Homeಚಳವಳಿದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ - ನೂರ್‌ ಶ್ರೀಧರ್‌

ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ – ನೂರ್‌ ಶ್ರೀಧರ್‌

ಇದನ್ನು "ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು.

- Advertisement -
- Advertisement -

ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಿಕೊಳ್ಳಲು ಕರ್ನಾಟಕದಿಂದ ಹೊರಟ ಹೋರಾಟಗಾರ ನೂರ್‌ ಶ್ರೀಧರ್‌ ಅವರು ಆಂದೋಲನದ ಬಗ್ಗೆ ತಮ್ಮ ಅನುಭವಗಳನ್ನು ಬರೆದಿದ್ದಾರೆ.

ನಮ್ಮ ತಂಡ [ನೂರ್ ಶ್ರೀಧರ್, ಕುಮಾರ್ ಸಮತಳ, ಚಾರ್ವಾಕ ರಾಘು, ಮರ್ಸಿ ಮಿಷನ್ ತನ್ವೀರ್] ಬೆಂಗಳೂರಿನಿಂದ ಪಯಣ ಮಾಡಿ, ದೆಹಲಿಯ ಕರ್ನಾಟಕ ಸಂಘ ಹೋಗಿ ಸೇರಿಕೊಳ್ಳುವ ಹೊತ್ತಿಗೆ 10 ಗಂಟೆ. ಎರಡು ತಂಡಗಳಲ್ಲಿ ಐಕ್ಯ ಹೋರಾಟದ ಒಡನಾಡಿಗಳು ಈಗಾಗಲೇ ಬಂದು ಸೇರಿದ್ದರು. ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಚಾಮರಸ ಪಾಟೀಲ್, ಎಸ್. ಆರ್. ಹಿರೇಮಠ, ಶಹನಾಜ್ ದೀದಿ, ಬಿ.ಆರ್. ಪಾಟೀಲ್, ಕಾಳಪ್ಪ, ನಾರಯಣ ಸ್ವಾಮಿ, ಗೋಪಾಲ್, ಜಗದೀಶ್, ಎಸ್‌ಯುಸಿಐನ ನಾಗಮ್ಮ ಮತ್ತು ಮತ್ತೊಬ್ಬ ಸಂಗಾತಿ ಹಾಜರಿದ್ದರು. ದೆಹಲಿಯ ನಮ್ಮ ಆಪ್ತರಾದ ಉಮಾಪತಿ, ಬಿಟ್ಟು, ಅಮಿತ್, ಸಂತೋಷ್, ಸುರೀಂಧರ್, ಶ್ಯಾಂಭೀರ್, ಸಂಜ್ಯೋತ್ ಮುಂತಾದವರು ನಮ್ಮ ಜೊತೆಗೂಡಿದ್ದರು.

11 ಕ್ಕೆ ಪತ್ರಿಕಾ ಗೋಷ್ಟಿ ಕರೆಯಲಾಗಿತ್ತು. ಟಿವಿ ಮಾಧ್ಯಮದವರು ಒಳ್ಳೆ ಸಂಖ್ಯೆಯಲ್ಲೇ ಬಂದಿದ್ದರು. ಆತ್ಮೀಯವಾಗಿ ನಡೆದುಕೊಂಡರು. ಎಷ್ಟು ಕವರ್ ಆಗಿದೆಯೋ ನಮಗೆ ಗಮನಿಸಲು ಆಗಿಲ್ಲ. ನಾವು ನಮ್ಮ ಭೇಟಿಯ ಉದ್ದೇಶ ದೆಹಲಿಯಲ್ಲಿ ನಡೆಯುತ್ತಿರುವ ಚಾರಿತ್ರಿಕ ಹೋರಾಟಕ್ಕೆ ಕರ್ನಾಟಕದ ಹೋರಾಟ ನಿರತ ಜನತೆಯ ಬೆಂಬಲ ಸೂಚಿಸುವುದು, ನಾವೂ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸುವುದು ಮತ್ತು ಮುಂದಾಳತ್ವದ ಜೊತೆ ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸುವುದು ಮತ್ತು ದೆಹಲಿಯ ಜೊತೆ ಕರ್ನಾಟಕದ ಚಳವಳಿಯ ಬಂಧವನ್ನು ಬಲಪಡಿಸಿಕೊಳ್ಳುವುದು ಎಂಬುದನ್ನು ವಿವರಿಸಿದೆವು. ಅಲ್ಲಿಗೆ 1 ಗಂಟೆ.

