Homeಅಂಕಣಗಳುಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

- Advertisement -
- Advertisement -

ಶಾಲೆ ಎಂಬುದು ಒಂದು ಜಾಹಿರಾತು ಸಂಸ್ಥೆ. ಈ ಸಮಾಜವು ಇರುವ ಹಾಗೆಯೇ ಇರಬೇಕು ಎಂದು ನಿಮ್ಮನ್ನು ನಂಬಿಸುವುದು ಆ ಜಾಹಿರಾತು ಸಂಸ್ಥೆಯ ಕೆಲಸ” ಎಂದು ತಮ್ಮ ಡಿಸ್ಕೂಲಿಂಗ್ ಸೊಸೈಟಿ (1971) ಪುಸ್ತಕದಲ್ಲಿ ಎಚ್ಚರಿಸುತ್ತಾರೆ ಇವಾನ್ ಇಲ್ಲಿಯಚ್.

ಈ ಸಮಾಜದಲ್ಲಿ ನಮಗೆ ಶೈಕ್ಷಣಿಕ ಭ್ರಮೆಗಳನ್ನು ಹುಟ್ಟಿಸಲಾಗಿದ್ದು, ಶಾಲಾ ಸಂಪ್ರದಾಯವು ಅದನ್ನು ಜೀವಂತವಾಗಿರಿಸಲು ಇರುವ ಒಂದು ಸಾಧನ ಎಂದು ಗಟ್ಟಿಯಾಗಿ ಹೇಳುವರು ಇವಾನ್. ಮೌಲ್ಯಗಳನ್ನು ಸಾಂಸ್ಥಿಕ ರೂಪಗೊಳಿಸುವುದು, ಆ ಮೌಲ್ಯಗಳನ್ನು ತೂಗಲು ಮಾನದಂಡಗಳು, ಮೌಲ್ಯಗಳ ಒಂದಷ್ಟು ಮೊತ್ತ ಮತ್ತು ಆ ಮೌಲ್ಯಗಳಿಂದ ತನ್ನನ್ನು ತಾನು ಶಾಶ್ವತವಾಗಿ ಉದ್ಧರಿಸಿಕೊಳ್ಳಲು ಸಾಧ್ಯ; ಇವೆಲ್ಲವೂ ಈ ಸಮಾಜ ಹುಟ್ಟಿಸಿರುವ ಭ್ರಮೆಗಳು.

