Homeಅಂತರಾಷ್ಟ್ರೀಯಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಕೈದಿಗಳು ಪೋಲಿಸ್ ಆತಿಥ್ಯದಲ್ಲಿ ತಾವು ಮಾಡದೇ ಇದ್ದ ತಪ್ಪನ್ನೂ ಸಹ ತಮ್ಮದೇ ಎಂದು ಕೆಲವೊಮ್ಮೆ ಒಪ್ಪಿಕೊಳ್ಳುವುದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಒಂದು ವೈಜ್ಞಾನಿಕ ಉತ್ತರ, ನಾನು ಹೇಳುತ್ತಿರುವುದು ಓರ್ವ ವಿಕಸಿತ ದೇಶದ ಪೋಲಿಸ್ ಕಾರ್ಯ ವೈಖರಿಯನ್ನು ಆಧರಿಸಿದ ವಿಚಾರವಾದ. (ಡಿಸ್ಕ್ಲೇಮರ್: ಇದು ನಮ್ಮ ದೇಶದ ಪೋಲಿಸ್ ಬಗ್ಗೆ ಅಲ್ಲ, ಏಕೆಂದರೆ ಅವರ ತನಿಖಾ/ವಿಚಾರಣಾ ವೈಖರಿಯ ಬಗ್ಗೆ ನನಗೆ ಯಾವ ವೈಯುಕ್ತಿಕ ಅನುಭವವೂ ಇಲ್ಲ). ಇದು ಒಂದು ಆಟದ ರೀತಿಯಲ್ಲಿರುವ ತತ್ವವಾದ. ಇದನ್ನು “ದಿ ಪ್ರಿಸನರ್ಸ್ ಡೈಲೆಮ್ಮಾ” (ಕೈದಿಗಳ ಉಭಯ ಸಂಕಟ) ಎನ್ನುತ್ತಾರೆ.

ಒಂದು ದಿನ, ಏಕ ಕಾಲಕ್ಕೆ, ನಗರದ ಪೋಲಿಸರು ಇಬ್ಬರು ಅಪರಾಧಿಗಳನ್ನು, ಒಂದೇ ರೀತಿಯ ಅಪರಾಧಕ್ಕೆ ಬಂಧಿಸಿ, ಒಂದೇ ಲಾಕಪ್ಪಿನ ಬೇರೆ ಬೇರೆ ಕೋಣೆಯಲ್ಲಿ ಹಾಕುತ್ತಾರೆ. ಒಬ್ಬನ ಹೆಸರು “ಎ”, ಇನ್ನೊಬ್ಬನ ಹೆಸರು “ಬಿ” ಎಂದು ಇಟ್ಟುಕೊಳ್ಳೋಣ. ಇಬ್ಬರಿಗೂ ಪರಸ್ಪರ ಯಾವ ರೀತಿಯ ಪರಿಚಯವೂ ಇಲ್ಲ, ಹೆಸರಾಗಲೀ ಗೊತ್ತಿಲ್ಲ, ಕೇಳಿಲ್ಲ, ಸಂಬಂಧವಾಗಲೀ, ಸಂಪರ್ಕವಾಗಲೀ, ಅನುಕಂಪವಾಗಲೀ ಇಲ್ಲ. ಇಬ್ಬರಿಗೂ ಅವರು ಮಾಡಿ ಸಿಕ್ಕಿಬಿದ್ದ ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಯೂ ಒಂದೇ ಪ್ರಮಾಣದ್ದಾಗಿರುತ್ತದೆ. ವಿಚಾರಣಗೆ ಬಂದ ತನಿಖಾಧಿಕಾರಿ ಇಬ್ಬರ ದಾಖಲೆಯನ್ನು ನೋಡಿ ಇಬ್ಬರಿಗೂ ಒಂದು ವರ್ಷ ಕಾರಾಗೃಹವಾಸ ಖಚಿತ ಎಂದುಕೊಳ್ಳುತ್ತಾನೆ. ಆದರೆ ಏನೋ ಅನುಮಾನ ಬಂದು, ಇವರಿಬ್ಬರೂ ಸೇರಿ ಇನ್ಯಾವುದೋ ದೊಡ್ಡ ಅಪರಾಧ ಏಕೆ ಎಸಗಿರಬಾರದು ಎಂದು ಯೋಚಿಸುತ್ತಾನೆ.

