Homeಅಂಕಣಗಳುನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ 'ಬುದ್ಧ ಬಾಬಾಸಾಹೇಬ ಮತ್ತು ನಾನು'

ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

- Advertisement -
- Advertisement -

ಒಂದು ದಿನ ಸಂಜೆ ಮಹಾಲಕ್ಷ್ಮಿ ದಂತ ಚಿಕಿತ್ಸಾಲಯದ ಡಾಕ್ಟರ್ ಮತ್ತು ಕವಿ ಮಿತ್ರರಾದ ಶಿವಕುಮಾರ್ ಮಾಲಿಪಾಟೀಲ್‌ರವರ ಚೇಂಬರ್ ಪ್ರವೇಶಿಸಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡೆ. ಶೀರ್ಷಿಕೆ ಗಮನಸೆಳೆಯಿತು: ’ಬುದ್ಧ ಬಾಬಾಸಾಹೇಬ ಮತ್ತು ನಾನು’. ಅವರಿಂದ ಪುಸ್ತಕ ಪಡೆದು ಪುಟ ತಿರುವುತ್ತಾ ಹೋದೆ. ಕನ್ನಡ ನಾಡಿನ ಖ್ಯಾತ ನಟರಲ್ಲಿ ಒಬ್ಬರಾದ ಅಶೋಕ್ ಅವರಿಗೆ ಬುದ್ಧ ಮತ್ತು ಬಾಬಾಸಾಹೇಬರು ಹೇಗೆ ಅವಾಹಿಸಿಕೊಂಡಿರಬಹುದು, ನನ್ನ ಪ್ರೀತಿಯ ನಟನೊಬ್ಬನ ಮನದೊಳಗೆ ಬುದ್ಧ ಭೀಮರ ಪ್ರವೇಶ ಹೇಗಿರಬಹುದೆಂದು ಕುತೂಹಲದಿಂದ ಓದಲು ತೊಡಗಿದೆ.

ಶೂಟಿಂಗ್ ಸ್ಪಾಟ್ ಹಗಲು ಸ್ಟುಡಿಯೋ

ಶೂಟಿಂಗ್ ಸ್ಪಾಟ್‌ನಲ್ಲಿ ಪಾತ್ರಧಾರಿಯಾದ ಲೇಖಕರ ಪ್ರವೇಶದ ಜೊತೆಗೇ ಬುದ್ಧರ ಮತ್ತು ಪರಿವ್ರಾಜಕರ ಸಂಭಾಷಣೆ ಆರಂಭವಾಗುತ್ತದೆ. ಈ ಸಂಭಾಷಣೆಯನ್ನು ಹಲವು ಲೇಖಕರು ಬೇರೆಬೇರೆ ಪುಸ್ತಕಗಳಲ್ಲಿ ಬರೆದಿದ್ದಾರೆ. ಸ್ವತಃ ಅಂಬೇಡ್ಕರರು ತಮ್ಮ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದಲ್ಲಿಯೂ ಬರೆದಿದ್ದಾರೆ. ಇಲ್ಲಿ ಬುದ್ಧ ಪರಿವ್ರಾಜಕರೊಡನೆ ಮಾತಾಡುತ್ತಿಲ್ಲ, ಬದಲಾಗಿ ಲೇಖಕರ ಒಳಗಿನ ಬುದ್ಧ ಜಾಗೃತನಾಗಿ, ಪಾತ್ರವಾಗಿ ಆವಾಹಿಸಿಕೊಂಡು ಮಾತನಾಡುವ ಬಗೆ ಮತ್ತು ಅಲ್ಲಿ ಕಟ್ಟಿಕೊಡುವ ಸನ್ನಿವೇಶಗಳಿಂದ, ಅಲ್ಲಿನ ಒಂದಷ್ಟು ಮಾತುಗಳು ಅತ್ಯುತ್ತಮವಾದ ಪ್ರವಚನದ ಹಿತ ನೀಡುತ್ತವೆ. ಮಹಾಜ್ಞಾನಿ ಬುದ್ಧನಿಗೆ ತಕ್ಕಂತೆ ಪಾತ್ರ ಮತ್ತು ಅದರ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಿಸಿರುವುದು ’ಬುದ್ಧ ಅಂಡ್ ಹಿಸ್ ಧಮ್ಮ’ವನ್ನು ಬಹಳ ಸರಳವಾಗಿ ವಿವರಿಸುತ್ತದೆ. ಈ ಮಾತುಗಳನ್ನು ಬರೆಯುವಾಗ ಲೇಖಕರು ಬಾಬಾಸಾಹೇಬರ ಸಂಪೂರ್ಣ ಮಾರ್ಗದ ಬಗ್ಗೆ ಸ್ಪಷ್ಟತೆಯನ್ನು ಹೊಂದಿ, ಅದನ್ನ ಮತ್ತೆ ಹೇಳುತ್ತಾ ತಮ್ಮ ಮಾರ್ಗವೂ ಸಹ ಇದೇ ಎಂಬುದನ್ನು ಇಲ್ಲಿ ಓದುಗರಿಗೆ ವಿಶದಪಡಿಸುತ್ತಾರೆ.

