Homeಚಳವಳಿಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ.

- Advertisement -
- Advertisement -

ನಿನ್ನೆ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಸೀತಾರಾಂ ಯಚೂರಿ ಒಳಗೊಂಡಂತೆ ಅನೇಕ ಮುಂದಾಳುಗಳು ಸಿಕ್ಕಿದ್ದರು. ಎಲ್ಲರ ಮಾತಿನ ಸಾರವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ: “ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ. ಹರಿಯಾಣಾದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರಾಕ್ಟರ್ ಹೊರಟು ಬರಬೇಕೆಂದು ಖಾಪ್ ಪಂಚಾಯಿತಿಗಳೇ ಘೋಷಿಸಿಯಾಗಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹರಾಷ್ಟ್ರ ಎಲ್ಲಾ ಕಡೆಯಿಂದ ಜನರು ಬಂದು ಸೇರುವುದು ಈಗಾಗಲೇ ಪ್ರಾರಂಭವಾಗಿದೆ. ಈ ಜನಸಾಗರವನ್ನು [ಗುಂಡು ಹಾರಿಸದೆ] ತಡಿಯುವುದು ಸೈನ್ಯದಿಂದಲೂ ಸಾಧ್ಯವಿಲ್ಲ. ರೈತರು ಶಪಥ ಗೈದಿದ್ದಾರೆ. ಸಾಯುತ್ತೇವೆ – ಆದರೆ ಹಿಂಸೆಗೆ ಇಳಿಯುವುದಿಲ್ಲ. ಈ ಅಹಿಂಸಾತ್ಮಕ ಜನಸಾಗರವನ್ನು ಎದುರಿಸುವ ನೈತಿಕ ಶಕ್ತಿ ಸರ್ಕಾರಕ್ಕಿಲ್ಲ. ಅದರ ಯಾವ ಚಾಣಕ್ಯ ನೀತಿಗಳೂ ಫಲಿಸುತ್ತಿಲ್ಲ. ಅದರೆ ಅದಾನಿ ಅಂಬಾನಿಗಳ ಸೇವೆ ಬಿಡಲು ಸಿದ್ಧವಿಲ್ಲ. ಪರಿಣಾಮ ಹಸ್ತಿನಾಪುರದಲ್ಲಿ ಇತಿಹಾಸ ಮರುಕಳಿಸಲಿದೆ. ಜನವರಿ 26ರಂದು ದೆಹಲಿಯಲ್ಲಿ ಶಾಂತಿಯುತ ಕುರುಕ್ಷೇತ್ರ ನಡೆಯಲಿದೆ. ಫಲಿತಾಂಶವನ್ನು ಸಧ್ಯಕ್ಕೆ ವರ್ತಮಾನಕ್ಕೆ ಬಿಡೋಣ. ಈಗ ನಮ್ಮ ಮುಂದಿನ ಚರ್ಚೆ ಅಂದಿಗಾಗಿ ಇಂದು ಮತ್ತು ಇಲ್ಲಿ ನಾವೇನು ಮಾಡೋಣ?

ದೆಹಲಿ ಹತ್ತಿರವಿದ್ದಿದ್ದರೆ, ಮೊದಲಿನಂತೆ ಸರಾಗವಾಗಿ ರೈಲು ಹತ್ತಿ ಟಿಕೆಟ್ ಇಲ್ಲದೆ ದೆಹಲಿಗೆ ಪಯಣಿಸುವಂತಿದ್ದರೆ, ನಾವೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊರಡಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಸಾಧ್ಯವಿರುವವರು ಅದಕ್ಕೂ ಹೊರಟರೆ ಒಳ್ಳೆಯದೆ. ಆದರೆ ನಾವೆಲ್ಲರೂ ಸೇರಿ ಅದೇ ದಿನ ಕರ್ನಾಟಕದಲ್ಲಿ ದುಡಿವವರ ದನಿ ಮೊಳಗುವಂತೆ ಮಾಡಲೇಬೇಕು. ಇದಕ್ಕಾಗಿಯೇ ಜನವರಿ 26ರಂದು ಬೆಂಗಳೂರಿನಲ್ಲಿ ರೈತ ಮತ್ತು ಸಮಸ್ತ ದುಡಿವ ಜನರ ಗಣರಾಜ್ಯೋತ್ಸವ ಪೆರೇಡಿಗೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಬೇಕು. ವೈಯಕ್ತಿಕವಾಗಿ ನಾನೇನು ಮಾಡಲಿದ್ದೇನೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕು.

ಕೆಲವು ಸಲಹೆಗಳು:

1. ಜನವರಿ 25-26ನ್ನು ಈ ದೇಶದ ದುಡಿವ ಜನರಿಗೆಂದು ತೆಗೆದಿಡಲು ಸಾಧ್ಯವೆ? ನಿಮ್ಮ ಬಳಿ ಇರುವ ವಾಹನದ ಜೊತೆ, [ಕಾರು, ಟ್ರಾಕ್ಟರ್, ಜೀಪು, ಮೋಟಾರ್ ಬೈಕ್, ಸೈಕಲ್ ಯಾವುದಾದರೂ ಸರಿ] ಸಾಧ್ಯವಿರುವ ಮಿತ್ರರನ್ನು, ಕುಟುಂಬದ ಸದಸ್ಯರನ್ನು, ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದು ಸೇರಲು ಸಿದ್ಧತೆ ಮಾಡಿಕೊಳ್ಳಬಹುದೆ?

