Homeಮುಖಪುಟಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

ಕಾದಂಬರಿ ಆಧಾರಿತ ಹಾಗೂ ಮೂಲ ಚಿತ್ರಕಥೆಗಳು

- Advertisement -
- Advertisement -

| ರಾಜಶೇಖರ್ ಅಕ್ಕಿ |

“ಇದೇನು ನಾಗರಹಾವೋ, ಕೇರೇ ಹಾವೋ?” ತರಾಸು ನಾಗರಹಾವು ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆ.
ಯಾವುದೋ ಒಂದು ಘಟನೆ, ಆ ಘಟನೆಯ ಸುತ್ತ ಆಗುವ ವಿದ್ಯಮಾನಗಳು, ಪತ್ರಿಕೆಯೊಂದರಲ್ಲಿಯ ಒಂದು ವರದಿ, ನಮಗೆ ಪರಿಚಯದ ಅಥವಾ ಎಲ್ಲೋ ಕೇಳಿದ ಯಾರದೋ ಒಂದು ಸಾಹಸದ, ದುಃಖದ ಕಥೆ, ಇವೆಲ್ಲವುಗಳೂ ಒಂದು ಸಿನೆಮಾಗೆ ಕಥೆಯಾಗಬಲ್ಲ ಸಾಧ್ಯತೆ ಹೊಂದಿರುತ್ತವೆ. (ನೆನಪಿಡಿ, ಇಲ್ಲಿ ಬರೆಯುತ್ತಿರುವುದು ಸುಮಾರು ಎರಡು ಗಂಟೆಗಳ ಪೂರ್ಣಾವಧಿ ಸಿನೆಮಾ ಬಗ್ಗೆ ಮಾತ್ರ) ಆದರೆ ಅವೆಲ್ಲವುಗಳೂ ಚಿತ್ರಕಥೆಯಾಗುವುದಿಲ್ಲ. ನಮಗೆ ತಿಳಿದಿರುವ ಆ ಘಟನೆ ಕೇವಲ ಘಟನೆಯಾಗಿ ಮಾತ್ರ ಉಳಿಯಬಲ್ಲದು, ಪೂರ್ಣಪ್ರಮಾಣದ ಚಿತ್ರಕಥೆಯಾಗಬೇಕಾದರೆ ಇನ್ನೂ ಅನೇಕ ಅಂಶಗಳನ್ನು ಹಾಕಬೇಕಾಗುತ್ತದೆ. ಆಗ ಎದುರಾಗುವ ಸಮಸ್ಯೆಗಳೂ ಅನೇಕ.

ಒಂದು ಘಟನೆಯನ್ನು ಚಿತ್ರಕಥೆಯನ್ನಾಗಿಸುವ ಭರದಲ್ಲಿ ಅದಕ್ಕೆ ಇತರ ಅನೇಕ ಅಂಶಗಳನ್ನು ತುಂಬಿದಾಗ (ಇಲ್ಲಿ ಕಾಮೆಡಿ ಟ್ರ್ಯಾಕ್ ಅಥವಾ ಫೈಟ್ ಸಿಕ್ವೆನ್ಸ್ ಬಗ್ಗೆ ಹೇಳುತ್ತಿಲ್ಲ) ಆ ಕಥೆಗೆ ಪ್ರೇರಕವಾದ ಘಟನೆಯೇ ಗೌಣವಾಗಿಬಿಟ್ಟರೆ? ಹಾಗೆ ಆಗಿರುವ ಉದಾಹರಣೆಗಳು ಉಂಟು. ಆಗ ಕೇಳಬೇಕಾದ ಪ್ರಶ್ನೆ; ನಾವು ಯಾವ ಕಥೆಯನ್ನು ಹೇಳಲು ಬಯಸುತ್ತಿದ್ದೇವೆ? ಆ ಪ್ರಶ್ನೆಗೆ ಕೇವಲ ನಾಲ್ಕೈದು ವಾಕ್ಯಗಳಲ್ಲಿ ಉತ್ತರ ನೀಡಬೇಕು. ಆ ನಾಲ್ಕೈದು ವಾಕ್ಯಗಳಲ್ಲಿ ಮೂಲ ಘಟನೆಯೇ ಕಾಣಿಸಿಕೊಳ್ಳದಿದ್ದರೆ? ಬಿಟ್ಟುಬಿಡಿ, ಏಕೆಂದರೆ, ನಾವು ಬದ್ಧರಾಗಿರಬೇಕಾದದ್ದು ನಮ್ಮ ಕಥೆಗೇ ಹೊರತು ಆ ಕಥೆಗೆ ಕಾರಣೀಭೂತವಾಗಿರುವ ಘಟನೆಗೆ ಅಲ್ಲ. ಆದರೆ ಆ ಘಟನೆಗೂ ಮತ್ತು ಈಗ ಮೂಡಿಬಂದಿರುವ ಕಥೆಗೂ ಇರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಲೇಬೇಕು.

