Homeಅಂಕಣಗಳುಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

- Advertisement -
- Advertisement -

| ಯೋಗೇಂದ್ರ ಯಾದವ್ |

ಅನುವಾದ: ರಾಜಶೇಖರ್ ಅಕ್ಕಿ

ಒಂದು ರಾಷ್ಟ್ರ ಒಂದು ಚುನಾವಣೆ! ಇದನ್ನು ಕೇಳಲು ಎಷ್ಟು ಸುಂದರವಾಗಿದೆ. ಆದರೆ ಇದರ ಹಿಂದಿರುವ ಪ್ರಸ್ತಾಪವೂ ಅಷ್ಟೇ ಸುಂದರವಾಗಿದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು 5 ವರ್ಷಗಳಲ್ಲಿ ಒಂದೇ ಬಾರಿ ಜೊತೆಗೇ ನಡೆಸುವ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಹೆಜ್ಜೆಯಾಗಬಲ್ಲದೇ?

ಮೊದಲ ನೋಟದಲ್ಲಿ ಇದೊಂದು ತುಂಬಾ ಸರಳ ಪ್ರಸ್ತಾಪ ಎನಿಸುತ್ತದೆ. ದೇಶಾದ್ಯಂತ ಪ್ರತಿ ಐದು ವರ್ಷಗಳಲ್ಲಿ ಚುನಾವಣೆ ಆಗುವುದು ನಿಶ್ಚಿತ. ಆದರೆ ವಿಧಾನಸಭೆಯ ಚುನಾವಣೆಗಳ ದಿನಾಂಕಗಳು ಲೋಕಸಭೆಯ ದಿನಾಂಕಗಳೊಂದಿಗೆ ಜೋಡಿಸಿಲ್ಲ. ಹಾಗಾಗಿ ಕೇಂದ್ರ ಸರಕಾರದ 5 ವರ್ಷಗಳ ಕಾರ್ಯಕಾಲದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತವೆ. ಚುನಾವಣೆಯ ನೀತಿ ಸಂಹಿತೆ ಜಾರಿ ಬಂದ ಕೂಡಲೇ ಆ ರಾಜ್ಯಗಳ ಇದೇ ಕೇಂದ್ರ ಸರಕಾರಗಳ ಕಡತಗಳೂ ನಿಂತುಬಿಡುತ್ತವೆ. ಕೇಂದ್ರ ಸರಕಾರದ ಕಾರ್ಯವೈಖರಿಯಲ್ಲಿ ಅಡ್ಡಿ ಬರುತ್ತವೆ. ಸರಕಾರ ಚುನಾವಣೆಯ ಒತ್ತಡದಲ್ಲಿ ಕೆಲಸ ಮಾಡುತ್ತವೆ, ಹಾಗಾಗಿ ಯಾವುದೇ ದೀರ್ಘಕಾಲೀನ ನೀತಿಗಳನ್ನು ರೂಪಿಸಲು ಆಗುವುದಿಲ್ಲ. ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಬೇರೆ ಬೇರೆಯಾಗಿ ನಡೆಸುವುದರಿಂದ ವೆಚ್ಚವೂ ದುಪ್ಪಟಾಗುತ್ತದೆ.

ಹಾಗಾಗಿಯೇ 5 ವರ್ಷಗಳಲ್ಲಿ ಒಂದೇ ಸಲ ಒಟ್ಟಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳನ್ನು ನಡೆಸಿ, ಮುಂದಿನ 5 ವರ್ಷಗಳ ತನಕ ಎಲ್ಲರೂ ಯಾವುದೇ ಅಡತಡೆಗಳಿಲ್ಲದೆ ತಮ್ಮ ಸರಕಾರಗಳನ್ನು ನಡೆಸುವುದಕ್ಕೆ ಈ ಪ್ರಸ್ತಾಪ.

5 ವರ್ಷಗಳ ನಂತರ ಒಂದೇ ಬಾರಿ ಎಲ್ಲರ ಕೆಲಸಗಳ ಮೌಲ್ಯಮಾಪನವಾಗಬೇಕು ಹಾಗೂ ಹೊಸ ಲೋಕಸಭೆ ಮತ್ತು ವಿಧಾನಸಭೆಗಳನ್ನು ಚುನಾಯಿಸಬೇಕು. ಮೊದಲ ಬಾರಿ ಇದನ್ನು ಕೇಳಿದಾಗ ಈ ಮಾತುಗಳು ಸರಳ ಮತ್ತು ನೇರ ಅನಿಸುತ್ತವೆ.
ಆದರೆ ವಾಸ್ತವದಲ್ಲಿ ಈ ಪ್ರಸ್ತಾಪ ಅಷ್ಟು ನೇರವೂ ಇಲ್ಲ, ಸರಳವೂ ಇಲ್ಲ. ಈ ಪ್ರಸ್ತಾಪ ಬರೀ ಚುನಾವಣೆಗಳ ದಿನಾಂಕ ಬದಲಿಸುವ ಪ್ರಸ್ತಾಪ ಅಲ್ಲ. ಇದನ್ನು ಕೇವಲ ಆಡಳಿತಾತ್ಮಕ ಬದಲಾವಣೆಯಿಂದ ಜಾರಿಗೊಳಿಸಲಾಗುವುದಿಲ್ಲ.

ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅರ್ಥವೆಂದರೆ, ನಮ್ಮ ಸಂವಿಧನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯದಲ್ಲೇ ಬದಲಾವಣೆ ಮಾಡುವುದಕ್ಕೆ ಒಪ್ಪಿಕೊಂಡಂತೆ. ನಮ್ಮ ಸಂವಿಧಾನವನ್ನು ರಚಿಸಿದವರು ನಮ್ಮ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕದ ರಾಷ್ಟ್ರಪತಿಯ ಪದ್ಧತಿಯನ್ನು ಒಪ್ಪಿಕೊಳ್ಳದೇ ಬ್ರಿಟನ್ನಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಚೌಕಟ್ಟನ್ನು ನಮ್ಮದಾಗಿಸಿಕೊಂಡರು. ನಮ್ಮ ಸಂಸದೀಯ ಚೌಕಟ್ಟಿನಲ್ಲಿ ಪ್ರಧಾನಮಂತ್ರಿಗೆ ಸಂಸತ್ತಿನಲ್ಲಿ ಬಹುಮತ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಪ್ರಧಾನಮಂತ್ರಿ ಅಥವಾ ಲೋಕಸಭೆಯಲ್ಲಿ ವಿಶ್ವಾಸ ಮಂಡನೆಯಲ್ಲಿ ಸೋತಕೂಡಲೇ ಆ ಸರಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಯೋಚಿಸಿ, ಒಂದು ವೇಳೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯ ಪ್ರಸ್ತಾಪವನ್ನು ಸ್ವೀಕಾರ ಮಾಡಲಾಗಿ ಹಾಗೂ ಒಂದು ವೇಳೆ ಯಾವುದೇ ಒಂದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರ 2 ವರ್ಷಗಳ ನಂತರ ಅಥವಾ 4 ವರ್ಷಗಳ ನಂತರ ಬಹುಮತ ಕಳೆದುಕೊಂಡರೆ ಆ ಪರಿಸ್ಥಿತಿಯಲ್ಲಿ ಏನಾಗಬಹುದು? ಆ ಸರಕಾರಕ್ಕೆ 5 ವರ್ಷಗಳ ತನಕ ಬಹುಮತ ಇರಲಿ ಬಿಡಲಿ ಮುಂದುವರೆಸಲು ಅವಕಾಶ ನೀಡಲಾಗುವುದೇ? ಒಂದು ವೇಳೆ ಇಂಥ ನಿಯಮ ಮಾಡಿದಲ್ಲಿ ಸದನದಲ್ಲಿ ತನ್ನ ಬಜೆಟ್ ಅನ್ನೆ ಪಾಸ್ ಮಾಡಲು ಆಗದ ಆ ಸರಕಾರ ತನ್ನ ಆಳ್ವಿಕೆಯನ್ನು ಹೇಗೆ ಮಾಡಬಲ್ಲದು? ಅಥವಾ ಕೇವಲ ಬಾಕಿ ಉಳಿದ ಅವಧಿಗಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದೇ? ಇದರರ್ಥ ಒಂದು ವೇಳೆ ಯಾವುದೊಂದು ಸರಕಾರ ನಾಲ್ಕು ವರ್ಷಗಳ ನಂತರ ಕುಸಿದುಬಿದ್ದರೆ ರಾಜ್ಯ ಅಥವಾ ದೇಶದಲ್ಲಿ ಕೇವಲ ಒಂದು ವರ್ಷ ಸರಕಾರವನ್ನು ಚುನಾಯಿಸುವುದಕ್ಕಾಗಿ ಹೊಸ ಚುನಾವಣೆಗಳು ಆಗಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪ್ರಶ್ನೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಅಥವಾ ಹೆಚ್ಚಿಸುವುದೇ ಎನ್ನುವುದಾಗಿದೆ.

