Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

- Advertisement -
- Advertisement -

ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ. ಪ್ರಸ್ತುತ ಭಾರತದ ಸ್ಥಿತಿಯ ಬಗ್ಗೆ ಎಚ್. ಎಸ್. ದೊರೆಸ್ವಾಮಿಯವರು ಹೀಗೆ ಬರೆಯುತ್ತಾರೆ.

ಅಂದು ದೇಶದ ಸ್ವಾತಂತ್ರಕ್ಕಾಗಿ ದುಡಿದ ಕ್ರಾಂತಿವೀರರು ಇಂದಿನ ಯುವಕರ ಹೀರೋಗಳಾಗಲಿ ಎಂದು ದಿಶಾಭಾರತ್ ಕೈಗೊಂಡಿರುವ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ದಿಶಾಭಾರತ್ ಪದಾಧಿಕಾರಿ ಗೋಖಲೆ ಉಪನ್ಯಾಸ ಮಾಡಿದರೆಂದು ಪ್ರಜಾವಾಣಿ ಪ್ರಕಟಿಸಿದೆ. ಬ್ರಿಟಿಷರನ್ನು ಮಣಿಸಲು ಶ್ಯಾಮಜಿ ಕೆ ವರ್ಮ ಯುವಕರನ್ನು ಲಂಡನ್ನಿಗೆ ಕಳಿಸಿ ಶಿಕ್ಷಣ ಕೊಡಿಸಿದರು. ಸಾವರ್ಕರ್ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು. ಮದನ್‌ಲಾಲ್ ಡಿಂಗ್ರಾ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೇಡುತೀರಿಸಿಕೊಳ್ಳಲು ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದವರು ಮುಂದಾದರು. ಭಗತ್‌ಸಿಂಗ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತ. ಭಗತ್‌ಸಿಂಗ್ ಮತ್ತು ಅವನ ಇಬ್ಬರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

ಚಂದ್ರಶೇಖರ್ ಅಜಾದ್, ಜಲಿಯಾಲಾಲಾಬಾಗ್ ಪೊದೆಯಲ್ಲಿ ಅಡಗಿಕೊಂಡಿದ್ದಾಗ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರು. ಇವರೆಲ್ಲರೂ ದೇಶಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕರ್ ಅವರು ಕ್ರಾಂತಿಕಾರರಾಗಿದ್ದು ಮಾಂಡಲೆ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದವರು. ಹಠಾತ್ತನೆ ಬ್ರಿಟಿಷರ ಕ್ಷಮಾಪಣೆ ಕೇಳಿ ಅವರು ಹಾಕಿದ ಕರಾರುಗಳಿಗೆ ಒಪ್ಪಿಕೊಂಡು ಸೆರೆಮನೆಯಿಂದ ಹೊರಬಿದ್ದದ್ದು ಕ್ರಾಂತಿಕಾರಿಯ ಲಕ್ಷಣವಲ್ಲದಿದ್ದರೂ ಅವರು ದೇಶಭಕ್ತರೇ. ಇರಲಿ.

ಸ್ವಾತಂತ್ರ್ಯ ಸಂಗ್ರಾಮ ಒಂದು ಮಹಾ ಸಮುದ್ರ. ಆ ಮಹಾಸುಮದ್ರದಲ್ಲಿ ಗಾಂಧಿಯವರದ್ದು ಮತ್ತು ಕಾಂಗ್ರೆಸ್ಸಿನವರದ್ದು ಸಿಂಹಪಾಲು. ಉಳಿದ ನೂರಾರು ಸಣ್ಣ ದೊಡ್ಡ ತೊರೆಗಳು ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾಸಮುದ್ರದಲ್ಲಿ ಲೀನವಾಗಿ ಪಾಲ್ಗೊಂಡವು. ಇವರೆಲ್ಲರ ಒಟ್ಟಿನ ಶ್ರಮದಿಂದ ಸಮರ್ಪಣ ಮನೋಭಾವದಿಂದ ಈ ಹೋರಾಟದಲ್ಲಿ ಜಯ ಲಭಿಸಿತು. ಈ ಹೋರಾಟಗಾರರು ಮಾತ್ರವಲ್ಲ ಕೊನೆಯ ಘಟ್ಟದಲ್ಲಿ ನೌಕಾದಳದ ಭಾರತೀಯ ಯೋಧರು ಬ್ರಿಟಿಷರ ಮೇಲೆ ಬಂಡಾಯ ಹೂಡಿದರು. ಆಗ ಲೇಬರ್ ಪಕ್ಷದ ನಾಯಕ ಅಟ್ಲೀ ಬ್ರಿಟಿಷ್ ಪ್ರಧಾನಿಯಾಗಿದ್ದರು.

