Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

- Advertisement -
- Advertisement -

19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಮೊದಲ ಭಾಗ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಸಂಗೀತ ಮತ್ತು ರಂಗಭೂಮಿಯ ಲೋಕದಲ್ಲಿ ಅನೇಕ ಪ್ರಖ್ಯಾತರು ಆಗಿಹೋದರು. ಭೂಗಂಧರ್ವ ರೆಹಮತ್ ಖಾನ್, ಅಬ್ದುಲ್ ಕರೀಂಖಾನ್, ಉಸ್ತಾದ್ ಅಲ್ಲಾದಿಯಾ ಖಾನ್, ಭಾತಖಂಡೆ, ಹೀರಾಬಾಯಿ ಬಡೋದೆಕರ್, ಭಾಸ್ಕರರಾವ್ ಬಖಲೆ, ವಿಷ್ಣುಪಂಥ ಛತ್ರೆ, ಸವಾಯಿ ಗಂಧರ್ವ, ಬಾಲಗಂಧರ್ವ, ನತ್ಥನ್ ಖಾನ್, ಬರ್ಕತ್‌ಉಲ್ಲಾ ಖಾನ್- ಹೀಗೆ ಹಲವಾರು ಪ್ರಭೃತಿಗಳು ತಮ್ಮ ಪ್ರತಿಭೆ-ಪ್ರಯೋಗಗಳನ್ನು ಕಾಣಿಸಿದರು. ಇವರಲ್ಲಿ ಗಾಯಕರೂ ನಟರೂ ಮುಖ್ಯವಾಗಿ ಹಾರ್ಮೊನಿಯಂ ವಾದಕರೂ ಆಗಿದ್ದ ಗೋವಿಂದರಾವ್ ಟೇಂಬೆಯವರದೂ ಒಬ್ಬರು. ಅವರ ಆತ್ಮಕಥೆಯಿದು- ‘ಮಾಝಾ ಸಂಗೀತ ವ್ಯಾಸಂಗ್’.

ನಟ, ಗಾಯಕ, ನಾಟಕಕಾರ, ಲೇಖಕ, ಹಾರ್ಮೊನಿಯಂ ವಾದಕ ಆಗಿದ್ದ ಗೋವಿಂದರಾವ್ ಟೇಂಬೆ (1881-1955), ಕೊಲ್ಹಾಪುರದವರು. ಶಾಹು ಮಹಾರಾಜರ ಆಸ್ಥಾನದಲ್ಲಿದ್ದ ಅಲ್ಲಾದಿಯಾಖಾನ್ ಹಾಗೂ ಅವರ ಶಿಷ್ಯ ಭಾಸ್ಕರರಾವ್ ಬಖಲೆ ಅವರಿಂದ ಸಂಗೀತ ಕಲಿತವರು. ಮರಾಠಿಯ ಮೊದಲ ಟಾಕಿ ‘ಅಯೋಧ್ಯಾಚ ರಾಜಾ’ದಲ್ಲಿ ನಟಿಸಿದವರು. ‘ಶಿವಾಜಿ ನಾಟಕ ಮಂಡಳಿ’ ಎಂಬ ಕಂಪನಿಯನ್ನೂ ಅವರು ಕಟ್ಟಿ ನಡೆಸಿದವರು. ಟೇಂಬೆಯವರಿಗೂ ಕರ್ನಾಟಕಕ್ಕೂ ಬಹಳ ಲಗತ್ತಿತ್ತು. ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಕಂಠೀರವ ನರಸರಾಜ ಒಡೆಯರ ಆಪ್ತ ಒಡನಾಡಿ. ಇಬ್ಬರೂ ಸೇರಿ ಸಂಗೀತದ ರಂಗಭೂಮಿಯ ಪ್ರದರ್ಶನ ನೋಡಲು ಒಟ್ಟಿಗೆ ಹೋಗುತ್ತಿದ್ದವರು. ವಿದೇಶ ಪ್ರವಾಸ ಮಾಡುತ್ತಿದ್ದರು. ಕನ್ನಡಿಗರ ನಾಟಕ ಕಂಪನಿಗಳಲ್ಲೂ ಟೇಂಬೆಯವರು ಗವಾಯಿಯಾಗಿ ಕೆಲಸ ಮಾಡಿದರು.

