Homeಅಂಕಣಗಳುಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

- Advertisement -
- Advertisement -

ಶಾಲೆ ಎಂಬುದು ಒಂದು ಜಾಹಿರಾತು ಸಂಸ್ಥೆ. ಈ ಸಮಾಜವು ಇರುವ ಹಾಗೆಯೇ ಇರಬೇಕು ಎಂದು ನಿಮ್ಮನ್ನು ನಂಬಿಸುವುದು ಆ ಜಾಹಿರಾತು ಸಂಸ್ಥೆಯ ಕೆಲಸ” ಎಂದು ತಮ್ಮ ಡಿಸ್ಕೂಲಿಂಗ್ ಸೊಸೈಟಿ (1971) ಪುಸ್ತಕದಲ್ಲಿ ಎಚ್ಚರಿಸುತ್ತಾರೆ ಇವಾನ್ ಇಲ್ಲಿಯಚ್.

ಈ ಸಮಾಜದಲ್ಲಿ ನಮಗೆ ಶೈಕ್ಷಣಿಕ ಭ್ರಮೆಗಳನ್ನು ಹುಟ್ಟಿಸಲಾಗಿದ್ದು, ಶಾಲಾ ಸಂಪ್ರದಾಯವು ಅದನ್ನು ಜೀವಂತವಾಗಿರಿಸಲು ಇರುವ ಒಂದು ಸಾಧನ ಎಂದು ಗಟ್ಟಿಯಾಗಿ ಹೇಳುವರು ಇವಾನ್. ಮೌಲ್ಯಗಳನ್ನು ಸಾಂಸ್ಥಿಕ ರೂಪಗೊಳಿಸುವುದು, ಆ ಮೌಲ್ಯಗಳನ್ನು ತೂಗಲು ಮಾನದಂಡಗಳು, ಮೌಲ್ಯಗಳ ಒಂದಷ್ಟು ಮೊತ್ತ ಮತ್ತು ಆ ಮೌಲ್ಯಗಳಿಂದ ತನ್ನನ್ನು ತಾನು ಶಾಶ್ವತವಾಗಿ ಉದ್ಧರಿಸಿಕೊಳ್ಳಲು ಸಾಧ್ಯ; ಇವೆಲ್ಲವೂ ಈ ಸಮಾಜ ಹುಟ್ಟಿಸಿರುವ ಭ್ರಮೆಗಳು.