ಸಮಾಜದಲ್ಲಿ ಅನಿವಾರ್ಯವೆನಿಸುವ ಮೌಲ್ಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯ ಭಾಗ ಶಾಲೆಗಳು. ಅದರ ಒಡೆತನ ಸಾಂಸ್ಥಿಕ ರೂಪದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯದು. ಅಂತಹ ಮೌಲ್ಯಗಳ ಬೇಡಿಕೆಯು ಇರುವುದರಿಂದ ಉತ್ಪಾದನೆಯೂ ಆಗುತ್ತಿದೆ. ಈ ಪ್ರಕ್ರಿಯೆಯ ವರ್ತುಲವನ್ನು ತಿಳಿದರೆ ಸಾಂಸ್ಥಿಕ ರೂಪದಲ್ಲಿರುವ ಮೌಲ್ಯಗಳ ಭ್ರಮೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮೌಲ್ಯಗಳ ಮಿಥ್ ಅನ್ನು ಸೃಷ್ಟಿಸುವ ಈ ವಿಷಯದ ಬಗ್ಗೆ ಇನ್ನೂ ಸರಳವಾಗಿ ತಾಂತ್ರಿಕ ಹಿನ್ನೆಲೆಯಲ್ಲಿಯೇ ತಿಳಿಯೋಣ. ಶಾಲೆಯು ಬೋಧನೆಯಿಂದ ಕಲಿಕೆಯುಂಟಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಆಗ ಶಾಲೆಗೆ ಬರಲೇಬೇಕು ಮತ್ತು ತರಗತಿಗಳಲ್ಲಿ ಕುಳಿತುಕೊಳ್ಳಲೇಬೇಕು ಎಂಬ ಒತ್ತಡವನ್ನು ಕೂಡಾ ಸೃಷ್ಟಿಸುತ್ತದೆ. ಕಂಪಸ್ಲರಿ ಅಟೆಂಡೆನ್ಸ್ ಎನ್ನುವುದು ಒಂದು ಮೌಲಿಕವಾದ ಅಂಶವಾಗಿದೆ. ಆದರೆ ಅದೊಂದು ಭ್ರಮೆಯೇ ಹೊರತು ನಿಜವೇನಿಲ್ಲ. ತಪ್ಪದೇ ಶಾಲೆಗೆ ಹೋಗಬೇಕು ಎಂಬ ಸಂಪ್ರದಾಯವು ಮನುಷ್ಯನು ತನ್ನ ಜೀವನದ ಪರಿಸರದಿಂದ ಕಲಿಯುವ ವಿಷಯಗಳಿಗೆ ವಿರುದ್ಧವಾಗಿದೆ. ಒಂದು ದಿನವೂ ಶಾಲೆಗೆ ತಪ್ಪದೇ ಹೋಗುವವರಿಗೆ ಒಂದು ಹೆಮ್ಮೆ ಮತ್ತು ಬಹುಮಾನಕ್ಕೂ ಭಾಜನರಾಗುತ್ತಾರೆ. ಇದರೊಟ್ಟಿಗೆ ಶಾಲೆಗೆ ಬರದಿರುವವರ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಅಮಾನ್ಯ ಮಾಡುತ್ತಾರೆ. ಬೋಧನೆಗಳನ್ನು ಕೇಳದೇ ತಾವೇ ಕಲಿಯಲು ಸಾಧ್ಯವೇ ಎಂದು ಅನುಮಾನಿಸುತ್ತಾರೆ. ಬೋಧನೆ ಇಲ್ಲದೆ ಕಲಿಕೆಯಿಲ್ಲ ಎಂಬ ಮಹಾಭ್ರಮೆ ಸೃಷ್ಟಿಯಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬನು ತಾನೇ ಸ್ವಸಾಮರ್ಥ್ಯದಿಂದ ಮತ್ತು ಪ್ರಯೋಗಶೀಲತೆಯಿಂದ ವೃತ್ತಿಪರನಾಗುವ ಬಗೆಯನ್ನು ಅನುಮಾನಿಸುತ್ತಾ ಮತ್ತು ಅಪಮಾನಿಸುತ್ತಾ ಸಾಂಸ್ಥಿಕ ರೂಪದ ಶಿಕ್ಷಣ ಪಡೆದರೇನೇ ಅವನು ವಿದ್ಯಾವಂತ ಎಂಬ ಮಿಥ್ ಅನ್ನು ನಂಬಿ ಸಾಧಾರಣ ಜನರೆಲ್ಲರೂ ಶಿಕ್ಷಣ ಸಂಸ್ಥೆಗಳಿಗೆ ಅಧೀನರಾಗುತ್ತಾರೆ ಮತ್ತು ಅವರ ವಾಣಿಜ್ಯ ಉದ್ದೇಶಗಳಿಗೆ ಗಿರಾಕಿಗಳಾಗುತ್ತಾರೆ.

