Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

- Advertisement -
- Advertisement -

ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ. ಪ್ರಸ್ತುತ ಭಾರತದ ಸ್ಥಿತಿಯ ಬಗ್ಗೆ ಎಚ್. ಎಸ್. ದೊರೆಸ್ವಾಮಿಯವರು ಹೀಗೆ ಬರೆಯುತ್ತಾರೆ.

ಅಂದು ದೇಶದ ಸ್ವಾತಂತ್ರಕ್ಕಾಗಿ ದುಡಿದ ಕ್ರಾಂತಿವೀರರು ಇಂದಿನ ಯುವಕರ ಹೀರೋಗಳಾಗಲಿ ಎಂದು ದಿಶಾಭಾರತ್ ಕೈಗೊಂಡಿರುವ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ದಿಶಾಭಾರತ್ ಪದಾಧಿಕಾರಿ ಗೋಖಲೆ ಉಪನ್ಯಾಸ ಮಾಡಿದರೆಂದು ಪ್ರಜಾವಾಣಿ ಪ್ರಕಟಿಸಿದೆ. ಬ್ರಿಟಿಷರನ್ನು ಮಣಿಸಲು ಶ್ಯಾಮಜಿ ಕೆ ವರ್ಮ ಯುವಕರನ್ನು ಲಂಡನ್ನಿಗೆ ಕಳಿಸಿ ಶಿಕ್ಷಣ ಕೊಡಿಸಿದರು. ಸಾವರ್ಕರ್ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು. ಮದನ್‌ಲಾಲ್ ಡಿಂಗ್ರಾ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೇಡುತೀರಿಸಿಕೊಳ್ಳಲು ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದವರು ಮುಂದಾದರು. ಭಗತ್‌ಸಿಂಗ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತ. ಭಗತ್‌ಸಿಂಗ್ ಮತ್ತು ಅವನ ಇಬ್ಬರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

ಚಂದ್ರಶೇಖರ್ ಅಜಾದ್, ಜಲಿಯಾಲಾಲಾಬಾಗ್ ಪೊದೆಯಲ್ಲಿ ಅಡಗಿಕೊಂಡಿದ್ದಾಗ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರು. ಇವರೆಲ್ಲರೂ ದೇಶಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕರ್ ಅವರು ಕ್ರಾಂತಿಕಾರರಾಗಿದ್ದು ಮಾಂಡಲೆ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದವರು. ಹಠಾತ್ತನೆ ಬ್ರಿಟಿಷರ ಕ್ಷಮಾಪಣೆ ಕೇಳಿ ಅವರು ಹಾಕಿದ ಕರಾರುಗಳಿಗೆ ಒಪ್ಪಿಕೊಂಡು ಸೆರೆಮನೆಯಿಂದ ಹೊರಬಿದ್ದದ್ದು ಕ್ರಾಂತಿಕಾರಿಯ ಲಕ್ಷಣವಲ್ಲದಿದ್ದರೂ ಅವರು ದೇಶಭಕ್ತರೇ. ಇರಲಿ.

ಸ್ವಾತಂತ್ರ್ಯ ಸಂಗ್ರಾಮ ಒಂದು ಮಹಾ ಸಮುದ್ರ. ಆ ಮಹಾಸುಮದ್ರದಲ್ಲಿ ಗಾಂಧಿಯವರದ್ದು ಮತ್ತು ಕಾಂಗ್ರೆಸ್ಸಿನವರದ್ದು ಸಿಂಹಪಾಲು. ಉಳಿದ ನೂರಾರು ಸಣ್ಣ ದೊಡ್ಡ ತೊರೆಗಳು ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾಸಮುದ್ರದಲ್ಲಿ ಲೀನವಾಗಿ ಪಾಲ್ಗೊಂಡವು. ಇವರೆಲ್ಲರ ಒಟ್ಟಿನ ಶ್ರಮದಿಂದ ಸಮರ್ಪಣ ಮನೋಭಾವದಿಂದ ಈ ಹೋರಾಟದಲ್ಲಿ ಜಯ ಲಭಿಸಿತು. ಈ ಹೋರಾಟಗಾರರು ಮಾತ್ರವಲ್ಲ ಕೊನೆಯ ಘಟ್ಟದಲ್ಲಿ ನೌಕಾದಳದ ಭಾರತೀಯ ಯೋಧರು ಬ್ರಿಟಿಷರ ಮೇಲೆ ಬಂಡಾಯ ಹೂಡಿದರು. ಆಗ ಲೇಬರ್ ಪಕ್ಷದ ನಾಯಕ ಅಟ್ಲೀ ಬ್ರಿಟಿಷ್ ಪ್ರಧಾನಿಯಾಗಿದ್ದರು.