ಸಮಾಜದಲ್ಲಿ ಅನಿವಾರ್ಯವೆನಿಸುವ ಮೌಲ್ಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯ ಭಾಗ ಶಾಲೆಗಳು. ಅದರ ಒಡೆತನ ಸಾಂಸ್ಥಿಕ ರೂಪದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯದು. ಅಂತಹ ಮೌಲ್ಯಗಳ ಬೇಡಿಕೆಯು ಇರುವುದರಿಂದ ಉತ್ಪಾದನೆಯೂ ಆಗುತ್ತಿದೆ. ಈ ಪ್ರಕ್ರಿಯೆಯ ವರ್ತುಲವನ್ನು ತಿಳಿದರೆ ಸಾಂಸ್ಥಿಕ ರೂಪದಲ್ಲಿರುವ ಮೌಲ್ಯಗಳ ಭ್ರಮೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮೌಲ್ಯಗಳ ಮಿಥ್ ಅನ್ನು ಸೃಷ್ಟಿಸುವ ಈ ವಿಷಯದ ಬಗ್ಗೆ ಇನ್ನೂ ಸರಳವಾಗಿ ತಾಂತ್ರಿಕ ಹಿನ್ನೆಲೆಯಲ್ಲಿಯೇ ತಿಳಿಯೋಣ. ಶಾಲೆಯು ಬೋಧನೆಯಿಂದ ಕಲಿಕೆಯುಂಟಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಆಗ ಶಾಲೆಗೆ ಬರಲೇಬೇಕು ಮತ್ತು ತರಗತಿಗಳಲ್ಲಿ ಕುಳಿತುಕೊಳ್ಳಲೇಬೇಕು ಎಂಬ ಒತ್ತಡವನ್ನು ಕೂಡಾ ಸೃಷ್ಟಿಸುತ್ತದೆ. ಕಂಪಸ್ಲರಿ ಅಟೆಂಡೆನ್ಸ್ ಎನ್ನುವುದು ಒಂದು ಮೌಲಿಕವಾದ ಅಂಶವಾಗಿದೆ. ಆದರೆ ಅದೊಂದು ಭ್ರಮೆಯೇ ಹೊರತು ನಿಜವೇನಿಲ್ಲ. ತಪ್ಪದೇ ಶಾಲೆಗೆ ಹೋಗಬೇಕು ಎಂಬ ಸಂಪ್ರದಾಯವು ಮನುಷ್ಯನು ತನ್ನ ಜೀವನದ ಪರಿಸರದಿಂದ ಕಲಿಯುವ ವಿಷಯಗಳಿಗೆ ವಿರುದ್ಧವಾಗಿದೆ. ಒಂದು ದಿನವೂ ಶಾಲೆಗೆ ತಪ್ಪದೇ ಹೋಗುವವರಿಗೆ ಒಂದು ಹೆಮ್ಮೆ ಮತ್ತು ಬಹುಮಾನಕ್ಕೂ ಭಾಜನರಾಗುತ್ತಾರೆ. ಇದರೊಟ್ಟಿಗೆ ಶಾಲೆಗೆ ಬರದಿರುವವರ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಅಮಾನ್ಯ ಮಾಡುತ್ತಾರೆ. ಬೋಧನೆಗಳನ್ನು ಕೇಳದೇ ತಾವೇ ಕಲಿಯಲು ಸಾಧ್ಯವೇ ಎಂದು ಅನುಮಾನಿಸುತ್ತಾರೆ. ಬೋಧನೆ ಇಲ್ಲದೆ ಕಲಿಕೆಯಿಲ್ಲ ಎಂಬ ಮಹಾಭ್ರಮೆ ಸೃಷ್ಟಿಯಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬನು ತಾನೇ ಸ್ವಸಾಮರ್ಥ್ಯದಿಂದ ಮತ್ತು ಪ್ರಯೋಗಶೀಲತೆಯಿಂದ ವೃತ್ತಿಪರನಾಗುವ ಬಗೆಯನ್ನು ಅನುಮಾನಿಸುತ್ತಾ ಮತ್ತು ಅಪಮಾನಿಸುತ್ತಾ ಸಾಂಸ್ಥಿಕ ರೂಪದ ಶಿಕ್ಷಣ ಪಡೆದರೇನೇ ಅವನು ವಿದ್ಯಾವಂತ ಎಂಬ ಮಿಥ್ ಅನ್ನು ನಂಬಿ ಸಾಧಾರಣ ಜನರೆಲ್ಲರೂ ಶಿಕ್ಷಣ ಸಂಸ್ಥೆಗಳಿಗೆ ಅಧೀನರಾಗುತ್ತಾರೆ ಮತ್ತು ಅವರ ವಾಣಿಜ್ಯ ಉದ್ದೇಶಗಳಿಗೆ ಗಿರಾಕಿಗಳಾಗುತ್ತಾರೆ.