ಅಟ್ಲೀ ಭಾರತ ಸ್ವಾತಂತ್ರ್ಯ ಘೋಷಿಸಿದಾಗ ಹಿಂದಿನ ಪ್ರಧಾನಿ ಚರ್ಚಿಲ್ ‘ಅನಾಯಾಸವಾಗಿ ಭಾರತದ ರಾಸ್ಕಲ್ಸ್ ಮತ್ತು ಸ್ಕೌಂಡ್ರೆಲ್‌ಗಳ ಕೈಲಿ ಅಧಿಕಾರ ನೀಡಿ ಹೊರಬಂದೆ’ ಎಂದು ಅಟ್ಲೀಯವರನ್ನು ಟೀಕಿಸಿದರು. ಆಗ ಅಟ್ಲೀ ‘ಭಾರತ ನೌಕಾಪಡೆ ಬಂಡಾಯ ಎದ್ದ ಮೇಲೆ ಅಲ್ಲಿ ಅಧಿಕಾರ ಮುಂದುವರೆಸುವುದು ವಿವೇಕವಲ್ಲ ಅದಕ್ಕಾಗಿ ಅಧಿಕಾರ ಹಸ್ತಾಂತರ ಮಾಡಿದೆ’ ಎಂದು ಉತ್ತರಿಸಿದರು. ಹೀಗಾಗಿ ಭಾರತೀಯ ಸೈನಿಕರೂ ಸ್ವರಾಜ್ಯ ಪ್ರಾಪ್ತಿಗೆ ಕೆಲಸ ಮಾಡಿದವರೇ.

ಇನ್ನು ಈ ಕ್ರಾಂತಿಕಾರಿಗಳ ಹೋರಾಟದ ಇತಿಹಾಸವನ್ನು ಕೆದಕೋಣ. ಕ್ರಾಂತಿಕಾರಿಗಳು ಬ್ರಿಟಿಷರ ಮೇಲೆ ಅಲ್ಲೊಂದು ಇಲ್ಲೊಂದು ಗೆರಿಲ್ಲಾ ಯುದ್ಧಗಳನ್ನು ನಡೆಸಿದರಾದರೂ ಅನೇಕ ಯುವಕರು ವಿದ್ಯಾರ್ಥಿಗಳು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರಾನ್ನಾಗಿ ಕೊಂದರೆ, ಅವರೇ ಗಂಟುಮೂಟೆ ಕಟ್ಟಿಕೊಂಡು ಬ್ರಿಟನ್‌ಗೆ ಓಡಿ ಹೋಗುತ್ತಾರೆ ಆಗ ದೇಶ ಸ್ವಾತಂತ್ರವಾಗುತ್ತದೆ, ನಮ್ಮದೇ ಆಗುತ್ತದೆ ಎಂದು ಭಾವಿಸಿದ್ದರು. ಅದರಂತೆ ನಾಲ್ಕಾರು ಬ್ರಿಟಿಷ್ ಅಧಿಕಾರಿಗಳ ಕೊಲೆಯೂ ಆಯಿತು. ಆದರೆ ಬ್ರಿಟಿಷರು ಹೆದರಿ ಓಡಿ ಹೋದರೆ? ಅಂದಿನ ಬ್ರಿಟಿಷ್ ಸರ್ಕಾರ ವಸಾಹತುಶಾಹಿ ನೀತಿಯನ್ನು ಅನುಸರಿಸಿ ಪ್ರಪಂಚದ ಅನೇಕ ರಾಷ್ಟ್ರಗಳನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿತ್ತು. The Sun Never Sets On The British Empire ಎಂಬುದು ಅಂದಿನ Slogan ಆಗಿತ್ತು. ಇಷ್ಟು ಪ್ರಬಲರಾದ ಇಂಗ್ಲಿಷರು ನಾಲ್ಕು ಜನ ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಮಾತ್ರಕ್ಕೆ ಹೆದರಿ ಹೋಗುತ್ತಾರೆ ಎಂದು ಆ ಕ್ರಾಂತಿಕಾರಿ ಯುವಕರು ಭ್ರಮಾಧೀನರಾದದ್ದು ಒಂದು ದುರಂತವೇ ಸರಿ.

ಈ ಕ್ರಾಂತಿಕಾರಿಗಳ ಅವಿವೇಕ ಯಾವ ಮಟ್ಟ ಮುಟ್ಟಿತು ಅಂದರೆ ಓಬ್ಬ ಕೈಗಾರಿಕೋದ್ಯಮಿಯ ಪುತ್ರ ಕೆಲ ಬ್ರಿಟಿಷ್ ಅಧಿಕಾರಿಗಳನ್ನು ಚಹಾಪಾನಕ್ಕೆ ಆಹ್ವಾನಿಸಿದ. ಆಹ್ವಾನಿತರೆಲ್ಲ ಬಂದು ಚಹಾಪಾನದಲ್ಲಿ ಪಾಲ್ಗೊಂಡರು. ಆಗ ಆ ಯುವಕ ಹಠಾತ್ತಾಗಿ ಬಂದೂಕು ತೆಗೆದು ಇಬ್ಬರು ಆಹ್ವಾನಿತ ಅಧಿಕಾರಿಗಳನ್ನು ಕೊಂದು ಹಾಕಿದ.

