Homeಕರ್ನಾಟಕಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?

ಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?

ಒಬ್ಬೇ ಒಬ್ಬ ಕನ್ನಡ ಸಾಧಕರ, ಹೋರಾಟಗಾರರ ಹೆಸರನ್ನು ಉತ್ತರ ಭಾರತದಲ್ಲಿನ ಯಾವುದಾದರೂ ರಾಜ್ಯಗಳಲ್ಲಿ ಯಾವುದಕ್ಕಾದರೂ ಇಟ್ಟಿರುವ ಉದಾಹರಣೆ ನಮಗೆ ಸಿಗಲು ಸಾಧ್ಯವೇ?

- Advertisement -
- Advertisement -

ಕರ್ನಾಟಕದಲ್ಲಿರುವ ಸಾರ್ವಜನಿಕ ಸ್ಥಳಗಳಿಗೆ ಕನ್ನಡೇತರ ವ್ಯಕ್ತಿಗಳ/ಸಾಧಕರ ಹೆಸರನ್ನು ನಾಮಕರಣ ಮಾಡುತ್ತಿರುವುದರ ವಿರುದ್ಧ, ಮೊದಲು ಕನ್ನಡದ ಅಸ್ಮಿತೆಗೆ ಪ್ರಾಧಾನ್ಯತೆ ಕೊಡಿ ರಾಜಕಾರಣಿಗಳೇ ಎಂಬ ಕೂಗು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುವ ಯಾವುದೇ ಪಕ್ಷಗಳೂ ಸಹ ಈ ನಡೆಯಿಂದ ಹೊರತಾಗಿಲ್ಲ. ಉತ್ತರ ಭಾರತದ ಸಂಸ್ಕೃತಿ, ಭಾಷೆ, ನಾಯಕರನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಲೇ ಇದೆ. ಈಗ ಅದಕ್ಕೆ ನಾಗಾಲೋಟದ ವೇಗ ಸಿಕ್ಕಂತಾಗಿದೆ.

ಇತ್ತೀಚೆಗೆ ಬಿಜೆಪಿ ಸರ್ಕಾರವು ಯಲಹಂಕ ಮೇಲ್‌ಸೇತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ಮೂಲಕ ರಾಜ್ಯದ ಹಲವು ಸಾಧಕರಿಗೆ, ನಾಯಕರಿಗೆ ಅನ್ಯಾಯ ಮಾಡಿದೆ ಎಂದು ಹೋರಾಟಗಾರರು, ಪ್ರಗತಿಪರರು ದನಿಯೆತ್ತಿ ವಿರೋಧಿಸಿದ್ದಾರೆ.

ಇಂತಹ ಅನೇಕ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿರುವುದು ನಮ್ಮ ರಾಜಕಾರಣಿಗಳ ಅಸ್ಮಿತೆ ಮತ್ತು ಸಿದ್ಧಾಂತವನ್ನು ಅನುಮಾನಿಸುವಂತೆ ಮಾಡುತ್ತಿದೆ. ಯಲಹಂಕ ಸೇತುವೆಗೆ ಉತ್ತರ ಭಾರತದ ನಾಯಕನ ಹೆಸರಿಟ್ಟಿರುವುದು ನಮ್ಮ ನಾಡಿನ ನಾಯಕರಿಗೆ ಬೆಲೆಯಿಲ್ಲ ಎಂಬುದನ್ನು  ತೋರಿಸುವಂತಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಯಶವಂತಪುರದ ಮತ್ತೊಂದು ಸೇತುವೆಗೆ ದೀನ್ ದಯಾಳ್ ಉಪಾದ್ಯಾಯ ಅವರ ಹೆಸರನ್ನು ಇಟ್ಟಿದೆ. ತುಮಕೂರಿನ ಸೇತುವೆಯೊಂದಕ್ಕೆ ಸಾವರ್ಕರ್ ಹೆಸರಿಡಲಾಗಿದೆ. ಬೆಂಗಳೂರಿನ ವಿಜಯನಗರದ ಪಾರ್ಕ್‌ಗೆ ಶ್ಯಾಂ ಪ್ರಕಾಶ್ ಮುಖರ್ಜಿ ಹೆಸರಿಡಲಾಗಿದೆ. ಇದೀಗ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಉತ್ತರ ಭಾರತೀಯರ ಹೆಸರಿಡಲು ಹುನ್ನಾರ ನಡೆಯುತ್ತಿದೆ.

ಒಬ್ಬೇ ಒಬ್ಬ ಕನ್ನಡ ಸಾಧಕರ, ಹೋರಾಟಗಾರರ ಹೆಸರನ್ನು ಉತ್ತರ ಭಾರತದಲ್ಲಿನ ಯಾವುದಾದರೂ ರಾಜ್ಯಗಳಲ್ಲಿ ಯಾವುದಕ್ಕಾದರೂ ಇಟ್ಟಿರುವ ಉದಾಹರಣೆ ನಮಗೆ ಸಿಗಲು ಸಾಧ್ಯವೇ? ಸಿಕ್ಕಿದರೂ ಅಲ್ಲಿ ನಮ್ಮವರೇ ಬಹುಸಂಖ್ಯಾತರಾಗಿದ್ದರೆ ಮಾತ್ರ ಸಾಧ್ಯ.

ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ನಮ್ಮನ್ನಾಳುವ ಪಕ್ಷಗಳು ಬಹುತೇಕ ಉತ್ತರ ಭಾರತದ ಪ್ರಭಾವಿತ ಪಕ್ಷಗಳೇ ಆಗಿರುವುದೂ ಕೂಡ ಇದಕ್ಕೆ ಕಾರಣವಾಗಿರಬುಹುದು. ಏಕೆಂದರೆ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳಿರುವ ನಮ್ಮ ಪಕ್ಕದ ತಮಿಳುನಾಡಿನಲ್ಲಿ ಇಂತಹ ಹೇರಿಕೆಯೆ ಸಂಚುಗಳು ಫಲಿಸಲು ಸಾಧ್ಯವಿಲ್ಲ.

ಈ ಕುರಿತು ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷರಾದ ಹರೀಶ್ ಕುಮಾರ್, “ಈ ಹೇರಿಕೆಯ ವಿರುದ್ಧ ನಾವು ಮೊದಲಿನಿಂದಲೂ ದನಿಯೆತ್ತುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ನಮ್ಮ ನಾಯಕರ ಹೆಸರಿಡದೇ ಅನ್ಯ ನಾಯಕರ ಹೆಸರಿಡುವುದರಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ತಲುಪಿಸುವ ಸಂದೇಶ ಎಂಥದ್ದು? ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ರಾಜ್ಯದಲ್ಲಿ ಸಾಧನೆ ಮಾಡಿದ ಯಾವುದೇ ನಾಯಕರಿಲ್ಲ ಎಂದೆಸುವುದರಲ್ಲಿ ಸಂದೇಹವಿಲ್ಲ. ಹಾಗಂತ, ಸಂಪೂರ್ಣ ನಮ್ಮವರೇ ಇರಬೇಕು ಎಂಬುದೇನೂ ಇಲ್ಲ. 95% ನಮ್ಮವರೇ ಇರಲಿ. ಉಳಿದ 5%  ಅನ್ಯ ನಾಯಕರ ಹೆಸರಿಡಲು ಅವಕಾಶ ಕೊಡೋಣ” ಎಂದು ಹೇಳಿದರು.

“ಹಿಂದಿ ಮತ್ತು ಉತ್ತರ ಭಾರತದ ನಾಯಕರ ಶ್ರೇಷ್ಟತೆಯ ಹೇರಿಕೆಯು ಒಂದು ರೀತಿಯ Slow Poison ಇದ್ದಂತೆ. ಈಗ ಒಂದೊಂದಾಗಿ ಆರಂಭಿಸಿ ಇನ್ನು 20 ವರ್ಷಗಳಲ್ಲಿ ಎಲ್ಲಿ ನೋಡಿದರೂ ಉತ್ತರ ಭಾರತದವರ ಹೆಸರು ಮತ್ತು ಹಿಂದಿಯೇ ಕಾಣಿಸುತ್ತದೆ. ಈಗ ನೋಡಿ ಯಲಹಂಕ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ. ಆದರೆ ‘ಯಲಹಂಕ ನಾಡಪ್ರಭು ಎಂದೇ ಪ್ರಸಿದ್ಧಯಾಗಿದ್ದ ಕೆಂಪೇಗೌಡರ’ ಹೆಸರು ಇಡಲು ಸಾದ್ಯವಾಗಿಲ್ಲ. ಅದೂ ಹೋಗಲಿ, ಕುವೆಂಪು, ಬಸವಣ್ಣನಂತಹ ಎಷ್ಟು ಉನ್ನತ ಸಾಧಕರು ನಮ್ಮಲ್ಲಿಲ್ಲ? ಅವರನ್ನೆಲ್ಲ ಬಿಟ್ಟು ಇವರ ಹೆಸರನ್ನೇಕೆ ಇಟ್ಟಿದ್ದಾರೆ? ಉದ್ದೇಶ ಸ್ವಷ್ಟವಾಗಿದೆ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ನಾಯಕರನ್ನು ಇಡೀ ದೇಶಕ್ಕೇ ಮಹಾನ್ ನಾಯಕರು ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷವೂ ಮಾಡಿಕೊಂಡೇ ಬಂದಿದೆ” ಎಂದು ಹೇಳಿದರು.

