Homeಅಂಕಣಗಳುನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ 'ಬುದ್ಧ ಬಾಬಾಸಾಹೇಬ ಮತ್ತು ನಾನು'

ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

- Advertisement -
- Advertisement -

ಒಂದು ದಿನ ಸಂಜೆ ಮಹಾಲಕ್ಷ್ಮಿ ದಂತ ಚಿಕಿತ್ಸಾಲಯದ ಡಾಕ್ಟರ್ ಮತ್ತು ಕವಿ ಮಿತ್ರರಾದ ಶಿವಕುಮಾರ್ ಮಾಲಿಪಾಟೀಲ್‌ರವರ ಚೇಂಬರ್ ಪ್ರವೇಶಿಸಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡೆ. ಶೀರ್ಷಿಕೆ ಗಮನಸೆಳೆಯಿತು: ’ಬುದ್ಧ ಬಾಬಾಸಾಹೇಬ ಮತ್ತು ನಾನು’. ಅವರಿಂದ ಪುಸ್ತಕ ಪಡೆದು ಪುಟ ತಿರುವುತ್ತಾ ಹೋದೆ. ಕನ್ನಡ ನಾಡಿನ ಖ್ಯಾತ ನಟರಲ್ಲಿ ಒಬ್ಬರಾದ ಅಶೋಕ್ ಅವರಿಗೆ ಬುದ್ಧ ಮತ್ತು ಬಾಬಾಸಾಹೇಬರು ಹೇಗೆ ಅವಾಹಿಸಿಕೊಂಡಿರಬಹುದು, ನನ್ನ ಪ್ರೀತಿಯ ನಟನೊಬ್ಬನ ಮನದೊಳಗೆ ಬುದ್ಧ ಭೀಮರ ಪ್ರವೇಶ ಹೇಗಿರಬಹುದೆಂದು ಕುತೂಹಲದಿಂದ ಓದಲು ತೊಡಗಿದೆ.

ಶೂಟಿಂಗ್ ಸ್ಪಾಟ್ ಹಗಲು ಸ್ಟುಡಿಯೋ

ಶೂಟಿಂಗ್ ಸ್ಪಾಟ್‌ನಲ್ಲಿ ಪಾತ್ರಧಾರಿಯಾದ ಲೇಖಕರ ಪ್ರವೇಶದ ಜೊತೆಗೇ ಬುದ್ಧರ ಮತ್ತು ಪರಿವ್ರಾಜಕರ ಸಂಭಾಷಣೆ ಆರಂಭವಾಗುತ್ತದೆ. ಈ ಸಂಭಾಷಣೆಯನ್ನು ಹಲವು ಲೇಖಕರು ಬೇರೆಬೇರೆ ಪುಸ್ತಕಗಳಲ್ಲಿ ಬರೆದಿದ್ದಾರೆ. ಸ್ವತಃ ಅಂಬೇಡ್ಕರರು ತಮ್ಮ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದಲ್ಲಿಯೂ ಬರೆದಿದ್ದಾರೆ. ಇಲ್ಲಿ ಬುದ್ಧ ಪರಿವ್ರಾಜಕರೊಡನೆ ಮಾತಾಡುತ್ತಿಲ್ಲ, ಬದಲಾಗಿ ಲೇಖಕರ ಒಳಗಿನ ಬುದ್ಧ ಜಾಗೃತನಾಗಿ, ಪಾತ್ರವಾಗಿ ಆವಾಹಿಸಿಕೊಂಡು ಮಾತನಾಡುವ ಬಗೆ ಮತ್ತು ಅಲ್ಲಿ ಕಟ್ಟಿಕೊಡುವ ಸನ್ನಿವೇಶಗಳಿಂದ, ಅಲ್ಲಿನ ಒಂದಷ್ಟು ಮಾತುಗಳು ಅತ್ಯುತ್ತಮವಾದ ಪ್ರವಚನದ ಹಿತ ನೀಡುತ್ತವೆ. ಮಹಾಜ್ಞಾನಿ ಬುದ್ಧನಿಗೆ ತಕ್ಕಂತೆ ಪಾತ್ರ ಮತ್ತು ಅದರ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಿಸಿರುವುದು ’ಬುದ್ಧ ಅಂಡ್ ಹಿಸ್ ಧಮ್ಮ’ವನ್ನು ಬಹಳ ಸರಳವಾಗಿ ವಿವರಿಸುತ್ತದೆ. ಈ ಮಾತುಗಳನ್ನು ಬರೆಯುವಾಗ ಲೇಖಕರು ಬಾಬಾಸಾಹೇಬರ ಸಂಪೂರ್ಣ ಮಾರ್ಗದ ಬಗ್ಗೆ ಸ್ಪಷ್ಟತೆಯನ್ನು ಹೊಂದಿ, ಅದನ್ನ ಮತ್ತೆ ಹೇಳುತ್ತಾ ತಮ್ಮ ಮಾರ್ಗವೂ ಸಹ ಇದೇ ಎಂಬುದನ್ನು ಇಲ್ಲಿ ಓದುಗರಿಗೆ ವಿಶದಪಡಿಸುತ್ತಾರೆ.

