Homeಅಂತರಾಷ್ಟ್ರೀಯಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಕೈದಿಗಳು ಪೋಲಿಸ್ ಆತಿಥ್ಯದಲ್ಲಿ ತಾವು ಮಾಡದೇ ಇದ್ದ ತಪ್ಪನ್ನೂ ಸಹ ತಮ್ಮದೇ ಎಂದು ಕೆಲವೊಮ್ಮೆ ಒಪ್ಪಿಕೊಳ್ಳುವುದು ಏಕೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ಒಂದು ವೈಜ್ಞಾನಿಕ ಉತ್ತರ, ನಾನು ಹೇಳುತ್ತಿರುವುದು ಓರ್ವ ವಿಕಸಿತ ದೇಶದ ಪೋಲಿಸ್ ಕಾರ್ಯ ವೈಖರಿಯನ್ನು ಆಧರಿಸಿದ ವಿಚಾರವಾದ. (ಡಿಸ್ಕ್ಲೇಮರ್: ಇದು ನಮ್ಮ ದೇಶದ ಪೋಲಿಸ್ ಬಗ್ಗೆ ಅಲ್ಲ, ಏಕೆಂದರೆ ಅವರ ತನಿಖಾ/ವಿಚಾರಣಾ ವೈಖರಿಯ ಬಗ್ಗೆ ನನಗೆ ಯಾವ ವೈಯುಕ್ತಿಕ ಅನುಭವವೂ ಇಲ್ಲ). ಇದು ಒಂದು ಆಟದ ರೀತಿಯಲ್ಲಿರುವ ತತ್ವವಾದ. ಇದನ್ನು “ದಿ ಪ್ರಿಸನರ್ಸ್ ಡೈಲೆಮ್ಮಾ” (ಕೈದಿಗಳ ಉಭಯ ಸಂಕಟ) ಎನ್ನುತ್ತಾರೆ.

ಒಂದು ದಿನ, ಏಕ ಕಾಲಕ್ಕೆ, ನಗರದ ಪೋಲಿಸರು ಇಬ್ಬರು ಅಪರಾಧಿಗಳನ್ನು, ಒಂದೇ ರೀತಿಯ ಅಪರಾಧಕ್ಕೆ ಬಂಧಿಸಿ, ಒಂದೇ ಲಾಕಪ್ಪಿನ ಬೇರೆ ಬೇರೆ ಕೋಣೆಯಲ್ಲಿ ಹಾಕುತ್ತಾರೆ. ಒಬ್ಬನ ಹೆಸರು “ಎ”, ಇನ್ನೊಬ್ಬನ ಹೆಸರು “ಬಿ” ಎಂದು ಇಟ್ಟುಕೊಳ್ಳೋಣ. ಇಬ್ಬರಿಗೂ ಪರಸ್ಪರ ಯಾವ ರೀತಿಯ ಪರಿಚಯವೂ ಇಲ್ಲ, ಹೆಸರಾಗಲೀ ಗೊತ್ತಿಲ್ಲ, ಕೇಳಿಲ್ಲ, ಸಂಬಂಧವಾಗಲೀ, ಸಂಪರ್ಕವಾಗಲೀ, ಅನುಕಂಪವಾಗಲೀ ಇಲ್ಲ. ಇಬ್ಬರಿಗೂ ಅವರು ಮಾಡಿ ಸಿಕ್ಕಿಬಿದ್ದ ಅಪರಾಧಕ್ಕೆ ಸಿಗಬಹುದಾದ ಶಿಕ್ಷೆಯೂ ಒಂದೇ ಪ್ರಮಾಣದ್ದಾಗಿರುತ್ತದೆ. ವಿಚಾರಣಗೆ ಬಂದ ತನಿಖಾಧಿಕಾರಿ ಇಬ್ಬರ ದಾಖಲೆಯನ್ನು ನೋಡಿ ಇಬ್ಬರಿಗೂ ಒಂದು ವರ್ಷ ಕಾರಾಗೃಹವಾಸ ಖಚಿತ ಎಂದುಕೊಳ್ಳುತ್ತಾನೆ. ಆದರೆ ಏನೋ ಅನುಮಾನ ಬಂದು, ಇವರಿಬ್ಬರೂ ಸೇರಿ ಇನ್ಯಾವುದೋ ದೊಡ್ಡ ಅಪರಾಧ ಏಕೆ ಎಸಗಿರಬಾರದು ಎಂದು ಯೋಚಿಸುತ್ತಾನೆ.