ಇನ್ನು, ಈ ಎಲ್ಲ ಘಟನೆಗಳು, ವರದಿಗಳು, ಸ್ನೇಹಿತರ, ಪರಿಚಿತರ ಅಥವಾ ಅಪರಿಚಿತರ ಕಥೆಗಳು ಚಿತ್ರಕಥೆಯಾಗುವುದಿಲ್ಲ. ಅಲ್ಲಿಯ ಕಥೆಗಳು ಎರಡು ಗಂಟೆಗಳ ಕಾಲ ನೋಡುಗರನ್ನು ಹಿಡಿದಿಡುವಷ್ಟು ಸತ್ವವನ್ನು ಹೊಂದಿರುವುದಿಲ್ಲ ಅಥವಾ ಆ ಕಥೆಯನ್ನು ಒಂದು ಚಿತ್ರಕಥೆಗೆ ಇರಬೇಕಾದ ಸ್ಟ್ರಕ್ಚರ್‍ನಲ್ಲಿ ಕೂಡಿಸುವುದು ಆಗದೇ ಇರಬಹುದು. ಆಗ ಒಂದೋ ಅವುಗಳನ್ನು ಕೈಬಿಡಬೇಕಾಗುತ್ತದೆ ಅಥವಾ ಆ ವರದಿ ಅಥವಾ ಘಟನೆ ನಮಗೆ ಯಾವ ಕಾರಣಕ್ಕೆ ಚಿತ್ರಕಥೆ ಬರೆಯಬೇಕೆಂದು ಪ್ರಚೋದಿಸಿತು ಎನ್ನುವ ಉತ್ತರವನ್ನು ಹುಡುಕಿ, ಆ ಅಂಶದ ಮೇಲೆಯೇ ಕಥೆಯನ್ನು ಹೆಣೆಯಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. (ಚಿತ್ರಕಥೆ ಬರೆಯುವುದು ಸುಲಭದ ಕೆಲಸ ಎಂದು ಯಾರೂ ಹೇಳಿಲ್ಲ. ಇದರ ಬಗ್ಗೆ ಇನ್ನೊಂದು ಲೇಖನ ಈಗಾಗಲೇ ಬರೆದಿದ್ದೇನೆ.)

ಈ ರೀತಿ ಕಷ್ಟಪಟ್ಟು ಬರೆದ ಚಿತ್ರಕಥೆಗಳನ್ನು ಮೂಲಚಿತ್ರಕಥೆಗಳು (original screenplay) ಎನ್ನಲಾಗುತ್ತದೆ. ಪ್ರಖ್ಯಾತ ಆಸ್ಕರ್ ಪ್ರಶಸ್ತಿಗಳಲ್ಲಿ ಒಂದು ಪ್ರಶಸ್ತಿ ಒರಿಜಿನಲ್ ಸ್ಕ್ರೀನ್‍ಪ್ಲೇಗೆ ಮೀಸಲಿಡಲಾಗಿದೆ. ಇನ್ನು ಕಥೆ ಕಾದಂಬರಿಗಳನ್ನು ಆಧರಿಸಿ ಬರೆದ ಚಿತ್ರಕಥೆಗಳು; ಅವುಗಳ ಪಯಣವೂ ಅಷ್ಟೇ ರೋಚಕವಾಗಿದೆ. ಮೊದಲು ಕೆಲವು ಉದಾಹರಣೆಗಳನ್ನು ನೋಡುವ.