ಅಟ್ಲೀ ಭಾರತ ಸ್ವಾತಂತ್ರ್ಯ ಘೋಷಿಸಿದಾಗ ಹಿಂದಿನ ಪ್ರಧಾನಿ ಚರ್ಚಿಲ್ ‘ಅನಾಯಾಸವಾಗಿ ಭಾರತದ ರಾಸ್ಕಲ್ಸ್ ಮತ್ತು ಸ್ಕೌಂಡ್ರೆಲ್‌ಗಳ ಕೈಲಿ ಅಧಿಕಾರ ನೀಡಿ ಹೊರಬಂದೆ’ ಎಂದು ಅಟ್ಲೀಯವರನ್ನು ಟೀಕಿಸಿದರು. ಆಗ ಅಟ್ಲೀ ‘ಭಾರತ ನೌಕಾಪಡೆ ಬಂಡಾಯ ಎದ್ದ ಮೇಲೆ ಅಲ್ಲಿ ಅಧಿಕಾರ ಮುಂದುವರೆಸುವುದು ವಿವೇಕವಲ್ಲ ಅದಕ್ಕಾಗಿ ಅಧಿಕಾರ ಹಸ್ತಾಂತರ ಮಾಡಿದೆ’ ಎಂದು ಉತ್ತರಿಸಿದರು. ಹೀಗಾಗಿ ಭಾರತೀಯ ಸೈನಿಕರೂ ಸ್ವರಾಜ್ಯ ಪ್ರಾಪ್ತಿಗೆ ಕೆಲಸ ಮಾಡಿದವರೇ.

ಇನ್ನು ಈ ಕ್ರಾಂತಿಕಾರಿಗಳ ಹೋರಾಟದ ಇತಿಹಾಸವನ್ನು ಕೆದಕೋಣ. ಕ್ರಾಂತಿಕಾರಿಗಳು ಬ್ರಿಟಿಷರ ಮೇಲೆ ಅಲ್ಲೊಂದು ಇಲ್ಲೊಂದು ಗೆರಿಲ್ಲಾ ಯುದ್ಧಗಳನ್ನು ನಡೆಸಿದರಾದರೂ ಅನೇಕ ಯುವಕರು ವಿದ್ಯಾರ್ಥಿಗಳು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರಾನ್ನಾಗಿ ಕೊಂದರೆ, ಅವರೇ ಗಂಟುಮೂಟೆ ಕಟ್ಟಿಕೊಂಡು ಬ್ರಿಟನ್‌ಗೆ ಓಡಿ ಹೋಗುತ್ತಾರೆ ಆಗ ದೇಶ ಸ್ವಾತಂತ್ರವಾಗುತ್ತದೆ, ನಮ್ಮದೇ ಆಗುತ್ತದೆ ಎಂದು ಭಾವಿಸಿದ್ದರು. ಅದರಂತೆ ನಾಲ್ಕಾರು ಬ್ರಿಟಿಷ್ ಅಧಿಕಾರಿಗಳ ಕೊಲೆಯೂ ಆಯಿತು. ಆದರೆ ಬ್ರಿಟಿಷರು ಹೆದರಿ ಓಡಿ ಹೋದರೆ? ಅಂದಿನ ಬ್ರಿಟಿಷ್ ಸರ್ಕಾರ ವಸಾಹತುಶಾಹಿ ನೀತಿಯನ್ನು ಅನುಸರಿಸಿ ಪ್ರಪಂಚದ ಅನೇಕ ರಾಷ್ಟ್ರಗಳನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿತ್ತು. The Sun Never Sets On The British Empire ಎಂಬುದು ಅಂದಿನ Slogan ಆಗಿತ್ತು. ಇಷ್ಟು ಪ್ರಬಲರಾದ ಇಂಗ್ಲಿಷರು ನಾಲ್ಕು ಜನ ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಮಾತ್ರಕ್ಕೆ ಹೆದರಿ ಹೋಗುತ್ತಾರೆ ಎಂದು ಆ ಕ್ರಾಂತಿಕಾರಿ ಯುವಕರು ಭ್ರಮಾಧೀನರಾದದ್ದು ಒಂದು ದುರಂತವೇ ಸರಿ.

ಈ ಕ್ರಾಂತಿಕಾರಿಗಳ ಅವಿವೇಕ ಯಾವ ಮಟ್ಟ ಮುಟ್ಟಿತು ಅಂದರೆ ಓಬ್ಬ ಕೈಗಾರಿಕೋದ್ಯಮಿಯ ಪುತ್ರ ಕೆಲ ಬ್ರಿಟಿಷ್ ಅಧಿಕಾರಿಗಳನ್ನು ಚಹಾಪಾನಕ್ಕೆ ಆಹ್ವಾನಿಸಿದ. ಆಹ್ವಾನಿತರೆಲ್ಲ ಬಂದು ಚಹಾಪಾನದಲ್ಲಿ ಪಾಲ್ಗೊಂಡರು. ಆಗ ಆ ಯುವಕ ಹಠಾತ್ತಾಗಿ ಬಂದೂಕು ತೆಗೆದು ಇಬ್ಬರು ಆಹ್ವಾನಿತ ಅಧಿಕಾರಿಗಳನ್ನು ಕೊಂದು ಹಾಕಿದ.