ಕಪಿಲವಸ್ತು ಅಧ್ಯಾಯದಲ್ಲಿ ಅಂಬೇಡ್ಕರ್‌ರವರು ತಮ್ಮ ಪತ್ನಿಯ ಜೊತೆ ಸಂಭಾಷಿಸುತ್ತಾ ಬುದ್ಧನ ಪ್ರಸ್ತುತತೆಯನ್ನು ಓದುಗರಿಗೆ ತಿಳಿಸುತ್ತಾರೆ. ಇಲ್ಲಿ ಲೇಖಕರ ಬದ್ಧತೆ ಸ್ವಲ್ಪವೂ ಅಲುಗಾಡದೆ ಸ್ಥಿರವಾಗಿದೆ. ಬುದ್ಧ ಯಾಕೆ ಈಗ ನಮಗೆ ಪ್ರಸ್ತುತ ಎಂದು ಹೇಳುತ್ತಾ “ಬುದ್ಧನ ಚಿಂತನೆಗಳು ಧಾರ್ಮಿಕವಲ್ಲ, ಅವು ಸಮಾಜಮುಖಿ” ಎನ್ನುವಾಗ ಲೇಖಕರು ವರ್ತಮಾನದ ಎಲ್ಲಾ ತಾಕಲಾಟಗಳಿಗೂ ಮಧ್ಯಮ ಮಾರ್ಗವನ್ನು ಸೂಚಿಸುತ್ತಾರೆ. ದೃಶ್ಯಮಾಧ್ಯಮದಲ್ಲಿ ಬುದ್ಧನನ್ನು ತರುವ ಬಗ್ಗೆ ಯೋಚಿಸುತ್ತಲೇ ಆರಂಭವಾಗುವ ಕಪಿಲವಸ್ತು ಅಧ್ಯಾಯ, ಬುದ್ಧನ ಬಾಲ್ಯದಿಂದ ಆತ ಮನೆ ಬಿಟ್ಟು ಹೋಗುವವರೆಗಿನ ಘಟನೆಗಳು ಸಂಕಲಿಸಿಕೊಳ್ಳುವಾಗ ಸಂಪ್ರದಾಯವಾದಿಗಳು ಬರೆದ ಪಠ್ಯಗಳನ್ನು ಮತ್ತು ಬಾಬಾಸಾಹೇಬರ ಸಂಶೋಧನಾತ್ಮಕ ಪಠ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ.

