Homeಚಳವಳಿಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ.

- Advertisement -
- Advertisement -

ನಿನ್ನೆ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಸೀತಾರಾಂ ಯಚೂರಿ ಒಳಗೊಂಡಂತೆ ಅನೇಕ ಮುಂದಾಳುಗಳು ಸಿಕ್ಕಿದ್ದರು. ಎಲ್ಲರ ಮಾತಿನ ಸಾರವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ: “ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ. ಹರಿಯಾಣಾದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರಾಕ್ಟರ್ ಹೊರಟು ಬರಬೇಕೆಂದು ಖಾಪ್ ಪಂಚಾಯಿತಿಗಳೇ ಘೋಷಿಸಿಯಾಗಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹರಾಷ್ಟ್ರ ಎಲ್ಲಾ ಕಡೆಯಿಂದ ಜನರು ಬಂದು ಸೇರುವುದು ಈಗಾಗಲೇ ಪ್ರಾರಂಭವಾಗಿದೆ. ಈ ಜನಸಾಗರವನ್ನು [ಗುಂಡು ಹಾರಿಸದೆ] ತಡಿಯುವುದು ಸೈನ್ಯದಿಂದಲೂ ಸಾಧ್ಯವಿಲ್ಲ. ರೈತರು ಶಪಥ ಗೈದಿದ್ದಾರೆ. ಸಾಯುತ್ತೇವೆ – ಆದರೆ ಹಿಂಸೆಗೆ ಇಳಿಯುವುದಿಲ್ಲ. ಈ ಅಹಿಂಸಾತ್ಮಕ ಜನಸಾಗರವನ್ನು ಎದುರಿಸುವ ನೈತಿಕ ಶಕ್ತಿ ಸರ್ಕಾರಕ್ಕಿಲ್ಲ. ಅದರ ಯಾವ ಚಾಣಕ್ಯ ನೀತಿಗಳೂ ಫಲಿಸುತ್ತಿಲ್ಲ. ಅದರೆ ಅದಾನಿ ಅಂಬಾನಿಗಳ ಸೇವೆ ಬಿಡಲು ಸಿದ್ಧವಿಲ್ಲ. ಪರಿಣಾಮ ಹಸ್ತಿನಾಪುರದಲ್ಲಿ ಇತಿಹಾಸ ಮರುಕಳಿಸಲಿದೆ. ಜನವರಿ 26ರಂದು ದೆಹಲಿಯಲ್ಲಿ ಶಾಂತಿಯುತ ಕುರುಕ್ಷೇತ್ರ ನಡೆಯಲಿದೆ. ಫಲಿತಾಂಶವನ್ನು ಸಧ್ಯಕ್ಕೆ ವರ್ತಮಾನಕ್ಕೆ ಬಿಡೋಣ. ಈಗ ನಮ್ಮ ಮುಂದಿನ ಚರ್ಚೆ ಅಂದಿಗಾಗಿ ಇಂದು ಮತ್ತು ಇಲ್ಲಿ ನಾವೇನು ಮಾಡೋಣ?

ದೆಹಲಿ ಹತ್ತಿರವಿದ್ದಿದ್ದರೆ, ಮೊದಲಿನಂತೆ ಸರಾಗವಾಗಿ ರೈಲು ಹತ್ತಿ ಟಿಕೆಟ್ ಇಲ್ಲದೆ ದೆಹಲಿಗೆ ಪಯಣಿಸುವಂತಿದ್ದರೆ, ನಾವೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊರಡಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಸಾಧ್ಯವಿರುವವರು ಅದಕ್ಕೂ ಹೊರಟರೆ ಒಳ್ಳೆಯದೆ. ಆದರೆ ನಾವೆಲ್ಲರೂ ಸೇರಿ ಅದೇ ದಿನ ಕರ್ನಾಟಕದಲ್ಲಿ ದುಡಿವವರ ದನಿ ಮೊಳಗುವಂತೆ ಮಾಡಲೇಬೇಕು. ಇದಕ್ಕಾಗಿಯೇ ಜನವರಿ 26ರಂದು ಬೆಂಗಳೂರಿನಲ್ಲಿ ರೈತ ಮತ್ತು ಸಮಸ್ತ ದುಡಿವ ಜನರ ಗಣರಾಜ್ಯೋತ್ಸವ ಪೆರೇಡಿಗೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಬೇಕು. ವೈಯಕ್ತಿಕವಾಗಿ ನಾನೇನು ಮಾಡಲಿದ್ದೇನೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕು.

ಕೆಲವು ಸಲಹೆಗಳು:

1. ಜನವರಿ 25-26ನ್ನು ಈ ದೇಶದ ದುಡಿವ ಜನರಿಗೆಂದು ತೆಗೆದಿಡಲು ಸಾಧ್ಯವೆ? ನಿಮ್ಮ ಬಳಿ ಇರುವ ವಾಹನದ ಜೊತೆ, [ಕಾರು, ಟ್ರಾಕ್ಟರ್, ಜೀಪು, ಮೋಟಾರ್ ಬೈಕ್, ಸೈಕಲ್ ಯಾವುದಾದರೂ ಸರಿ] ಸಾಧ್ಯವಿರುವ ಮಿತ್ರರನ್ನು, ಕುಟುಂಬದ ಸದಸ್ಯರನ್ನು, ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದು ಸೇರಲು ಸಿದ್ಧತೆ ಮಾಡಿಕೊಳ್ಳಬಹುದೆ?

