Homeನ್ಯಾಯ ಪಥಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

ಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

- Advertisement -
- Advertisement -

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಹೈದರಾಬಾದ್‍ನ ಪಶುವೈದ್ಯೆ ‘ದಿಶಾ’ರ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಿಬಿಟ್ಟಿದೆ. ಚಿಂತಕುಂಟ ಚನ್ನಕೇಶವುಲು, ಜೊಲ್ಲು ಶಿವ, ಮಹಮದ್ ಆರಿಫ್ ಮತ್ತು ಜೊಲ್ಲುನವೀನ್ ಎಂಬ ನಾಲ್ವರು ಶಾದ್‍ನಗರದಲ್ಲಿ ನವೆಂಬರ್ 27ರಂದು ದಿಶಾಗೆ ನೆರವು ನೀಡುವ ನೆಪದಲ್ಲಿ ಅಪಹರಿಸಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಂದು, ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ದೇಶದಲ್ಲಿ ದಿನನಿತ್ಯ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಕೆಲವು ಘಟನೆಗಳ ಭೀಕರತೆ ಇಡೀ ದೇಶದ ಗಮನ ಸೆಳೆಯುತ್ತವೆ, ಜನಾಕ್ರೋಶಕ್ಕೆ ಕಾರಣವಾಗುತ್ತವೆ. ದಿಶಾ ಪ್ರಕರಣದ ಭೀಕರತೆ ಇಡೀ ನಾಗರಿಕ ಪ್ರಪಂಚವನ್ನು ಅಲುಗಾಡಿಸಿಬಿಟ್ಟಿದೆ. ದೆಹಲಿಯ ನಿರ್ಭಯಾ ಪ್ರಕರಣ, ಕಥುವಾದ ಆಸಿಫಾ ಪ್ರಕರಣಗಳು ನಡೆದಾಗಲೂ ಇದೇ ರೀತಿಯ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

ದಿಶಾ ಕೊಲೆಗಡುಕರಿಗೆ ನಡುರಸ್ತೆಯಲ್ಲಿ ನೇಣು ಹಾಕಬೇಕು, ಕಲ್ಲು ಹೊಡೆದು ಸಾಯಿಸಬೇಕು, ಬೆಂಕಿ ಹಚ್ಚಿ ಕೊಲ್ಲಬೇಕು, ಮರ್ಮಾಂಗವನ್ನು ಕತ್ತರಿಸಬೇಕು ಎಂದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಿದ್ದಾರೆ. ಈ ತರದ ಯಾವುದೇ ಶಿಕ್ಷಾವಿಧಾನ ನಮ್ಮಲ್ಲಿಲ್ಲ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಜನರ ಆಕ್ರೋಶ ದಿನೇದಿನೇ ಹೆಚ್ಚುತ್ತಲಿದೆ ಮತ್ತು ಅತ್ಯಾಚಾರದಂಥ ಪ್ರಕರಣಗಳನ್ನು ಸರ್ಕಾರ ಮತ್ತು ನ್ಯಾಯವ್ಯವಸ್ಥೆ ನಿರ್ವಹಿಸುತ್ತಿರುವ ಸ್ಥಿತಿಯ ಕುರಿತು ಅವರಿಗೆ ತೀವ್ರವಾದ ಅಸಮಾಧಾನವಿದೆ.

ದಿಶಾ ಸಾವು ಹೀಗೆ ದೇಶವನ್ನು ಕಂಗೆಡಿಸಿದ್ದರೆ, ಕೆಲವು ಅಮಾನವೀಯ ಮತ್ತು ಲಜ್ಜೆಗೇಡಿ ಶಕ್ತಿಗಳು ತಮ್ಮ ಹುನ್ನಾಕ್ಕೆ ಬಳಸಿಕೊಳ್ಳಲು ಅನುವಾದರು. ಇವು ಹೆಣ ಬೀಳುವುದನ್ನೇ ಕಾಯುವ ರಣಹದ್ದುಗಳು. ಇವರಿಗೆ ನೈತಿಕತೆಯ ಯಾವ ಗಡಿಗುರುತುಗಳು ಇಲ್ಲ, ಮಾನವೀಯತೆಯೆಂಬುದರ ಅರ್ಥವೂ ತಿಳಿದಿಲ್ಲ. ಅವರಿಗೆ ತಮ್ಮ ಅಜೆಂಡಾಗಳು ಕಾರ್ಯರೂಪಕ್ಕೆ ಬರಬೇಕು ಅಷ್ಟೆ.