2. ನಿಮ್ಮ ಊರಿನಲ್ಲಿ ಈಗಿನಿಂದಲೇ ನಿಮ್ಮದೇ ರೀತಿಯಲ್ಲಿ ಈ ಸಂದೇಶ ಎಲ್ಲರಿಗೂ ತಲುಪಿಸುವ ಕೆಲಸವನ್ನು ತಾವು ಮಾಡಬಹುದೆ? ನಾಳೆಯಿಂದ ಬರಲು ಪ್ರಾರಂಭವಾಗುವ ಪೋಸ್ಟರುಗಳನ್ನು ಶೇರ್ ಮಾಡಬಹುದೆ? ಕರಪತ್ರಗಳನ್ನು ಮಿತ್ರರಿಗೆ, ನೆರೆಹೊರೆಯವರಿಗೆ, ಏರಿಯಾಗಳಿಗೆ, ಸಾಧ್ಯವಾದರೆ ಹಳ್ಳಿಗಳಿಗೆ ತಲುಪಿಸಲು ಪ್ರಯತ್ನಿಸಬಹುದೆ?

3. ನಿಮ್ಮ ಸುತ್ತಮುತ್ತ ಇರುವ ಸಂಘಟನೆಗಳ ಸಭೆ ಕರೆದು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಚರ್ಚಿಸಬಹುದೆ? ನಿಮ್ಮ ಪ್ರದೇಶದಲ್ಲಿ ನಿಮ್ಮದೇ ರೀತಿಯಲ್ಲಿ ಪ್ರಚಾರ ಜಾಥ ಹಮ್ಮಿಕೊಳ್ಳಬಹುದೆ?

4. ಬೆಂಗಳೂರಿನಲ್ಲಿ ಸುಮಾರು ಸಿದ್ಧತೆಯ ಕೆಲಸಗಳಿದ್ದು ವಾಲಂಟೀರ್ ಆಗಿ ಕೆಲಸ ಮಾಡಲು ಕೆಲವು ದಿನ ಮೊದಲು ಬೆಂಗಳೂರಿಗೆ ಬರಬಹುದೆ? ನಿಮ್ಮ ಮಿತ್ರರನ್ನು ಅಥವ ಸಂಘಟನೆಯ ಕಾರ್ಯಕರ್ತರನ್ನೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಬಹುದೆ?

4. ದೂರದಿಂದ ಬರುತ್ತಿರುವ ಟ್ರಾಕ್ಟರುಗಳಿಗೆ ಡೀಸಲ್ ಹಾಕಿಸಲು, ಊಟದ ವ್ಯವಸ್ಥೆ ಮಾಡಲು, ಪ್ರಚಾರ ಸಾಮಗ್ರಿಯನ್ನು ಸಿದ್ಧಗೊಳಿಸಲು ಹಣ ಸಂಗ್ರಹ ಮಾಡಿಕೊಡಬಹುದೆ?

5. ಅಂದಿನ ಮೆರವಣಿಗೆಯನ್ನು ದೇಶಪ್ರೇಮದ ಸಂಕೇತವಾಗಿಸಲು ಒಂದಿಷ್ಟು ರಾಷ್ಟ್ರ ಧ್ವಜಗಳನ್ನು ಮಾಡಿಸಿ ಅಥವ ಕೊಂಡು 26ಕ್ಕೆ ತರಬಹುದೆ?

6. ನೀವು ಈ ಹೋರಾಟವನ್ನು ಬೆಂಬಲಿಸಿ ಮತ್ತು 26ಕ್ಕೆ ಬೆಂಗಳೂರು ಬರುವಂತೆ ಆಹ್ವಾನಿಸಿ, ನಿಮ್ಮದೇ ರೀತಿಯಲ್ಲಿ ಪುಟ್ಟ ವಿಡಿಯೋ ಅಥವ ಬರವಣಿಗೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದೆ?
ನಿಮಗೆ ಸಂಪರ್ಕದಲ್ಲಿರುವ ಪರ್ಯಾಯ ಮೀಡಿಯಾ ಅಥವ ಮುಖ್ಯವಾಹಿನಿ ಮೀಡಿಯಾಗಳಲ್ಲಿ ಇರುವ ಜನಪರ ಗೆಳೆಯ, ಗೆಳತಿಯರಿಗೆ ಕರೆ ಮಾಡಿ ಇದನ್ನು ತಮ್ಮದೇ ರೀತಿಯಲ್ಲಿ ಸುದ್ದಿ ಮಾಡುವಂತೆ ಕೇಳಿಕೊಳ್ಳಬಹುದೆ?