2. ನಿಮ್ಮ ಊರಿನಲ್ಲಿ ಈಗಿನಿಂದಲೇ ನಿಮ್ಮದೇ ರೀತಿಯಲ್ಲಿ ಈ ಸಂದೇಶ ಎಲ್ಲರಿಗೂ ತಲುಪಿಸುವ ಕೆಲಸವನ್ನು ತಾವು ಮಾಡಬಹುದೆ? ನಾಳೆಯಿಂದ ಬರಲು ಪ್ರಾರಂಭವಾಗುವ ಪೋಸ್ಟರುಗಳನ್ನು ಶೇರ್ ಮಾಡಬಹುದೆ? ಕರಪತ್ರಗಳನ್ನು ಮಿತ್ರರಿಗೆ, ನೆರೆಹೊರೆಯವರಿಗೆ, ಏರಿಯಾಗಳಿಗೆ, ಸಾಧ್ಯವಾದರೆ ಹಳ್ಳಿಗಳಿಗೆ ತಲುಪಿಸಲು ಪ್ರಯತ್ನಿಸಬಹುದೆ?

3. ನಿಮ್ಮ ಸುತ್ತಮುತ್ತ ಇರುವ ಸಂಘಟನೆಗಳ ಸಭೆ ಕರೆದು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಚರ್ಚಿಸಬಹುದೆ? ನಿಮ್ಮ ಪ್ರದೇಶದಲ್ಲಿ ನಿಮ್ಮದೇ ರೀತಿಯಲ್ಲಿ ಪ್ರಚಾರ ಜಾಥ ಹಮ್ಮಿಕೊಳ್ಳಬಹುದೆ?

4. ಬೆಂಗಳೂರಿನಲ್ಲಿ ಸುಮಾರು ಸಿದ್ಧತೆಯ ಕೆಲಸಗಳಿದ್ದು ವಾಲಂಟೀರ್ ಆಗಿ ಕೆಲಸ ಮಾಡಲು ಕೆಲವು ದಿನ ಮೊದಲು ಬೆಂಗಳೂರಿಗೆ ಬರಬಹುದೆ? ನಿಮ್ಮ ಮಿತ್ರರನ್ನು ಅಥವ ಸಂಘಟನೆಯ ಕಾರ್ಯಕರ್ತರನ್ನೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಬಹುದೆ?

4. ದೂರದಿಂದ ಬರುತ್ತಿರುವ ಟ್ರಾಕ್ಟರುಗಳಿಗೆ ಡೀಸಲ್ ಹಾಕಿಸಲು, ಊಟದ ವ್ಯವಸ್ಥೆ ಮಾಡಲು, ಪ್ರಚಾರ ಸಾಮಗ್ರಿಯನ್ನು ಸಿದ್ಧಗೊಳಿಸಲು ಹಣ ಸಂಗ್ರಹ ಮಾಡಿಕೊಡಬಹುದೆ?

5. ಅಂದಿನ ಮೆರವಣಿಗೆಯನ್ನು ದೇಶಪ್ರೇಮದ ಸಂಕೇತವಾಗಿಸಲು ಒಂದಿಷ್ಟು ರಾಷ್ಟ್ರ ಧ್ವಜಗಳನ್ನು ಮಾಡಿಸಿ ಅಥವ ಕೊಂಡು 26ಕ್ಕೆ ತರಬಹುದೆ?

6. ನೀವು ಈ ಹೋರಾಟವನ್ನು ಬೆಂಬಲಿಸಿ ಮತ್ತು 26ಕ್ಕೆ ಬೆಂಗಳೂರು ಬರುವಂತೆ ಆಹ್ವಾನಿಸಿ, ನಿಮ್ಮದೇ ರೀತಿಯಲ್ಲಿ ಪುಟ್ಟ ವಿಡಿಯೋ ಅಥವ ಬರವಣಿಗೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದೆ?
ನಿಮಗೆ ಸಂಪರ್ಕದಲ್ಲಿರುವ ಪರ್ಯಾಯ ಮೀಡಿಯಾ ಅಥವ ಮುಖ್ಯವಾಹಿನಿ ಮೀಡಿಯಾಗಳಲ್ಲಿ ಇರುವ ಜನಪರ ಗೆಳೆಯ, ಗೆಳತಿಯರಿಗೆ ಕರೆ ಮಾಡಿ ಇದನ್ನು ತಮ್ಮದೇ ರೀತಿಯಲ್ಲಿ ಸುದ್ದಿ ಮಾಡುವಂತೆ ಕೇಳಿಕೊಳ್ಳಬಹುದೆ?

