Homeಅಂಕಣಗಳು'ಮತ್ತೆ ಮತ್ತೆ ಮಳೆ' ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ.....

‘ಮತ್ತೆ ಮತ್ತೆ ಮಳೆ’ ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ…..

- Advertisement -
- Advertisement -

ಕವಿತೆ/ಕಲೆ ಎನ್ನುವುದು ಕೊಂಡ ಹಾಯುವ ಆಚರಣೆಯಂತೆ. ತನ್ನ ಬದುಕಿನ ಮತ್ತು ಸಮಾಜದ ನೆನಪುಗಳನ್ನು ಆ ಕೊಂಡದಲ್ಲಿ ಹಾಯಿಸಿಕೊಳ್ಳುವುದೇ ಕವಿಯ/ಕಲಾವಿದನ ಕೆಲಸ. ಏಕೆಂದರೆ ಕಾವ್ಯ/ಸಾಹಿತ್ಯ/ಕಲೆ ಅನ್ನೋದು ಶೋಷಿತರ ಮೇಲಿನ ಭಾರ ಇಳಿಸುವುದು, ಲೋಕದ ಪಾಪಗಳ ಭಾರ ಹೊರುವುದೇ ಆಗಿದೆ.

ಕವಿತೆಯನ್ನು ಕಟ್ಟುವ, ಸೃಷ್ಟಿಸುವ ಕವಿಯ ವ್ಯಕ್ತಿಗತವಾದ ಪ್ರೇಮ, ವಿರಹ, ಸಂತೋಷದ, ನೆನಪುಗಳು, ಅವಮಾನಗಳು, ಸಾಮಾಜಿಕ, ರಾಜಕೀಯ ಸಂಗತಿಗಳು ಅವನ/ಆಕೆಯ ಮನದಾಳಕ್ಕೆ ಇಳಿದು, ಅವನ/ಆಕೆಯ ಭಾವದಲ್ಲಿ ಕಡೆದು ಅರಿವಿನ ಚಿತ್ರವಾಗಿ ಮೂಡುವಂತೆ ಮಾಡುವುದೇ ಕವಿಯ ಕೆಲಸ.

ಈ ಕೆಲಸಕ್ಕೆ ಭಾಷೆ ಅತಿ ಮುಖ್ಯವಾದದ್ದು. ಆದರೆ ಅದೇ ಎಲ್ಲವೂ ಅಲ್ಲ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮುಖ್ಯಸಂಗತಿ ಎಂದರೆ ಕಾವ್ಯಕ್ಕೆ ಶಬ್ದ-ಅರ್ಥಗಳೇ ಮುಖ್ಯ ಎಂಬ ವಿಚಾರ ಕನ್ನಡ ಕಾವ್ಯದ ಮೇಲೂ ಹೆಚ್ಚಿನ ಪ್ರಭಾವ ಬೀರಿ, ಕೇವಲ ಭಾಷೆಯ ಬಳಕೆಯೊಂದರಿಂದಲೇ ಹುಸಿ ಕಾವ್ಯ (pseudo poetry) ಮುನ್ನಲೆಗೆ ಬಂದು ನಿಜವಾದ ಕಾವ್ಯ ಹಿನ್ನೆಲೆಗೆ, ಮರೆಗೆ ಸರಿಯುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವದಲ್ಲಿ ಕಾವ್ಯ ಅನ್ನೋದು ಬದುಕಿಗೆ ಉಪಯೋಗವಾಗಬೇಕು, ಹಿತಕಾರಿಯಾಗಬೇಕು ಎಂಬ ಬಹುಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ.

ಹೀಗೆ ರೂಪುಗೊಳ್ಳುವ ಕವಿತೆಯ ಸ್ವರೂಪ, ಅದರ ಅಂತಿಮ ಗುರಿ ಏನು ಎಂಬುದನ್ನು ನಮ್ಮ ಜನಪದ ಕಾವ್ಯದಲ್ಲಿ ಪ್ರಚಲಿತವಿರುವ ’ಬಾಲಗೋಪಾಲನ ಲಾವಣಿಗಳು’ ಬರುವ ಸಾಲುಗಳು ವಿವರಿಸುತ್ತವೆ.

“ಬಾಲಗೋಪಾಲನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ” ಎಂದು.

ಈ ಸಾಲುಗಳಲ್ಲಿ ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆಯನ್ನು ಕವಿತೆ ಓದುವ, ಕೇಳುವ ಸಹೃದಯನಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಹಸುಗೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಸ್ವರೂಪ ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ಹೇಳುತ್ತಿದೆ. ತಾಯಿ ಕವಿಯನ್ನು ಸಂಕೇತಿಸಿದರೆ, ತಾಯ ಎದೆಹಾಲು ಕವಿತೆಯನ್ನು, ಹಸುಗೂಸು ಓದುಗನನ್ನು ಸಂಕೇತಿಸುತ್ತದೆ. ಎದೆಹಾಲು ದೋಷದಿಂದ ಮುಕ್ತವಾದ ಉತ್ತಮಕಾವ್ಯವನ್ನು ಸಂಕೇತಿಸುತ್ತದೆ.

ಹಾಲು ಕುಡಿಯುವ ಕ್ರಿಯೆ ಕೂಸಿಗೆ ಕೊಂಚವೂ ತೊಡಕಾಗಿರದೆ, ಇಷ್ಟವಾದ, ಸಹಜವಾದ, ಸಲೀಸಾದ ಕೆಲಸವಾಗಿ, ಹಾಲು ಕೂಸಿಗೆ ಹಿತವನ್ನುಂಟುಮಾಡುತ್ತದೆ. ಜೀವಶಕ್ತಿಯನ್ನು ಹೆಚ್ಚಿಸುತ್ತದೆ, ಆನಂದವನ್ನು ಉಂಟುಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು. ಓದುಗನಿಗೆ/ಸಹೃದಯನಿಗೆ ಇಷ್ಟವಾದುದೂ, ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದು, ಆನಂದವನ್ನುಂಟುಮಾಡುವಂತಹದು ಆಗಿರಬೇಕು. ಒಟ್ಟಿನಲ್ಲಿ ಅವನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು.

ಇಷ್ಟೆಲ್ಲಾ ಮಾತುಗಳು ಆಡಲು ಕಾರಣ ಹೇಮಂತ ಲಿಂಗಪ್ಪ ಅವರ ಮೊದಲ ಸಂಕಲನದ ಓದು.

ಹೇಮಂತರ ’ಮತ್ತೆ ಮತ್ತೆ ಮಳೆ’ ಸಂಕಲನದಲ್ಲಿ ಒಟ್ಟು ನಲ್ವತ್ತನಾಲ್ಕು ಕವನಗಳಿವೆ. ಇಷ್ಟೂ ಕವನಗಳಲ್ಲಿ ನಾನು ಗಮನಿಸಿದ ಹಾಗೆ ಹೇಮಂತರ ಕವಿತೆಗಳ ಬಹುಮುಖ್ಯ ಅಂಶ ಅಂದರೆ ತನ್ನ ಅನುಭವವನ್ನು ಹಾಗೆ ಒಂದು ಚಿತ್ರವನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟುವುದು. ಇದರ ಮೂಲಕ ಕವಿ ಏನು ಹೇಳಲು ಪ್ರಯತ್ನಿಸುತ್ತಾನೆ ಅನ್ನೋದು ಮುಖ್ಯವಲ್ಲ, ಕಾವ್ಯ ಓದುಗನಿಗೆ ಏನನ್ನು ಹೇಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಆ ವಿಚಾರವನ್ನು ಹೇಮಂತರ ಕವಿತೆಗಳು ಒಳಗೊಂಡಿವೆ ಅನ್ನೋದೇ ಅವರ ಕವಿತೆಗಳ ಯಶಸ್ಸು.

ಉದಾಹರಣೆಗೆ: 1.

