Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಮತಾಂಧರ ಸಮಾಜ ಒಡೆಯುವ ಕೆಲಸವನ್ನು ನಿಯಂತ್ರಿಸುತ್ತಿಲ್ಲ: ಎಚ್. ಎಸ್. ದೊರೆಸ್ವಾಮಿ

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ. ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

- Advertisement -
- Advertisement -

ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ. ಪ್ರಸ್ತುತ ಭಾರತದ ಸ್ಥಿತಿಯ ಬಗ್ಗೆ ಎಚ್. ಎಸ್. ದೊರೆಸ್ವಾಮಿಯವರು ಹೀಗೆ ಬರೆಯುತ್ತಾರೆ.

ಅಂದು ದೇಶದ ಸ್ವಾತಂತ್ರಕ್ಕಾಗಿ ದುಡಿದ ಕ್ರಾಂತಿವೀರರು ಇಂದಿನ ಯುವಕರ ಹೀರೋಗಳಾಗಲಿ ಎಂದು ದಿಶಾಭಾರತ್ ಕೈಗೊಂಡಿರುವ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ದಿಶಾಭಾರತ್ ಪದಾಧಿಕಾರಿ ಗೋಖಲೆ ಉಪನ್ಯಾಸ ಮಾಡಿದರೆಂದು ಪ್ರಜಾವಾಣಿ ಪ್ರಕಟಿಸಿದೆ. ಬ್ರಿಟಿಷರನ್ನು ಮಣಿಸಲು ಶ್ಯಾಮಜಿ ಕೆ ವರ್ಮ ಯುವಕರನ್ನು ಲಂಡನ್ನಿಗೆ ಕಳಿಸಿ ಶಿಕ್ಷಣ ಕೊಡಿಸಿದರು. ಸಾವರ್ಕರ್ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು. ಮದನ್‌ಲಾಲ್ ಡಿಂಗ್ರಾ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೇಡುತೀರಿಸಿಕೊಳ್ಳಲು ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್ ಮುಂತಾದವರು ಮುಂದಾದರು. ಭಗತ್‌ಸಿಂಗ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಬ್ರಿಟಿಷ್ ಅಧಿಕಾರಿಯೊಬ್ಬ ಸತ್ತ. ಭಗತ್‌ಸಿಂಗ್ ಮತ್ತು ಅವನ ಇಬ್ಬರು ಸಹಚರರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

ಚಂದ್ರಶೇಖರ್ ಅಜಾದ್, ಜಲಿಯಾಲಾಲಾಬಾಗ್ ಪೊದೆಯಲ್ಲಿ ಅಡಗಿಕೊಂಡಿದ್ದಾಗ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರು. ಇವರೆಲ್ಲರೂ ದೇಶಭಕ್ತರು ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕರ್ ಅವರು ಕ್ರಾಂತಿಕಾರರಾಗಿದ್ದು ಮಾಂಡಲೆ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸುತ್ತಿದ್ದವರು. ಹಠಾತ್ತನೆ ಬ್ರಿಟಿಷರ ಕ್ಷಮಾಪಣೆ ಕೇಳಿ ಅವರು ಹಾಕಿದ ಕರಾರುಗಳಿಗೆ ಒಪ್ಪಿಕೊಂಡು ಸೆರೆಮನೆಯಿಂದ ಹೊರಬಿದ್ದದ್ದು ಕ್ರಾಂತಿಕಾರಿಯ ಲಕ್ಷಣವಲ್ಲದಿದ್ದರೂ ಅವರು ದೇಶಭಕ್ತರೇ. ಇರಲಿ.

