Homeಅಂತರಾಷ್ಟ್ರೀಯCOP30 | ವಿಶ್ವ ಹವಾಮಾನ ಶೃಂಗದಲ್ಲಿ ಭಾಗವಹಿಸಿದ ಪ್ರತಿ 25ರಲ್ಲಿ ಒಬ್ಬ 'ಪಳೆಯುಳಿಕೆ ಇಂಧನ ಲಾಬಿದಾರ'

COP30 | ವಿಶ್ವ ಹವಾಮಾನ ಶೃಂಗದಲ್ಲಿ ಭಾಗವಹಿಸಿದ ಪ್ರತಿ 25ರಲ್ಲಿ ಒಬ್ಬ ‘ಪಳೆಯುಳಿಕೆ ಇಂಧನ ಲಾಬಿದಾರ’

- Advertisement -
- Advertisement -

ಬ್ರೆಝಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ 30ನೇ ವಿಶ್ವ ಹವಾಮಾನ ಶೃಂಗಸಭೆ (COP30)ಯಲ್ಲಿ ಭಾಗವಹಿಸಿರುವ ಪ್ರತಿ 25 ಜನರಲ್ಲಿ ಒಬ್ಬರು ಪಳೆಯುಳಿಕೆ ಇಂಧನ ಲಾಬಿದಾರ ಇದ್ದಾರೆ. ಶೃಂಗಸಭೆ ನಡೆಯುತ್ತಿರುವ ಆವರಣದಲ್ಲಿ ಒಟ್ಟು 1,602 ಲಾಬಿದಾರರು ಪತ್ತೆಯಾಗಿದ್ದಾರೆ ಎಂದು ಕಿಕ್ ಬಿಗ್ ಪೊಲ್ಯೂಟರ್ಸ್ ಔಟ್ (ಕೆಬಿಪಿಒ) ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಕಲ್ಲಿದ್ದಲು, ಕಲ್ಲಿದ್ದಲು ಉತ್ಪನ್ನಗಳು, ನೈಸರ್ಗಿಕ ಅನಿಲ, ಉತ್ಪಾದಿಸಿದ ಅನಿಲ, ಕಚ್ಛಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನವೀಕರಿಸಲಾಗದ ತ್ಯಾಜ್ಯಗಳಂತಹ ಇಂಧನ ಮೂಲಗಳನ್ನು ಪಳೆಯುಳಿಕೆ ಇಂಧನ ಎಂದು ಕರೆಯಲಾಗುತ್ತದೆ.

ಕೆಬಿಪಿಒ ಎಂಬುದು 450ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವಾಗಿದ್ದು, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಹೆಚ್ಚು ಕಾರಣರಾದವರೇ ಹವಾಮಾನ ಸಂಬಂಧಿತ ನಿಯಮ ರೂಪಿಸುವುದನ್ನು ಈ ಒಕ್ಕೂಟ ವಿರೋಧಿಸುತ್ತದೆ. ಪ್ರತಿ ವರ್ಷ, ಒಕ್ಕೂಟವು ವಾರ್ಷಿಕ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪಳೆಯುಳಿಕೆ ಇಂಧನ ಲಾಬಿ ಮಾಡುವವರ ಸಂಖ್ಯೆಯನ್ನು ವಿಶ್ಲೇಷಿಸುತ್ತದೆ. ಈ ವರ್ಷವೂ, ಒಕ್ಕೂಟ ಸಿಒಪಿ-30ರಲ್ಲಿ ಭಾಗವಹಿಸಿದ ಲಾಬಿದಾರರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಕೆಬಿಪಿಒ ವಿಶ್ಲೇಷಣೆಯ ಪ್ರಕಾರ, 1,602 ಪಳೆಯುಳಿಕೆ ಇಂಧನ ಲಾಬಿದಾರರು ಸಿಒಪಿ-30ರಲ್ಲಿ ಭಾಗವಹಿಸಿದ್ದಾರೆ. ಯಾವುದೇ ದೇಶದ ಪ್ರತಿನಿಧಿ ನಿಯೋಗದಲ್ಲಿಯೂ ಇಷ್ಟು ಜನರಿಲ್ಲ. ಬ್ರೆಝಿಲ್ ಮಾತ್ರ ಹೆಚ್ಚು, ಅಂದರೆ 3,805 ಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಕಳುಹಿಸಿದೆ.

ಕಳೆದ ವರ್ಷ ಆಝರ್‌ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನಡೆದ ಸಿಒಪಿ-29ರಲ್ಲಿ ಭಾಗವಹಿಸಿದ್ದಕ್ಕಿಂತ ಈ ಬಾರಿ ಶೇಕಡ 12ರಷ್ಟು ಹೆಚ್ಚು ಲಾಬಿದಾರರು ಸಮ್ಮೇಳನಕ್ಕೆ ಹಾಜರಾಗಿದ್ದಾರೆ. ನಾವು ಲಾಬಿದಾರರ ಬಗ್ಗೆ ವಿಶ್ಲೇಷಣೆ ಮಾಡಲು ಪ್ರಾರಂಭಿಸಿದ ಬಳಿಕ ಈ ಬಾರಿ ಅತಿ ಹೆಚ್ಚು ಲಾಬಿದಾರರು ಕಂಡು ಬಂದಿದ್ದಾರೆ ಎಂದು ಕೆಬಿಪಿಒ ಹೇಳಿದೆ.

