರೀತಿ ಹೇಳಿಕೆ ನೀಡುತ್ತಾನೆಂದು ತಿಳಿಯದೆ, ಕೇವಲ ತನ್ನ ಹಿತ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಬ್ಬರೂ ಸಹಕರಿಸುತ್ತಾರೆ (ಆಯ್ಕೆ-1) ಅಂದರೆ ಇಬ್ಬರಿಗೂ 3 ವರ್ಷ ಶಿಕ್ಷೆಯಾಗುತ್ತದೆ, ಆಶ್ಚರ್ಯವಲ್ಲವೇ?

ಹೇಗೆಂದು ನೋಡೋಣ: ಇಬ್ಬರಿಗೂ ಇರುವ ಆಯ್ಕೆಗಳು ಎರಡು – ಸಹಕರಿಸುವುದು ಅಥವಾ ನಿರಾಕರಿಸುವುದು. ಎ ವತಿಯಿಂದ ಯೋಚಿಸುವುದಾದರೆ – ಆತ ಸಹಕರಿಸಲು ನಿರ್ಧರಿಸಿದಲ್ಲಿ ಬಿ ಸಹಕರಿಸಬಹುದು ಅಥವಾ ನಿರಾಕರಿಸಬಹುದು. ಅಕಸ್ಮಾತ್ ಬಿ ಸಹಕರಿಸಿದ್ದೇ ಆದಲ್ಲಿ ಇಬ್ಬರ ಆಯ್ಕೆಯೂ 1 ಆಗುತ್ತದೆ. ಬಿ ನಿರಾಕರಿಸಿದಲ್ಲಿ ಎ ಆಯ್ಕೆ-2 ಆಗುತ್ತದೆ ಮತ್ತು ಇದರಿಂದ ಎ ಗೆ ಹೆಚ್ಚಿನ ಲಾಭ,ಕೇವಲ 1 ವರ್ಷ ಶಿಕ್ಷೆ ಇದ್ದು, ಬಿ ಗೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಎ ನಿರಾಕರಿಸಲು ನಿರ್ಧರಿಸಿದಲ್ಲಿ, ಬಿ ಏನಾದರೂ ಸಹಕರಿಸಲು ಮುಂದಾದರೆ ಎ ಗೆ ಹೆಚ್ಚಿನ ನಷ್ಟ (10 ವರ್ಷ) ಮತ್ತು ಬಿ ಒಂದು ವರ್ಷದಲ್ಲಿ ಮುಕ್ತನಾಗುವ ಸಾಧ್ಯತೆ ಇದೆ (ಆಯ್ಕೆ 3). ಬಿ ಕೂಡ ನಿರಾಕರಿಸಬಹುದು, ಆಗ ಇಬ್ಬರಿಗೂ (ಆಯ್ಕೆ 4) ಒಂದು ವರ್ಷದ ಶಿಕ್ಷೆಯೇನೋ ಸಿಗುತ್ತದೆ ಆದರೆ ಬಿ ಖಂಡಿತ ಹಾಗೆಯೇ ಮಾಡುತ್ತಾನೆಂಬ ಖಾತ್ರಿ ಇಲ್ಲವಾಗಿ, ಎಲ್ಲಿ ಆಯ್ಕೆ-2ರಿಂದ ಆಯ್ಕೆ-3ಕ್ಕೆ ತಿರುಗಬಹುದೋ ಎಂಬ ಆತಂಕದಿಂದ ಆತ ಆಯ್ಕೆ-1ಕ್ಕೆ ಮನಸ್ಸು ಮಾಡುತ್ತಾನೆ. ಅದೇ ರೀತಿ ಬಿ ವತಿಯಿಂದ ಯೋಚಿಸಿದಾಗಲೂ ತಾನು ನಿರಾಕರಿಸುವುದರಿಂದ ಎಲ್ಲಿ ಆಯ್ಕೆ-4 ರ ಬದಲಾಗಿ ತನ್ನ ಆಯ್ಕೆ-2ಕ್ಕೆ ತಿರುಗುತ್ತದೋ ಎಂಬ ಹೆದರಿಕೆಯಿಂದ  ಆತನೂ ಆಯ್ಕೆ-1ಕ್ಕೆ ಮುಂದಾಗುತ್ತಾನೆ.

ಇದರಲ್ಲಿ ಆಯ್ಕೆ-4 ಎಲ್ಲರ ಹಿತದೃಷ್ಟಿಯಿಂದಲೂ ಸಮಂಜಸವಾಗಿದ್ದರೂ ಸಹ ಅದು ಕ್ಷಣಿಕ ಮತ್ತು ಅಸ್ಥಾಯಿ, ಏಕೆಂದರೆ ಇನ್ನೊಬ್ಬ ತನ್ನ ನಿರ್ಧಾರ ಬದಲಾಯಿಸಿದಲ್ಲಿ ಮೊದಲನೆಯವನಿಗೆ ಆಗಬಹುದಾದ ಲಾಭಕ್ಕಿಂತ ಹೆಚ್ಚು ನಷ್ಟವಾಗುವ ಸಾಧ್ಯತೆಯೇ ಇದೆ. ಆದ್ದರಿಂದ ಆಯ್ಕೆ-1 ಮಾತ್ರ ಸ್ಥಾಯೀ ಆಗುತ್ತದೆ. ಈ ಆಯ್ಕೆಯನ್ನು “ನ್ಯಾಷ್ ಇಕ್ವಿಲಿಬ್ರಿಯಂ” ಎನ್ನುತ್ತಾರೆ. ಇದನ್ನು ಗಣಿತಶಾಸ್ತ್ರದಂತೆ ಸಿದ್ಧಪಡಿಸಿದ ಖ್ಯಾತಿ ನೋಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಷ್ ಅವರಿಗೆ ಸಲ್ಲುತ್ತದೆ. ಇವರ ತರ್ಕದ ಪ್ರಕಾರ ಇಬ್ಬರು ಅಥವಾ ಹೆಚ್ಚಿನ ಆಟಗಾರರಿರುವಂತಹ ಆಟದಲ್ಲಿ, ಮಿಕ್ಕವರು ತಮ್ಮ ಆಯ್ಕೆ ಬದಲಾಯಿಸದೇ ಇದ್ದಲ್ಲಿ, ಯಾವ ಆಟಗಾರನೂ ತನ್ನ ಸ್ವಂತ ಆಯ್ಕೆಯ ಬದಲಾವಣೆಯಿಂದ ಲಾಭ ಪಡೆದುಕೊಳ್ಳಲಾಗದು. ಈ ತರ್ಕ ಕೇವಲ ಕ್ರೀಡಾ ಜಗತ್ತಿನಲ್ಲಷ್ಟೇ ಅಲ್ಲ, ವ್ಯಾಪಾರ-ವಾಣಿಜ್ಯ-ಯುದ್ಧ ಕ್ಷೇತ್ರದಲ್ಲೂ ರಣನೀತಿಯಾಗಿ (ಸ್ಟ್ರ್ಯಾಟೆಜಿ) ಬಳಕೆಯಾಗುವುದನ್ನು ಕಾಣಬಹುದು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...