Homeಮುಖಪುಟರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ಮೇಕ್ ಇನ್ ಇಂಡಿಯಾ ಸಂದರ್ಭದಲ್ಲಿ ಮಾಡಿದಂತೆ ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಿ, ಆತ್ಮಘಾತುಕತನವನ್ನು ಮಾಡಲಾಗುತ್ತದೆ ಎಂಬ ಬಗ್ಗೆ ಸಂದೇಹವೇನೂ ಉಳಿದಿಲ್ಲ.

- Advertisement -
- Advertisement -

ದೇಶ ರಕ್ಷಣೆಯಲ್ಲಿ ಆತ್ಮನಿರ್ಭರತೆ ಸಾಧಿಸಬೇಕೆಂದು ಸಂಕಲ್ಪ ಮಾಡಿರುವುದಾಗಿ ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್ ಹೇಳಿದ್ದಾರೆ. ಮೋದಿ ಮಂತ್ರ ಪಠಣವೂ ಇದೇ ಆಗಿದೆ. ಆದರೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆತ್ಮನಿರ್ಭರತೆ ಎಂದರೆ ಎಲ್ಲ ಆಮದನ್ನೂ ಕೈ ಬಿಡುವುದಲ್ಲ ಎಂದು ಹೇಳುತ್ತಾರೆ. ಈ ರೀತಿ ಹೇಳುವ ಮೂಲಕ ಆತ್ಮನಿರ್ಭರತೆಗೆ ಆರ್‌ಎಸ್‌ಎಸ್ ಹೊಸ ವ್ಯಾಖ್ಯಾನವನ್ನೆ ಮಂಡಿಸುತ್ತಿದೆ. ಒಟ್ಟಿನಲ್ಲಿ ಆತ್ಮನಿರ್ಭರತೆ ಒಂದು ಘೋಷಣೆಯೆ ಹೊರತು ಬೇರೇನೂ ಅಲ್ಲ ಎಂದು ಮತಾಂಧರು ಘೋಷಿಸುತ್ತಿದ್ದಾರೆ.

ರಾಜನಾಥ್‌ಸಿಂಗರು ಈಗ ದೇಶರಕ್ಷಣೆಯಲ್ಲಿ ಆತ್ಮನಿರ್ಭರತೆ ಮಾತನ್ನಾಡಿದರೆ ಈ ಹಿಂದೆ ಮೋದಿ ಅವರು ಮೇಡ್ ಇನ್ ಇಂಡಿಯಾ ಘೋಷಣೆ  ಕೂಗುವಾಗಲೂ ಇದನ್ನೇ ಹೇಳಿದ್ದರು. ರಾಜನಾಥ್‌ಸಿಂಗರು ಡಿಫೆನ್ಸ್ ಡಿಪಾರ್ಟ್ಮೆಂಟ್‌ಗೆ ಬೇಕಾದ 101 ಐಟಂಗಳ ಆಮದನ್ನು ನಿಲ್ಲಿಸಿ ಇನ್ನೂ ಐದು ವರ್ಷಗಳೊಳಗಾಗಿ ಅವನ್ನೆಲ್ಲ ಭಾರತದಲ್ಲೇ ತಯಾರಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ಇವರ ಘೋಷಣೆಯನ್ನು ಅತ್ಯುತ್ಸಾಹದಿಂದ ಯಾರೂ ಸ್ವಾಗತಿಸಿದಂತೆ ಕಾಣುವುದಿಲ್ಲ. ಅದಕ್ಕೆ ಕಾರಣವೆಂದರೆ, ಇದೇ ಮೋದಿ ಸರ್ಕಾರ ತನ್ನ ಆಡಳಿತದ ಮೊದಲ ಅವಧಿಯಲ್ಲಿ ನಾಲ್ಕಾರು ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗಿಸಿತ್ತು. ಆಗಲೂ ಮೋದಿ ಭಾರತ ರಕ್ಷಣೆಗಾಗಿ ಆಮದಾಗುವ ಐಟಂಗಳನ್ನು ಸ್ವದೇಶದಲ್ಲೇ ತಯಾರಿಸುವ ಭರವಸೆ ನೀಡಿದ್ದರು. ರಾಜನಾಥ್‌ಸಿಂಗರ ಇಂದಿನ ಘೋಷಣೆ Old wine in New Bottle ಎಂಬಂತಿದೆ. ಆಗ ಮೋದಿ ನೀಡಿದ ಭರವಸೆಗಳೆಲ್ಲ ಕಾಗದದಲ್ಲಿ ಮಾತ್ರ ಉಳಿದಿದೆ.