ತಾವು ಪಡೆಯುತ್ತಿರುವ ಶಿಕ್ಷಣ ಶಾಶ್ವತ ಮತ್ತು ಅದು ತಮ್ಮ ಸಂಪೂರ್ಣ ಜೀವನಕ್ಕೆ ಎಂಬಂತಹ ಮತ್ತೊಂದು ಮಿಥ್ ಈ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವವು. ಅದಕ್ಕೆ ಉನ್ನತ ಶಿಕ್ಷಣಕ್ಕೇರುತ್ತಿರಬೇಕೆಂಬ ಭ್ರಮೆಯಿಂದ ಸ್ಪರ್ಧಾತ್ಮಕವಾಗಿ ಪಠ್ಯಕ್ರಮವನ್ನು ಅನುಸರಿಸುತ್ತಾ ಹೋಗುತ್ತದೆ. ವಾಸ್ತವವಾಗಿ ಪದವಿ ಪಡೆದ ವ್ಯಕ್ತಿ ಏನನ್ನು ಪಡೆಯುತ್ತಾನೆಂದು ಆಶ್ವಾಸನೆ ಕೊಟ್ಟಿರುತ್ತದೆಯೋ ವಾಸ್ತವದಲ್ಲಿ ಅವನು ಅದನ್ನೇನೂ ಪಡೆದಿರುವುದಿಲ್ಲ. ಆದರೆ ಶಾಲೆಯ ಸಾಂಪ್ರದಾಯಕ ಭಾಷೆಯು ಅಲಂಕಾರಿಕವಾಗಿ ಅವನನ್ನು ಮತ್ತು ಸಮಾಜವನ್ನು ಅವನ್ನೆಲ್ಲಾ ಪಡೆದಿರುವ ಹಾಗೆ ಶೈಕ್ಷಣಿಕ ಭ್ರಮೆಯನ್ನು ಹುಟ್ಟಿಸುತ್ತವೆ. ಇವನ್ನು ನಾವು ಯಾವುದೇ ಶಾಲೆಯ ಸಮಾರಂಭದಲ್ಲಿ ಓದುವ ವಾರ್ಷಿಕ ವರದಿಯನ್ನು ಕೇಳಿದರೆ ಇವಾನ್ ಹೇಳುವುದು ಅರ್ಥವಾಗುತ್ತದೆ. ಶೈಕ್ಷಣಿಕ ಪ್ರಗತಿ ಎಂದು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವವರ ಬಿಂಕವನ್ನು ಮತ್ತು ಜಂಭವನ್ನು ನೋಡಿದರೆ ಅವರು ಪಡೆದಿರುವ ಶಾಲಾ ಶಿಕ್ಷಣ ಎಂತಹ ಪೊಳ್ಳು ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಯಬಹುದು. ಪಠ್ಯಕ್ರಮದ ಅನುಸರಣೆ ಮಾಡುತ್ತಾ ಅತ್ಯುತ್ತಮ ಶ್ರೇಣಿಯನ್ನು ಪಡೆದು ಉನ್ನತಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟು (ಡ್ರಾಪೌಟ್) ತನ್ನ ಇಚ್ಛೆಗೆ ಮತ್ತು ಬದುಕಿಗೆ ಏನಾದರೂ ಮಾಡಿಕೊಂಡಿರುವವನ ಕಿಂಚಿತ್ತಿಗೂ ಸಮವಿರದಿದ್ದರೂ ತಾನೇನೋ ಸಾಧಿಸಿರುವ ಭ್ರಮೆಗೆ ಒಳಗಾಗಿರುತ್ತಾನೆ. ಅವನ ಶಾಲಾ ಸಂಪ್ರದಾಯದ ಪೊಳ್ಳು ಅಲಂಕಾರಿಕ ಮಾತುಗಳ ಗುಂಗಿನಲ್ಲೇ ತೇಲುತ್ತಿರುತ್ತಾನೆ.

ಇವಾನ್ ಹೇಳುವಂತೆ ಶಾಲೆಗಳು ಏನನ್ನು ಒತ್ತರಿಸಿ ಇಟ್ಟುಕೊಂಡಿದೆಯೋ ಆ ಸಾಂಸ್ಥಿಕ ರೂಪವು ತಲೆಗೆಳಗಾಗಬೇಕು. ಸಾಂಪ್ರದಾಯಿಕ ಶಾಲಾ ಕಲಿಕೆಯಿಂದ ಮಕ್ಕಳು ಮುಕ್ತರಾಗಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ವಿದ್ಯೆ ಕಲಿಸುವ ಅಧಿಕಾರವನ್ನು ವ್ಯಕ್ತಿಗಳು ಮರುಪಡೆಯಬೇಕು. ಸಮಾಜೋರಾಜಕೀಯ ಶಕ್ತಿಗಳು ಮಗುವಿನ ವಿದ್ಯಾಭ್ಯಾಸಕ್ಕೆ ಒಂದು ವಿಷ ವರ್ತುಲವನ್ನು ಸೃಷ್ಟಿಸಿದೆ. ಅದರಿಂದ ಬಿಡುಗಡೆ ಪಡೆಯಲು ಸಮಾಜದಲ್ಲಿ ಶಿಕ್ಷಣ ಕ್ರಮವೇ ಬದಲಾಗಬೇಕಿದೆ. ಈ ವಾದವನ್ನು ಮುಂದಿಡುತ್ತಾ ಇವಾನ್ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನು ಅಲುಗಾಡಿಸುತ್ತಾರೆ. ಜೊತೆಗೆ ‘ಈ ಶಿಥಿಲಗೊಂಡಿರುವ ಶಾಲೆಯ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಆಗುವುದಿಲ್ಲ’ ಎಂದು ಅವರು ಹೇಳುತ್ತಾ, ‘ಹಾಗಾಗಿ ಮಾನವ ಸಮುದಾಯದ ಬದುಕು ಛಿದ್ರವಾಗುವುದನ್ನು ತಪ್ಪಿಸಬೇಕೆಂದರೆ ಶಾಲೆಯ ವ್ಯವಸ್ಥೆಯನ್ನೇ ಸಂಪೂರ್ಣ ಕಿತ್ತೊಗೆಯಬೇಕು’ ಎಂದು ದೃಢವಾಗಿ ಹೇಳುತ್ತಾರೆ.