ಉಬ್ಬಿದೆದೆಯ ಏದುಸಿರು
ಕಿವಿಯಿಟ್ಟು ಆಲಿಸೆ
ಕೇಳುತಿದೆ ಸಂಗೀತದಂತೆ

ನಾನು ಗಾಳಿಯೂದಲೇ ಇಲ್ಲ,
ಕೇವಲ ತುಟಿ ಸೋಕಿಸಿದಷ್ಟೆ…
ನೋಡನೋಡ ನೋಡುತ್ತಲೇ ಅವುಗಳು ಉಬ್ಬಿದ್ದೇಕೆ?
ಶಿಖರಗಳ ತುತ್ತತುದಿಯ, ತುಟಿ ಮುತ್ತಿದ್ದೇಕೆ?

ಈಗ ಮೌನದ್ದೇ ಮಾತು,
ಉಸಿರುಗಳದ್ದೇ ಗದ್ದಲ
ಸ್ಪರ್ಶದ್ದೇ ಕಾರುಬಾರು
ಮುತ್ತುಗಳದ್ದೇ ಚರ್ಚೆ….

2.

ತುಂಬಿ ಹರಿದ ಕೆರೆಯ
ತೂಬಿನಲ್ಲಿ ತಡಕಾಡಿ
ಹಿಡಿದ ಮೀನು- ಏಡಿಗಳ
ನನ್ನೂರ ಕೆರೆ
ಅದರ ಏರಿಯೂ..

ಇಂತವು ಹಲವಾರು.

ಎರಡನೆಯದಾಗಿ, ಕವಿಯಾದವನಿಗೆ ತುಂಬು ಜೀವನ ಪ್ರೀತಿ ಇರಬೇಕು ಮತ್ತದು ಪ್ರಾಮಾಣಿಕವಾಗಿರಬೇಕು. ಆಗ ಅದು ಅವನ ಕವಿತೆಗಳಲ್ಲಿ ಸಾಮಾಜಿಕವಾದ ರೂಪ ಪಡೆಯುತ್ತದೆ ಮತ್ತು ಎಲ್ಲರ ಜೀವನಪ್ರೀತಿಯಾಗುತ್ತೆ. ಅಂತಹ ಅಪಾರ ಜೀವನ ಪ್ರೀತಿ ಹೇಮಂತರ ಕವನಗಳಲ್ಲಿ ಎದ್ದು ಕಾಣುತ್ತದೆ. ಅದು ವ್ಯಕ್ತಿಗತವಾದ ಪ್ರೇಮ; ಆ ಪ್ರೇಮ ಅಚಾನಕ್ಕಾಗಿ ಕೊಡುವ ವಿರಹ, ಆ ವಿರಹದ ಅಭಿವ್ಯಕ್ತಿ ಎಲ್ಲರ ವಿರಹವಾಗಿ ಕಡೆಗೆ ವಿಷಾದವಾಗುವ ಬಗೆಯನ್ನು ಕುರಿತು, ಪ್ರೇಮದ ನೆನಪುಗಳ ಕುರಿತು, ಹಾಗೆ ಪರಿಸರ ಮತ್ತು ಅದರ ಜೊತೆಗಿನ ಜೀವಸಂಕುಲಗಳ ಬಗೆಗಿನ ಕಾಳಜಿ ಕುರಿತಾಗಿರಬಹುದು- ಇಲ್ಲೆಲ್ಲಾ ಉತ್ಕಟ ಪ್ರೇಮದ ಅಭಿವ್ಯಕ್ತಿ ಸಹಜವಾಗಿ ವ್ಯಕ್ತವಾಗಿದೆ. ಜೊತೆಗೆ ಪ್ರೇಮದ ಬಗೆಗಳನ್ನು ಹೇಮಂತ್ ತಮ್ಮ ಕವಿತೆಗಳಲ್ಲಿ ಎದುರಾಗುತ್ತಾರೆ.