ಈ ಘಟನೆಯನ್ನು ತಿಳಿದುಕೊಂಡ ಮಹಾತ್ಮಾಗಾಂಧಿ, “ಚಹಾ ಪಾನಕ್ಕೆಂದು ಆಹ್ವಾನಿಸಿ ಅವರನ್ನು ಕೊಲೆ ಮಾಡಿದ್ದು ಹೀನಾಯ ಕೃತ್ಯ. ಅದರ ಬದಲು ಅವರ ಕೈಗೂ ಒಂದೊಂದು ಬಂದೂಕ ಕೊಟ್ಟು ಈ ಯುವಕ ಹೋರಾಟ ಮಾಡಿದ್ದರೆ ನಾನು ಅವನನ್ನು ಮೆಚ್ಚಿಕೊಳ್ಳುತ್ತಿದೆ” ಎಂದರು. ಇದು ಕ್ರಾಂತಿಕಾರಿ ಹುಡುಗರ ಇತಿಹಾಸ.

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ.

,

ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಸ್ಥೆಗಳು, ಆರ್‌ಎಸ್‌ಎಸ್, ಬಿಜೆಪಿಗಳು ಈ ಸೆಕ್ಯುಲರ್ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಯುವಕರಿಗೆ ಹಿಂದಿನ ಕ್ರಾಂತಿವೀರರನ್ನು ನಿಮ್ಮ ಆದರ್ಶವಾಗಿ ಮಾಡಿಕೊಳ್ಳಿರಿ ಎಂದು ಬೋಧಿಸುತ್ತಾರೆ ಮತಾಂಧ ಗೋಖಲೆ ಅವರು.

ಆಗ ಆ ಕ್ರಾಂತಿವೀರರು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಸಂಚು ಮಾಡಿದರು. ಈಗ ಮತಾಂಧ ಗೋಖಲೆಯವರು ಸಹಜವಾಗಿ ಹಿಂದು ಮತಾಂಧತೆಯನ್ನು ಒಪ್ಪದ ಜನರ ಮೇಲೆ ಉಗ್ರದಾಳಿ ಮಾಡಿ ಎಂದು ಯುವಕರನ್ನು ಬಾಲಿಷ ಭಾಷೆಯಲ್ಲಿ ಪ್ರಚೋದನೆ ಮಾಡಲು ತೊಡಗಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಖಟ್ಳೆ ಹೂಡಬೇಕು.

ಬ್ರಿಟಿಷರ ಕಾಲದಲ್ಲಿ ಆ ಯುವಕರನ್ನು ಪ್ರಚೋದನೆ ಮಾಡಿ ಅವರ ಕೈಲಿ ದುಷ್ಕೃತ್ಯ ಮಾಡಿಸಿದ್ದನ್ನು ಅಲ್ಲಿಗೆ ಸಮಾಪ್ತಿಗೊಳಿಸಿ ಹಿಂದುತ್ವ ಪ್ರತಿಪಾದನೆಯ ಭರದಲ್ಲಿ ಭಾರತದಲ್ಲಿ ಅಶಾಂತಿ ಉಂಟು ಮಾಡಿ ಸಾಲ್ಗೊಲೆಗೆ ಪ್ರಚೋದನೆ ನೀಡುವ ಅಮಾನುಷ ಬರ್ಬರ ನೀತಿಯನ್ನು ಗೋಖಲೆಯಂತಹ ತಲೆಕೆಟ್ಟ ಹಿಂದು ಮತಾಂಧ ಮಾಡಬಯಸಿದ್ದಾರೇನೋ ಎಂಬ ಆತಂಕ ನನ್ನ ಮನಸ್ಸನ್ನು ಆವರಿಸಿದೆ. ಅಂಥ ಮನಸ್ಸುಗಳಿಗೆ ದೇವರು ಶ್ರೀರಾಮ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೋದಿ, ಷಾಗಳ ಸರ್ಕಾರ ಹಿಂದುತ್ವ ಪ್ರತಿಪಾದಕರ ಮೇಟಿಯಾಗಿದೆ. ಆದರೆ ಅವರ ಕಣ್ಮುಂದೆಯೇ ಯುವಕರನ್ನು ಹಿಂಸಾವೃತ್ತಿಗೆ ಪ್ರಚೋದಿಸುವ ಭಾಷಣಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ನೀತಿಯನ್ನು ಪಾಲಿಸದಿದ್ದರೆ ಅವರು ಭಾರತೀಯರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸರ್ಕಾರ ಕೆಲ ಮತೀಯ ವಿಷ ಹರಡುವ ದುಷ್ಟ ಶಕ್ತಿಗಳನ್ನು ತಮ್ಮ ಸಂಪುಟದ ಮಂತ್ರಿಗಳನ್ನಾಗಿ, ಎಂಪಿಗಳನ್ನಾಗಿ, ರಾಜ್ಯಗಳ ಮೇಲ್ಮನೆ ಸದಸ್ಯರಾಗಿ ನೇಮಕ ಮಾಡುತ್ತಿದ್ದಾರೆ. ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ.

-ಎಚ್.ಎಸ್. ದೊರೆಸ್ವಾಮಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...