ಕಪಿಲವಸ್ತು ಅಧ್ಯಾಯದಲ್ಲಿ ಅಂಬೇಡ್ಕರ್‌ರವರು ತಮ್ಮ ಪತ್ನಿಯ ಜೊತೆ ಸಂಭಾಷಿಸುತ್ತಾ ಬುದ್ಧನ ಪ್ರಸ್ತುತತೆಯನ್ನು ಓದುಗರಿಗೆ ತಿಳಿಸುತ್ತಾರೆ. ಇಲ್ಲಿ ಲೇಖಕರ ಬದ್ಧತೆ ಸ್ವಲ್ಪವೂ ಅಲುಗಾಡದೆ ಸ್ಥಿರವಾಗಿದೆ. ಬುದ್ಧ ಯಾಕೆ ಈಗ ನಮಗೆ ಪ್ರಸ್ತುತ ಎಂದು ಹೇಳುತ್ತಾ “ಬುದ್ಧನ ಚಿಂತನೆಗಳು ಧಾರ್ಮಿಕವಲ್ಲ, ಅವು ಸಮಾಜಮುಖಿ” ಎನ್ನುವಾಗ ಲೇಖಕರು ವರ್ತಮಾನದ ಎಲ್ಲಾ ತಾಕಲಾಟಗಳಿಗೂ ಮಧ್ಯಮ ಮಾರ್ಗವನ್ನು ಸೂಚಿಸುತ್ತಾರೆ. ದೃಶ್ಯಮಾಧ್ಯಮದಲ್ಲಿ ಬುದ್ಧನನ್ನು ತರುವ ಬಗ್ಗೆ ಯೋಚಿಸುತ್ತಲೇ ಆರಂಭವಾಗುವ ಕಪಿಲವಸ್ತು ಅಧ್ಯಾಯ, ಬುದ್ಧನ ಬಾಲ್ಯದಿಂದ ಆತ ಮನೆ ಬಿಟ್ಟು ಹೋಗುವವರೆಗಿನ ಘಟನೆಗಳು ಸಂಕಲಿಸಿಕೊಳ್ಳುವಾಗ ಸಂಪ್ರದಾಯವಾದಿಗಳು ಬರೆದ ಪಠ್ಯಗಳನ್ನು ಮತ್ತು ಬಾಬಾಸಾಹೇಬರ ಸಂಶೋಧನಾತ್ಮಕ ಪಠ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ.

ಎಪಿಸೋಡ್ ಮೂರರಲ್ಲಿ ಲೇಖಕರು ಒಂದು ಕುತೂಹಲಕರವಾದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಯೊಂದಿಗೆ ಆರಂಭವಾಗುತ್ತದೆ ಮತ್ತು ವರ್ತಮಾನಕ್ಕೆ ತಳುಕು ಹಾಕುತ್ತ ಸಾಗುತ್ತದೆ. ಆ ಭಾಗದಲ್ಲಿ ಮೂಡಿರುವ, ಸಶಸ್ತ್ರ ಹೋರಾಟ ಮಾಡುವ ತಂಡವನ್ನು ಮುಖ್ಯವಾಹಿನಿಗೆ ತರುವುದರೊಂದಿಗಿನ ಮಾತುಕತೆ ಕುತೂಹಲಕರವಾಗಿದೆ. ಈ ಸಂಭಾಷಣೆ ಓದುವಾಗಲೆಲ್ಲ ನನಗೆ ಬುದ್ಧನನ್ನು ಎದುರುಗೊಂಡ ಅಂಗುಲಿಮಾಲ ನೆನಪಾಗುತ್ತಾನೆ. ಲೇಖಕರು ಇಲ್ಲಿನ ಸೂಕ್ಷ್ಮ ಸನ್ನಿವೇಶವನ್ನು, ಬುದ್ಧ ಮಾಡಿದ ಬದಲಾವಣೆಯಂತೆಯೇ ಕಟ್ಟಿಕೊಡಲು, ತಾವು ಒಂದು ಪಾತ್ರವಾಗಿ ಮೂಡಿಬಂದು, ಘಟನೆಯನ್ನು ಜೋಡಿಸಿಕೊಂಡು ಓದುಗರಿಗೆ ಕುತೂಹಲವನ್ನೂ, ತಿಳಿವಳಿಕೆಯನ್ನೂ ಮೂಡಿಸುತ್ತಾರೆ.

