Homeಅಂಕಣಗಳುಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

ಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

- Advertisement -
- Advertisement -

ಜೋಸೆಫ್ ಮರ್ಫಿ ಎಂಬ ಅಮೆರಿಕದ ಮನಶಾಸ್ತ್ರಜ್ಞನ ಪುಸ್ತಕವು ನಮ್ಮ ಸುಪ್ತಚೇತನದ ಶಕ್ತಿ ಎಂತಹುದು ಎಂದು ತನ್ನ ಪುಸ್ತಕ ’ದ ಪವರ್ ಆಫ್ ಸಬ್‌ಕಾನ್ಷಸ್ ಮೈಂಡ್‌’ನಲ್ಲಿ ವಿವರಿಸುತ್ತಾರೆ. ಸಿಗ್ಮಂಡ್ ಫ್ರಾಯ್ಡ್‌ರ ಮನಸ್ಸಿನ ಮೂಲ ವಿಭಾಗಗಳನ್ನು ಒಪ್ಪುವಂತೆ ಜಾಗೃತಿಚೇತನ ಮತ್ತು ಸುಪ್ತಚೇತನದ ಬಗ್ಗೆ ಅವರು ವಿವರಣೆಗಳನ್ನು ಕೊಡುತ್ತಾರೆ. ನಾವು ಗಮನವಿಟ್ಟು ಮತ್ತು ಉದ್ದೇಶಪೂರ್ವಕವಾಗಿ ಆಲೋಚನೆ ಮತ್ತು ಚಿಂತನೆಗಳನ್ನು ನಡೆಸುವ ಮನಸ್ಸಿನ ಪದರವು ಜಾಗೃತಿ ಚೇತನವಾದರೆ, ಸುಪ್ತ ಚೇತನವು ಜಾಗೃತಿ ಚೇತನದ ನಂತರದ ಪದರವಾಗಿದ್ದು, ಅದರ ಚಟುವಟಿಕೆಗಳು ಬಾಹ್ಯ ಗ್ರಹಿಕೆಗೆ ಸಿಗುವುದಿಲ್ಲ ಮತ್ತು ನಮ್ಮ ಅಂಕೆಗೆ ನಿಲುಕುವುದಿಲ್ಲ. ಆದರೆ, ಅದರ ಕ್ರಿಯಾಶೀಲತೆ ಮಾತ್ರ ನಮ್ಮ ಜಾಗೃತಿ ಚೇತನದ ಮೇಲೂ ಮತ್ತು ಭೌತಿಕ ನಡಾವಳಿಗಳ ಮೇಲೂ ಪ್ರಭಾವ ಬೀರುತ್ತಿರುತ್ತದೆ.