ಅದೇ ಲಹರಿಯಲ್ಲಿ ತನ್ನ ತನಿಖೆ ಮುಂದುವರೆಸುತ್ತಾ, ಮೊದಲು “ಎ” ಜೊತೆ ಮಾತನಾಡುತ್ತಾ “ನೋಡು, ಇಂದು ನೀನು ಸಿಕ್ಕಿಬಿದ್ದ ಅಪರಾಧಕ್ಕೆ ನಿನಗೆ ಒಂದು ವರ್ಷ ಜೈಲು ಶಿಕ್ಷೆ ಖಚಿತ ಆದರೆ ಹೋದ ವಾರ ನೀನು ಮತ್ತು ನಿನ್ನ ಸಂಗಡಿಗ ಮಾಡಿದ ಜಂಟಿ ಅಪರಾಧಕ್ಕೂ ಸೇರಿ, ಒಟ್ಟು ಮೂರು ವರ್ಷ ಜೈಲಾಗುತ್ತದೆ. ನಿನ್ನ ಸ್ನೇಹಿತನೂ ನಮ್ಮ ಕೈಗೆ ಸಿಕ್ಕಿದ್ದಾನೆ. ನೀವಿಬ್ಬರೂ ಅಪರಾಧ ಒಪ್ಪಿಕೊಂಡಲ್ಲಿ ಇಬ್ಬರಿಗೂ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗದಂತೆ ನಾನು ಭರವಸೆ ಕೊಡುತ್ತೇನೆ. ಒಂದು ಪಕ್ಷ ನೀವಿಬ್ಬರೂ ನಿರಾಕರಿಸಿದರೆ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಆಗುತ್ತದೆ, ಆದರೆ ನೀನು ನಮ್ಮೊಂದಿಗೆ ಸಹಕರಿಸಿ, ಅಪರಾಧ ಒಪ್ಪಿಕೊಂಡು, ನಿನ್ನ ಸಂಗಡಿಗ ಒಪ್ಪಿಕೊಳ್ಳದಿದ್ದರೆ ನಿನಗೆ ಕೇವಲ ಒಂದು ವರ್ಷ ಜೈಲು ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಆದರೆ ಅಂತಹ ಪರಿಸ್ಥಿತಿಯಲ್ಲಿ ನಿನ್ನ ಸಂಗಡಿಗನಿಗೆ ಹತ್ತು ವರ್ಷ ಜೈಲು ಗ್ಯಾರಂಟಿ. ಅದೇ ರೀತಿ ನಿನ್ನ ಸಂಗಡಿಗ ನಮ್ಮೊಂದಿಗೆ ಸಹಕರಿಸಿ, ತಪ್ಪೊಪ್ಪಿಕೊಂಡು, ನೀನು ನಿರಾಕರಿಸಿದಲ್ಲಿ, ನಿನಗೆ ಹತ್ತು ವರ್ಷ, ನಿನ್ನ ಸಂಗಡಿಗ ಒಂದು ವರ್ಷದಲ್ಲಿ ಜೈಲಿನಿಂದ ಹೊರಹೋಗುತ್ತಾನೆ, ಸರಿಯಾಗಿ ಯೋಚಿಸಿ ನೋಡು” ಎಂದು ಹೇಳಿ ಹೊರ ಹೋಗುತ್ತಾನೆ.

