Homeಮುಖಪುಟಎನ್.ಹೆಚ್ 10 ಸಿನಿಮಾದ ಕಥೆ: ಭಾರತ ಪ್ರಕಾಶಿಸುತ್ತಿದೆ - ಹಳ್ಳಿಗಳು ಕಗ್ಗತ್ತಲೆಯಲ್ಲಿವೆ

ಎನ್.ಹೆಚ್ 10 ಸಿನಿಮಾದ ಕಥೆ: ಭಾರತ ಪ್ರಕಾಶಿಸುತ್ತಿದೆ – ಹಳ್ಳಿಗಳು ಕಗ್ಗತ್ತಲೆಯಲ್ಲಿವೆ

- Advertisement -
- Advertisement -

“ಆರ್ಟಿಕಲ್ 15” ಸಿನೆಮಾ ಆರಂಭವಾಗುವುದೇ 8 ಲೈನ್ ಹೆದ್ದಾರಿಯನ್ನು ತೋರಿಸುವುದರ ಮೂಲಕ. ನಂತರ ಇದು ಒಳಹಾದಿ ಮೂಲಕ ಹಳ್ಳಿಗಳಿಗೆ ತೆರಳುತ್ತದೆ. ಹಳ್ಳಿಗಳಲ್ಲಿನ ಜಾತೀಯತೆ ಸ್ವರೂಪ ಹೇಗಿದೆ ಎಂಬುದನ್ನು ಬಿಚ್ಚಿಡುತ್ತಾ ಹೋಗುತ್ತದೆ. ನಿರ್ದೇಶಕ ಸಿನ್ಹಾ ಆರಂಭದಲ್ಲಿಯೇ ತೋರಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಸಾಂಕೇತಿಕ. ಹಿಂದೆ ಈ ರಸ್ತೆ ಬದಿಗಳಲ್ಲಿ “ಭಾರತ ಪ್ರಕಾಶಿಸುತ್ತಿದೆ” ಎಂಬ ಬೃಹತ್ ಫಲಕ ಕಾಣುತ್ತಿತ್ತು. ಇದರ ಅಣಕವನ್ನು ಈ ಸಿನೆಮಾ ಮಾಡುತ್ತದೆ. ಇದು ಬಹು ಪರಿಣಾಮಕಾರಿ.

ಇಂಥದ್ದೇ ಅಣಕವನ್ನು ಕೆಲವರ್ಷಗಳ ಹಿಂದೆ ತೆರೆಕಂಡ ಎನ್.ಹೆಚ್. 10 ಕೂಡ ಮಾಡಿತ್ತು. ವಿಶಾಲವಾದ, ಜಗಮಗಿಸುವ ನುಣ್ಣನೆಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಇರುವ ಹಳ್ಳಿಗಳಲ್ಲಿ ಜಾತೀಯತೆಯ ಭೀಕರ ಕಬಂಧಬಾಹು ಹೇಗಿದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

ಈ ನಿಟ್ಟಿನಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಅಂತರ್ಜಾತಿಯ ಪ್ರೇಮಿಗಳ ಆತಂಕ, ನಗರಗಳಲ್ಲಿನ ದುಡಿಯುವ ಮಹಳೆಯರ ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’ ಆಗಿರುವ ಹೆದ್ದಾರಿಗಳು, ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಹಣೆಪಟ್ಟಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಮಗ್ಗುಲುಗಳಲ್ಲಿ ಇರುವ ಹಳ್ಳಿಗಳಲ್ಲಿನ ಜಾತೀಯತೆ ಕಾರಣದಿಂದ ಕೊಳೆತ ಮನಸುಗಳು, ಫ್ಯೂಡಲ್ ಸಿಸ್ಟಂ ನೆರಳಿಗೆ ನೆರಳಾಗಿರುವ ಪೊಲೀಸ್ ಮತ್ತು ಇವೆಲ್ಲದರ ಜೊತೆಗೆ ವಿದ್ಯಾವಂತ ಪುರುಷರ ನಿಸತ್ವ ‘ಇಗೋ’.