2014ರಿಂದ ರಕ್ಷಣಾ ಸಚಿವಾಲಯ ತಿಳಿಸಿರುವಂತೆ 2019ರವರೆಗೆ 190 ಭಾರತೀಯ ಉದ್ದಿಮೆದಾರರು ಕಾಂಟ್ರಾಕ್ಟ್‌ಗೆ ಸಹಿ ಹಾಕಿದ್ದಾರೆ. ಇದರ ಮೊತ್ತ 25.8 ಬಿಲಿಯನ್‌ಗಳಾಗುತ್ತದೆ. ಈ ಪೈಕಿ ಮೇಕ್ ಇನ್ ಇಂಡಿಯಾದ ಭಾಗವಾಗಿಯೇ 3.5 ಲಕ್ಷ ಕೋಟಿಯ ಕಂಟ್ರಾಕ್ಟ್‌ಗೆ ಸಹಿ ಹಾಕಲಾಗಿತ್ತು. ಈ ಕಂಟ್ರಾಕ್ಟುಗಳಲ್ಲಿ ಐನಾತಿ ಐಟಂಗಳಾದ ನ್ಯೂಜನರೇಷನ್ ಸ್ಟೆಲ್ತ್ ಸಬ್‌ಮೆರಿನ್‌ಗಳು ಮತ್ತು ಮೈನ್ ಸ್ವೀಪರ್ ಳು, ಫೈಟರ್ ಜೆಟ್ಸ್ಗಳು ಇವುಗಳ್ಯಾವುವೂ ಕಂಟ್ರಾಕ್ಟ್ಗೆ ಸಹಿ ಹಾಕಿ ವರ್ಷಗಳೇ ಕಳೆದರೂ ಅವುಗಳನ್ನು ಸರಬರಾಜು ಮಾಡಿಲ್ಲ. ಅವುಗಳಲ್ಲಿ ತಯಾರಾಗಿರುವುದು ಎಕೆ 203 ಆಸ್ಸಾಲ್ಟ್ ರೈಫಲ್‌ಗಳು ಮಾತ್ರ. ಇವನ್ನು ರಷ್ಯಾದ ಸಹಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಉತ್ತರ ಪ್ರದೇಶದಲ್ಲಿರುವ ಕೊರ್ವಾ ಆರ್ಡಿನೆನ್ಸ್ ಫ್ಯಾಕ್ಟರಿ ಜಂಟಿಯಾಗಿ ತಯಾರಿಸಿದೆ. ಗೋವಾ ಷಿಪ್‌ಯಾರ್ಡ್ ಮತ್ತು ದಕ್ಷಿಣ ಕೊರಿಯಾದ ಕಂಪನಿಯೊಂದರ ಮಧ್ಯೆ 12 ಮೈನ್ ಸ್ವೀಪರ್ಸ್ ಸರಬರಾಜಿಗಾಗಿ 2015ರಲ್ಲಿ ಮಾಡಿಕೊಂಡಿದ್ದ 3200 ಕೋಟಿ ರೂ ಒಪ್ಪಂದವನ್ನು 2018ರಲ್ಲಿ ರದ್ದುಗೊಳಿಸಲಾಯಿತು. DRDOಒಂದು ಸರ್ಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ. ಇದರ ಅಡಿಯಲ್ಲಿ 52ಪ್ರಗತಿಗಾಮಿ ಲ್ಯಾಬೋರೇಟರ್‌ಗಳು ಇವೆ. 5000 ಮಿಲಿಟರಿ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಇಲ್ಲಿ ಕೆಲಸ ಮಾಡುತ್ತಾರೆ. 25000 ಸಹಾಯ ಸಿಬ್ಬಂದಿ ಇದ್ದಾರೆ. 2016ರಲ್ಲಿ ಇದರ ಬಜೆಟ್ 13501ಕೋಟಿ ರೂ. ಇತ್ತು. ಅದು 2019-20ಕ್ಕೆ 19021 ಕೋಟಿ ರೂಗೆ ಏರಿತು. ಆದರೆ ಅದೇನೂ ಹೆಚ್ಚು ಪ್ರಗತಿ ಹೊಂದಿಲ್ಲ. ಭಾರತ ಸರ್ಕಾರದ ನೂರಾರು ರಕ್ಷಣಾ ಫ್ಯಾಕ್ಟರಿಗಳು ಇದ್ದಾಗ್ಯೂ ಬಜೆಟ್ಟಿನ ಶೇ.59ರಷ್ಟು ಇವರ ಸಂಬಳ, ಸಾರಿಗೆಗಳಿಗೆ, ವಿಶ್ರಾಂತಿವೇತನಕ್ಕೆ ವಿನಿಯೋಗವಾಗುತ್ತದೆ. ಶಸ್ತ್ರಾಸ್ತ್ರಬಳಸುವ ಸೈನಿಕರನ್ನು ಸರ್ಕಾರ ಆಮದು ನೀತಿಗೆ ಹೊಣೆಗಾರರನ್ನಾಗಿಸಲು ಸಾಧ್ಯವೇನು? ಅವರಿಗೆ ಆಮದಾದ ಶಸ್ತ್ರಾಸ್ತ್ರಗಳನ್ನು ಬಳಸುವುದಲ್ಲದೆ ಬೇರೇನು ಆಯ್ಕೆ ಇದೆ!