ನಾನೀಗ ಪತ್ರಿಕೆಯನ್ನು ಓದುತ್ತಿದ್ದೇನೆ. ಇಂಥಾ ಲೇಖನವು ಇದು. ಇದು ಚೆನ್ನಾಗಿದೆ, ಅಥವಾ ಚೆನ್ನಾಗಿಲ್ಲ ಇತ್ಯಾದಿ ತಕ್ಷಣದ ಕ್ರಿಯೆ-ಪ್ರತಿಕ್ರಿಯೆಗಳನ್ನು ನಡೆಸುತಲಿದ್ದು ನಮ್ಮ ಗೋಚರದ ಪರಿಮಿತಿಯಲ್ಲಿಯೇ ಜಾಗೃತಿ ಚೇತನವು ಇರುತ್ತದೆ. ಆದರೆ, ಇಂದು ಯಾವುದೋ ವಿಷಯಕ್ಕೆ ಕೋಪಿಸಿಕೊಂಡಿದ್ದೇನೆ, ಯಾರೊಂದಿಗೋ ವಿರಸ ಹೊಂದಿದ್ದೇನೆ. ಅಥವಾ ಯಾವುದೋ ಆಸೆಯನ್ನು ಪಟ್ಟಿದ್ದೇನೆ. ಆದರೆ ಅದು ನೆರವೇರದೇ ನಿರಾಸೆಯಾಗಿದೆ. ಇತ್ಯಾದಿ ಯಾವುದೋ ಭಾವನಾತ್ಮಕವಾದ ಮನಸ್ಥಿತಿ ಉಂಟಾಗಿದೆ. ಇಂದಿನ ಭೌತಿಕ ಘಟನೆಯನ್ನು ನಾನು ಮರೆತುಹೋದರೂ ಭಾವನಾತ್ಮಕವಾಗಿರುವ ಅದರ ತಲ್ಲಣ ಮತ್ತು ತುಮುಲಗಳು ಮರೆತುಹೋಗಿರದೇ ಸುಪ್ತಚೇತನದಲ್ಲಿ ಅಡಕವಾಗಿರುತ್ತದೆ. ಯಾವಾಗಾದರೊಮ್ಮೆ ಜಾಗೃತಿಚೇತನವು ವಿಶ್ರಾಂತವಾಗಿದ್ದಾಗ ಅಥವಾ ದುರ್ಬಲವಾದಾಗ ಹುದುಗಿರುವ ಈ ಭಾವುಕತೆಯು ಅಭಿವ್ಯಕ್ತವಾಗುತ್ತದೆ. ಅದು ಕೆಲವೊಮ್ಮೆ ಕನಸುಗಳಾಗಿಯೂ ಕೂಡ ವ್ಯಕ್ತವಾಗಬಹುದು. ಕೆಲವೊಮ್ಮೆ ನಡವಳಿಕೆಗಳಲ್ಲಿ ವ್ಯಕ್ತವಾಗಬಹುದು. ಮತ್ತೂ ಗಂಭೀರವಾದ ವಿಷಯವೆಂದರೆ, ಅದು ನಮಗೇ ಗೊತ್ತಿಲ್ಲದಂತೆ ನಮ್ಮ ವ್ಯಕ್ತಿತ್ವದ ಭಾಗವಾಗಿ ನಮ್ಮ ನಡವಳಿಕೆಗಳನ್ನು ರೂಪಿಸಿದ್ದಿರಬಹುದು. ಏನೇ ಆಗಲಿ, ಗುಪ್ತವಾಹಿನಿಯಾಗಿ ಹರಿಯುವ ಭಾವತರಂಗಗಳು ಸುಪ್ತಚೇತನದಿಂದ ಎಂಬುದು ನಿರ್ವಿವಾದ.

PC : Amazon.ca (’ದ ಪವರ್ ಆಫ್ ಸಬ್‌ಕಾನ್ಷಸ್ ಮೈಂಡ್)

ಇಷ್ಟೆಲ್ಲಾ ವಿಷಯಗಳನ್ನು ಜೋಸೆಫ್ ಮರ್ಫಿ ಒಪ್ಪುತ್ತಾರೆ ಮತ್ತು ಬೇರೊಂದು ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ನಮ್ಮ ಅತಿಸುಪ್ತಚೇತನವೇ ನಮ್ಮ ಮೂಲಶಕ್ತಿ. ನಮ್ಮಲ್ಲಿ ಶಕ್ತಿಯನ್ನು ಉಂಟುಮಾಡಲು ಮತ್ತು ಹೊರಗಿನ ಶಕ್ತಿಯನ್ನು ಆಕರ್ಷಿಸಲು ಈ ಮೂಲಶಕ್ತಿಯನ್ನು ನಾವು ಸಿದ್ಧಪಡಿಸಬೇಕೆಂದು, ಹದ ಮಾಡಬೇಕೆಂದು ಹೇಳುತ್ತಾರೆ. ಅವರ ಪ್ರಕಾರ, ದ ಸಬ್‌ಕಾನ್ಷಸ್ ಮೈಂಡ್ ಬಹಳ ಶಕ್ತಿಶಾಲಿ. ಆದರೆ ಅದಕ್ಕೆ ವಿವೇಚನೆಯಿಲ್ಲ. ಅದಕ್ಕೆ ಉದ್ದೇಶಗಳಾಗಲಿ, ಲೆಕ್ಕಾಚಾರ-ತರ್ಕಗಳಾಗಲಿ ಇಲ್ಲ. ಬದಲಿಗೆ ಅದು ಬರಿಯ ಫಲವತ್ತಾದ, ಹದವಾದ ಭೂಮಿಯಂತೆ. ಅದರಲ್ಲಿ ಯಾವುದೇ ಬಗೆಯ ಬೀಜಗಳನ್ನು ನೀವು ಬಿತ್ತಿದ್ದರೂ ಅದರದೇ ಫಸಲನ್ನು ತೆಗೆಯುತ್ತೀರಿ.