ಕಾರ್ಪೊರೇಟ್ ಕಂಪನಿಗಳಲ್ಲಿ ಸಮಯದ ಪರಿಮಿತಿ ಇಲ್ಲದೆ ದುಡಿಯುತ್ತಾ ಅಭದ್ರತೆ ಕಾರಣಕ್ಕೆ ಸದಾ ಆತಂಕದಲ್ಲಿ ನೆರಳಿನಲ್ಲಿರುವ ಮಹಿಳೆಯರ ಪ್ರತಿನಿಧಿಯಂತೆ ಈ ಚಿತ್ರದ ಮೀರಾ ಕಾಣುತ್ತಾಳೆ. ತಡರಾತ್ರಿಗಳಲ್ಲಿಯೂ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಇವರ ನೆಮ್ಮದಿ ಕಸಿದುಕೊಳ್ಳುತ್ತದೆ. ಆಗಬಹುದಾದ ಅನಾಹುತಗಳ ಅರಿವಿಲ್ಲದೆ ಮಹಾನಗರಗಳಲ್ಲಿ ತಡರಾತ್ರಿ ವಹಿವಾಟು ಜಾರಿಯಲ್ಲಿರಬೇಕು ಎಂದು ಹಂಬಲಿಸುವ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರವೊಂದರ ವಿವರ ಸಂಕ್ಷಿಪ್ತವಾಗಿದ್ದರೂ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.

ಎಗ್ಗಿಲ್ಲದೆ ಬೆಳೆದ, ಬೆಳೆಯುತ್ತಿರುವ ಮಹಾನಗರಗಳು, ಇದರ ಫಾಯಿದೆ ತೆಗೆದುಕೊಳ್ಳುತ್ತಿರುವ ಪುಂಡು-ಫೋಕರಿಗಳು, ಇವರನ್ನು ನಿಯಂತ್ರಿಸಲಾಗದ ಅಸಹಾಯಕರಾದ ಪೊಲೀಸರು, ಇಂಥ ಪೊಲೀಸರ ಪ್ರತಿನಿಧಿಯಂತೆ ಕಾಣುವ ಠಾಣಾಧಿಕಾರಿಯಿಂದ ಸ್ವಯಂರಕ್ಷಣೆಗಾಗಿ ಗನ್ ತೆಗೆದುಕೊಳ್ಳುವಂತೆ ಮೀರಾ ಮತ್ತು ನೈಲ್ ಭೂಪಾಲನ್ ದಂಪತಿಗೆ ಶಿಫಾರಸು.

ಮೀರಾ ಕೈಗೆ ಗನ್ ಬರುತ್ತದೆ. ರಕ್ಷಣೆ ಸಲುವಾಗಿ ತೆಗೆದುಕೊಳ್ಳುವ ಗನ್ ಇವರ ಅಭದ್ರತೆಗೂ ಕಾರಣವಾಗುತ್ತದೆ. ಈ ಮೂಲಕ ಎಲ್ಲೆಡೆ ಮೊಬೈಲ್, ಇಂಟರ್ನೆಟ್ ನೆಟ್ ವರ್ಕ್. ಅಲ್ಲಲ್ಲಿ ಪೊಲೀಸ್ ಠಾಣೆಗಳು ಇರುವ ನುಣ್ಣನೆ ಮೈ ಹೊದ್ದ ಹೆದ್ದಾರಿ ಬದಿಯ ಹಳ್ಳಿಗಳಲ್ಲಿ ಇಂದಿಗೂ ಜಾರಿಯಲ್ಲಿರುವ ಅಮಾನುಷ ‘ಮಾರ್ಯಾದಾ ಹತ್ಯೆ’ ಅನಾವರಣಗೊಳ್ಳುತ್ತದೆ.