ಎಪಿಸೋಡ್ ಮೂರರಲ್ಲಿ ಲೇಖಕರು ಒಂದು ಕುತೂಹಲಕರವಾದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಯೊಂದಿಗೆ ಆರಂಭವಾಗುತ್ತದೆ ಮತ್ತು ವರ್ತಮಾನಕ್ಕೆ ತಳುಕು ಹಾಕುತ್ತ ಸಾಗುತ್ತದೆ. ಆ ಭಾಗದಲ್ಲಿ ಮೂಡಿರುವ, ಸಶಸ್ತ್ರ ಹೋರಾಟ ಮಾಡುವ ತಂಡವನ್ನು ಮುಖ್ಯವಾಹಿನಿಗೆ ತರುವುದರೊಂದಿಗಿನ ಮಾತುಕತೆ ಕುತೂಹಲಕರವಾಗಿದೆ. ಈ ಸಂಭಾಷಣೆ ಓದುವಾಗಲೆಲ್ಲ ನನಗೆ ಬುದ್ಧನನ್ನು ಎದುರುಗೊಂಡ ಅಂಗುಲಿಮಾಲ ನೆನಪಾಗುತ್ತಾನೆ. ಲೇಖಕರು ಇಲ್ಲಿನ ಸೂಕ್ಷ್ಮ ಸನ್ನಿವೇಶವನ್ನು, ಬುದ್ಧ ಮಾಡಿದ ಬದಲಾವಣೆಯಂತೆಯೇ ಕಟ್ಟಿಕೊಡಲು, ತಾವು ಒಂದು ಪಾತ್ರವಾಗಿ ಮೂಡಿಬಂದು, ಘಟನೆಯನ್ನು ಜೋಡಿಸಿಕೊಂಡು ಓದುಗರಿಗೆ ಕುತೂಹಲವನ್ನೂ, ತಿಳಿವಳಿಕೆಯನ್ನೂ ಮೂಡಿಸುತ್ತಾರೆ.

ಪ್ರಗತಿಪರ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರ ಹಿಂದೆ ಬಿದ್ದ ಪೊಲೀಸರ ನಡುವೆ ಸಮನ್ವಯ ಸಾಧಿಸುವ ಲೇಖಕರು, ಹೋರಾಟಗಾರರು ಮುಖ್ಯವಾಹಿನಿಗೆ ಬಂದ ನಂತರದ ಮುಂದಿನ ಯೋಜನೆಯನ್ನು ಜಾರಿಯಲ್ಲಿಡುವ ಭಾಗವಾಗಿ ಆರಂಭಿಕ ಸಭೆಗಳನ್ನು ನಡೆಸುತ್ತಾರೆ. ಅವರೇ ಕೊನೆಯಲ್ಲಿ ಹೇಳುವಂತೆ ಸಿದ್ಧತಾ ಪರ್ವ ಮುಗಿಯಿತೆಂದು ಕಥೆಯನ್ನು ಸಮಾಪ್ತಿ ಮಾಡುತ್ತಾರೆ. ಹೀಗೆ ಹೇಳುವಾಗ ಓದುಗನಿಗೆ ಧಾರಾವಾಹಿ ಎಪಿಸೋಡ್‌ಗಳ ಕಾಯುವಿಕೆಯ ಭಾಸವಾಗುತ್ತದೆ. ವರ್ತಮಾನದೊಂದಿಗೆ ಭೂತ ಮತ್ತು ಭವಿಷ್ಯತ್ತು ಬೆಸೆಯುವ ಈ ಭಾಗದಲ್ಲಿ ಲೇಖಕರ ವಿಶಿಷ್ಟ ನಿರೂಪಣೆ ಗಮನ ಸೆಳೆಯುತ್ತದೆ. ಎಪಿಸೋಡ್ 3 ಓದುವಾಗಲೆಲ್ಲಾ ನನ್ನೊಳಗಿನ ವಿಚಾರಗಳಿಗೆ ಪುಷ್ಟಿ ಸಿಗುತ್ತದೆ ಮತ್ತು ಸ್ಪಷ್ಟತೆ ದೊರಕುತ್ತದೆ. ಭ್ರಷ್ಟ ರಾಜಕಾರಣವನ್ನು ಕೊನೆಗಾಣಿಸಿ ಮತ್ತೊಂದು ಹೊಸ ಪಡೆಯನ್ನು ಕಟ್ಟುವ ಕನಸುಗಳ ಭಾಗವಾಗಿ ನಮ್ಮನ್ನು ಅದರಲ್ಲಿ ಸೇರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ.

