Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ - ಒಂದು...

ಪುಸ್ತಕ ಪರಿಚಯ: ಯಡೂರು ಮಹಾಬಲ ಅವರ ಜಯಪ್ರಕಾಶ ನಾರಯಣ ಬಾಲ್ಯದಿಂದ ಸಂಪೂರ್ಣ ಕ್ರಾಂತಿಯವರೆಗೆ – ಒಂದು ಮೌಲ್ಯಮಾಪನ

- Advertisement -
- Advertisement -

ಜಯಪ್ರಕಾಶ ನಾರಾಯಣ (ಜೆ.ಪಿ) ಅವರ ಹೆಸರು ಕೇಳಿದಾಕ್ಷಣ ನಮಗೆ ನೆನಪಾಗುವುದು 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಜನರ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದು, ಮತ್ತು ಜೆ.ಪಿಯವರ ನೇತೃತ್ವದಲ್ಲಿ ಅದಕ್ಕೆ ಪ್ರತಿರೋಧ ಉಂಟಾಗಿ 1977ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲುಪಾಲಾದ ಜೆ.ಪಿ. ಬಿಡುಗಡೆಗೊಂಡ ಮೇಲೆ ಎಲ್ಲ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವುದು ಸಾಧ್ಯ ಅನ್ನುವುದನ್ನು ತೋರಿಸಿದರು. ಆ ಸಂದರ್ಭದ ಅವರ ’ಸಂಪೂರ್ಣ ಕ್ರಾಂತಿ’ಯ ಪರಿಕಲ್ಪನೆ ಹಾಗೂ ಜೈಲು ದಿನಚರಿಗಳಿಂದಾಗಿ ದೇಶದಲ್ಲಿ ಮನೆಮಾತಾದ ಜೆ.ಪಿ. ಭಾರತದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದರು. ಹೀಗಾಗಿ ಆಧುನಿಕ ಭಾರತದ ಇತಿಹಾಸದಲ್ಲಿ ಜೆ.ಪಿ.ಯವರು ಭದ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆದರೆ ಜೆ.ಪಿ.ಯವರಿಗೆ ಸಂಬಂಧಪಟ್ಟಂತೆ ಇಷ್ಟು ಮಾತ್ರ ಇತಿಹಾಸವಲ್ಲ. ಇಂದಿರಾ ಗಾಂಧಿಯವರ ನಿರಂಕುಶಾಧಿಕಾರವನ್ನು ಎದುರಿಸುವುದಕ್ಕೊ ಮೊದಲೇ, ಅಂದರೆ 1947ರವರೆಗೂ ಈ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿದ್ದರು. ಆನಂತರವೂ ಅವರು ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಟೀಕಾಕಾರರಾಗಿದ್ದರು. ಬಿಹಾರದ ಶ್ರೀಮಂತವೇ ಎನ್ನಬಹುದಾದ ಕುಟುಂಬದಲ್ಲಿ ಹುಟ್ಟಿದ ಜೆ.ಪಿ. ಒಳ್ಳೆಯ ಶಿಕ್ಷಣವನ್ನು ಪಡೆದರು; ಆಧುನಿಕ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಂಡರು. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಗತಿಪರ ಮನೋಧರ್ಮವನ್ನು ಮೈಗೂಡಿಸಿಕೊಂಡು ಸಮಾಜವಾದ ಮಾರ್ಕ್ಸ್‌ವಾದಗಳ ಕಡೆ ಆಕರ್ಷಿತರಾದರು. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಅದರೊಳಗಿನ ಸಮಾಜವಾದಿ ಗುಂಪಿನ ಮುಖ್ಯ ಸದಸ್ಯರೂ ಅಗಿದ್ದರು.