ದೇಶ ರಕ್ಷಣೆಗೆ ಬೇಕಾದ ಸಾಮಗ್ರಿಗಳಲ್ಲಿ ಶೇ.65 ರಷ್ಟನ್ನು ಭಾರತ ಸರ್ಕಾರ ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ 2019ರಲ್ಲಿ ಮಿಲಿಟರಿಯ ಮೇಲೆ ಖರ್ಚಾದ ಹಣ 71.1ಬಿಲಿಯನ್ ಡಾಲರ್‌ಗಳು, ಚೈನಾ 261 ಬಿಲಿಯನ್ ಡಾಲರ್, ರಷ್ಯಾ 65 ಬಿಲಿಯನ್ ಡಾಲರ್ ಮಿಲಿಟರಿ ಮೇಲೆ ಖರ್ಚು ಮಾಡುತ್ತವೆ. 2020-21 ಭಾರತದ ಮಿಲಿಟರಿ ಬಜೆಟ್ 62.85 ಬಿಲಿಯನ್ ಅಥವಾ 4.9 ಲಕ್ಷ ಕೋಟಿ ರೂ.ಗಳಾಗಿವೆ. ರಕ್ಷಣಾ ಇಲಾಖೆಯ ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ.

ಹೀಗಿರುವ ದೇಶವೊಂದು ತನ್ನ ಆಮದನ್ನು ನಿಲ್ಲಿಸಿ ಸ್ವಾವಲಂಬಿಯಾಗುತ್ತೇನೆ ಎಂದರೆ ಅದು ಸ್ವಾಗತಾರ್ಹವಲ್ಲವೇ? ಆದರೆ, ಮೇಕ್ ಇನ್ ಇಂಡಿಯಾ ಸಂದರ್ಭದಲ್ಲಿ ಮಾಡಿದಂತೆ ಕೇವಲ ಘೋಷಣೆಗಳಿಗೆ ಸೀಮಿತಗೊಳಿಸಿ, ಆತ್ಮಘಾತುಕತನವನ್ನು ಮಾಡಲಾಗುತ್ತದೆ ಎಂಬ ಬಗ್ಗೆ ಸಂದೇಹವೇನೂ ಉಳಿದಿಲ್ಲ.


ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...