Homeಅಂಕಣಗಳುನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ 'ಬುದ್ಧ ಬಾಬಾಸಾಹೇಬ ಮತ್ತು ನಾನು'

ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

- Advertisement -
- Advertisement -

ಒಂದು ದಿನ ಸಂಜೆ ಮಹಾಲಕ್ಷ್ಮಿ ದಂತ ಚಿಕಿತ್ಸಾಲಯದ ಡಾಕ್ಟರ್ ಮತ್ತು ಕವಿ ಮಿತ್ರರಾದ ಶಿವಕುಮಾರ್ ಮಾಲಿಪಾಟೀಲ್‌ರವರ ಚೇಂಬರ್ ಪ್ರವೇಶಿಸಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡೆ. ಶೀರ್ಷಿಕೆ ಗಮನಸೆಳೆಯಿತು: ’ಬುದ್ಧ ಬಾಬಾಸಾಹೇಬ ಮತ್ತು ನಾನು’. ಅವರಿಂದ ಪುಸ್ತಕ ಪಡೆದು ಪುಟ ತಿರುವುತ್ತಾ ಹೋದೆ. ಕನ್ನಡ ನಾಡಿನ ಖ್ಯಾತ ನಟರಲ್ಲಿ ಒಬ್ಬರಾದ ಅಶೋಕ್ ಅವರಿಗೆ ಬುದ್ಧ ಮತ್ತು ಬಾಬಾಸಾಹೇಬರು ಹೇಗೆ ಅವಾಹಿಸಿಕೊಂಡಿರಬಹುದು, ನನ್ನ ಪ್ರೀತಿಯ ನಟನೊಬ್ಬನ ಮನದೊಳಗೆ ಬುದ್ಧ ಭೀಮರ ಪ್ರವೇಶ ಹೇಗಿರಬಹುದೆಂದು ಕುತೂಹಲದಿಂದ ಓದಲು ತೊಡಗಿದೆ.

ಶೂಟಿಂಗ್ ಸ್ಪಾಟ್ ಹಗಲು ಸ್ಟುಡಿಯೋ

ಶೂಟಿಂಗ್ ಸ್ಪಾಟ್‌ನಲ್ಲಿ ಪಾತ್ರಧಾರಿಯಾದ ಲೇಖಕರ ಪ್ರವೇಶದ ಜೊತೆಗೇ ಬುದ್ಧರ ಮತ್ತು ಪರಿವ್ರಾಜಕರ ಸಂಭಾಷಣೆ ಆರಂಭವಾಗುತ್ತದೆ. ಈ ಸಂಭಾಷಣೆಯನ್ನು ಹಲವು ಲೇಖಕರು ಬೇರೆಬೇರೆ ಪುಸ್ತಕಗಳಲ್ಲಿ ಬರೆದಿದ್ದಾರೆ. ಸ್ವತಃ ಅಂಬೇಡ್ಕರರು ತಮ್ಮ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದಲ್ಲಿಯೂ ಬರೆದಿದ್ದಾರೆ. ಇಲ್ಲಿ ಬುದ್ಧ ಪರಿವ್ರಾಜಕರೊಡನೆ ಮಾತಾಡುತ್ತಿಲ್ಲ, ಬದಲಾಗಿ ಲೇಖಕರ ಒಳಗಿನ ಬುದ್ಧ ಜಾಗೃತನಾಗಿ, ಪಾತ್ರವಾಗಿ ಆವಾಹಿಸಿಕೊಂಡು ಮಾತನಾಡುವ ಬಗೆ ಮತ್ತು ಅಲ್ಲಿ ಕಟ್ಟಿಕೊಡುವ ಸನ್ನಿವೇಶಗಳಿಂದ, ಅಲ್ಲಿನ ಒಂದಷ್ಟು ಮಾತುಗಳು ಅತ್ಯುತ್ತಮವಾದ ಪ್ರವಚನದ ಹಿತ ನೀಡುತ್ತವೆ. ಮಹಾಜ್ಞಾನಿ ಬುದ್ಧನಿಗೆ ತಕ್ಕಂತೆ ಪಾತ್ರ ಮತ್ತು ಅದರ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಿಸಿರುವುದು ’ಬುದ್ಧ ಅಂಡ್ ಹಿಸ್ ಧಮ್ಮ’ವನ್ನು ಬಹಳ ಸರಳವಾಗಿ ವಿವರಿಸುತ್ತದೆ. ಈ ಮಾತುಗಳನ್ನು ಬರೆಯುವಾಗ ಲೇಖಕರು ಬಾಬಾಸಾಹೇಬರ ಸಂಪೂರ್ಣ ಮಾರ್ಗದ ಬಗ್ಗೆ ಸ್ಪಷ್ಟತೆಯನ್ನು ಹೊಂದಿ, ಅದನ್ನ ಮತ್ತೆ ಹೇಳುತ್ತಾ ತಮ್ಮ ಮಾರ್ಗವೂ ಸಹ ಇದೇ ಎಂಬುದನ್ನು ಇಲ್ಲಿ ಓದುಗರಿಗೆ ವಿಶದಪಡಿಸುತ್ತಾರೆ.