ತಾವು ಪಡೆಯುತ್ತಿರುವ ಶಿಕ್ಷಣ ಶಾಶ್ವತ ಮತ್ತು ಅದು ತಮ್ಮ ಸಂಪೂರ್ಣ ಜೀವನಕ್ಕೆ ಎಂಬಂತಹ ಮತ್ತೊಂದು ಮಿಥ್ ಈ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವವು. ಅದಕ್ಕೆ ಉನ್ನತ ಶಿಕ್ಷಣಕ್ಕೇರುತ್ತಿರಬೇಕೆಂಬ ಭ್ರಮೆಯಿಂದ ಸ್ಪರ್ಧಾತ್ಮಕವಾಗಿ ಪಠ್ಯಕ್ರಮವನ್ನು ಅನುಸರಿಸುತ್ತಾ ಹೋಗುತ್ತದೆ. ವಾಸ್ತವವಾಗಿ ಪದವಿ ಪಡೆದ ವ್ಯಕ್ತಿ ಏನನ್ನು ಪಡೆಯುತ್ತಾನೆಂದು ಆಶ್ವಾಸನೆ ಕೊಟ್ಟಿರುತ್ತದೆಯೋ ವಾಸ್ತವದಲ್ಲಿ ಅವನು ಅದನ್ನೇನೂ ಪಡೆದಿರುವುದಿಲ್ಲ. ಆದರೆ ಶಾಲೆಯ ಸಾಂಪ್ರದಾಯಕ ಭಾಷೆಯು ಅಲಂಕಾರಿಕವಾಗಿ ಅವನನ್ನು ಮತ್ತು ಸಮಾಜವನ್ನು ಅವನ್ನೆಲ್ಲಾ ಪಡೆದಿರುವ ಹಾಗೆ ಶೈಕ್ಷಣಿಕ ಭ್ರಮೆಯನ್ನು ಹುಟ್ಟಿಸುತ್ತವೆ. ಇವನ್ನು ನಾವು ಯಾವುದೇ ಶಾಲೆಯ ಸಮಾರಂಭದಲ್ಲಿ ಓದುವ ವಾರ್ಷಿಕ ವರದಿಯನ್ನು ಕೇಳಿದರೆ ಇವಾನ್ ಹೇಳುವುದು ಅರ್ಥವಾಗುತ್ತದೆ. ಶೈಕ್ಷಣಿಕ ಪ್ರಗತಿ ಎಂದು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವವರ ಬಿಂಕವನ್ನು ಮತ್ತು ಜಂಭವನ್ನು ನೋಡಿದರೆ ಅವರು ಪಡೆದಿರುವ ಶಾಲಾ ಶಿಕ್ಷಣ ಎಂತಹ ಪೊಳ್ಳು ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಯಬಹುದು. ಪಠ್ಯಕ್ರಮದ ಅನುಸರಣೆ ಮಾಡುತ್ತಾ ಅತ್ಯುತ್ತಮ ಶ್ರೇಣಿಯನ್ನು ಪಡೆದು ಉನ್ನತಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟು (ಡ್ರಾಪೌಟ್) ತನ್ನ ಇಚ್ಛೆಗೆ ಮತ್ತು ಬದುಕಿಗೆ ಏನಾದರೂ ಮಾಡಿಕೊಂಡಿರುವವನ ಕಿಂಚಿತ್ತಿಗೂ ಸಮವಿರದಿದ್ದರೂ ತಾನೇನೋ ಸಾಧಿಸಿರುವ ಭ್ರಮೆಗೆ ಒಳಗಾಗಿರುತ್ತಾನೆ. ಅವನ ಶಾಲಾ ಸಂಪ್ರದಾಯದ ಪೊಳ್ಳು ಅಲಂಕಾರಿಕ ಮಾತುಗಳ ಗುಂಗಿನಲ್ಲೇ ತೇಲುತ್ತಿರುತ್ತಾನೆ.

ಇವಾನ್ ಹೇಳುವಂತೆ ಶಾಲೆಗಳು ಏನನ್ನು ಒತ್ತರಿಸಿ ಇಟ್ಟುಕೊಂಡಿದೆಯೋ ಆ ಸಾಂಸ್ಥಿಕ ರೂಪವು ತಲೆಗೆಳಗಾಗಬೇಕು. ಸಾಂಪ್ರದಾಯಿಕ ಶಾಲಾ ಕಲಿಕೆಯಿಂದ ಮಕ್ಕಳು ಮುಕ್ತರಾಗಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ವಿದ್ಯೆ ಕಲಿಸುವ ಅಧಿಕಾರವನ್ನು ವ್ಯಕ್ತಿಗಳು ಮರುಪಡೆಯಬೇಕು. ಸಮಾಜೋರಾಜಕೀಯ ಶಕ್ತಿಗಳು ಮಗುವಿನ ವಿದ್ಯಾಭ್ಯಾಸಕ್ಕೆ ಒಂದು ವಿಷ ವರ್ತುಲವನ್ನು ಸೃಷ್ಟಿಸಿದೆ. ಅದರಿಂದ ಬಿಡುಗಡೆ ಪಡೆಯಲು ಸಮಾಜದಲ್ಲಿ ಶಿಕ್ಷಣ ಕ್ರಮವೇ ಬದಲಾಗಬೇಕಿದೆ. ಈ ವಾದವನ್ನು ಮುಂದಿಡುತ್ತಾ ಇವಾನ್ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನು ಅಲುಗಾಡಿಸುತ್ತಾರೆ. ಜೊತೆಗೆ ‘ಈ ಶಿಥಿಲಗೊಂಡಿರುವ ಶಾಲೆಯ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಆಗುವುದಿಲ್ಲ’ ಎಂದು ಅವರು ಹೇಳುತ್ತಾ, ‘ಹಾಗಾಗಿ ಮಾನವ ಸಮುದಾಯದ ಬದುಕು ಛಿದ್ರವಾಗುವುದನ್ನು ತಪ್ಪಿಸಬೇಕೆಂದರೆ ಶಾಲೆಯ ವ್ಯವಸ್ಥೆಯನ್ನೇ ಸಂಪೂರ್ಣ ಕಿತ್ತೊಗೆಯಬೇಕು’ ಎಂದು ದೃಢವಾಗಿ ಹೇಳುತ್ತಾರೆ.