ಇದೇ ವರಸೆಯನ್ನು ಆತ “ಬಿ” ಕೈದಿಗೂ ವಿವರಿಸುತ್ತಾನೆ. ಇಬ್ಬರೂ ಮಾಡಿರುವುದು ಕೇವಲ ಒಂದು ವರ್ಷ ಶಿಕ್ಷೆ ಆಗಬಹುದಾದ ಅಪರಾಧ. ಇಬ್ಬರೂ ಸೇರಿ ಯಾವ ಜಂಟೀ ಅಪರಾಧವನ್ನು ಮಾಡಿರುವುದಿಲ್ಲ. ಒಬ್ಬನಿಗೆ ಇನ್ನೋರ್ವ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ತಿಳಿದಿಲ್ಲ. ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಅವರ ತಪ್ಪಿಗೆ ಆಗಬೇಕಾದ ಶಿಕ್ಷೆ ಒಂದು ವರ್ಷ. ಈಗ ನೀವೇ ಹೇಳಿ ಅವರಿಗೆ ಅವರ ತಪ್ಪೊಪ್ಪಿಗೆ/ನಿರಾಕರಣೆಯ ಆಧಾರದ ಮೇಲೆ ಎಷ್ಟು ಶಿಕ್ಷೆ ಆಗುತ್ತದೆ? ಇಬ್ಬರೂ ಕೈದಿಗಳು ತಾವು ಮಾಡದೇ ಇದ್ದ ತಪ್ಪು ಒಪ್ಪಿಕೊಳ್ಳಬೇಕೋ ಬೇಡವೋ? ಇದೇ “ಪ್ರಿಸನರ್ಸ್ ಡೈಲೆಮ್ಮಾ” – ಕೈದಿಗಳ ಉಭಯ ಸಂಕಟ.

ಈ ಆಟವನ್ನು “ದಿ ಗೇಮ್ ಥಿಯರಿ” ಎಂದೂ ಕರೆಯುತ್ತಾರೆ. ಇದನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ಕಂಪನಿಯ ರಣನೀತಿ ತಂಡದವರು (Strategy Team) ನಿಯಮಿತವಾಗಿ ಉಪಯೋಗಿಸುತ್ತಾರೆ. ಇದು ಮನಶಾಸ್ತ್ರ, ಮಾನವ ನಡತೆ ಆಧರಿಸಿದ ಅರ್ಥಶಾಸ್ತ್ರ (ಬೆಹೇವಿಯರಲ್ ಎಕನಾಮಿಕ್ಸ್) ಮತ್ತು ಗಣಿತಶಾಸ್ತ್ರವನ್ನು ಆಧರಿಸಿರುತ್ತದೆ. ಇದನ್ನು 1950ರಲ್ಲಿ ಮೂಲರೂಪದಲ್ಲಿ ಸೃಷ್ಟಿಸಿದವರು ಅಮೇರಿಕದ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಸಂಸ್ಥೆಯ ಮೆರ್ರಿಲ್ ಫ್ಲಡ್ ಮತ್ತು ಮೆಲ್ವಿನ್ ಡ್ರೆಶರ್. ನಂತರ ಇದನ್ನು ಜೈಲು ಶಿಕ್ಷೆಯ ಆಟದ ಸ್ವರೂಪದಲ್ಲಿ ನಿರ್ಮಿಸಿದವರು ಆಲ್ಬರ್ಟ್ ಟಕರ್ ಎಂಬುವಾತ. ಇದರ ಉದ್ದೇಶ ಸಂಪೂರ್ಣ ಬುದ್ಧಿ ಸ್ಥಿಮಿತವುಳ್ಳ, ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ಇಬ್ಬರು ವ್ಯಕ್ತಿಗಳು ಏಕೆ ಸರಿಯಾದ ನಿರ್ಣಯಕ್ಕೆ ಬರಲಾಗುವುದಿಲ್ಲ ಎಂಬುದನ್ನು ಸಿದ್ಧಗೊಳಿಸುತ್ತದೆ.

ಎ ಮತ್ತು ಬಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುವ ಗಣಿತಶಾಸ್ತ್ರ ಆಧಾರದ ಲಾಭ-ನಷ್ಟದ ಕೋಷ್ಟಕ ನೋಡೋಣ. ಇದನ್ನು payoff matrix ಎಂದು ಕರೆಯುತ್ತಾರೆ.

