ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ತುರೆಕೆಲಾ ಬ್ಲಾಕ್ನ ಡುಮೆರ್ಚುವಾನ್ ಗ್ರಾಮದಲ್ಲಿ ಈ ಬಡಾವಣೆ ಇದೆ. ಫೆಬ್ರವರಿ 12 ರಿಂದ ತಮ್ಮ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ವರದಿ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ರದೇಶದ ಬೀದಿ ದೀಪಗಳನ್ನು ಸಹ ಆಫ್ ಮಾಡಲಾಗಿದೆ. ಇದರಿಂದಾಗಿ ಕತ್ತಕಾದ ಬಳಿಕ ಕುಟುಂಬಗಳು ಕತ್ತಲೆಯಲ್ಲಿ ಕಷ್ಟಪಡಬೇಕಾಗಿದೆ.
ಆದರೆ, ಗ್ರಾಮದ ಉಳಿದ ಸಮುದಾಯದ ಜನರು ವಾಸಿಸುವ ಪ್ರದೇಶಗಳಲ್ಲಿ ಅಂತಹ ಯಾವುದೇ ಅಡಚಣೆ ಕಂಡುಬಂದಿಲ್ಲ ಎಂದು ನಿವಾಸಿಗಳು ಹೇಳಿಕೊಂಡಿದ್ದಾರೆ. “ಗ್ರಾಮದ ಇತರ ಭಾಗಗಳಲ್ಲಿನ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಿಗುತ್ತಲೇ ಇದೆ, ಆದರೆ ನಾವು ವಂಚಿತರಾಗುತ್ತಿದ್ದೇವೆ” ಎಂದು ದಲಿತರು ಹೇಳಿದರು.
ಕೊಳವೆ ಬಾವಿಯಿಂದ ನೀರು ತೆಗೆಯುವುದನ್ನು ಸಹ ಪ್ರಬಲ ಜಾತಿ ಜನರು ತಡೆದಿದ್ದಾರೆ. “ನಾವು ಕೊಳವೆ ಬಾವಿಯಿಂದ ನೀರು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ನಮ್ಮನ್ನು ತಡೆಯಲಾಯಿತು. ಹಳ್ಳಿಯ ರಸ್ತೆಗಳಲ್ಲಿ ಪ್ರಯಾಣಿಸುವಾಗ, ಇತರ ಸಮುದಾಯಗಳ ಸದಸ್ಯರು ನಮ್ಮನ್ನು ಅಸ್ಪೃಶ್ಯರೆಂದು ಪರಿಗಣಿಸುತ್ತಾರೆ” ಎಂದು ನಿವಾಸಿ ಹೇಳಿದರು.
ಗ್ರಾಮದ ಇತರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಹ ತಾರತಮ್ಯ ಎದುರಿಸುತ್ತಿರುವುದರಿಂದ ತಮ್ಮ ಸಮುದಾಯವನ್ನು ಜಾತಿಯ ಕಾರಣದಿಂದಾಗಿ ಗುರಿಯಾಗಿಸಲಾಗುತ್ತಿದೆ ಎಂದು ದಲಿತರು ಹೇಳಿದ್ದಾರೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ, ಸಮಸ್ಯೆ ಸರಿಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು.
ಗ್ರಾಮ ಅಧಿಕಾರಿ ಪದಮಾನವ ಸಮಂತರಾಯ್ ಮಾತನಾಡಿ, ಜಾತಿ ಆಧಾರಿತ ತಾರತಮ್ಯದ ಆರೋಪಗಳನ್ನು ತಳ್ಳಿಹಾಕಿದರು. ಆರಂಭಿಕ ತನಿಖೆಯು ಸಮುದಾಯಗಳ ನಡುವಿನ ದ್ವೇಷದ ಕಡೆಗೆ ತೋರಿಸಿದೆ ಎಂದು ಹೇಳಿದರು. ತನಿಖೆಗೆ ಆದೇಶಿಸಲಾಗಿದೆ, ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ತಳಮಟ್ಟದಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಸಮಂತರಾಯ್ ಹೇಳಿದರು.
“ಪ್ರಾಥಮಿಕ ತನಿಖೆಯು ಕೆಲವು ದಿನಗಳ ಹಿಂದೆ, ಬಾರಾತ್ ಮೆರವಣಿಗೆಯ ಸಮಯದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ದ್ವೇಷವಿತ್ತು ಎಂದು ಸೂಚಿಸಿದೆ. ಒಂದು ಗುಂಪು ಸೇಡಿನಿಂದ ನೀರು ಸರಬರಾಜು ಮತ್ತು ವಿದ್ಯುತ್ ಅನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿತು” ಎಂದು ಅವರು ಹೇಳಿದರು.