ಪೊಳ್ಳು ಇಗೋ:

ಮಹಾನಗರಗಳ ವಿದ್ಯಾವಂತ ಯುವಕರಲ್ಲಿ ಸಂಗಾತಿಯನ್ನು ಮೆಚ್ಚಿಸುವ, ಹೀರೋಯಿಸಂ ತೋರಿಸುವ ತವಕ ಹೆಚ್ಚಿರುತ್ತದೆ. ಆದರೆ ಹೀಗೆ ಮಾಡಲು ಹೋಗುವ ಮುನ್ನ ಜೊತೆಗಿರುವ; ತನ್ನನ್ನೆ ನಂಬಿದ ಸಂಗಾತಿಯ ಭದ್ರತೆ ಜೊತೆಗೆ ತನ್ನ ಬಲಾಬಲ ಬಗ್ಗೆ ಯೋಚಿಸದೆ ದುಡುಕುವವವರ ಪ್ರತಿನಿಧಿಯಂತೆ ನೈಲ್ ಭೂಪಾಲನ್ ಕಾಣುತ್ತಾನೆ.

ಢಾಭಾ ಆವರಣದಲ್ಲಿ ಯುವ ಪ್ರೇಮಿಗಳಿಬ್ಬರನ್ನು ಥಳಿಸುತ್ತಿರುವ ಗ್ಯಾಂಗಿನ ಕೃತ್ಯವನ್ನು ಹಳ್ಳಿಗರು, ಪ್ರಯಾಣಿಕರು ಮೌನವಾಗಿ ನೋಡುತ್ತಿರುತ್ತಾರೆ. ಭೂಪಾಲನ್ ಇದನ್ನು ಪ್ರಶ್ನಿಸಿ ಏಟು ತಿನ್ನುತ್ತಾನೆ. ಆದರೆ ಅಲ್ಲೆ ಮರು ಏಟು ಹಾಕದೆ ಗ್ಯಾಂಗಿನ ಬೆನ್ನು ಹತ್ತುತ್ತಾನೆ. ಇದಕ್ಕೆ ಕಾರಣ  ಜೊತೆಗಿರುವ ಗನ್ ನೀಡಿದ ಧೈರ್ಯ. ಪತ್ನಿ ಪರಿಪರಿಯಾಗಿ ಬೇಡಿಕೊಂಡರೂ ಈತ ತನ್ನ ಇಗೋ ಬಿಡುವುದಿಲ್ಲ.

ಜೊತೆಗಿರುವ ಗನ್ ಅನ್ನು ಯುವಪ್ರೇಮಿಗಳು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಈತ ಬಳಸುತ್ತಾನೆಯೇ ? ಅದು ಇಲ್ಲ. ಗ್ಯಾಂಗಿನ ಕೃತ್ಯವನ್ನು ಅಸಹಾಯಕನಂತೆ ನೋಡುತ್ತಾನೆ. ಪಾರಾಗುವ ಯತ್ನದಲ್ಲಿ ತಾನೂ ಅವರಿಗೆ ಸಿಕ್ಕಿ ಬೀಳುವುದಲ್ಲದೆ ಪತ್ನಿಯೂ ಸಿಲುಕಿಕೊಳ್ಳುವಂತೆ ಮಾಡುತ್ತಾನೆ. ಮತ್ತೆ ಪಾರಾಗುವ ಯತ್ನ ಮಾಡುತ್ತಾನೆ. ಆಗ ಘಟಿಸುವುದೆ ಬೇರೆ…

ಜಾತಿಯ ಮರ್ಯಾದೆ ಕಾರಣಕ್ಕೆ ತನ್ನ ಒಡ ಹುಟ್ಟಿದ ತಂಗಿ ಮತ್ತು ಈಕೆಯ ಪ್ರೇಮಿಯನ್ನು ಕೊಲ್ಲುವ ಸತ್ಬೀರ್ ಇಂಥವರೆಲ್ಲರ ಪ್ರತಿನಿಧಿಯಾಗಿ ಕಾಣುತ್ತಾನೆ. ಈ ಕೃತ್ಯಕ್ಕೆ ಸಾಕ್ಷಿಯಾದ ದಂಪತಿಗಳನ್ನು ಮುಗಿಸಲು ಇವನು ಮತ್ತಿವನ ತಂಡ ಬೆನ್ನು ಬೀಳುತ್ತದೆ. ಈ ಕೊಲೆಗಡುಕರಿಂದ ಪಾರಾಗುತ್ತಾ ಮತ್ತೆಮತ್ತೆ ಅಂಥವರೊಂದಿಗೆ ನೆಂಟು ಇರುವವರ ಹಿಡಿತಕ್ಕೆ ಸಿಲುಕಿ ಮತ್ತೆ ಅವರಿಂದ ಪಾರಾಗುತ್ತಾ ಮತ್ತೆ ಅಂಥವರ ಕೈಗೆ ಸಿಲುಕುವ ಮೀರಾ ಸ್ಥಿತಿ ತಲ್ಲಣ ಮೂಡಿಸುತ್ತದೆ.