ಅದೇ ಲಹರಿಯಲ್ಲಿ ತನ್ನ ತನಿಖೆ ಮುಂದುವರೆಸುತ್ತಾ, ಮೊದಲು “ಎ” ಜೊತೆ ಮಾತನಾಡುತ್ತಾ “ನೋಡು, ಇಂದು ನೀನು ಸಿಕ್ಕಿಬಿದ್ದ ಅಪರಾಧಕ್ಕೆ ನಿನಗೆ ಒಂದು ವರ್ಷ ಜೈಲು ಶಿಕ್ಷೆ ಖಚಿತ ಆದರೆ ಹೋದ ವಾರ ನೀನು ಮತ್ತು ನಿನ್ನ ಸಂಗಡಿಗ ಮಾಡಿದ ಜಂಟಿ ಅಪರಾಧಕ್ಕೂ ಸೇರಿ, ಒಟ್ಟು ಮೂರು ವರ್ಷ ಜೈಲಾಗುತ್ತದೆ. ನಿನ್ನ ಸ್ನೇಹಿತನೂ ನಮ್ಮ ಕೈಗೆ ಸಿಕ್ಕಿದ್ದಾನೆ. ನೀವಿಬ್ಬರೂ ಅಪರಾಧ ಒಪ್ಪಿಕೊಂಡಲ್ಲಿ ಇಬ್ಬರಿಗೂ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗದಂತೆ ನಾನು ಭರವಸೆ ಕೊಡುತ್ತೇನೆ. ಒಂದು ಪಕ್ಷ ನೀವಿಬ್ಬರೂ ನಿರಾಕರಿಸಿದರೆ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಆಗುತ್ತದೆ, ಆದರೆ ನೀನು ನಮ್ಮೊಂದಿಗೆ ಸಹಕರಿಸಿ, ಅಪರಾಧ ಒಪ್ಪಿಕೊಂಡು, ನಿನ್ನ ಸಂಗಡಿಗ ಒಪ್ಪಿಕೊಳ್ಳದಿದ್ದರೆ ನಿನಗೆ ಕೇವಲ ಒಂದು ವರ್ಷ ಜೈಲು ಆಗುವಂತೆ ನಾನು ನೋಡಿಕೊಳ್ಳುತ್ತೇನೆ ಆದರೆ ಅಂತಹ ಪರಿಸ್ಥಿತಿಯಲ್ಲಿ ನಿನ್ನ ಸಂಗಡಿಗನಿಗೆ ಹತ್ತು ವರ್ಷ ಜೈಲು ಗ್ಯಾರಂಟಿ. ಅದೇ ರೀತಿ ನಿನ್ನ ಸಂಗಡಿಗ ನಮ್ಮೊಂದಿಗೆ ಸಹಕರಿಸಿ, ತಪ್ಪೊಪ್ಪಿಕೊಂಡು, ನೀನು ನಿರಾಕರಿಸಿದಲ್ಲಿ, ನಿನಗೆ ಹತ್ತು ವರ್ಷ, ನಿನ್ನ ಸಂಗಡಿಗ ಒಂದು ವರ್ಷದಲ್ಲಿ ಜೈಲಿನಿಂದ ಹೊರಹೋಗುತ್ತಾನೆ, ಸರಿಯಾಗಿ ಯೋಚಿಸಿ ನೋಡು” ಎಂದು ಹೇಳಿ ಹೊರ ಹೋಗುತ್ತಾನೆ.