ಮೊದಲೇ ತಿಳಿಸಿದಂತೆ ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಕೈದಿಗಳ ತಪ್ಪಿಗೆ ಆಗಬೇಕಾಗಿರುವ ಶಿಕ್ಷೆ ಕೇವಲ ಒಂದು ವರ್ಷ (ಆಯ್ಕೆ-4). ಕೈದಿಗಳು ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಇಬ್ಬರೂ ತಾವು ಇನ್ಯಾವ ಅಪರಾಧವನ್ನೂ ಮಾಡಿಲ್ಲ ಎಂದು ಆಪಾದನೆಯನ್ನು ನಿರಾಕರಿಸಿ ತಮ್ಮ ಆಯ್ಕೆ-4 ಎನ್ನುತ್ತಿದ್ದರು. ಆದರೆ ಪರಸ್ಪರ ಸಂಪರ್ಕವಿಲ್ಲದೆ ಇರುವುದರಿಂದ, ಇನ್ನೊಬ್ಬ ಯಾವ ರೀತಿ ಹೇಳಿಕೆ ನೀಡುತ್ತಾನೆಂದು ತಿಳಿಯದೆ, ಕೇವಲ ತನ್ನ ಹಿತ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಬ್ಬರೂ ಸಹಕರಿಸುತ್ತಾರೆ (ಆಯ್ಕೆ-1) ಅಂದರೆ ಇಬ್ಬರಿಗೂ 3 ವರ್ಷ ಶಿಕ್ಷೆಯಾಗುತ್ತದೆ, ಆಶ್ಚರ್ಯವಲ್ಲವೇ?

ಹೇಗೆಂದು ನೋಡೋಣ: ಇಬ್ಬರಿಗೂ ಇರುವ ಆಯ್ಕೆಗಳು ಎರಡು – ಸಹಕರಿಸುವುದು ಅಥವಾ ನಿರಾಕರಿಸುವುದು. ಎ ವತಿಯಿಂದ ಯೋಚಿಸುವುದಾದರೆ – ಆತ ಸಹಕರಿಸಲು ನಿರ್ಧರಿಸಿದಲ್ಲಿ ಬಿ ಸಹಕರಿಸಬಹುದು ಅಥವಾ ನಿರಾಕರಿಸಬಹುದು. ಅಕಸ್ಮಾತ್ ಬಿ ಸಹಕರಿಸಿದ್ದೇ ಆದಲ್ಲಿ ಇಬ್ಬರ ಆಯ್ಕೆಯೂ 1 ಆಗುತ್ತದೆ. ಬಿ ನಿರಾಕರಿಸಿದಲ್ಲಿ ಎ ಆಯ್ಕೆ-2 ಆಗುತ್ತದೆ ಮತ್ತು ಇದರಿಂದ ಎ ಗೆ ಹೆಚ್ಚಿನ ಲಾಭ,ಕೇವಲ 1 ವರ್ಷ ಶಿಕ್ಷೆ ಇದ್ದು, ಬಿ ಗೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಎ ನಿರಾಕರಿಸಲು ನಿರ್ಧರಿಸಿದಲ್ಲಿ, ಬಿ ಏನಾದರೂ ಸಹಕರಿಸಲು ಮುಂದಾದರೆ ಎ ಗೆ ಹೆಚ್ಚಿನ ನಷ್ಟ (10 ವರ್ಷ) ಮತ್ತು ಬಿ ಒಂದು ವರ್ಷದಲ್ಲಿ ಮುಕ್ತನಾಗುವ ಸಾಧ್ಯತೆ ಇದೆ (ಆಯ್ಕೆ 3). ಬಿ ಕೂಡ ನಿರಾಕರಿಸಬಹುದು, ಆಗ ಇಬ್ಬರಿಗೂ (ಆಯ್ಕೆ 4) ಒಂದು ವರ್ಷದ ಶಿಕ್ಷೆಯೇನೋ ಸಿಗುತ್ತದೆ ಆದರೆ ಬಿ ಖಂಡಿತ ಹಾಗೆಯೇ ಮಾಡುತ್ತಾನೆಂಬ ಖಾತ್ರಿ ಇಲ್ಲವಾಗಿ, ಎಲ್ಲಿ ಆಯ್ಕೆ-2ರಿಂದ ಆಯ್ಕೆ-3ಕ್ಕೆ ತಿರುಗಬಹುದೋ ಎಂಬ ಆತಂಕದಿಂದ ಆತ ಆಯ್ಕೆ-1ಕ್ಕೆ ಮನಸ್ಸು ಮಾಡುತ್ತಾನೆ. ಅದೇ ರೀತಿ ಬಿ ವತಿಯಿಂದ ಯೋಚಿಸಿದಾಗಲೂ ತಾನು ನಿರಾಕರಿಸುವುದರಿಂದ ಎಲ್ಲಿ ಆಯ್ಕೆ-4 ರ ಬದಲಾಗಿ ತನ್ನ ಆಯ್ಕೆ-2ಕ್ಕೆ ತಿರುಗುತ್ತದೋ ಎಂಬ ಹೆದರಿಕೆಯಿಂದ  ಆತನೂ ಆಯ್ಕೆ-1ಕ್ಕೆ ಮುಂದಾಗುತ್ತಾನೆ.