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಇದಕ್ಕಿಂತ ಹೀನ ಆಲೋಚನೆಯೂ ಈ ಟ್ವೀಟ್ ಹಿಂದೆ ಕೆಲಸ ಮಾಡಿದೆ. ಮಹಮದ್ ಆರಿಫ್ ಎಂಬ ಆರೋಪಿಯ ಪೂರ್ಣ ಹೆಸರು ಬರೆಯದೆ ಮಹಮದ್ ಎಂದಷ್ಟೇ ಬರೆಯಲಾಗಿದೆ. ಈ ಮೂಲಕ ಮುಸ್ಲಿಮರನ್ನು ಕೆರಳಿಸುವುದು, ಅವರ ಉದ್ದೇಶ. ಆದರೆ ಅವರ ಲೆಕ್ಕಾಚಾರ ತಪ್ಪಿಹೋಯಿತು. ಈ ಕುಚೇಷ್ಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವತ್ರಿಕ ಟೀಕೆ ವ್ಯಕ್ತವಾಯಿತು.

ಅತ್ಯಾಚಾರವಾಗಿರುವುದು ನಿಜ, ಎಲ್ಲರಿಗೂ ತಮ್ಮ ಸಿಟ್ಟು ತೋಡಿಕೊಳ್ಳುವ ಹಕ್ಕು ಇದೆ. ಆದರೆ ಸೂಲಿಬೆಲೆಯವರಿಗೆ ಯಾಕೆ ಈ ಸೆಲೆಕ್ಟಿವ್ ಸಿಟ್ಟು? ಆರಿಫ್ ಹೊರತುಪಡಿಸಿ ಇನ್ನುಳಿದ ಮೂವರ ಮೇಲೆ ಯಾಕೆ ಮಮಕಾರ? ಆರಿಫ್‍ನನ್ನು ನೇಣಿಗೇರಿಸಬೇಕು, ಉಳಿದ ಶಿವ, ನವೀನ, ಚನ್ನಕೇಶವರನ್ನು ಏನು ಮಾಡಬೇಕು? ಇದೇ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಉಳಿದ ಮೂವರು ರೇಪಿಸ್ಟರನ್ನು ನಿಮ್ಮ ನಮೋ ಬ್ರಿಗೇಡ್‍ಗೆ ಸೇರಿಸಿಕೊಳ್ಳುತ್ತೀರಾ ಸೂಲಿಬೆಲೆಯವರೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆ ಮೂವರು ನಿಮ್ಮ ರಕ್ತಸಂಬಂಧಿಗಳಿರಬಹುದು, ಅದಕ್ಕೆ ಅವರಿಗೆ ನೇಣುಶಿಕ್ಷೆ ಕೇಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇದು ಸೂಲಿಬೆಲೆ ಒಬ್ಬಾತನ ಪ್ರಶ್ನೆಯಲ್ಲ. ಇದೇ ಥರ ಯೋಚಿಸುವ ಹಿಂಡುಹಿಂಡೇ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ದಿಶಾ ಅತ್ಯಾಚಾರ-ಕೊಲೆ ನಡೆದಿರುವುದು ಶಾದ್‍ನಗರದಲ್ಲಿ ಎಂದು ಗೊತ್ತಾಗುತ್ತಿದ್ದಂತೆ ಅದು ಮುಸ್ಲಿಂ ಬಾಹುಳ್ಯದ ಪ್ರದೇಶ, ಅದಕ್ಕೆ ರೇಪ್ ನಡೆದಿದೆ ಎಂದು ಕೆಲವರು ಬರೆದುಕೊಂಡರು. ಪೋಸ್ಟ್ ಕಾರ್ಡ್ ಎಂಬ ದ್ವೇಷಜನಕರು ಆರೋಪಿಗಳಲ್ಲಿ ಒಬ್ಬನಾದ ಜೊಲ್ಲು ನವೀನನ ಹೆಸರನ್ನು ಬೇಕೆಂದೇ ಅನ್ವರ್ ನವೀನ್ ಎಂದು ತಿದ್ದಿ ಪೋಸ್ಟ್ ಗಳನ್ನು ಹಾಕಿದರು.

