Homeಅಂಕಣಗಳುಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

- Advertisement -
- Advertisement -

ಶಾಲೆ ಎಂಬುದು ಒಂದು ಜಾಹಿರಾತು ಸಂಸ್ಥೆ. ಈ ಸಮಾಜವು ಇರುವ ಹಾಗೆಯೇ ಇರಬೇಕು ಎಂದು ನಿಮ್ಮನ್ನು ನಂಬಿಸುವುದು ಆ ಜಾಹಿರಾತು ಸಂಸ್ಥೆಯ ಕೆಲಸ” ಎಂದು ತಮ್ಮ ಡಿಸ್ಕೂಲಿಂಗ್ ಸೊಸೈಟಿ (1971) ಪುಸ್ತಕದಲ್ಲಿ ಎಚ್ಚರಿಸುತ್ತಾರೆ ಇವಾನ್ ಇಲ್ಲಿಯಚ್.

ಈ ಸಮಾಜದಲ್ಲಿ ನಮಗೆ ಶೈಕ್ಷಣಿಕ ಭ್ರಮೆಗಳನ್ನು ಹುಟ್ಟಿಸಲಾಗಿದ್ದು, ಶಾಲಾ ಸಂಪ್ರದಾಯವು ಅದನ್ನು ಜೀವಂತವಾಗಿರಿಸಲು ಇರುವ ಒಂದು ಸಾಧನ ಎಂದು ಗಟ್ಟಿಯಾಗಿ ಹೇಳುವರು ಇವಾನ್. ಮೌಲ್ಯಗಳನ್ನು ಸಾಂಸ್ಥಿಕ ರೂಪಗೊಳಿಸುವುದು, ಆ ಮೌಲ್ಯಗಳನ್ನು ತೂಗಲು ಮಾನದಂಡಗಳು, ಮೌಲ್ಯಗಳ ಒಂದಷ್ಟು ಮೊತ್ತ ಮತ್ತು ಆ ಮೌಲ್ಯಗಳಿಂದ ತನ್ನನ್ನು ತಾನು ಶಾಶ್ವತವಾಗಿ ಉದ್ಧರಿಸಿಕೊಳ್ಳಲು ಸಾಧ್ಯ; ಇವೆಲ್ಲವೂ ಈ ಸಮಾಜ ಹುಟ್ಟಿಸಿರುವ ಭ್ರಮೆಗಳು.