ಇರಲಿ, ಬೀಜವನ್ನು ಬಿತ್ತುವವರಾದರೂ ಯಾರು? ಜಾಗೃತ ಚೇತನ. ಮನಸ್ಸಿನ ಈ ಪದರವು ಜಾಗ್ರತೆಯಿಂದಲೋ ಅಥವಾ ಅಜಾಗರೂಕತೆಯಿಂದಲೋ ಬಿತ್ತುವ ಬೀಜಗಳು, ಒಳಗಿನ ಶಕ್ತಿ ಭೂಮಿಯಲ್ಲಿ ಬಿತ್ತಲ್ಪಟ್ಟು ಅದು ಸೊಗಸಾಗಿ ಬೆಳೆಯುತ್ತದೆ. ಫಲವನ್ನು ಕೊಡುತ್ತದೆ. ಬಿತ್ತಿದಂತೆ ಬೆಳೆ. ಇಷ್ಟೇ ವಿಷಯ. ನೀವು ಯಾರನ್ನೂ ದೂರುವಂತಿಲ್ಲ. ಅವರಿಂದ ಹೀಗಾಯ್ತು, ನನಗೆ ಅವರು ಹೀಗೆ ಮಾಡಿದರು ಎಂದೆಲ್ಲಾ ಗೋಳಿಡುವಂತಿಲ್ಲ. ನಾವೇ ಬಿತ್ತುಕೊಂಡೆವು, ನಾವೇ ಬೆಳೆದುಕೊಂಡೆವು. ಮಾಡಿದ್ದುಣ್ಣೋ ಮಾರಾಯ.

ಹಾಗಾಗಿ ಜೋಸೆಫ್ ಮರ್ಫಿ ಹೇಳುವುದೇನೆಂದರೆ, ಜಾಗೃತ ಮನಸ್ಸಿನಿಂದ ಬಿತ್ತಲ್ಪಡುವ ಪದ ಬೀಜಗಳನ್ನು ಜಾಗ್ರತೆಯಿಂದ ನಿಮ್ಮ ಸಬ್‌ಕಾನ್ಷಸ್ ಮೈಂಡಲ್ಲಿ ಬಿತ್ತಿ. ಪದಗಳು ಬರಿಯ ಪದಗಳಲ್ಲ. ಆ ಒಂದೊಂದು ಪದದ ಹಿಂದೆ ವಿಚಾರವಿದೆ, ಅದರದೇ ಆದಂತಹ ಭಾವವಿದೆ. ಆ ಭಾವುಕತೆಯ ಪರಿಚಯ ನಮ್ಮ ಮನೋಶಕ್ತಿಗಿದೆ. ಹಾಗಾಗಿ, ಭಾವನೆಯ ತರಂಗಗಳು ಆ ಶಕ್ತಿಯನ್ನು ಪ್ರೇರೇಪಿಸುತ್ತವೆ. ಅದರಂತೆಯೇ ಭಾವನೆಯ ಗಮ್ಯವೇನಿದೆಯೋ ಅದು ಆಯಾ ವ್ಯಕ್ತಿಯ ಜೀವನದಲ್ಲಿ ಪ್ರತಿಫಲಿತವಾಗುತ್ತದೆ. ಇದು ಜೋಸೆಫ್ ಮರ್ಫಿಯ ಮನಶಾಸ್ತ್ರೀಯ ವಾದ.