ಈ ಕೃತಿಯಲ್ಲಿ ಕಥೆಯನ್ನು ಜೋಡಿಸಿಕೊಂಡು ಹೊಸೆದಿರುವ ಬಗೆ ಹೊಸದು. ಇದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಅಧ್ಯಾಯವೋ, ಮಹಾ ಧಾರಾವಾಹಿಯ ಮೊದಲ ಕಂತೋ ಎಂಬ ಗೊಂದಲ ಉಂಟಾಗುತ್ತದೆ. ಆದರೆ, ಎಲ್ಲಿಯು ಬೋರಾಗದೆ ಓದಿಸಿಕೊಂಡುಹೋಗುವ, ಚರಿತ್ರೆಯೊಳಗಿನ ಹಲವು ಸಂಗತಿಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವ ಬಗೆ ಆಪ್ತವಾಗಿಯೂ, ಗಹನವಾಗಿಯೂ ಮೂಡಿದೆ. ಮತ್ತೊಂದು ವಿಶೇಷವೇನೆಂದರೆ ಪೂನಾ ಒಪ್ಪಂದವನ್ನು ಬಹಳ ಸರಳವಾಗಿ ಹೇಳುತ್ತಾ ಲೇಖಕರು ನಮಗೆ ಆಪ್ತರಾಗಿಬಿಡುತ್ತಾರೆ. ಈ ಕೃತಿಯನ್ನು ಪೂರ್ಣ ಓದಿದನಂತರ ಲೇಖಕರ ಒಳಗಿನ ಬುದ್ಧತ್ವ ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸಿ ಬಾಬಾಸಾಹೇಬರ ಹಾದಿ ಎಂತಹುದು ಎಂದು ಅರಿವಿಗೆ ತರುತ್ತದೆ.

ಲೇಖಕರಾದ ಅಶೋಕ್‌ರವರ ಬದ್ಧತೆ ಮತ್ತು ವಿಷಯದ ಪ್ರಸ್ತುತತೆ ಜೊತೆಗೆ ಅವರು ಆರಿಸಿಕೊಂಡ ಪ್ರಕಾರ ನನಗಿಷ್ಟವಾಯಿತು. ಬುದ್ಧನ ಪ್ರೀತಿ ಇಲ್ಲಿದೆ ಎಂದುಕೊಳ್ಳುತ್ತೇನೆ…

ನಮೋ ಬುದ್ಧಾಯ, ಜೈಭೀಮ್

ರಮೇಶ್ ಗಬ್ಬೂರ್

ರಮೇಶ್ ಗಬ್ಬೂರ್
ಎದೆಯೊಳಗಿನ ಸಿಟ್ಟನ್ನು ಬಸಿದು ಅಕ್ಷರ ರೂಪ ಕೊಡುವ ರಮೇಶ್ ಗಬ್ಬೂರ್ ರವರು ಜನಕವಿ ಎಂದೇ ಪರಿಚಿತರು. ‘ಒಲಿದಂತೆ ಹಾಡುವೆ’ ಸೇರಿ ಹಲವು ಹೋರಾಟದ ಹಾಡುಗಳ ಪುಸ್ತಕ ರಚಿಸಿದ್ದಾರೆ. ಸದ್ಯಕ್ಕೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯುದ್ಧ ಮುಂದುವರಿಸಲು ಸಾಧ್ಯವಾಗದೆ ಅಮೆರಿಕ ಬಲವಂತವಾಗಿ ಕದನ ವಿರಾಮ ಘೋಷಿಸಿತು’: ಭಾರತದಲ್ಲಿ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ

ನವದೆಹಲಿ: ಸಂಘರ್ಷವನ್ನು ಮುುಂದುವರಿಸಲು ವಿಫಲವಾದ ನಂತರ ಅಮೆರಿಕವು ಇರಾನ್ ಜೊತೆ ಕದನ ವಿರಾಮ ಘೋಷಿಸಲು ಒತ್ತಾಯಿಸಲ್ಪಟ್ಟಿತು ಮತ್ತು ನಿರಂತರ ಹಗೆತನವು ವಾಷಿಂಗ್ಟನ್‌ಗೆ ಮತ್ತಷ್ಟು ಹಿನ್ನಡೆಗೆ ಕಾರಣವಾಗುತ್ತಿತ್ತು ಎಂದು ಇರಾನ್‌ನ ಸರ್ವೋಚ್ಚ ನಾಯಕನ ಭಾರತದಲ್ಲಿನ...