ಸಮಾಜದಲ್ಲಿ ಅನಿವಾರ್ಯವೆನಿಸುವ ಮೌಲ್ಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯ ಭಾಗ ಶಾಲೆಗಳು. ಅದರ ಒಡೆತನ ಸಾಂಸ್ಥಿಕ ರೂಪದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯದು. ಅಂತಹ ಮೌಲ್ಯಗಳ ಬೇಡಿಕೆಯು ಇರುವುದರಿಂದ ಉತ್ಪಾದನೆಯೂ ಆಗುತ್ತಿದೆ. ಈ ಪ್ರಕ್ರಿಯೆಯ ವರ್ತುಲವನ್ನು ತಿಳಿದರೆ ಸಾಂಸ್ಥಿಕ ರೂಪದಲ್ಲಿರುವ ಮೌಲ್ಯಗಳ ಭ್ರಮೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮೌಲ್ಯಗಳ ಮಿಥ್ ಅನ್ನು ಸೃಷ್ಟಿಸುವ ಈ ವಿಷಯದ ಬಗ್ಗೆ ಇನ್ನೂ ಸರಳವಾಗಿ ತಾಂತ್ರಿಕ ಹಿನ್ನೆಲೆಯಲ್ಲಿಯೇ ತಿಳಿಯೋಣ. ಶಾಲೆಯು ಬೋಧನೆಯಿಂದ ಕಲಿಕೆಯುಂಟಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಆಗ ಶಾಲೆಗೆ ಬರಲೇಬೇಕು ಮತ್ತು ತರಗತಿಗಳಲ್ಲಿ ಕುಳಿತುಕೊಳ್ಳಲೇಬೇಕು ಎಂಬ ಒತ್ತಡವನ್ನು ಕೂಡಾ ಸೃಷ್ಟಿಸುತ್ತದೆ. ಕಂಪಸ್ಲರಿ ಅಟೆಂಡೆನ್ಸ್ ಎನ್ನುವುದು ಒಂದು ಮೌಲಿಕವಾದ ಅಂಶವಾಗಿದೆ. ಆದರೆ ಅದೊಂದು ಭ್ರಮೆಯೇ ಹೊರತು ನಿಜವೇನಿಲ್ಲ. ತಪ್ಪದೇ ಶಾಲೆಗೆ ಹೋಗಬೇಕು ಎಂಬ ಸಂಪ್ರದಾಯವು ಮನುಷ್ಯನು ತನ್ನ ಜೀವನದ ಪರಿಸರದಿಂದ ಕಲಿಯುವ ವಿಷಯಗಳಿಗೆ ವಿರುದ್ಧವಾಗಿದೆ. ಒಂದು ದಿನವೂ ಶಾಲೆಗೆ ತಪ್ಪದೇ ಹೋಗುವವರಿಗೆ ಒಂದು ಹೆಮ್ಮೆ ಮತ್ತು ಬಹುಮಾನಕ್ಕೂ ಭಾಜನರಾಗುತ್ತಾರೆ. ಇದರೊಟ್ಟಿಗೆ ಶಾಲೆಗೆ ಬರದಿರುವವರ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಅಮಾನ್ಯ ಮಾಡುತ್ತಾರೆ. ಬೋಧನೆಗಳನ್ನು ಕೇಳದೇ ತಾವೇ ಕಲಿಯಲು ಸಾಧ್ಯವೇ ಎಂದು ಅನುಮಾನಿಸುತ್ತಾರೆ. ಬೋಧನೆ ಇಲ್ಲದೆ ಕಲಿಕೆಯಿಲ್ಲ ಎಂಬ ಮಹಾಭ್ರಮೆ ಸೃಷ್ಟಿಯಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬನು ತಾನೇ ಸ್ವಸಾಮರ್ಥ್ಯದಿಂದ ಮತ್ತು ಪ್ರಯೋಗಶೀಲತೆಯಿಂದ ವೃತ್ತಿಪರನಾಗುವ ಬಗೆಯನ್ನು ಅನುಮಾನಿಸುತ್ತಾ ಮತ್ತು ಅಪಮಾನಿಸುತ್ತಾ ಸಾಂಸ್ಥಿಕ ರೂಪದ ಶಿಕ್ಷಣ ಪಡೆದರೇನೇ ಅವನು ವಿದ್ಯಾವಂತ ಎಂಬ ಮಿಥ್ ಅನ್ನು ನಂಬಿ ಸಾಧಾರಣ ಜನರೆಲ್ಲರೂ ಶಿಕ್ಷಣ ಸಂಸ್ಥೆಗಳಿಗೆ ಅಧೀನರಾಗುತ್ತಾರೆ ಮತ್ತು ಅವರ ವಾಣಿಜ್ಯ ಉದ್ದೇಶಗಳಿಗೆ ಗಿರಾಕಿಗಳಾಗುತ್ತಾರೆ.

