Homeಚಳವಳಿದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ - ನೂರ್‌ ಶ್ರೀಧರ್‌

ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ – ನೂರ್‌ ಶ್ರೀಧರ್‌

ಇದನ್ನು "ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು.

- Advertisement -
- Advertisement -

ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಿಕೊಳ್ಳಲು ಕರ್ನಾಟಕದಿಂದ ಹೊರಟ ಹೋರಾಟಗಾರ ನೂರ್‌ ಶ್ರೀಧರ್‌ ಅವರು ಆಂದೋಲನದ ಬಗ್ಗೆ ತಮ್ಮ ಅನುಭವಗಳನ್ನು ಬರೆದಿದ್ದಾರೆ.

ನಮ್ಮ ತಂಡ [ನೂರ್ ಶ್ರೀಧರ್, ಕುಮಾರ್ ಸಮತಳ, ಚಾರ್ವಾಕ ರಾಘು, ಮರ್ಸಿ ಮಿಷನ್ ತನ್ವೀರ್] ಬೆಂಗಳೂರಿನಿಂದ ಪಯಣ ಮಾಡಿ, ದೆಹಲಿಯ ಕರ್ನಾಟಕ ಸಂಘ ಹೋಗಿ ಸೇರಿಕೊಳ್ಳುವ ಹೊತ್ತಿಗೆ 10 ಗಂಟೆ. ಎರಡು ತಂಡಗಳಲ್ಲಿ ಐಕ್ಯ ಹೋರಾಟದ ಒಡನಾಡಿಗಳು ಈಗಾಗಲೇ ಬಂದು ಸೇರಿದ್ದರು. ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಚಾಮರಸ ಪಾಟೀಲ್, ಎಸ್. ಆರ್. ಹಿರೇಮಠ, ಶಹನಾಜ್ ದೀದಿ, ಬಿ.ಆರ್. ಪಾಟೀಲ್, ಕಾಳಪ್ಪ, ನಾರಯಣ ಸ್ವಾಮಿ, ಗೋಪಾಲ್, ಜಗದೀಶ್, ಎಸ್‌ಯುಸಿಐನ ನಾಗಮ್ಮ ಮತ್ತು ಮತ್ತೊಬ್ಬ ಸಂಗಾತಿ ಹಾಜರಿದ್ದರು. ದೆಹಲಿಯ ನಮ್ಮ ಆಪ್ತರಾದ ಉಮಾಪತಿ, ಬಿಟ್ಟು, ಅಮಿತ್, ಸಂತೋಷ್, ಸುರೀಂಧರ್, ಶ್ಯಾಂಭೀರ್, ಸಂಜ್ಯೋತ್ ಮುಂತಾದವರು ನಮ್ಮ ಜೊತೆಗೂಡಿದ್ದರು.

11 ಕ್ಕೆ ಪತ್ರಿಕಾ ಗೋಷ್ಟಿ ಕರೆಯಲಾಗಿತ್ತು. ಟಿವಿ ಮಾಧ್ಯಮದವರು ಒಳ್ಳೆ ಸಂಖ್ಯೆಯಲ್ಲೇ ಬಂದಿದ್ದರು. ಆತ್ಮೀಯವಾಗಿ ನಡೆದುಕೊಂಡರು. ಎಷ್ಟು ಕವರ್ ಆಗಿದೆಯೋ ನಮಗೆ ಗಮನಿಸಲು ಆಗಿಲ್ಲ. ನಾವು ನಮ್ಮ ಭೇಟಿಯ ಉದ್ದೇಶ ದೆಹಲಿಯಲ್ಲಿ ನಡೆಯುತ್ತಿರುವ ಚಾರಿತ್ರಿಕ ಹೋರಾಟಕ್ಕೆ ಕರ್ನಾಟಕದ ಹೋರಾಟ ನಿರತ ಜನತೆಯ ಬೆಂಬಲ ಸೂಚಿಸುವುದು, ನಾವೂ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸುವುದು ಮತ್ತು ಮುಂದಾಳತ್ವದ ಜೊತೆ ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸುವುದು ಮತ್ತು ದೆಹಲಿಯ ಜೊತೆ ಕರ್ನಾಟಕದ ಚಳವಳಿಯ ಬಂಧವನ್ನು ಬಲಪಡಿಸಿಕೊಳ್ಳುವುದು ಎಂಬುದನ್ನು ವಿವರಿಸಿದೆವು. ಅಲ್ಲಿಗೆ 1 ಗಂಟೆ.