ಹಾಗಾಗಿ ಸಕಾರಾತ್ಮಕವಾದ ಭಾವನೆಗಳನ್ನು ಹೊಂದಿರಿ. ಸಕಾರಾತ್ಮಕವಾದ ಬೀಜಗಳನ್ನು ಬಿತ್ತಿರಿ. ನಕಾರಾತ್ಮಕವಾದ ಬೀಜಗಳನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿ. ಹಾಗೊಂದು ವೇಳೆ ನಿಮ್ಮ ಮನಸ್ಸಿನಲ್ಲಿ ಈಗಾಗಲೇ ನಕಾರಾತ್ಮಕವಾದ ಬಿತ್ತನೆಯಾಗಿಬಿಟ್ಟಿದ್ದರೆ, ಚಿಂತೆ ಬೇಡ, “ವಿತರ್ಕ ಭಾವನೇ ಪ್ರತಿಪಕ್ಷ ಭಾವನಾಂ” ಎಂದು ಪತಂಜಲಿಯ ಯೋಗಸೂತ್ರದಲ್ಲಿ ಹೇಳುವಂತೆ, ಅದಕ್ಕೆ ವಿರುದ್ಧವಾದ ಭಾವನೆಯನ್ನು ಅಂದರೆ ಸಕಾರಾತ್ಮಕವಾದ ಭಾವನೆಯನ್ನು ಉದ್ದೇಶಪೂರ್ವಕವಾಗಿ, ಪ್ರಯತ್ನಪೂರ್ವಕವಾಗಿ ಪ್ರತಿಷ್ಠಾಪಿಸಿ. ಬುದ್ಧನು ಹೇಳುವಂತೆ ದ್ವೇಷವನ್ನು ಪ್ರೇಮದಿಂದಲೂ, ಅಶಾಂತಿಯನ್ನು ಶಾಂತಿಯಿಂದಲೂ ಗೆಲ್ಲುವಂತೆ ವಿತರ್ಕವಾಗಿರುವ ಭಾವನೆಯ ಜಾಗದಲ್ಲಿ ಅದರ ವಿರುದ್ಧವಾಗಿರುವ ಸಕಾರಾತ್ಮಕವಾದ ಭಾವನೆಯನ್ನು ಪ್ರತಿಷ್ಠಾಪಿಸಿ ಎಂದು ಜೋಸೆಫ್ ಹೇಳುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ ಎಷ್ಟೊಂದು ಉದಾಹರಣೆಗಳನ್ನು ಕೊಡುತ್ತಾ ಹೋಗುವ ಅವರು ನಮ್ಮ ಜಯಾಪಜಯಗಳಿಗೆ ನಾವೇ ಜವಾಬ್ದಾರರು ಹೊರತು ಇನ್ನು ಹೊರಗಿನವರು ಯಾರೂ ಅಲ್ಲ ಎಂದು ಘೋಷಿಸುವ ಮೂಲಕ ಭಗವದ್ಗೀತೆಯ ವಾಕ್ಯವನ್ನು ನೆನಪಿಸಿಬಿಡುತ್ತಾರೆ. “ನಿನ್ನ ಉದ್ಧಾರವೇನಾದರೂ ಆಗುವುದಿದ್ದರೆ ಅದು ನಿನ್ನಿಂದ ಮಾತ್ರ. ನಿನ್ನಿಂದಲೇ ಎಲ್ಲವನ್ನೂ ನಿನ್ನ ಕುರಿತಾಗಿ ಸಾಧಿಸಿಕೊಳ್ಳಲು ಸಾಧ್ಯ. ನಿನಗೆ ನೀನೇ ಮಿತ್ರ, ನಿನಗೆ ನೀನೇ ಶತ್ರು ಅದು ನಿನ್ನನ್ನು ನೀನು ಉಪಚರಿಸಿಕೊಳ್ಳುವುದರ ಮೇಲಿದೆ.”

