Homeಅಂಕಣಗಳುನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ 'ಬುದ್ಧ ಬಾಬಾಸಾಹೇಬ ಮತ್ತು ನಾನು'

ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

- Advertisement -
- Advertisement -

ಒಂದು ದಿನ ಸಂಜೆ ಮಹಾಲಕ್ಷ್ಮಿ ದಂತ ಚಿಕಿತ್ಸಾಲಯದ ಡಾಕ್ಟರ್ ಮತ್ತು ಕವಿ ಮಿತ್ರರಾದ ಶಿವಕುಮಾರ್ ಮಾಲಿಪಾಟೀಲ್‌ರವರ ಚೇಂಬರ್ ಪ್ರವೇಶಿಸಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡೆ. ಶೀರ್ಷಿಕೆ ಗಮನಸೆಳೆಯಿತು: ’ಬುದ್ಧ ಬಾಬಾಸಾಹೇಬ ಮತ್ತು ನಾನು’. ಅವರಿಂದ ಪುಸ್ತಕ ಪಡೆದು ಪುಟ ತಿರುವುತ್ತಾ ಹೋದೆ. ಕನ್ನಡ ನಾಡಿನ ಖ್ಯಾತ ನಟರಲ್ಲಿ ಒಬ್ಬರಾದ ಅಶೋಕ್ ಅವರಿಗೆ ಬುದ್ಧ ಮತ್ತು ಬಾಬಾಸಾಹೇಬರು ಹೇಗೆ ಅವಾಹಿಸಿಕೊಂಡಿರಬಹುದು, ನನ್ನ ಪ್ರೀತಿಯ ನಟನೊಬ್ಬನ ಮನದೊಳಗೆ ಬುದ್ಧ ಭೀಮರ ಪ್ರವೇಶ ಹೇಗಿರಬಹುದೆಂದು ಕುತೂಹಲದಿಂದ ಓದಲು ತೊಡಗಿದೆ.

ಶೂಟಿಂಗ್ ಸ್ಪಾಟ್ ಹಗಲು ಸ್ಟುಡಿಯೋ

ಶೂಟಿಂಗ್ ಸ್ಪಾಟ್‌ನಲ್ಲಿ ಪಾತ್ರಧಾರಿಯಾದ ಲೇಖಕರ ಪ್ರವೇಶದ ಜೊತೆಗೇ ಬುದ್ಧರ ಮತ್ತು ಪರಿವ್ರಾಜಕರ ಸಂಭಾಷಣೆ ಆರಂಭವಾಗುತ್ತದೆ. ಈ ಸಂಭಾಷಣೆಯನ್ನು ಹಲವು ಲೇಖಕರು ಬೇರೆಬೇರೆ ಪುಸ್ತಕಗಳಲ್ಲಿ ಬರೆದಿದ್ದಾರೆ. ಸ್ವತಃ ಅಂಬೇಡ್ಕರರು ತಮ್ಮ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದಲ್ಲಿಯೂ ಬರೆದಿದ್ದಾರೆ. ಇಲ್ಲಿ ಬುದ್ಧ ಪರಿವ್ರಾಜಕರೊಡನೆ ಮಾತಾಡುತ್ತಿಲ್ಲ, ಬದಲಾಗಿ ಲೇಖಕರ ಒಳಗಿನ ಬುದ್ಧ ಜಾಗೃತನಾಗಿ, ಪಾತ್ರವಾಗಿ ಆವಾಹಿಸಿಕೊಂಡು ಮಾತನಾಡುವ ಬಗೆ ಮತ್ತು ಅಲ್ಲಿ ಕಟ್ಟಿಕೊಡುವ ಸನ್ನಿವೇಶಗಳಿಂದ, ಅಲ್ಲಿನ ಒಂದಷ್ಟು ಮಾತುಗಳು ಅತ್ಯುತ್ತಮವಾದ ಪ್ರವಚನದ ಹಿತ ನೀಡುತ್ತವೆ. ಮಹಾಜ್ಞಾನಿ ಬುದ್ಧನಿಗೆ ತಕ್ಕಂತೆ ಪಾತ್ರ ಮತ್ತು ಅದರ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಿಸಿರುವುದು ’ಬುದ್ಧ ಅಂಡ್ ಹಿಸ್ ಧಮ್ಮ’ವನ್ನು ಬಹಳ ಸರಳವಾಗಿ ವಿವರಿಸುತ್ತದೆ. ಈ ಮಾತುಗಳನ್ನು ಬರೆಯುವಾಗ ಲೇಖಕರು ಬಾಬಾಸಾಹೇಬರ ಸಂಪೂರ್ಣ ಮಾರ್ಗದ ಬಗ್ಗೆ ಸ್ಪಷ್ಟತೆಯನ್ನು ಹೊಂದಿ, ಅದನ್ನ ಮತ್ತೆ ಹೇಳುತ್ತಾ ತಮ್ಮ ಮಾರ್ಗವೂ ಸಹ ಇದೇ ಎಂಬುದನ್ನು ಇಲ್ಲಿ ಓದುಗರಿಗೆ ವಿಶದಪಡಿಸುತ್ತಾರೆ.