ಪಾಲ್ ಥಾಮಸ್ ಆ್ಯಂಡರ್ಸನ್ ನಿರ್ದೇಶಿಸಿದ ‘ದೇರ್ ವಿಲ್ ಬಿ ಬ್ಲಡ್’ ಚಿತ್ರ ಅಪ್ಟನ್ ಸಿಂಕ್ಲೇರ್ ಅವರ ಆಯಿಲ್ ಎನ್ನುವ ಕಾದಂಬರಿಯನ್ನು ಆಧರಿಸಿದ ಚಿತ್ರ ಎಂದು ಹೇಳಲಾಗಿತ್ತು. ಈ ಚಿತ್ರವನ್ನು ಅತ್ಯಂತ ಇಷ್ಟಪಟ್ಟ ನಾನು ಕಾದಂಬರಿಯನ್ನು ಪಡೆದು ಓದಲಾರಂಭಿಸಿದೆ. ಕೆಲವೇ ಕೆಲವು ಸಾಮ್ಯತೆಗಳನ್ನು ಮತ್ತು ಆ ಚಿತ್ರ ನಡೆಯುವ ಅವಧಿಯನ್ನು ಬಿಟ್ಟರೆ ಚಿತ್ರಕ್ಕೂ ಕಾದಂಬರಿಗೂ ಹೆಚ್ಚಿನ ಸಂಬಂಧ ಕಾಣಲಿಲ್ಲ. 20ನೇ ಶತಮಾನದ ಪ್ರಾರಂಭದಲ್ಲಿ ತೈಲವನ್ನು ಹೊರತೆಗೆದು, ಅದರಿಂದ ಸಾಮ್ರಾಜ್ಯವನ್ನೇ ಕಟ್ಟುವ ಕಥೆಯು ಕಾದಂಬರಿ ಮತ್ತು ಚಿತ್ರಗಳಲ್ಲಿ ಸಾಮಾನ್ಯವಾಗಿದ್ದರೂ, ಚಿತ್ರದ ಆತ್ಮವೇ ಭಿನ್ನವಾಗಿದೆ. ಕಾದಂಬರಿಯನ್ನು ಚಿತ್ರಕಥೆಗೆ ಅಳವಡಿಸುವ ದೀರ್ಘ ಪ್ರಕ್ರಿಯೆಯಲ್ಲಿ ಮೂಲಕತೆಯಿಂದ ಬಲುದೂರ ಸಾಗಿದ್ದು ನಿರ್ದೇಶಕ ಪಾಲ್ ಆ್ಯಂಡರ್ಸನ್‍ಗೆ ತಿಳಿದಿದ್ದರೂ ಮುಂದುವರೆದರು. ನಾವು ಮೂಲಕಥೆಗೆ ಬದ್ಧರಾಗಲಿಲ್ಲ (faithful) ಎಂದು ಆ್ಯಂಡರ್ಸನ್ ಹೇಳಿದರು.