ಇದನ್ನೂ ಓದಿ: ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಪ್ರಧಾನಿ ಮೋದಿ – ದೆಹಲಿಯಲ್ಲಿ ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ ಆಕ್ರೋಶ

ಮೊದಲ ದಿನ ಜೈಪುರ ರಸ್ತೆಯಲ್ಲಿನ ಶಹಜಹಾನ್ ಪುರದ ಹೋರಾಟದ ತಾಣಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದೆವು. ಅದು ನಾವು ಉಳಿದುಕೊಂಡಿದ್ದ ಕರ್ನಾಟಕ ಸಂಘದಿಂದ 80 ಕಿಮೀ. ಹೋದ ಹೋದಂತೆ ಟ್ರಾಫಿಕ್ ಹೆಚ್ಚಾಗುತ್ತಾ ಹೋಯಿತು. ಕೊನೆ 30 ಕೀಮಿ ದೂರವನ್ನು ಹೈವೇಯಲ್ಲಿ ಚಲಿಸಲು ಸಾಧ್ಯವೇ ಇರಲಿಲ್ಲ. ಪೂರ್ತಿ ಜ್ಯಾಮ್. ಹೈವೇಯ ಎಡಕ್ಕೆ ಬಲಕ್ಕೆ ಸುತ್ತಿಬಳಸಿ ಹೇಗೇಗೋ ಮಾಡಿ, ಊಟವೂ ಮಾಡದೆ, ಹೋರಾಟದ ತಾಣಕ್ಕೆ ತಲುಪುವ ಹೊತ್ತಿಗೆ ಸಂಜೆ 6 ಗಂಟೆ. ಸಂಗಾತಿ ಕಪಿಲ್ ನಮ್ಮನ್ನು ಅಲ್ಲಿ ಬರಮಾಡಿಕೊಂಡು ಕರೆದೊಯ್ದರು.

ಆಹಾ ಎಂತಹ ನೋಟ….!

ನಮ್ಮ ಜನ ಹೈವೇ ಮೇಲೆ ಹಾಡಿ ಕಟ್ಟಿದ್ದರು. ಹೈವೆಯ ಮಧ್ಯದಲ್ಲಿ ಎರಡೂ ಕಡೆ ಟೆಂಟುಗಳು. ಮಧ್ಯದಲ್ಲಿ ನಡೆಯಲು ಮಾತ್ರ ಸಣ್ಣ ಓಣಿ, ಅಲ್ಲಲ್ಲಿ ಅನ್ನ ದಾಸೋಹದ ಲಂಗರುಗಳು, 24x 7 ಚಹಾ ಕೆಟಲ್‌ಗಳು, ದವಾಖಾನೆ, ಅಗತ್ಯಗಳನ್ನು ಒದಗಿಸುವ ಬಿಡಾರ, ಸಣ್ಣ ಸಣ್ಣ ಸಭಾಂಗಣಗಳು, ದೊಡ್ಡ ವೇದಿಕೆ. ಇದನ್ನು ಹಳ್ಳಿಯೂ ಎನ್ನದೆ ಹಾಡಿ ಎನ್ನಬೇಕು. ಏಕೆಂದರೆ ಇಲ್ಲಿ ಒಂದೊಂದು ತಂಡಕ್ಕೂ ಪ್ರತ್ಯೇಕ ಟೆಂಟುಗಳಿದ್ದರೂ ಊಟ, ಚಹಾ, ದವಾಖಾನೆ, ಸಭೆ, ಸಭಾಂಗಣ ಎಲ್ಲವೂ ಸಾಮೂಹಿಕ, ಎಲ್ಲವೂ ಸ್ವಯಂಪ್ರೇರಿತ. ಎಲ್ಲರೂ ಅವರವರ ಪಾಲಿಗೆ ತಲ್ಲೀನರು. ಯಾರೋ ಯಾರಿಗೋ ಹೇಳಿ ಮಾಡಿಸುತ್ತಿಲ್ಲ. ಅವರವರೇ ಕೆಲಸ ಹಂಚಿಕೊಂಡು, ಕೆಲಸ ಹಾಕಿಕೊಂಡು, ಸಂತಸ ಮತ್ತು ಉತ್ಸಾಹದ ಜೊತೆ ಮಾಡುತ್ತಾ ಹೋಗುತ್ತಿದ್ದಾರೆ.