ಪ್ರಗತಿಪರ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರ ಹಿಂದೆ ಬಿದ್ದ ಪೊಲೀಸರ ನಡುವೆ ಸಮನ್ವಯ ಸಾಧಿಸುವ ಲೇಖಕರು, ಹೋರಾಟಗಾರರು ಮುಖ್ಯವಾಹಿನಿಗೆ ಬಂದ ನಂತರದ ಮುಂದಿನ ಯೋಜನೆಯನ್ನು ಜಾರಿಯಲ್ಲಿಡುವ ಭಾಗವಾಗಿ ಆರಂಭಿಕ ಸಭೆಗಳನ್ನು ನಡೆಸುತ್ತಾರೆ. ಅವರೇ ಕೊನೆಯಲ್ಲಿ ಹೇಳುವಂತೆ ಸಿದ್ಧತಾ ಪರ್ವ ಮುಗಿಯಿತೆಂದು ಕಥೆಯನ್ನು ಸಮಾಪ್ತಿ ಮಾಡುತ್ತಾರೆ. ಹೀಗೆ ಹೇಳುವಾಗ ಓದುಗನಿಗೆ ಧಾರಾವಾಹಿ ಎಪಿಸೋಡ್‌ಗಳ ಕಾಯುವಿಕೆಯ ಭಾಸವಾಗುತ್ತದೆ. ವರ್ತಮಾನದೊಂದಿಗೆ ಭೂತ ಮತ್ತು ಭವಿಷ್ಯತ್ತು ಬೆಸೆಯುವ ಈ ಭಾಗದಲ್ಲಿ ಲೇಖಕರ ವಿಶಿಷ್ಟ ನಿರೂಪಣೆ ಗಮನ ಸೆಳೆಯುತ್ತದೆ. ಎಪಿಸೋಡ್ 3 ಓದುವಾಗಲೆಲ್ಲಾ ನನ್ನೊಳಗಿನ ವಿಚಾರಗಳಿಗೆ ಪುಷ್ಟಿ ಸಿಗುತ್ತದೆ ಮತ್ತು ಸ್ಪಷ್ಟತೆ ದೊರಕುತ್ತದೆ. ಭ್ರಷ್ಟ ರಾಜಕಾರಣವನ್ನು ಕೊನೆಗಾಣಿಸಿ ಮತ್ತೊಂದು ಹೊಸ ಪಡೆಯನ್ನು ಕಟ್ಟುವ ಕನಸುಗಳ ಭಾಗವಾಗಿ ನಮ್ಮನ್ನು ಅದರಲ್ಲಿ ಸೇರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ.

ಈ ಕೃತಿಯಲ್ಲಿ ಕಥೆಯನ್ನು ಜೋಡಿಸಿಕೊಂಡು ಹೊಸೆದಿರುವ ಬಗೆ ಹೊಸದು. ಇದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಅಧ್ಯಾಯವೋ, ಮಹಾ ಧಾರಾವಾಹಿಯ ಮೊದಲ ಕಂತೋ ಎಂಬ ಗೊಂದಲ ಉಂಟಾಗುತ್ತದೆ. ಆದರೆ, ಎಲ್ಲಿಯು ಬೋರಾಗದೆ ಓದಿಸಿಕೊಂಡುಹೋಗುವ, ಚರಿತ್ರೆಯೊಳಗಿನ ಹಲವು ಸಂಗತಿಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವ ಬಗೆ ಆಪ್ತವಾಗಿಯೂ, ಗಹನವಾಗಿಯೂ ಮೂಡಿದೆ. ಮತ್ತೊಂದು ವಿಶೇಷವೇನೆಂದರೆ ಪೂನಾ ಒಪ್ಪಂದವನ್ನು ಬಹಳ ಸರಳವಾಗಿ ಹೇಳುತ್ತಾ ಲೇಖಕರು ನಮಗೆ ಆಪ್ತರಾಗಿಬಿಡುತ್ತಾರೆ. ಈ ಕೃತಿಯನ್ನು ಪೂರ್ಣ ಓದಿದನಂತರ ಲೇಖಕರ ಒಳಗಿನ ಬುದ್ಧತ್ವ ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸಿ ಬಾಬಾಸಾಹೇಬರ ಹಾದಿ ಎಂತಹುದು ಎಂದು ಅರಿವಿಗೆ ತರುತ್ತದೆ.

ಲೇಖಕರಾದ ಅಶೋಕ್‌ರವರ ಬದ್ಧತೆ ಮತ್ತು ವಿಷಯದ ಪ್ರಸ್ತುತತೆ ಜೊತೆಗೆ ಅವರು ಆರಿಸಿಕೊಂಡ ಪ್ರಕಾರ ನನಗಿಷ್ಟವಾಯಿತು. ಬುದ್ಧನ ಪ್ರೀತಿ ಇಲ್ಲಿದೆ ಎಂದುಕೊಳ್ಳುತ್ತೇನೆ…

ನಮೋ ಬುದ್ಧಾಯ, ಜೈಭೀಮ್

ರಮೇಶ್ ಗಬ್ಬೂರ್

ರಮೇಶ್ ಗಬ್ಬೂರ್
ಎದೆಯೊಳಗಿನ ಸಿಟ್ಟನ್ನು ಬಸಿದು ಅಕ್ಷರ ರೂಪ ಕೊಡುವ ರಮೇಶ್ ಗಬ್ಬೂರ್ ರವರು ಜನಕವಿ ಎಂದೇ ಪರಿಚಿತರು. ‘ಒಲಿದಂತೆ ಹಾಡುವೆ’ ಸೇರಿ ಹಲವು ಹೋರಾಟದ ಹಾಡುಗಳ ಪುಸ್ತಕ ರಚಿಸಿದ್ದಾರೆ. ಸದ್ಯಕ್ಕೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...