ಬಲಪಂಥೀಯ ಪೇಜ್‍ಗಳಲ್ಲಿ ಮಹಮದ್ ಆರಿಫ್ ಮತ್ತು ಮೂವರು ಸಂಗಡಿಗರು ಎಂದೇ ಬರೆಯಲಾಯಿತು, ಉಳಿದ ಮೂವರ ಹೆಸರುಗಳನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಸಾರ್ವಜನಿಕರ ಆಕ್ರೋಶವೆಲ್ಲ ಒಂದು ಸಮುದಾಯದ ಮೇಲೆ ಕೇಂದ್ರೀಕರಣವಾಗಲಿ ಎಂಬುದು ಇವರೆಲ್ಲರ ಸ್ಪಷ್ಟ ಹುನ್ನಾರವಾಗಿತ್ತು.  ಎಷ್ಟೋ ಬಾರಿ ಈ ತಂಡಗಳು ಜನರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದವು, ಆದರೆ ಈ ಬಾರಿ ಹಾಗೆ ಆಗಲಿಲ್ಲ. ದಿಶಾ ಪ್ರಕರಣವನ್ನು ಮುಸ್ಲಿಮರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವ ಇವರ ದುಷ್ಟಯತ್ನ ವಿಫಲವಾಗಿದ್ದಷ್ಟೇ ಅಲ್ಲ, ತಾವೇ ಸಾರ್ವಜನಿಕ ನಿಂದನೆಗೆ ಗುರಿಯಾಗುವಂತೆ ಆಯಿತು. ಸ್ವತಃ ಚಕ್ರವರ್ತಿ ಸೂಲಿಬೆಲೆಯವರ ಅನುಯಾಯಿಗಳೇ ಈ ಬಾರಿ ತಿರುಗಿಬಿದ್ದು ಪ್ರಶ್ನಿಸತೊಡಗಿದರು.

ಚಕ್ರವರ್ತಿ ಸೂಲಿಬೆಲೆಯನ್ನು ಚಿಂತಕ, ವಾಗ್ಮಿ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.ಯಾವಾಗ ನರೇಂದ್ರ ಮೋದಿ ಭಾರತ ರಾಜಕಾರಣದ ಮುಖ್ಯಭೂಮಿಕೆಗೆ ಬಂದರೋ, ಆಗ ಸೂಲಿಬೆಲೆಯಂಥ ಪೇಯ್ಡ್ ಭಾಷಣಕಾರರ ಅಗತ್ಯವಿತ್ತು. ಸೂಲಿಬೆಲೆ ತಡಮಾಡದೆ ನಮೋ ಬ್ರಿಗೇಡ್ ಕಟ್ಟಿದರು. ಊರೂರು ಸುತ್ತಿದರು. ನರೇಂದ್ರ ಮೋದಿ ಚಹಾ ಮಾರುತ್ತಿದ್ದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ದೇಶದ ಸೈನಿಕರಿಗೆ ಬಾಲನರೇಂದ್ರ ಪುಕ್ಕಟೆಯಾಗಿ ಚಹಾ ನೀಡಿದ್ದರಿಂದ ಹಿಡಿದು, ಹಿಮಾಲಯದಲ್ಲಿ ತಪಸ್ಸು ಮಾಡಲು ಹೋದ ಅನುಭವಗಳವರೆಗೆ ಸ್ವತಃ ನರೇಂದ್ರ ಮೋದಿಯವರೇ ನಾಚಿಕೊಳ್ಳುವಂತೆ ಕಥೆಗಳನ್ನು ಕಟ್ಟಿ ಹೇಳತೊಡಗಿದರು. ಆಗ ಹುಟ್ಟಿಕೊಂಡಿದ್ದೇ ಸೂಲಿಬೆಲೆ-ಗುರುಮೂರ್ತಿ ಜೋಡಿಯ ಚಿನ್ನದ ರಸ್ತೆಯ ಥಿಯರಿಗಳು.