ಆದಿಮ ಕಾಲದಲ್ಲಿ ಗಗನದಲ್ಲಿ ಗುಡುಗುವ ಗುಡುಗನ್ನು ಕೇಳಿ, ಸಿಡಿಯುವ ಸಿಡಿಲನ್ನು ನೋಡಿ ಮನುಷ್ಯ ಭಯಗೊಂಡು ಅದ್ಯಾವುದೋ ಭಯಂಕರ ಶಕ್ತಿ ತಮ್ಮ ಮೇಲೆ ಎರಗುವಂತೆ ಭಾವಿಸಿದ. ಅದರ ಮೇಲೆ ವಿಶೇಷ ನಿಗಾವಹಿಸಿದ. ಅದರ ಆರ್ಭಟಕ್ಕೆ ಅವನು ಬಾಗಿದ. ಅದೊಂದು ಶಕ್ತಿಯು ತಮ್ಮನ್ನು ಆಳುತ್ತಿರುವಂತೆ ಅಥವಾ ತಮ್ಮ ಮೇಲೆ ಕೋಪಿಸಿಕೊಳ್ಳುವುದೆಂಬಂತೆ ಭಯದಿಂದ ಉಡುಗಿದ. ಅದ್ಯಾವುದೋ ಶಕ್ತಿಯ ಬಗ್ಗೆ ಅವನು ಕಲ್ಪಿಸಿಕೊಂಡಂತೆಲ್ಲಾ, ಅದರ ವಿಸ್ತರಣೆಯೂ ಮುಂದಿನ ಕಾಲಘಟ್ಟಗಳಲ್ಲಾಗುತ್ತಾ ಬಂದು ದೇವರ ಪರಿಕಲ್ಪನೆಗೆ ತೆಕ್ಕೆ ಹಾಕಿಕೊಂಡಿತು. ಮುಗ್ಧ ಮನುಷ್ಯನ ಈ ಭಯವು ಅಕಾರಣವಾದದ್ದು, ಅವೈಚಾರಿಕ ಅಥವಾ ಅವೈಜ್ಞಾನಿಕವಾದದ್ದು ಹಾಗೂ ಹುರುಳಿಲ್ಲದ್ದು ಎಂದು ತಿಳಿದುಕೊಂಡ ಜಾಣ ಅವರಿಗೆ ತಿಳಿವಳಿಕೆ ನೀಡಲಿಲ್ಲ. ಅದು ಹಾಗಲ್ಲ ಹೀಗೆ ಎಂದೂ ಹೇಳಲಿಲ್ಲ. ಬದಲಿಗೆ, ಮುಗ್ಧರ ಭಯವನ್ನೇ ಬಂಡವಾಳವಾಗಿಟ್ಟುಕೊಂಡು ಅವರನ್ನು ಶೋಷಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪ್ರೀತಿಯಿಂದ ಉಂಟಾಗಬಹುದಾದ ಭಕ್ತಿಯನ್ನು ಭಯದಿಂದ ಉತ್ಪಾದಿಸಿದರು. ಭಯ-ಭಕ್ತಿ ಜೋಡು ಪದಗಳಾದದ್ದು ಆಕಸ್ಮಿಕವೇನಲ್ಲ.

ಇನ್ನೂ ಮುಂದುವರೆದು ಇದೇ ವಿಷಯವನ್ನು ದೇವರೆಂಬ ಪರಿಕಲ್ಪನೆಯಲ್ಲಿ ಆಧುನಿಕ ಆಸ್ತಿಕರು ಬೇರೊಂದು ವಾದವನ್ನು ಮಂಡಿಸುತ್ತಾರೆ. ಧಾರ್ಮಿಕತೆಯನ್ನು ಅಲ್ಲಗಳೆದು ಅಧ್ಯಾತ್ಮಿಕತೆಯನ್ನು ಮುಂದಿಡುತ್ತಾರೆ. ವೇಷಭೂಷಣದ ದೇವತೆಗಳನ್ನು ನಿರಾಕರಿಸಿ, ಕೇವಲ ಅದೊಂದು ಶಕ್ತಿ ಎಂದು ಪ್ರತಿಪಾದಿಸುತ್ತಾರೆ.

ಇದೇ ದೇವರ ಪರಿಕಲ್ಪನೆಯ ಶಕ್ತಿವಾದಿಗಳು ಜೋಸೆಫ್ ಮರ್ಫಿಯ ವಾದದ ಸರಣಿಗೆ ಬಂದರೆ ಕೊಂಚ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇನೆಂದರೆ, ಶಕ್ತಿ ನಿಷ್ಪಕ್ಷಪಾತವಾದುದು. ನಿರುದ್ದೇಶವಾದದ್ದು. ಉದಾಹರಣೆಗೆ ಮಳೆಯೆಂಬ ಶಕ್ತಿ. ಅದು ತನ್ನ ಸುರಿಯುವ ಕ್ರಿಯೆಯಲ್ಲಿ ಭೂಮಿಗೆ ಬೀಳುತ್ತದೆ. ಮುಳ್ಳಿನ ಗಿಡಗಳಿಗಾಗಲಿ, ಹೂವಿನ ಗಿಡಗಳಿಗಾಗಲಿ ನೀರೆರೆಯುತ್ತದೆ. ಆ ಮಳೆಯನ್ನು ಪಡೆಯುವ ಹೂವಿನ ಗಿಡವೂ, ಮುಳ್ಳಿನ ಗಿಡವೂ ತಾನು ಸಮೃದ್ಧವಾಗಿ ಬೆಳೆಯುತ್ತದೆ. ಆದರೆ ಮಳೆ ಎಂಬ ಶಕ್ತಿ ಅಥವಾ ಮಳೆ ದೇವರು, “ಮುಳ್ಳು ಕೆಟ್ಟದ್ದು, ಅದು ಚುಚ್ಚುತ್ತದೆ. ಹೂವು ಒಳ್ಳೆಯದು, ಅದು ಸುಂದರವಾಗಿದೆ, ಅದು ಸುಗಂಧವನ್ನು ಕೊಡುತ್ತದೆ” ಎಂದು ಬರಿಯ ಹೂವಿನ ಗಿಡದ ಮೇಲೆ ಮಳೆಯನ್ನು ಸುರಿಸುವುದಿಲ್ಲ. ಅದು ನಿಷ್ಪಕ್ಷಪಾತ. ಅಂತೆಯೇ ಪ್ರಕೃತಿಯ ಎಲ್ಲಾ ಶಕ್ತಿಗಳೂ ಕೂಡ.