ಕಪಿಲವಸ್ತು ಅಧ್ಯಾಯದಲ್ಲಿ ಅಂಬೇಡ್ಕರ್‌ರವರು ತಮ್ಮ ಪತ್ನಿಯ ಜೊತೆ ಸಂಭಾಷಿಸುತ್ತಾ ಬುದ್ಧನ ಪ್ರಸ್ತುತತೆಯನ್ನು ಓದುಗರಿಗೆ ತಿಳಿಸುತ್ತಾರೆ. ಇಲ್ಲಿ ಲೇಖಕರ ಬದ್ಧತೆ ಸ್ವಲ್ಪವೂ ಅಲುಗಾಡದೆ ಸ್ಥಿರವಾಗಿದೆ. ಬುದ್ಧ ಯಾಕೆ ಈಗ ನಮಗೆ ಪ್ರಸ್ತುತ ಎಂದು ಹೇಳುತ್ತಾ “ಬುದ್ಧನ ಚಿಂತನೆಗಳು ಧಾರ್ಮಿಕವಲ್ಲ, ಅವು ಸಮಾಜಮುಖಿ” ಎನ್ನುವಾಗ ಲೇಖಕರು ವರ್ತಮಾನದ ಎಲ್ಲಾ ತಾಕಲಾಟಗಳಿಗೂ ಮಧ್ಯಮ ಮಾರ್ಗವನ್ನು ಸೂಚಿಸುತ್ತಾರೆ. ದೃಶ್ಯಮಾಧ್ಯಮದಲ್ಲಿ ಬುದ್ಧನನ್ನು ತರುವ ಬಗ್ಗೆ ಯೋಚಿಸುತ್ತಲೇ ಆರಂಭವಾಗುವ ಕಪಿಲವಸ್ತು ಅಧ್ಯಾಯ, ಬುದ್ಧನ ಬಾಲ್ಯದಿಂದ ಆತ ಮನೆ ಬಿಟ್ಟು ಹೋಗುವವರೆಗಿನ ಘಟನೆಗಳು ಸಂಕಲಿಸಿಕೊಳ್ಳುವಾಗ ಸಂಪ್ರದಾಯವಾದಿಗಳು ಬರೆದ ಪಠ್ಯಗಳನ್ನು ಮತ್ತು ಬಾಬಾಸಾಹೇಬರ ಸಂಶೋಧನಾತ್ಮಕ ಪಠ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ.