ತಾವು ಪಡೆಯುತ್ತಿರುವ ಶಿಕ್ಷಣ ಶಾಶ್ವತ ಮತ್ತು ಅದು ತಮ್ಮ ಸಂಪೂರ್ಣ ಜೀವನಕ್ಕೆ ಎಂಬಂತಹ ಮತ್ತೊಂದು ಮಿಥ್ ಈ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವವು. ಅದಕ್ಕೆ ಉನ್ನತ ಶಿಕ್ಷಣಕ್ಕೇರುತ್ತಿರಬೇಕೆಂಬ ಭ್ರಮೆಯಿಂದ ಸ್ಪರ್ಧಾತ್ಮಕವಾಗಿ ಪಠ್ಯಕ್ರಮವನ್ನು ಅನುಸರಿಸುತ್ತಾ ಹೋಗುತ್ತದೆ. ವಾಸ್ತವವಾಗಿ ಪದವಿ ಪಡೆದ ವ್ಯಕ್ತಿ ಏನನ್ನು ಪಡೆಯುತ್ತಾನೆಂದು ಆಶ್ವಾಸನೆ ಕೊಟ್ಟಿರುತ್ತದೆಯೋ ವಾಸ್ತವದಲ್ಲಿ ಅವನು ಅದನ್ನೇನೂ ಪಡೆದಿರುವುದಿಲ್ಲ. ಆದರೆ ಶಾಲೆಯ ಸಾಂಪ್ರದಾಯಕ ಭಾಷೆಯು ಅಲಂಕಾರಿಕವಾಗಿ ಅವನನ್ನು ಮತ್ತು ಸಮಾಜವನ್ನು ಅವನ್ನೆಲ್ಲಾ ಪಡೆದಿರುವ ಹಾಗೆ ಶೈಕ್ಷಣಿಕ ಭ್ರಮೆಯನ್ನು ಹುಟ್ಟಿಸುತ್ತವೆ. ಇವನ್ನು ನಾವು ಯಾವುದೇ ಶಾಲೆಯ ಸಮಾರಂಭದಲ್ಲಿ ಓದುವ ವಾರ್ಷಿಕ ವರದಿಯನ್ನು ಕೇಳಿದರೆ ಇವಾನ್ ಹೇಳುವುದು ಅರ್ಥವಾಗುತ್ತದೆ. ಶೈಕ್ಷಣಿಕ ಪ್ರಗತಿ ಎಂದು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವವರ ಬಿಂಕವನ್ನು ಮತ್ತು ಜಂಭವನ್ನು ನೋಡಿದರೆ ಅವರು ಪಡೆದಿರುವ ಶಾಲಾ ಶಿಕ್ಷಣ ಎಂತಹ ಪೊಳ್ಳು ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಯಬಹುದು. ಪಠ್ಯಕ್ರಮದ ಅನುಸರಣೆ ಮಾಡುತ್ತಾ ಅತ್ಯುತ್ತಮ ಶ್ರೇಣಿಯನ್ನು ಪಡೆದು ಉನ್ನತಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟು (ಡ್ರಾಪೌಟ್) ತನ್ನ ಇಚ್ಛೆಗೆ ಮತ್ತು ಬದುಕಿಗೆ ಏನಾದರೂ ಮಾಡಿಕೊಂಡಿರುವವನ ಕಿಂಚಿತ್ತಿಗೂ ಸಮವಿರದಿದ್ದರೂ ತಾನೇನೋ ಸಾಧಿಸಿರುವ ಭ್ರಮೆಗೆ ಒಳಗಾಗಿರುತ್ತಾನೆ. ಅವನ ಶಾಲಾ ಸಂಪ್ರದಾಯದ ಪೊಳ್ಳು ಅಲಂಕಾರಿಕ ಮಾತುಗಳ ಗುಂಗಿನಲ್ಲೇ ತೇಲುತ್ತಿರುತ್ತಾನೆ.

ಇವಾನ್ ಹೇಳುವಂತೆ ಶಾಲೆಗಳು ಏನನ್ನು ಒತ್ತರಿಸಿ ಇಟ್ಟುಕೊಂಡಿದೆಯೋ ಆ ಸಾಂಸ್ಥಿಕ ರೂಪವು ತಲೆಗೆಳಗಾಗಬೇಕು. ಸಾಂಪ್ರದಾಯಿಕ ಶಾಲಾ ಕಲಿಕೆಯಿಂದ ಮಕ್ಕಳು ಮುಕ್ತರಾಗಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ವಿದ್ಯೆ ಕಲಿಸುವ ಅಧಿಕಾರವನ್ನು ವ್ಯಕ್ತಿಗಳು ಮರುಪಡೆಯಬೇಕು. ಸಮಾಜೋರಾಜಕೀಯ ಶಕ್ತಿಗಳು ಮಗುವಿನ ವಿದ್ಯಾಭ್ಯಾಸಕ್ಕೆ ಒಂದು ವಿಷ ವರ್ತುಲವನ್ನು ಸೃಷ್ಟಿಸಿದೆ. ಅದರಿಂದ ಬಿಡುಗಡೆ ಪಡೆಯಲು ಸಮಾಜದಲ್ಲಿ ಶಿಕ್ಷಣ ಕ್ರಮವೇ ಬದಲಾಗಬೇಕಿದೆ. ಈ ವಾದವನ್ನು ಮುಂದಿಡುತ್ತಾ ಇವಾನ್ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನು ಅಲುಗಾಡಿಸುತ್ತಾರೆ. ಜೊತೆಗೆ ‘ಈ ಶಿಥಿಲಗೊಂಡಿರುವ ಶಾಲೆಯ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಆಗುವುದಿಲ್ಲ’ ಎಂದು ಅವರು ಹೇಳುತ್ತಾ, ‘ಹಾಗಾಗಿ ಮಾನವ ಸಮುದಾಯದ ಬದುಕು ಛಿದ್ರವಾಗುವುದನ್ನು ತಪ್ಪಿಸಬೇಕೆಂದರೆ ಶಾಲೆಯ ವ್ಯವಸ್ಥೆಯನ್ನೇ ಸಂಪೂರ್ಣ ಕಿತ್ತೊಗೆಯಬೇಕು’ ಎಂದು ದೃಢವಾಗಿ ಹೇಳುತ್ತಾರೆ.