ಶಾಲೆ ಕೈಗೆಟುಕದ ಎಷ್ಟೋ ಬಡ ವಿದ್ಯಾರ್ಥಿಗಳು ತಾವು ಶಾಲೆಗೆ ಹೋಗಿಲ್ಲ ಎಂದು ದುಃಖಿಸುವಷ್ಟು, ಖಿನ್ನತೆಗೆ ಜಾರುವಂತೆ ಶಾಲೆಗಳು ಆಡಂಬರದಿಂದ ಮೆರೆಯುತ್ತವೆ. ಶಾಲೆಯಿಂದಲೇ ವಿದ್ಯಾಭ್ಯಾಸ, ವಿದ್ಯಾಭ್ಯಾಸದಿಂದಲೇ ಬದುಕು ಹಾಗಾಗಿ ಶಾಲೆಯಿಂದಲೇ ಬದುಕು ಎಂಬ ಭ್ರಮೆಯ ಅರವಳಿಕೆಯಲ್ಲಿ ತಮ್ಮ ಮೂಲ ಸಾಮರ್ಥ್ಯವನ್ನೇ ಅನುಮಾನಿಸುತ್ತಾರೆ. ತಮ್ಮ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಕಡೆಗಣಿಸಿ ಕೃತಕವಾಗಿರುವುದರ ಕಡೆಗೆ ವಾಲುತ್ತಾರೆ. ಆದರೆ ಇತ್ತ ಕಡೆ ಉತ್ತಮ ಅಂಕಗಳನ್ನು ಪಡೆದು ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಅವರಿಗೆ ಸಮ ಬಾರದವರಾಗಿರುತ್ತಾರೆ. ಇವುಗಳನ್ನು ಗಮನಿಸುವ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಾರೆ. ಒಟ್ಟಾರೆ ಪರೀಕ್ಷೆ, ಅದರ ಅಂಕಗಳು, ಫಲಿತಾಂಶ, ಶ್ರೇಣಿಗಳು; ಹೀಗೆ ಎಲ್ಲವೂ ಕೂಡಾ ಭ್ರಮಾಧೀನವಾಗಿಯೇ ಇರುವಂತೆ ನೋಡಿಕೊಳ್ಳುತ್ತವೆ.

ಶಾಲೆಗಳು ಸಮಾಜವನ್ನು ಒಡೆಯುತ್ತವೆ ಎಂದು ಇವಾನ್ ನೇರವಾಗಿಯೇ ದೂರುತ್ತಾರೆ. ಮತ್ತು ಅವರು ಕೊಡುವ ಕಾರಣಗಳೂ ಕೂಡಾ ಸಮಾಜದ ಮಾನವೀಯ ಬದುಕಿನ ನೆಲೆಗಟ್ಟಿನಿಂದ ಸಮರ್ಪಕವಾಗಿಯೇ ಇವೆ.

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

ಶಾಲಾ ವ್ಯವಸ್ಥೆಯೂ ಕೂಡಾ ಸ್ಥಾಪಕ ಧರ್ಮಗಳಂತೆ ಶ್ರದ್ಧಾನಂಬಿಕೆಗಳನ್ನು ಹುಟ್ಟಿಸಿಕೊಂಡು ತನ್ನ ವಿದ್ಯಾ ದೇವತೆಯ ಭಕ್ತರನ್ನು ಮಂಕರನ್ನಾಗಿಸುತ್ತಿದೆ. ಒಬ್ಬನ ಕೌಶಲ್ಯ ಮತ್ತು ಪ್ರತಿಭೆಯು ಶೈಕ್ಷಣಿಕ ಸಂಸ್ಥೆಯಿಂದ ಪ್ರಮಾಣಿಸಿದ್ದರೆ ಮಾತ್ರ ಯೋಗ್ಯವಾದುದು ಮತ್ತು ಒಪ್ಪಲು ಅರ್ಹವಾದುದು ಎಂಬ ಸ್ಥಾಪಕ ಭ್ರಮೆಯ ದಾಸರು ಈ ನವೀನ ಯುಗದವರು.