ಈ ಬದ್ಧತೆಯ ಪ್ರಶ್ನೆಯೂ ತುಂಬಾ ಕುತೂಹಲಕಾರಿಯಾಗಿದೆ. ದೇರ್ ವಿಲ್ ಬಿ ಬ್ಲಡ್ ಚಿತ್ರನ ನಿದರ್ಶನ ಎಕ್ಸ್ಟ್ರೀಮ್ (extreme) ಆಗಿದೆ. ಇನ್ನು ಅಲೆಕ್ಸಾಂಡರ್ ಪೇನ್‍ನ ಚಿತ್ರಗಳ ಪ್ರಯೋಗವೂ ವಿಶಿಷ್ಟವಾಗಿದೆ. ಅವರ ಎಲೆಕ್ಷನ್, ಅಬೌಟ್ ಶ್ಮಿತ್ ಮುಂತಾದ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು. ಅಲೆಕ್ಸಾಂಡರ್ ಪೇನ್‍ಗೆ ಅಥವಾ ಅವರ ಲೇಖನದ ಪಾಟ್ರ್ನರ್ ಜಿಮ್ ಟೇಲರ್‍ಗೆ ಒಂದು ಕಾದಂಬರಿಯನ್ನು ಸಿನೆಮಾಗೆ ಅಳವಡಿಸಬೇಕಾದಲ್ಲಿ, ಅವರಿಬ್ಬರೂ ಚಿತ್ರಕಥೆ ಬರೆಯುವ ಮುಂಚೆ ಆ ಮೂಲಕಾದಂಬರಿಯನ್ನು ಹಲವಾರು ಬಾರಿ ಓದುತ್ತಾರೆ. ಕಾದಂಬರಿಯ ಅಂಶಗಳು ಮನದಟ್ಟಾದ ನಂತರ ತಾವು ಬರೆಯಲಿರುವ ಚಿತ್ರದ ಆತ್ಮ ಅಥವಾ ಮೂಲಅಂಶ ಏನು ಎನ್ನುವುದನ್ನು ನಿರ್ಧರಿಸುತ್ತಾರೆ. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮೂಲಕಾದಂಬರಿಯನ್ನು ಮರೆತು ಚಿತ್ರಕಥೆಯನ್ನು ಬರೆಯತೊಡಗುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರವೇ ಮೂಲಪುಸ್ತಕವನ್ನು ರೆಫರೆನ್ಸ್‍ಗಾಗಿ ಬಳಸುತ್ತಾರೆ. ಈ ಪ್ರಯೋಗಗಳ ಫಲಿತಾಂಶ ನಮ್ಮೆಲ್ಲರ ಕಣ್ಣೆದುರಿಗಿದೆ.
ಆದರೆ ಒಂದುವೇಳೆ ಮೂಡಿಬಂದ ಚಿತ್ರ ಮೂಲ ಬರಹಗಾರರಿಗೆ ಇಷ್ಟವಾಗದಿದ್ದರೆ?