ಕಪಿಲವಸ್ತು ಅಧ್ಯಾಯದಲ್ಲಿ ಅಂಬೇಡ್ಕರ್‌ರವರು ತಮ್ಮ ಪತ್ನಿಯ ಜೊತೆ ಸಂಭಾಷಿಸುತ್ತಾ ಬುದ್ಧನ ಪ್ರಸ್ತುತತೆಯನ್ನು ಓದುಗರಿಗೆ ತಿಳಿಸುತ್ತಾರೆ. ಇಲ್ಲಿ ಲೇಖಕರ ಬದ್ಧತೆ ಸ್ವಲ್ಪವೂ ಅಲುಗಾಡದೆ ಸ್ಥಿರವಾಗಿದೆ. ಬುದ್ಧ ಯಾಕೆ ಈಗ ನಮಗೆ ಪ್ರಸ್ತುತ ಎಂದು ಹೇಳುತ್ತಾ “ಬುದ್ಧನ ಚಿಂತನೆಗಳು ಧಾರ್ಮಿಕವಲ್ಲ, ಅವು ಸಮಾಜಮುಖಿ” ಎನ್ನುವಾಗ ಲೇಖಕರು ವರ್ತಮಾನದ ಎಲ್ಲಾ ತಾಕಲಾಟಗಳಿಗೂ ಮಧ್ಯಮ ಮಾರ್ಗವನ್ನು ಸೂಚಿಸುತ್ತಾರೆ. ದೃಶ್ಯಮಾಧ್ಯಮದಲ್ಲಿ ಬುದ್ಧನನ್ನು ತರುವ ಬಗ್ಗೆ ಯೋಚಿಸುತ್ತಲೇ ಆರಂಭವಾಗುವ ಕಪಿಲವಸ್ತು ಅಧ್ಯಾಯ, ಬುದ್ಧನ ಬಾಲ್ಯದಿಂದ ಆತ ಮನೆ ಬಿಟ್ಟು ಹೋಗುವವರೆಗಿನ ಘಟನೆಗಳು ಸಂಕಲಿಸಿಕೊಳ್ಳುವಾಗ ಸಂಪ್ರದಾಯವಾದಿಗಳು ಬರೆದ ಪಠ್ಯಗಳನ್ನು ಮತ್ತು ಬಾಬಾಸಾಹೇಬರ ಸಂಶೋಧನಾತ್ಮಕ ಪಠ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ.

ಎಪಿಸೋಡ್ ಮೂರರಲ್ಲಿ ಲೇಖಕರು ಒಂದು ಕುತೂಹಲಕರವಾದ ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ. ಅದು ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಯೊಂದಿಗೆ ಆರಂಭವಾಗುತ್ತದೆ ಮತ್ತು ವರ್ತಮಾನಕ್ಕೆ ತಳುಕು ಹಾಕುತ್ತ ಸಾಗುತ್ತದೆ. ಆ ಭಾಗದಲ್ಲಿ ಮೂಡಿರುವ, ಸಶಸ್ತ್ರ ಹೋರಾಟ ಮಾಡುವ ತಂಡವನ್ನು ಮುಖ್ಯವಾಹಿನಿಗೆ ತರುವುದರೊಂದಿಗಿನ ಮಾತುಕತೆ ಕುತೂಹಲಕರವಾಗಿದೆ. ಈ ಸಂಭಾಷಣೆ ಓದುವಾಗಲೆಲ್ಲ ನನಗೆ ಬುದ್ಧನನ್ನು ಎದುರುಗೊಂಡ ಅಂಗುಲಿಮಾಲ ನೆನಪಾಗುತ್ತಾನೆ. ಲೇಖಕರು ಇಲ್ಲಿನ ಸೂಕ್ಷ್ಮ ಸನ್ನಿವೇಶವನ್ನು, ಬುದ್ಧ ಮಾಡಿದ ಬದಲಾವಣೆಯಂತೆಯೇ ಕಟ್ಟಿಕೊಡಲು, ತಾವು ಒಂದು ಪಾತ್ರವಾಗಿ ಮೂಡಿಬಂದು, ಘಟನೆಯನ್ನು ಜೋಡಿಸಿಕೊಂಡು ಓದುಗರಿಗೆ ಕುತೂಹಲವನ್ನೂ, ತಿಳಿವಳಿಕೆಯನ್ನೂ ಮೂಡಿಸುತ್ತಾರೆ.