7. ಜನವರಿ 16ರಂದು ಇದರ ಕರ್ಟನ್ ರೈಸರ್ ಕಾರ್ಯಕ್ರಮ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೆ ದೆಹಲಿ ಹೋರಾಟಕ್ಕೆ ಮುಂದಾಳತ್ವ ನೀಡುತ್ತಿರುವ “ಸಂಯುಕ್ತ ಕಿಸಾನ್ ಮೋರ್ಚಾದ” ತಂಡ ಆಗಮಿಸಲಿದೆ. ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಸಮಾಜದಲ್ಲಿ ಹರಿಬಿಡಲಾಗಿರುವ ಸುಳ್ಳು ಪ್ರಚಾರವನ್ನು ಮುಕ್ತ ಸಂವಾದದಲ್ಲಿ ಬಯಲುಗೊಳಿಸಲಿದ್ದಾರೆ. ಇದರಲ್ಲಿ ತಾವೂ ಭಾಗವಹಿಸಬಹುದೆ?

8. ನೇರವಾಗಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿಸಲು ಹೋರಾಟಗಾರರ ತಂಡವೊಂದು 14ರಂದು ದೆಹಲಿಗೆ ಹೊರಟಿದ್ದು ಅದರ ಜೊತೆ ತಾವೂ ದೆಹಲಿಗೆ ಹೊರಡಬಹುದೆ?

ಆಯ್ಕೆಯ ಸ್ವಾತಂತ್ರ್ಯ ತಮ್ಮದು, ಮೇಲೆ ನಾನು ಸೂಚಿಸಿರುವ ವಿಧಾನವನ್ನೂ ಬಿಟ್ಟು ಬೇರೆಯದೇ ರೀತಿಯಲ್ಲಿ ನೀವು ಕೈಗೂಡಿಸಬಹುದು. ಕೈಗೂಡಿಸುತ್ತೀರಿ ಎಂಬ ಪೂರ್ಣ ವಿಶ್ವಾಸವೂ ಇದೆ. ಇದರ ಮಹತ್ವವನ್ನು ಒತ್ತಿ ಹೇಳಲು ಮತ್ತು ಸಾಧ್ಯತೆಗಳನ್ನು
ತೆರೆದಿಡಲು ಮಾತ್ರ ಇದನ್ನು ಬರೆದಿದ್ದೇನೆ. ಜನವರಿ 26 ರಂದು ತಪ್ಪದೇ ಬೆಂಗಳೂರಿನಲ್ಲಿ ಭೇಟಿಯಾಗೋಣ. ಒಂದು ವೇಳೆ ನೀವು ದೆಹಲಿ ಕುರುಕ್ಷೇತ್ರಕ್ಕೇ ಹೋಗುವುದಾದರೆ ಬಂದ ನಂತರ ಭೇಟಿಯಾಗೋಣ.

  • ನೂರ್ ಶ್ರೀಧರ್

ಇದರಲ್ಲಿ ಭಾಗಿಯಾಗುವವರು ಅಥವಾ ಹೆಚ್ಚಿನ ಮಾಹಿತಿ ಬೇಕಾದವರು ಸರೋವರ್‍ ಬೆಂಕಿಕೆರೆ (9686842196) ರವರನ್ನು ಸಂಪರ್ಕಿಸಬಹುದು.


ಇದನ್ನೂ ಓದಿ: ಸದ್ಯಕ್ಕೆ ಕೃಷಿ ಕಾಯ್ದೆ ಜಾರಿ ತಡೆಹಿಡಿಯಿರಿ, ಇಲ್ಲದಿದ್ದರೆ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ರೀತಿಯ ಕಾರ್ಯಕ್ರಮಗಳಿಂದ ಭಾರತಕ್ಕೆ ಈಗ ಅನಿವಾರ್ಯವಾಗಿರುವ ಪರ್ಯಾಯ ನಾಯಕತ್ವ ರೂಪುಗೊಳ್ಳಲಿ , ಡ್ಜ್ರುವೀಕರಣ ಗೊಳ್ಳುತ್ತಿರುವ ಜನಾಂಗಗಳ ನಡುವೆ ಸಾಮರಸ್ಯ ಮೂಡಿಸಲು ಹಾಗು ವಾಸ್ತವತೆಯನ್ನು ಸರಿಯಾಗಿ ಪ್ರತಿಬಿಂಬಿಸದ ಮಾಧ್ಯಮಗಳ ನಡವಳಿಕೆಯನ್ನು ಚರ್ಚಿಸಲು ಒಂದು ವೇದಿಕೆಯಾಗಲಿ.
    MSP ರೈತರ ಹಕ್ಕಾಗುವಂತೆ ,ನೈಜ ಸುದ್ದಿ ನಾಗರಿಕರ ಕನಿಷ್ಟ ಹಕ್ಕು ಆಗುವಂತೆ ನಾವು ಸಮಾಜವನ್ನು ರೂಪಿಸಬಹುದೇ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...