ಇಲ್ಲಿ ಇನ್ನೊಂದು ಗಂಭಿರ ಮತ್ತು ಆಳವಾದ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಪ್ರತಿ ಸ್ತರದಲ್ಲೂ ಚುನಾವಣೆಗಳು ಬೇರೆ ಬೇರೆಯಾಗಿ ನಡೆದಾಗ ಮತದಾರ ಪ್ರತಿ ಹಂತಕ್ಕೂ ತನ್ನ ವಿಭಿನ್ನ ಅಭಿಪ್ರಾಯದೊಂದಿಗೆ ಮತಚಲಾಯಿಸಬಹುದಾಗಿದೆ. ಆದರೆ ಬೇರೆ ಬೇರೆ ಸ್ತರದ ಚುನಾವಣೆಗಳು ಒಂದೇ ಬಾರಿ ಆದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎರಡೂ ಮತಗಳು ಒಂದಕ್ಕೊಂದು ಜೋಡಿಸಲಾಗುತ್ತವೆ. ನಿಸ್ಸಂಶಯವಾಗಿಯೂ ಇಂದು ನಮ್ಮ ಮತದಾರರು ಮುಂಚೆಗಿಂತಲೂ ಹೆಚ್ಚು ಜಾಗರೂಕಾಗುತ್ತಿದ್ದಾರೆ. ಓರಿಸ್ಸಾದ ಚುನಾವಣೆ ನಮಗೆ ಹೇಳುವುದೇನೆಂದರೆ, ಒಂದೇ ಸಮಯದಲ್ಲಿ ಮತ ಚಲಾಯಿಸಿದರೂ ಮತದಾರರು ಲೋಕಸಭೆಗಾಗಿ ಬಿಜೆಪಿಗೆ ಹೆಚ್ಚು ಮತ ನೀಡಿ ವಿಧಾನಸಭೆಗಾಗಿ ಬಿಜೆಡಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಎರಡು ಬೇರೆ ಬೇರೆ ಸ್ತರದ ಚುನಾವಣೆಗಳ ಪ್ರಚಾರ ಹಾಗೂ ಮತದಾನ ಒಂದೇ ಸಮಯದಲ್ಲಿ ನಡೆದಾಗ ಎರಡೂ ಚುನಾವಣೆಗಳಲ್ಲಿ ಸಂಯೋಜನೆಯ ಸ್ಥಿತಿ ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದಿಂದ ನಮ್ಮ ರಾಜಕೀಯದ ಸ್ಥಾನೀಯ ಮತ್ತು ವಲಯಾವಾರು ಇತಿಹಾಸವನ್ನು ಘಾಸಿಗೊಳಿಸುತ್ತದೆ.

ಇನ್ನೊಂದು ಪ್ರಶ್ನೆ, ಚುನಾವಣೆಯ ಕ್ಯಾಲೆಂಡರ್‍ನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ? ನನ್ನ ಪ್ರಕಾರ, ಚುನಾವಣೆಯ ಕ್ಯಾಲೆಂಡರ್‍ನಲ್ಲಿ ಮೂರು ಸುಧಾರಣೆಗಳನ್ನು ತಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯಂತಹ ಬೃಹತ್ ಸಂವಿಧಾನಾತ್ಮಕ ಬದಲಾವಣೆಯ ಯಾವುದೇ ಅವಶ್ಯಕತೆ ಇರುವುದಿಲ್ಲ.

ಮೊದಲನೆಯದು, ಚುನಾವಣೆಯ ಮಾದರಿ ನೀತೆ ಸಂಹಿತೆಯಲ್ಲಿ ಬದಲಾವಣೆ ಮಾಡಬೇಕಿದೆ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೇಂದ್ರ ಸರಕಾರದ ಸಾಮಾನ್ಯ ಕಾರ್ಯಕೆಲಸಗಳಲ್ಲಿ ಅಡೆತಡೆಗಳು ಬರದಂತೆ ನೀತಿ ಸಂಹಿತೆಯಲ್ಲಿ ಬದಲಾವಣೆ. ಎರಡನೇಯದ್ದು, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಕಡಿತಗೊಳಿಸಬಹುದು. ಉತ್ತರಪ್ರದೇಶದಂತಹ ರಾಜ್ಯದ ವಿಧಾನಸಭೆ ಚುನಾವಣೆಯನ್ನು ತಿಂಗಳುಪೂರ್ತಿ 7 ಹಂತಗಳಲ್ಲಿ ನಡೆಸುವುದು ಸರಿಯಲ್ಲ. ಚುನಾವಣೆ ಮತದಾನದ ಪ್ರಕ್ರಿಯೆ ಒಂದು ವಾರದಲ್ಲಿ ಸಂಪೂರ್ಣವಾದರೆ ಸರಕಾರದ ಕೆಲಸಗಳಲ್ಲಿ ಅಡ್ಡಿ ಕಡಿಮೆ ಆಗುವವು. ಮೂರನೇಯದ್ದು, ಚುನಾವಣಾ ಆಯೋಗ ಬಯಸಿದಲ್ಲಿ ಹಲವು ರಾಜ್ಯಗಳ ಚುನಾವಣೆಗಳನ್ನು ಜೊತೆಗೂಡಿಸಿ ಒಂದೇ ಸಮಯದಲ್ಲಿ ಮಾಡಬಹುದು. ಯಾವುದೇ ಲೋಕಸಭೆ ಅಥವಾ ರಾಜ್ಯಸಭೆಯ ಅವಧಿ ಪೂರ್ಣವಾಗುವ 6 ತಿಂಗಳ ಮುಂಚೆಯ ತನಕ ಯಾವ ಸಮಯದಲ್ಲೂ ಚುನಾವಣೆ ನಡೆಸುವ ಅವಕಾಶ ಚುನಾವಣಾ ಆಯೋಗಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿ ಚುನಾವಣಾ ಆಯೋಗವು ಕೆಲವು ರಾಜ್ಯಗಳ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂಚೆ ಮಾಡಿ ಇತರ ರಾಜ್ಯಗಳ ಚುನಾವಣೆಗಳನ್ನು ಒಂದೆ ಸಮಯದಲ್ಲಿ ಮಾಡಬಹುದು ಹಾಗೂ ಇದರಿಂದ ಕೇಂದ್ರ ಸರಕರಾದ 5 ವರ್ಷದ ಕಾರ್ಯಾವಧಿಯಲ್ಲಿ 8ರಿಂದ 10 ದೊಡ್ಡ ರಾಜ್ಯ ಚುನಾವಣೆಗಳು ಆಗುವ ಬದಲಿಗೆ ಕೇವಲ ನಾಲ್ಕು ಅಥವಾ ಐದು ದೊಡ್ಡ ರಾಜ್ಯ ಚುನಾವಣೆಗಳು ಆಗಬಹುದಾಗಿದೆ.

ಚುನಾವಣೆಗಳಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಚುನಾವಣೆಯ ಕ್ಯಾಲೆಂಡರ್ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಚುನಾವಣೆಗಳಲ್ಲಿ ಹುಚ್ಚುಚ್ಚಾಗಿ ಅತ್ಯಂತ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕೆ ನಿಜವಾದ ಕಾರಣ ಇರುವುದು ಚುನಾವಣೆಗಳಲ್ಲಿ ಕಾನೂನಿನ ಎಲ್ಲೆಯನ್ನು ಮೀರಿ ಮಾಡುವ ಖರ್ಚು. ಹಾಗಾಗಿ ಚುನಾವಣಾ ಆಯೋಗ ಚುನಾವಣೆಯ ವೆಚ್ಚದ ಎಲ್ಲೆಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು.

ಇವೆಲ್ಲದರ ನಿಷ್ಕರ್ಷ ಸ್ಪಷ್ಟವಾಗಿದೆ: ಚುನಾವಣೆಯ ಕ್ಯಾಲೆಂಡರ್‍ನಿಂದ ಆಗುವ ಅಡೆತಡೆಗಳು ಹಾಗೂ ಆಳ್ವಿಕೆಯ ತೊಂದರೆಗಳನ್ನು ಬಗೆಹರಿಸಬೇಕಾದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯೇ ಪರಿಹಾರವಲ್ಲ, ಇದರ ಹೊರತಾಗಿಯೂ ನಿಸ್ಸಂಶಯವಾಗಿ ಆ ತೊಂದರೆಗಳನ್ನು ನಿವಾರಿಸಬಹುದು. ಪ್ರಶ್ನೆ ಇರುವುದು, ಇವೆಲ್ಲವುಗಳ ಹೊರತಾಗಿಯೂ ಸರಕಾರ ಈ ಪ್ರಸ್ತಾಪವನ್ನು ಏಕೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದರಲ್ಲೂ ತನ್ನ ಹೊಸ ಆಳ್ವಿಕೆಯ ಮೊಟ್ಟ ಮೊದಲ ಹೆಜ್ಜೆಯಾಗಿ? ಈ ಸರಕಾರದ ನಿಯತ್ತಾದರೂ ಏನಿದೆ ಇದರ ಹಿಂದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...