ಒಂದು ಉದಾಹರಣೆ ಹೇಳಬೇಕೆಂದರೆ ಎಂಎಲ್‌ಎ ಆಗಿರುವ ಒಬ್ಬ ಯುವತಿ ಹಲವರಲ್ಲಿ ಒಬ್ಬರಾಗಿ ಬೀದಿಯಲ್ಲಿ ಕೂತು ತಮ್ಮ ಪಾಡಿಗೆ ತಾವು ರೊಟ್ಟಿ ಲಟ್ಟಿಸುತ್ತಿದ್ದಾರೆ. ಇದನ್ನು ಹಾಡಿ ಅನ್ನದೆ ಇನ್ನೇನನ್ನಲಿ. “ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು. ನಾವೂ ರೈತರು ಕೊಟ್ಟ ರೊಟ್ಟಿಯನ್ನು ಕಣ್ಣಿಗೆ ಒತ್ತಿಕೊಂಡು ಹೊಟ್ಟೆ ತುಂಬ ಉಂಡು ನಾಯಕತ್ವದ ಜೊತೆ ಮಾತಿಗೆ ಕೂತೆವು.

ಇದನ್ನೂ ಓದಿ: ಮೋದಿಯವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ: ಹೋರಾಟ ನಿರತ ರೈತರ ಆರೋಪ

ಈ ಹೋರಾಟದ ತಾಣದ ಮುಂದಾಳತ್ವ ವಹಿಸಿರುವ ಸ್ವರಾಜಿನ ಕಾಮ್ರೇಡ್ ದಿಲಿಪ್ ಮತ್ತು ರಿಜ್ವಾನ್ ಚೌಧರಿ ಜೊತೆ ನಮ್ಮ ನಿಯೋಗದ ಮಾತುಕತೆ ಶುರುವಾಯಿತು. [ವಾಸ್ತವದಲ್ಲಿ ಈ ತಾಣದ ಒಟ್ಟು ಉಸ್ತುವಾರಿ ಯೋಗೇಂದ್ರ ಯಾದವ್ ಅವರದು. ಅವರ ತಂದೆ ತೀರಿಕೊಂಡಿರುವುದರಿಂದ ಅವರು ಹಾಜರಿರಲಿಲ್ಲ]. ನಮ್ಮ ಕಡೆಯಿಂದ ಇಲ್ಲಿ ನಡೆಯುತ್ತಿರುವ ಹೋರಾಟವನ್ನು ಮತ್ತು ಬಂದಿರುವ ಉದ್ದೇಶವನ್ನು ವಿವರಿಸಿದೆವು. ಅವರು ಅಲ್ಲಿ ನಡಿಯುತ್ತಿರುವ ವಿದ್ಯಾಮಾನಗಳನ್ನು ಬಹಳ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟರು. ಅದರ ಸಾರ ಹೀಗಿದೆ….