ಶಾಲೆ ಕೈಗೆಟುಕದ ಎಷ್ಟೋ ಬಡ ವಿದ್ಯಾರ್ಥಿಗಳು ತಾವು ಶಾಲೆಗೆ ಹೋಗಿಲ್ಲ ಎಂದು ದುಃಖಿಸುವಷ್ಟು, ಖಿನ್ನತೆಗೆ ಜಾರುವಂತೆ ಶಾಲೆಗಳು ಆಡಂಬರದಿಂದ ಮೆರೆಯುತ್ತವೆ. ಶಾಲೆಯಿಂದಲೇ ವಿದ್ಯಾಭ್ಯಾಸ, ವಿದ್ಯಾಭ್ಯಾಸದಿಂದಲೇ ಬದುಕು ಹಾಗಾಗಿ ಶಾಲೆಯಿಂದಲೇ ಬದುಕು ಎಂಬ ಭ್ರಮೆಯ ಅರವಳಿಕೆಯಲ್ಲಿ ತಮ್ಮ ಮೂಲ ಸಾಮರ್ಥ್ಯವನ್ನೇ ಅನುಮಾನಿಸುತ್ತಾರೆ. ತಮ್ಮ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಕಡೆಗಣಿಸಿ ಕೃತಕವಾಗಿರುವುದರ ಕಡೆಗೆ ವಾಲುತ್ತಾರೆ. ಆದರೆ ಇತ್ತ ಕಡೆ ಉತ್ತಮ ಅಂಕಗಳನ್ನು ಪಡೆದು ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಅವರಿಗೆ ಸಮ ಬಾರದವರಾಗಿರುತ್ತಾರೆ. ಇವುಗಳನ್ನು ಗಮನಿಸುವ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಾರೆ. ಒಟ್ಟಾರೆ ಪರೀಕ್ಷೆ, ಅದರ ಅಂಕಗಳು, ಫಲಿತಾಂಶ, ಶ್ರೇಣಿಗಳು; ಹೀಗೆ ಎಲ್ಲವೂ ಕೂಡಾ ಭ್ರಮಾಧೀನವಾಗಿಯೇ ಇರುವಂತೆ ನೋಡಿಕೊಳ್ಳುತ್ತವೆ.

ಶಾಲೆಗಳು ಸಮಾಜವನ್ನು ಒಡೆಯುತ್ತವೆ ಎಂದು ಇವಾನ್ ನೇರವಾಗಿಯೇ ದೂರುತ್ತಾರೆ. ಮತ್ತು ಅವರು ಕೊಡುವ ಕಾರಣಗಳೂ ಕೂಡಾ ಸಮಾಜದ ಮಾನವೀಯ ಬದುಕಿನ ನೆಲೆಗಟ್ಟಿನಿಂದ ಸಮರ್ಪಕವಾಗಿಯೇ ಇವೆ.

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

ಶಾಲಾ ವ್ಯವಸ್ಥೆಯೂ ಕೂಡಾ ಸ್ಥಾಪಕ ಧರ್ಮಗಳಂತೆ ಶ್ರದ್ಧಾನಂಬಿಕೆಗಳನ್ನು ಹುಟ್ಟಿಸಿಕೊಂಡು ತನ್ನ ವಿದ್ಯಾ ದೇವತೆಯ ಭಕ್ತರನ್ನು ಮಂಕರನ್ನಾಗಿಸುತ್ತಿದೆ. ಒಬ್ಬನ ಕೌಶಲ್ಯ ಮತ್ತು ಪ್ರತಿಭೆಯು ಶೈಕ್ಷಣಿಕ ಸಂಸ್ಥೆಯಿಂದ ಪ್ರಮಾಣಿಸಿದ್ದರೆ ಮಾತ್ರ ಯೋಗ್ಯವಾದುದು ಮತ್ತು ಒಪ್ಪಲು ಅರ್ಹವಾದುದು ಎಂಬ ಸ್ಥಾಪಕ ಭ್ರಮೆಯ ದಾಸರು ಈ ನವೀನ ಯುಗದವರು.