ಗೋವಿಂದರಾವ್ ಟೇಂಬೆ

ಟೇಂಬೆಯವರ ಆತ್ಮಕಥೆಯ ವಿಶೇಷವೆಂದರೆ, ಇದು ಅವರ ತಂದೆ ತಾಯಿ, ಮಡದಿ ಮಕ್ಕಳು, ಗೆಳೆಯರು ಬಂಧುಗಳನ್ನು ಕುರಿತು ಹೇಳುವುದಿಲ್ಲ. ಬದಲಿಗೆ ಅವರ ಜೀವಿತ ಕಾಲದಲ್ಲಿ ಸಂಗೀತ ಲೋಕದಲ್ಲಿ ನಡೆದ ವಿದ್ಯಮಾನಗಳನ್ನು ಕಟ್ಟಿಕೊಡುತ್ತದೆ. ಈ ಕೃತಿಯಲ್ಲಿ, ಹಿಂದೂಸ್ತಾನಿ ಸಂಗೀತ ಮತ್ತು ಮರಾಠಿ ರಂಗಭೂಮಿ, ಮುಂಬೈ ಚಲನಚಿತ್ರ ರಂಗಗಳನ್ನು ಹೇಗೆ ಎಲ್ಲ ಧರ್ಮದ ಪ್ರತಿಭಾವಂತರು ಸೇರಿ ಬೆಳೆಸಿದರು ಎಂಬುದರ ಅಪೂರ್ವ ಚರಿತ್ರೆ ಸಿಗುತ್ತದೆ. ಅದರಲ್ಲೂ ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ನತ್ಥನ್‌ಖಾನ್ ಮೊದಲಾದವರ ಅದ್ಭುತವಾದ ವ್ಯಕ್ತಿಚಿತ್ರಗಳು ಸಿಗುತ್ತವೆ. ಸಂಗೀತ ಲೋಕದಲ್ಲಿದ್ದ ಸ್ಪರ್ಧೆ ಅಸೂಯೆ ಸಣ್ಣತನಗಳ ಚಿತ್ರಗಳೂ, ಉದಾರತೆ ಪ್ರೀತಿ ಬೆಳೆಸುವಿಕೆಯ ಚಿತ್ರಗಳೂ ಇಲ್ಲಿವೆ. ಶ್ರವ್ಯಾನುಭವಕ್ಕೆ ಸಂಬಂಧಿಸಿದ ಸಂಗೀತದ ಸೊಗಸನ್ನು ಬಣ್ಣಿಸಲು ಟೇಂಬೆಯವರು ಬಳಸಿರುವ ರೂಪಕಗಳು ವಿಶೇಷವಾಗಿವೆ. ಒಂದು ರೂಪಕ ನನಗೆ ಬಹಳ ಸೆಳೆಯಿತು. ಅದು ಪಶ್ಚಿಮದ ವಾದ್ಯವಾದ ಹಾರ್ಮೊನಿಯಂಅನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಳಗಿಸುವಾಗ ಟೇಂಬೆಯವರು ಪಟ್ಟ ಕಷ್ಟವನ್ನು ಕುರಿತದ್ದು. ಅದನ್ನವರು “ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎರಕ ಹೊಯ್ದ ನರ್ತಕಿಗೆ ಭಾರತೀಯ ಕುಲವಧುವಿನ ಆಭರಣಗಳನ್ನು ತೊಡಿಸಿದಷ್ಟು ಕಠಿಣವಾದ ಕಾರ್ಯ” ಎನ್ನುತ್ತಾರೆ. ಇದು, ಬಿಎಂಶ್ರೀಯವರು ‘ಇಂಗ್ಲಿಷ್ ಗೀತಗಳು’ ಅನುವಾದವನ್ನು ಮಾಡುವಾಗ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದೆ. ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ’ ಎಂದು ಬಣ್ಣಿಸಿದ ರೂಪಕವನ್ನು ನೆನಪಿಸುತ್ತದೆ. ಹೀಗಾಗಿ ಈ ಕೃತಿ ಪಶ್ಚಿಮದ ಸಂಸ್ಕೃತಿ ನಾಗರಿಕತೆಗಳ ಜತೆ, ಭಾರತೀಯ ಸಮಾಜವು ಅನುಸಂಧಾನ ಮಾಡುತ್ತಿದ್ದ ಚರಿತ್ರೆಯ ಕೃತಿಯೂ ಆಗಿದೆ. ಇದು ವಿಶೇಷ ತಜ್ಞತೆಯಿರುವ ಕ್ಷೇತ್ರದ ಅನುಭವವಿರುವ ಕೃತಿಯಾದರೂ ಸಾಮಾನ್ಯರೂ ಕಾದಂಬರಿಯಂತೆ ಓದಬಹುದು.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

