Homeಕರ್ನಾಟಕಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಫ್ಯಾಕ್ಟ್ ಚೆಕ್: ಬೆಂಗಳೂರಲ್ಲಿ ‘ಮೋದಿ ಮಸೀದಿ’ ಇದೆಯೇ? ಇಲ್ಲಿದೆ ನೋಡಿ ಅಸಲಿ ಕಹಾನಿ!

ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಹೀಗೊಂದು ಫೋಟೊ-ಸುದ್ದಿ ಹರಿದಾಡುತ್ತಿದೆ: ‘ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ… ಇದನ್ನು ನೋಡಿ ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ’ ಎಂಬುದು ಆ ಸುದ್ದಿಯ ಸಾರಾಂಶ.

ಮೇಲಿನ ಸಂದೇಶದ ಪ್ರಕಾರ, ಬೆಂಗಳೂರಿನಲ್ಲಿ ಮಸೀದಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಮೋದಿಯವರು ಫಾಲೋ ಮಾಡುವ ಟ್ವೀಟ್ ಖಾತೆ( @mahesh10816 ) ಯಿಂದ ಮೇಲಿನ ಸಂದೇಶವನ್ನು ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಜೊತೆ ಎರಡು ಫೋಟೊಗಳೂ ಇವೆ. ಜೂನ್ 20ರ ಈ ಸಂದೇಶ ಅಂದೇ 400ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಪೋಸ್ಟ್‍ನ ಎಡಕ್ಕಿರುವ ಫೋಟೊದಲ್ಲಿ ‘MODI MASJID’ ಎಂಬುದನ್ನು, ಬಲಭಾಗದ ಫೋಟೊದಲ್ಲಿ ಹಿಂಬದಿಯಲ್ಲಿ ಮೋದಿಯ ಪೋಸ್ಟರ್ ಅನ್ನು ಕಾಣಬಹುದು. ವ್ಯಾಟ್ಸಾಪ್ ನಲ್ಲೂ ಈ ಸಂದೇಶ ವಿಪರೀತ ಹರಿದಾಡುತ್ತಿದೆ.

ಕನ್ನಡದ ಶೀರ್ಷಿಕೆ ಇರುವ ಫೋಟೊ ಒಂದು ಕೂಡ ಹರಿದಾಡುತ್ತಿದ್ದು, ‘ಮೋದಿ ಹೆಸರಲ್ಲಿ 12 ಕೋಟಿಯ ಮಸೀದಿ, ಮೋದಿ ಮಸೀದಿಯಲ್ಲಿ ಜಮೀರ ಖಾನ್’ ಎಂಬ ಸಾಲುಗಳಿವೆ. ಇಂಥದ್ದನ್ನು ತೋರಿಸಿ, ನೋಡಿ ಬೆಂಗಳೂರಿನ ಮುಸ್ಲಿಮರೂ ಮೋದಿ ಸಾಧನೆ ಮೆಚ್ಚಿದ್ದಾರೆ ಎಂದು ಸುಳ್ಳನ್ನು ಹರಡುವ ಕುತಂತ್ರವಿದು.

ಸತ್ಯ: ಬೆಂಗಳೂರಿನ ಯಾವ ಮಸಿದಿಗೂ ನರೆಂದ್ರ ಮೋದಿಯ ಹೆಸರನ್ನು ಇಡಲಾಗಿಲ್ಲ. ಮೇಲಿನ ಸಂದೇಶವನ್ನು ಮೋದಿ ಕೆಲವರು ಮುಸ್ಲಿಮರಲ್ಲೂ ಜನಪ್ರಿಯರು ಎಂದು ತೋರಿಸುವ ಭಾಗವಾಗಿ ಹರಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಅಮಾಯಕರು ವ್ಯಾಟ್ಸಾಪ್‍ನಲ್ಲಿ ತಮ್ಮ ಸ್ನೇಹಿತರಿಗೆ ಇದನ್ನು ಕಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಬಳಕೆದಾರರ ಕೋರಿಕೆಯ ಮೇಲೆ ಮೇಲಿನ ಸಂದೇಶದ ಕುರಿತಾಗಿ ಆಲ್ಟ್‍ನ್ಯೂಸ್ ಫ್ಯಾಕ್ಟ್‍ಚೆಕ್ ಮಾಡಿದೆ. ಬೆಂಗಳೂರಲ್ಲಿ ಮೋದಿ ಮಸೀದಿ ಎಂಬುದು ಇದೆ ಆದರೂ, ಅದು ನರೇಂದ್ರ ಮೋದಿ ಹೆಸರಿನದ್ದಲ್ಲ. ಅದನ್ನು ‘ಮೋದಿ ಅಬ್ದುಲ್ ಗಫೂರ್’ ಎಂಬ ದಾನಿಯ ಸ್ಮರಣಾರ್ಥ ‘ಮೋದಿ ಮಸೀದಿ’ ಎಂದು ಹೆಸರಿಸಲಾಗಿದೆ. ಈ ಮಸೀದಿಯನ್ನು 175 ವರ್ಷಗಳಿಗೂ ಹಿಂದೆಯೇ ಕಟ್ಟಲಾಗಿದೆ. ಇತ್ತೀಚಿಗೆ ಈ ಮಸೀದಯನ್ನು ನವೀಕರಣ ಮಾಡಿದ ಕಾರಣಕ್ಕಾಗಿ ಈಗ ಅದು ಸುದ್ದಿಯಲ್ಲಿದೆ. ಈ ಮಸೀದಿ ಶಿವಾಜಿ ನಗರದಲ್ಲಿದೆ.

ಟ್ವೀಟ್ ಜೊತೆಗಿರುವ ಎಡಭಾಗದ ಫೋಟೊ ‘ಮೋದಿ ಮಸೀದಿ’ಯದ್ದು (ನರೇಂದ್ರ ಮೋದಿಯಲ್ಲ, ಮೋದಿ ಅಬ್ದುಲ್ ಗಫೂರ್)… ಎರಡನೇ ಫೋಟೊದ ಮೂಲ ಗೊತ್ತಾಗಿಲ್ಲವಾದರೂ, ಅದು ‘ಮೋದಿ ಮಸೀದಿ’ಯ ಫೋಟೊವಂತೂ ಅಲ್ಲ. ಮೇಲಿನ ಫೇಕ್ ಆಧರಿಸಿಯೇ ಜಮೀರ್ ನಿಂತಿರುವ ಮಸಿದಿಯ ಫೋಟೊ ಇರುವ ಕನ್ನಡ ವಿಡಿಯೊವನ್ನು ಸೃಷ್ಟಿಸಿ ಯುಟ್ಯೂಬ್‍ಗೆ ಅಪಲೋಡ್ ಮಾಡಲಾಗಿದೆ. ಕಳೆದ ವರ್ಷವಷ್ಟೇ ಈ ಮಸೀದಿ ನಿರ್ಮಸಿಲಾಗಿದೆ ಎಂದು ಸುಳ್ಳು ಬಿತ್ತರಿಸಲಾಗಿದೆ.

ಈ ಮಸೀದಿ ಬಗ್ಗೆ ಗೊತ್ತಾದರೆ ನಮ್ಮ ಚಾನೆಲ್‍ಗಳೂ ಮೋದಿ ಹೆಸರಲ್ಲಿ ಬೆಂಗಳೂರಲ್ಲಿ ಮಸೀದಿ ಎಂದು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಬಹುದು, ಎಚ್ಚರವಿರಲಿ…

ಕೃಪೆ: ಆಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...