ಇದನ್ನೂ ಓದಿ: ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಪ್ರಧಾನಿ ಮೋದಿ – ದೆಹಲಿಯಲ್ಲಿ ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ ಆಕ್ರೋಶ

ಮೊದಲ ದಿನ ಜೈಪುರ ರಸ್ತೆಯಲ್ಲಿನ ಶಹಜಹಾನ್ ಪುರದ ಹೋರಾಟದ ತಾಣಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದೆವು. ಅದು ನಾವು ಉಳಿದುಕೊಂಡಿದ್ದ ಕರ್ನಾಟಕ ಸಂಘದಿಂದ 80 ಕಿಮೀ. ಹೋದ ಹೋದಂತೆ ಟ್ರಾಫಿಕ್ ಹೆಚ್ಚಾಗುತ್ತಾ ಹೋಯಿತು. ಕೊನೆ 30 ಕೀಮಿ ದೂರವನ್ನು ಹೈವೇಯಲ್ಲಿ ಚಲಿಸಲು ಸಾಧ್ಯವೇ ಇರಲಿಲ್ಲ. ಪೂರ್ತಿ ಜ್ಯಾಮ್. ಹೈವೇಯ ಎಡಕ್ಕೆ ಬಲಕ್ಕೆ ಸುತ್ತಿಬಳಸಿ ಹೇಗೇಗೋ ಮಾಡಿ, ಊಟವೂ ಮಾಡದೆ, ಹೋರಾಟದ ತಾಣಕ್ಕೆ ತಲುಪುವ ಹೊತ್ತಿಗೆ ಸಂಜೆ 6 ಗಂಟೆ. ಸಂಗಾತಿ ಕಪಿಲ್ ನಮ್ಮನ್ನು ಅಲ್ಲಿ ಬರಮಾಡಿಕೊಂಡು ಕರೆದೊಯ್ದರು.

ಆಹಾ ಎಂತಹ ನೋಟ….!

ನಮ್ಮ ಜನ ಹೈವೇ ಮೇಲೆ ಹಾಡಿ ಕಟ್ಟಿದ್ದರು. ಹೈವೆಯ ಮಧ್ಯದಲ್ಲಿ ಎರಡೂ ಕಡೆ ಟೆಂಟುಗಳು. ಮಧ್ಯದಲ್ಲಿ ನಡೆಯಲು ಮಾತ್ರ ಸಣ್ಣ ಓಣಿ, ಅಲ್ಲಲ್ಲಿ ಅನ್ನ ದಾಸೋಹದ ಲಂಗರುಗಳು, 24x 7 ಚಹಾ ಕೆಟಲ್‌ಗಳು, ದವಾಖಾನೆ, ಅಗತ್ಯಗಳನ್ನು ಒದಗಿಸುವ ಬಿಡಾರ, ಸಣ್ಣ ಸಣ್ಣ ಸಭಾಂಗಣಗಳು, ದೊಡ್ಡ ವೇದಿಕೆ. ಇದನ್ನು ಹಳ್ಳಿಯೂ ಎನ್ನದೆ ಹಾಡಿ ಎನ್ನಬೇಕು. ಏಕೆಂದರೆ ಇಲ್ಲಿ ಒಂದೊಂದು ತಂಡಕ್ಕೂ ಪ್ರತ್ಯೇಕ ಟೆಂಟುಗಳಿದ್ದರೂ ಊಟ, ಚಹಾ, ದವಾಖಾನೆ, ಸಭೆ, ಸಭಾಂಗಣ ಎಲ್ಲವೂ ಸಾಮೂಹಿಕ, ಎಲ್ಲವೂ ಸ್ವಯಂಪ್ರೇರಿತ. ಎಲ್ಲರೂ ಅವರವರ ಪಾಲಿಗೆ ತಲ್ಲೀನರು. ಯಾರೋ ಯಾರಿಗೋ ಹೇಳಿ ಮಾಡಿಸುತ್ತಿಲ್ಲ. ಅವರವರೇ ಕೆಲಸ ಹಂಚಿಕೊಂಡು, ಕೆಲಸ ಹಾಕಿಕೊಂಡು, ಸಂತಸ ಮತ್ತು ಉತ್ಸಾಹದ ಜೊತೆ ಮಾಡುತ್ತಾ ಹೋಗುತ್ತಿದ್ದಾರೆ.