ಇಂದಿನ ಪೀಳಿಗೆಯವರಿಗೆ ಜೆ.ಪಿ. ಎಂದು ಮಾತ್ರ ತಿಳಿದಿರುವ ಜಯಪ್ರಕಾಶ ನಾರಾಯಣದ ಬೌದ್ಧಿಕ ಪಯಣದ ವಿವರಗಳು ಅಪರಿಚಿತವೆಂದೇ ಹೇಳಬೇಕು. ಯಡೂರ ಮಹಾಬಲ ಅವರು ಈ ಅವಶ್ಯಕತೆಯನ್ನು ಪೂರೈಸಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಮಹಾಬಲರವರು ಈಗಾಗಲೇ ಲೋಹಿಯಾರವರ ವಿಚಾರಗಳ ವಿಮರ್ಶೆಯ ಮೂಲಕ ಲೋಹಿಯಾವಾದಿಗಳ ಬಗ್ಗೆ, ಲೋಹಿಯಾವಾದದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಜೆ.ಪಿಯವರ ಜೀವನ ಚರಿತ್ರೆಯಾಗಿರುವ ಈ ಕೃತಿಯೂ ಸಹ ಆ ಪ್ರಶ್ನೆಗಳ ಮುಂದುವರಿಕೆ ಎನ್ನಬಹುದು. ಅಲ್ಲದೆ ಈಶಾನ್ಯ ರಾಜ್ಯಗಳ ಹಿನ್ನೆಲೆಯಲ್ಲಿ ಭಾರತ-ಚೀನಾ ದೇಶಗಳ ಸಂಬಂಧಗಳ ಕುರಿತಾದ ಹಲವು ಗ್ರಂಥಗಳೂ ಅವರ ಲೇಖನಿಯಿಂದ ಹೊರಬಂದಿದೆ. ’ನಿಗೂಢ ಟಿಬೆಟ್, ’ಯುದ್ಧೋತ್ತರ ಕಾಂಡ’, ’ಅಕ್ಸಾಯ್ ಚಿನ್’ ಮುಂತಾದ ಕೃತಿಗಳೇ ಅಲ್ಲದೆ ’ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’ ಎಂಬ ಸ್ವಾತಂತ್ರ್ಯ ಹೋರಾಟದ ಕುರಿತಾದ ಪುಸ್ತಕವನ್ನೂ ರಚಿಸಿ ಮಹಾಬಲರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಯಾವುದೇ ವಿಷಯದ ಕುರಿತು ಬರೆಯಲಿ, ಮಹಾಬಲ ಅವರ ಆ ಪ್ರಯತ್ನದಲ್ಲಿ ಸಾಕಷ್ಟು ಓದು, ಸಂಶೋಧನೆಗಳು ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಸಂಶೋಧನೆಯ ಫಲವಾಗಿ ಅವರು ಸಾಧಾರಣಕ್ಕಿಂತ ಭಿನ್ನವಾದ ತೀರ್ಮಾನಗಳಿಗೆ ಬರುತ್ತಾರೆ, ಆ ಮೂಲಕ ಓದುಗರಲ್ಲಿ ಹೊಸ ಪ್ರಶ್ನೆಗಳನ್ನು ಮೂಡಿಸುತ್ತಾರೆ.

ಜೆ.ಪಿಯವರ ಬಗೆಗಿನ ಈ ಕೃತಿಯೂ ಸಹ ಮಹಾಬಲರ ಸಂಶೋಧನೆಯ ಮತ್ತೊಂದು ಫಲ. ಜೆ.ಪಿ.ಯವರ ಬಾಲ್ಯ, ವಿದ್ಯಾಭ್ಯಾಸ, ಕೌಟುಂಬಿಕ ಜೀವನ, ರಾಜಕಾರಣ ಮುಂತಾದವುಗಳನ್ನು ಹಲವು ಆಕರಗಳ ಅಧ್ಯಯನದ ಮೂಲಕ ಪ್ರಸ್ತುತಪಡಿಸಲಾಗಿದೆ. ಅಲ್ಲದೆ, ಆ ಜೀವನದ ವಿವರಗಳನ್ನು ನೀಡುವಾಗಲೇ ಆಯಾ ಸಂದರ್ಭಗಳಲ್ಲಿನ ಜೆ.ಪಿ.ಯವರ ನಿಲುವುಗಳ ಮೌಲ್ಯಮಾಪನವನ್ನು ಮಹಾಬಲರು ನಡೆಸಿದ್ದಾರೆ. ಹೀಗೆ ಮಾಡುವಲ್ಲಿ ಇವರು ಯಾವ ಮುಲಾಜನ್ನು ತೋರುವುದಿಲ್ಲ; ಸರಿಯಾದ ತೀರ್ಮಾನಗಳನ್ನು ಹೊಗಳುವಂತೆಯೇ ವೈರುಧ್ಯಗಳಿಂದ ಕೂಡಿದ, ಅಥವಾ ಆ ಸಂದರ್ಭಕ್ಕೆ ಸರಿಹೊಂದದ ತೀರ್ಮಾನವನ್ನು ಅಷ್ಟೇ ಕಟುವಾಗಿ ಟೀಕಿಸುತ್ತಾರೆ.

ಕಾಂಗ್ರೆಸ್ ಪಕ್ಷದ ಸಮಾಜವಾದಿ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾಗ ಜೆ.ಪಿ.ಯವರ ನಿಲುವುಗಳಿಗೂ, ನಂತರದ ಘಟ್ಟದ ಅವರ ನಿಲುವುಗಳಿಗೂ ಇರುವ ವೈರುಧ್ಯವನ್ನು ಎತ್ತಿತೋರಿಸುತ್ತಾರೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಆರ್.ಎಸ್.ಎಸ್. ಕುರಿತ ಅವರ ವಿಮರ್ಶೆಗಳಿಗೂ ತುರ್ತು ಪರಿಸ್ಥಿತಿಯ ನಂತರ ಅದೇ ಸಂಘಟನೆಯ ಬಗ್ಗೆ ಬದಲಾದ ಅಭಿಪ್ರಾಯಗಳಿಗೂ ಒಂದಕ್ಕೊಂದು ತಾಳೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾರೆ.