ಅಮೇರಿಕದ ಪ್ರಖ್ಯಾತ ಲೇಖಕ ಸ್ಟೀಫನ್ ಕಿಂಗ್ ಅವರ ಕಾದಂಬರಿ ಶೈನಿಂಗ್ ಅನ್ನು ಅಷ್ಟೇ ಪ್ರಖ್ಯಾತ ಮತ್ತು ಪ್ರತಿಭಾವಂತ ನಿರ್ದೇಶಕ ಸ್ಟ್ಯಾನ್ಲಿ ಕೂಬ್ರಿಕ್ ಕೈಗೆತ್ತಿಕೊಂಡರು. ಜಾಕ್ ನಿಕಲ್ಸನ್ ಅವರ ಅಭಿನಯದಲ್ಲಿ ಮೂಡಿಬಂದ ಈ ಚಿತ್ರವು ಹಾರರ್ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಚಿತ್ರ ಎಂದು ಪರಿಗಣಿಸಲಾಗಿದೆ. ಈ ಚಿತ್ರದಲ್ಲಿ ಯಾರು ಪ್ರಮುಖ ಪಾತ್ರ ಮಾಡಬೇಕು ಎನ್ನುವುದಕ್ಕೂ ಸ್ಟೀಫನ್ ಕಿಂಗ್ ಒಪ್ಪಿಗೆ ಪಡೆಯಬೇಕಿತ್ತು. ಒಂದು ಚಿತ್ರವು ಪಡೆಯಬಹುದಾದ ಎಲ್ಲಾ ರೀತಿಯ ಮನ್ನಣೆಗಳು ಶೈನಿಂಗ್ ಚಿತ್ರಕ್ಕೆ ದೊರೆತರೂ ಕಾದಂಬರಿಯ ಕರ್ತೃ ಸ್ಟೀಫನ್‍ಗೆ ಚಿತ್ರ ಇಷ್ಟವಾಗಲಿಲ್ಲ. ತನ್ನ ಮೂಲಕಥೆಗಿಂತ ಭಿನ್ನವಾಗಿ ಅನೇಕ ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದೆ ಎಂದು ಸ್ಟೀಫನ್ ಕಿಂಗ್ ಭಾವಿಸಿದರು. ಆದರೆ ಕೂಬ್ರಿಕ್‍ಗೆ ಕಥೆಯೊಂದಿಗೆ ಏನು ಮಾಡಬೇಕು ಎನ್ನುವುದರಲ್ಲಿ ಹೆಚ್ಚಿನ ಸಂಶಯವಿರಲಿಲ್ಲ. ಸಿನೆಮಾದ ಅಪರಿಮಿತ ಸಾಧ್ಯತೆಗಳನ್ನು ಮತ್ತು ಮಿತಿಗಳನ್ನು ಅರಿತಿದ್ದ ಕೂಬ್ರಿಕ್ ದೃಶ್ಯಮಾಧ್ಯಮಕ್ಕೆ ಅಳವಡಿಸುವಲ್ಲಿ ಸೋಮಾರಿತನ ತೋರಿಸಲಿಲ್ಲ. ಆದರೆ ಈ ಪ್ರಯೋಗದಿಂದ ಸಿಟ್ಟಿಗೆದ್ದ ಲೇಖಕ ಸ್ಟೀಫನ್ ಕಿಂಗ್ ಕೆಲವು ವರ್ಷಗಳ ನಂತರ ಕಾದಂಬರಿಯನ್ನು ಟಿವಿ ಸಿರೀಸ್ ಮಾಡಲು ಹಕ್ಕುಗಳನ್ನು ನೀಡಿದರು. ಹಾಗೂ ಅದರ ಮೆಲ್ವಿಚಾರಣೆಯನ್ನು ಖುದ್ದಾಗಿ ಮಾಡಿದರು. ಆದರೆ ಆ ಟಿವಿ ಸಿರೀಸ್ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಗಾಡ್‍ಫಾದರ್ ಸರಣಿಯ ಚಿತ್ರಗಳನ್ನು ಬಿಡಲು ಸಾಧ್ಯವಿಲ್ಲ. ಮಾರಿಯೊ ಪೂಜೊ ಎಂಬ ಲೇಖಕನ ಅತ್ಯಂತ ಸಾಧಾರಣ ಕೃತಿಯನ್ನು ದೃಶ್ಯ ಮಾಧ್ಯಮದ ಅತ್ಯಂತ ಅದ್ಭುತ ಉದಾಹರಣೆಯನ್ನಾಗಿ ಮಾಡಿದ್ದು ಫ್ರಾನ್ಸಿಸ್ ಫೋರ್ಡ್ ಕೊಪೋಲಾ. ಈ ಕಾದಂಬರಿಯನ್ನು ಅಳವಡಿಸಲು ಕೊಪೋಲಾ ಅತ್ಯಂತ ಉತ್ಸುಕರಾಗಿದ್ದಿಲ್ಲ. ಕ್ರಮೇಣ ಕಾದಂಬರಿಯಲ್ಲಿ ಅಡಗಿರುವ ಅದ್ಭುತ ಚಿತ್ರವನ್ನು ಕಂಡು ಅದನ್ನು ಅಳವಡಿಸಿಕೊಂಡರು. ಆಗಿದ್ದು ಇತಿಹಾಸ. (ಅಂದಹಾಗೆ ಗಾಡ್‍ಫಾದರ್ ಪಾತ್ರ ಮಾಡಲು ಮಾರ್ಲನ್ ಬ್ರ್ಯಾಂಡೋ ಕೂಡ ಹಿಂಜರಿಕೆಯಿಂದಲೇ ಒಪ್ಪಿಕೊಂಡಿದ್ದರಂತೆ.)