ಸ್ವಾತಂತ್ರ್ಯ ಸಂಗ್ರಾಮ ಒಂದು ಮಹಾ ಸಮುದ್ರ. ಆ ಮಹಾಸುಮದ್ರದಲ್ಲಿ ಗಾಂಧಿಯವರದ್ದು ಮತ್ತು ಕಾಂಗ್ರೆಸ್ಸಿನವರದ್ದು ಸಿಂಹಪಾಲು. ಉಳಿದ ನೂರಾರು ಸಣ್ಣ ದೊಡ್ಡ ತೊರೆಗಳು ಸ್ವಾತಂತ್ರ್ಯ ಸಂಗ್ರಾಮವೆಂಬ ಮಹಾಸಮುದ್ರದಲ್ಲಿ ಲೀನವಾಗಿ ಪಾಲ್ಗೊಂಡವು. ಇವರೆಲ್ಲರ ಒಟ್ಟಿನ ಶ್ರಮದಿಂದ ಸಮರ್ಪಣ ಮನೋಭಾವದಿಂದ ಈ ಹೋರಾಟದಲ್ಲಿ ಜಯ ಲಭಿಸಿತು. ಈ ಹೋರಾಟಗಾರರು ಮಾತ್ರವಲ್ಲ ಕೊನೆಯ ಘಟ್ಟದಲ್ಲಿ ನೌಕಾದಳದ ಭಾರತೀಯ ಯೋಧರು ಬ್ರಿಟಿಷರ ಮೇಲೆ ಬಂಡಾಯ ಹೂಡಿದರು. ಆಗ ಲೇಬರ್ ಪಕ್ಷದ ನಾಯಕ ಅಟ್ಲೀ ಬ್ರಿಟಿಷ್ ಪ್ರಧಾನಿಯಾಗಿದ್ದರು.

ಅಟ್ಲೀ ಭಾರತ ಸ್ವಾತಂತ್ರ್ಯ ಘೋಷಿಸಿದಾಗ ಹಿಂದಿನ ಪ್ರಧಾನಿ ಚರ್ಚಿಲ್ ‘ಅನಾಯಾಸವಾಗಿ ಭಾರತದ ರಾಸ್ಕಲ್ಸ್ ಮತ್ತು ಸ್ಕೌಂಡ್ರೆಲ್‌ಗಳ ಕೈಲಿ ಅಧಿಕಾರ ನೀಡಿ ಹೊರಬಂದೆ’ ಎಂದು ಅಟ್ಲೀಯವರನ್ನು ಟೀಕಿಸಿದರು. ಆಗ ಅಟ್ಲೀ ‘ಭಾರತ ನೌಕಾಪಡೆ ಬಂಡಾಯ ಎದ್ದ ಮೇಲೆ ಅಲ್ಲಿ ಅಧಿಕಾರ ಮುಂದುವರೆಸುವುದು ವಿವೇಕವಲ್ಲ ಅದಕ್ಕಾಗಿ ಅಧಿಕಾರ ಹಸ್ತಾಂತರ ಮಾಡಿದೆ’ ಎಂದು ಉತ್ತರಿಸಿದರು. ಹೀಗಾಗಿ ಭಾರತೀಯ ಸೈನಿಕರೂ ಸ್ವರಾಜ್ಯ ಪ್ರಾಪ್ತಿಗೆ ಕೆಲಸ ಮಾಡಿದವರೇ.

ಇನ್ನು ಈ ಕ್ರಾಂತಿಕಾರಿಗಳ ಹೋರಾಟದ ಇತಿಹಾಸವನ್ನು ಕೆದಕೋಣ. ಕ್ರಾಂತಿಕಾರಿಗಳು ಬ್ರಿಟಿಷರ ಮೇಲೆ ಅಲ್ಲೊಂದು ಇಲ್ಲೊಂದು ಗೆರಿಲ್ಲಾ ಯುದ್ಧಗಳನ್ನು ನಡೆಸಿದರಾದರೂ ಅನೇಕ ಯುವಕರು ವಿದ್ಯಾರ್ಥಿಗಳು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರಾನ್ನಾಗಿ ಕೊಂದರೆ, ಅವರೇ ಗಂಟುಮೂಟೆ ಕಟ್ಟಿಕೊಂಡು ಬ್ರಿಟನ್‌ಗೆ ಓಡಿ ಹೋಗುತ್ತಾರೆ ಆಗ ದೇಶ ಸ್ವಾತಂತ್ರವಾಗುತ್ತದೆ, ನಮ್ಮದೇ ಆಗುತ್ತದೆ ಎಂದು ಭಾವಿಸಿದ್ದರು. ಅದರಂತೆ ನಾಲ್ಕಾರು ಬ್ರಿಟಿಷ್ ಅಧಿಕಾರಿಗಳ ಕೊಲೆಯೂ ಆಯಿತು. ಆದರೆ ಬ್ರಿಟಿಷರು ಹೆದರಿ ಓಡಿ ಹೋದರೆ? ಅಂದಿನ ಬ್ರಿಟಿಷ್ ಸರ್ಕಾರ ವಸಾಹತುಶಾಹಿ ನೀತಿಯನ್ನು ಅನುಸರಿಸಿ ಪ್ರಪಂಚದ ಅನೇಕ ರಾಷ್ಟ್ರಗಳನ್ನು ತನ್ನ ಅಡಿಯಾಳಾಗಿ ಮಾಡಿಕೊಂಡಿತ್ತು. The Sun Never Sets On The British Empire ಎಂಬುದು ಅಂದಿನ Slogan ಆಗಿತ್ತು. ಇಷ್ಟು ಪ್ರಬಲರಾದ ಇಂಗ್ಲಿಷರು ನಾಲ್ಕು ಜನ ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಮಾತ್ರಕ್ಕೆ ಹೆದರಿ ಹೋಗುತ್ತಾರೆ ಎಂದು ಆ ಕ್ರಾಂತಿಕಾರಿ ಯುವಕರು ಭ್ರಮಾಧೀನರಾದದ್ದು ಒಂದು ದುರಂತವೇ ಸರಿ.

