ದೇಶೀಯ ಉತ್ಪಾದನಾ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ್ದಾರೆ. ಇಂದು ಗೋವಾದಲ್ಲಿ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಗೂ ಮುನ್ನ ಈ ಪ್ರಕಟಣೆ ಬಂದಿದೆ.
“ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವ ಸುಗ್ರೀವಾಜ್ಞೆಯನ್ನು ಕ್ಯಾಬಿನೆಟ್ ತೆರವುಗೊಳಿಸಿದೆ” ಎಂದು ಸೀತಾರಾಮನ್ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ, ಜೂನ್ ತ್ರೈಮಾಸಿಕದಲ್ಲಿ ಆರು ವರ್ಷಗಳಲ್ಲಿ ಜಿ.ಡಿ.ಪಿ ಬೆಳವಣಿಗೆ ಕನಿಷ್ಠ 5% ಕ್ಕೆ ಇಳಿದ ಕಾರಣಕ್ಕಾಗಿ ಪೂರಕವಾದ ಕ್ರಮಗಳನ್ನು ಸರ್ಕಾರ ಘೋಷಿಸಿದೆ.
ಸರ್ಕಾರ ಒಂದು ಕಡೆ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳಲು ಹಿಂಜರಿತ ತೋರಿಸುತ್ತಲೇ, ಇನ್ನೊಂದು ಕಡೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ ಎಂಬ ಮಾತುಗಳು ಅರ್ಥಶಾಸ್ತ್ರಜ್ಞರ ವಲಯದಲ್ಲಿ ಕೇಳಿ ಬರುತ್ತಿವೆ.
ಕಳೆದ ವಾರ, ಗೃಹ ವಲಯವನ್ನು ಪುನರುಜ್ಜೀವನಗೊಳಿಸಲು ಮತ್ತು ರಫ್ತು ಹೆಚ್ಚಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಘೋಷಿಸಿತ್ತು. ಅಂತಿಮ ತ್ರೈಮಾಸಿಕ ಹಬ್ಬದ ಋತುವಿಗೆ ಮುಂಚಿತವಾಗಿ ಖರ್ಚನ್ನು ಹೆಚ್ಚಿಸಲು ಸಣ್ಣ ಉದ್ಯಮಗಳು ಮತ್ತು ಚಿಲ್ಲರೆ ಸಾಲಗಾರರಿಗೆ ಸಾಲವನ್ನು ಹೆಚ್ಚಿಸುವಂತೆ ಗುರುವಾರ ಹಣಕಾಸು ಸಚಿವರು ಬ್ಯಾಂಕುಗಳನ್ನು ಒತ್ತಾಯಿಸಿದ್ದರು.
“ಬೆಳವಣಿಗೆಯನ್ನು ಉತ್ತೇಜಿಸಲು, 2019-20ರ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ, ಇದು ಯಾವುದೇ ದೇಶೀಯ ಕಂಪನಿಗೆ ಯಾವುದೇ ಪ್ರೋತ್ಸಾಹವನ್ನು ಅಥವಾ ವಿನಾಯಿತಿ ಪಡೆಯುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು 22% ದರದಲ್ಲಿ ಆದಾಯ ತೆರಿಗೆ ಪಾವತಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.


