Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

- Advertisement -
- Advertisement -

ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ. ಪ್ರಸ್ತುತ ಭಾರತದ ಸ್ಥಿತಿಯ ಬಗ್ಗೆ ಎಚ್. ಎಸ್. ದೊರೆಸ್ವಾಮಿಯವರು ಹೀಗೆ ಬರೆಯುತ್ತಾರೆ.

ಅಂದು ದೇಶದ ಸ್ವಾತಂತ್ರಕ್ಕಾಗಿ ದುಡಿದ ಕ್ರಾಂತಿವೀರರು ಇಂದಿನ ಯುವಕರ ಹೀರೋಗಳಾಗಲಿ ಎಂದು ದಿಶಾಭಾರತ್ ಕೈಗೊಂಡಿರುವ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ದಿಶಾಭಾರತ್ ಪದಾಧಿಕಾರಿ ಗೋಖಲೆ ಉಪನ್ಯಾಸ ಮಾಡಿದರೆಂದು ಪ್ರಜಾವಾಣಿ ಪ್ರಕಟಿಸಿದೆ. ಬ್ರಿಟಿಷರನ್ನು ಮಣಿಸಲು ಶ್ಯಾಮಜಿ ಕೆ ವರ್ಮ ಯುವಕರನ್ನು ಲಂಡನ್ನಿಗೆ ಕಳಿಸಿ ಶಿಕ್ಷಣ ಕೊಡಿಸಿದರು. ಸಾವರ್ಕರ್ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು. ಮದನ್‌ಲಾಲ್ ಡಿಂಗ್ರಾ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೇಡುತೀರಿಸಿಕೊಳ್ಳಲು ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದವರು ಮುಂದಾದರು. ಭಗತ್‌ಸಿಂಗ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತ. ಭಗತ್‌ಸಿಂಗ್ ಮತ್ತು ಅವನ ಇಬ್ಬರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

ಚಂದ್ರಶೇಖರ್ ಅಜಾದ್, ಜಲಿಯಾಲಾಲಾಬಾಗ್ ಪೊದೆಯಲ್ಲಿ ಅಡಗಿಕೊಂಡಿದ್ದಾಗ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರು. ಇವರೆಲ್ಲರೂ ದೇಶಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕರ್ ಅವರು ಕ್ರಾಂತಿಕಾರರಾಗಿದ್ದು ಮಾಂಡಲೆ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದವರು. ಹಠಾತ್ತನೆ ಬ್ರಿಟಿಷರ ಕ್ಷಮಾಪಣೆ ಕೇಳಿ ಅವರು ಹಾಕಿದ ಕರಾರುಗಳಿಗೆ ಒಪ್ಪಿಕೊಂಡು ಸೆರೆಮನೆಯಿಂದ ಹೊರಬಿದ್ದದ್ದು ಕ್ರಾಂತಿಕಾರಿಯ ಲಕ್ಷಣವಲ್ಲದಿದ್ದರೂ ಅವರು ದೇಶಭಕ್ತರೇ. ಇರಲಿ.

ಸ್ವಾತಂತ್ರ್ಯ ಸಂಗ್ರಾಮ ಒಂದು ಮಹಾ ಸಮುದ್ರ. ಆ ಮಹಾಸುಮದ್ರದಲ್ಲಿ ಗಾಂಧಿಯವರದ್ದು ಮತ್ತು ಕಾಂಗ್ರೆಸ್ಸಿನವರದ್ದು ಸಿಂಹಪಾಲು. ಉಳಿದ ನೂರಾರು ಸಣ್ಣ ದೊಡ್ಡ ತೊರೆಗಳು ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾಸಮುದ್ರದಲ್ಲಿ ಲೀನವಾಗಿ ಪಾಲ್ಗೊಂಡವು. ಇವರೆಲ್ಲರ ಒಟ್ಟಿನ ಶ್ರಮದಿಂದ ಸಮರ್ಪಣ ಮನೋಭಾವದಿಂದ ಈ ಹೋರಾಟದಲ್ಲಿ ಜಯ ಲಭಿಸಿತು. ಈ ಹೋರಾಟಗಾರರು ಮಾತ್ರವಲ್ಲ ಕೊನೆಯ ಘಟ್ಟದಲ್ಲಿ ನೌಕಾದಳದ ಭಾರತೀಯ ಯೋಧರು ಬ್ರಿಟಿಷರ ಮೇಲೆ ಬಂಡಾಯ ಹೂಡಿದರು. ಆಗ ಲೇಬರ್ ಪಕ್ಷದ ನಾಯಕ ಅಟ್ಲೀ ಬ್ರಿಟಿಷ್ ಪ್ರಧಾನಿಯಾಗಿದ್ದರು.