ಶಾಲೆ ಕೈಗೆಟುಕದ ಎಷ್ಟೋ ಬಡ ವಿದ್ಯಾರ್ಥಿಗಳು ತಾವು ಶಾಲೆಗೆ ಹೋಗಿಲ್ಲ ಎಂದು ದುಃಖಿಸುವಷ್ಟು, ಖಿನ್ನತೆಗೆ ಜಾರುವಂತೆ ಶಾಲೆಗಳು ಆಡಂಬರದಿಂದ ಮೆರೆಯುತ್ತವೆ. ಶಾಲೆಯಿಂದಲೇ ವಿದ್ಯಾಭ್ಯಾಸ, ವಿದ್ಯಾಭ್ಯಾಸದಿಂದಲೇ ಬದುಕು ಹಾಗಾಗಿ ಶಾಲೆಯಿಂದಲೇ ಬದುಕು ಎಂಬ ಭ್ರಮೆಯ ಅರವಳಿಕೆಯಲ್ಲಿ ತಮ್ಮ ಮೂಲ ಸಾಮರ್ಥ್ಯವನ್ನೇ ಅನುಮಾನಿಸುತ್ತಾರೆ. ತಮ್ಮ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಕಡೆಗಣಿಸಿ ಕೃತಕವಾಗಿರುವುದರ ಕಡೆಗೆ ವಾಲುತ್ತಾರೆ. ಆದರೆ ಇತ್ತ ಕಡೆ ಉತ್ತಮ ಅಂಕಗಳನ್ನು ಪಡೆದು ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಅವರಿಗೆ ಸಮ ಬಾರದವರಾಗಿರುತ್ತಾರೆ. ಇವುಗಳನ್ನು ಗಮನಿಸುವ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಾರೆ. ಒಟ್ಟಾರೆ ಪರೀಕ್ಷೆ, ಅದರ ಅಂಕಗಳು, ಫಲಿತಾಂಶ, ಶ್ರೇಣಿಗಳು; ಹೀಗೆ ಎಲ್ಲವೂ ಕೂಡಾ ಭ್ರಮಾಧೀನವಾಗಿಯೇ ಇರುವಂತೆ ನೋಡಿಕೊಳ್ಳುತ್ತವೆ.

ಶಾಲೆಗಳು ಸಮಾಜವನ್ನು ಒಡೆಯುತ್ತವೆ ಎಂದು ಇವಾನ್ ನೇರವಾಗಿಯೇ ದೂರುತ್ತಾರೆ. ಮತ್ತು ಅವರು ಕೊಡುವ ಕಾರಣಗಳೂ ಕೂಡಾ ಸಮಾಜದ ಮಾನವೀಯ ಬದುಕಿನ ನೆಲೆಗಟ್ಟಿನಿಂದ ಸಮರ್ಪಕವಾಗಿಯೇ ಇವೆ.

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

ಶಾಲಾ ವ್ಯವಸ್ಥೆಯೂ ಕೂಡಾ ಸ್ಥಾಪಕ ಧರ್ಮಗಳಂತೆ ಶ್ರದ್ಧಾನಂಬಿಕೆಗಳನ್ನು ಹುಟ್ಟಿಸಿಕೊಂಡು ತನ್ನ ವಿದ್ಯಾ ದೇವತೆಯ ಭಕ್ತರನ್ನು ಮಂಕರನ್ನಾಗಿಸುತ್ತಿದೆ. ಒಬ್ಬನ ಕೌಶಲ್ಯ ಮತ್ತು ಪ್ರತಿಭೆಯು ಶೈಕ್ಷಣಿಕ ಸಂಸ್ಥೆಯಿಂದ ಪ್ರಮಾಣಿಸಿದ್ದರೆ ಮಾತ್ರ ಯೋಗ್ಯವಾದುದು ಮತ್ತು ಒಪ್ಪಲು ಅರ್ಹವಾದುದು ಎಂಬ ಸ್ಥಾಪಕ ಭ್ರಮೆಯ ದಾಸರು ಈ ನವೀನ ಯುಗದವರು.