ಈ ಕ್ರಾಂತಿಕಾರಿಗಳ ಅವಿವೇಕ ಯಾವ ಮಟ್ಟ ಮುಟ್ಟಿತು ಅಂದರೆ ಓಬ್ಬ ಕೈಗಾರಿಕೋದ್ಯಮಿಯ ಪುತ್ರ ಕೆಲ ಬ್ರಿಟಿಷ್ ಅಧಿಕಾರಿಗಳನ್ನು ಚಹಾಪಾನಕ್ಕೆ ಆಹ್ವಾನಿಸಿದ. ಆಹ್ವಾನಿತರೆಲ್ಲ ಬಂದು ಚಹಾಪಾನದಲ್ಲಿ ಪಾಲ್ಗೊಂಡರು. ಆಗ ಆ ಯುವಕ ಹಠಾತ್ತಾಗಿ ಬಂದೂಕು ತೆಗೆದು ಇಬ್ಬರು ಆಹ್ವಾನಿತ ಅಧಿಕಾರಿಗಳನ್ನು ಕೊಂದು ಹಾಕಿದ.

ಈ ಘಟನೆಯನ್ನು ತಿಳಿದುಕೊಂಡ ಮಹಾತ್ಮಾಗಾಂಧಿ, “ಚಹಾ ಪಾನಕ್ಕೆಂದು ಆಹ್ವಾನಿಸಿ ಅವರನ್ನು ಕೊಲೆ ಮಾಡಿದ್ದು ಹೀನಾಯ ಕೃತ್ಯ. ಅದರ ಬದಲು ಅವರ ಕೈಗೂ ಒಂದೊಂದು ಬಂದೂಕ ಕೊಟ್ಟು ಈ ಯುವಕ ಹೋರಾಟ ಮಾಡಿದ್ದರೆ ನಾನು ಅವನನ್ನು ಮೆಚ್ಚಿಕೊಳ್ಳುತ್ತಿದೆ” ಎಂದರು. ಇದು ಕ್ರಾಂತಿಕಾರಿ ಹುಡುಗರ ಇತಿಹಾಸ.

ಭಾರತ ಈಗ ಸ್ವತಂತ್ರ ದೇಶವಾಗಿದೆ. ರಾಜ್ಯಾಂಗ ರಚನೆ ಮಾಡಿಕೊಂಡಿದ್ದೇವೆ. ನಮ್ಮದು ಜಾತ್ಯತೀತ ರಾಷ್ಟ್ರ.

,

ಭಾರತೀಯರ ಮೂಲಭೂತ ಹಕ್ಕುಗಳನ್ನೂ ಸಮಾನತೆ, ಸಹಿಷ್ಣುತೆಗಳನ್ನೂ ನಮ್ಮ ರಾಜ್ಯಾಂಗ ಎತ್ತಿ ಹಿಡಿದಿದೆ.