ಎಪಿಸೋಡ್ ಮೂರರಲ್ಲಿ ಲೇಖಕರು ಒಂದು ಕುತೂಹಲಕರವಾದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಯೊಂದಿಗೆ ಆರಂಭವಾಗುತ್ತದೆ ಮತ್ತು ವರ್ತಮಾನಕ್ಕೆ ತಳುಕು ಹಾಕುತ್ತ ಸಾಗುತ್ತದೆ. ಆ ಭಾಗದಲ್ಲಿ ಮೂಡಿರುವ, ಸಶಸ್ತ್ರ ಹೋರಾಟ ಮಾಡುವ ತಂಡವನ್ನು ಮುಖ್ಯವಾಹಿನಿಗೆ ತರುವುದರೊಂದಿಗಿನ ಮಾತುಕತೆ ಕುತೂಹಲಕರವಾಗಿದೆ. ಈ ಸಂಭಾಷಣೆ ಓದುವಾಗಲೆಲ್ಲ ನನಗೆ ಬುದ್ಧನನ್ನು ಎದುರುಗೊಂಡ ಅಂಗುಲಿಮಾಲ ನೆನಪಾಗುತ್ತಾನೆ. ಲೇಖಕರು ಇಲ್ಲಿನ ಸೂಕ್ಷ್ಮ ಸನ್ನಿವೇಶವನ್ನು, ಬುದ್ಧ ಮಾಡಿದ ಬದಲಾವಣೆಯಂತೆಯೇ ಕಟ್ಟಿಕೊಡಲು, ತಾವು ಒಂದು ಪಾತ್ರವಾಗಿ ಮೂಡಿಬಂದು, ಘಟನೆಯನ್ನು ಜೋಡಿಸಿಕೊಂಡು ಓದುಗರಿಗೆ ಕುತೂಹಲವನ್ನೂ, ತಿಳಿವಳಿಕೆಯನ್ನೂ ಮೂಡಿಸುತ್ತಾರೆ.

ಪ್ರಗತಿಪರ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರ ಹಿಂದೆ ಬಿದ್ದ ಪೊಲೀಸರ ನಡುವೆ ಸಮನ್ವಯ ಸಾಧಿಸುವ ಲೇಖಕರು, ಹೋರಾಟಗಾರರು ಮುಖ್ಯವಾಹಿನಿಗೆ ಬಂದ ನಂತರದ ಮುಂದಿನ ಯೋಜನೆಯನ್ನು ಜಾರಿಯಲ್ಲಿಡುವ ಭಾಗವಾಗಿ ಆರಂಭಿಕ ಸಭೆಗಳನ್ನು ನಡೆಸುತ್ತಾರೆ. ಅವರೇ ಕೊನೆಯಲ್ಲಿ ಹೇಳುವಂತೆ ಸಿದ್ಧತಾ ಪರ್ವ ಮುಗಿಯಿತೆಂದು ಕಥೆಯನ್ನು ಸಮಾಪ್ತಿ ಮಾಡುತ್ತಾರೆ. ಹೀಗೆ ಹೇಳುವಾಗ ಓದುಗನಿಗೆ ಧಾರಾವಾಹಿ ಎಪಿಸೋಡ್‌ಗಳ ಕಾಯುವಿಕೆಯ ಭಾಸವಾಗುತ್ತದೆ. ವರ್ತಮಾನದೊಂದಿಗೆ ಭೂತ ಮತ್ತು ಭವಿಷ್ಯತ್ತು ಬೆಸೆಯುವ ಈ ಭಾಗದಲ್ಲಿ ಲೇಖಕರ ವಿಶಿಷ್ಟ ನಿರೂಪಣೆ ಗಮನ ಸೆಳೆಯುತ್ತದೆ. ಎಪಿಸೋಡ್ 3 ಓದುವಾಗಲೆಲ್ಲಾ ನನ್ನೊಳಗಿನ ವಿಚಾರಗಳಿಗೆ ಪುಷ್ಟಿ ಸಿಗುತ್ತದೆ ಮತ್ತು ಸ್ಪಷ್ಟತೆ ದೊರಕುತ್ತದೆ. ಭ್ರಷ್ಟ ರಾಜಕಾರಣವನ್ನು ಕೊನೆಗಾಣಿಸಿ ಮತ್ತೊಂದು ಹೊಸ ಪಡೆಯನ್ನು ಕಟ್ಟುವ ಕನಸುಗಳ ಭಾಗವಾಗಿ ನಮ್ಮನ್ನು ಅದರಲ್ಲಿ ಸೇರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ.