ಒಂದು ಉದಾಹರಣೆ ಹೇಳಬೇಕೆಂದರೆ ಎಂಎಲ್‌ಎ ಆಗಿರುವ ಒಬ್ಬ ಯುವತಿ ಹಲವರಲ್ಲಿ ಒಬ್ಬರಾಗಿ ಬೀದಿಯಲ್ಲಿ ಕೂತು ತಮ್ಮ ಪಾಡಿಗೆ ತಾವು ರೊಟ್ಟಿ ಲಟ್ಟಿಸುತ್ತಿದ್ದಾರೆ. ಇದನ್ನು ಹಾಡಿ ಅನ್ನದೆ ಇನ್ನೇನನ್ನಲಿ. “ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು. ನಾವೂ ರೈತರು ಕೊಟ್ಟ ರೊಟ್ಟಿಯನ್ನು ಕಣ್ಣಿಗೆ ಒತ್ತಿಕೊಂಡು ಹೊಟ್ಟೆ ತುಂಬ ಉಂಡು ನಾಯಕತ್ವದ ಜೊತೆ ಮಾತಿಗೆ ಕೂತೆವು.

ಇದನ್ನೂ ಓದಿ: ಮೋದಿಯವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ: ಹೋರಾಟ ನಿರತ ರೈತರ ಆರೋಪ

ಈ ಹೋರಾಟದ ತಾಣದ ಮುಂದಾಳತ್ವ ವಹಿಸಿರುವ ಸ್ವರಾಜಿನ ಕಾಮ್ರೇಡ್ ದಿಲಿಪ್ ಮತ್ತು ರಿಜ್ವಾನ್ ಚೌಧರಿ ಜೊತೆ ನಮ್ಮ ನಿಯೋಗದ ಮಾತುಕತೆ ಶುರುವಾಯಿತು. [ವಾಸ್ತವದಲ್ಲಿ ಈ ತಾಣದ ಒಟ್ಟು ಉಸ್ತುವಾರಿ ಯೋಗೇಂದ್ರ ಯಾದವ್ ಅವರದು. ಅವರ ತಂದೆ ತೀರಿಕೊಂಡಿರುವುದರಿಂದ ಅವರು ಹಾಜರಿರಲಿಲ್ಲ]. ನಮ್ಮ ಕಡೆಯಿಂದ ಇಲ್ಲಿ ನಡೆಯುತ್ತಿರುವ ಹೋರಾಟವನ್ನು ಮತ್ತು ಬಂದಿರುವ ಉದ್ದೇಶವನ್ನು ವಿವರಿಸಿದೆವು. ಅವರು ಅಲ್ಲಿ ನಡಿಯುತ್ತಿರುವ ವಿದ್ಯಾಮಾನಗಳನ್ನು ಬಹಳ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟರು. ಅದರ ಸಾರ ಹೀಗಿದೆ….