ಪ್ರಗತಿಪರ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವ ಮತ್ತು ಅವರ ಹಿಂದೆ ಬಿದ್ದ ಪೊಲೀಸರ ನಡುವೆ ಸಮನ್ವಯ ಸಾಧಿಸುವ ಲೇಖಕರು, ಹೋರಾಟಗಾರರು ಮುಖ್ಯವಾಹಿನಿಗೆ ಬಂದ ನಂತರದ ಮುಂದಿನ ಯೋಜನೆಯನ್ನು ಜಾರಿಯಲ್ಲಿಡುವ ಭಾಗವಾಗಿ ಆರಂಭಿಕ ಸಭೆಗಳನ್ನು ನಡೆಸುತ್ತಾರೆ. ಅವರೇ ಕೊನೆಯಲ್ಲಿ ಹೇಳುವಂತೆ ಸಿದ್ಧತಾ ಪರ್ವ ಮುಗಿಯಿತೆಂದು ಕಥೆಯನ್ನು ಸಮಾಪ್ತಿ ಮಾಡುತ್ತಾರೆ. ಹೀಗೆ ಹೇಳುವಾಗ ಓದುಗನಿಗೆ ಧಾರಾವಾಹಿ ಎಪಿಸೋಡ್‌ಗಳ ಕಾಯುವಿಕೆಯ ಭಾಸವಾಗುತ್ತದೆ. ವರ್ತಮಾನದೊಂದಿಗೆ ಭೂತ ಮತ್ತು ಭವಿಷ್ಯತ್ತು ಬೆಸೆಯುವ ಈ ಭಾಗದಲ್ಲಿ ಲೇಖಕರ ವಿಶಿಷ್ಟ ನಿರೂಪಣೆ ಗಮನ ಸೆಳೆಯುತ್ತದೆ. ಎಪಿಸೋಡ್ 3 ಓದುವಾಗಲೆಲ್ಲಾ ನನ್ನೊಳಗಿನ ವಿಚಾರಗಳಿಗೆ ಪುಷ್ಟಿ ಸಿಗುತ್ತದೆ ಮತ್ತು ಸ್ಪಷ್ಟತೆ ದೊರಕುತ್ತದೆ. ಭ್ರಷ್ಟ ರಾಜಕಾರಣವನ್ನು ಕೊನೆಗಾಣಿಸಿ ಮತ್ತೊಂದು ಹೊಸ ಪಡೆಯನ್ನು ಕಟ್ಟುವ ಕನಸುಗಳ ಭಾಗವಾಗಿ ನಮ್ಮನ್ನು ಅದರಲ್ಲಿ ಸೇರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ.

ಈ ಕೃತಿಯಲ್ಲಿ ಕಥೆಯನ್ನು ಜೋಡಿಸಿಕೊಂಡು ಹೊಸೆದಿರುವ ಬಗೆ ಹೊಸದು. ಇದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಅಧ್ಯಾಯವೋ, ಮಹಾ ಧಾರಾವಾಹಿಯ ಮೊದಲ ಕಂತೋ ಎಂಬ ಗೊಂದಲ ಉಂಟಾಗುತ್ತದೆ. ಆದರೆ, ಎಲ್ಲಿಯು ಬೋರಾಗದೆ ಓದಿಸಿಕೊಂಡುಹೋಗುವ, ಚರಿತ್ರೆಯೊಳಗಿನ ಹಲವು ಸಂಗತಿಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವ ಬಗೆ ಆಪ್ತವಾಗಿಯೂ, ಗಹನವಾಗಿಯೂ ಮೂಡಿದೆ. ಮತ್ತೊಂದು ವಿಶೇಷವೇನೆಂದರೆ ಪೂನಾ ಒಪ್ಪಂದವನ್ನು ಬಹಳ ಸರಳವಾಗಿ ಹೇಳುತ್ತಾ ಲೇಖಕರು ನಮಗೆ ಆಪ್ತರಾಗಿಬಿಡುತ್ತಾರೆ. ಈ ಕೃತಿಯನ್ನು ಪೂರ್ಣ ಓದಿದನಂತರ ಲೇಖಕರ ಒಳಗಿನ ಬುದ್ಧತ್ವ ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸಿ ಬಾಬಾಸಾಹೇಬರ ಹಾದಿ ಎಂತಹುದು ಎಂದು ಅರಿವಿಗೆ ತರುತ್ತದೆ.

ಲೇಖಕರಾದ ಅಶೋಕ್‌ರವರ ಬದ್ಧತೆ ಮತ್ತು ವಿಷಯದ ಪ್ರಸ್ತುತತೆ ಜೊತೆಗೆ ಅವರು ಆರಿಸಿಕೊಂಡ ಪ್ರಕಾರ ನನಗಿಷ್ಟವಾಯಿತು. ಬುದ್ಧನ ಪ್ರೀತಿ ಇಲ್ಲಿದೆ ಎಂದುಕೊಳ್ಳುತ್ತೇನೆ…

ನಮೋ ಬುದ್ಧಾಯ, ಜೈಭೀಮ್

ರಮೇಶ್ ಗಬ್ಬೂರ್

ರಮೇಶ್ ಗಬ್ಬೂರ್
ಎದೆಯೊಳಗಿನ ಸಿಟ್ಟನ್ನು ಬಸಿದು ಅಕ್ಷರ ರೂಪ ಕೊಡುವ ರಮೇಶ್ ಗಬ್ಬೂರ್ ರವರು ಜನಕವಿ ಎಂದೇ ಪರಿಚಿತರು. ‘ಒಲಿದಂತೆ ಹಾಡುವೆ’ ಸೇರಿ ಹಲವು ಹೋರಾಟದ ಹಾಡುಗಳ ಪುಸ್ತಕ ರಚಿಸಿದ್ದಾರೆ. ಸದ್ಯಕ್ಕೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...