ತಮ್ಮ ಮೊದಲ ಸಂಕಲನಗಳಲ್ಲಿ ಪ್ರೇಮ, ವಿರಹ, ವಿಷಾದ, ನೆನಪುಗಳನ್ನು ಕವಿತೆ ಮಾಡಲು ಹೋಗಿ ಭಾಷಣ ಮಾಡುವ ಇಲ್ಲವೇ ವಿಚಾರದ ಒಣಮಾತುಗಳ ಕಟ್ಟುಗಳನ್ನಾಗಿಸುವವರೇ ಹೆಚ್ಚು. ಆಗ ಮಾತು ಅನುಭವದ ಹೆಣವಾಗುತ್ತದೆ. ಹೇಮಂತರ ಈ ಸಂಕಲನದಲ್ಲಿ ಒಂದೆರಡು ಕವಿತೆಗಳನ್ನು ಬಿಟ್ಟರೆ ಉಳಿದಂತೆ ಗೆದ್ದಿದ್ದಾರೆ.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಆಹ್ವಾನ, ಮಳೆ, ಪ್ರೀತಿ, ಹುಡುಕಿಕೊಡು ಹುಡುಗಿ, ಮರೆವು, ಬನ್ನಿ ಬನ್ನಿ ಪದಗಳೆ, ಹೇಗೆ, ನೆನಪು, ಬ್ರೀವರಿಯ ಹುಡುಗಿ, ಮಿಳಿತ, ನನ್ನ ತಪ್ಪಲ್ಲ, ಮಳೆಗಾಳಿ, ಪಠ್ಯಪುಸ್ತಕ, ಮತ್ತೆ ಮತ್ತೆ ಮಳೆ, ನೈಟ್ ಜರ್ನಿ ಕವಿತೆಗಳು ಮೇಲಿನ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ.

ಮೂರನೆಯದಾಗಿ, ಕವಿ ಏಟ್ಸ್‌ನ ‘Poetry is an escape from Emotion’- ಈ ಮಾತಿಗೆ ಸಾಕ್ಷಿ ಒದಗಿಸುವ ಹಾಗೆ ಕೇವಲ ಪ್ರೇಮ, ವಿರಹಗಳೇ ಕಾವ್ಯದ ವಸ್ತುವಲ್ಲ ಎನ್ನುವುದನ್ನು ಹೇಳುವಂತೆ ಹೇಮಂತರ ಕಾವ್ಯದ ಮತ್ತೊಂದು ಬಹುಮುಖ್ಯ ಮಗ್ಗಲು ಎಂದರೆ ಬದುಕನ್ನು, ಬದುಕಿನ ಘಟ್ಟಗಳನ್ನು, ಸನ್ನಿವೇಶಗಳನ್ನು ಭಿನ್ನವಾಗಿ ನೋಡಲೆತ್ನಿಸುವ ಕ್ರಮ ವಿಶೇಷವೆನ್ನಿಸುತ್ತದೆ..

ನಮಿಸಲಿ ನಾ ಯಾರಿಗೆ, ನನಗೂ ಮೊಲೆಗಳ ಕೊಡು ದೇವರೇ, ಮಳೆಗಾಲದ ಮುಂಜಾನೆ, ಮಗಳು, ಬೆಂಗಳೂರು ನೋಡಿದಾಗಲೆಲ್ಲಾ, ನಾವು ಕೆ.ಇ.ಬಿಯವರು, ಮಗಳಿಗೊಂದಷ್ಟು ಮಾತು- ಈ ಕವಿತೆಗಳು ಹೇಮಂತ್ ಅವರನ್ನು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ಸೂಚನೆಯನ್ನು ಕೊಟ್ಟು ನಂಬಿಕೆಯನ್ನು ಹುಟ್ಟಿಸುತ್ತದೆ.