7. ಜನವರಿ 16ರಂದು ಇದರ ಕರ್ಟನ್ ರೈಸರ್ ಕಾರ್ಯಕ್ರಮ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೆ ದೆಹಲಿ ಹೋರಾಟಕ್ಕೆ ಮುಂದಾಳತ್ವ ನೀಡುತ್ತಿರುವ “ಸಂಯುಕ್ತ ಕಿಸಾನ್ ಮೋರ್ಚಾದ” ತಂಡ ಆಗಮಿಸಲಿದೆ. ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಸಮಾಜದಲ್ಲಿ ಹರಿಬಿಡಲಾಗಿರುವ ಸುಳ್ಳು ಪ್ರಚಾರವನ್ನು ಮುಕ್ತ ಸಂವಾದದಲ್ಲಿ ಬಯಲುಗೊಳಿಸಲಿದ್ದಾರೆ. ಇದರಲ್ಲಿ ತಾವೂ ಭಾಗವಹಿಸಬಹುದೆ?

8. ನೇರವಾಗಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿಸಲು ಹೋರಾಟಗಾರರ ತಂಡವೊಂದು 14ರಂದು ದೆಹಲಿಗೆ ಹೊರಟಿದ್ದು ಅದರ ಜೊತೆ ತಾವೂ ದೆಹಲಿಗೆ ಹೊರಡಬಹುದೆ?

ಆಯ್ಕೆಯ ಸ್ವಾತಂತ್ರ್ಯ ತಮ್ಮದು, ಮೇಲೆ ನಾನು ಸೂಚಿಸಿರುವ ವಿಧಾನವನ್ನೂ ಬಿಟ್ಟು ಬೇರೆಯದೇ ರೀತಿಯಲ್ಲಿ ನೀವು ಕೈಗೂಡಿಸಬಹುದು. ಕೈಗೂಡಿಸುತ್ತೀರಿ ಎಂಬ ಪೂರ್ಣ ವಿಶ್ವಾಸವೂ ಇದೆ. ಇದರ ಮಹತ್ವವನ್ನು ಒತ್ತಿ ಹೇಳಲು ಮತ್ತು ಸಾಧ್ಯತೆಗಳನ್ನು
ತೆರೆದಿಡಲು ಮಾತ್ರ ಇದನ್ನು ಬರೆದಿದ್ದೇನೆ. ಜನವರಿ 26 ರಂದು ತಪ್ಪದೇ ಬೆಂಗಳೂರಿನಲ್ಲಿ ಭೇಟಿಯಾಗೋಣ. ಒಂದು ವೇಳೆ ನೀವು ದೆಹಲಿ ಕುರುಕ್ಷೇತ್ರಕ್ಕೇ ಹೋಗುವುದಾದರೆ ಬಂದ ನಂತರ ಭೇಟಿಯಾಗೋಣ.

  • ನೂರ್ ಶ್ರೀಧರ್

ಇದರಲ್ಲಿ ಭಾಗಿಯಾಗುವವರು ಅಥವಾ ಹೆಚ್ಚಿನ ಮಾಹಿತಿ ಬೇಕಾದವರು ಸರೋವರ್‍ ಬೆಂಕಿಕೆರೆ (9686842196) ರವರನ್ನು ಸಂಪರ್ಕಿಸಬಹುದು.


ಇದನ್ನೂ ಓದಿ: ಸದ್ಯಕ್ಕೆ ಕೃಷಿ ಕಾಯ್ದೆ ಜಾರಿ ತಡೆಹಿಡಿಯಿರಿ, ಇಲ್ಲದಿದ್ದರೆ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ರೀತಿಯ ಕಾರ್ಯಕ್ರಮಗಳಿಂದ ಭಾರತಕ್ಕೆ ಈಗ ಅನಿವಾರ್ಯವಾಗಿರುವ ಪರ್ಯಾಯ ನಾಯಕತ್ವ ರೂಪುಗೊಳ್ಳಲಿ , ಡ್ಜ್ರುವೀಕರಣ ಗೊಳ್ಳುತ್ತಿರುವ ಜನಾಂಗಗಳ ನಡುವೆ ಸಾಮರಸ್ಯ ಮೂಡಿಸಲು ಹಾಗು ವಾಸ್ತವತೆಯನ್ನು ಸರಿಯಾಗಿ ಪ್ರತಿಬಿಂಬಿಸದ ಮಾಧ್ಯಮಗಳ ನಡವಳಿಕೆಯನ್ನು ಚರ್ಚಿಸಲು ಒಂದು ವೇದಿಕೆಯಾಗಲಿ.
    MSP ರೈತರ ಹಕ್ಕಾಗುವಂತೆ ,ನೈಜ ಸುದ್ದಿ ನಾಗರಿಕರ ಕನಿಷ್ಟ ಹಕ್ಕು ಆಗುವಂತೆ ನಾವು ಸಮಾಜವನ್ನು ರೂಪಿಸಬಹುದೇ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...