ಬರೀ ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮುಸ್ಲಿಂ ದ್ವೇಷವನ್ನು ಹಬ್ಬಿಸುವುದನ್ನೇ ಕಾಯಕವಾಗಿಸಿಕೊಂಡರು.  ಪೋಸ್ಟ್ ಕಾರ್ಡ್ ಪೇಜ್‍ಗಳನ್ನು ಗಮನಿಸಿ. ಅದರ ತುಂಬೆಲ್ಲ ಮುಸ್ಲಿಂ ದ್ವೇಷದ ಪೋಸ್ಟ್ ರುಗಳು, ಬರಹಗಳೇ ಕಣ್ಣಿಗೆ ರಾಚುತ್ತವೆ. ಮುಸ್ಲಿಂ ಸಮುದಾಯದ ಹೆಸರಿನವರು ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಕಾಣಿಸಿಕೊಂಡರೆ ಇವರಿಗೆ ಹಬ್ಬ. ಹುಡುಹುಡುಕಿ ಅಂಥವನ್ನು ತಂದು ಪ್ರಚೋದನೆಯ ಧಾಟಿಯಲ್ಲಿ ಬರೆಯಲಾಯಿತು. ಸೂಲಿಬೆಲೆಯಂಥವರ ಬಾಯಿಗಳಿಗೆ ಬಿಡುವಿಲ್ಲದ ಕೆಲಸ. ಅರ್ನಾಬ್ ಗೋಸ್ವಾಮಿಯಂಥ ಪೇಯ್ಡ್ ಪತ್ರಕರ್ತರ ಪ್ರೈಂ ಟೈಮ್ ಡಿಬೇಟುಗಳಿಗೆ ಬೇರೆ ವಿಷಯಗಳೇ ಬೇಡವಾದವು.