ಇದೇ ವರಸೆಯನ್ನು ಆತ “ಬಿ” ಕೈದಿಗೂ ವಿವರಿಸುತ್ತಾನೆ. ಇಬ್ಬರೂ ಮಾಡಿರುವುದು ಕೇವಲ ಒಂದು ವರ್ಷ ಶಿಕ್ಷೆ ಆಗಬಹುದಾದ ಅಪರಾಧ. ಇಬ್ಬರೂ ಸೇರಿ ಯಾವ ಜಂಟೀ ಅಪರಾಧವನ್ನು ಮಾಡಿರುವುದಿಲ್ಲ. ಒಬ್ಬನಿಗೆ ಇನ್ನೋರ್ವ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ತಿಳಿದಿಲ್ಲ. ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಅವರ ತಪ್ಪಿಗೆ ಆಗಬೇಕಾದ ಶಿಕ್ಷೆ ಒಂದು ವರ್ಷ. ಈಗ ನೀವೇ ಹೇಳಿ ಅವರಿಗೆ ಅವರ ತಪ್ಪೊಪ್ಪಿಗೆ/ನಿರಾಕರಣೆಯ ಆಧಾರದ ಮೇಲೆ ಎಷ್ಟು ಶಿಕ್ಷೆ ಆಗುತ್ತದೆ? ಇಬ್ಬರೂ ಕೈದಿಗಳು ತಾವು ಮಾಡದೇ ಇದ್ದ ತಪ್ಪು ಒಪ್ಪಿಕೊಳ್ಳಬೇಕೋ ಬೇಡವೋ? ಇದೇ “ಪ್ರಿಸನರ್ಸ್ ಡೈಲೆಮ್ಮಾ” – ಕೈದಿಗಳ ಉಭಯ ಸಂಕಟ.

ಈ ಆಟವನ್ನು “ದಿ ಗೇಮ್ ಥಿಯರಿ” ಎಂದೂ ಕರೆಯುತ್ತಾರೆ. ಇದನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ಕಂಪನಿಯ ರಣನೀತಿ ತಂಡದವರು (Strategy Team) ನಿಯಮಿತವಾಗಿ ಉಪಯೋಗಿಸುತ್ತಾರೆ. ಇದು ಮನಶಾಸ್ತ್ರ, ಮಾನವ ನಡತೆ ಆಧರಿಸಿದ ಅರ್ಥಶಾಸ್ತ್ರ (ಬೆಹೇವಿಯರಲ್ ಎಕನಾಮಿಕ್ಸ್) ಮತ್ತು ಗಣಿತಶಾಸ್ತ್ರವನ್ನು ಆಧರಿಸಿರುತ್ತದೆ. ಇದನ್ನು 1950ರಲ್ಲಿ ಮೂಲರೂಪದಲ್ಲಿ ಸೃಷ್ಟಿಸಿದವರು ಅಮೇರಿಕದ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಸಂಸ್ಥೆಯ ಮೆರ್ರಿಲ್ ಫ್ಲಡ್ ಮತ್ತು ಮೆಲ್ವಿನ್ ಡ್ರೆಶರ್. ನಂತರ ಇದನ್ನು ಜೈಲು ಶಿಕ್ಷೆಯ ಆಟದ ಸ್ವರೂಪದಲ್ಲಿ ನಿರ್ಮಿಸಿದವರು ಆಲ್ಬರ್ಟ್ ಟಕರ್ ಎಂಬುವಾತ. ಇದರ ಉದ್ದೇಶ ಸಂಪೂರ್ಣ ಬುದ್ಧಿ ಸ್ಥಿಮಿತವುಳ್ಳ, ತಮ್ಮ ಸ್ವಹಿತವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ಇಬ್ಬರು ವ್ಯಕ್ತಿಗಳು ಏಕೆ ಸರಿಯಾದ ನಿರ್ಣಯಕ್ಕೆ ಬರಲಾಗುವುದಿಲ್ಲ ಎಂಬುದನ್ನು ಸಿದ್ಧಗೊಳಿಸುತ್ತದೆ.

ಎ ಮತ್ತು ಬಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುವ ಗಣಿತಶಾಸ್ತ್ರ ಆಧಾರದ ಲಾಭ-ನಷ್ಟದ ಕೋಷ್ಟಕ ನೋಡೋಣ. ಇದನ್ನು payoff matrix ಎಂದು ಕರೆಯುತ್ತಾರೆ.