ಇದರಲ್ಲಿ ಆಯ್ಕೆ-4 ಎಲ್ಲರ ಹಿತದೃಷ್ಟಿಯಿಂದಲೂ ಸಮಂಜಸವಾಗಿದ್ದರೂ ಸಹ ಅದು ಕ್ಷಣಿಕ ಮತ್ತು ಅಸ್ಥಾಯಿ, ಏಕೆಂದರೆ ಇನ್ನೊಬ್ಬ ತನ್ನ ನಿರ್ಧಾರ ಬದಲಾಯಿಸಿದಲ್ಲಿ ಮೊದಲನೆಯವನಿಗೆ ಆಗಬಹುದಾದ ಲಾಭಕ್ಕಿಂತ ಹೆಚ್ಚು ನಷ್ಟವಾಗುವ ಸಾಧ್ಯತೆಯೇ ಇದೆ. ಆದ್ದರಿಂದ ಆಯ್ಕೆ-1 ಮಾತ್ರ ಸ್ಥಾಯೀ ಆಗುತ್ತದೆ. ಈ ಆಯ್ಕೆಯನ್ನು “ನ್ಯಾಷ್ ಇಕ್ವಿಲಿಬ್ರಿಯಂ” ಎನ್ನುತ್ತಾರೆ. ಇದನ್ನು ಗಣಿತಶಾಸ್ತ್ರದಂತೆ ಸಿದ್ಧಪಡಿಸಿದ ಖ್ಯಾತಿ ನೋಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಷ್ ಅವರಿಗೆ ಸಲ್ಲುತ್ತದೆ. ಇವರ ತರ್ಕದ ಪ್ರಕಾರ ಇಬ್ಬರು ಅಥವಾ ಹೆಚ್ಚಿನ ಆಟಗಾರರಿರುವಂತಹ ಆಟದಲ್ಲಿ, ಮಿಕ್ಕವರು ತಮ್ಮ ಆಯ್ಕೆ ಬದಲಾಯಿಸದೇ ಇದ್ದಲ್ಲಿ, ಯಾವ ಆಟಗಾರನೂ ತನ್ನ ಸ್ವಂತ ಆಯ್ಕೆಯ ಬದಲಾವಣೆಯಿಂದ ಲಾಭ ಪಡೆದುಕೊಳ್ಳಲಾಗದು. ಈ ತರ್ಕ ಕೇವಲ ಕ್ರೀಡಾ ಜಗತ್ತಿನಲ್ಲಷ್ಟೇ ಅಲ್ಲ, ವ್ಯಾಪಾರ-ವಾಣಿಜ್ಯ-ಯುದ್ಧ ಕ್ಷೇತ್ರದಲ್ಲೂ ರಣನೀತಿಯಾಗಿ (ಸ್ಟ್ರ್ಯಾಟೆಜಿ) ಬಳಕೆಯಾಗುವುದನ್ನು ಕಾಣಬಹುದು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...