ಮಾತ್ರವಲ್ಲದೆ ಜೆ.ಪಿ.ಯವರ ಸಮಕಾಲೀನರಾದ ಹಲವಾರು ರಾಜಕಾರಣಿಗಳು, ಆ ಕಾಲದ ಪ್ರಮುಖ ಬೆಳವಣಿಗೆಗಳು ಸಹ ಮಹಾಬಲರ ಪರಿಶೀಲನೆಯ ವಸ್ತುಗಳಾಗಿವೆ. ಸಾಮಾಜಿಕ ಬದಲಾವಣೆಗಾಗಿ ನಿರಂತರ ತುಡಿಯುತ್ತಿದ್ದ ಮನಸ್ಸುಳ್ಳ ಜೆ.ಪಿ.ಯವರ ನಿಲುವುಗಳು ಅವರ ಇಂಥ ತುಡಿತದ ಕಾರಣದಿಂದಲೇ ಕಾಲಕಾಲಕ್ಕೆ ಪರಸ್ಪರ ವಿರುದ್ಧವೆನಿಸುವ ರೀತಿಯಲ್ಲಿ ಬದಲಾಗುತ್ತಿದ್ದವೇನೋ ಎನ್ನುವ ಭಾವನೆಯನ್ನೂ ಮಹಾಬಲರ ಈ ಕೃತಿ ಹುಟ್ಟಿಸುತ್ತದೆ. ’ಸಂಪೂರ್ಣ ಕ್ರಾಂತಿ’ಯನ್ನು ಸದರಿ ಪುಸ್ತಕದ ಲೇಖಕರು ’ಸಂಪೂರ್ಣ ಭ್ರಾಂತಿ’ ಎಂತಲೂ ಕರೆಯುತ್ತಾರೆ ಮತ್ತು ಅದಕ್ಕೆ ಕಾರಣಗಳನ್ನು ಒದಗಿಸುತ್ತಾರೆ.

ಮಹಾಬಲರ ತೀರ್ಮಾನಗಳನ್ನು, ಮೌಲ್ಯಮಾಪನವನ್ನು ಓದುಗರು ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಜೆ.ಪಿ.ಯವರಂತಹ ಪ್ರಮುಖ ವ್ಯಕ್ತಿಯ ಜೀವನದ ವಿವರಗಳನ್ನು ಅದರ ಎಲ್ಲ ಸಂಕೀರ್ಣತೆಗಳೊಂದಿಗೆ ತಿಳಿಯಲು ಈ ಕೃತಿ ಸಹಾಯಕವಾಗುತ್ತದೆ. ಜೆ.ಪಿ.ಯವರ ಬಗೆಗಿನ ಓದುಗರ ಮೌಲ್ಯಮಾಪನವನ್ನೇ ಮೌಲ್ಯಮಾಪನ ಮಾಡುವಂತೆ ಈ ಪುಸ್ತಕ ಪ್ರೇರೇಪಿಸುತ್ತದೆ; ಈ ಕಾರಣಗಳಿಗಾಗಿ ಇದೊಂದು ಓದಬೇಕಾದ ಪುಸ್ತಕ.

ಮುಗಿಸುವ ಮುನ್ನ ಒಂದು ಮಾತು; ಮಹಾಬಲರು ಕೈಗೆತ್ತಿಕೊಂಡಿರುವ ವಿಷಯಗಳು ಮೌಲಿಕವಾದವು. ಅವುಗಳು ಎಲ್ಲರನ್ನೂ ಸುಲಭವಾಗಿ ತಟ್ಟಬೇಕೆಂದರೆ ಮಹಾಬಲರ ಭಾಷೆಯ ಬಳಕೆ ಇನ್ನಷ್ಟ ಉತ್ತಮಗೊಳ್ಳಬೇಕಿದೆ; ಆಗ ಈ ಪುಸ್ತಕವು ಸೇರಿದಂತೆ ಅವರ ಅನೇಕ ಕೃತಿಗಳನ್ನು ಓದುಗರು ಸುಲಭವಾಗಿ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅವರು ತಮ್ಮ ವಿಷಯಮಂಡನೆ ಮತ್ತು ಬರವಣಿಗೆಯ ಶೈಲಿಯಲ್ಲಿ ಇನ್ನಷ್ಟು ಪ್ರಯೋಗಗಳನ್ನು ನಡೆಸಿ ಉತ್ತಮಪಡಿಸಿಕೊಂಡರೆ ಅವರ ಕೃತಿಗಳ ಮೌಲ್ಯ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಪ್ರೊ. ನಗರಗೆರೆ ರಮೇಶ್

ಪ್ರೊ. ನಗರಗೆರೆ ರಮೇಶ್
ನಗರಗೆರೆ ರಮೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆಯವರು. ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು ನಂತರ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಜನರ ವೇದಿಕೆ ಮೊದಲಾದವುಗಳ ಭಾಗವಾಗಿದ್ದಾರೆ. ಎಲ್ಲ ಜನಪರ ಚಳವಳಿಗಳ ದೀರ್ಘಕಾಲದ ಒಡನಾಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...