PC : Wikimedia Commons

ಈ ವಿಚಾರವನ್ನು ’ದ ಪವರ್ ಆಫ್ ದ ಸಬ್ ಕಾನ್ಷಸ್ ಮೈಂಡ್‌ಗೆ  ತಂದುಕೊಂಡರೂ ಸರಿಯೇ. ಆ ಶಕ್ತಿ ನಿಷ್ಪಕ್ಷಪಾತಿ, ಅದಕ್ಕೆ ತರ್ಕ, ಲೆಕ್ಕಾಚಾರ, ಆಲೋಚನೆ, ವಿಶ್ಲೇಷಣೆಗಳಿಲ್ಲ. ಅದು ತನ್ನಲ್ಲಿ ಬಂದಿದ್ದನ್ನು ಬರಿದೇ ಸ್ವೀಕರಿಸುತ್ತದೆ. ಹಾಗೆಯೇ ಅದನ್ನು ಪೋಷಿಸುತ್ತದೆ ಮತ್ತು ಫಲ ನೀಡುತ್ತದೆ.

ಬಯಲಾಟದ ಪಾತ್ರಗಳಂತಹ ದೇವರ ಉಡುಗೆ ತೊಡುಗೆಗಳನ್ನು ನಿರಾಕರಿಸಿ, ನಿರಾಕಾರ ಶಕ್ತಿ ಎಂದು ವಾದಿಸುವ ಆಸ್ತಿಕರು ದೇವರಿಗೆ ಆಲೋಚನೆಗಳಿಲ್ಲ, ಉದ್ದೇಶಗಳಿಲ್ಲ, ಖುಷಿ ಬಂದಾಗ ’ಮಗನೇ ಬೇಕಾದ ವರ ಕೇಳಿಕೋ’ ಎಂದು ವರ ಕೊಡುವಷ್ಟು ಅಹಂಕಾರಿಯಲ್ಲ, ಕೋಪ ಬಂದಾಗ ತಿಕ್ಕಲು ಹತ್ತಿ ಶಾಪ ಕೊಟ್ಟು ಹಾನಿಗೆಡವುವ ಕ್ರೂರಿಯಲ್ಲ ಎಂಬುದನ್ನು ಗಮನಿಸಬೇಕು. ನಿರುದ್ದೇಶವಾದ, ನಿಷ್ಪಕ್ಷಪಾತವಾದ, ಹೊಗಳಿದರೆ ಉಬ್ಬದ, ತೆಗಳಿದರೆ ಕುಗ್ಗದ ಅಥವಾ ರೇಗದ ಶಕ್ತಿಯೆಂದಷ್ಟೇ ನೋಡಿದರೆ, ಜೋಸೆಫ್ ಮರ್ಫಿಯ ಸುಪ್ತಚೇತನದ ಶಕ್ತಿಯ ಬಗ್ಗೆಯೂ ಅರ್ಥವಾಗುತ್ತದೆ.