ಇವಾನ್ ಮಂಡಿಸುವ ವಾದದ ಸರಣಿಯಿಂದ ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯನ್ನು ಕಿತ್ತೆಸೆಯಲಾಗದಿದ್ದರೂ ಪ್ರಾಮಾಣಿಕವಾಗಿ ರಿಪೇರಿ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಕೊಡುತ್ತದೆ. ಬೇರೂರಿರುವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇವಾನ್ ಕೊಡುವ ಕರೆಗೆ ವ್ಯಕ್ತಿಗತವಾಗಿ ಓಗೊಡಬಹುದು. ಆದರೆ ಸಾಮುದಾಯಿಕವಾಗಿ ಬಹಳ ಕಷ್ಟ. ಏಕೆಂದರೆ ಈ ಸಂಸ್ಥೆಗಳು ರೂಪಿಸಿರುವ ಹೆಚ್ಚು ಅಪಾಯಕಾರಿಯಾದ ಈ ರಚನೆಯನ್ನು ಮುರಿಯಬೇಕಾದರೆ ಮತ್ತೊಂದು ಕಡಿಮೆ ಅಪಾಯಗಳಿರುವ ಪರ್ಯಾಯ ವ್ಯವಸ್ಥೆಯನ್ನು ಕನಿಷ್ಟ ರೂಪಿಸಬೇಕು.

ಇನ್ನೂ ಮುಂದುವರಿದು ಹೇಳುವುದಾದರೆ ‘ಓರ್ವ ವ್ಯಕ್ತಿಯು ಒಂದು ವ್ಯವಸ್ಥೆಯನ್ನು ವಿರೋಧಿಸಲು ಆತನಿಗೆ ಒಂದು ಆಂತರಿಕ ಶಕ್ತಿ ಇರುತ್ತದೆ. ಒಂದು ಹಿನ್ನೆಲೆಯ ಪ್ರಭಾವವು ದೃಢವಾಗಿರುತ್ತದೆ. ಅಂತಹ ಬಂಡಾಯವನ್ನು ಎಲ್ಲರೂ ಮಾಡಲು ಸಾಧ್ಯವಿರದಂತಹ ಸಮಾಜ ನಮ್ಮದು. ಆದರೆ ವ್ಯಕ್ತಿಯೊಬ್ಬನ ತನ್ನತನದ ಸಾಮರ್ಥ್ಯ ಮತ್ತು ಸಾಮಾಜಿಕ ವಿಶ್ಲೇಷಣೆಗಳ ನೆಲೆಗಟ್ಟಿನಲ್ಲಿ ಹೇಳುವ ಶಾಲೆಗಳ ವಿಷಯವಾಗಿ ಅವರು ಹೇಳುವುದರಲ್ಲಿ ತಥ್ಯವಿದೆ.


ಇದನ್ನು ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಬಹಳ ಅರ್ಥಪೂರ್ಣ ಲೇಖನ ಶಿಕ್ಷಣವೆಂಬ ಭ್ರಮೆಯೇ ಮತ್ತು ಅದೇ ಬದುಕು ರೂಪಿಸುವ ಮಾರ್ಗ ಎಂಬ ಸತ್ಯಗಳನ್ನು ಸೃಷ್ಟಿಸಿ ವ್ಯಾಪಾರ ಉದ್ದಿಮೆಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ನಿಮ್ಮ ಲೇಖನ ನಮ್ಮ ಕಣ್ಣು ತೆರೆಸುತ್ತದೆ

  2. ಔಪಚಾರಿಕ ಶಿಕ್ಷಣಕಿಂತ ಅನೌಪಚಾರಿಕ
    ಶಿಕ್ಷಣವೆ ನಿಜವಾದ ಶಿಕ್ಷಣ ಮತ್ತು ಮೌಲ್ಯಯುತವಾದ‌ ಶಿಕ್ಷಣ. ಶಿಕ್ಷಣ ಎಂದರೆ ಕೇವಲ ತತ್ವಗಳನ್ನು ಬೋಧಿಸುವ ಪಠ್ಯಕ್ರಮವಲ್ಲಾ ಅದು ಮಾನವ ಸರ್ವಾಂಗೀಣ ಅಭಿವೃದ್ಧಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಕಬೇಕು.ಅದು ಜೀವನದಲ್ಲಿ ಮಾರ್ಗ ಸೂಚಕವಾಗಬೇಕು ಅಂದಾಗ ಶಿಕ್ಷಣ ಸಾರ್ಥಕತೆ ಪಡೆಯುತ್ತೆ ಎನ್ನುವುದಕ್ಕೆ ಈ ಅಂಕಣ ಬರಹ ಸಂದರ್ಭುಚಿತವಾಗಿದೆ ಸರ್…..

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...