ಇವಾನ್ ಮಂಡಿಸುವ ವಾದದ ಸರಣಿಯಿಂದ ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯನ್ನು ಕಿತ್ತೆಸೆಯಲಾಗದಿದ್ದರೂ ಪ್ರಾಮಾಣಿಕವಾಗಿ ರಿಪೇರಿ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಕೊಡುತ್ತದೆ. ಬೇರೂರಿರುವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇವಾನ್ ಕೊಡುವ ಕರೆಗೆ ವ್ಯಕ್ತಿಗತವಾಗಿ ಓಗೊಡಬಹುದು. ಆದರೆ ಸಾಮುದಾಯಿಕವಾಗಿ ಬಹಳ ಕಷ್ಟ. ಏಕೆಂದರೆ ಈ ಸಂಸ್ಥೆಗಳು ರೂಪಿಸಿರುವ ಹೆಚ್ಚು ಅಪಾಯಕಾರಿಯಾದ ಈ ರಚನೆಯನ್ನು ಮುರಿಯಬೇಕಾದರೆ ಮತ್ತೊಂದು ಕಡಿಮೆ ಅಪಾಯಗಳಿರುವ ಪರ್ಯಾಯ ವ್ಯವಸ್ಥೆಯನ್ನು ಕನಿಷ್ಟ ರೂಪಿಸಬೇಕು.

ಇನ್ನೂ ಮುಂದುವರಿದು ಹೇಳುವುದಾದರೆ ‘ಓರ್ವ ವ್ಯಕ್ತಿಯು ಒಂದು ವ್ಯವಸ್ಥೆಯನ್ನು ವಿರೋಧಿಸಲು ಆತನಿಗೆ ಒಂದು ಆಂತರಿಕ ಶಕ್ತಿ ಇರುತ್ತದೆ. ಒಂದು ಹಿನ್ನೆಲೆಯ ಪ್ರಭಾವವು ದೃಢವಾಗಿರುತ್ತದೆ. ಅಂತಹ ಬಂಡಾಯವನ್ನು ಎಲ್ಲರೂ ಮಾಡಲು ಸಾಧ್ಯವಿರದಂತಹ ಸಮಾಜ ನಮ್ಮದು. ಆದರೆ ವ್ಯಕ್ತಿಯೊಬ್ಬನ ತನ್ನತನದ ಸಾಮರ್ಥ್ಯ ಮತ್ತು ಸಾಮಾಜಿಕ ವಿಶ್ಲೇಷಣೆಗಳ ನೆಲೆಗಟ್ಟಿನಲ್ಲಿ ಹೇಳುವ ಶಾಲೆಗಳ ವಿಷಯವಾಗಿ ಅವರು ಹೇಳುವುದರಲ್ಲಿ ತಥ್ಯವಿದೆ.


ಇದನ್ನು ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಬಹಳ ಅರ್ಥಪೂರ್ಣ ಲೇಖನ ಶಿಕ್ಷಣವೆಂಬ ಭ್ರಮೆಯೇ ಮತ್ತು ಅದೇ ಬದುಕು ರೂಪಿಸುವ ಮಾರ್ಗ ಎಂಬ ಸತ್ಯಗಳನ್ನು ಸೃಷ್ಟಿಸಿ ವ್ಯಾಪಾರ ಉದ್ದಿಮೆಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ನಿಮ್ಮ ಲೇಖನ ನಮ್ಮ ಕಣ್ಣು ತೆರೆಸುತ್ತದೆ

  2. ಔಪಚಾರಿಕ ಶಿಕ್ಷಣಕಿಂತ ಅನೌಪಚಾರಿಕ
    ಶಿಕ್ಷಣವೆ ನಿಜವಾದ ಶಿಕ್ಷಣ ಮತ್ತು ಮೌಲ್ಯಯುತವಾದ‌ ಶಿಕ್ಷಣ. ಶಿಕ್ಷಣ ಎಂದರೆ ಕೇವಲ ತತ್ವಗಳನ್ನು ಬೋಧಿಸುವ ಪಠ್ಯಕ್ರಮವಲ್ಲಾ ಅದು ಮಾನವ ಸರ್ವಾಂಗೀಣ ಅಭಿವೃದ್ಧಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಕಬೇಕು.ಅದು ಜೀವನದಲ್ಲಿ ಮಾರ್ಗ ಸೂಚಕವಾಗಬೇಕು ಅಂದಾಗ ಶಿಕ್ಷಣ ಸಾರ್ಥಕತೆ ಪಡೆಯುತ್ತೆ ಎನ್ನುವುದಕ್ಕೆ ಈ ಅಂಕಣ ಬರಹ ಸಂದರ್ಭುಚಿತವಾಗಿದೆ ಸರ್…..

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...