ಮೊದಲೇ ತಿಳಿಸಿದಂತೆ ಎಲ್ಲವೂ ನ್ಯಾಯವಾಗಿ ನಡೆದಲ್ಲಿ, ಎಲ್ಲರೂ ಸತ್ಯವನ್ನೇ ನುಡಿದಲ್ಲಿ, ಕೈದಿಗಳ ತಪ್ಪಿಗೆ ಆಗಬೇಕಾಗಿರುವ ಶಿಕ್ಷೆ ಕೇವಲ ಒಂದು ವರ್ಷ (ಆಯ್ಕೆ-4). ಕೈದಿಗಳು ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಇಬ್ಬರೂ ತಾವು ಇನ್ಯಾವ ಅಪರಾಧವನ್ನೂ ಮಾಡಿಲ್ಲ ಎಂದು ಆಪಾದನೆಯನ್ನು ನಿರಾಕರಿಸಿ ತಮ್ಮ ಆಯ್ಕೆ-4 ಎನ್ನುತ್ತಿದ್ದರು. ಆದರೆ ಪರಸ್ಪರ ಸಂಪರ್ಕವಿಲ್ಲದೆ ಇರುವುದರಿಂದ, ಇನ್ನೊಬ್ಬ ಯಾವ ರೀತಿ ಹೇಳಿಕೆ ನೀಡುತ್ತಾನೆಂದು ತಿಳಿಯದೆ, ಕೇವಲ ತನ್ನ ಹಿತ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಬ್ಬರೂ ಸಹಕರಿಸುತ್ತಾರೆ (ಆಯ್ಕೆ-1) ಅಂದರೆ ಇಬ್ಬರಿಗೂ 3 ವರ್ಷ ಶಿಕ್ಷೆಯಾಗುತ್ತದೆ, ಆಶ್ಚರ್ಯವಲ್ಲವೇ?

ಹೇಗೆಂದು ನೋಡೋಣ: ಇಬ್ಬರಿಗೂ ಇರುವ ಆಯ್ಕೆಗಳು ಎರಡು – ಸಹಕರಿಸುವುದು ಅಥವಾ ನಿರಾಕರಿಸುವುದು. ಎ ವತಿಯಿಂದ ಯೋಚಿಸುವುದಾದರೆ – ಆತ ಸಹಕರಿಸಲು ನಿರ್ಧರಿಸಿದಲ್ಲಿ ಬಿ ಸಹಕರಿಸಬಹುದು ಅಥವಾ ನಿರಾಕರಿಸಬಹುದು. ಅಕಸ್ಮಾತ್ ಬಿ ಸಹಕರಿಸಿದ್ದೇ ಆದಲ್ಲಿ ಇಬ್ಬರ ಆಯ್ಕೆಯೂ 1 ಆಗುತ್ತದೆ. ಬಿ ನಿರಾಕರಿಸಿದಲ್ಲಿ ಎ ಆಯ್ಕೆ-2 ಆಗುತ್ತದೆ ಮತ್ತು ಇದರಿಂದ ಎ ಗೆ ಹೆಚ್ಚಿನ ಲಾಭ,ಕೇವಲ 1 ವರ್ಷ ಶಿಕ್ಷೆ ಇದ್ದು, ಬಿ ಗೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಎ ನಿರಾಕರಿಸಲು ನಿರ್ಧರಿಸಿದಲ್ಲಿ, ಬಿ ಏನಾದರೂ ಸಹಕರಿಸಲು ಮುಂದಾದರೆ ಎ ಗೆ ಹೆಚ್ಚಿನ ನಷ್ಟ (10 ವರ್ಷ) ಮತ್ತು ಬಿ ಒಂದು ವರ್ಷದಲ್ಲಿ ಮುಕ್ತನಾಗುವ ಸಾಧ್ಯತೆ ಇದೆ (ಆಯ್ಕೆ 3). ಬಿ ಕೂಡ ನಿರಾಕರಿಸಬಹುದು, ಆಗ ಇಬ್ಬರಿಗೂ (ಆಯ್ಕೆ 4) ಒಂದು ವರ್ಷದ ಶಿಕ್ಷೆಯೇನೋ ಸಿಗುತ್ತದೆ ಆದರೆ ಬಿ ಖಂಡಿತ ಹಾಗೆಯೇ ಮಾಡುತ್ತಾನೆಂಬ ಖಾತ್ರಿ ಇಲ್ಲವಾಗಿ, ಎಲ್ಲಿ ಆಯ್ಕೆ-2ರಿಂದ ಆಯ್ಕೆ-3ಕ್ಕೆ ತಿರುಗಬಹುದೋ ಎಂಬ ಆತಂಕದಿಂದ ಆತ ಆಯ್ಕೆ-1ಕ್ಕೆ ಮನಸ್ಸು ಮಾಡುತ್ತಾನೆ. ಅದೇ ರೀತಿ ಬಿ ವತಿಯಿಂದ ಯೋಚಿಸಿದಾಗಲೂ ತಾನು ನಿರಾಕರಿಸುವುದರಿಂದ ಎಲ್ಲಿ ಆಯ್ಕೆ-4 ರ ಬದಲಾಗಿ ತನ್ನ ಆಯ್ಕೆ-2ಕ್ಕೆ ತಿರುಗುತ್ತದೋ ಎಂಬ ಹೆದರಿಕೆಯಿಂದ  ಆತನೂ ಆಯ್ಕೆ-1ಕ್ಕೆ ಮುಂದಾಗುತ್ತಾನೆ.