ಈ ಘಟನೆಯನ್ನು ತಿಳಿದುಕೊಂಡ ಮಹಾತ್ಮಾಗಾಂಧಿ, “ಚಹಾ ಪಾನಕ್ಕೆಂದು ಆಹ್ವಾನಿಸಿ ಅವರನ್ನು ಕೊಲೆ ಮಾಡಿದ್ದು ಹೀನಾಯ ಕೃತ್ಯ. ಅದರ ಬದಲು ಅವರ ಕೈಗೂ ಒಂದೊಂದು ಬಂದೂಕ ಕೊಟ್ಟು ಈ ಯುವಕ ಹೋರಾಟ ಮಾಡಿದ್ದರೆ ನಾನು ಅವನನ್ನು ಮೆಚ್ಚಿಕೊಳ್ಳುತ್ತಿದೆ” ಎಂದರು. ಇದು ಕ್ರಾಂತಿಕಾರಿ ಹುಡುಗರ ಇತಿಹಾಸ.

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ.

,

ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಸ್ಥೆಗಳು, ಆರ್‌ಎಸ್‌ಎಸ್, ಬಿಜೆಪಿಗಳು ಈ ಸೆಕ್ಯುಲರ್ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಯುವಕರಿಗೆ ಹಿಂದಿನ ಕ್ರಾಂತಿವೀರರನ್ನು ನಿಮ್ಮ ಆದರ್ಶವಾಗಿ ಮಾಡಿಕೊಳ್ಳಿರಿ ಎಂದು ಬೋಧಿಸುತ್ತಾರೆ ಮತಾಂಧ ಗೋಖಲೆ ಅವರು.

ಆಗ ಆ ಕ್ರಾಂತಿವೀರರು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಸಂಚು ಮಾಡಿದರು. ಈಗ ಮತಾಂಧ ಗೋಖಲೆಯವರು ಸಹಜವಾಗಿ ಹಿಂದು ಮತಾಂಧತೆಯನ್ನು ಒಪ್ಪದ ಜನರ ಮೇಲೆ ಉಗ್ರದಾಳಿ ಮಾಡಿ ಎಂದು ಯುವಕರನ್ನು ಬಾಲಿಷ ಭಾಷೆಯಲ್ಲಿ ಪ್ರಚೋದನೆ ಮಾಡಲು ತೊಡಗಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಖಟ್ಳೆ ಹೂಡಬೇಕು.

ಬ್ರಿಟಿಷರ ಕಾಲದಲ್ಲಿ ಆ ಯುವಕರನ್ನು ಪ್ರಚೋದನೆ ಮಾಡಿ ಅವರ ಕೈಲಿ ದುಷ್ಕೃತ್ಯ ಮಾಡಿಸಿದ್ದನ್ನು ಅಲ್ಲಿಗೆ ಸಮಾಪ್ತಿಗೊಳಿಸಿ ಹಿಂದುತ್ವ ಪ್ರತಿಪಾದನೆಯ ಭರದಲ್ಲಿ ಭಾರತದಲ್ಲಿ ಅಶಾಂತಿ ಉಂಟು ಮಾಡಿ ಸಾಲ್ಗೊಲೆಗೆ ಪ್ರಚೋದನೆ ನೀಡುವ ಅಮಾನುಷ ಬರ್ಬರ ನೀತಿಯನ್ನು ಗೋಖಲೆಯಂತಹ ತಲೆಕೆಟ್ಟ ಹಿಂದು ಮತಾಂಧ ಮಾಡಬಯಸಿದ್ದಾರೇನೋ ಎಂಬ ಆತಂಕ ನನ್ನ ಮನಸ್ಸನ್ನು ಆವರಿಸಿದೆ. ಅಂಥ ಮನಸ್ಸುಗಳಿಗೆ ದೇವರು ಶ್ರೀರಾಮ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೋದಿ, ಷಾಗಳ ಸರ್ಕಾರ ಹಿಂದುತ್ವ ಪ್ರತಿಪಾದಕರ ಮೇಟಿಯಾಗಿದೆ. ಆದರೆ ಅವರ ಕಣ್ಮುಂದೆಯೇ ಯುವಕರನ್ನು ಹಿಂಸಾವೃತ್ತಿಗೆ ಪ್ರಚೋದಿಸುವ ಭಾಷಣಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ನೀತಿಯನ್ನು ಪಾಲಿಸದಿದ್ದರೆ ಅವರು ಭಾರತೀಯರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸರ್ಕಾರ ಕೆಲ ಮತೀಯ ವಿಷ ಹರಡುವ ದುಷ್ಟ ಶಕ್ತಿಗಳನ್ನು ತಮ್ಮ ಸಂಪುಟದ ಮಂತ್ರಿಗಳನ್ನಾಗಿ, ಎಂಪಿಗಳನ್ನಾಗಿ, ರಾಜ್ಯಗಳ ಮೇಲ್ಮನೆ ಸದಸ್ಯರಾಗಿ ನೇಮಕ ಮಾಡುತ್ತಿದ್ದಾರೆ. ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ.

-ಎಚ್.ಎಸ್. ದೊರೆಸ್ವಾಮಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...