  • ದೆಹಲಿಯನ್ನು ರೈತರು 7 ಹಾದಿಗಳಲ್ಲಿ ಸುತ್ತಿಗಟ್ಟಿದ್ದಾರೆ. ಶಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದಾರೆ. ಮಿಕ್ಕ ಕಡೆ ಸಹಸ್ರಾರು ಸಂಖ್ಯೆಗಳಲ್ಲಿ.
  • ಪಂಜಾಬಿ ರೈತರು ಅತಿದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಇಳಿದಿದ್ದರಿಂದ ಹೋರಾಟ ಬಿರುಸು ಪಡೆದುಕೊಂಡಿತು. ಆದರೆ ಇತರೆ ರೈತರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಉದಾಹರಣೆಗೆ ಮೊದಲು ರಾಜಸ್ಥಾನದ ಒಂದೆರಡು ಜಿಲ್ಲೆಗಳು ಮಾತ್ರ ಸ್ಪಂದಿಸಿದವು. ಇಂದು ಬಹುತೇಕ ಜಿಲ್ಲೆಗಳ ರೈತರು ಜೊತೆಗೂಡಿದ್ದಾರೆ. ವಿಶೇವಾಗಿ ಮೇವಾಡ ಭಾಗದ ರೈತರಲ್ಲಿ ದೊಡ್ಡ ಜಾಗೃತಿ ಮೂಡಿದೆ.
  • ಪೋಲೀಸರು ಹಾಕಿರುವ ತಡೆಗಳನ್ನು ಮುರಿದು ಮುನ್ನುಗುವುದು ಅಸಾಧ್ಯವಾದದ್ದಲ್ಲ ಆದರೆ ನಾವು ಅದನ್ನು ಮಾಡುತ್ತಿಲ್ಲ. ಅವರು ತಡೆದಿರುವಲ್ಲೇ ನಿಂತು ಹೋರಾಟವನ್ನು ಸಧೃಡೀಕರಿಸುತ್ತಾ ಹೋಗುವುದು ನಮ್ಮ ಗುರಿ. ಅವರು ಸಮಯ ಎಳೆಯುತ್ತಿದ್ದಾರೆ. ನಾವು ದೇಶವ್ಯಾಪಿ ರೈತರನ್ನು ಸಂಘಟಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದೇವೆ. ದೀರ್ಘ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ.
  • ಈ ಹೋರಾಟ ರೈತರ ಹೋರಾಟವಾಗಿ ಪ್ರಾರಂಭವಾಗಿದ್ದರೂ ಕೇವಲ ಅವರ ಹೋರಾಟವಾಗಿಲ್ಲ. ದೇಶದ ಎಲ್ಲಾ ಜನವಿಭಾಗಗಳ ಹೋರಾಟವಾಗಿದೆ. ಎಲ್ಲಾ ಜನವರ್ಗಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಸಾರಾಂಶದಲ್ಲಿ ಇದು ಫ್ಯಾಸಿಸಂ ವಿರುದ್ಧದ ಹೋರಾಟವಾಗಿದೆ. ಇದು ರೈತ ಹೋರಾಟವಾಗಿ ಪ್ರಾರಂಭವಾಗಿದ್ದರೂ ಅಷ್ಟರಿಂದಲೇ ಕೊನೆಗೊಳ್ಳುವುದಿಲ್ಲ.

  • ದಕ್ಷಿಣದಿಂದಲೂ ಜನ ಬರಲು ಪ್ರಾರಂಭಿಸಿದ್ದಾರೆ. ಇಂದು ಮಹರಾಷ್ಟ್ರದಿಂದ ಒಂದುವರೆ ಸಾವಿರದಷ್ಟು ಜನ ಹೋರಾಟಕ್ಕೆ ಬಂದು ಸೇರಿಕೊಂಡಿದ್ದಾರೆ. ಕರ್ನಾಟಕದಿಂದ ವಿವಿಧ ಸಂಘಟನೆಗಳನ್ನು ಪ್ರತಿನಿಧಿಸಿ ತಾವು ಬಂದಿದ್ದೀರಿ. ಇದಕ್ಕೆ ಬಹಳ ಮಹತ್ವವಿದೆ. ದೇಶಕ್ಕೆ ಈ ಭೇಟಿ ಒಳ್ಳೆ ಸಂದೇಶ ನೀಡಲಿದೆ. ನಾಳೆ ಬಹಿರಂಗ ಸಭೆಯಲ್ಲಿ ಮಾತನಾಡಿ. ಕರ್ನಾಟಕ ಎದ್ದು ನಿಂತರೆ ಈ ಹೋರಾಟ ಹೊಸ ತಿರುವನ್ನೇ ಪಡೆದುಕೊಳ್ಳುತ್ತದೆ.

ಮಾತು ಮುಗಿಯಲು ಸಾಧ್ಯವಿರಲಿಲ್ಲ…ಆದರೆ ಮುಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಡಲೇಬೇಕಿತ್ತು. ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ, ಜೊತೆಗೂಡಿ ಘೋಷಣೆಗಳನ್ನು ಹಾಕಿ, ಸಮೃದ್ಧಿಯ ಭಾವದೊಂದಿಗೆ ’ಹಾಡಿ’ ಬಿಟ್ಟು ಮತ್ತೆ ದಿಲ್ಲಿಗೆ ಹೊರಟೆವು. ಮರಳುವ ಹೊತ್ತಿಗೆ 11.30, ಮಲಗುವ ಹೊತ್ತಿಗೆ 2 ಗಂಟೆ.

ಇಂದು 9 ಕ್ಕೆ ಹೊರಡಬೇಕು… ಹೋರಾಟದ ಮತ್ತೊಂದು ಮುಖ್ಯ ತಾಣವಾದ ಟಿಕ್ರಿಗೆ. ಇಂದು ಕಂಡದ್ದು ನಾಳೆಗೆ!

ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ‌ ಹಂಚಿಕೆ: RSS‌ ಕಾರ್ಯಕರ್ತ ಬಂಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...