ಅಟ್ಲೀ ಭಾರತ ಸ್ವಾತಂತ್ರ್ಯ ಘೋಷಿಸಿದಾಗ ಹಿಂದಿನ ಪ್ರಧಾನಿ ಚರ್ಚಿಲ್ ‘ಅನಾಯಾಸವಾಗಿ ಭಾರತದ ರಾಸ್ಕಲ್ಸ್ ಮತ್ತು ಸ್ಕೌಂಡ್ರೆಲ್‌ಗಳ ಕೈಲಿ ಅಧಿಕಾರ ನೀಡಿ ಹೊರಬಂದೆ’ ಎಂದು ಅಟ್ಲೀಯವರನ್ನು ಟೀಕಿಸಿದರು. ಆಗ ಅಟ್ಲೀ ‘ಭಾರತ ನೌಕಾಪಡೆ ಬಂಡಾಯ ಎದ್ದ ಮೇಲೆ ಅಲ್ಲಿ ಅಧಿಕಾರ ಮುಂದುವರೆಸುವುದು ವಿವೇಕವಲ್ಲ ಅದಕ್ಕಾಗಿ ಅಧಿಕಾರ ಹಸ್ತಾಂತರ ಮಾಡಿದೆ’ ಎಂದು ಉತ್ತರಿಸಿದರು. ಹೀಗಾಗಿ ಭಾರತೀಯ ಸೈನಿಕರೂ ಸ್ವರಾಜ್ಯ ಪ್ರಾಪ್ತಿಗೆ ಕೆಲಸ ಮಾಡಿದವರೇ.

ಇನ್ನು ಈ ಕ್ರಾಂತಿಕಾರಿಗಳ ಹೋರಾಟದ ಇತಿಹಾಸವನ್ನು ಕೆದಕೋಣ. ಕ್ರಾಂತಿಕಾರಿಗಳು ಬ್ರಿಟಿಷರ ಮೇಲೆ ಅಲ್ಲೊಂದು ಇಲ್ಲೊಂದು ಗೆರಿಲ್ಲಾ ಯುದ್ಧಗಳನ್ನು ನಡೆಸಿದರಾದರೂ ಅನೇಕ ಯುವಕರು ವಿದ್ಯಾರ್ಥಿಗಳು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರಾನ್ನಾಗಿ ಕೊಂದರೆ, ಅವರೇ ಗಂಟುಮೂಟೆ ಕಟ್ಟಿಕೊಂಡು ಬ್ರಿಟನ್‌ಗೆ ಓಡಿ ಹೋಗುತ್ತಾರೆ ಆಗ ದೇಶ ಸ್ವಾತಂತ್ರವಾಗುತ್ತದೆ, ನಮ್ಮದೇ ಆಗುತ್ತದೆ ಎಂದು ಭಾವಿಸಿದ್ದರು. ಅದರಂತೆ ನಾಲ್ಕಾರು ಬ್ರಿಟಿಷ್ ಅಧಿಕಾರಿಗಳ ಕೊಲೆಯೂ ಆಯಿತು. ಆದರೆ ಬ್ರಿಟಿಷರು ಹೆದರಿ ಓಡಿ ಹೋದರೆ? ಅಂದಿನ ಬ್ರಿಟಿಷ್ ಸರ್ಕಾರ ವಸಾಹತುಶಾಹಿ ನೀತಿಯನ್ನು ಅನುಸರಿಸಿ ಪ್ರಪಂಚದ ಅನೇಕ ರಾಷ್ಟ್ರಗಳನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿತ್ತು. The Sun Never Sets On The British Empire ಎಂಬುದು ಅಂದಿನ Slogan ಆಗಿತ್ತು. ಇಷ್ಟು ಪ್ರಬಲರಾದ ಇಂಗ್ಲಿಷರು ನಾಲ್ಕು ಜನ ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಮಾತ್ರಕ್ಕೆ ಹೆದರಿ ಹೋಗುತ್ತಾರೆ ಎಂದು ಆ ಕ್ರಾಂತಿಕಾರಿ ಯುವಕರು ಭ್ರಮಾಧೀನರಾದದ್ದು ಒಂದು ದುರಂತವೇ ಸರಿ.

ಈ ಕ್ರಾಂತಿಕಾರಿಗಳ ಅವಿವೇಕ ಯಾವ ಮಟ್ಟ ಮುಟ್ಟಿತು ಅಂದರೆ ಓಬ್ಬ ಕೈಗಾರಿಕೋದ್ಯಮಿಯ ಪುತ್ರ ಕೆಲ ಬ್ರಿಟಿಷ್ ಅಧಿಕಾರಿಗಳನ್ನು ಚಹಾಪಾನಕ್ಕೆ ಆಹ್ವಾನಿಸಿದ. ಆಹ್ವಾನಿತರೆಲ್ಲ ಬಂದು ಚಹಾಪಾನದಲ್ಲಿ ಪಾಲ್ಗೊಂಡರು. ಆಗ ಆ ಯುವಕ ಹಠಾತ್ತಾಗಿ ಬಂದೂಕು ತೆಗೆದು ಇಬ್ಬರು ಆಹ್ವಾನಿತ ಅಧಿಕಾರಿಗಳನ್ನು ಕೊಂದು ಹಾಕಿದ.