  • ದೆಹಲಿಯನ್ನು ರೈತರು 7 ಹಾದಿಗಳಲ್ಲಿ ಸುತ್ತಿಗಟ್ಟಿದ್ದಾರೆ. ಶಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದಾರೆ. ಮಿಕ್ಕ ಕಡೆ ಸಹಸ್ರಾರು ಸಂಖ್ಯೆಗಳಲ್ಲಿ.
  • ಪಂಜಾಬಿ ರೈತರು ಅತಿದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಇಳಿದಿದ್ದರಿಂದ ಹೋರಾಟ ಬಿರುಸು ಪಡೆದುಕೊಂಡಿತು. ಆದರೆ ಇತರೆ ರೈತರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಉದಾಹರಣೆಗೆ ಮೊದಲು ರಾಜಸ್ಥಾನದ ಒಂದೆರಡು ಜಿಲ್ಲೆಗಳು ಮಾತ್ರ ಸ್ಪಂದಿಸಿದವು. ಇಂದು ಬಹುತೇಕ ಜಿಲ್ಲೆಗಳ ರೈತರು ಜೊತೆಗೂಡಿದ್ದಾರೆ. ವಿಶೇವಾಗಿ ಮೇವಾಡ ಭಾಗದ ರೈತರಲ್ಲಿ ದೊಡ್ಡ ಜಾಗೃತಿ ಮೂಡಿದೆ.
  • ಪೋಲೀಸರು ಹಾಕಿರುವ ತಡೆಗಳನ್ನು ಮುರಿದು ಮುನ್ನುಗುವುದು ಅಸಾಧ್ಯವಾದದ್ದಲ್ಲ ಆದರೆ ನಾವು ಅದನ್ನು ಮಾಡುತ್ತಿಲ್ಲ. ಅವರು ತಡೆದಿರುವಲ್ಲೇ ನಿಂತು ಹೋರಾಟವನ್ನು ಸಧೃಡೀಕರಿಸುತ್ತಾ ಹೋಗುವುದು ನಮ್ಮ ಗುರಿ. ಅವರು ಸಮಯ ಎಳೆಯುತ್ತಿದ್ದಾರೆ. ನಾವು ದೇಶವ್ಯಾಪಿ ರೈತರನ್ನು ಸಂಘಟಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದೇವೆ. ದೀರ್ಘ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ.
  • ಈ ಹೋರಾಟ ರೈತರ ಹೋರಾಟವಾಗಿ ಪ್ರಾರಂಭವಾಗಿದ್ದರೂ ಕೇವಲ ಅವರ ಹೋರಾಟವಾಗಿಲ್ಲ. ದೇಶದ ಎಲ್ಲಾ ಜನವಿಭಾಗಗಳ ಹೋರಾಟವಾಗಿದೆ. ಎಲ್ಲಾ ಜನವರ್ಗಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಸಾರಾಂಶದಲ್ಲಿ ಇದು ಫ್ಯಾಸಿಸಂ ವಿರುದ್ಧದ ಹೋರಾಟವಾಗಿದೆ. ಇದು ರೈತ ಹೋರಾಟವಾಗಿ ಪ್ರಾರಂಭವಾಗಿದ್ದರೂ ಅಷ್ಟರಿಂದಲೇ ಕೊನೆಗೊಳ್ಳುವುದಿಲ್ಲ.

  • ದಕ್ಷಿಣದಿಂದಲೂ ಜನ ಬರಲು ಪ್ರಾರಂಭಿಸಿದ್ದಾರೆ. ಇಂದು ಮಹರಾಷ್ಟ್ರದಿಂದ ಒಂದುವರೆ ಸಾವಿರದಷ್ಟು ಜನ ಹೋರಾಟಕ್ಕೆ ಬಂದು ಸೇರಿಕೊಂಡಿದ್ದಾರೆ. ಕರ್ನಾಟಕದಿಂದ ವಿವಿಧ ಸಂಘಟನೆಗಳನ್ನು ಪ್ರತಿನಿಧಿಸಿ ತಾವು ಬಂದಿದ್ದೀರಿ. ಇದಕ್ಕೆ ಬಹಳ ಮಹತ್ವವಿದೆ. ದೇಶಕ್ಕೆ ಈ ಭೇಟಿ ಒಳ್ಳೆ ಸಂದೇಶ ನೀಡಲಿದೆ. ನಾಳೆ ಬಹಿರಂಗ ಸಭೆಯಲ್ಲಿ ಮಾತನಾಡಿ. ಕರ್ನಾಟಕ ಎದ್ದು ನಿಂತರೆ ಈ ಹೋರಾಟ ಹೊಸ ತಿರುವನ್ನೇ ಪಡೆದುಕೊಳ್ಳುತ್ತದೆ.

ಮಾತು ಮುಗಿಯಲು ಸಾಧ್ಯವಿರಲಿಲ್ಲ…ಆದರೆ ಮುಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಡಲೇಬೇಕಿತ್ತು. ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ, ಜೊತೆಗೂಡಿ ಘೋಷಣೆಗಳನ್ನು ಹಾಕಿ, ಸಮೃದ್ಧಿಯ ಭಾವದೊಂದಿಗೆ ’ಹಾಡಿ’ ಬಿಟ್ಟು ಮತ್ತೆ ದಿಲ್ಲಿಗೆ ಹೊರಟೆವು. ಮರಳುವ ಹೊತ್ತಿಗೆ 11.30, ಮಲಗುವ ಹೊತ್ತಿಗೆ 2 ಗಂಟೆ.

ಇಂದು 9 ಕ್ಕೆ ಹೊರಡಬೇಕು… ಹೋರಾಟದ ಮತ್ತೊಂದು ಮುಖ್ಯ ತಾಣವಾದ ಟಿಕ್ರಿಗೆ. ಇಂದು ಕಂಡದ್ದು ನಾಳೆಗೆ!

ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ‌ ಹಂಚಿಕೆ: RSS‌ ಕಾರ್ಯಕರ್ತ ಬಂಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...