ಜೋಸೆಫ್ ಮರ್ಫಿ ಸುಪ್ತವಾಗಿರುವ ಶಕ್ತಿಗೆ ಪದಗಳ ಬೀಜಗಳನ್ನು ಬಿತ್ತುವಾಗ ಎಂತಹ ಕ್ರಮವನ್ನು ಅನುಸರಿಸಬೇಕು ಎಂದು ವಿವರಿಸುತ್ತಾರೆ. ಉದಾಹರಣೆಗೆ, ನಾನು ಪರೀಕ್ಷೆಯಲ್ಲಿ ಫೇಲ್ ಆಗಬಾರದು. ಪಾಸ್ ಆಗಬೇಕು. ಹಾಗಿರುವಾಗ, ನಕಾರಾತ್ಮಕವಾದ ಶಬ್ದವಾದ ಫೇಲ್ ಅನ್ನು ಉಪಯೋಗಿಸದಿರಲು ಸೂಚಿಸುತ್ತಾರೆ. ಬದಲಿಗೆ ನಾನು ಪಾಸ್ ಆಗಬೇಕು, ಅಥವಾ ಆಗುತ್ತೇನೆ, ಇನ್ನೂ ಮುಂದುವರಿದು ಆಗಿಬಿಟ್ಟೆ ಎಂದು ಭಾವಿಸಲು, ಕಲ್ಪಿಸಿಕೊಳ್ಳಲು ಸೂಚಿಸುತ್ತಾರೆ. ಅದೇ ರೀತಿಯಲ್ಲಿ ಯಾವುದೇ ವಿಷಯದಲ್ಲಿಯೂ ಕೂಡ ನಾವು ಬಯಸದೇ ಇರುವಂತಹ ವಿಚಾರಗಳನ್ನು ಪದಗಳ ಮೂಲಕವಾಗಿ ಜಾಗೃತ ಚೇತನದ ಮೂಲಕ ಸುಪ್ತ ಚೇತನಕ್ಕೆ ಹಾಯಲಿಕ್ಕೆ ಬಿಡಬೇಡಿ ಎಂದು ಸೂಕ್ಷ್ಮವಾಗಿ ತಿಳಿಸುತ್ತಾರೆ. ಅವರ ಪ್ರಕಾರ ಆ ಶಕ್ತಿಯು ಬಹಳ ಸುಲಿಲತೆಯಿಂದ ಕೂಡಿರುವುದು. ಅದು ವಿಶ್ಲೇಷಣೆಯಿಂದ ಹೊರತಾಗಿರುವುದು, ಅದಕ್ಕೆ ತರ್ಕ ಮತ್ತು ಲೆಕ್ಕಾಚಾರಗಳಿಲ್ಲ. ಅದು ನೇರ ಮತ್ತು ಮುಗ್ಧ.

ಯೇಸುಕ್ರಿಸ್ತ ಪಟ್ಟ ಪಾಡುಗಳಿಗೆ, ಪಡೆದ ದುರಂತದ ಮರಣಕ್ಕೆ ಕಾರಣ ಯೇಸುವಿನ ನಕಾರಾತ್ಮಕ ಮನಸ್ಥಿತಿಯೇ ಕಾರಣವಾಗಿತ್ತು ಎನ್ನುವುದಕ್ಕೆ ಜೋಸೆಫ್ ಹಿಂಜರಿಯುವುದಿಲ್ಲ.

ತಂದೆಯೇ ನಿನ್ನ ಮನದಂತೆಯೇ ಆಗಲಿ ಎನ್ನುವ ಯೇಸುವು ಏನಾಗಬೇಕೆಂದು ತಾನೇ ಸಕಾರಾತ್ಮಕವಾಗಿ ನಿರ್ಧರಿಸಿದ್ದರೆ, “ದೇವರೇ, ದೇವರೇ ನೀನೇಕೆ ನನ್ನ ಕೈಬಿಟ್ಟೆ” ಶಿಲುಬೆಯ ಮೇಲೆ ಸಾಯುವ ಮುನ್ನ ವ್ಯಥೆಪಡುವಂತಿರಲಿಲ್ಲ ಎನ್ನುವ ಜಿಜ್ಞಾಸೆ ಲೇಖಕರದು.

ಒಟ್ಟಿನಲ್ಲಿ ಮರ್ಫಿ ಹೇಳುವುದಿಷ್ಟೇ, ನಿನ್ನ ಆಲೋಚನೆಗಳ ಕಾರಣವೇ ನೀನು ಅನುಭವಿಸುವ
ಪರಿಣಾಮ.


ಇದನ್ನೂ ಓದಿ: ಮನೋರೋಗಕ್ಕೆ ಚಿಕಿತ್ಸೆಯುಂಟು: ಅದನ್ನು ಗುರುತಿಸಿದರೆ ಮಾತ್ರ : ಯೋಗೇಶ್ ಮಾಸ್ಟರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...