ಈ ಘಟನೆಯನ್ನು ತಿಳಿದುಕೊಂಡ ಮಹಾತ್ಮಾಗಾಂಧಿ, “ಚಹಾ ಪಾನಕ್ಕೆಂದು ಆಹ್ವಾನಿಸಿ ಅವರನ್ನು ಕೊಲೆ ಮಾಡಿದ್ದು ಹೀನಾಯ ಕೃತ್ಯ. ಅದರ ಬದಲು ಅವರ ಕೈಗೂ ಒಂದೊಂದು ಬಂದೂಕ ಕೊಟ್ಟು ಈ ಯುವಕ ಹೋರಾಟ ಮಾಡಿದ್ದರೆ ನಾನು ಅವನನ್ನು ಮೆಚ್ಚಿಕೊಳ್ಳುತ್ತಿದೆ” ಎಂದರು. ಇದು ಕ್ರಾಂತಿಕಾರಿ ಹುಡುಗರ ಇತಿಹಾಸ.

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ.

,

ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಸ್ಥೆಗಳು, ಆರ್‌ಎಸ್‌ಎಸ್, ಬಿಜೆಪಿಗಳು ಈ ಸೆಕ್ಯುಲರ್ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಯುವಕರಿಗೆ ಹಿಂದಿನ ಕ್ರಾಂತಿವೀರರನ್ನು ನಿಮ್ಮ ಆದರ್ಶವಾಗಿ ಮಾಡಿಕೊಳ್ಳಿರಿ ಎಂದು ಬೋಧಿಸುತ್ತಾರೆ ಮತಾಂಧ ಗೋಖಲೆ ಅವರು.

ಆಗ ಆ ಕ್ರಾಂತಿವೀರರು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಸಂಚು ಮಾಡಿದರು. ಈಗ ಮತಾಂಧ ಗೋಖಲೆಯವರು ಸಹಜವಾಗಿ ಹಿಂದು ಮತಾಂಧತೆಯನ್ನು ಒಪ್ಪದ ಜನರ ಮೇಲೆ ಉಗ್ರದಾಳಿ ಮಾಡಿ ಎಂದು ಯುವಕರನ್ನು ಬಾಲಿಷ ಭಾಷೆಯಲ್ಲಿ ಪ್ರಚೋದನೆ ಮಾಡಲು ತೊಡಗಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಖಟ್ಳೆ ಹೂಡಬೇಕು.

ಬ್ರಿಟಿಷರ ಕಾಲದಲ್ಲಿ ಆ ಯುವಕರನ್ನು ಪ್ರಚೋದನೆ ಮಾಡಿ ಅವರ ಕೈಲಿ ದುಷ್ಕೃತ್ಯ ಮಾಡಿಸಿದ್ದನ್ನು ಅಲ್ಲಿಗೆ ಸಮಾಪ್ತಿಗೊಳಿಸಿ ಹಿಂದುತ್ವ ಪ್ರತಿಪಾದನೆಯ ಭರದಲ್ಲಿ ಭಾರತದಲ್ಲಿ ಅಶಾಂತಿ ಉಂಟು ಮಾಡಿ ಸಾಲ್ಗೊಲೆಗೆ ಪ್ರಚೋದನೆ ನೀಡುವ ಅಮಾನುಷ ಬರ್ಬರ ನೀತಿಯನ್ನು ಗೋಖಲೆಯಂತಹ ತಲೆಕೆಟ್ಟ ಹಿಂದು ಮತಾಂಧ ಮಾಡಬಯಸಿದ್ದಾರೇನೋ ಎಂಬ ಆತಂಕ ನನ್ನ ಮನಸ್ಸನ್ನು ಆವರಿಸಿದೆ. ಅಂಥ ಮನಸ್ಸುಗಳಿಗೆ ದೇವರು ಶ್ರೀರಾಮ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೋದಿ, ಷಾಗಳ ಸರ್ಕಾರ ಹಿಂದುತ್ವ ಪ್ರತಿಪಾದಕರ ಮೇಟಿಯಾಗಿದೆ. ಆದರೆ ಅವರ ಕಣ್ಮುಂದೆಯೇ ಯುವಕರನ್ನು ಹಿಂಸಾವೃತ್ತಿಗೆ ಪ್ರಚೋದಿಸುವ ಭಾಷಣಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ನೀತಿಯನ್ನು ಪಾಲಿಸದಿದ್ದರೆ ಅವರು ಭಾರತೀಯರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸರ್ಕಾರ ಕೆಲ ಮತೀಯ ವಿಷ ಹರಡುವ ದುಷ್ಟ ಶಕ್ತಿಗಳನ್ನು ತಮ್ಮ ಸಂಪುಟದ ಮಂತ್ರಿಗಳನ್ನಾಗಿ, ಎಂಪಿಗಳನ್ನಾಗಿ, ರಾಜ್ಯಗಳ ಮೇಲ್ಮನೆ ಸದಸ್ಯರಾಗಿ ನೇಮಕ ಮಾಡುತ್ತಿದ್ದಾರೆ. ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ.

-ಎಚ್.ಎಸ್. ದೊರೆಸ್ವಾಮಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...