ಶಾರದಾ ಚಿಟ್ ಫಂಡ್ ಹಗರಣ: 13 ವರ್ಷಗಳ ನಂತರ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಜಾಮೀನು ಮಂಜೂರು ಮಾಡಿದ ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ ಹೈಕೋರ್ಟ್ ಬುಧವಾರ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, 13 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಲು ದಾರಿ ಸುಗಮವಾಗಿದೆ. ಪಶ್ಚಿಮ...

ಇಂದೋರ್: ಪೊಲೀಸರಿಂದ ಹಣಕ್ಕಾಗಿ ಬೇಡಿಕೆ, ಹಲ್ಲೆ ಆರೋಪ; 25 ವರ್ಷದ ಟ್ಯಾಕ್ಸಿ ಚಾಲಕ ಆತ್ಮಹತ್ಯೆ: ಪೊಲೀಸ್ ಅಮಾನತು

ಇಂದೋರ್: ಪೊಲೀಸರ ಹಲ್ಲೆ ಮತ್ತು ಭ್ರಷ್ಟಾಚಾರವನ್ನು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ ನಂತರ 25 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅಧಿಕಾರಿಗಳು ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಅಭಿಷೇಕ್...

ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ : ಎಸ್‌ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್...

ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಆರೋಪ; ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಮನೋಜ್ ಸಿನ್ಹಾ

ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ ಎಂದು...

ಭಾರಿ ಜನ ಬೆಂಬಲದ ನಡುವೆ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ: ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟ ಮೆರವಣಿಗೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಕಾಲಿಘಾಟ್ಕಾಲ್ ನಿವಾಸದಿಂದ ಹೊರಬಂದು ಭಬಾನಿಪುರ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದರು, ಆ ಸಮಯದಲ್ಲಿ ಬೆಂಬಲಿಗರ ದೊಡ್ಡ ಗುಂಪೊಂದು ತೃಣಮೂಲ ಕಾಂಗ್ರೆಸ್...

‘ಜ್ಞಾನೇಶ್ ಕುಮಾರ್ ನಮಗೆ ‘ಗೆಟ್ ಲಾಸ್ಟ್’ ಅಂದ್ರು’ : ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಸಭೆ ಬಳಿಕ ಟಿಎಂಸಿ ನಾಯಕರಿಂದ ಆರೋಪ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ...

ಅಸ್ಸಾಂ ಸಿಎಂ ಪತ್ನಿ ದೂರಿನ ಮೇರೆಗೆ ಪವನ್ ಖೇರಾ ವಿರುದ್ಧ ಮಾನನಷ್ಟ, ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಮಾನನಷ್ಟ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ...

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಬೆತ್ತಲಾದ ವಿಶ್ವಗುರು : ಕಾಂಗ್ರೆಸ್

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರ 'ಅತ್ಯಂತ ವೈಯಕ್ತಿಕ ರಾಜತಾಂತ್ರಿಕತೆಗೆ' ಉಂಟಾದ...

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ನಿಂದನೀಯ ಪದ ಬಳಕೆ; ‘ಸಂಪೂರ್ಣ ನಾಚಿಕೆಗೇಡಿನ ಸಂಗತಿ’ ಎಂದ ಪ್ರಿಯಾಂಕಾ ಗಾಂಧಿ 

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಅವಾಚ್ಯ" ಭಾಷೆ ಬಳಸಿರುವುದು "ಸಂಪೂರ್ಣವಾಗಿ ನಾಚಿಕೆಗೇಡಿನ" ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ...