Homeನ್ಯಾಯ ಪಥಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

ಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

- Advertisement -
- Advertisement -

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಹೈದರಾಬಾದ್‍ನ ಪಶುವೈದ್ಯೆ ‘ದಿಶಾ’ರ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಿಬಿಟ್ಟಿದೆ. ಚಿಂತಕುಂಟ ಚನ್ನಕೇಶವುಲು, ಜೊಲ್ಲು ಶಿವ, ಮಹಮದ್ ಆರಿಫ್ ಮತ್ತು ಜೊಲ್ಲುನವೀನ್ ಎಂಬ ನಾಲ್ವರು ಶಾದ್‍ನಗರದಲ್ಲಿ ನವೆಂಬರ್ 27ರಂದು ದಿಶಾಗೆ ನೆರವು ನೀಡುವ ನೆಪದಲ್ಲಿ ಅಪಹರಿಸಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಂದು, ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ದೇಶದಲ್ಲಿ ದಿನನಿತ್ಯ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಕೆಲವು ಘಟನೆಗಳ ಭೀಕರತೆ ಇಡೀ ದೇಶದ ಗಮನ ಸೆಳೆಯುತ್ತವೆ, ಜನಾಕ್ರೋಶಕ್ಕೆ ಕಾರಣವಾಗುತ್ತವೆ. ದಿಶಾ ಪ್ರಕರಣದ ಭೀಕರತೆ ಇಡೀ ನಾಗರಿಕ ಪ್ರಪಂಚವನ್ನು ಅಲುಗಾಡಿಸಿಬಿಟ್ಟಿದೆ. ದೆಹಲಿಯ ನಿರ್ಭಯಾ ಪ್ರಕರಣ, ಕಥುವಾದ ಆಸಿಫಾ ಪ್ರಕರಣಗಳು ನಡೆದಾಗಲೂ ಇದೇ ರೀತಿಯ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

ದಿಶಾ ಕೊಲೆಗಡುಕರಿಗೆ ನಡುರಸ್ತೆಯಲ್ಲಿ ನೇಣು ಹಾಕಬೇಕು, ಕಲ್ಲು ಹೊಡೆದು ಸಾಯಿಸಬೇಕು, ಬೆಂಕಿ ಹಚ್ಚಿ ಕೊಲ್ಲಬೇಕು, ಮರ್ಮಾಂಗವನ್ನು ಕತ್ತರಿಸಬೇಕು ಎಂದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಿದ್ದಾರೆ. ಈ ತರದ ಯಾವುದೇ ಶಿಕ್ಷಾವಿಧಾನ ನಮ್ಮಲ್ಲಿಲ್ಲ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಜನರ ಆಕ್ರೋಶ ದಿನೇದಿನೇ ಹೆಚ್ಚುತ್ತಲಿದೆ ಮತ್ತು ಅತ್ಯಾಚಾರದಂಥ ಪ್ರಕರಣಗಳನ್ನು ಸರ್ಕಾರ ಮತ್ತು ನ್ಯಾಯವ್ಯವಸ್ಥೆ ನಿರ್ವಹಿಸುತ್ತಿರುವ ಸ್ಥಿತಿಯ ಕುರಿತು ಅವರಿಗೆ ತೀವ್ರವಾದ ಅಸಮಾಧಾನವಿದೆ.

ದಿಶಾ ಸಾವು ಹೀಗೆ ದೇಶವನ್ನು ಕಂಗೆಡಿಸಿದ್ದರೆ, ಕೆಲವು ಅಮಾನವೀಯ ಮತ್ತು ಲಜ್ಜೆಗೇಡಿ ಶಕ್ತಿಗಳು ತಮ್ಮ ಹುನ್ನಾಕ್ಕೆ ಬಳಸಿಕೊಳ್ಳಲು ಅನುವಾದರು. ಇವು ಹೆಣ ಬೀಳುವುದನ್ನೇ ಕಾಯುವ ರಣಹದ್ದುಗಳು. ಇವರಿಗೆ ನೈತಿಕತೆಯ ಯಾವ ಗಡಿಗುರುತುಗಳು ಇಲ್ಲ, ಮಾನವೀಯತೆಯೆಂಬುದರ ಅರ್ಥವೂ ತಿಳಿದಿಲ್ಲ. ಅವರಿಗೆ ತಮ್ಮ ಅಜೆಂಡಾಗಳು ಕಾರ್ಯರೂಪಕ್ಕೆ ಬರಬೇಕು ಅಷ್ಟೆ.

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಇದಕ್ಕಿಂತ ಹೀನ ಆಲೋಚನೆಯೂ ಈ ಟ್ವೀಟ್ ಹಿಂದೆ ಕೆಲಸ ಮಾಡಿದೆ. ಮಹಮದ್ ಆರಿಫ್ ಎಂಬ ಆರೋಪಿಯ ಪೂರ್ಣ ಹೆಸರು ಬರೆಯದೆ ಮಹಮದ್ ಎಂದಷ್ಟೇ ಬರೆಯಲಾಗಿದೆ. ಈ ಮೂಲಕ ಮುಸ್ಲಿಮರನ್ನು ಕೆರಳಿಸುವುದು, ಅವರ ಉದ್ದೇಶ. ಆದರೆ ಅವರ ಲೆಕ್ಕಾಚಾರ ತಪ್ಪಿಹೋಯಿತು. ಈ ಕುಚೇಷ್ಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವತ್ರಿಕ ಟೀಕೆ ವ್ಯಕ್ತವಾಯಿತು.

ಅತ್ಯಾಚಾರವಾಗಿರುವುದು ನಿಜ, ಎಲ್ಲರಿಗೂ ತಮ್ಮ ಸಿಟ್ಟು ತೋಡಿಕೊಳ್ಳುವ ಹಕ್ಕು ಇದೆ. ಆದರೆ ಸೂಲಿಬೆಲೆಯವರಿಗೆ ಯಾಕೆ ಈ ಸೆಲೆಕ್ಟಿವ್ ಸಿಟ್ಟು? ಆರಿಫ್ ಹೊರತುಪಡಿಸಿ ಇನ್ನುಳಿದ ಮೂವರ ಮೇಲೆ ಯಾಕೆ ಮಮಕಾರ? ಆರಿಫ್‍ನನ್ನು ನೇಣಿಗೇರಿಸಬೇಕು, ಉಳಿದ ಶಿವ, ನವೀನ, ಚನ್ನಕೇಶವರನ್ನು ಏನು ಮಾಡಬೇಕು? ಇದೇ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಉಳಿದ ಮೂವರು ರೇಪಿಸ್ಟರನ್ನು ನಿಮ್ಮ ನಮೋ ಬ್ರಿಗೇಡ್‍ಗೆ ಸೇರಿಸಿಕೊಳ್ಳುತ್ತೀರಾ ಸೂಲಿಬೆಲೆಯವರೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆ ಮೂವರು ನಿಮ್ಮ ರಕ್ತಸಂಬಂಧಿಗಳಿರಬಹುದು, ಅದಕ್ಕೆ ಅವರಿಗೆ ನೇಣುಶಿಕ್ಷೆ ಕೇಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇದು ಸೂಲಿಬೆಲೆ ಒಬ್ಬಾತನ ಪ್ರಶ್ನೆಯಲ್ಲ. ಇದೇ ಥರ ಯೋಚಿಸುವ ಹಿಂಡುಹಿಂಡೇ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ದಿಶಾ ಅತ್ಯಾಚಾರ-ಕೊಲೆ ನಡೆದಿರುವುದು ಶಾದ್‍ನಗರದಲ್ಲಿ ಎಂದು ಗೊತ್ತಾಗುತ್ತಿದ್ದಂತೆ ಅದು ಮುಸ್ಲಿಂ ಬಾಹುಳ್ಯದ ಪ್ರದೇಶ, ಅದಕ್ಕೆ ರೇಪ್ ನಡೆದಿದೆ ಎಂದು ಕೆಲವರು ಬರೆದುಕೊಂಡರು. ಪೋಸ್ಟ್ ಕಾರ್ಡ್ ಎಂಬ ದ್ವೇಷಜನಕರು ಆರೋಪಿಗಳಲ್ಲಿ ಒಬ್ಬನಾದ ಜೊಲ್ಲು ನವೀನನ ಹೆಸರನ್ನು ಬೇಕೆಂದೇ ಅನ್ವರ್ ನವೀನ್ ಎಂದು ತಿದ್ದಿ ಪೋಸ್ಟ್ ಗಳನ್ನು ಹಾಕಿದರು.

ಬಲಪಂಥೀಯ ಪೇಜ್‍ಗಳಲ್ಲಿ ಮಹಮದ್ ಆರಿಫ್ ಮತ್ತು ಮೂವರು ಸಂಗಡಿಗರು ಎಂದೇ ಬರೆಯಲಾಯಿತು, ಉಳಿದ ಮೂವರ ಹೆಸರುಗಳನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಸಾರ್ವಜನಿಕರ ಆಕ್ರೋಶವೆಲ್ಲ ಒಂದು ಸಮುದಾಯದ ಮೇಲೆ ಕೇಂದ್ರೀಕರಣವಾಗಲಿ ಎಂಬುದು ಇವರೆಲ್ಲರ ಸ್ಪಷ್ಟ ಹುನ್ನಾರವಾಗಿತ್ತು.  ಎಷ್ಟೋ ಬಾರಿ ಈ ತಂಡಗಳು ಜನರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದವು, ಆದರೆ ಈ ಬಾರಿ ಹಾಗೆ ಆಗಲಿಲ್ಲ. ದಿಶಾ ಪ್ರಕರಣವನ್ನು ಮುಸ್ಲಿಮರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವ ಇವರ ದುಷ್ಟಯತ್ನ ವಿಫಲವಾಗಿದ್ದಷ್ಟೇ ಅಲ್ಲ, ತಾವೇ ಸಾರ್ವಜನಿಕ ನಿಂದನೆಗೆ ಗುರಿಯಾಗುವಂತೆ ಆಯಿತು. ಸ್ವತಃ ಚಕ್ರವರ್ತಿ ಸೂಲಿಬೆಲೆಯವರ ಅನುಯಾಯಿಗಳೇ ಈ ಬಾರಿ ತಿರುಗಿಬಿದ್ದು ಪ್ರಶ್ನಿಸತೊಡಗಿದರು.

ಚಕ್ರವರ್ತಿ ಸೂಲಿಬೆಲೆಯನ್ನು ಚಿಂತಕ, ವಾಗ್ಮಿ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.ಯಾವಾಗ ನರೇಂದ್ರ ಮೋದಿ ಭಾರತ ರಾಜಕಾರಣದ ಮುಖ್ಯಭೂಮಿಕೆಗೆ ಬಂದರೋ, ಆಗ ಸೂಲಿಬೆಲೆಯಂಥ ಪೇಯ್ಡ್ ಭಾಷಣಕಾರರ ಅಗತ್ಯವಿತ್ತು. ಸೂಲಿಬೆಲೆ ತಡಮಾಡದೆ ನಮೋ ಬ್ರಿಗೇಡ್ ಕಟ್ಟಿದರು. ಊರೂರು ಸುತ್ತಿದರು. ನರೇಂದ್ರ ಮೋದಿ ಚಹಾ ಮಾರುತ್ತಿದ್ದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ದೇಶದ ಸೈನಿಕರಿಗೆ ಬಾಲನರೇಂದ್ರ ಪುಕ್ಕಟೆಯಾಗಿ ಚಹಾ ನೀಡಿದ್ದರಿಂದ ಹಿಡಿದು, ಹಿಮಾಲಯದಲ್ಲಿ ತಪಸ್ಸು ಮಾಡಲು ಹೋದ ಅನುಭವಗಳವರೆಗೆ ಸ್ವತಃ ನರೇಂದ್ರ ಮೋದಿಯವರೇ ನಾಚಿಕೊಳ್ಳುವಂತೆ ಕಥೆಗಳನ್ನು ಕಟ್ಟಿ ಹೇಳತೊಡಗಿದರು. ಆಗ ಹುಟ್ಟಿಕೊಂಡಿದ್ದೇ ಸೂಲಿಬೆಲೆ-ಗುರುಮೂರ್ತಿ ಜೋಡಿಯ ಚಿನ್ನದ ರಸ್ತೆಯ ಥಿಯರಿಗಳು.

ಬರೀ ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮುಸ್ಲಿಂ ದ್ವೇಷವನ್ನು ಹಬ್ಬಿಸುವುದನ್ನೇ ಕಾಯಕವಾಗಿಸಿಕೊಂಡರು.  ಪೋಸ್ಟ್ ಕಾರ್ಡ್ ಪೇಜ್‍ಗಳನ್ನು ಗಮನಿಸಿ. ಅದರ ತುಂಬೆಲ್ಲ ಮುಸ್ಲಿಂ ದ್ವೇಷದ ಪೋಸ್ಟ್ ರುಗಳು, ಬರಹಗಳೇ ಕಣ್ಣಿಗೆ ರಾಚುತ್ತವೆ. ಮುಸ್ಲಿಂ ಸಮುದಾಯದ ಹೆಸರಿನವರು ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಕಾಣಿಸಿಕೊಂಡರೆ ಇವರಿಗೆ ಹಬ್ಬ. ಹುಡುಹುಡುಕಿ ಅಂಥವನ್ನು ತಂದು ಪ್ರಚೋದನೆಯ ಧಾಟಿಯಲ್ಲಿ ಬರೆಯಲಾಯಿತು. ಸೂಲಿಬೆಲೆಯಂಥವರ ಬಾಯಿಗಳಿಗೆ ಬಿಡುವಿಲ್ಲದ ಕೆಲಸ. ಅರ್ನಾಬ್ ಗೋಸ್ವಾಮಿಯಂಥ ಪೇಯ್ಡ್ ಪತ್ರಕರ್ತರ ಪ್ರೈಂ ಟೈಮ್ ಡಿಬೇಟುಗಳಿಗೆ ಬೇರೆ ವಿಷಯಗಳೇ ಬೇಡವಾದವು.