ಇವಾನ್ ಮಂಡಿಸುವ ವಾದದ ಸರಣಿಯಿಂದ ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯನ್ನು ಕಿತ್ತೆಸೆಯಲಾಗದಿದ್ದರೂ ಪ್ರಾಮಾಣಿಕವಾಗಿ ರಿಪೇರಿ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಕೊಡುತ್ತದೆ. ಬೇರೂರಿರುವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇವಾನ್ ಕೊಡುವ ಕರೆಗೆ ವ್ಯಕ್ತಿಗತವಾಗಿ ಓಗೊಡಬಹುದು. ಆದರೆ ಸಾಮುದಾಯಿಕವಾಗಿ ಬಹಳ ಕಷ್ಟ. ಏಕೆಂದರೆ ಈ ಸಂಸ್ಥೆಗಳು ರೂಪಿಸಿರುವ ಹೆಚ್ಚು ಅಪಾಯಕಾರಿಯಾದ ಈ ರಚನೆಯನ್ನು ಮುರಿಯಬೇಕಾದರೆ ಮತ್ತೊಂದು ಕಡಿಮೆ ಅಪಾಯಗಳಿರುವ ಪರ್ಯಾಯ ವ್ಯವಸ್ಥೆಯನ್ನು ಕನಿಷ್ಟ ರೂಪಿಸಬೇಕು.

ಇನ್ನೂ ಮುಂದುವರಿದು ಹೇಳುವುದಾದರೆ ‘ಓರ್ವ ವ್ಯಕ್ತಿಯು ಒಂದು ವ್ಯವಸ್ಥೆಯನ್ನು ವಿರೋಧಿಸಲು ಆತನಿಗೆ ಒಂದು ಆಂತರಿಕ ಶಕ್ತಿ ಇರುತ್ತದೆ. ಒಂದು ಹಿನ್ನೆಲೆಯ ಪ್ರಭಾವವು ದೃಢವಾಗಿರುತ್ತದೆ. ಅಂತಹ ಬಂಡಾಯವನ್ನು ಎಲ್ಲರೂ ಮಾಡಲು ಸಾಧ್ಯವಿರದಂತಹ ಸಮಾಜ ನಮ್ಮದು. ಆದರೆ ವ್ಯಕ್ತಿಯೊಬ್ಬನ ತನ್ನತನದ ಸಾಮರ್ಥ್ಯ ಮತ್ತು ಸಾಮಾಜಿಕ ವಿಶ್ಲೇಷಣೆಗಳ ನೆಲೆಗಟ್ಟಿನಲ್ಲಿ ಹೇಳುವ ಶಾಲೆಗಳ ವಿಷಯವಾಗಿ ಅವರು ಹೇಳುವುದರಲ್ಲಿ ತಥ್ಯವಿದೆ.


ಇದನ್ನು ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಬಹಳ ಅರ್ಥಪೂರ್ಣ ಲೇಖನ ಶಿಕ್ಷಣವೆಂಬ ಭ್ರಮೆಯೇ ಮತ್ತು ಅದೇ ಬದುಕು ರೂಪಿಸುವ ಮಾರ್ಗ ಎಂಬ ಸತ್ಯಗಳನ್ನು ಸೃಷ್ಟಿಸಿ ವ್ಯಾಪಾರ ಉದ್ದಿಮೆಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ನಿಮ್ಮ ಲೇಖನ ನಮ್ಮ ಕಣ್ಣು ತೆರೆಸುತ್ತದೆ

  2. ಔಪಚಾರಿಕ ಶಿಕ್ಷಣಕಿಂತ ಅನೌಪಚಾರಿಕ
    ಶಿಕ್ಷಣವೆ ನಿಜವಾದ ಶಿಕ್ಷಣ ಮತ್ತು ಮೌಲ್ಯಯುತವಾದ‌ ಶಿಕ್ಷಣ. ಶಿಕ್ಷಣ ಎಂದರೆ ಕೇವಲ ತತ್ವಗಳನ್ನು ಬೋಧಿಸುವ ಪಠ್ಯಕ್ರಮವಲ್ಲಾ ಅದು ಮಾನವ ಸರ್ವಾಂಗೀಣ ಅಭಿವೃದ್ಧಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಕಬೇಕು.ಅದು ಜೀವನದಲ್ಲಿ ಮಾರ್ಗ ಸೂಚಕವಾಗಬೇಕು ಅಂದಾಗ ಶಿಕ್ಷಣ ಸಾರ್ಥಕತೆ ಪಡೆಯುತ್ತೆ ಎನ್ನುವುದಕ್ಕೆ ಈ ಅಂಕಣ ಬರಹ ಸಂದರ್ಭುಚಿತವಾಗಿದೆ ಸರ್…..

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....