ಇದರಲ್ಲಿ ಆಯ್ಕೆ-4 ಎಲ್ಲರ ಹಿತದೃಷ್ಟಿಯಿಂದಲೂ ಸಮಂಜಸವಾಗಿದ್ದರೂ ಸಹ ಅದು ಕ್ಷಣಿಕ ಮತ್ತು ಅಸ್ಥಾಯಿ, ಏಕೆಂದರೆ ಇನ್ನೊಬ್ಬ ತನ್ನ ನಿರ್ಧಾರ ಬದಲಾಯಿಸಿದಲ್ಲಿ ಮೊದಲನೆಯವನಿಗೆ ಆಗಬಹುದಾದ ಲಾಭಕ್ಕಿಂತ ಹೆಚ್ಚು ನಷ್ಟವಾಗುವ ಸಾಧ್ಯತೆಯೇ ಇದೆ. ಆದ್ದರಿಂದ ಆಯ್ಕೆ-1 ಮಾತ್ರ ಸ್ಥಾಯೀ ಆಗುತ್ತದೆ. ಈ ಆಯ್ಕೆಯನ್ನು “ನ್ಯಾಷ್ ಇಕ್ವಿಲಿಬ್ರಿಯಂ” ಎನ್ನುತ್ತಾರೆ. ಇದನ್ನು ಗಣಿತಶಾಸ್ತ್ರದಂತೆ ಸಿದ್ಧಪಡಿಸಿದ ಖ್ಯಾತಿ ನೋಬೆಲ್ ಪ್ರಶಸ್ತಿ ವಿಜೇತ ಜಾನ್ ನ್ಯಾಷ್ ಅವರಿಗೆ ಸಲ್ಲುತ್ತದೆ. ಇವರ ತರ್ಕದ ಪ್ರಕಾರ ಇಬ್ಬರು ಅಥವಾ ಹೆಚ್ಚಿನ ಆಟಗಾರರಿರುವಂತಹ ಆಟದಲ್ಲಿ, ಮಿಕ್ಕವರು ತಮ್ಮ ಆಯ್ಕೆ ಬದಲಾಯಿಸದೇ ಇದ್ದಲ್ಲಿ, ಯಾವ ಆಟಗಾರನೂ ತನ್ನ ಸ್ವಂತ ಆಯ್ಕೆಯ ಬದಲಾವಣೆಯಿಂದ ಲಾಭ ಪಡೆದುಕೊಳ್ಳಲಾಗದು. ಈ ತರ್ಕ ಕೇವಲ ಕ್ರೀಡಾ ಜಗತ್ತಿನಲ್ಲಷ್ಟೇ ಅಲ್ಲ, ವ್ಯಾಪಾರ-ವಾಣಿಜ್ಯ-ಯುದ್ಧ ಕ್ಷೇತ್ರದಲ್ಲೂ ರಣನೀತಿಯಾಗಿ (ಸ್ಟ್ರ್ಯಾಟೆಜಿ) ಬಳಕೆಯಾಗುವುದನ್ನು ಕಾಣಬಹುದು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...