ಈ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಸ್ಥೆಗಳು, ಆರ್‌ಎಸ್‌ಎಸ್, ಬಿಜೆಪಿಗಳು ಈ ಸೆಕ್ಯುಲರ್ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಯುವಕರಿಗೆ ಹಿಂದಿನ ಕ್ರಾಂತಿವೀರರನ್ನು ನಿಮ್ಮ ಆದರ್ಶವಾಗಿ ಮಾಡಿಕೊಳ್ಳಿರಿ ಎಂದು ಬೋಧಿಸುತ್ತಾರೆ ಮತಾಂಧ ಗೋಖಲೆ ಅವರು.

ಆಗ ಆ ಕ್ರಾಂತಿವೀರರು ಬ್ರಿಟಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಸಂಚು ಮಾಡಿದರು. ಈಗ ಮತಾಂಧ ಗೋಖಲೆಯವರು ಸಹಜವಾಗಿ ಹಿಂದು ಮತಾಂಧತೆಯನ್ನು ಒಪ್ಪದ ಜನರ ಮೇಲೆ ಉಗ್ರದಾಳಿ ಮಾಡಿ ಎಂದು ಯುವಕರನ್ನು ಬಾಲಿಷ ಭಾಷೆಯಲ್ಲಿ ಪ್ರಚೋದನೆ ಮಾಡಲು ತೊಡಗಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಖಟ್ಳೆ ಹೂಡಬೇಕು.

ಬ್ರಿಟಿಷರ ಕಾಲದಲ್ಲಿ ಆ ಯುವಕರನ್ನು ಪ್ರಚೋದನೆ ಮಾಡಿ ಅವರ ಕೈಲಿ ದುಷ್ಕೃತ್ಯ ಮಾಡಿಸಿದ್ದನ್ನು ಅಲ್ಲಿಗೆ ಸಮಾಪ್ತಿಗೊಳಿಸಿ ಹಿಂದುತ್ವ ಪ್ರತಿಪಾದನೆಯ ಭರದಲ್ಲಿ ಭಾರತದಲ್ಲಿ ಅಶಾಂತಿ ಉಂಟು ಮಾಡಿ ಸಾಲ್ಗೊಲೆಗೆ ಪ್ರಚೋದನೆ ನೀಡುವ ಅಮಾನುಷ ಬರ್ಬರ ನೀತಿಯನ್ನು ಗೋಖಲೆಯಂತಹ ತಲೆಕೆಟ್ಟ ಹಿಂದು ಮತಾಂಧ ಮಾಡಬಯಸಿದ್ದಾರೇನೋ ಎಂಬ ಆತಂಕ ನನ್ನ ಮನಸ್ಸನ್ನು ಆವರಿಸಿದೆ. ಅಂಥ ಮನಸ್ಸುಗಳಿಗೆ ದೇವರು ಶ್ರೀರಾಮ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ಮೋದಿ, ಷಾಗಳ ಸರ್ಕಾರ ಹಿಂದುತ್ವ ಪ್ರತಿಪಾದಕರ ಮೇಟಿಯಾಗಿದೆ. ಆದರೆ ಅವರ ಕಣ್ಮುಂದೆಯೇ ಯುವಕರನ್ನು ಹಿಂಸಾವೃತ್ತಿಗೆ ಪ್ರಚೋದಿಸುವ ಭಾಷಣಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವ ನೀತಿಯನ್ನು ಪಾಲಿಸದಿದ್ದರೆ ಅವರು ಭಾರತೀಯರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸರ್ಕಾರ ಕೆಲ ಮತೀಯ ವಿಷ ಹರಡುವ ದುಷ್ಟ ಶಕ್ತಿಗಳನ್ನು ತಮ್ಮ ಸಂಪುಟದ ಮಂತ್ರಿಗಳನ್ನಾಗಿ, ಎಂಪಿಗಳನ್ನಾಗಿ, ರಾಜ್ಯಗಳ ಮೇಲ್ಮನೆ ಸದಸ್ಯರಾಗಿ ನೇಮಕ ಮಾಡುತ್ತಿದ್ದಾರೆ. ಈ ಮತಾಂಧರು ಸಮಾಜ ಒಡೆಯುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಲ್ಲಣಗೊಳಿಸುವ ವಿಚಾರ.

-ಎಚ್.ಎಸ್. ದೊರೆಸ್ವಾಮಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....