ನಾಲ್ಕನೆಯದಾಗಿ, ಈ ಸಂಕಲನದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಾವುಗಳು ನೋಡುತ್ತಿರುವ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದ, ಇಲ್ಲಿನ ಬಡವರು-ಜನಸಾಮಾನ್ಯರು-ತಳ ಸಮುದಾಯಗಳ ಮೇಲಿನ ಹಿಂಸೆ, ದೌರ್ಜನ್ಯ, ಅನ್ಯಾಯಗಳ ಕೃತ್ಯಗಳನ್ನು ಖಂಡಿಸುತ್ತಲೇ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದದ ಅಮಾನವೀಯತೆಯ ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಬಂಡಾಯ ಕವಿತೆಗಳಂತೆ ಕಂಡರೂ ಬಂಡಾಯದ ರೋಷ, ಆವೇಶಗಳು ಈ ಕವಿತೆಗಳಲ್ಲಿ ಇಲ್ಲ. ಇಲ್ಲಿ ಕಾರುಣ್ಯ, ವಿಷಾದ, ಅರ್ತತೆಯೆ ಸ್ಥಾಯಿಗುಣಗಳಾಗಿವೆ.

ಕಡೆಯದಾಗಿ, ಹೇಮಂತ್ ಈ ಸಂಕಲನದಲ್ಲಿ ಎರಡು ಕವಿತೆಗಳನ್ನು ಅನುವಾದಿಸಿದ್ದಾರೆ. ಆಫ್ರಿಕಾ ಮೂಲದ ಬರಹಗಾರ ಚಿನುವಾ ಅಚಿಬೆಯ ಒಂದು ಕವಿತೆ. ಅಕಾವ್ಯವನ್ನು ಕಾವ್ಯ ಜಗತ್ತಿಗೆ ಪರಿಚಯಿಸಿದ ನೆರೂಡನ ಒಂದು ಕವಿತೆ. ಎರಡೂ ಭಿನ್ನ ವಿಚಾರಗಳ ಕವಿತೆಗಳು. ಇವು ಕನ್ನಡದವೇ ಎಂಬಂತೆ ಅನುವಾದಗೊಂಡಿವೆ. ಹೇಮಂತ್ ಉತ್ತಮ ಅನುವಾದಕರೂ ಆಗಬಹುದು ಎಂಬ ಸೂಚನೆಗಳು ಈ ಅನುವಾದದಲ್ಲಿ ಕಾಣಬಹುದು.

ಕಾವ್ಯ ಮುಲಾಜಿನಿಂದ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಕಾವ್ಯದ ಬಗ್ಗೆ ಮಾತನಾಡುವಾಗ, ಬರೆಯುವಾಗಲೂ ಕೂಡ ಮುಲಾಜಿಗೆ ಒಳಗಾಗಿ ಮಾತನಾಡಬಾರದು ಎನ್ನುವ ಎಚ್ಚರ ನನ್ನನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಕವಿ ಹೇಮಂತ್ ಅವರ ಈ ಸಂಕಲನದಲ್ಲಿ ಟೆಕ್ನಿಕಲ್ ದೃಷ್ಟಿಯಿಂದ ಕವಿತೆ ಪರವಾಗಿಲ್ಲ ಅನ್ನಿಸಿದರೂ ಆಶಯದ ದೃಷ್ಟಿಯಿಂದ ಕೆಲವು ಕೆಟ್ಟ ಪದ್ಯಗಳೂ ಇವೆ. ಉದಾಹರಣೆಗೆ ಗಂಡಿನ ಮನೋಧರ್ಮವನ್ನು ಢಾಳಾಗಿ ಕಾಣಿಸುವ ’ನಿವೇದನೆ’ ಕವಿತೆ. ಇಂತಹ ಕವಿತೆಗಳನ್ನು ಹೇಮಂತ್ ಬರೆಯದಿದ್ದರೆ ಒಳ್ಳೆಯದು. ಹಾಗೆಯೇ ’ದೇಶಪ್ರೇಮ’ ಎಂಬ ಚುಟುಕು ಪದ್ಯ.

ಈ ಮಿತಿಯ ನಡುವೆಯೂ ಹಲವು ಉತ್ತಮ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಹೇಮಂತ್‌ಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ಸಂಕಲನದಲ್ಲಿ ಇನ್ನಷ್ಟು ಉತ್ತಮ ಕವಿತೆಗಳನ್ನು ಕೊಡುವಂತಾಗಲಿ ಎಂದು ಆಶಿಸುತ್ತೇನೆ.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...