ಈ ಕೃತಿಯಲ್ಲಿ ಕಥೆಯನ್ನು ಜೋಡಿಸಿಕೊಂಡು ಹೊಸೆದಿರುವ ಬಗೆ ಹೊಸದು. ಇದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಅಧ್ಯಾಯವೋ, ಮಹಾ ಧಾರಾವಾಹಿಯ ಮೊದಲ ಕಂತೋ ಎಂಬ ಗೊಂದಲ ಉಂಟಾಗುತ್ತದೆ. ಆದರೆ, ಎಲ್ಲಿಯು ಬೋರಾಗದೆ ಓದಿಸಿಕೊಂಡುಹೋಗುವ, ಚರಿತ್ರೆಯೊಳಗಿನ ಹಲವು ಸಂಗತಿಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವ ಬಗೆ ಆಪ್ತವಾಗಿಯೂ, ಗಹನವಾಗಿಯೂ ಮೂಡಿದೆ. ಮತ್ತೊಂದು ವಿಶೇಷವೇನೆಂದರೆ ಪೂನಾ ಒಪ್ಪಂದವನ್ನು ಬಹಳ ಸರಳವಾಗಿ ಹೇಳುತ್ತಾ ಲೇಖಕರು ನಮಗೆ ಆಪ್ತರಾಗಿಬಿಡುತ್ತಾರೆ. ಈ ಕೃತಿಯನ್ನು ಪೂರ್ಣ ಓದಿದನಂತರ ಲೇಖಕರ ಒಳಗಿನ ಬುದ್ಧತ್ವ ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸಿ ಬಾಬಾಸಾಹೇಬರ ಹಾದಿ ಎಂತಹುದು ಎಂದು ಅರಿವಿಗೆ ತರುತ್ತದೆ.

ಲೇಖಕರಾದ ಅಶೋಕ್‌ರವರ ಬದ್ಧತೆ ಮತ್ತು ವಿಷಯದ ಪ್ರಸ್ತುತತೆ ಜೊತೆಗೆ ಅವರು ಆರಿಸಿಕೊಂಡ ಪ್ರಕಾರ ನನಗಿಷ್ಟವಾಯಿತು. ಬುದ್ಧನ ಪ್ರೀತಿ ಇಲ್ಲಿದೆ ಎಂದುಕೊಳ್ಳುತ್ತೇನೆ…

ನಮೋ ಬುದ್ಧಾಯ, ಜೈಭೀಮ್

ರಮೇಶ್ ಗಬ್ಬೂರ್

ರಮೇಶ್ ಗಬ್ಬೂರ್
ಎದೆಯೊಳಗಿನ ಸಿಟ್ಟನ್ನು ಬಸಿದು ಅಕ್ಷರ ರೂಪ ಕೊಡುವ ರಮೇಶ್ ಗಬ್ಬೂರ್ ರವರು ಜನಕವಿ ಎಂದೇ ಪರಿಚಿತರು. ‘ಒಲಿದಂತೆ ಹಾಡುವೆ’ ಸೇರಿ ಹಲವು ಹೋರಾಟದ ಹಾಡುಗಳ ಪುಸ್ತಕ ರಚಿಸಿದ್ದಾರೆ. ಸದ್ಯಕ್ಕೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...

ಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬ ಹತ್ತಿರ ಬರುತ್ತಿದ್ದಂತೆ, ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ವ್ಯಾಪಾರಿಗಳು,...

ಪ.ಬಂಗಾಳ: ಮಮತಾ ಸರ್ಕಾರ ಜಾರಿ ಮಾಡಿದ್ದ OBC ಮೀಸಲಾತಿಯನ್ನು ಕಿತ್ತೆಸೆದ ಸುವೇಂದು ನೇತೃತ್ವದ ಬಿಜೆಪಿ ಸರ್ಕಾರ

ಪಶ್ಚಿಮ ಬಂಗಾಳದ ಒಬಿಸಿ (ಇತರ ಹಿಂದುಳಿದ ವರ್ಗಗಳು) ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯಗಳನ್ನು ಕೈಬಿಡುವ ಮೂಲಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹಿಂದೆ...

ಸಾಮಾಜಿಕ ಹೋರಾಟಗಾರ ‘ಫರಿದುಲ್ ಇಸ್ಲಾಂ’ರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದ ಕೋಲ್ಕತ್ತಾ ಪೊಲೀಸರು

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಹತ್ತು ದಿನಗಳು ಕಳೆಯುವಷ್ಟರಲ್ಲೇ, ಸರ್ಕಾರದ ಆಡಳಿತವನ್ನು ಪ್ರಶ್ನಿಸುವವರ ಹಾಗೂ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ ಎಂಬ...

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...