ಹತ್ತು ಅತ್ಯಂತ ಹವಾಮಾನ ದುರ್ಬಲ ರಾಷ್ಟ್ರಗಳ ಎಲ್ಲಾ ಪ್ರತಿನಿಧಿಗಳಿಗಿಂತ (1,061) ಪಳೆಯುಳಿಕೆ ಇಂಧನ ಲಾಬಿದಾರರು ಸಿಒಪಿ-30ಕ್ಕೆ ಮೂರನೇ ಎರಡರಷ್ಟು ಹೆಚ್ಚು ಪಾಸ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಹೊರಸೂಸುವಿಕೆ ವ್ಯಾಪಾರ ಸಂಘವು ತೈಲ ಮತ್ತು ಅನಿಲ ದೈತ್ಯ ಕಂಪನಿಗಳಾದ ಎಕ್ಸಾನ್‌ಮೊಬಿಲ್, ಬಿಪಿ ಮತ್ತು ಟೋಟಲ್ ಎನರ್ಜೀಸ್‌ನ ಪ್ರತಿನಿಧಿಗಳು ಸೇರಿದಂತೆ 60 ಪ್ರತಿನಿಧಿಗಳನ್ನು ಸಿಒಪಿ-30ಕ್ಕೆ ಕರೆತಂದಿದೆ ಎಂದು ಕೆಬಿಪಿಒ ತಿಳಿಸಿದೆ.

ಕೆಬಿಪಿಒ ಪ್ರಕಾರ, ಜಾಗತಿಕ ಉತ್ತರದ ಕೆಲವು ದೇಶಗಳು ತಮ್ಮ ಅಧಿಕೃತ ನಿಯೋಗಗಳಲ್ಲಿ ಪಳೆಯುಳಿಕೆ ಇಂಧನ ಪ್ರತಿನಿಧಿಗಳನ್ನು ಕೂಡ ಒಳಗೊಳಿಸಿವೆ. ಉದಾಹರಣೆಗೆ, ಫ್ರಾನ್ಸ್ 22 ಪಳೆಯುಳಿಕೆ ಇಂಧನ ಪ್ರತಿನಿಧಿಗಳನ್ನು ಕರೆತಂದಿದೆ. ಇದರಲ್ಲಿ ಸಿಇಒ ಪ್ಯಾಟ್ರಿಕ್ ಪೌಯಾನ್ನೆ ಸೇರಿದಂತೆ ಟೋಟಲ್ ಎನರ್ಜಿಸ್‌ನಿಂದ ಐದು ಮಂದಿ ಇದ್ದಾರೆ.

“ಸಮಸ್ಯೆ ಉಂಟುಮಾಡಿದವರಿಗೆ ಅಧಿಕಾರ ನೀಡುವ ಮೂಲಕ ನೀವು ಅದನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನ” ಎಂದು ಕೆಬಿಪಿಒ ಸದಸ್ಯ ಜಾಕ್ಸ್ ಬಾನ್ಬನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಮೂರು ದಶಕಗಳು ಮತ್ತು 30 ಸಿಒಪಿಗಳ ನಂತರವೂ, 1,500ಕ್ಕೂ ಹೆಚ್ಚು ಪಳೆಯುಳಿಕೆ ಇಂಧನ ಲಾಬಿಗಾರರು ಹವಾಮಾನ ಮಾತುಕತೆಗಳಲ್ಲಿ ತಾವು ಇಲ್ಲಿಗೆ ಸೇರಿದವರಂತೆ ಅಲೆದಾಡುತ್ತಿದ್ದಾರೆ. ಸಿಒಪಿ 30 ‘ಅನುಷ್ಠಾನ ಸಿಒಪಿ’ ಎಂದು ಭರವಸೆ ನೀಡುತ್ತದೆ. ಆದರೆ, ಇದುವರೆಗೆ ಅವರು ಸೃಷ್ಟಿಸಿದ ಬಿಕ್ಕಟ್ಟನ್ನು ಪರಿಹರಿಸಲು ಉದ್ದೇಶಿಸಲಾದ ಸಮ್ಮೇಳನದಿಂದ ದೊಡ್ಡ ಮಾಲಿನ್ಯಕಾರಕಗಳನ್ನು ಹೊರಹಾಕುವ ಮೂಲಭೂತ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಯನ್ನು ಸಹ ಕಾರ್ಯಗತಗೊಳಿಸಲು ಇದು ವಿಫಲವಾಗಿದೆ” ಎಂದು ಹೇಳಿದ್ದಾರೆ.

ನವೆಂಬರ್ 6 ರಿಂದ 21 (ನವೆಂಬರ್ 6 ರಿಂದ 9 ರಿಂದ ಪೂರ್ವಸಿದ್ಧತಾ ಕಾರ್ಯಕ್ರಮಗಳು, ನವೆಂಬರ್ 10 ರಿಂದ 21 ರಿಂದ ಮುಖ್ಯ ಸಮ್ಮೇಳನ) ರವರೆಗೆ ಬ್ರೆಝಿಲ್‌ನ ಬೆಲೆಮ್‌ನಲ್ಲಿ ಈ ಬಾರಿಯ ವಿಶ್ವ ಹವಾಮಾನ ಶೃಂಗಸಭೆ ನಡೆಯುತ್ತಿದೆ.

ಭೂತಾನ್‌ನ ಇಂಧನ ಯೋಜನೆಗಳಿಗೆ 4 ಸಾವಿರ ಕೋಟಿ ಸಾಲ ಘೋಷಿಸಿದ ಮೋದಿ : ಅದಾನಿ, ಅಂಬಾನಿ ಕಂಪನಿಗಳಿಂದ ಒಪ್ಪಂದಕ್ಕೆ ಸಹಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...