ಪಾರಾಗುವ ಹಾದಿಯಲ್ಲಿ ಇಂದಿಗೂ ಭಾರತದ ಅನೇಕ ಹಳ್ಳಿಗಳಲ್ಲಿ ಜಾರಿಯಲ್ಲಿರುವ ಫ್ಯೂಡಲ್ ಸಂಸ್ಕೃತಿ, ಜಾತೀಯ ದರ್ಬಾರು, ಪಾಳೆಗಾರಿಕೆ ಮನೋಭಾವದ ಸರಪಂಚರು ಮತ್ತು ಅಸಹಾಯಕತೆಯಿಂದ ಇಂಥವರ ಸೇವಕರಂತೆ ಆಡುವ ಪೊಲೀಸರ ಚಿತ್ರಣ ದೊರೆಯುತ್ತದೆ. ಅಸಹಾಯಕವಾಗಿ ಕಾಣುವ ಮೀರಾ ತನ್ನ ಪ್ರಾಣ ಲೆಕ್ಕಿಸದೆ ಕೊಲೆಗಡುಕರನ್ನು ಬೇಟೆಯಾಡುವ ರೀತಿ ಬಹು ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಈ ಮೂಲಕ ಹೆಣ್ಣಿನಲ್ಲಿರುವ ಕೆಚ್ಚು, ರೋಷ ಸೂಕ್ತ ರೀತಿಯಲ್ಲಿ ಚಿತ್ರಿತವಾಗಿದೆ.

ಸಮಕಾಲೀನ ಭಾರತೀಯ ಸಮಾಜದ ಹುಳುಕಗಳನ್ನು ಎತ್ತಿ ತೋರಿಸುವ ಹಾದಿಯಲ್ಲಿ ಎನ್.ಎಚ್. 10 ಡಾಕ್ಯುಮೆಂಟರಿಯಾಗಿಲ್ಲ. ಜನಪ್ರಿಯ ಸಿನೆಮಾದ ಪರಿಭಾಷೆಯಲ್ಲಿಯೆ ತಾನು ಹೇಳಬೇಕಾದ ಸಂಗತಿಗಳನ್ನು ನಿರ್ದೇಶಕ ನವದೀಪ್ ಸಿಂಗ್ ಹೇಳಿದ್ದಾರೆ. ಚಿತ್ರಕಥೆಯಲ್ಲಿರುವ ಬಿಗಿ, ಕ್ಯಾಮರಾ ಕೆಲಸ ಜೊತೆಗೆ ಎಲ್ಲ ಕಲಾವಿದರ ಅಭಿನಯ ಸಿನೆಮಾವನ್ನು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.

ವಿಶೇಷವಾಗಿ ಅನುಷ್ಕಾ ಶರ್ಮ ಅಭಿನಯ ಗಮನ ಸೆಳೆಯುತ್ತದೆ. ದೊಡ್ಡ ವಹಿವಾಟು ಇರುವ ಕಂಪನಿ ಅಧಿಕಾರಿಯಾಗಿ, ತಡರಾತ್ರಿಯಲ್ಲಿ ದಾಳಿ ಮಾಡುವ ಕಾಮಂಧರಿಂದ ಪಾರಾಗುವ ಹೆಣ್ಣಾಗಿ, ಪತಿಯನ್ನು ರಕ್ಷಿಸಿಕೊಳ್ಳಲು ಯತ್ನಿಸುವ ಪತ್ನಿಯಾಗಿ, ನಗರದತ್ತ ಧಾವಿಸಿ ಹೋಗಲು ಆಸ್ಪದ ದೊರೆತರೂ ಕೊಲೆಗಡುಕರ ದಮನಕ್ಕೆ ಹೊರಡುವ ದುರ್ಗೆಯಾಗಿ ಇವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...