ದಿಶಾ ಪ್ರಕರಣದಲ್ಲೂ ಇದನ್ನೇ ಮಾಡಲು ಹೋಗಿ ಚಕ್ರವರ್ತಿ ಸೂಲಿಬೆಲೆ ಸಿಕ್ಕಿಬಿದ್ದಿದ್ದಾರೆ. ಸೂಲಿಬೆಲೆಯವರೇ, ನೀವು ನಿಜವಾದ ಹಿಂದುತ್ವವಾದಿಯಾಗಿದ್ದರೆ, ದೇವಸ್ಥಾನದ ಆಸ್ತಿ ಉಳಿಸಲು ಹೊರಟ ಮಂಗಳೂರಿನ ವಿನಾಯಕ ಬಾಳಿಗರ ಕೊಲೆಗಡುಕರ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ ಎಂದು ಅವರ ಅಭಿಮಾನಿಗಳೇ ವಿಡಿಯೋ ಮಾಡಿ ಜಾಡಿಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ, ಸತ್ತ ವ್ಯಕ್ತಿ ಹಿಂದೂವಾಗಿದ್ದರಿಂದ ಸಂಸದ (ಹಾಲಿ ಬಿಜೆಪಿಯ ರಾಜ್ಯ ಅಧ್ಯಕ್ಷ) ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಲೆಯನ್ನು ಮುಸ್ಲಿಮರೇ ಮಾಡಿದ್ದೆಂದು ಸಾರಿದ ಕಟೀಲ್ ಇದರಿಂದ ಮಂಗಳೂರಿಗೆ ಬೆಂಕಿ ಹಚ್ಚಿ ಉರಿಸಲಾಗುತ್ತದೆ ಎಂದು ಗುಡುಗಿದರು. ನಂತರ ಕೊಲೆಗಾರ್ತಿ ಮೃತ ವ್ಯಕ್ತಿಯ ತಂಗಿ ಮತ್ತು ಕಟೀಲ್ ನೇತೃತ್ವದ ಪ್ರತಿಭಟನೆಯಲ್ಲೇ ಪಾಲ್ಗೊಂಡಿದ್ದಳು ಎಂದು ಪೊಲೀಸರು ಬಂಧಿಸಿದರು! ಇಂತಹ ಹತ್ತಾರು ಪ್ರಕರಣಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ನಡೆದಿವೆ. ಅದೇ ಸಂದರ್ಭದಲ್ಲಿ ಭೀಕರವಾದ ಕೊಲೆ ಅಥವಾ ಅತ್ಯಾಚಾರಕ್ಕೊಳಗಾದ ವ್ಯಕ್ತಿಗಳು ಮುಸ್ಲಿಮರಾಗಿದ್ದರೆ ಈ ಪರಿವಾರವು ಉಸಿರೆತ್ತುವುದೇ ಇಲ್ಲ. ಬದಲಿಗೆ ಕಥುವಾ ಪ್ರಕರಣದಲ್ಲಿ ಅತ್ಯಂತ ಭೀಕರವಾದ ಅತ್ಯಾಚಾರಕ್ಕೊಳಗಾದ ಬಾಲೆಯ ಪ್ರಕರಣದ ಆರೋಪಿಗಳ ಪರ ಧರ್ಮರಕ್ಷಕರು ನಿಂತಿದ್ದರು! ಇನ್ನೂ ಹೇಳಬೇಕೆಂದರೆ, ಹಿಂದೂ ಪುರುಷರಿಂದ ಹಿಂದೂ ಹುಡುಗಿಯರು ಅತ್ಯಾಚಾರಕ್ಕೆ ಒಳಗಾದಾಗಲೂ ಅದಿವರಿಗೆ ಸಮಸ್ಯೆಯೂ ಅಲ್ಲ, ದನಿಯೇಳುವುದು ಇಲ್ಲ.

ಸೂ.ರಂ. ರಾಮಯ್ಯನವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಸೂಲಿಬೆಲೆ ಗ್ರಾಮ ಹೊಸಕೋಟೆ ತಾಲೂಕಿನ ವಿಶಿಷ್ಟ ಹಳ್ಳಿ. ಮಿಥುನ್ ಚಕ್ರವರ್ತಿ ಎಂಬ ವಿಕೃತ ವ್ಯಕ್ತಿಯ ಅನ್ವರ್ಥವಾಗಿ ಅದು ಬಳಕೆಯಲ್ಲಿರುವುದರಿಂದ ಗುರುತಿಗಾಗಿ ಬಳಸಿದ್ದೇವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಅದು ಏನು ಅಂತ ಸುದ್ದಿ ಮಾಡ್ತಿರ್ರಿ ಅದು ದಿಶಾ ಅಲ್ಲ ಪ್ರಿಯಾಂಕಾ ರೆಡ್ಡಿ, ಅದು ಸರಿಯಾಗಿ ಗೊತ್ತಿಲ್ಲ , ನೀವು ಮತ್ತೊಬ್ಬರ ಬಗ್ಗೆ ಹೇಳ್ತೀರಾ?

    • ಭಾರತದ ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಮೂಲ ಹೆಸರು, ಫೋಟೊ ಇತ್ಯಾದಿಗಳನ್ನು ಪ್ರಕಟಿಸಬಾರದು. ಹಾಗಾಗಿ ಹೆಸರು ಬದಲಿಸಿದ್ದೇವೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...