ಭಾರತದಲ್ಲಿ ಚರಿತ್ರೆ ಎಂದರೆ ಹಿಂದಿನ ರಾಜರು ಚಕ್ರವರ್ತಿಗಳು ಆಳಿದ, ಯುದ್ಧಮಾಡಿದ, ಮಡಿದ ಕಥನಗಳು ಎಂಬಂತಾಗಿದೆ. ಇವು ವರ್ತಮಾನದಲ್ಲಿ ಸಮುದಾಯಗಳ ನಡುವೆ ವೈಮನಸ್ಸನ್ನು ಹರಡಲು ಹತ್ಯಾರಗಳಾಗಿವೆ. ಇಂತಹ ಚರಿತ್ರೆಯನ್ನು ಬ್ರಿಟಿಷರು ಆರಂಭಿಸಿದರು. ಮತೀಯವಾದವು ಇದನ್ನು ಮುಂದುವರಿಸಿತು. ಅದೀಗ ನಮ್ಮ ಪಠ್ಯಪುಸ್ತಕಗಳನ್ನು ಆಳವಾಗಿ ಹೊಕ್ಕಿದೆ. ಆದರೆ ಚರಿತ್ರೆಯಲ್ಲಿ ಸಾಹಿತ್ಯದ ಸಂಗೀತದ ನೃತ್ಯದ ಸಿನಿಮಾದ ಭಾಷೆಗಳ ರಂಗಭೂಮಿಯ ಅಧ್ಯಾಯಗಳೂ ಇವೆ. ಜಾತಿಮತಗಳ ಹಂಗಿಲ್ಲದ ಆದಿಮಾನವರ ಚರಿತ್ರೆಯೂ ಇದೆ. ಇವನ್ನು ನಮ್ಮ ಗತಕಾಲದ ಮತ್ತು ವರ್ತಮಾನದ ತಿಳಿವಳಿಕೆ ರೂಪಿಸಲು ಬಳಸುವುದು ಕಡಿಮೆ. ಈ ಚರ್ಚೆಯ ಹಿನ್ನೆಲೆಯಲ್ಲಿ ಟೇಂಬೆಯವರ ಕೃತಿಯು ಇಂತಹ ಪರ್ಯಾಯ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಗುಬ್ಬಿವೀರಣ್ಣನವರ ‘ಗುಬ್ಬಿಕಂಪನಿ’, ಬಿ.ವಿ ಕಾರಂತರ ‘ಇಲ್ಲಿರಲಾರೆ’ ಮೊದಲಾದ ಕಲಾಲೋಕದ ಆತ್ಮಚರಿತ್ರೆಯನ್ನಾಗಲಿ, ಸಿನಿಮಾ ಸಂಗೀತ ರಂಗಭೂಮಿ ಚಿತ್ರಕಲೆ ವಾಸ್ತುಶಿಲ್ಪ ಕುರಿತ ಕೃತಿಗಳನ್ನಾಗಲಿ ಇಲ್ಲಿ ಸ್ಮರಿಸಬೇಕು.

ಇಂತಹ ಅಮೂಲ್ಯವೂ ಚಾರಿತ್ರಿಕ ಮಹತ್ವವೂ ಇರುವ ಕೃತಿಯನ್ನು ಮರಾಠಿಯಿಂದ ಬೆಳಗಾವಿಯ ಸಂಗೀತ ಚರಿತ್ರೆಕಾರ ಶಿರೀಷ್ ಜೋಶಿ ಕನ್ನಡಕ್ಕೆ ತಂದಿದ್ದಾರೆ. ಅವರ ಅನುವಾದ ಬಹಳ ಆಪ್ತವಾಗಿದೆ. ಅವರು ಸ್ವತಃ ಸಂಗೀತದವರು. ಕುಮಾರ ಗಂಧರ್ವ, ಬಸವರಾಜ ರಾಜಗುರು ಜೀವನ ಚರಿತ್ರೆಗಳನ್ನು ಬರೆದವರು. ಗಡಿಜಗಳ, ನದಿಜಗಳಗಳಲ್ಲಿ ಎರಡು ಭಾಷಿಕ ಸಮುದಾಯಗಳ ನಡುವೆ ಸದಾ ಕಿಡಿ ಹಾರುವ ಸಮಯದಲ್ಲಿ, ಇಂತಹ ಪುಸ್ತಕಗಳು ಎರಡು ಭಾಷಿಕರ ನಡುವೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕಾಣಿಸುತ್ತವೆ. ಶಂಬಾ ಜೋಶಿ, ದ.ರಾ. ಬೇಂದ್ರೆ, ರಾ.ಚಿಂ. ಢೇರೆಯವರು ಕರ್ನಾಟಕ-ಮಹಾರಾಷ್ಟ್ರಗಳ ಚಾರಿತ್ರಿಕ ಸಾಂಸ್ಕೃತಿಕ ಸಾಹಿತ್ಯಕ ಸಂಬಂಧಗಳನ್ನು ಶೋಧಿಸಿದವರು. ಚಂದ್ರಕಾಂತ ಪೋಕಳೆ, ಡಿ.ಎಸ್.ಚೌಗಲೆ, ಸರಜೂ ಕಾಟ್ಕರ್, ಶಿರೀಷ ಜೋಶಿ ಮೊದಲಾದವರು ಮರಾಠಿಯಿಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ತಿಳಿವನ್ನು ಉಣಿಸುತ್ತಿರುವವರು. ಇವರಿಗೆ ಕೃತಜ್ಞತೆ ಸಲ್ಲಬೇಕು.

ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)
ಪಂಡಿತ ಗೋವಿಂದರಾವ್ ಟೇಂಬೆ,
ಅನು: ಶಿರೀಷ ಜೋಶಿ, ಕನ್ನಡ ಜಾಗೃತ್ತಿ ಪುಸ್ತಕ ಮಾಲೆ, ಅಲ್ಲಮ ಪ್ರಭು ಜನಕಲ್ಯಾಣ ಸಂಸ್ಥೆ,
ಚಿಂಚಣಿ

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...