ಈ ಮೇಲಿನ ಉದಾಹರಣೆಗಳೆಲ್ಲ ಮೂಲಕೃತಿಯನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ ಉದಾಹರಣೆಗಳೇ ಆಗಿವೆ. ಈ ಅದ್ಭುತ ನಿರ್ದೇಶಕರೆಲ್ಲರೂ ಸಿನೆಮಾ ಎಂಬ ಮಾಧ್ಯಮವನ್ನು ಆಳವಾಗಿ ಪ್ರೀತಿಸಿದವರು, ಅದನ್ನು ಆಳವಾಗಿ ಅಭ್ಯಸಿಸಿದವರು, ವಿಶಿಷ್ಟ ಪ್ರಯೋಗಗಳನ್ನು ಮಾಡಿದವರು. ಮೂಲಕೃತಿಯ ಬಗ್ಗೆ ಇವರಿಗಿರುವ ಪ್ರೀತಿಯು ಆ ಕೃತಿಯನ್ನು ಬದಲಿಸಲು ಅಡ್ಡಿಯಾಗಲಿಲ್ಲ. ಆಯಾ ಕೃತಿಯ ವಿಶಿಷ್ಟತೆ, ಆಳ ಮತ್ತು ಅವರಿಗೆ ತಟ್ಟಿದ ಅಂಶವನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಅಭಿವೃದ್ಧಿಪಡಿಸಿದವರು ಇವರೆಲ್ಲ. ಸಿನೆಮಾ ಮಾಧ್ಯಮದ ತಾಂತ್ರಿಕತೆಯನ್ನು ಆ ಮಾಧ್ಯಮದ ಅಡ್ಡಿ ಎಂದು ಪರಿಭಾವಿಸದೇ, ಅದನ್ನೇ ಒಂದು ಕಲೆಯೆಂದು ಪ್ರಯೋಗ ಮಾಡಿದವರು ಇವರು.
ಭಾರತದಲ್ಲೂ ಇಂತಹ ಅನೇಕ ಯಶಸ್ವೀ ಪ್ರಯೋಗಗಳು ಆಗಿವೆ. ಗುರುದತ್ ಅವರು ಮಾಡಿದ ಸಾಹಿಬ್ ಬೀವಿ ಔರ್ ಘುಲಾಮ್ (ಮೂಲ ಲೇಖಕ ಬಿಮಲ್ ಮಿತ್ರ), ಸತ್ಯಜಿತ್ ರಾಯ್ ಅವರ ಅದ್ಭುತ ಅಪು ಸರಣಿ (ಮೂಲ ಲೇಖಕ ವಿಭೂತಿಭೂಷಣ್ ಬಂಡೋಪಾಧ್ಯಾಯ), ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ಹೆಚ್ಚಿನ ಚಿತ್ರಗಳು ಕಾದಂಬರಿಗಳನ್ನು ಸರಳವಾಗಿ ಸಿನೆಮಾ ರೂಪಕ್ಕೆ ಅಳವಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿವೆ.

ಕಥೆ ಕಾದಂಬರಿ ಆಧಾರಿತ ಚಿತ್ರಕಥೆ(ಅಡಾಪ್ಟೆಡ್ ಸ್ಕ್ರೀನ್‍ಪ್ಲೇ)ಗಳನ್ನು ಮೂಲಕೃತಿ ಮತ್ತು ಚಿತ್ರಕಥೆಯ ನಡುವಿನ ಸೆಣೆಸಾಟ ಅಥವಾ ಅಕ್ಷರಮಾಧ್ಯಮ ಮತ್ತು ದೃಶ್ಯಮಾಧ್ಯಮದ ಮಿಲನದ ಫಲಿತಾಂಶ ಎಂತಲೂ ಎನ್ನಬಹುದು. ಏನೇ ಆಗಲಿ ಈ ಪ್ರಕ್ರಿಯೆಯಂತೂ ನಿಲ್ಲಲಾಗದ ಪ್ರಕ್ರಿಯೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...