ಇದನ್ನೂ ಓದಿ: ಶಿವಾಜಿ ಮಾತ್ರ ರಾಷ್ಟ್ರನಾಯಕರೆ, ಸಂಗೊಳ್ಳಿ ರಾಯಣ್ಣ ರಾಷ್ಟ್ರನಾಯಕರಲ್ಲವೇ?: ಕನ್ನಡಿಗರ ಆಕ್ರೋಶ

“ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ನಮಗೆ ಇನ್ನೊಂದು ಭಾಷೆಯ ಮೇಲೆ ಅಭಿಮಾನ ಇಲ್ಲವೆಂದು ಅರ್ಥವಲ್ಲ. ಕರ್ನಾಟಕದಲ್ಲಿ ಕನ್ನಡ, ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಿನಲ್ಲಿ ತಮಿಳು, ಹೀಗೆ ಆಯಾ ರಾಜ್ಯಗಳಲ್ಲಿ ಅದರದ್ದೇ ಆದ ಸ್ಥಳೀಯತೆಯೇ ಬೆಳೆಯಬೇಕು. ಆ ಮೂಲಕ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿರುಬೇಕು. ಆದರೆ, ಇಂದು ಆಗುತ್ತಿರುವುದೇ ಬೇರೆ. ಇದರ ಹಿಂದೆ ದೊಡ್ಡ ರಾಜಕೀಯವೇ ಇದೆ. ಉತ್ತರ ಭಾರತದವರು ದಕ್ಷಿಣದವರಿಗಿಂತಲೂ ಶ್ರೇಷ್ಠರು ಎನ್ನುವ ಮೇಲರಿಮೆಯ ಭಾವವನ್ನು ಬಿತ್ತುತ್ತಾ ನಮ್ಮ ಬಗ್ಗೆ ಕೀಳರಿಮೆಯನ್ನು ರೂಢಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಕನ್ನಡಪರ ಹೋರಾಟಗಾರರಾದ ಸಾ.ರಾ.ಸುದರ್ಶನ್ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿದಾಗ, “ಬಿಜೆಪಿ ಪಕ್ಷದ ನಾಯಕರು ಸಂಪೂರ್ಣ ಅಧಿಕಾರ ಕಳೆದುಕೊಂಡು, ಕೇಂದ್ರದ ಮತ್ತು ಆರ್.ಎಸ್.ಎಸ್‌ನ ಕೈಗೊಂಬೆಗಳಾಗಿದ್ದಾರೆ. ಹಾಗಾಗಿ ನಾವು ಎಷ್ಟೇ ಪ್ರಯತ್ನಿಸಿದರೂ ಕನ್ನಡಪರ ಅಸ್ಮಿತೆಯನ್ನು ಉಳಿಸಲು ಇವರಿಂದ ಸಾಧ್ಯವಿಲ್ಲ. ಈಗ ವಿರೋಧಪಕ್ಷದಲ್ಲಿರುವವರು ತಾವು ಅಧಿಕಾರದಲ್ಲಿದ್ದಾಗಲೂ ಇಂತಹದ್ದೇ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಈಗ ಅವರೇ ವಿರೋಧಿಸುತ್ತಿದ್ದಾರೆ. ಇದು ನಮ್ಮಲ್ಲಿರುವ ದೊಡ್ಡ ವಿಪರ್ಯಾಸ” ಎಂದು ಹೇಳಿದರು.

ಬನವಾಸಿ ಬಳಗದ ಮುಖಂಡರಾದ ಆನಂದ್ ರವರನ್ನು ಮಾತನಾಡಿಸಿದಾಗ “ಊಟಕ್ಕೆ ಉಪ್ಪಿನಕಾಯಿ ಇದ್ದರೆ ಚೆನ್ನ. ಆದರೆ ಉಪ್ಪಿನಕಾಯಿಯೇ ಊಟವಾದರೆ? ಈಗ ಆಗುತ್ತಿರುವುದೂ ಅದೇ. ನಾಡು ಸಂಸ್ಕೃತಿಗೆ ಕೊಡುಗೆ ಕೊಟ್ಟ ಯಾರದೇ ಹೆಸರನ್ನಾದರೂ ಇಡಿ. ಆದರೆ ಅದೂ ಕೂಡ ನಿಯಮಿತವಾಗಿರಲಿ ಅಷ್ಟೆ. ಅದುಬಿಟ್ಟು ನಮ್ಮ ನಾಡಿಗೂ ಅವರಿಗೂ ಸಂಬಂಧವೇ ಇರದ ವ್ಯಕ್ತಿಯ ಹೆಸರಿಟ್ಟರೆ ಉಪಯೋಗವೇನು? ಪ್ರತಿಯೊಂದು ಪಕ್ಷವೂ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿಯೇ ಹೆಸರಿಟ್ಟರೆ, ನಮ್ಮ ಕನ್ನಡದ ಅಸ್ಮಿತೆ ಉಳಿಯುವುದು ಯಾವಾಗ? ಕಾಂಗ್ರೆಸ್ ನವರು ಬಂದು ರಾಜೀವ್ ಗಾಂಧಿಯ ಹೆಸರೋ ಅಥವಾ ಇಂದಿರಾಗಾಂಧಿಯ ಹೆಸರನ್ನು ಇಟ್ಟರೂ ವಿರೋಧಿಸುತ್ತೇವೆ. ಬಿಜೆಪಿಯವರು ಬಂದು ವಾಜಪೇಯಿಯವರ ಹೆಸರು ಅಥವಾ ನಮ್ಮ ನಾಡಿನವರಲ್ಲದ ಯಾರದೇ ಹೆಸರಿಟ್ಟರೂ ವಿರೋಧಿಸುತ್ತೇವೆ” ಎಂದರು.


ಇದನ್ನೂ ಓದಿ: ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು : ಇದು ಕನ್ನಡಿಗರ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...