ದಿಶಾ ಪ್ರಕರಣದಲ್ಲೂ ಇದನ್ನೇ ಮಾಡಲು ಹೋಗಿ ಚಕ್ರವರ್ತಿ ಸೂಲಿಬೆಲೆ ಸಿಕ್ಕಿಬಿದ್ದಿದ್ದಾರೆ. ಸೂಲಿಬೆಲೆಯವರೇ, ನೀವು ನಿಜವಾದ ಹಿಂದುತ್ವವಾದಿಯಾಗಿದ್ದರೆ, ದೇವಸ್ಥಾನದ ಆಸ್ತಿ ಉಳಿಸಲು ಹೊರಟ ಮಂಗಳೂರಿನ ವಿನಾಯಕ ಬಾಳಿಗರ ಕೊಲೆಗಡುಕರ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ ಎಂದು ಅವರ ಅಭಿಮಾನಿಗಳೇ ವಿಡಿಯೋ ಮಾಡಿ ಜಾಡಿಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ, ಸತ್ತ ವ್ಯಕ್ತಿ ಹಿಂದೂವಾಗಿದ್ದರಿಂದ ಸಂಸದ (ಹಾಲಿ ಬಿಜೆಪಿಯ ರಾಜ್ಯ ಅಧ್ಯಕ್ಷ) ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಲೆಯನ್ನು ಮುಸ್ಲಿಮರೇ ಮಾಡಿದ್ದೆಂದು ಸಾರಿದ ಕಟೀಲ್ ಇದರಿಂದ ಮಂಗಳೂರಿಗೆ ಬೆಂಕಿ ಹಚ್ಚಿ ಉರಿಸಲಾಗುತ್ತದೆ ಎಂದು ಗುಡುಗಿದರು. ನಂತರ ಕೊಲೆಗಾರ್ತಿ ಮೃತ ವ್ಯಕ್ತಿಯ ತಂಗಿ ಮತ್ತು ಕಟೀಲ್ ನೇತೃತ್ವದ ಪ್ರತಿಭಟನೆಯಲ್ಲೇ ಪಾಲ್ಗೊಂಡಿದ್ದಳು ಎಂದು ಪೊಲೀಸರು ಬಂಧಿಸಿದರು! ಇಂತಹ ಹತ್ತಾರು ಪ್ರಕರಣಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ನಡೆದಿವೆ. ಅದೇ ಸಂದರ್ಭದಲ್ಲಿ ಭೀಕರವಾದ ಕೊಲೆ ಅಥವಾ ಅತ್ಯಾಚಾರಕ್ಕೊಳಗಾದ ವ್ಯಕ್ತಿಗಳು ಮುಸ್ಲಿಮರಾಗಿದ್ದರೆ ಈ ಪರಿವಾರವು ಉಸಿರೆತ್ತುವುದೇ ಇಲ್ಲ. ಬದಲಿಗೆ ಕಥುವಾ ಪ್ರಕರಣದಲ್ಲಿ ಅತ್ಯಂತ ಭೀಕರವಾದ ಅತ್ಯಾಚಾರಕ್ಕೊಳಗಾದ ಬಾಲೆಯ ಪ್ರಕರಣದ ಆರೋಪಿಗಳ ಪರ ಧರ್ಮರಕ್ಷಕರು ನಿಂತಿದ್ದರು! ಇನ್ನೂ ಹೇಳಬೇಕೆಂದರೆ, ಹಿಂದೂ ಪುರುಷರಿಂದ ಹಿಂದೂ ಹುಡುಗಿಯರು ಅತ್ಯಾಚಾರಕ್ಕೆ ಒಳಗಾದಾಗಲೂ ಅದಿವರಿಗೆ ಸಮಸ್ಯೆಯೂ ಅಲ್ಲ, ದನಿಯೇಳುವುದು ಇಲ್ಲ.

ಸೂ.ರಂ. ರಾಮಯ್ಯನವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಸೂಲಿಬೆಲೆ ಗ್ರಾಮ ಹೊಸಕೋಟೆ ತಾಲೂಕಿನ ವಿಶಿಷ್ಟ ಹಳ್ಳಿ. ಮಿಥುನ್ ಚಕ್ರವರ್ತಿ ಎಂಬ ವಿಕೃತ ವ್ಯಕ್ತಿಯ ಅನ್ವರ್ಥವಾಗಿ ಅದು ಬಳಕೆಯಲ್ಲಿರುವುದರಿಂದ ಗುರುತಿಗಾಗಿ ಬಳಸಿದ್ದೇವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಅದು ಏನು ಅಂತ ಸುದ್ದಿ ಮಾಡ್ತಿರ್ರಿ ಅದು ದಿಶಾ ಅಲ್ಲ ಪ್ರಿಯಾಂಕಾ ರೆಡ್ಡಿ, ಅದು ಸರಿಯಾಗಿ ಗೊತ್ತಿಲ್ಲ , ನೀವು ಮತ್ತೊಬ್ಬರ ಬಗ್ಗೆ ಹೇಳ್ತೀರಾ?

    • ಭಾರತದ ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಮೂಲ ಹೆಸರು, ಫೋಟೊ ಇತ್ಯಾದಿಗಳನ್ನು ಪ್ರಕಟಿಸಬಾರದು. ಹಾಗಾಗಿ ಹೆಸರು ಬದಲಿಸಿದ್ದೇವೆ.

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...